ಈ ವರ್ಷದ ಕೇಂದ್ರ ಬಜೆಟ್ ಆರ್ಥಿಕ ಬೆಳವಣಿಗೆಯನ್ನು ಸುಸ್ಥಿರಗೊಳಿಸುವ ಮತ್ತು ಬಲಪಡಿಸುವ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ: ಪ್ರಧಾನಮಂತ್ರಿ
ನಮ್ಮ ದೃಷ್ಟಿಕೋನ ಸ್ಪಷ್ಟವಾಗಿದೆ, ನಮ್ಮ ಸಂಕಲ್ಪ ಸ್ಪಷ್ಟವಾಗಿದೆ; ಹೆಚ್ಚು ನಿರ್ಮಿಸಿ, ಹೆಚ್ಚು ಉತ್ಪಾದಿಸಿ, ಹೆಚ್ಚು ಸಂಪರ್ಕಿಸಿ ಮತ್ತು ಹೆಚ್ಚು ರಫ್ತು ಮಾಡಿ: ಪ್ರಧಾನಮಂತ್ರಿ
ಜಗತ್ತು ಇಂದು ವಿಶ್ವಾಸಾರ್ಹ ಮತ್ತು ಸ್ಥಿತಿಸ್ಥಾಪಕತ್ವ ಹೊಂದಿರುವ ಉತ್ಪಾದನಾ ಪಾಲುದಾರರನ್ನು ಹುಡುಕುತ್ತಿದೆ ಮತ್ತು ಇಂದು ಭಾರತಕ್ಕೆ ಈ ಪಾತ್ರವನ್ನು ದೃಢವಾಗಿ ನಿರ್ವಹಿಸುವ ಅವಕಾಶವಿದೆ: ಪ್ರಧಾನಮಂತ್ರಿ
ಭಾರತವು ಅನೇಕ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳಿಗೆ (FTAs) ಸಹಿ ಹಾಕಿದೆ, ಇದು ನಮಗೆ ಅವಕಾಶಗಳ ಬೃಹತ್ ಬಾಗಿಲನ್ನು ತೆರೆದಿದೆ; ಇಂತಹ ಸಂದರ್ಭದಲ್ಲಿ ಗುಣಮಟ್ಟದ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದಿರುವುದು ನಮ್ಮ ಜವಾಬ್ದಾರಿಯಾಗಿದೆ: ಪ್ರಧಾನಮಂತ್ರಿ
'ಕಾರ್ಬನ್ ಕ್ಯಾಪ್ಚರ್, ಯುಟಿಲೈಸೇಶನ್ ಅಂಡ್ ಸ್ಟೋರೇಜ್ ಮಿಷನ್' ಒಂದು ಪ್ರಮುಖ ಉಪಕ್ರಮವಾಗಿದ್ದು, ಸುಸ್ಥಿರತೆಯನ್ನು ಪ್ರಮುಖ ವ್ಯವಹಾರ ಕಾರ್ಯತಂತ್ರದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ: ಪ್ರಧಾನಮಂತ್ರಿ
ಸಕಾಲದಲ್ಲಿ ಶುದ್ಧ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುವ ಕೈಗಾರಿಕೆಗಳು ಮುಂಬರುವ ವರ್ಷಗಳಲ್ಲಿ ಹೊಸ ಮಾರುಕಟ್ಟೆಗಳಿಗೆ ಉತ್ತಮ ಪ್ರವೇಶವನ್ನು ಪಡೆಯಲು ಸಾಧ್ಯವಾಗುತ್ತದೆ: ಪ್ರಧಾನಮಂತ್ರಿ
ಇಂದು ಜಾಗತಿಕ ಆರ್ಥಿಕತೆಯಲ್ಲಿ ದೊಡ್ಡ ಬದಲಾವಣೆ ಸಂಭವಿಸುತ್ತಿದೆ, ಏಕೆಂದರೆ ಮಾರುಕಟ್ಟೆಗಳು ಈಗ ಕೇವಲ ವೆಚ್ಚವನ್ನಷ್ಟೇ ಅಲ್ಲದೆ ಸುಸ್ಥಿರತೆಯನ್ನೂ ಗಮನಿಸುತ್ತಿವೆ: ಪ್ರಧಾನಮಂತ್ರಿ

ನಮಸ್ಕಾರ!

ಕಳೆದ ವಾರ, ಬಜೆಟ್ ವೆಬಿನಾರ್ ಸರಣಿಯ ಮೊದಲ ವೆಬಿನಾರ್ ಆಯೋಜಿಸಲಾಗಿತ್ತು, ಅದು ತುಂಬಾ ಯಶಸ್ವಿಯಾಗಿದೆ ಎಂದು ನನಗೆ ತಿಳಿದಿದೆ. ಬಜೆಟ್ ಪ್ರಸ್ತಾವನೆಗಳ ಅನುಷ್ಠಾನ ಕುರಿತು ಎಲ್ಲರೂ ಅತ್ಯುತ್ತಮ ಸಲಹೆಗಳನ್ನು ನೀಡಿದರು, ಎಲ್ಲರ ಸಕ್ರಿಯ ಭಾಗವಹಿಸುವಿಕೆಯನ್ನು ನಾನು ಸ್ವಾಗತಿಸುತ್ತೇನೆ. ಇಂದು ಈ ಸರಣಿಯ 2ನೇ ವೆಬಿನಾರ್ ನಡೆಯುತ್ತಿದೆ. ಇಂದು ಸಾವಿರಾರು ಜನರು ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಲೆಕ್ಕವಿಲ್ಲದಷ್ಟು ಸಲಹೆಗಳನ್ನು ನೀಡಲಿದ್ದಾರೆ, ವಿಷಯ ತಜ್ಞರು ಸಹ ನಮ್ಮೊಂದಿಗೆ ಸೇರಲಿದ್ದಾರೆ ಎಂಬುದು ನನಗೆ ತಿಳಿದುಬಂದಿದೆ. ಬಜೆಟ್ ಕುರಿತು ಇಷ್ಟು ದೊಡ್ಡ ಪ್ರಮಾಣದ ಚರ್ಚೆಯು ಸ್ವತಃ ಅತ್ಯಂತ ಯಶಸ್ವಿ ಪ್ರಯೋಗವಾಗಿದೆ. ಈ ವೆಬಿನಾರ್‌ನಲ್ಲಿ ಸೇರಲು ನಿಮ್ಮ ಅತ್ಯಮೂಲ್ಯ ಸಮಯ ಮೀಸಲಿಟ್ಟಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ, ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಈ ವೆಬಿನಾರ್‌ನ ವಿಷಯವು ದೇಶದ ಆರ್ಥಿಕ ಬೆಳವಣಿಗೆಯನ್ನು ನಿರಂತರವಾಗಿ ಬಲಪಡಿಸುವುದಕ್ಕೆ ಸಂಬಂಧ ಹೊಂದಿದೆ. ಇಂದು ಭಾರತವು ತನ್ನ ಬಲವಾದ ಆರ್ಥಿಕತೆಯೊಂದಿಗೆ ಜಗತ್ತಿಗೆ ಭರವಸೆಯ ಮೂಲವಾಗಿದೆ. ಜಾಗತಿಕ ಪೂರೈಕೆ ಸರಪಳಿಯನ್ನು ಮರುರೂಪಿಸುತ್ತಿರುವಾಗ, ತ್ವರಿತ ಆರ್ಥಿಕ ಪ್ರಗತಿಯು ಅಭಿವೃದ್ಧಿ ಹೊಂದಿದ ಭಾರತಕ್ಕೆ ಪ್ರಮುಖ ಅಡಿಪಾಯವಾಗಿದೆ. ನಮ್ಮ ನಿರ್ದೇಶನ ಸ್ಪಷ್ಟವಾಗಿದೆ, ನಮ್ಮ ಸಂಕಲ್ಪ ಸ್ಪಷ್ಟವಾಗಿದೆ. ಹೆಚ್ಚಿನದನ್ನು ಸೃಜಿಸಿ, ಹೆಚ್ಚಿನದನ್ನು ಉತ್ಪಾದಿಸಿ, ಹೆಚ್ಚಿನದನ್ನು ಸಂಪರ್ಕಿಸಬೇಕಿದೆ, ಈಗ ಹೆಚ್ಚಿನದನ್ನು ರಫ್ತು ಮಾಡುವುದು ಅಗತ್ಯವಾಗಿದೆ. ಖಂಡಿತವಾಗಿಯೂ, ಇಂದು ನಿಮ್ಮಲ್ಲಿ ನಡೆಯುವ ಚರ್ಚೆ ಇದರಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಸ್ನೇಹಿತರೆ,

ಉತ್ಪಾದನೆ, ಸರಕು ಸಾಗಣೆ, ನಮ್ಮ ಎಂಎಸ್ಎಂಇಗಳು, ಸಣ್ಣ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳು, ನಮ್ಮ ಸಣ್ಣ ಮತ್ತು ದೊಡ್ಡ ನಗರಗಳು - ಅವು ವಿಭಿನ್ನವಾಗಿ ಕಂಡುಬಂದರೂ - ಇವೆಲ್ಲವೂ ಆರ್ಥಿಕತೆಗೆ ಪರಸ್ಪರ ಸಂಬಂಧ ಹೊಂದಿರುವ ಆಧಾರಸ್ತಂಭಗಳಾಗಿವೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಉದಾಹರಣೆಗೆ, ಬಲಿಷ್ಠವಾದ ಉತ್ಪಾದನೆಯು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ, ಇದು ರಫ್ತುಗಳನ್ನು ಹೆಚ್ಚಿಸುತ್ತದೆ. ಸ್ಪರ್ಧಾತ್ಮಕ ಎಂಎಸ್ಎಂಇಗಳು ಚೇತರಿಕೆ(ನಮ್ಯತೆ) ಮತ್ತು ನಾವೀನ್ಯತೆಯನ್ನು ಉತ್ತೇಜಿಸುತ್ತವೆ. ಉತ್ತಮ ಸರಕು ಸಾಗಣೆ ವ್ಯವಸ್ಥೆಯು ವೆಚ್ಚವನ್ನು ಕಡಿಮೆ ಮಾಡುತ್ತದೆ. ಉತ್ತಮವಾಗಿ ಯೋಜಿಸಲಾದ ನಗರಗಳು ಹೂಡಿಕೆ ಮತ್ತು ಪ್ರತಿಭೆ ಎರಡನ್ನೂ ಆಕರ್ಷಿಸುತ್ತವೆ. ಈ ವರ್ಷದ ಬಜೆಟ್ ಈ ಎಲ್ಲಾ ಆಧಾರಸ್ತಂಭಗಳಿಗೆ ಹೆಚ್ಚಿನ ಶಕ್ತಿ ನೀಡಿದೆ.

 

ಆದರೆ ಸ್ನೇಹಿತರೆ,

ಯಾವುದೇ ನಿರ್ದೇಶನವು ಸ್ವಯಂಚಾಲಿತವಾಗಿ ಫಲಿತಾಂಶಗಳನ್ನು ನೀಡುತ್ತದೆ. ಉದ್ಯಮ, ಹಣಕಾಸು ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರಗಳು ಅದನ್ನು ವಾಸ್ತವಗೊಳಿಸಲು ಒಟ್ಟಾಗಿ ಕೆಲಸ ಮಾಡಿದಾಗ ನಿಜವಾದ ಬದಲಾವಣೆ ಸಂಭವಿಸುತ್ತದೆ. ಈ ವೆಬಿನಾರ್‌ನಲ್ಲಿ, ಉತ್ಪಾದನೆ ಮತ್ತು ತಯಾರಿಕೆಯನ್ನು ಹೇಗೆ ಹೆಚ್ಚಿಸಬಹುದು, ವೆಚ್ಚದ ರಚನೆಗಳನ್ನು ಹೇಗೆ ಹೆಚ್ಚು ಸ್ಪರ್ಧಾತ್ಮಕವಾಗಿಸಬಹುದು, ಹೂಡಿಕೆಯ ಹರಿವನ್ನು ಹೇಗೆ ವೇಗಗೊಳಿಸಬಹುದು ಮತ್ತು ಅಭಿವೃದ್ಧಿಯು ದೇಶದ ಪ್ರತಿಯೊಂದು ಮೂಲೆಯನ್ನು ಹೇಗೆ ತಲುಪಬಹುದು ಎಂಬಂತಹ ಕೆಲವು ವಿಷಯಗಳಿಗೆ ನೀವು ಆದ್ಯತೆ ನೀಡುತ್ತೀರಿ ಎಂಬುದು ನನ್ನ ನಿರೀಕ್ಷೆಯಾಗಿದೆ. ಈ ದಿಕ್ಕಿನಲ್ಲಿ ನಿಮ್ಮ ಸಲಹೆಗಳು ಬಹಳ ಮುಖ್ಯವಾಗುತ್ತವೆ.

ಸ್ನೇಹಿತರೆ,

ಉತ್ಪಾದನಾ ಕ್ಷೇತ್ರದಲ್ಲಿ ದೇಶವು ಇಂದು ತನ್ನ ಪ್ರಮುಖ ಕೈಗಾರಿಕಾ ಸಾಮರ್ಥ್ಯಗಳನ್ನು ಬಲಪಡಿಸುತ್ತಿದೆ. ಈ ಹಾದಿಯಲ್ಲಿರುವ ಸವಾಲುಗಳನ್ನು ಸಹ ಪರಿಹರಿಸಲಾಗುತ್ತಿದೆ. ಅಪರೂಪದ ಸಮರ್ಪಿತ ಭೂಮಿ ಕಾರಿಡಾರ್‌ಗಳು ಮತ್ತು ಕಂಟೇನರ್ ಉತ್ಪಾದನೆಯಂತಹ ವಲಯಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ, ನಾವು ನಮ್ಮ ವ್ಯಾಪಾರ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಪ್ರಯತ್ನಿಸುತ್ತಿದ್ದೇವೆ. ಬಯೋಫಾರ್ಮಾ ಶಕ್ತಿ ಮಿಷನ್ ಅನ್ನು ಸಹ ಬಜೆಟ್ ನಲ್ಲಿ ಘೋಷಿಸಲಾಗಿದೆ.. ಈ ಮಿಷನ್‌ನ ಉದ್ದೇಶ ಭಾರತವನ್ನು ಜೈವಿಕ ಮತ್ತು ಮುಂದಿನ ಪೀಳಿಗೆಯ ಚಿಕಿತ್ಸೆಗಳಲ್ಲಿ ಜಾಗತಿಕ ಕೇಂದ್ರವನ್ನಾಗಿ ಮಾಡುವುದಾಗಿದೆ. ಮುಂದುವರಿದ ಬಯೋಫಾರ್ಮಾ ಸಂಶೋಧನೆ ಮತ್ತು ಉತ್ಪಾದನೆಯಲ್ಲಿ ನಾಯಕತ್ವದತ್ತ ಸಾಗಲು ನಾವು ಬಯಸುತ್ತೇವೆ.

ಸ್ನೇಹಿತರೆ,

ಇಂದು ಜಗತ್ತು ವಿಶ್ವಾಸಾರ್ಹ ಮತ್ತು ಚೇತರಿಕೆಯ ಉತ್ಪಾದನಾ ಪಾಲುದಾರರನ್ನು ಹುಡುಕುತ್ತಿದೆ. ಭಾರತವು ಈ ಪಾತ್ರವನ್ನು ಬಲವಾಗಿ ನಿರ್ವಹಿಸುವ ಅವಕಾಶ ಹೊಂದಿದೆ. ಇದಕ್ಕಾಗಿ, ಎಲ್ಲಾ ಪಾಲುದಾರರು ಹೆಚ್ಚಿನ ವಿಶ್ವಾಸದಿಂದ ಹೂಡಿಕೆ ಮಾಡಬೇಕು, ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಸಂಶೋಧನೆಯಲ್ಲಿ ಜಿಪುಣತನದ ಯುಗ ಹೋಗಿದೆ - ಈಗ ನಾವು ಸಂಶೋಧನೆಯಲ್ಲಿ ದೊಡ್ಡ ಹೂಡಿಕೆಗಳನ್ನು ಮಾಡಬೇಕು. ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಗುಣಮಟ್ಟವನ್ನು ನಾವು ಖಚಿತಪಡಿಸಿಕೊಳ್ಳಬೇಕು. ಅವಕಾಶಗಳು ನಮ್ಮ ದಾರಿಗೆ ಬರುತ್ತಿದ್ದಂತೆ, ನಮ್ಮ ಏಕೈಕ ಮಂತ್ರ ಹೀಗಿರಬೇಕು ಎಂದು ನಾನು ಪದೇಪದೆ ಹೇಳುತ್ತೇನೆ: ಗುಣಮಟ್ಟ, ಗುಣಮಟ್ಟ, ಗುಣಮಟ್ಟ.

 

ಸ್ನೇಹಿತರೆ,

ಭಾರತವು ಅನೇಕ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ. ಇದು ನಮಗೆ ಅವಕಾಶಗಳ ದೊಡ್ಡ ಬಾಗಿಲು ತೆರೆದಿದೆ. ಅಂತಹ ಪರಿಸ್ಥಿತಿಯಲ್ಲಿ, ನಮ್ಮ ಜವಾಬ್ದಾರಿ ಗುಣಮಟ್ಟದ ಮೇಲೆ ಎಂದಿಗೂ ರಾಜಿ ಮಾಡಿಕೊಳ್ಳದಿರುವುದಾಗಿದೆ. ನಾವು ಒಂದು ವಿಷಯದಲ್ಲಿ ಹೆಚ್ಚಿನ ಶಕ್ತಿ, ಬುದ್ಧಿವಂತಿಕೆ ಮತ್ತು ಪ್ರಯತ್ನವನ್ನು ಹಾಕಬೇಕಾದರೆ, ಅದು ಗುಣಮಟ್ಟವಾಗಿರಬೇಕು. ನಮ್ಮ ಉತ್ಪನ್ನಗಳ ಗುಣಮಟ್ಟವು ಜಾಗತಿಕ ಮಾನದಂಡಗಳನ್ನು ಪೂರೈಸುವುದಲ್ಲದೆ ಅವುಗಳನ್ನು ಮೀರಬೇಕು. ಇದಕ್ಕಾಗಿ, ನಾವು ಇತರೆ ದೇಶಗಳ ಅಗತ್ಯತೆಗಳು ಮತ್ತು ನಿರೀಕ್ಷೆಗಳನ್ನು ಅಧ್ಯಯನ ಮಾಡಬೇಕು, ಸಂಶೋಧನೆ ನಡೆಸಬೇಕು ಮತ್ತು ಅವುಗಳನ್ನು ಅರ್ಥ ಮಾಡಿಕೊಳ್ಳಬೇಕು. ನಾವು ಇತರೆ ದೇಶಗಳ ಜನರ ಆದ್ಯತೆಗಳು ಮತ್ತು ಸೌಕರ್ಯವನ್ನು ಅಧ್ಯಯನ ಮಾಡಬೇಕು - ಇದು ಅತ್ಯಂತ ದೊಡ್ಡ ಅವಶ್ಯಕತೆಯಾಗಿದೆ, ಅದರ ಮೇಲೆ ಸಂಶೋಧನೆ ಮಾಡಬೇಕು. ಯಾರಾದರೂ ಸಣ್ಣ ಬಿಡಿಭಾಗಗಳನ್ನು ಕೇಳುತ್ತಾರೆ, ಅವರು ದೊಡ್ಡ ಹಡಗನ್ನು ನಿರ್ಮಿಸುತ್ತಿದ್ದಾರೆ ಎಂದು ಭಾವಿಸೋಣ. ನಾವು ನಿರಾತಂಕವಾಗಿ ಆ ಬಿಡಿಭಾಗವನ್ನು ಕಳುಹಿಸಿದರೆ, ಅದನ್ನು ಯಾರು ಸ್ವೀಕರಿಸುತ್ತಾರೆ? ನಮಗೆ, ಅದು ಒಂದು ಸಣ್ಣ ಬಿಡಿಭಾಗವಾಗಿರಬಹುದು, ಆದರೆ ಅವರ ದೊಡ್ಡ ಉತ್ಪಾದನಾ ಘಟಕದಲ್ಲಿ, ಅದು ಹೆಚ್ಚಿನ ಪ್ರಾಮುಖ್ಯತೆ ಹೊಂದಿರುತ್ತದೆ. ಅದಕ್ಕಾಗಿಯೇ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಗುಣಮಟ್ಟವು ನಮಗೆ ಸುವರ್ಣ ಅವಕಾಶಗಳನ್ನು ಸೃಷ್ಟಿಸುತ್ತದೆ. ನಾವು ಅವುಗಳ ಅವಶ್ಯಕತೆಗಳಿಗೆ ಅನುಗುಣವಾಗಿ ಬಳಕೆದಾರ ಸ್ನೇಹಿ ಉತ್ಪನ್ನಗಳನ್ನು ತಯಾರಿಸಬೇಕು. ಆಗ ಮಾತ್ರ ನಾವು ಈ ಅವಕಾಶಗಳ ಲಾಭ ಪಡೆಯಬಹುದು. ಮುಕ್ತ ವ್ಯಾಪಾರ ಒಪ್ಪಂದಗಳು ಸಿದ್ಧವಾಗಿ, ಈಗ ಅಭಿವೃದ್ಧಿಯ ಹೆದ್ದಾರಿ ನಿಮಗಾಗಿ ಸಿದ್ಧವಾಗಿದೆ. ಈ ವೆಬಿನಾರ್‌ನಲ್ಲಿ, ನೀವು ನಿಮ್ಮ ಚರ್ಚೆಗಳಲ್ಲಿ ಈ ವಿಷಯದ ಬಗ್ಗೆಯೂ ಗಮನ ಹರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ.

ಸ್ನೇಹಿತರೆ,

ನಾವು ಎಂಎಸ್ಎಂಇ ವರ್ಗೀಕರಣದಲ್ಲಿ ಮಾಡಿದ ಸುಧಾರಣೆಗಳು ವ್ಯಾಪಕ ಪರಿಣಾಮಗಳನ್ನು ತೋರಿಸುತ್ತಿವೆ. ಉದ್ಯಮಗಳು ಇನ್ನು ಮುಂದೆ ವಿಸ್ತರಿಸಿದರೆ, ಸರ್ಕಾರ ಒದಗಿಸುವ ಪ್ರಯೋಜನಗಳನ್ನು ಕಳೆದುಕೊಳ್ಳುತ್ತವೆ ಎಂದು ಭಯ ಪಡಬೇಕಿಲ್ಲ. ಎಂಎಸ್ಎಂಇಗಳಿಗೆ ಸಾಲವನ್ನು ಸುಲಭವಾಗಿ ಪಡೆಯಲು, ತಂತ್ರಜ್ಞಾನ ಪರಿಷ್ಕರಣೆ ಉತ್ತೇಜಿಸಲು ಮತ್ತು ಸಾಮರ್ಥ್ಯ ವೃದ್ಧಿ  ಉತ್ತೇಜಿಸಲು ಪ್ರಯತ್ನಗಳನ್ನು ಮಾಡಲಾಗಿದೆ.

ಆದರೆ ಸ್ನೇಹಿತರೆ,

ಈ ಎಲ್ಲಾ ಪ್ರಯತ್ನಗಳು ಫಲಿತಾಂಶಗಳನ್ನು ತೋರಿಸುತ್ತವೆ, ಎಂಎಸ್ಎಂಇಗಳು ಗೆಲುವಿನ ಗುರಿಯೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಗೆ ಪ್ರವೇಶಿಸಿದಾಗ ಮಾತ್ರ ಅದು ಸಾಧ್ಯವಾಗಲಿದೆ. ಎಂಎಸ್ಎಂಇಗಳು ತಮ್ಮ ಉತ್ಪಾದಕತೆ ಹೆಚ್ಚಿಸಿಕೊಳ್ಳಲು, ಗುಣಮಟ್ಟದ ಮಾನದಂಡಗಳನ್ನು ಹೆಚ್ಚಿಸಲು, ಡಿಜಿಟಲ್ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಲು ಮತ್ತು ಬಲವಾದ ಮೌಲ್ಯ ಸರಪಳಿಗಳೊಂದಿಗೆ ಸಂಪರ್ಕ ಸಾಧಿಸಲು ಈಗ ಸುಸಮಯ. ಈ ದಿಕ್ಕಿನಲ್ಲಿ, ಈ ವೆಬಿನಾರ್‌ನಲ್ಲಿ ನಿಮ್ಮ ಸಲಹೆಗಳು ಬಹಳ ಮುಖ್ಯವಾಗುತ್ತವೆ.

 

ಸ್ನೇಹಿತರೆ,

ಮೂಲಸೌಕರ್ಯ ಮತ್ತು ಸರಕು ಸಾಗಣೆ ನಮ್ಮ ಬೆಳವಣಿಗೆ ಕಾರ್ಯತಂತ್ರದ ಪ್ರಮುಖ ಆಧಾರಸ್ತಂಭಗಳಾಗಿವೆ. ಈ ವರ್ಷದ ಬಜೆಟ್ ದಾಖಲೆಯ ಬಂಡವಾಳ ವೆಚ್ಚವನ್ನು ಪ್ರಸ್ತಾಪಿಸಿದೆ. ಹೆಚ್ಚಿನ ಸಾಮರ್ಥ್ಯದ ಸಾರಿಗೆ ವ್ಯವಸ್ಥೆಗಳನ್ನು ನಿರ್ಮಿಸುವುದು, ರೈಲ್ವೆಗಳು, ಹೆದ್ದಾರಿಗಳು, ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ಜಲಮಾರ್ಗಗಳ ನಡುವೆ ಉತ್ತಮ ಸಮನ್ವಯ ಸಾಧಿಸುವುದು, ವಿವಿಧ ಸರಕು ಕಾರಿಡಾರ್‌ಗಳ ವಿಸ್ತರಣೆ ಮತ್ತು ಬಹುಮಾದರಿ ಸಂಪರ್ಕ - ಈ ಎಲ್ಲಾ ಹಂತಗಳು ವೆಚ್ಚವನ್ನು ಕಡಿಮೆ ಮಾಡಲು ಮತ್ತು ದಕ್ಷತೆಯನ್ನು ಸುಧಾರಿಸಲು ಅವಶ್ಯಕ. ಆದ್ದರಿಂದ, ಹೊಸ ಜಲಮಾರ್ಗಗಳು, ಹಡಗು ದುರಸ್ತಿ ಸೌಲಭ್ಯಗಳು ಮತ್ತು ಪ್ರಾದೇಶಿಕ ಶ್ರೇಷ್ಠತೆಯ ಕೇಂದ್ರಗಳು ನಮ್ಮ ಸರಕು ಸಾಗಣೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತವೆ. 7 ಹೊಸ ಹೈ-ಸ್ಪೀಡ್ ರೈಲು ಕಾರಿಡಾರ್‌ಗಳು ಬೆಳವಣಿಗೆಯ ಸಂಪರ್ಕಸಾಧುಗಳಾಗಲಿವೆ. ಆದರೆ ಕೈಗಾರಿಕೆಗಳು ಮತ್ತು ಹೂಡಿಕೆದಾರರು ತಮ್ಮ ಕಾರ್ಯತಂತ್ರಗಳನ್ನು ಈ ದೃಷ್ಟಿಕೋನದೊಂದಿಗೆ ಜೋಡಿಸಿದಾಗ ಮಾತ್ರ ಈ ಮೂಲಸೌಕರ್ಯದ ನಿಜವಾದ ಪ್ರಯೋಜನ ಬರುತ್ತದೆ ಎಂಬುದು ನಿಮಗೆ ತಿಳಿದಿದೆ. ಆ ಕಾರ್ಯತಂತ್ರಗಳು ಯಾವುವು ಎಂಬುದನ್ನು ನೀವು ವಿವರವಾಗಿ ಚರ್ಚಿಸಬೇಕು, ನೀವೆಲ್ಲಾ ಈ ವಿಷಯಗಳಿಗೆ ಗಮನ ಕೊಡುತ್ತೀರಿ ಎಂಬ ವಿಶ್ವಾಸ ನನಗಿದೆ.

ಸ್ನೇಹಿತರೆ,

ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ನಗರೀಕರಣವು ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಭಾರತದ ಭವಿಷ್ಯದ ಬೆಳವಣಿಗೆಯು ನಾವು ನಮ್ಮ ನಗರಗಳನ್ನು ಎಷ್ಟು ಪರಿಣಾಮಕಾರಿಯಾಗಿ ಯೋಜಿಸುತ್ತೇವೆ ಮತ್ತು ನಿರ್ವಹಿಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನಮ್ಮ 2 ಮತ್ತು 3ನೇ ಶ್ರೇಣಿಯ ನಗರಗಳು ಹೇಗೆ ಹೊಸ ಬೆಳವಣಿಗೆಯ ಆಧಾರಸ್ತಂಭಗಳಾಗುತ್ತವೆ.  ಈ ಬಜೆಟ್ ವೆಬಿನಾರ್‌ನಲ್ಲಿ ನಿಮ್ಮ ಸಲಹೆಗಳು ಇದಕ್ಕೆ ಬಹಳ ಮುಖ್ಯವಾಗುತ್ತವೆ.

ಸ್ನೇಹಿತರೆ,

ಇಂದು ವಿಶ್ವ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪರಿವರ್ತನೆ ನಡೆಯುತ್ತಿದೆ. ಮಾರುಕಟ್ಟೆಗಳು ಇನ್ನು ಮುಂದೆ ವೆಚ್ಚವನ್ನು ಮಾತ್ರ ನೋಡುವುದಿಲ್ಲ; ಅವು ಸುಸ್ಥಿರತೆಯನ್ನು ಸಹ ನೋಡುತ್ತವೆ. ಈ ದಿಕ್ಕಿನಲ್ಲಿ, ಇಂಗಾಲ ಸೆರೆಹಿಡಿಯುವಿಕೆ, ಬಳಕೆ ಮತ್ತು ಸಂಗ್ರಹಣೆ ಮಿಷನ್ ಒಂದು ಪ್ರಮುಖ ಉಪಕ್ರಮವಾಗಿದೆ. ಈಗ ಸುಸ್ಥಿರತೆಯು ನಿಮ್ಮ ಪ್ರಮುಖ ವ್ಯವಹಾರ ಕಾರ್ಯತಂತ್ರದ ಭಾಗವಾಗಬೇಕು. ಸಮಯಕ್ಕೆ ಸರಿಯಾಗಿ ಶುದ್ಧ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುವ ಕೈಗಾರಿಕೆಗಳು ಮುಂಬರುವ ವರ್ಷಗಳಲ್ಲಿ ಹೊಸ ಮಾರುಕಟ್ಟೆಗಳಿಗೆ ಉತ್ತಮ ಪ್ರವೇಶ ಪಡೆಯುತ್ತವೆ. ಈ ವರ್ಷದ ಬಜೆಟ್ ಹೊಸ ದಿಕ್ಕು ನೀಡಿದೆ. ಕೈಗಾರಿಕೆಗಳು, ಹೂಡಿಕೆದಾರರು ಮತ್ತು ಸಂಸ್ಥೆಗಳು ಇದರಲ್ಲಿ ಒಟ್ಟಾಗಿ ಮುಂದುವರಿಯಬೇಕು ಎಂಬುದು ನನ್ನ ಮನವಿ.

ಸ್ನೇಹಿತರೆ,

ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಮೂಹಿಕ ಮಾಲೀಕತ್ವದ ಮೂಲಕ ಮಾತ್ರ ಸಾಧಿಸಬಹುದು. ಈ ಬಜೆಟ್ ವೆಬಿನಾರ್ ಕೇವಲ ಚರ್ಚೆಗೆ ಅಥವಾ ಜ್ಞಾನ ಸಂಗ್ರಹಿಸುವ ವೇದಿಕೆಯಾಗಿ ಉಳಿಯಬಾರದು. ಇದು ಸಾಮೂಹಿಕ ಮಾಲೀಕತ್ವವನ್ನು ತೋರಿಸಬೇಕು - ಅದು ಬಹಳ ಅವಶ್ಯಕ. ಬಜೆಟ್ ಒಂದು ಮಾರ್ಗಸೂಚಿಯನ್ನು ಒದಗಿಸಿದೆ. ಈಗ ನೀವು ಒಟ್ಟುಗೂಡಿ ಆವೇಗ  ಸೃಷ್ಟಿಸಬೇಕು. ನೀವು ನಮ್ಮ ಪ್ರಯತ್ನಗಳಲ್ಲಿ ನಿರಂತರ ಭಾಗವಹಿಸುವವರಾಗಬೇಕು. ನಿಮ್ಮ ಪ್ರತಿಯೊಂದು ಸಲಹೆ, ನಿಮ್ಮ ಪ್ರತಿಯೊಂದು ಅನುಭವವು ನೆಲದ ಮೇಲೆ ಅತ್ಯುತ್ತಮ ಫಲಿತಾಂಶಗಳನ್ನು ತರುವ ಸಾಮರ್ಥ್ಯ ಹೊಂದಿದೆ. ನಿಮ್ಮ ಸಲಹೆಗಳು ದೇಶದ ಪ್ರಗತಿಯಲ್ಲಿ ಮೈಲಿಗಲ್ಲುಗಳಾಗಲಿ - ಈ ನಂಬಿಕೆಯೊಂದಿಗೆ, ನಾನು ನಿಮಗೆ ತುಂಬು ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ನಮಸ್ಕಾರ!

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India records highest-ever startup surge with 55,200 recognised in FY26

Media Coverage

India records highest-ever startup surge with 55,200 recognised in FY26
NM on the go

Nm on the go

Always be the first to hear from the PM. Get the App Now!
...
Cabinet approves Continuation of Pradhan Mantri Gram Sadak Yojana-III till March 2028
April 18, 2026

The Union Cabinet, chaired by the Prime Minister Shri Narendra Modi, today has given its approval for the continuation of Pradhan Mantri Gram Sadak Yojana-III (PMGSY-III) beyond March 2025 upto March 2028. It involves consolidation of Through Routes and Major Rural Links connecting habitations to Gramin Agricultural Markets (GrAMs), Higher Secondary Schools and Hospitals. The revised outlay of the scheme will be Rs.83,977 crore.

The Cabinet further, amongst other things, approved the following:

  • Extension of timeline till March 2028 for completion of roads and bridges in plain areas and roads in hilly areas.
  • Extension of timeline till March 2029 for completion of bridges in hilly areas.
  • Works sanctioned before 31.03.2025 but un-awarded till now may be taken up for tender/award.
  • Long Span Bridges (LSBs) (161 Nos. with estimated cost of Rs.961 crore) pending for sanction but lying on the alignment of already sanctioned roads may be sanctioned and tendered/awarded.
  • Revision of outlay to Rs. 83,977 crore from original outlay of Rs.80,250 crore.

Benefits:

The extension of the timeline of PMGSY-III will enable the full realization of its intended socio-economic benefits by ensuring completion of targeted upgradation of rural roads. It will significantly boost the rural economy and trade by enhancing market access for agricultural and non-farm products, reducing transportation time and costs, and thereby improving rural incomes. Improved connectivity will facilitate better access to education and healthcare institutions, ensuring timely delivery of essential services, particularly in remote and underserved areas.

The continued implementation will also generate substantial employment opportunities, both directly through construction activities and indirectly by promoting rural enterprises and services. Overall, the extension will contribute to inclusive and sustainable development by bridging the rural-urban divide and advancing the vision of Viksit Bharat 2047.