ಬಾಹ್ಯಾಕಾಶದಲ್ಲಿ ಭಾರತದ ಧ್ವಜವನ್ನು ಹಾರಿಸಿದ್ದಕ್ಕಾಗಿ ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು: ಪ್ರಧಾನಮಂತ್ರಿ
ವಿಜ್ಞಾನ ಮತ್ತು ಆಧ್ಯಾತ್ಮಿಕತೆ, ಎರಡೂ ನಮ್ಮ ರಾಷ್ಟ್ರದ ಶಕ್ತಿ: ಪ್ರಧಾನಮಂತ್ರಿ
ಚಂದ್ರಯಾನದ ಯಶಸ್ಸಿನಿಂದ ದೇಶದ ಮಕ್ಕಳು ಮತ್ತು ಯುವಕರಲ್ಲಿ ವಿಜ್ಞಾನದ ಬಗ್ಗೆ ಹೊಸ ಆಸಕ್ತಿ ಮೂಡಿದೆ, ಬಾಹ್ಯಾಕಾಶವನ್ನು ಅನ್ವೇಷಿಸುವ ಉತ್ಸಾಹ ಹೆಚ್ಚಿದೆ. ಈಗ ನಿಮ್ಮ ಈ ಐತಿಹಾಸಿಕ ಪಯಣವು ಆ ಸಂಕಲ್ಪಕ್ಕೆ ಮತ್ತಷ್ಟು ಶಕ್ತಿ ನೀಡುತ್ತಿದೆ: ಪ್ರಧಾನಮಂತ್ರಿ
ನಾವು 'ಮಿಷನ್ ಗಗನಯಾನ'ವನ್ನು ಮುನ್ನಡೆಸಬೇಕು, ನಮ್ಮದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಬೇಕು ಮತ್ತು ಚಂದ್ರನ ಮೇಲೆ ಭಾರತೀಯ ಗಗನಯಾತ್ರಿಯನ್ನು ಇಳಿಸಬೇಕು: ಪ್ರಧಾನಮಂತ್ರಿ
ಇಂದು ನಾನು ವಿಶ್ವಾಸದಿಂದ ಹೇಳಬಲ್ಲೆ, ಇದು ಭಾರತದ ಗಗನಯಾನ ಮಿಷನ್‌ ನ ಯಶಸ್ಸಿನ ಮೊದಲ ಅಧ್ಯಾಯ. ನಿಮ್ಮ ಐತಿಹಾಸಿಕ ಪಯಣ ಕೇವಲ ಬಾಹ್ಯಾಕಾಶಕ್ಕೆ ಸೀಮಿತವಾಗಿಲ್ಲ, ಇದು ನಮ್ಮ 'ವಿಕಸಿತ ಭಾರತ'ದ ಪಯಣಕ್ಕೆ ವೇಗ ಮತ್ತು ಹೊಸ ಚೈತನ್ಯವನ್ನು ನೀಡಲಿದೆ: ಪ್ರಧಾನಮಂತ್ರಿ
ಭಾರತವು ಜಗತ್ತಿಗಾಗಿ ಬಾಹ್ಯಾಕಾಶದ ಹೊಸ ಸಾಧ್ಯತೆಗಳ ಬಾಗಿಲುಗಳನ್ನು ತೆರೆಯಲಿದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ: ಶುಭಾಂಶು ನಮಸ್ಕಾರ!

ಶುಭಾಂಶು ಶುಕ್ಲ: ನಮಸ್ಕಾರ!

ಪ್ರಧಾನಮಂತ್ರಿ: ಇಂದು ನೀವು ನಿಮ್ಮ ಮಾತೃಭೂಮಿ ಭಾರತದ ಭೂಮಿಯಿಂದ ದೂರದಲ್ಲಿದ್ದೀರಿ, ಆದರೆ ನೀವು ಭಾರತೀಯರ ಹೃದಯಗಳಿಗೆ ಹತ್ತಿರವಾಗಿದ್ದೀರಿ. ನಿಮ್ಮ ಹೆಸರಿನಲ್ಲೇ ಶುಭವಿದೆ, ನಿಮ್ಮ ಪ್ರಯಾಣ ಹೊಸ ಯುಗದ ಆರಂಭವೂ ಆಗಿದೆ. ಈ ಸಮಯದಲ್ಲಿ ನಾವಿಬ್ಬರೂ ಮಾತನಾಡುತ್ತಿದ್ದೇವೆ, ಆದರೆ 140 ಕೋಟಿ ಭಾರತೀಯರ ಭಾವನೆಗಳು ನನ್ನೊಂದಿಗಿವೆ. ನನ್ನ ಧ್ವನಿಯು ಎಲ್ಲಾ ಭಾರತೀಯರ ಉತ್ಸಾಹ ಮತ್ತು ಚೈತನ್ಯವನ್ನು ಪ್ರತಿಬಿಂಬಿಸುತ್ತದೆ. ಬಾಹ್ಯಾಕಾಶದಲ್ಲಿ ಭಾರತದ ಧ್ವಜ ಹಾರಿಸಿದ್ದಕ್ಕಾಗಿ ನಾನು ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ. ನಾನು ಹೆಚ್ಚು ಸಮಯ ತೆಗೆದುಕೊಳ್ಳುತ್ತಿಲ್ಲ, ಆದ್ದರಿಂದ ಮೊದಲು ನನಗೆ ಹೇಳಿ, ಅಲ್ಲಿ ಎಲ್ಲವೂ ಸರಿಯಾಗಿದೆಯೇ? ನೀವು ಚೆನ್ನಾಗಿದ್ದೀರಾ?

ಶುಭಾಂಶು ಶುಕ್ಲಾ: ಹೌದು, ಪ್ರಧಾನಮಂತ್ರಿ ಜೀ! ನಿಮ್ಮ ಶುಭಾಶಯಗಳು ಮತ್ತು ನನ್ನ 140 ಕೋಟಿ ದೇಶವಾಸಿಗಳ ಶುಭಾಶಯಗಳಿಗೆ ತುಂಬಾ ಧನ್ಯವಾದಗಳು. ನಾನು ಇಲ್ಲಿ ಸಂಪೂರ್ಣ ಚೆನ್ನಾಗಿದ್ದೇನೆ ಮತ್ತು ಸುರಕ್ಷಿತವಾಗಿದ್ದೇನೆ. ನಿಮ್ಮ ಆಶೀರ್ವಾದ ಮತ್ತು ಪ್ರೀತಿಯಿಂದಾಗಿ... ನನಗೆ ತುಂಬಾ ಚೆನ್ನಾಗಿ ಅನಿಸುತ್ತಿದೆ. ಇದು ತುಂಬಾ ಹೊಸ ಅನುಭವ. ಎಲ್ಲೋ ಒಂದಲ್ಲ ಒಂದು ಕಡೆ, ನಾನು ಮತ್ತು ನಮ್ಮ ದೇಶ ಮತ್ತು ನಮ್ಮ ಭಾರತದಲ್ಲಿ ನನ್ನಂತಹ ಅನೇಕ ಜನರು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂಬುದನ್ನು ತೋರಿಸುವ ಅನೇಕ ವಿಷಯಗಳು ನಡೆಯುತ್ತಿವೆ. ನನ್ನ ಈ ಪ್ರಯಾಣ, ಭೂಮಿಯಿಂದ ಕಕ್ಷೆಗೆ 400 ಕಿಲೋಮೀಟರ್‌ಗಳ ಈ ಸಣ್ಣ ಪ್ರಯಾಣ, ನನ್ನದು ಮಾತ್ರವಲ್ಲ. ಎಲ್ಲೋ ಇದು ನಮ್ಮ ದೇಶದ ಪ್ರಯಾಣವೂ ಆಗಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನಾನು ಚಿಕ್ಕವನಿದ್ದಾಗ, ನಾನು ಗಗನಯಾತ್ರಿಯಾಗುತ್ತೇನೆ ಎಂದು ಊಹಿಸಲೂ ಸಾಧ್ಯವಾಗಿರಲಿಲ್ಲ. ಆದರೆ ನಿಮ್ಮ ನಾಯಕತ್ವದಲ್ಲಿ ಇಂದಿನ ಭಾರತವು ಈ ಅವಕಾಶವನ್ನು ಒದಗಿಸುತ್ತಿದೆ, ಆ ಕನಸುಗಳನ್ನು ನನಸಾಗಿಸಲು ಅವಕಾಶ ನೀಡುತ್ತಿದೆ ಎಂದು ನಾನು ನಂಬುತ್ತೇನೆ. ಆದ್ದರಿಂದ, ಇದು ನನಗೆ ಒಂದು ದೊಡ್ಡ ಸಾಧನೆಯಾಗಿದೆ. ನಾನು ಇಲ್ಲಿ ನನ್ನ ದೇಶವನ್ನು ಪ್ರತಿನಿಧಿಸಲು ಸಾಧ್ಯವಾಗುತ್ತಿರುವುದಕ್ಕೆ ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ಧನ್ಯವಾದಗಳು, ಪ್ರಧಾನಿ ಜೀ!

 

ಪ್ರಧಾನಮಂತ್ರಿ: ಶುಭ್, ನೀವು ಬಾಹ್ಯಾಕಾಶದಲ್ಲಿದ್ದೀರಿ, ಅಲ್ಲಿ ಗುರುತ್ವಾಕರ್ಷಣೆ ಏನೂ ಅಲ್ಲ, ಆದರೆ ಪ್ರತಿಯೊಬ್ಬ ಭಾರತೀಯನು ನೀವು ಎಷ್ಟು ಭೂಮಿಗೆ ಇಳಿದಿದ್ದೀರಿ ಎಂಬುದನ್ನು ನೋಡುತ್ತಿದ್ದಾನೆ. ನೀವು ನಿಮ್ಮೊಂದಿಗೆ ಕೊಂಡೊಯ್ದಿದ್ದ ಗಜರ್ ಕಾ ಹಲ್ವಾವನ್ನು ನಿಮ್ಮ ಸ್ನೇಹಿತರಿಗೆ ಕೊಟ್ಟಿರಾ?

ಶುಭಾಂಶು ಶುಕ್ಲಾ: ಹೌದು, ಪ್ರಧಾನ ಮಂತ್ರಿಗಳೇ! ನಾನು ನನ್ನ ದೇಶದಿಂದ ಗಜರ್ ಕಾ ಹಲ್ವಾ, ಮೂಂಗ್ ದಾಲ್ ಹಲ್ವಾ ಮತ್ತು ಆಮ್ ರಸ್ ನಂತಹ ಕೆಲವು ಆಹಾರ ಪದಾರ್ಥಗಳನ್ನು ತಂದಿದ್ದೆ, ಇತರೆ ದೇಶಗಳಿಂದ ಬಂದಿರುವ ನನ್ನ ಇತರೆ ಸ್ನೇಹಿತರು ಸಹ ಇದನ್ನು ಸವಿಯಬೇಕೆಂದು, ಭಾರತದ ಶ್ರೀಮಂತ ಪಾಕಪದ್ಧತಿಯ ಪರಂಪರೆ ಅನುಭವಿಸಬೇಕೆಂದು ನಾನು ಬಯಸಿದ್ದೆ. ಹಾಗಾಗಿ, ನಾವೆಲ್ಲರೂ ಒಟ್ಟಿಗೆ ಕುಳಿತು ರುಚಿ ನೋಡಿದೆವು, ಎಲ್ಲರಿಗೂ ಇದು ತುಂಬಾ ಇಷ್ಟವಾಯಿತು. ಕೆಲವರು ಯಾವಾಗ ನಮ್ಮ ದೇಶಕ್ಕೆ ಭೇಟಿ ನೀಡಿ, ನಮ್ಮೊಂದಿಗೆ ಸವಿಯುತ್ತೀರಿ ಎಂದು ಕೇಳಿದರು...

ಪ್ರಧಾನಮಂತ್ರಿ: ಶುಭ್, ಪರಿಕ್ರಮವು ಭಾರತದ ಶತಮಾನಗಳಷ್ಟು ಹಳೆಯ ಸಂಪ್ರದಾಯವಾಗಿದೆ. ನೀವು ಭೂಮಿ ತಾಯಿಯ ಪರಿಕ್ರಮ ಮಾಡುವ ಅದೃಷ್ಟ ಪಡೆದಿದ್ದೀರಿ. ನೀವು ಈಗ ಭೂಮಿಯ ಯಾವ ಭಾಗವನ್ನು ಹಾದುಹೋಗುತ್ತೀರಿ?

ಶುಭಾಂಶು ಶುಕ್ಲಾ: ಹೌದು ಪ್ರಧಾನ ಮಂತ್ರಿಗಳೇ! ನನಗೆ ಈಗ ಆ ಮಾಹಿತಿ ಇಲ್ಲ, ಆದರೆ ಸ್ವಲ್ಪ ಸಮಯದ ಹಿಂದೆ ನಾನು ಕಿಟಕಿಯಿಂದ ಹೊರಗೆ ನೋಡುತ್ತಿದ್ದೆ, ನಾವು ಹವಾಯಿಯನ್ನು ಹಾದು ಹೋಗುತ್ತಿದ್ದೆವು, ನಾವು ದಿನಕ್ಕೆ 16 ಬಾರಿ ಸುತ್ತುತ್ತೇವೆ. ನಾವು ಕಕ್ಷೆಯಿಂದ 16 ಸೂರ್ಯೋದಯಗಳು ಮತ್ತು 16 ಸೂರ್ಯಾಸ್ತಗಳನ್ನು ನೋಡುತ್ತೇವೆ. ಈ ಸಂಪೂರ್ಣ ಪ್ರಕ್ರಿಯೆಯು ತುಂಬಾ ಅದ್ಭುತವಾಗಿದೆ. ಈ ಕಕ್ಷೆಯಲ್ಲಿ, ಈ ವೇಗದಲ್ಲಿ, ನಾವು ಗಂಟೆಗೆ ಸುಮಾರು 28,000 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದ್ದೇವೆ

ನಿಮ್ಮೊಂದಿಗೆ ಮಾತನಾಡುವಾಗ ನಾವು ಒಳಗಿರುವುದರಿಂದ ಈ ವೇಗ ತಿಳಿದಿಲ್ಲ, ಆದರೆ ಎಲ್ಲೋ ಈ ವೇಗವು ನಮ್ಮ ದೇಶವು ಯಾವ ವೇಗದಲ್ಲಿ ಪ್ರಗತಿ ಹೊಂದುತ್ತಿದೆ ಎಂಬುದನ್ನು ಖಂಡಿತವಾಗಿಯೂ ತೋರಿಸುತ್ತದೆ.

ಪ್ರಧಾನಮಂತ್ರಿ: ಅದ್ಭುತ!

ಶುಭಾಂಶು ಶುಕ್ಲಾ: ಈ ಕ್ಷಣದಲ್ಲಿ ನಾವು ಇಲ್ಲಿಗೆ ತಲುಪಿದ್ದೇವೆ, ಈಗ ನಾವು ಇಲ್ಲಿಂದ ಮುಂದೆ ಸಾಗಬೇಕಾಗಿದೆ.

ಪ್ರಧಾನಮಂತ್ರಿ: ಸರಿ, ಬಾಹ್ಯಾಕಾಶದ ಅಗಾಧತೆಯನ್ನು ನೋಡಿದ ನಂತರ ನಿಮ್ಮ ಮನಸ್ಸಿಗೆ ಬಂದ ಮೊದಲ ಆಲೋಚನೆ ಏನು?

ಶುಭಾಂಶು ಶುಕ್ಲಾ: ಪ್ರಧಾನಿ ಜಿ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವು ಮೊದಲ ಬಾರಿಗೆ ಕಕ್ಷೆಯನ್ನು ತಲುಪಿದಾಗ, ಬಾಹ್ಯಾಕಾಶವನ್ನು ತಲುಪಿದಾಗ, ಮೊದಲ ನೋಟ ಭೂಮಿಯದ್ದಾಗಿತ್ತು. ಭೂಮಿಯನ್ನು ಹೊರಗಿನಿಂದ ನೋಡಿದ ನಂತರ ಮೊದಲ ಆಲೋಚನೆ, ಮನಸ್ಸಿಗೆ ಬಂದ ಮೊದಲ ಆಲೋಚನೆ ಎಂದರೆ ಭೂಮಿಯು ಸಂಪೂರ್ಣವಾಗಿ ಏಕರೂಪವಾಗಿ ಕಾಣುತ್ತದೆ. ನನ್ನ ಪ್ರಕಾರ ಯಾವುದೇ ಗಡಿ ರೇಖೆಯಿಲ್ಲ, ಹೊರಗಿನಿಂದ ಯಾವುದೇ ಗಡಿ ಗೋಚರಿಸುವುದಿಲ್ಲ. ಗಮನಾರ್ಹವಾದ 2ನೇ ವಿಷಯವೆಂದರೆ, ನಾವು ಭಾರತವನ್ನು ಮೊದಲ ಬಾರಿಗೆ ನೋಡಿದಾಗ, ನಾವು ಭಾರತವನ್ನು ನಕ್ಷೆಯಲ್ಲಿ ಅಧ್ಯಯನ ಮಾಡುವಾಗ, ಇತರ ದೇಶಗಳ ಗಾತ್ರ ಎಷ್ಟು ದೊಡ್ಡದಾಗಿದೆ ಎಂದು ನಾವು ನೋಡುತ್ತೇವೆ, ನಮ್ಮ ಗಾತ್ರ ಎಷ್ಟು, ನಾವು ಅದನ್ನು ನಕ್ಷೆಯಲ್ಲಿ ನೋಡುತ್ತೇವೆ, ಆದರೆ ಅದು ಸರಿಯಾಗಿಲ್ಲ. ಏಕೆಂದರೆ ನಾವು 2ಡಿ ಯಲ್ಲಿ 3ಡಿ ವಸ್ತುವನ್ನು ಚಿತ್ರಿಸುತ್ತೇವೆ, ಅಂದರೆ ಕಾಗದದ ಮೇಲೆ. ಭಾರತ ನಿಜವಾಗಿಯೂ ತುಂಬಾ ಭವ್ಯವಾಗಿ ಕಾಣುತ್ತದೆ, ತುಂಬಾ ದೊಡ್ಡದಾಗಿ ಕಾಣುತ್ತದೆ. ಇದು ನಾವು ನಕ್ಷೆಯಲ್ಲಿ ನೋಡುವುದಕ್ಕಿಂತ ಮತ್ತು ಏಕತೆಯ ಭಾವನೆ, ಭೂಮಿಯ ಏಕತೆಯ ಭಾವನೆಗಿಂತ ಬಹಳ ದೊಡ್ಡದಾಗಿದೆ, ಇದು ನಮ್ಮ ಧ್ಯೇಯವಾಕ್ಯವೂ ಆಗಿದೆ. ವೈವಿಧ್ಯತೆಯಲ್ಲಿ ಏಕತೆ, ಅದರ ಪ್ರಾಮುಖ್ಯತೆಯನ್ನು ಹೊರಗಿನಿಂದ ನೋಡಿದಾಗ ಯಾವುದೇ ಗಡಿ ಅಸ್ತಿತ್ವದಲ್ಲಿಲ್ಲ, ಯಾವುದೇ ರಾಜ್ಯ ಅಸ್ತಿತ್ವದಲ್ಲಿಲ್ಲ, ಯಾವುದೇ ದೇಶಗಳು ಅಸ್ತಿತ್ವದಲ್ಲಿಲ್ಲ ಎಂದು ತೋರುತ್ತದೆ, ಅಂತಿಮವಾಗಿ ನಾವೆಲ್ಲರೂ ಮಾನವತೆಯ ಭಾಗವಾಗಿದ್ದೇವೆ. ಭೂಮಿಯೇ ನಮ್ಮ ಮನೆ, ನಾವೆಲ್ಲರೂ ಅದರ ನಾಗರಿಕರಾಗಿದ್ದೇವೆ.

ಪ್ರಧಾನಮಂತ್ರಿ: ಶುಭಾಂಶು, ಬಾಹ್ಯಾಕಾಶ ನಿಲ್ದಾಣಕ್ಕೆ ಹೋದ ಮೊದಲ ಭಾರತೀಯ ನೀವು. ನೀವು ತುಂಬಾ ಶ್ರಮಿಸಿದ್ದೀರಿ. ನೀವು ದೀರ್ಘ ತರಬೇತಿ ಪಡೆದಿದ್ದೀರಿ. ಈಗ ನೀವು ನಿಜವಾದ ಪರಿಸ್ಥಿತಿಯಲ್ಲಿದ್ದೀರಿ, ನೀವು ನಿಜವಾಗಿಯೂ ಬಾಹ್ಯಾಕಾಶದಲ್ಲಿದ್ದೀರಿ, ಅಲ್ಲಿನ ಪರಿಸ್ಥಿತಿಗಳು ಎಷ್ಟು ಭಿನ್ನವಾಗಿವೆ? ನೀವು ಹೇಗೆ ಹೊಂದಿಕೊಳ್ಳುತ್ತಿದ್ದೀರಿ?

ಶುಭಾಂಶು ಶುಕ್ಲಾ: ಇಲ್ಲಿ ಎಲ್ಲವೂ ವಿಭಿನ್ನವಾಗಿದೆ ಪ್ರಧಾನಿ ಜಿ, ನಾವು ಕಳೆದ ಒಂದು ವರ್ಷದಿಂದ ತರಬೇತಿ ಪಡೆದಿದ್ದೇವೆ, ನನಗೆ ಎಲ್ಲಾ ವ್ಯವಸ್ಥೆಗಳ ಬಗ್ಗೆ ತಿಳಿದಿತ್ತು, ನನಗೆ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ತಿಳಿದಿತ್ತು, ನನಗೆ ಪ್ರಯೋಗಗಳ ಬಗ್ಗೆ ತಿಳಿದಿತ್ತು. ಆದರೆ ನಾನು ಇಲ್ಲಿಗೆ ಬಂದ ತಕ್ಷಣ, ಇದ್ದಕ್ಕಿದ್ದಂತೆ ಎಲ್ಲವೂ ಬದಲಾಯಿತು, ಏಕೆಂದರೆ ನಮ್ಮ ದೇಹವು ಗುರುತ್ವಾಕರ್ಷಣೆಯಲ್ಲಿ ವಾಸಿಸಲು ಒಗ್ಗಿಕೊಳ್ಳುತ್ತದೆ, ಎಲ್ಲವನ್ನೂ ಅದು ನಿರ್ಧರಿಸುತ್ತದೆ, ಆದರೆ ಇಲ್ಲಿಗೆ ಬಂದ ನಂತರ, ಗುರುತ್ವಾಕರ್ಷಣೆಯು ಸೂಕ್ಷ್ಮವಾಗಿರುವುದರಿಂದ, ಅದು ಇಲ್ಲಿ ಇಲ್ಲದಿರುವುದರಿಂದ, ಸಣ್ಣ ವಿಷಯಗಳು ಸಹ ತುಂಬಾ ಕಷ್ಟಕರವಾಗುತ್ತವೆ. ಈಗ, ನಿಮ್ಮೊಂದಿಗೆ ಮಾತನಾಡುವಾಗ, ನಾನು ನನ್ನ ಕಾಲುಗಳನ್ನು ಕಟ್ಟಿಕೊಂಡಿದ್ದೇನೆ, ಇಲ್ಲದಿದ್ದರೆ ನಾನು ಮೇಲಕ್ಕೆ ಹೋಗುತ್ತಿದ್ದೆ ಮತ್ತು ಮೈಕ್ ಕೂಡ, ಇವು ಸಣ್ಣ ವಿಷಯಗಳು. ಅಂದರೆ, ನಾನು ಅದನ್ನು ಹೀಗೆ ಬಿಟ್ಟರೂ, ಅದು ಹೀಗೆ ತೇಲುತ್ತಲೇ ಇರುತ್ತದೆ. ನೀರು ಕುಡಿಯುವುದು, ನಡೆಯುವುದು, ಮಲಗುವುದು ಒಂದು ದೊಡ್ಡ ಸವಾಲು, ನೀವು ಛಾವಣಿಯ ಮೇಲೆ ಮಲಗಬಹುದು, ನೀವು ಗೋಡೆಗಳ ಮೇಲೆ ಮಲಗಬಹುದು, ನೀವು ನೆಲದ ಮೇಲೆ ಮಲಗಬಹುದು.

 

ಹಾಗಾಗಿ, ಪ್ರಧಾನಿ ಜೀ, ಎಲ್ಲವೂ ನಡೆಯುತ್ತಿದೆ, ತರಬೇತಿ ಒಳ್ಳೆಯದು, ಆದರೆ ಪರಿಸರ ಬದಲಾಗುತ್ತದೆ, ಆದ್ದರಿಂದ ಅದಕ್ಕೆ ಒಗ್ಗಿಕೊಳ್ಳಲು 1 ಅಥವಾ 2 ದಿನಗಳು ಬೇಕಾಗುತ್ತದೆ, ಆದರೆ ನಂತರ ಅದು ಸರಿಯಾಗುತ್ತದೆ, ನಂತರ ಅದು ಸಾಮಾನ್ಯವಾಗುತ್ತದೆ.

ಪ್ರಧಾನಮಂತ್ರಿ: ಶುಭ್, ಭಾರತದ ಶಕ್ತಿಯು ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಎರಡರಲ್ಲೂ ಇದೆ. ನೀವು ಬಾಹ್ಯಾಕಾಶ ಪ್ರಯಾಣದಲ್ಲಿದ್ದೀರಿ, ಆದರೆ ಭಾರತದ ಪ್ರಯಾಣವೂ ನಡೆಯುತ್ತಿರಬೇಕು. ಭಾರತವು ನಿಮ್ಮೊಳಗೆ ಓಡುತ್ತಿರಬೇಕು. ಆ ಪರಿಸರದಲ್ಲಿ ಧ್ಯಾನ ಮತ್ತು ಸಾವಧಾನತೆಯ ಪ್ರಯೋಜನವನ್ನು ನೀವು ಪಡೆಯುತ್ತೀರಾ?

ಶುಭಾಂಶು ಶುಕ್ಲಾ: ಹೌದು, ಪ್ರಧಾನಿ ಜಿ, ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಭಾರತ ಈಗಾಗಲೇ ವೇಗವಾಗಿ ಓಡುತ್ತಿದೆ, ಈ ಮಿಷನ್ ಆ ದೊಡ್ಡ ಓಟದ ಮೊದಲ ಹೆಜ್ಜೆಯಾಗಿದೆ ಎಂದು ನಾನು ನಂಬುತ್ತೇನೆ. ನಾವು ಖಂಡಿತವಾಗಿಯೂ ಮುಂದುವರಿಯುತ್ತಿದ್ದೇವೆ, ನಾವು ಬಾಹ್ಯಾಕಾಶದಲ್ಲಿ ನಮ್ಮದೇ ಆದ ನಿಲ್ದಾಣಗಳನ್ನು ಹೊಂದುತ್ತೇವೆ, ಅನೇಕ ಜನರು ಅಲ್ಲಿಗೆ ತಲುಪುತ್ತಾರೆ ಮತ್ತು ಸಾವಧಾನ ಮನಸ್ಥಿತಿಯು ಕೂಡ ಬಹಳಷ್ಟು ವ್ಯತ್ಯಾಸವನ್ನುಂಟು ಮಾಡುತ್ತದೆ. ಸಾಮಾನ್ಯ ತರಬೇತಿ ಸಮಯದಲ್ಲಿ ಅಥವಾ ಉಡಾವಣೆ ಸಮಯದಲ್ಲಿಯೂ ಸಹ ಅನೇಕ ಸಂದರ್ಭಗಳಿವೆ, ಅವು ತುಂಬಾ ಒತ್ತಡವ ಉಂಟುಮಾಡುತ್ತವೆ. ನಿಮ್ಮ ಸಾವಧಾನ ಮನಸ್ಥಿತಿಯೊಂದಿಗೆ ನೀವು ಆ ಸಂದರ್ಭಗಳಲ್ಲಿ ನಿಮ್ಮನ್ನು ಶಾಂತವಾಗಿರಿಸಿಕೊಳ್ಳಲು ಸಾಧ್ಯವಾಗುತ್ತದೆ, ನೀವು ನಿಮ್ಮನ್ನು ಶಾಂತವಾಗಿರಿಸಿಕೊಂಡರೆ, ನೀವು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಓಡುವಾಗ ಯಾರೂ ತಿನ್ನಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ, ಆದ್ದರಿಂದ ನೀವು ಶಾಂತವಾಗಿರುತ್ತೀರಿ, ನೀವು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ, ಈ ವಿಷಯಗಳಲ್ಲಿ ಸಾವಧಾನತೆ(ಮೈಂಡ್‌ಫುಲ್‌ನೆಸ್) ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ ಎಂದು ನಾನು ಭಾವಿಸುತ್ತೇನೆ, ಆದ್ದರಿಂದ ಎರಡೂ ವಿಷಯಗಳನ್ನು ಒಟ್ಟಿಗೆ ಅಭ್ಯಾಸ ಮಾಡಿದರೆ, ಅಂತಹ ಸವಾಲಿನ ವಾತಾವರಣದಲ್ಲಿ, ಅದು ತುಂಬಾ ಉಪಯುಕ್ತವಾಗಿರುತ್ತದೆ, ಜನರು ಬೇಗನೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ.

ಪ್ರಧಾನಮಂತ್ರಿ: ನೀವು ಬಾಹ್ಯಾಕಾಶದಲ್ಲಿ ಅನೇಕ ಪ್ರಯೋಗಗಳನ್ನು ಮಾಡುತ್ತಿದ್ದೀರಿ. ಭವಿಷ್ಯದಲ್ಲಿ ಕೃಷಿ ಅಥವಾ ಆರೋಗ್ಯ ಕ್ಷೇತ್ರಕ್ಕೆ ಪ್ರಯೋಜನಕಾರಿಯಾದ ಯಾವುದೇ ಪ್ರಯೋಗವಿದೆಯೇ?

ಶುಭಾಂಶು ಶುಕ್ಲಾ: ಹೌದು ಪ್ರಧಾನಿ ಜಿ, ಭಾರತೀಯ ವಿಜ್ಞಾನಿಗಳು ಮೊದಲ ಬಾರಿಗೆ 7 ವಿಶಿಷ್ಟ ಪ್ರಯೋಗಗಳನ್ನು ವಿನ್ಯಾಸಗೊಳಿಸಿದ್ದಾರೆ ಎಂದು ನಾನು ತುಂಬಾ ಹೆಮ್ಮೆಯಿಂದ ಹೇಳಬಲ್ಲೆ, ಅದನ್ನು ನಾನು ನನ್ನೊಂದಿಗೆ ನಿಲ್ದಾಣಕ್ಕೆ ತಂದಿದ್ದೇನೆ. ನಾನು ಮಾಡಲಿರುವ ಮೊದಲ ಪ್ರಯೋಗವು ಇಂದು ನಿಗದಿಯಾಗಿದೆ, ಇದು ಕಾಂಡಕೋಶಗಳ ಮೇಲೆ. ಆದ್ದರಿಂದ, ಬಾಹ್ಯಾಕಾಶಕ್ಕೆ ಹೋದಾಗ ಏನಾಗುತ್ತದೆ ಎಂದರೆ ಗುರುತ್ವಾಕರ್ಷಣೆ ಇಲ್ಲದ ಕಾರಣ, ಹೊರೆ ತಪ್ಪುತ್ತದೆ, ಅದರಿಂದ ಸ್ನಾಯು ನಷ್ಟ ಸಂಭವಿಸುತ್ತದೆ. ಆದ್ದರಿಂದ, ನನ್ನ ಪ್ರಯೋಗವು ಕೆಲವು ಪೂರಕಗಳನ್ನು ನೀಡುವ ಮೂಲಕ ನಾವು ಈ ಸ್ನಾಯು ನಷ್ಟವನ್ನು ನಿಲ್ಲಿಸಬಹುದೇ ಅಥವಾ ವಿಳಂಬಗೊಳಿಸಬಹುದೇ ಎಂದು ನೋಡುತ್ತಿದೆ. ವೃದ್ಧಾಪ್ಯದ ಕಾರಣದಿಂದಾಗಿ ಸ್ನಾಯು ನಷ್ಟದಿಂದ ಬಳಲುತ್ತಿರುವ ಜನರ ಮೇಲೆ ಈ ಪೂರಕಗಳನ್ನು ಬಳಸಬಹುದು ಎಂಬುದು ಭೂಮಿಯ ಮೇಲೂ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ, ಅದನ್ನು ಖಂಡಿತವಾಗಿಯೂ ಅಲ್ಲಿ ಬಳಸಬಹುದು ಎಂದು ನಾನು ಭಾವಿಸುತ್ತೇನೆ. ಇದರೊಂದಿಗೆ, ಇನ್ನೊಂದು ಪ್ರಯೋಗವು ಸೂಕ್ಷ್ಮ ಪಾಚಿಗಳ ಬೆಳವಣಿಗೆಯ ಮೇಲೆ. ಈ ಸೂಕ್ಷ್ಮ ಪಾಚಿಗಳು ಬಹಳ ಚಿಕ್ಕದಾಗಿದೆ, ಆದರೆ ಬಹಳ ಪೌಷ್ಟಿಕವಾಗಿದೆ. ಆದ್ದರಿಂದ ನಾವು ಇಲ್ಲಿ ಅವುಗಳ ಬೆಳವಣಿಗೆಯನ್ನು ನೋಡಬಹುದು ಮತ್ತು ಅವುಗಳನ್ನು ದೊಡ್ಡ ಸಂಖ್ಯೆಯಲ್ಲಿ ಬೆಳೆಸಲು ಮತ್ತು ಪೋಷಣೆ ಒದಗಿಸಲು ಒಂದು ಪ್ರಕ್ರಿಯೆಯನ್ನು ಆವಿಷ್ಕರಿಸಿದರೆ, ಎಲ್ಲೋ ಅದು ಭೂಮಿಯ ಮೇಲಿನ ಆಹಾರ ಭದ್ರತೆಗೆ ತುಂಬಾ ಉಪಯುಕ್ತವಾಗಿರುತ್ತದೆ. ಬಾಹ್ಯಾಕಾಶದ ದೊಡ್ಡ ಪ್ರಯೋಜನವೆಂದರೆ, ಇಲ್ಲಿ ಪ್ರಕ್ರಿಯೆಯು ಬಹಳ ಬೇಗನೆ ಸಂಭವಿಸುತ್ತದೆ. ಆದ್ದರಿಂದ, ನಾವು ತಿಂಗಳುಗಳು ಅಥವಾ ವರ್ಷಗಳವರೆಗೆ ಕಾಯುವ ಅಗತ್ಯವಿಲ್ಲ, ಆದ್ದರಿಂದ ನಾವು ಇಲ್ಲಿ ಪಡೆಯುವ ಫಲಿತಾಂಶಗಳನ್ನು ನಾವು ಬಳಸಿಕೊಳ್ಳಬಹುದು.

ಪ್ರಧಾನಮಂತ್ರಿ: ಶುಭಾಂಶು, ಚಂದ್ರಯಾನದ ಯಶಸ್ಸಿನ ನಂತರ, ದೇಶದ ಮಕ್ಕಳು ಮತ್ತು ಯುವಕರಲ್ಲಿ ವಿಜ್ಞಾನದಲ್ಲಿ ಹೊಸ ಆಸಕ್ತಿ ಹುಟ್ಟಿಕೊಂಡಿತು, ಬಾಹ್ಯಾಕಾಶವನ್ನು ಅನ್ವೇಷಿಸುವ ಉತ್ಸಾಹ ಹೆಚ್ಚಾಯಿತು. ಈಗ ನಿಮ್ಮ ಈ ಐತಿಹಾಸಿಕ ಪ್ರಯಾಣವು ಆ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತಿದೆ. ಇಂದು ಮಕ್ಕಳು ಕೇವಲ ಆಕಾಶವನ್ನು ನೋಡುವುದಿಲ್ಲ, ನಾನು ಕೂಡ ಅಲ್ಲಿಗೆ ತಲುಪಬಹುದು ಎಂದು ಅವರು ಭಾವಿಸುತ್ತಾರೆ,. ಈ ಚಿಂತನೆ, ಈ ಭಾವನೆ ನಮ್ಮ ಭವಿಷ್ಯದ ಬಾಹ್ಯಾಕಾಶ ಯಾತ್ರೆಗಳ ನಿಜವಾದ ಅಡಿಪಾಯವಾಗಿದೆ. ಭಾರತದ ಯುವ ಪೀಳಿಗೆಗೆ ನೀವು ಯಾವ ಸಂದೇಶ ನೀಡುತ್ತೀರಿ?

 

ಶುಭಾಂಶು ಶುಕ್ಲಾ: ಪ್ರಧಾನ ಮಂತ್ರಿಗಳೇ, ಇಂದಿನ ನಮ್ಮ ಯುವ ಪೀಳಿಗೆಗೆ ನಾನು ಒಂದು ಸಂದೇಶ ನೀಡಲು ಬಯಸುವುದಾದರೆ, ಮೊದಲನೆಯದಾಗಿ ನಾನು ನಿಮಗೆ ಹೇಳುವುದೇನೆಂದರೆ, ಭಾರತ ಸಾಗುತ್ತಿರುವ ದಿಕ್ಕಿನಲ್ಲಿ, ನಾವು ತುಂಬಾ ದಿಟ್ಟ ಮತ್ತು ಉನ್ನತ ಕನಸುಗಳನ್ನು ಕಂಡಿದ್ದೇವೆ. ಆ ಕನಸುಗಳನ್ನು ನನಸಾಗಿಸಲು, ನಮಗೆ ನಿಮ್ಮೆಲ್ಲರ ಅಗತ್ಯವಿದೆ, ಆದ್ದರಿಂದ ಆ ಅಗತ್ಯವನ್ನು ಪೂರೈಸಲು, ಯಶಸ್ಸಿಗೆ ಒಂದು ಮಾರ್ಗವಿಲ್ಲ ಎಂದು ನಾನು ಹೇಳುತ್ತೇನೆ, ಕೆಲವೊಮ್ಮೆ ನೀವು ಒಂದು ಮಾರ್ಗವನ್ನು ತೋರುತ್ತೀರಿ, ಕೆಲವೊಮ್ಮೆ ಯಾರಾದರೂ ಇನ್ನೊಂದು ಮಾರ್ಗವನ್ನು ತೋರುತ್ತಾರೆ, ಆದರೆ ಪ್ರತಿಯೊಂದು ಮಾರ್ಗದಲ್ಲೂ ಸಾಮಾನ್ಯವಾದ ಒಂದು ವಿಷಯವೆಂದರೆ, ನೀವು ಎಂದಿಗೂ ಪ್ರಯತ್ನಿಸುವುದನ್ನು ಬಿಡಬಾರದು, ಪ್ರಯತ್ನಿಸುವುದನ್ನು ಎಂದಿಗೂ ನಿಲ್ಲಿಸಬೇಡಿ. ನೀವು ಯಾವುದೇ ಹಾದಿಯಲ್ಲಿದ್ದರೂ, ನೀವು ಎಲ್ಲಿದ್ದರೂ, ಆದರೆ ನೀವು ಎಂದಿಗೂ ಬಿಟ್ಟುಕೊಡಬಾರದು, ಆಗ ಯಶಸ್ಸು ಇಂದು ಅಥವಾ ನಾಳೆ ಬರಬಹುದು, ಆದರೆ ಅದು ಖಂಡಿತವಾಗಿಯೂ ಬರುತ್ತದೆ.

ಪ್ರಧಾನಮಂತ್ರಿ: ದೇಶದ ಯುವಕರು ನಿಮ್ಮ ಈ ಮಾತುಗಳನ್ನು ಇಷ್ಟಪಡುತ್ತಾರೆ ಎಂಬುದು ನನಗೆ ಖಚಿತವಾಗಿದೆ, ನೀವು ನನ್ನನ್ನು ಚೆನ್ನಾಗಿ ತಿಳಿದಿದ್ದೀರಿ. ನಾನು ಯಾರೊಂದಿಗಾದರೂ ಮಾತನಾಡಿದಾಗಲೆಲ್ಲಾ, ನಾನು ಯಾವಾಗಲೂ ಅವರಿಗೆ ಮನೆಕೆಲಸ ನೀಡುತ್ತೇನೆ. ನಾವು ಮಿಷನ್ ಗಗನಯಾನವನ್ನು ಮುಂದಕ್ಕೆ ಕೊಂಡೊಯ್ಯಬೇಕು, ನಾವು ನಮ್ಮದೇ ಆದ ಬಾಹ್ಯಾಕಾಶ ಕೇಂದ್ರವನ್ನು ನಿರ್ಮಿಸಬೇಕು ಮತ್ತು ಭಾರತೀಯ ಗಗನಯಾತ್ರಿಗಳನ್ನು ಚಂದ್ರನ ಮೇಲೆ ಇಳಿಸಬೇಕು. ಈ ಎಲ್ಲಾ ಕಾರ್ಯಾಚರಣೆಗಳಲ್ಲಿ ನಿಮ್ಮ ಅನುಭವಗಳು ತುಂಬಾ ಉಪಯುಕ್ತವಾಗುತ್ತವೆ. ನೀವು ಅಲ್ಲಿ ನಿಮ್ಮ ಅನುಭವಗಳನ್ನು ದಾಖಲಿಸುತ್ತಿದ್ದೀರಿ ಎಂಬುದು ನನಗೆ ಖಚಿತವಾಗಿದೆ.

ಶುಭಾಂಶು ಶುಕ್ಲಾ: ಹೌದು ಪ್ರಧಾನಿ ಜಿ, ತರಬೇತಿ ಪಡೆಯುವಾಗ ಮತ್ತು ಈ ಸಂಪೂರ್ಣ ಕಾರ್ಯಾಚರಣೆಯನ್ನು ಅನುಭವಿಸುವಾಗ, ನಾನು ಕಲಿತ ಪಾಠಗಳು, ನಾನು ಪಡೆದ ಕಲಿಕೆಗಳನ್ನು, ನಾನು ಅವೆಲ್ಲವನ್ನೂ ಸ್ಪಂಜಿನಂತೆ ಹೀರಿಕೊಳ್ಳುತ್ತಿದ್ದೇನೆ. ನಾನು ಹಿಂತಿರುಗಿದಾಗ ಈ ಎಲ್ಲಾ ವಿಷಯಗಳು ನಮಗೆ ಬಹಳ ಮೌಲ್ಯಯುತವಾಗಿವೆ, ಬಹಳ ಮುಖ್ಯವೆಂದು ಸಾಬೀತುಪಡಿಸುತ್ತದೆ. ನಾವು ಈ ಪಾಠಗಳನ್ನು ನಮ್ಮ ಕಾರ್ಯಾಚರಣೆಗಳಲ್ಲಿ ಪರಿಣಾಮಕಾರಿಯಾಗಿ ಅನ್ವಯಿಸಲು ಮತ್ತು ಸಾಧ್ಯವಾದಷ್ಟು ಬೇಗ ಅವುಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ನನಗೆ ಖಚಿತವಾಗಿದೆ. ಏಕೆಂದರೆ ನನ್ನೊಂದಿಗೆ ಬಂದಿದ್ದ ನನ್ನ ಸ್ನೇಹಿತರು ಎಲ್ಲೋ, ನಾವು ಗಗನಯಾನಕ್ಕೆ ಯಾವಾಗ ಹೋಗಬಹುದು ಎಂದು ಕೇಳಿದರು, ಅದನ್ನು ಕೇಳಲು ನನಗೆ ತುಂಬಾ ಸಂತೋಷವಾಯಿತು, ನಾನು ಶೀಘ್ರವೇ ಹೇಳಿದೆ. ಆದ್ದರಿಂದ, ಈ ಕನಸು ಮತ್ತು ನಾನು ಇಲ್ಲಿ ಕಲಿಯುತ್ತಿರುವ ಪಾಠಗಳು ಶೀಘ್ರದಲ್ಲೇ ನನಸಾಗುತ್ತವೆ ಎಂದು ನಾನು ಭಾವಿಸುತ್ತೇನೆ. ಹಿಂತಿರುಗಿದ ನಂತರ, ನಾನು ಅವುಗಳನ್ನು ನನ್ನ ಕಾರ್ಯಾಚರಣೆಯಲ್ಲಿ 100% ಅನ್ವಯಿಸಲು ಮತ್ತು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆ.

ಪ್ರಧಾನಮಂತ್ರಿ: ಶುಭಾಂಶು, ನಿಮ್ಮ ಈ ಸಂದೇಶವು ಸ್ಫೂರ್ತಿ ನೀಡುತ್ತದೆ ಎಂಬುದು ನನಗೆ ಖಚಿತವಾಗಿದೆ. ನೀವು ಹೊರಡುವ ಮೊದಲು ನಾವು ಭೇಟಿಯಾದಾಗ, ನಿಮ್ಮ ಕುಟುಂಬ ಸದಸ್ಯರನ್ನು ಭೇಟಿಯಾಗುವ ಅವಕಾಶ ನನಗೂ ಸಿಕ್ಕಿತು, ನಿಮ್ಮ ಕುಟುಂಬದ ಎಲ್ಲಾ ಸದಸ್ಯರು ಸಮಾನವಾಗಿ ಭಾವನಾತ್ಮಕರು ಮತ್ತು ಉತ್ಸಾಹದಿಂದ ತುಂಬಿರುವುದನ್ನು ನಾನು ನೋಡಿದೆ. ಶುಭಾಂಶು, ಇಂದು ನಾನು ನಿಮ್ಮೊಂದಿಗೆ ಮಾತನಾಡುವುದನ್ನು ನಿಜವಾಗಿಯೂ ಆನಂದಿಸಿದೆ. ನಿಮಗೆ ಬಹಳಷ್ಟು ಕೆಲಸವಿದೆ, ನೀವು 28,000 ಕಿಲೋಮೀಟರ್ ವೇಗದಲ್ಲಿ ಕೆಲಸ ಮಾಡಬೇಕು ಎಂಬುದು ನನಗೆ ತಿಳಿದಿದೆ, ಆದ್ದರಿಂದ ನಾನು ನಿಮ್ಮ ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ. ಇದು ಭಾರತದ ಗಗನಯಾನ ಮಿಷನ್‌ನ ಯಶಸ್ಸಿನ ಮೊದಲ ಅಧ್ಯಾಯ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ನಿಮ್ಮ ಈ ಐತಿಹಾಸಿಕ ಪ್ರಯಾಣವು ಕೇವಲ ಬಾಹ್ಯಾಕಾಶಕ್ಕೆ ಸೀಮಿತವಾಗಿಲ್ಲ, ಇದು ಅಭಿವೃದ್ಧಿ ಹೊಂದಿದ ಭಾರತದತ್ತ ನಮ್ಮ ಪ್ರಯಾಣಕ್ಕೆ ವೇಗ ಮತ್ತು ಹೊಸ ಶಕ್ತಿಯನ್ನು ನೀಡುತ್ತದೆ. ಭಾರತವು ಜಗತ್ತಿಗೆ ಬಾಹ್ಯಾಕಾಶದ ಹೊಸ ಸಾಧ್ಯತೆಗಳ ಬಾಗಿಲುಗಳನ್ನು ತೆರೆಯಲಿದೆ. ಈಗ ಭಾರತವು ಕೇವಲ ಹಾರಾಟ ನಡೆಸುವುದಲ್ಲ, ಭವಿಷ್ಯದಲ್ಲಿ ಹೊಸ ವಿಮಾನಗಳಿಗೆ ವೇದಿಕೆಯನ್ನು ಸಿದ್ಧಪಡಿಸುತ್ತದೆ. ನಾನು ನಿಮ್ಮ ಮನಸ್ಸಿನಲ್ಲಿ ಇನ್ನೂ ಹೆಚ್ಚಿನದನ್ನು ಕೇಳಲು ಬಯಸುತ್ತೇನೆ ಏಕೆಂದರೆ ನಾನು ಪ್ರಶ್ನೆಯನ್ನು ಕೇಳಲು ಬಯಸುವುದಿಲ್ಲ. ನಿಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ನೀವು ವ್ಯಕ್ತಪಡಿಸಿದರೆ, ದೇಶವಾಸಿಗಳು ಕೇಳುತ್ತಾರೆ, ದೇಶದ ಯುವ ಪೀಳಿಗೆ ಕೇಳುತ್ತದೆ, ಆಗ ನಾನು ನಿಮ್ಮಿಂದ ಇನ್ನೂ ಕೆಲವು ವಿಷಯಗಳನ್ನು ಕೇಳಲು ತುಂಬಾ ಉತ್ಸುಕನಾಗಿದ್ದೇನೆ.

ಶುಭಾಂಶು ಶುಕ್ಲಾ: ಧನ್ಯವಾದಗಳು ಪ್ರಧಾನ ಮಂತ್ರಿ ಜೀ! ಬಾಹ್ಯಾಕಾಶಕ್ಕೆ ಬಂದು ಇಲ್ಲಿ ತರಬೇತಿ ಪಡೆದು ಇಲ್ಲಿಗೆ ತಲುಪುವ ಈ ಸಂಪೂರ್ಣ ಪ್ರಯಾಣದಲ್ಲಿ, ನಾನು ಇದರಲ್ಲಿ ಬಹಳಷ್ಟು ಕಲಿತಿದ್ದೇನೆ, ಪ್ರಧಾನ ಮಂತ್ರಿ ಜೀ. ಆದರೆ ಇಲ್ಲಿಗೆ ತಲುಪಿದ ನಂತರ, ಇದು ನನಗೆ ವೈಯಕ್ತಿಕ ಸಾಧನೆಯಾಗಿದೆ, ಆದರೆ ಎಲ್ಲೋ ಇದು ನಮ್ಮ ದೇಶಕ್ಕೆ ಬಹಳ ದೊಡ್ಡ ಸಾಮೂಹಿಕ ಸಾಧನೆ ಎಂದು ನನಗೆ ಅನಿಸುತ್ತದೆ. ಇದನ್ನು ವೀಕ್ಷಿಸುತ್ತಿರುವ ಪ್ರತಿಯೊಬ್ಬ ಮಗುವಿಗೂ, ಇದನ್ನು ವೀಕ್ಷಿಸುತ್ತಿರುವ ಪ್ರತಿಯೊಬ್ಬ ಯುವಕರಿಗೂ ನಾನು ಒಂದು ಸಂದೇಶ ನೀಡಲು ಬಯಸುತ್ತೇನೆ. ಅದು ಏನೆಂದರೆ, ನೀವು ನಿಮ್ಮ ಭವಿಷ್ಯವನ್ನು ಉತ್ತಮಗೊಳಿಸಲು ಪ್ರಯತ್ನಿಸಿದರೆ, ನಿಮ್ಮ ಭವಿಷ್ಯವು ಉತ್ತಮವಾಗಿರುತ್ತದೆ, ನಮ್ಮ ದೇಶದ ಭವಿಷ್ಯವು ಉತ್ತಮವಾಗಿರುತ್ತದೆ. ನಿಮ್ಮ ಮನಸ್ಸಿನಲ್ಲಿ ಒಂದೇ ಒಂದು ವಿಷಯವನ್ನು ಇಟ್ಟುಕೊಳ್ಳಿ, ಆಕಾಶವು ಎಂದಿಗೂ ಮಿತಿಯಿಲ್ಲ, ನಿಮಗಾಗಲಿ, ನನಗಾಗಲಿ, ಭಾರತಕ್ಕಾಗಲಿ ಮತ್ತು ನೀವು ಯಾವಾಗಲೂ ಈ ವಿಷಯವನ್ನು ನಿಮ್ಮ ಮನಸ್ಸಿನಲ್ಲಿಟ್ಟುಕೊಂಡರೆ, ನೀವು ಮುಂದುವರಿಯುತ್ತೀರಿ, ನೀವು ನಿಮ್ಮ ಭವಿಷ್ಯವನ್ನು ಬೆಳಗಿಸುತ್ತೀರಿ, ನೀವು ನಮ್ಮ ದೇಶದ ಭವಿಷ್ಯವನ್ನು ಬೆಳಗಿಸುತ್ತೀರಿ. ಇದೇ ನನ್ನ ಸಂದೇಶ, ಪ್ರಧಾನ ಮಂತ್ರಿಗಳೇ. ನಾನು ತುಂಬಾ, ತುಂಬಾ ಭಾವನಾತ್ಮಕವಾಗಿದ್ದೇನೆ ಇಂದು ನಿಮ್ಮೊಂದಿಗೆ ಮಾತನಾಡಲು, ನಿಮ್ಮ ಮೂಲಕ 140 ಕೋಟಿ ದೇಶವಾಸಿಗಳೊಂದಿಗೆ ಮಾತನಾಡಲು ಅವಕಾಶ ಸಿಕ್ಕಿದ್ದಕ್ಕಾಗಿ ತುಂಬಾ ಸಂತೋಷವಾಗಿದೆ. ನೀವು ನನ್ನ ಹಿಂದಿರುವ ಈ ತ್ರಿವರ್ಣ ಧ್ವಜವನ್ನು ನೀವು ನೋಡಬಲ್ಲಿರಿ, ಅದು ಇಲ್ಲಿ ಇರಲಿಲ್ಲ, ನಿನ್ನೆ ಮೊದಲು ನಾನು ಇಲ್ಲಿಗೆ ಬಂದಾಗ, ನಾವು ಅದನ್ನು ಮೊದಲ ಬಾರಿಗೆ ಇಲ್ಲಿ ಹಾರಿಸಿದ್ದೇವೆ. ಆದ್ದರಿಂದ, ಇದು ನನ್ನನ್ನು ತುಂಬಾ ಭಾವುಕನನ್ನಾಗಿ ಮಾಡುತ್ತದೆ, ಭಾರತ ಇಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ.

ಪ್ರಧಾನಮಂತ್ರಿ: ಶುಭಾಂಶು, ನಿಮ್ಮ ಕಾರ್ಯಾಚರಣೆಯ ಯಶಸ್ಸಿಗೆ ನಾನು ನಿಮಗೆ ಮತ್ತು ನಿಮ್ಮ ಎಲ್ಲಾ ಸಹೋದ್ಯೋಗಿಗಳಿಗೆ ಶುಭ ಹಾರೈಸುತ್ತೇನೆ. ಶುಭಾಂಶು, ನಾವೆಲ್ಲರೂ ನಿಮ್ಮ ಮರಳುವಿಕೆಗಾಗಿ ಕಾಯುತ್ತಿದ್ದೇವೆ. ನಿಮ್ಮ ಬಗ್ಗೆ ಕಾಳಜಿ ವಹಿಸಿ, ಭಾರತ ಮಾತೆಯ ಗೌರವವನ್ನು ಹೆಚ್ಚಿಸುತ್ತಲೇ ಇರಿ. 140 ಕೋಟಿ ದೇಶವಾಸಿಗಳ ಅನೇಕ ಶುಭಾಶಯಗಳು. ನೀವು ತುಂಬಾ ಶ್ರಮಿಸಿ ಈ ಎತ್ತರವನ್ನು ತಲುಪಿದ್ದಕ್ಕಾಗಿ ನಾನು ನಿಮಗೆ ತುಂಬಾ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಭಾರತ್ ಮಾತಾ ಕಿ ಜೈ!

ಶುಭಾಂಶು ಶುಕ್ಲಾ: ಧನ್ಯವಾದಗಳು ಪ್ರಧಾನಮಂತ್ರಿಗಳೇ, ಧನ್ಯವಾದಗಳು ಮತ್ತು ಎಲ್ಲಾ 140 ಕೋಟಿ ದೇಶವಾಸಿಗಳಿಗೆ ಧನ್ಯವಾದಗಳು. ಬಾಹ್ಯಾಕಾಶದಿಂದ ಎಲ್ಲರಿಗೂ ಭಾರತ್ ಮಾತಾ ಕಿ ಜೈ!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India Exports 3.15 lakh Tonnes Sugar in Oct-Feb of 2025-26 Marketing Year: AISTA

Media Coverage

India Exports 3.15 lakh Tonnes Sugar in Oct-Feb of 2025-26 Marketing Year: AISTA
NM on the go

Nm on the go

Always be the first to hear from the PM. Get the App Now!
...
Prime Minister Speaks with UAE President
March 17, 2026
PM Conveys Eid Greetings and Discusses current Situation in West Asia

The Prime Minister spoke with HH Sheikh Mohamed bin Zayed Al Nahyan, President of the UAE, and conveyed advance Eid greetings. PM Modi and the President discussed the current situation in West Asia. The Prime Minister reiterated India’s strong condemnation of all attacks on the UAE that have resulted in loss of innocent lives and damage to civilian infrastructure.

The Prime Minister and the UAE President agreed on the importance of ensuring safe and free navigation through the Strait of Hormuz. Shri Modi emphasized that both nations will continue to work together for the early restoration of peace, security, and stability in the region.

The Prime Minister wrote on X;

"Spoke with my brother HH Sheikh Mohamed bin Zayed Al Nahyan, President of the UAE and conveyed advance Eid greetings.

We discussed the current situation in West Asia. Reiterated India’s strong condemnation of all attacks on the UAE that have resulted in loss of innocent lives and damage to civilian infrastructure.

We agreed on the importance of ensuring safe and free navigation through the Strait of Hormuz.

We will continue to work together for the early restoration of peace, security and stability in the region."