Innovation, integrity and inclusion have emerged as key mantras in the field of management: PM
Focus is now on collaborative, innovative and transformative management, says PM
Technology management is as important as human management: PM Modi

ಜೈ ಜಗನ್ನಾಥ !

ಜೈ ಮಾ ಸಮಲೇಶ್ವರಿ !

ಒಡಿಶಾದ ನನ್ನೆಲ್ಲಾ ಸಹೋದರ ಸಹೋದರಿಯರಿಗೆ ಶುಭಾಶಯಗಳು

ಹೊಸ ವರ್ಷ ಎಲ್ಲರಿಗೂ ಮಂಗಳವನ್ನು ಉಂಟುಮಾಡಲಿ

ಒಡಿಶಾದ ರಾಜ್ಯಪಾಲರಾದ ಗೌರವಾನ್ವಿತ ಪ್ರೊಫೆಸರ್ ಗಣೇಶಿ ಲಾಲ್ ಜಿ, ಮುಖ್ಯಮಂತ್ರಿ ಮತ್ತು ನನ್ನ ಸ್ನೇಹಿತರಾದ ಶ್ರೀ ನವೀನ್ ಪಟ್ನಾಯಕ್ ಜಿ, ನನ್ನ ಸಂಪುಟ ಸಹೋದ್ಯೋಗಿಗಳಾದ ಡಾ. ರಮೇಶ್ ಪೋಖ್ರಿಯಾಲ್ ನಿಶಾಂಕ್ ಜಿ, ಒಡಿಶಾ ನೆಲದ ರತ್ನ ಧರ್ಮೇಂದ್ರ ಪ್ರಧಾನ್ ಜಿ ಮತ್ತು ಶ್ರೀ ಪ್ರತಾಪ್ ಚಂದ್ರ ಸಾರಂಗಿ ಜಿ, ಒಡಿಶಾ ಸರ್ಕಾರದ ಸಚಿವರೇ, ಸಂಸದರೇ ಮತ್ತು ಶಾಸಕರೇ ಐಐಎಂ ಸಂಬಲ್ಪುರದ ಮುಖ್ಯಸ್ಥರಾದ ಶ್ರೀಮತಿ ಅರುಂಧತಿ ಭಟ್ಟಾಚಾರ್ಯ, ನಿರ್ದೇಶಕರಾದ ಪ್ರೊಫೆಸರ್ ಮಹದೇವ್ ಜೈ ಸ್ವಾಲ್ ಜಿ, ಬೋಧಕ ಸಿಬ್ಬಂದಿ ಮತ್ತು ನನ್ನ ಎಲ್ಲಾ ಯುವ ಸನ್ಮಿತ್ರರೇ.

ಇಂದು ಐಐಎಂನ ಕಾಯಂ ಕ್ಯಾಂಪಸ್ ನ ಶಂಕುಸ್ಥಾಪನಾ ಸಮಾರಂಭದ ಮೂಲಕ ಒಡಿಶಾದ ಯುವಕರ ಸಾಮರ್ಥ್ಯಕ್ಕೆ ಹೊಸ ಚೈತನ್ಯ ತುಂಬುತ್ತಿದ್ದೇವೆ. ಐಐಎಂ ಸಂಬಲ್ಪುರ ಕಾಯಂ ಕ್ಯಾಂಪಸ್ ನಿಂದಾಗಿ ವಿಶ್ವದ ನಿರ್ವಹಣಾ ವಿಭಾಗದಲ್ಲಿ ಒಡಿಶಾಗೆ ಹೊಸ ಹೆಗ್ಗುರುತು ಮೂಡಲಿದೆ ಮತ್ತು ಒಡಿಶಾದ ಶ್ರೀಮಂತ ಸಂಸ್ಕೃತಿ ಮತ್ತು ಸಂಪನ್ಮೂಲ ಜಗತ್ತಿಗೆ ಪರಿಚಯವಾಗಲಿದೆ. ಹೊಸ ವರ್ಷಾರಂಭದ ವೇಳೆ ಈ ಕಾರ್ಯಕ್ಕೆ ಚಾಲನೆ ನೀಡುತ್ತಿರುವುದು ನಮ್ಮೆಲ್ಲರ ಸಂತೋಷವನ್ನು ದುಪ್ಪಟ್ಟುಗೊಳಿಸಿದೆ.

ಮಿತ್ರರೇ,

ಕಳೆದ ಕೆಲವು ದಶಕಗಳಲ್ಲಿ ದೇಶ ಹೊಸ ಆಯಾಮವನ್ನು ಕಂಡಿದ್ದು, ಈ ನೆಲದತ್ತ ಹೆಚ್ಚಿನ ಬಹುರಾಷ್ಟ್ರೀಯ ಕಂಪನಿಗಳು ಬಂದು, ಬೆಳವಣಿಗೆ ಹೊಂದುತ್ತಿವೆ. ಈ ದಶಕ ಮತ್ತು ಈ ಶತಮಾನ ಭಾರತದಲ್ಲಿ ಹೊಸ ಬಹುರಾಷ್ಟ್ರೀಯ ಕಂಪನಿಗಳ ಸೃಷ್ಟಿಗೆ ಸಂಬಂಧಿಸಿದ್ದಾಗಿದೆ. ಭಾರತ ತನ್ನ ನಿಜವಾದ ಸಾಮರ್ಥ್ಯವನ್ನು ಇಡೀ ವಿಶ್ವಕ್ಕೆ ತೋರಿಸಲು ಇದು ಅತ್ಯಂತ ಸೂಕ್ತ ಸಮಯವಾಗಿದೆ. ಇಂದಿನ ನವೋದ್ಯಮಗಳು ನಾಳೆಯ ಬಹುರಾಷ್ಟ್ರೀಯ ಕಂಪನಿಗಳಾಗಲಿವೆ ಮತ್ತು ಯಾವ ನಗರಗಳಲ್ಲಿ ಬಹುತೇಕ ನವೋದ್ಯಮಗಳು ಆರಂಭವಾಗುತ್ತಿವೆಯೋ ಅಂತಹ ನಗರಗಳಲ್ಲಿ ಮಾತ್ರವಲ್ಲದೆ ಅಂತಹ ನವೋದ್ಯಮಗಳ ಪ್ರಭಾವ ನಾವು ಕೇವಲ ಎರಡನೇ ಹಾಗೂ ಮೂರನೇ ದರ್ಜೆಯ ನಗರಗಳಲ್ಲಿ ಮಾತ್ರ ಕಾಣುತ್ತಿದ್ದೇವೆ. ಭಾರತೀಯ ಯುವ ಜನಾಂಗ ಸ್ಥಾಪಿಸಿದ ಈ ನವೋದ್ಯಮ ಕಂಪನಿಗಳನ್ನು ಮುನ್ನಡೆಸಿಕೊಂಡು ಹೋಗಲು ಅತ್ಯುತ್ತಮ ನಿರ್ವಹಣಾಕಾರರು ಬೇಕಾಗಿದ್ದಾರೆ. ಈ ಹೊಸ ಪ್ರದೇಶಗಳ ಮೂಲಕ ಹುಟ್ಟಿಕೊಳ್ಳುತ್ತಿರುವ ನಿರ್ವಹಣಾ ತಜ್ಞರು ಮತ್ತು ಅವರ ಹೊಸ ಅನುಭವಗಳು ಭಾರತೀಯ ಕಂಪನಿಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಲಿದ್ದಾರೆ.

ಮಿತ್ರರೇ,

ನಾನು ಎಲ್ಲೋ ಒಂದು ಕಡೆ ಓದುತ್ತಿದ್ದೆ, ಅದೆಂದರೆ ಕೋವಿಡ್ ಬಿಕ್ಕಟ್ಟಿನ ನಡುವೆಯೂ ಭಾರತ ಈ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚಿನ ಯೂನಿಕಾರ್ನ್ ಗಳನ್ನು ಸೃಷ್ಟಿಸಿದೆ ಎಂದು. ಇಂದು ಕೃಷಿಯಿಂದ ಬಾಹ್ಯಾಕಾಶ ಕ್ಷೇತ್ರದವರೆಗೆ ಎಲ್ಲಾ ವಲಯಗಳಲ್ಲಿ ಕೈಗೊಂಡಿರುವ ಅನಿರೀಕ್ಷಿತ ಸುಧಾರಣೆಗಳಿಂದಾಗಿ ನವೋದ್ಯಮಗಳ ಸ್ಥಾಪನೆಗೆ ಇರುವ ಅವಕಾಶ ಕ್ರಮೇಣ ಇನ್ನಷ್ಟು ಹೆಚ್ಚಾಗುತ್ತಿದೆ. ಈ ಹೊಸ ಸಾಧ್ಯತೆಗಳಿಗೆ ನಿಮ್ಮನ್ನು ನೀವು ಸಜ್ಜುಗೊಳಿಸಬೇಕು. ಭಾರತದ ಭರವಸೆ ಮತ್ತು ನಿರೀಕ್ಷೆಗಳಿಗೆ ತಕ್ಕಂತೆ ನೀವು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಬ್ರ್ಯಾಂಡ್ ಇಂಡಿಯಾಗೆ ಹೊಸ ಜಾಗತಿಕ ಹೆಗ್ಗುರುತು ಒದಗಿಸಲು ನಾವೆಲ್ಲರೂ ವಿಶೇಷವಾಗಿ ಯುವ ಜನಾಂಗ ಒಗ್ಗೂಡಿ ಕಾರ್ಯ ನಿರ್ವಹಿಸುವ ಹೊಣೆಗಾರಿಕೆ ಇದೆ.

ಮಿತ್ರರೇ,

ಐಐಎಂ ಸಂಬಲ್ಪುರದ ಮಂತ್ರ ಎಂದರೆ नवसर्जनम् शुचिता समावेशत्वम्। ನಾವಿನ್ಯತೆ, ಸಮಗ್ರತೆ ಮತ್ತು ಒಳಗೊಳ್ಳುವಿಕೆ. ನೀವು ನಿಮ್ಮ ನಿರ್ವಹಣಾ ಕೌಶಲ್ಯವನ್ನು ಈ ಮಂತ್ರದೊಂದಿಗೆ ಇಡೀ ದೇಶಕ್ಕೆ ಪ್ರದರ್ಶಿಸಬೇಕಿದೆ. ನೀವು ಹೊಸ ನವೋದ್ಯಮಗಳನ್ನು ಉತ್ತೇಜಿಸುವುದಷ್ಟೇ ಅಲ್ಲದೆ ಎಲ್ಲರನ್ನೂ ಒಳಗೊಂಡ ಆರ್ಥಿಕತೆಗೆ ಒತ್ತು ನೀಡಬೇಕಾಗಿದೆ. ಜೊತೆಗೆ ಅಭಿವೃದ್ಧಿಯ ಸ್ಪರ್ಧೆಯಲ್ಲಿ ಯಾರೆಲ್ಲಾ ಹಿಂದುಳಿದಿದ್ದಾರೆ ಅವರನ್ನು ಒಟ್ಟಿಗೆ ಕರೆದುಕೊಂಡು ಹೋಗಬೇಕಾಗಿದೆ. ಯಾವ ಜಾಗದಲ್ಲಿ ಐಐಎಂನ ಕಾಯಂ ಕ್ಯಾಂಪಸ್ ನಿರ್ಮಿಸಲಾಗುತ್ತಿದೆಯೋ ಆ ಜಾಗದಲ್ಲಿ ಈಗಾಗಲೇ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ವಿಶ್ವವಿದ್ಯಾಲಯ ಮೂರು ಇತರ ವಿಶ್ವವಿದ್ಯಾಲಯಗಳು, ಸೈನಿಕ ಶಾಲೆ ಮತ್ತು ಸಿಆರ್ ಪಿಎಫ್ ಹಾಗೂ ಪೊಲೀಸರ ತರಬೇತಿ ಕೇಂದ್ರಗಳಿವೆ. ಯಾರು ಸಂಬಲ್ಪುರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡಿಲ್ಲವೋ ಅವರು ಹೇಗೆ ಈ ಪ್ರದೇಶ ಐಐಎಂ ನಂತಹ ಪ್ರತಿಷ್ಠಿತ ಸಂಸ್ಥೆ ಸ್ಥಾಪನೆಯ ನಂತರ ಹೇಗೆ ಶೈಕ್ಷಣಿಕ ತಾಣವಾಗಿ ರೂಪುಗೊಂಡಿದೆ ಎಂಬುದನ್ನು ಊಹಿಸಿಕೊಳ್ಳಬಹುದು. ಐಐಎಂ ಸಂಬಲ್ಪುರದ ಅತ್ಯಂತ ಪ್ರಮುಖ ಸಂಗತಿ ಎಂದರೆ ಇಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗೆ ಈ ಪ್ರದೇಶವೇ ನೈಸರ್ಗಿಕ ಪ್ರಯೋಗಾಲಯದಂತೆ ಇದೆ. ಪ್ರಕೃತಿ ವಿಚಾರದಲ್ಲಿ ಈ ಪ್ರದೇಶ ವೈಭವಯುತವಾಗಿದ್ದು, ಸುಂದರ ಮತ್ತು ಆಕರ್ಷಣೀಯವಾಗಿದೆ. ಇಲ್ಲಿಂದ ಹಿರಾಕುಡ್ ಅಣೆಕಟ್ಟು ದೂರವೇನಿಲ್ಲ. ಅಣೆಕಟ್ಟೆ ಸಮೀಪದ ದೆಬ್ರಿಗಢ ಪಕ್ಷಿಧಾಮ ವಿಶೇಷವಾಗಿದ್ದು, ವೀರ ಸುರೇಂದ್ರ ಸಾಯಿ ಜಿ ತಮ್ಮ ಮೂಲಸ್ಥಾನವನ್ನು ನಿರ್ಮಿಸಿಕೊಂಡಿರುವ ಇದರ ಮಧ್ಯ ಭಾಗದ ಪ್ರದೇಶ ಪವಿತ್ರವೆನಿಸಿದೆ. ಈ ಭಾಗದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಇನ್ನಷ್ಟು ವೃದ್ಧಿಸಲು ವಿದ್ಯಾರ್ಥಿಗಳ ಚಿಂತನೆಗಳು ಮತ್ತು ನಿರ್ವಹಣಾ ಕೌಶಲ್ಯ ಅತ್ಯಂತ ಉಪಕಾರಿಯಾಗಲಿದೆ. ಅಂತೆಯೇ ಸಂಬಲ್ಪುರಿ ಜವಳಿ ದೇಶದಲ್ಲಿ ಮತ್ತು ವಿದೇಶದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಬಾಂಧಾ-ಇಕತ್ ಜವಳಿ ಅದರ ವಿಶಿಷ್ಟ ವಿನ್ಯಾಸ ಮತ್ತು ಅತ್ಯಂತ ಅಪರೂಪದ್ದಾಗಿದೆ. ಅಂತೆಯೇ ಈ ಪ್ರದೇಶದಲ್ಲಿ ಅತಿ ಹೆಚ್ಚಿನ ಕರಕುಶಲಕರ್ಮಿಗಳ ಕಾರ್ಯವನ್ನು ಗಮನಿಸಬಹುದು. ಅವರು ಬೆಳ್ಳಿ ಕೆತ್ತನೆಗಳು, ಕಲ್ಲಿನ ಮೇಲೆ ಕೆತ್ತನೆ, ಮರಗಳ ಮೇಲೆ ಕೆತ್ತನೆ, ಹಿತ್ತಾಳೆ ಕೆಲಸ ಮತ್ತು ಆ ಕಾರ್ಯದಲ್ಲಿ ನಮ್ಮ ಬುಡಕಟ್ಟು ಸಹೋದರ ಸಹೋದರಿಯರು ಕೂಡ ಅತ್ಯಂತ ಚೆನ್ನಾಗಿ ಅರಿತಿದ್ದಾರೆ. ಐಐಎಂ ವಿದ್ಯಾರ್ಥಿಗಳು ಸಂಬಲ್ಪುರದ ಸ್ಥಳೀಯ ಉತ್ಪನ್ನಗಳಿಗೆ ದನಿಯಾಗುವುದು ಅವರ ಅತ್ಯಂತ ಜವಾಬ್ದಾರಿಯ ಕೆಲಸವಾಗಿದೆ.

ಮಿತ್ರರೇ,

ಸಂಬಲ್ಪುರ ಮತ್ತು ಅದಕ್ಕೆ ಹೊಂದಿಕೊಂಡ ಪ್ರದೇಶಗಳು ತಮ್ಮ ಖನಿಜ ಮತ್ತು ಗಣಿ ಸಾಮರ್ಥ್ಯಕ್ಕೆ ಹೆಸರಾಗಿವೆ ಎಂಬುದು ನಿಮಗೆಲ್ಲಾ ಚೆನ್ನಾಗಿ ಗೊತ್ತು. ಉನ್ನತ ದರ್ಜೆಯ ಕಬ್ಬಿಣದ ಅದಿರು, ಬಾಕ್ಸೈಟ್, ಕ್ರೋಮೈಟ್, ಮ್ಯಾಂಗನೀಸ್, ಕೋಲ್ ಲೈಮ್ ಸ್ಟೋನ್ ನಿಂದ ಚಿನ್ನ, ಹರಳು ಮತ್ತು ವಜ್ರ ಇತ್ಯಾದಿ ಇಲ್ಲಿನ ನೈಸರ್ಗಿಕ ಸಂಪತ್ತನ್ನು ಹಲವು ಪಟ್ಟು ಹೆಚ್ಚಿಸಿದೆ. ದೇಶದ ಈ ನೈಸರ್ಗಿಕ ಸಂಪನ್ಮೂಲಗಳನ್ನು ಹೇಗೆ ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬಹುದು ಎಂಬುದನ್ನು ಕುರಿತು ಹೊಸ ಚಿಂತನೆಗಳ ಬಗ್ಗೆ ನೀವು ಕಾರ್ಯೋನ್ಮುಖವಾಗಬೇಕಿದೆ. ಅವುಗಳ ಮೂಲಕ ಹೇಗೆ ಇಡೀ ಪ್ರದೇಶದಲ್ಲಿ ಅಭಿವೃದ್ಧಿಪಡಿಸಬೇಕು, ಜನರ ಅಭಿವೃದ್ಧಿಗೊಳಿಸಬೇಕೆಂಬುದನ್ನು ಯೋಚಿಸಬೇಕು.

ಮಿತ್ರರೇ,

ನಾನು ನಿಮಗೆ ಒಡಿಶಾದಲ್ಲಿ ಏನಿಲ್ಲವೋ ಅದರ ಬಗ್ಗೆ ಒಂದೇ ಒಂದು ಉದಾಹರಣೆಯನ್ನು ನೀಡ ಬಯಸುತ್ತೇನೆ. ಇಲ್ಲಿ ಅರಣ್ಯ ಸಂಪತ್ತು, ಖನಿಜ, ರಂಗಭಟಿ ಸಂಗೀತ, ಬುಡಕಟ್ಟು ಕಲೆ ಮತ್ತು ಕರಕುಶಲಕಲೆ ಇದ್ದು, ಕವಿ ಗಂಗಾಧರ್ ಮೆಹರ್ ಅವರ ಕವಿತೆಗಳಲ್ಲಿ ಪ್ರಕೃತಿಯನ್ನು ವರ್ಣಿಸಿದ್ದಾರೆ. ನಮ್ಮ ಬಹುತೇಕ ಸಹೋದ್ಯೋಗಿಗಳು ಸಂಬಲ್ಪುರಿ ಜವಳಿಗೆ, ಕಟಕ್ ನ ಫಿಲಿಗ್ರಿ ಮತ್ತು ಜಾಗತಿಕ ಮನ್ನಣೆಯನ್ನು ತಂದುಕೊಡಲು ತಮ್ಮ ಕೌಶಲ್ಯಗಳನ್ನು ಬಳಸುತ್ತಿದ್ದಾರೆ. ಇದರಿಂದ ಪ್ರವಾಸೋದ್ಯಮಕ್ಕೆ ಅನುಕೂಲವಾಗುವ ಜೊತೆಗೆ ಆತ್ಮನಿರ್ಭರ ಭಾರತ ಅಭಿಯಾನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಜೊತೆಗೆ, ಒಟ್ಟಾರೆ ಒಡಿಶಾದ ಸಮಗ್ರ ಅಭಿವೃದ್ಧಿಗೂ ನೆರವಾಗಲಿದೆ.

ಮಿತ್ರರೇ,

ಐಐಎಂನಲ್ಲಿರುವ ನನ್ನೆಲ್ಲಾ ಯುವ ಸಹೋದ್ಯೋಗಿಗಳೇ, ಸ್ಥಳೀಯ ಉತ್ಪನ್ನಗಳು ಜಾಗತಿಕ ಮನ್ನಣೆ ಗಳಿಸುವಂತೆ ಮಾಡಲು ಹೊಸ ಹಾಗೂ ಆವಿಷ್ಕಾರಿ ಪರಿಹಾರಗಳನ್ನು ಸಂಶೋಧಿಸಬೇಕಿದೆ. ನನಗೆ ವಿಶ್ವಾಸವಿದೆ ನಮ್ಮ ಐಐಎಂಗಳು ದೇಶ ಸ್ವಾವಲಂಬನೆ ಸಾಧಿಸುವಂತೆ ಮಾಡಲು ಸ್ಥಳೀಯ ಉತ್ಪನ್ನಗಳು ಮತ್ತು ಅಂತಾರಾಷ್ಟ್ರೀಯ ಸಹಭಾಗಿತ್ವದ ನಡುವೆ ಸೇತುವೆಯಂತೆ ಕೆಲಸ ಮಾಡಲಿವೆ. ನಿಮ್ಮ ಮಾಜಿ ವಿದ್ಯಾರ್ಥಿಗಳ ಅತಿ ದೊಡ್ಡ ಜಾಲ ವಿಶ್ವದ ನಾನಾ ಮೂಲೆ ಮೂಲೆಗಳಲ್ಲಿ ಹರಡಿದ್ದು, ಆ ನಿಟ್ಟಿನಲ್ಲಿ ಅದು ಹೆಚ್ಚಿನ ಸಹಕಾರಿಯಾಗಲಿದೆ. 2014ರ ವರೆಗೆ ನಮ್ಮಲ್ಲಿ ಕೇವಲ 13 ಐಐಎಂಗಳಿದ್ದವು. ಇದೀಗ ದೇಶದಲ್ಲಿ 20 ಐಐಎಂಗಳಿವೆ. ಅದರ ಮೂಲಕ ಪ್ರತಿಭಾವಂತ ಮಾನವ ಸಂಪನ್ಮೂಲ ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಲಿದೆ.

ಮಿತ್ರರೇ,

ಜಗತ್ತಿನಲ್ಲಿ ಹೊಸ ಹೊಸ ಅವಕಾಶಗಳ ಜೊತೆಗೆ ನಿರ್ವಹಣಾ ಜಗತ್ತಿನಲ್ಲಿ ಹೊಸ ಸವಾಲುಗಳೂ ಸಹ ಎದುರಾಗುತ್ತಿವೆ. ಆ ಸವಾಲುಗಳನ್ನು ನೀವು ಅರ್ಥೈಸಿಕೊಳ್ಳಬೇಕಿದೆ. ಉದಾಹರಣೆಗೆ ಅಡಿಟಿವ್ ಪೈಂಟಿಂಗ್ ಅಥವಾ 3ಡಿ ಪೈಂಟಿಂಗ್ ಇಡೀ ಜಗತ್ತಿನ ಉತ್ಪಾದನಾ ಆರ್ಥಿಕತೆಯನ್ನು ಬದಲಾಯಿಸುತ್ತಿದೆ. ನೀವು ಈ ಸುದ್ದಿಯನ್ನು ಕೇಳಿರಬಹುದು, ಕಳೆದ ತಿಂಗಳು ಚೆನ್ನೈ ಸಮೀಪದ ಎರಡು ಅಂತಸ್ತಿನ ಇಡೀ ಕಟ್ಟಡವನ್ನು 3ಡಿ ತಂತ್ರಜ್ಞಾನದಿಂದ ನಿರ್ಮಿಸಿರುವುದನ್ನು. ಇದರಿಂದಾಗಿ ಉತ್ಪಾದನಾ ವಿಧಾನಗಳಲ್ಲಿ ಬದಲಾವಣೆಗಳಾಗುವ ಜೊತೆಗೆ ಸಾಗಾಣೆ ಮತ್ತು ಪೂರೈಕೆ ಸರಣಿ ವ್ಯವಸ್ಥೆಗಳಲ್ಲೂ ಸಾಕಷ್ಟು ಬದಲಾವಣೆಗಳಾಗಲಿವೆ. ಅಂತೆಯೇ ತಂತ್ರಜ್ಞಾನ ಇಂದು ನಮ್ಮೆಲ್ಲರ ಭೌಗೋಳಿಕ ಮಿತಿಯನ್ನು ದೂರ ಮಾಡುತ್ತಿದೆ. 21ನೇ ಶತಮಾನದಲ್ಲಿ ವಾಯ ಸಂಪರ್ಕದಿಂದಾಗಿ ವಹಿವಾಟು ಸೀಮಾತೀತವಾಗಿದ್ದು, ಡಿಜಿಟಲ್ ಸಂಪರ್ಕ 21ನೇ ಶತಮಾನದ ವಾಣಿಜ್ಯ ವಹಿವಾಟನ್ನು ಬದಲಿಸುತ್ತಿದೆ. ಇಡೀ ಜಗತ್ತಿನಲ್ಲಿ ಜಾಗತಿಕ ಗ್ರಾಮದಿಂದ ಜಾಗತಿಕ ದುಡಿಯುವ ತಾಣದಿಂದ ಎಲ್ಲಿಂದ ಬೇಕಾದರೂ ಕೆಲಸ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಭಾರತ ಕೆಲವು ತಿಂಗಳಿನಿಂದೀಚೆಗೆ ಎಲ್ಲಾ ಅಗತ್ಯ ಸುಧಾರಣೆಗಳನ್ನು ಕೈಗೊಂಡಿದೆ. ನಮ್ಮ ಉದ್ದೇಶವೆಂದರೆ ಸಮಯದ ಜೊತೆ ಸಾಗುವುದಷ್ಟೇ ಅಲ್ಲ. ಸಮಯವನ್ನು ಮೀರಿ ಮುನ್ನಡೆಬೇಕು ಎಂಬುದಾಗಿದೆ.

ಮಿತ್ರರೇ,

ನಮ್ಮ ಕೆಲಸದ ವಿಧಾನಗಳಲ್ಲಿ ಆಗುತ್ತಿರುವ ಬದಲಾವಣೆಗಳಂತೆ ನಿರ್ವಹಣಾ ಕೌಶಲ್ಯದ ಬೇಡಿಕೆಯೂ ಬದಲಾಗುತ್ತಿದೆ. ಇದೀಗ ಸಾಮೂಹಿಕ ಅನುಶೋಧಕದ ಕಾಲವಾಗಿದೆ ಮತ್ತು ಮೇಲಿಂದ ಕೆಳಗೆ ಅಥವಾ ಕೆಳಗಿಂದ ನಿರ್ವಹಣೆಯ ಬದಲಿಗೆ ಪರಿವರ್ತನಾ ನಿರ್ವಹಣೆಗೆ ಒತ್ತು ಬೇಕಾಗಿದೆ. ಈ ಸಹಭಾಗಿತ್ವಗಳು ಅತ್ಯಂತ ಪ್ರಮುಖ ಗುಂಪುಗಳಾಗಲಿವೆ ಮತ್ತು ತಂಡದ ಸದಸ್ಯರೂ ಸಹ ಕ್ರಮಾವಳಿಯಲ್ಲಿ ಬಹು ಮುಖ್ಯ ಆಗಲಿದ್ದಾರೆ. ಆದ್ದರಿಂದ ಇಂದು ಹೆಚ್ಚಿನ ಮಾನವ ಸಂಪನ್ಮೂಲ ಅಗತ್ಯವಿದೆ. ಜೊತೆಗೆ ಹೆಚ್ಚು ತಾಂತ್ರಿಕ ನಿರ್ವಹಣೆಯೂ ಕೂಡ ಸಮಾನವಾಗಿ ಬೇಕಿದೆ. ನಾನು ನಿಮ್ಮನ್ನು ಆಗ್ರಹಿಸುವುದೇನೆಂದರೆ ದೇಶಾಂದ್ಯಂತ ಎಲ್ಲ ಐಐಎಂಗಳು ಮತ್ತು ಎಲ್ಲ ವಾಣಿಜ್ಯ ನಿರ್ವಹಣಾ ಸಂಸ್ಥೆಗಳು ನಾವು ಹೇಗೆ ಕೊರೊನಾ ಸೋಂಕಿನ ಸಮಯದಲ್ಲಿ ಹೇಗೆ ತಂತ್ರಜ್ಞಾನದ ಪ್ರೇರಣೆಯಿಂದಾಗಿ ಒಂದು ತಂಡವಾಗಿ ಕಾರ್ಯನಿರ್ವಹಿಸಿ ದೇಶದ 130 ಕೋಟಿ ಜನರನ್ನು ರಕ್ಷಿಸಲು ಕ್ರಮ ಕೈಗೊಂಡೆವೋ, ಅಂತೆಯೇ ಸಹಭಾಗಿತ್ವವನ್ನು ಸಾಧಿಸಿ, ಸಾರ್ವಜನಿಕ ಭಾಗಿದಾರಿಕೆಯೊಂದಿಗೆ ಅಭಿಯಾನವನ್ನು ಕೈಗೊಳ್ಳಲಾಯಿತು. ಈ ಎಲ್ಲ ವಿಷಯಗಳ ಬಗ್ಗೆ ದಾಖಲೆಗಳನ್ನು ಸಂಶೋಧನೆ ನಡೆಸಬೇಕು ಮತ್ತು ದಾಖಲೆಗಳನ್ನು ಸಿದ್ಧಪಡಿಸಬೇಕು, ಹೇಗೆ 130 ಕೋಟಿ ಜನರು ಕಾಲ ಕಾಲಕ್ಕೆ ಸಂಶೋಧನೆಗಳನ್ನು ಕೈಗೊಂಡರು ? ಹೇಗೆ ಭಾರತ ಅತ್ಯಲ್ಪ ಅವಧಿಯಲ್ಲಿ ತನ್ನ ಶಕ್ರಿ ಮತ್ತು ಸಾಮರ್ಥ್ಯವನ್ನು ವಿಸ್ತರಿಸಿಕೊಂಡಿತು ? ನಿರ್ವಹಣೆಗೆ ಇದು ಅತ್ಯುತ್ತಮ ಪಾಠವಾಗಿದೆ. ದೇಶ ಪಿಪಿಇ ಕಿಟ್, ಮಾಸ್ಕ್, ವೆಂಟಿಲೇಟರ್ ಗಳಿಗೆ ಕೋವಿಡ್ ಸಮಯದಲ್ಲಿ ಕಾಯಂ ಪರಿಹಾರಗಳನ್ನು ಕಂಡುಕೊಂಡಿದೆ.

ಮಿತ್ರರೇ,

ಸಮಸ್ಯೆಗಳನ್ನು ಬಗೆಹರಿಸಲು ಅಲ್ಪಾವಧಿಯ ಚಿಂತನೆಗಳನ್ನು ಅಳವಡಿಸಿಕೊಳ್ಳುತ್ತಿರುವ ಸಂಪ್ರದಾಯದಲ್ಲಿ ನಮ್ಮಲ್ಲಿತ್ತು. ದೇಶ ಇಂದು ಹಳೆಯ ಮನೋಭಾದಿಂದ ಹೊರಬಂದಿದೆ. ಇದೀಗ ನಾವು ತಕ್ಷಣದ ಅಗತ್ಯತೆಗಳನ್ನು ಹೊರತುಪಡಿಸಿ, ದೀರ್ಘಾವಧಿಯ ಪರಿಹಾರಗಳಿಗೆ ಒತ್ತು ನೀಡಬೇಕಾಗಿದೆ. ಇದರಿಂದ ನಾವು ಅತ್ಯುತ್ತಮ ನಿರ್ವಹಣಾ ಪಾಠವನ್ನು ಕಲಿಯಬೇಕಾಗಿದೆ. ಅರುಂಧತಿ ಜಿ ನಮ್ಮೊಡನಿದ್ದಾರೆ. ಅವರು ಇಡೀ ಜನ್-ಧನ್ ಯೋಜನೆ ಮೂಲಕ ದೇಶದಲ್ಲಿ ಬಡವರಿಗೆ ಬ್ಯಾಂಕ್ ಖಾತೆ ತೆರೆಯುವ ಇಡೀ ಯೋಜನೆಯನ್ನು ರೂಪಿಸಿ, ಅನುಷ್ಠಾನಗೊಳಿಸಿ ಮತ್ತು ನಿರ್ವಹಣೆಗೆ ಸಾಕ್ಷಿಯಾಗಿದ್ದಾರೆ. ಏಕೆಂದರೆ ಆ ಸಮಯದಲ್ಲಿ ಅವರೇ ಬ್ಯಾಂಕಿನ ಹೊಣೆ ಹೊತ್ತಿದ್ದರು. ಎಂದಿಗೂ ಬ್ಯಾಂಕ್ ಗಳಿಗೆ ಬಾರದ ಸುಮಾರು 40 ಕೋಟಿಗೂ ಅಧಿಕ ಜನರಿಂದ ಬ್ಯಾಂಕ್ ಖಾತೆಗಳನ್ನು ತೆರೆಸುವುದು ಅದು ಸುಲಭದ ಮಾತಲ್ಲ. ನಾನು ಏಕೆ ಇದನ್ನು ನಿಮಗೆ ಹೇಳುತ್ತಿದ್ದೇನೆಂದರೆ ನಿರ್ವಹಣೆ ಎಂದರೆ ಕೇವಲ ದೊಡ್ಡ ಕಂಪನಿಗಳನ್ನು ನಿರ್ವಹಿಸುವುದು ಎಂಬುದಲ್ಲ. ನಿರ್ವಹಣೆಯ ನಿಜವಾದ ಅರ್ಥ ಭಾರತದಂತಹ ದೇಶದಲ್ಲಿ ಜನರನ್ನು ನಿರ್ವಹಿಸುವುದಾಗಿದೆ. ನಾನು ನಿಮಗೆ ಮತ್ತೊಂದು ಉದಾಹರಣೆಯನ್ನು ನೀಡುತ್ತೇನೆ, ಇದು ಒಡಿಶಾದ ನೆಲಕ್ಕೆ ಸಂಬಂಧಿಸಿದ ಅದ್ಬುತ ಕೆಲಸದ್ದು, ಧರ್ಮೇಂದ್ರ ಪ್ರಧಾನ್ ಜಿ ಇದರಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಮಿತ್ರರೇ,

ನಮ್ಮ ದೇಶದಲ್ಲಿ ಸ್ವಾತಂತ್ರ್ಯಾ ನಂತರ ಹತ್ತು ವರ್ಷಗಳ ಬಳಿಕ ಅಡುಗೆ ಅನಿಲ ಬಳಕೆಗೆ ಬಂದಿತ್ತು. ನಂತರದ ದಶಕಗಳಲ್ಲಿ ಅಡುಗೆ ಅನಿಲ ಐಷಾರಾಮಿಯಾಗಿತ್ತು. ಅದು ಶ್ರೀಮಂತ ಜನರಿಗೆ ಪ್ರತಿಷ್ಠೆಯೂ ಆಗಿತ್ತು. ಜನರು ಅಡುಗೆ ಅನಿಲ ಸಂಪರ್ಕಕ್ಕಾಗಿ ಸಾಕಷ್ಟು ಅಲೆಯಬೇಕಾಗಿತ್ತು ಮತ್ತು ಆದರೂ ಕೂಡ ಅವರಿಗೆ ಸುಲಭವಾಗಿ ಸಿಗುತ್ತಿರಲಿಲ್ಲ. ಆರು ವರ್ಷಗಳ ಹಿಂದೆ 2014ರಲ್ಲಿ ದೇಶದಲ್ಲಿ ಕೇವಲ ಶೇ.55ರಷ್ಟು ಮಾತ್ರ ಅಡುಗೆ ಅನಿಲ ಸಂಪರ್ಕ ವ್ಯಾಪ್ತಿ ಇತ್ತು. ನಮ್ಮ ಚಿಂತನೆಯಲ್ಲಿ ಶಾಶ್ವತ ಪರಿಹಾರದ ಪ್ರಜ್ಞೆ ಇಲ್ಲದಿದ್ದರೆ ಇಂತಹುದೆಲ್ಲ ಆಗುತ್ತದೆ. 60 ವರ್ಷಗಳಲ್ಲಿ ಶೇ.55ರಷ್ಟು ಮಾತ್ರ ಎಲ್ ಪಿಜಿ ಸಂಪರ್ಕವಿತ್ತು. ದೇಶ ಅತ್ಯಂತ ವೇಗವಾಗಿ ಮುನ್ನಡೆಯಬೇಕಾದರೆ ಎಲ್ಲರಿಗೂ ಅಡುಗೆ ಅನಿಲ ಸಂಪರ್ಕವನ್ನು ಖಾತ್ರಿಪಡಿಸಲು ಅರ್ಧಶತಮಾನಗಳಷ್ಟು ಸಮಯ ಹಿಡಿಯುತ್ತಿತ್ತು. 2014ರಲ್ಲಿ ನಮ್ಮ ಸರ್ಕಾರ ಅಧಿಕಾರ ವಹಿಸಿಕೊಂಡ ಕೂಡಲೇ ನಾವು ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ನಿರ್ಧರಿಸಿದೆವು. ಇಂದು ದೇಶದಲ್ಲಿ ಎಷ್ಟು ಅಡುಗೆ ಅನಿಲ ವ್ಯಾಪ್ತಿ ಇದೆ ಗೊತ್ತೇ ? ಶೇ.98ಕ್ಕೂ ಅಧಿಕ. ನೀವೆಲ್ಲಾ ನಿರ್ವಹಣೆಯಲ್ಲಿ ತೊಡಗಿರುವವರು, ಹೊಸತನವನ್ನು ಆರಂಭಿಸಿ, ಸುಲಭವಾಗಿ ಹೇಗೆ ಸಾಧಿಸಬಹುದು ಎಂಬುದನ್ನು ತಿಳಿಯಬೇಕಿದೆ. ನಿಜವಾದ ಸವಾಲು ಇರುವುದು ವ್ಯಾಪ್ತಿಯನ್ನು ಶೇ.100ರಷ್ಟು ಸಾಧಿಸುವುದರಲ್ಲಿ.

ಮಿತ್ರರೇ,

ಇದೀಗ ಪ್ರಶ್ನೆ ಎಂದರೆ ನಾವು ಹೇಗೆ ಇದನ್ನು ಸಾಧಿಸಿದೆವು ಎಂಬುದು ? ನಿಮ್ಮಂತಹವರಿಗೆ ಈ ನಿರ್ವಹಣಾ ಕೌಶಲ್ಯದ ಬಗ್ಗೆ ಅಧ್ಯಯನ ಮಾಡಲು ಒಳ್ಳೆಯ ವಿಷಯವಾಗಿದೆ.

ಮಿತ್ರರೇ,

ನಾವು ಸಮಸ್ಯೆಯನ್ನು ಒಂದೆಡೆ ಇಟ್ಟೆವು ಮತ್ತೊಂದೆಡೆ ಕಾಯಂ ಪರಿಹಾರವನ್ನು ಕಂಡುಕೊಂಡೆವು. ಸವಾಲು ಎಂದರೆ ಹೊಸ ವಿತರಣೆದಾರರನ್ನು ಹುಡುಕುವುದು. ನಾವು ಸುಮಾರು 10,000 ಹೊಸ ಅನಿಲ ವಿತರಕರನ್ನು ನೇಮಕ ಮಾಡಿದೆವು. ಸವಾಲೆಂದರೆ ಬಾಟ್ಲಿಂಗ್ ಘಟಕಗಳ ಸಾಮರ್ಥ್ಯ. ನಾವು ದೇಶಾದ್ಯಂತ ಹೊಸ ಬಾಟ್ಲಿಂಗ್ ಘಟಕಗಳನ್ನು ಸ್ಥಾಪಿಸಿ, ಸಾಮರ್ಥ್ಯವನ್ನು ವೃದ್ಧಿ ಮಾಡಿದೆವು. ಆನಂತರದ ಸವಾಲೆಂದರೆ ಆಮದು ಟರ್ಮಿನಲ್ ಸಾಮರ್ಥ್ಯ. ನಾವು ಅದನ್ನೂ ಸರಿಪಡಿಸಿದೆವು. ಆನಂತರ ಕೊಳವೆ ಮಾರ್ಗದ ಸಾಮರ್ಥ್ಯ ಎದುರಾಯಿತು. ನಾವು ಇದಕ್ಕಾಗಿ ಕೋಟ್ಯಾಂತರ ರೂಪಾಯಿಯನ್ನು ವ್ಯಯಿಸಿದೆವು ಮತ್ತು ಇಂದಿಗೂ ಕಾಮಗಾರಿಗಳು ನಡೆಯುತ್ತಿವೆ. ಆನಂತರ ಬಡ ಫಲಾನುಭವಿಗಳನ್ನು ಗುರುತಿಸುವ ಸವಾಲು ಎದುರಾಗಿತ್ತು. ನಾವು ಅತ್ಯಂತ ಪಾರದರ್ಶಕ ರೀತಿಯಲ್ಲಿ ವಿಶೇಷವಾಗಿ ಉಜ್ವಲ ಯೋಜನೆ ಆರಂಭದ ಮೂಲಕ ಆ ಕೆಲಸನ್ನು ನಿರ್ವಹಿಸಿದೆವು.

ಮಿತ್ರರೇ,

ಶಾಶ್ವತ ಪರಿಹಾರ ಕಂಡುಕೊಳ್ಳಲು ಇದರ ಫಲಿತಾಂಶದಿಂದಾಗಿ ದೇಶಾದ್ಯಂತ ಇಂದು 28 ಕೋಟಿಗೂ ಅಧಿಕ ಅನಿಲ ಸಂಪರ್ಕಗಳಿವೆ. 2014ಕ್ಕೂ ಮುನ್ನ ದೇಶದಲ್ಲಿ ಕೇವಲ 14 ಕೋಟಿ ಅಡುಗೆ ಅನಿಲ ಸಂಪರ್ಕಗಳಿದ್ದವು. ನೀವೇ ಯೋಚಿಸಿ 60 ವರ್ಷಗಳಲ್ಲಿ 14 ಕೋಟಿ ಅಡುಗೆ ಅನಿಲ ಸಂಪರ್ಕ ನೀಡಲಾಗಿತ್ತು. ನಾವು ಕೇವಲ ಆರು ವರ್ಷಗಳಲ್ಲಿ ದೇಶಾದ್ಯಂತ 14 ಕೋಟಿಗೂ ಅಧಿಕ ಅಡುಗೆ ಅನಿಲ ಸಂಪರ್ಕಗಳನ್ನು ಒದಗಿಸಿದ್ದೇವೆ. ಇದೀಗ ಜನರು ಅಡುಗೆ ಅನಿಲಕ್ಕಾಗಿ ಓಡಬೇಕಾಗಿಲ್ಲ ಮತ್ತು ಸುತ್ತಬೇಕಾಗಿಲ್ಲ. ಒಡಿಶಾದಲ್ಲೇ ಸುಮಾರು 50 ಲಕ್ಷ ಬಡ ಕುಟುಂಬಗಳಿಗೆ ಉಜ್ವಲ ಯೋಜನೆ ಅಡಿ ಉಚಿತ ಅಡುಗೆ ಅನಿಲ ಸಂಪರ್ಕಗಳನ್ನು ನೀಡಲಾಗಿದೆ. ಇದು ಸಾಧ್ಯವಾಗಿದ್ದು ದೇಶದಲ್ಲಿ ಈ ಯೋಜನೆ ಅಡಿ ಸಾಮರ್ಥ್ಯ ವೃದ್ಧಿ ಮಾಡಿದ್ದರಿಂದ ಮತ್ತು ಒಡಿಶಾದ 19 ಜಿಲ್ಲೆಗಳಲ್ಲಿ ನಗರ ಅನಿಲ ವಿತರಣಾ ಜಾಲದ ಕಾಮಗಾರಿ ಪ್ರಗತಿಯಲ್ಲಿವೆ.

ಮಿತ್ರರೇ,

ನಾನು ಈ ಉದಾಹರಣೆಗಳ ಮೂಲಕ ದೇಶದ ಅಗತ್ಯತೆಗಳ ಜೊತೆ ನಿಮ್ಮನ್ನು ಬೆಸೆಯಲು ಮತ್ತು ದೇಶದ ಸವಾಲುಗಳನ್ನು ಅರ್ಥೈಸಿಕೊಳ್ಳಲು ವಿವರ ನೀಡಿದ್ದೇನೆ. ನೀವು ಉತ್ತಮ ನಿರ್ವಾಹಣಾಗಾರರಾದರೆ ನೀವು ಅತ್ಯುತ್ತಮ ಪರಿಹಾರಗಳನ್ನು ನೀಡಬಹುದಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳು ಕೇವಲ ಪರಿಣಿತಿಗೆ ಒತ್ತು ನೀಡುವ ಜೊತೆಗೆ ತಮ್ಮ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವ ಅಗತ್ಯತೆಯೂ ಇದೆ ಎಂದು ನಾನು ಭಾವಿಸುತ್ತೇನೆ. ಸಂಸ್ಥೆಯಿಂದ ಬಂದಿರುವ ವಿದ್ಯಾರ್ಥಿಗಳು ಇದರಲ್ಲಿ ಅತಿ ದೊಡ್ಡ ಪಾತ್ರ ವಹಿಸಲಿದ್ದಾರೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿಸ್ತೃತ, ಬಹುಶಿಸ್ತೀಯ ಮತ್ತು ಸಮಗ್ರ ಮನೋಭಾವಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ವೃತ್ತಿಪರ ಶಿಕ್ಷಣದ ಹಾದಿಯಲ್ಲಿ ಸಾಗಿಬಂದ ಸೋಮಾರಿತನವನ್ನು ದೂರ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ. ನಾವು ಪ್ರತಿಯೊಬ್ಬರನ್ನೂ ದೇಶದ ಅಭಿವೃದ್ಧಿಗಾಗಿ ಮುಖ್ಯವಾಹಿನಿಗೆ ತರಲು ಬಯಸಿದ್ದೇವೆ. ಇದು ಕೂಡ ಸಮಗ್ರ ಸ್ವರೂಪವಾಗಿದೆ. ನೀವು ಈ ದೂರದೃಷ್ಟಿಯನ್ನು ಅರ್ಥೈಸಿಕೊಳ್ಳುವಿರಿ ಎಂಬ ಭರವಸೆ ನನಗೆ ಖಂಡಿತ ಇದೆ. ನಿಮ್ಮ ಮತ್ತು ಐಐಎಂ ಸಂಬಲ್ಪುರದ ಪ್ರಯತ್ನಗಳಿಂದಾಗಿ ಸ್ವಾವಲಂಬಿ ಭಾರತ ಅಭಿಯಾನದ ಕನಸು ನನಸಾಗಲಿದೆ. ಈ ಶುಭಾಶಯಗಳೊಂದಿಗೆ ನಿಮ್ಮೆಲ್ಲರಿಗೂ ತುಂಬಾ ತುಂಬಾ ಧನ್ಯವಾದಗಳು. ನಮಸ್ಕಾರ!

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Exclusive: Just two friends in a car, says Putin on viral carpool with PM Modi

Media Coverage

Exclusive: Just two friends in a car, says Putin on viral carpool with PM Modi
NM on the go

Nm on the go

Always be the first to hear from the PM. Get the App Now!
...
India–Russia friendship has remained steadfast like the Pole Star: PM Modi during the joint press meet with Russian President Putin
December 05, 2025

Your Excellency, My Friend, राष्ट्रपति पुतिन,
दोनों देशों के delegates,
मीडिया के साथियों,
नमस्कार!
"दोबरी देन"!

आज भारत और रूस के तेईसवें शिखर सम्मेलन में राष्ट्रपति पुतिन का स्वागत करते हुए मुझे बहुत खुशी हो रही है। उनकी यात्रा ऐसे समय हो रही है जब हमारे द्विपक्षीय संबंध कई ऐतिहासिक milestones के दौर से गुजर रहे हैं। ठीक 25 वर्ष पहले राष्ट्रपति पुतिन ने हमारी Strategic Partnership की नींव रखी थी। 15 वर्ष पहले 2010 में हमारी साझेदारी को "Special and Privileged Strategic Partnership” का दर्जा मिला।

पिछले ढाई दशक से उन्होंने अपने नेतृत्व और दूरदृष्टि से इन संबंधों को निरंतर सींचा है। हर परिस्थिति में उनके नेतृत्व ने आपसी संबंधों को नई ऊंचाई दी है। भारत के प्रति इस गहरी मित्रता और अटूट प्रतिबद्धता के लिए मैं राष्ट्रपति पुतिन का, मेरे मित्र का, हृदय से आभार व्यक्त करता हूँ।

Friends,

पिछले आठ दशकों में विश्व में अनेक उतार चढ़ाव आए हैं। मानवता को अनेक चुनौतियों और संकटों से गुज़रना पड़ा है। और इन सबके बीच भी भारत–रूस मित्रता एक ध्रुव तारे की तरह बनी रही है।परस्पर सम्मान और गहरे विश्वास पर टिके ये संबंध समय की हर कसौटी पर हमेशा खरे उतरे हैं। आज हमने इस नींव को और मजबूत करने के लिए सहयोग के सभी पहलुओं पर चर्चा की। आर्थिक सहयोग को नई ऊँचाइयों पर ले जाना हमारी साझा प्राथमिकता है। इसे साकार करने के लिए आज हमने 2030 तक के लिए एक Economic Cooperation प्रोग्राम पर सहमति बनाई है। इससे हमारा व्यापार और निवेश diversified, balanced, और sustainable बनेगा, और सहयोग के क्षेत्रों में नए आयाम भी जुड़ेंगे।

आज राष्ट्रपति पुतिन और मुझे India–Russia Business Forum में शामिल होने का अवसर मिलेगा। मुझे पूरा विश्वास है कि ये मंच हमारे business संबंधों को नई ताकत देगा। इससे export, co-production और co-innovation के नए दरवाजे भी खुलेंगे।

दोनों पक्ष यूरेशियन इकॉनॉमिक यूनियन के साथ FTA के शीघ्र समापन के लिए प्रयास कर रहे हैं। कृषि और Fertilisers के क्षेत्र में हमारा करीबी सहयोग,food सिक्युरिटी और किसान कल्याण के लिए महत्वपूर्ण है। मुझे खुशी है कि इसे आगे बढ़ाते हुए अब दोनों पक्ष साथ मिलकर यूरिया उत्पादन के प्रयास कर रहे हैं।

Friends,

दोनों देशों के बीच connectivity बढ़ाना हमारी मुख्य प्राथमिकता है। हम INSTC, Northern Sea Route, चेन्नई - व्लादिवोस्टोक Corridors पर नई ऊर्जा के साथ आगे बढ़ेंगे। मुजे खुशी है कि अब हम भारत के seafarersकी polar waters में ट्रेनिंग के लिए सहयोग करेंगे। यह आर्कटिक में हमारे सहयोग को नई ताकत तो देगा ही, साथ ही इससे भारत के युवाओं के लिए रोजगार के नए अवसर बनेंगे।

उसी प्रकार से Shipbuilding में हमारा गहरा सहयोग Make in India को सशक्त बनाने का सामर्थ्य रखता है। यह हमारेwin-win सहयोग का एक और उत्तम उदाहरण है, जिससे jobs, skills और regional connectivity – सभी को बल मिलेगा।

ऊर्जा सुरक्षा भारत–रूस साझेदारी का मजबूत और महत्वपूर्ण स्तंभ रहा है। Civil Nuclear Energy के क्षेत्र में हमारा दशकों पुराना सहयोग, Clean Energy की हमारी साझा प्राथमिकताओं को सार्थक बनाने में महत्वपूर्ण रहा है। हम इस win-win सहयोग को जारी रखेंगे।

Critical Minerals में हमारा सहयोग पूरे विश्व में secure और diversified supply chains सुनिश्चित करने के लिए महत्वपूर्ण है। इससे clean energy, high-tech manufacturing और new age industries में हमारी साझेदारी को ठोस समर्थन मिलेगा।

Friends,

भारत और रूस के संबंधों में हमारे सांस्कृतिक सहयोग और people-to-people ties का विशेष महत्व रहा है। दशकों से दोनों देशों के लोगों में एक-दूसरे के प्रति स्नेह, सम्मान, और आत्मीयताका भाव रहा है। इन संबंधों को और मजबूत करने के लिए हमने कई नए कदम उठाए हैं।

हाल ही में रूस में भारत के दो नए Consulates खोले गए हैं। इससे दोनों देशों के नागरिकों के बीच संपर्क और सुगम होगा, और आपसी नज़दीकियाँ बढ़ेंगी। इस वर्ष अक्टूबर में लाखों श्रद्धालुओं को "काल्मिकिया” में International Buddhist Forum मे भगवान बुद्ध के पवित्र अवशेषों का आशीर्वाद मिला।

मुझे खुशी है कि शीघ्र ही हम रूसी नागरिकों के लिए निशुल्क 30 day e-tourist visa और 30-day Group Tourist Visa की शुरुआत करने जा रहे हैं।

Manpower Mobility हमारे लोगों को जोड़ने के साथ-साथ दोनों देशों के लिए नई ताकत और नए अवसर create करेगी। मुझे खुशी है इसे बढ़ावा देने के लिए आज दो समझौतेकिए गए हैं। हम मिलकर vocational education, skilling और training पर भी काम करेंगे। हम दोनों देशों के students, scholars और खिलाड़ियों का आदान-प्रदान भी बढ़ाएंगे।

Friends,

आज हमने क्षेत्रीय और वैश्विक मुद्दों पर भी चर्चा की। यूक्रेन के संबंध में भारत ने शुरुआत से शांति का पक्ष रखा है। हम इस विषय के शांतिपूर्ण और स्थाई समाधान के लिए किए जा रहे सभी प्रयासों का स्वागत करते हैं। भारत सदैव अपना योगदान देने के लिए तैयार रहा है और आगे भी रहेगा।

आतंकवाद के विरुद्ध लड़ाई में भारत और रूस ने लंबे समय से कंधे से कंधा मिलाकर सहयोग किया है। पहलगाम में हुआ आतंकी हमला हो या क्रोकस City Hall पर किया गया कायरतापूर्ण आघात — इन सभी घटनाओं की जड़ एक ही है। भारत का अटल विश्वास है कि आतंकवाद मानवता के मूल्यों पर सीधा प्रहार है और इसके विरुद्ध वैश्विक एकता ही हमारी सबसे बड़ी ताक़त है।

भारत और रूस के बीच UN, G20, BRICS, SCO तथा अन्य मंचों पर करीबी सहयोग रहा है। करीबी तालमेल के साथ आगे बढ़ते हुए, हम इन सभी मंचों पर अपना संवाद और सहयोग जारी रखेंगे।

Excellency,

मुझे पूरा विश्वास है कि आने वाले समय में हमारी मित्रता हमें global challenges का सामना करने की शक्ति देगी — और यही भरोसा हमारे साझा भविष्य को और समृद्ध करेगा।

मैं एक बार फिर आपको और आपके पूरे delegation को भारत यात्रा के लिए बहुत बहुत धन्यवाद देता हूँ।