Corruption has adversely impacted the aspirations of the poor and the middle class: PM
700 Maoists surrendered after demonetization and this number is increasing: PM
Today a horizontal divide - on one side are the people of India and the Govt & on the other side are a group of political leaders: PM
India is working to correct the wrongs that have entered our society: PM
Institutions should be kept above politics; the Reserve Bank of India should not be dragged into controversy: PM

ಹಲವು ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ, ನೋಟುಗಳ ಅಮಾನ್ಯತೆಯ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ ಎಂದರು. ಕಪ್ಪುಹಣ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟ ರಾಜಕೀಯ ಹೋರಾಟವಲ್ಲ ಮತ್ತು ಯಾವುದೇ ನಿರ್ದಿಷ್ಟ ಪಕ್ಷವನ್ನು ಏಕಾಂಗಿಯಾಗಿ ಮಾಡುವ ಕ್ರಮವೂ ಅಲ್ಲ  ಎಂದು ಪ್ರಧಾನಮಂತ್ರಿಯವರು ಹೇಳಿದರು. ಭ್ರಷ್ಟಾಚಾರ ಬಡ ಮತ್ತು ಮಧ್ಯಮವರ್ಗದವರ ಆಶೋತ್ತರಗಳ ಮೇಲೆ ಪ್ರತೀಕೂಲ ಪರಿಣಾಮ ಬೀರಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು. ಯಾರು ವ್ಯವಸ್ಥೆಯನ್ನು ವಂಚಿಸಲು ಯತ್ನಿಸುತ್ತಾರೋ ಅವರಿಗೆ ದೃಢವಾಗಿ ಶಿಕ್ಷಿಸಬೇಕು, ಹೀಗಾದಾಗ ಬಡವರ ಕೈ ಬಲಪಡಿಸಬಹುದು ಎಂದರು. 

ಹಳೆಯ ನೋಟುಗಳ ಚಲಾವಣೆ ರದ್ದತಿಯ ಬಳಿಕ 700 ಮಾವೋ ವಾದಿಗಳು ಶರಣಾಗಿದ್ದಾರೆ ಮತ್ತು ಈ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂದು ಪ್ರಧಾನಿಯವರು ತಿಳಿಸಿದರು. 

ಇಂದು ಅಡ್ಡಡ್ಡವಾಗಿ ವಿಭಜಿಸಲಾಗುತ್ತಿದೆ. ಇದರಲ್ಲಿ ಒಂದು ಕಡೆ ಭಾರತದ ಜನತೆ ಮತ್ತು ಕೇಂದ್ರ ಸರ್ಕಾರ ಇದ್ದರೆ, ಮತ್ತೊಂದು ಕಡೆ ರಾಜಕೀಯ ನಾಯಕರ ಗುಂಪಿದೆ ಎಂದರು.

ನಮ್ಮ ಸಮಾಜದಲ್ಲಿ ನುಸುಳಿರುವ ತಪ್ಪುಗಳನ್ನು ಸರಿ ಪಡಿಸುವ ಕಾರ್ಯ ಇಂದು ಭಾರತದಲ್ಲಿ ಆಗುತ್ತಿದೆ ಎಂದು ಪ್ರಧಾನಿ ಹೇಳಿದರು. ನಾವು ಪ್ರಾಯೋಗಿಕ ಬದಲಾವಣೆಗಾಗಿ ನಿರಂತರವಾಗಿ ಮುಂದಡಿ ಇಡಬೇಕು ಮತ್ತು ನಮ್ಮ ದೇಶದ ಶಕ್ತಿಯನ್ನು ಎಂದಿಗೂ ಕಡೆಗಣಿಸಬಾರದು ಎಂದು ಅವರು ಹೇಳಿದರು.

ಸಂಸ್ಥೆಗಳನ್ನು ರಾಜಕೀಯದಿಂದ ಮೇಲಿಟ್ಟು ನೋಡಬೇಕು ಮತ್ತು ಭಾರತೀಯ ರಿಜರ್ವ್ ಬ್ಯಾಂಕ್ ಅನ್ನು ವಿವಾದಕ್ಕೆ ಎಳೆದು ತರಬಾರದು ಎಂದು ಹೇಳಿದರು. 
ಆಡಳಿತಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ, ಸಾಕಷ್ಟು ಸುಧಾರಣೆ ಮಾಡಲಾಗಿದ್ದು, ಇದು ಶ್ರೀಸಾಮಾನ್ಯನಿಗೆ ಬಲ ನೀಡಿದೆ ಎಂದರು. ಸರ್ಕಾರದ ದಾಸ್ತಾನು ಪ್ರಕ್ರಿಯೆಯಲ್ಲಿ ಸರ್ಕಾರದ ಇ ಮಾರುಕಟ್ಟೆ ತಾಣದ ಮೂಲಕ ಪಾರದರ್ಶಕತೆಯನ್ನು ತರಲಾಗಿದೆ ಎಂದು ಹೇಳಿದರು.

ಸ್ವಚ್ಛ ಭಾರತದ ಸಂದೇಶವನ್ನು ಮುಂದುವರಿಸಿಕೊಂಡು ಬಂದ ಮತ್ತು ಜಾಗೃತಿ ಮೂಡಿಸಿದ ಮಾಧ್ಯಮಗಳಿಗೆ ಪ್ರಧಾನಮಂತ್ರಿಯವರು ಅಭಿನಂದನೆ  ಸಲ್ಲಿಸಿದರು. ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯದ ವ್ಯಾಪ್ತಿಯಲ್ಲಿ ಹೆಚ್ಚಳವಾಗಿದೆ. ಸ್ವಚ್ಛತೆ ಎಂಬುದು ಸಾರ್ವಜನಿಕ ಅಭಿಯಾನವಾಗಿ ಪರಿವರ್ತನೆಯಾಗಿದೆ ಮತ್ತು ನಾವೆಲ್ಲರೂ ಈ ಸದುದ್ದೇಶಕ್ಕಾಗಿ ಶ್ರಮಿಸಬೇಕು ಎಂದರು. 

ಏಕ ಭಾರತ ಶ್ರೇಷ್ಠ ಭಾರತ ಉಪಕ್ರಮದಡಿ ನಮ್ಮ ದೇಶದ ವಿವಿಧ ಭಾಗಗಳ ಸಾಮರ್ಥ್ಯ ಮತ್ತು ಸಂಸ್ಕೃತಿಯನ್ನು ಕಲಿಯುವ ಅವಕಾಶ ನಮಗೆ ದೊರಕಿದೆ ಎಂದು ಪ್ರಧಾನಿ ಹೇಳಿದರು. 

Click here to read full text speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Khichdi To Moringa Paratha: 7 Traditional Foods PM Modi Loves

Media Coverage

Khichdi To Moringa Paratha: 7 Traditional Foods PM Modi Loves
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 26 ಆಗಸ್ಟ್ 2026
August 26, 2026

Accountability Meets Ambition: Record Low NPAs, Record Defence Output, Record Digital Adoption Under the Leadership of PM Modi