"ರಾಷ್ಟ್ರೀಯ ಕಲ್ಯಾಣ ಮತ್ತು ಸಾರ್ವಜನಿಕ ಕಲ್ಯಾಣವು ಶಿವಾಜಿ ಮಹಾರಾಜರ ಆಡಳಿತದ ಮೂಲ ಅಂಶಗಳಾಗಿವೆ"
"ಶಿವಾಜಿ ಮಹಾರಾಜರು ಯಾವಾಗಲೂ ಭಾರತದ ಏಕತೆ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯಲು ಅತ್ಯುನ್ನತ ಪ್ರಾಮುಖ್ಯತೆಯನ್ನು ನೀಡಿದ್ದರು"
"ಛತ್ರಪತಿ ಶಿವಾಜಿ ಮಹಾರಾಜರ ಚಿಂತನೆಗಳ ಪ್ರತಿಬಿಂಬವನ್ನು “ಏಕ ಭಾರತ, ಶ್ರೇಷ್ಠ ಭಾರತ” ದೃಷ್ಟಿಕೋನದಲ್ಲಿ ಕಾಣಬಹುದು"
"ಶಿವಾಜಿ ಮಹಾರಾಜರು ಗುಲಾಮಗಿರಿಯ ಮನಸ್ಥಿತಿಯನ್ನು ಕೊನೆಗೊಳಿಸುವ ಮೂಲಕ ರಾಷ್ಟ್ರ ನಿರ್ಮಾಣಕ್ಕಾಗಿ ಜನರನ್ನು ಪ್ರೇರೇಪಿಸಿದರು"
"ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ದೂರದೃಷ್ಟಿಯಿಂದಾಗಿ ಇತಿಹಾಸದ ಇತರ ವೀರರಿಗಿಂತ ಸಂಪೂರ್ಣವಾಗಿ ಭಿನ್ನರಾಗಿದ್ದಾರೆ"
"ಬ್ರಿಟಿಷ್ ಆಳ್ವಿಕೆಯ ಗುರುತನ್ನು ಹೊಂದಿರುವ ಭಾರತೀಯ ನೌಕಾಪಡೆಯ ಧ್ವಜವನ್ನು ಬದಲಾಯಿಸಿ ಶಿವಾಜಿ ಮಹಾರಾಜರ ಲಾಂಛನವನ್ನು ಅನುಷ್ಠಾನಗೊಳಿಸಲಾಗಿದೆ"
"ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ, ಸಿದ್ಧಾಂತ ಮತ್ತು ನ್ಯಾಯವು ಅನೇಕ ತಲೆಮಾರುಗಳಿಗೆ ಸ್ಫೂರ್ತಿ ನೀಡಿದೆ"
“ಛತ್ರಪತಿ ಶಿವಾಜಿ ಮಹಾರಾಜರ ಕನಸಾದ ಸ್ವರಾಜ್, ಉತ್ತಮ ಆಡಳಿತ ಮತ್ತು ಸ್ವಾವಲಂಬನೆಯ ಭಾರತವನ್ನು ನಿರ್ಮಿಸುವುದು ನಮ್ಮ ಪಯಣವಾಗಿರುತ್ತದೆ. ಇದು ಅಭಿವೃದ್ಧಿ ಹೊಂದಿದ ಭಾರತದ ಪಯಣವಾಗಿರುತ್ತದೆ”

ಮತ್ತೊಮ್ಮೆ, ಪಟ್ಟಾಭಿಷೇಕ ಸಮಾರಂಭದ 350 ನೇ ವರ್ಷದ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು - ಶಿವಾಜಿ ಮಹಾರಾಜರ 'ಶಿವ ರಾಜ್ಯಾಭಿಷೇಕ'! ನಾನು ಛತ್ರಪತಿ ಶಿವಾಜಿ ಮಹಾರಾಜರಿಂದ ಅಲಂಕರಿಸಲ್ಪಟ್ಟಿರುವ ಮಹಾರಾಷ್ಟ್ರದ ಪವಿತ್ರ ಭೂಮಿಗೆ ಮತ್ತು ಮಹಾರಾಷ್ಟ್ರದ ನನ್ನ ಸಹೋದರ ಸಹೋದರಿಯರಿಗೆ ಶುಭ ಕೋರುತ್ತೇನೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ಸಮಾರಂಭವು ನಮ್ಮೆಲ್ಲರಿಗೂ ಹೊಸ ಪ್ರಜ್ಞೆ ಮತ್ತು ಶಕ್ತಿಯನ್ನು ತರುತ್ತದೆ. ನಿಮ್ಮೆಲ್ಲರಿಗೂ ನನ್ನ ಶುಭ ಹಾರೈಕೆಗಳು. ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕವು ಆ ಯುಗದ ಗಮನಾರ್ಹ ಮತ್ತು ವಿಶಿಷ್ಟ ಅಧ್ಯಾಯವಾಗಿದೆ, ಇದು ಮುನ್ನೂರ ಐವತ್ತು ವರ್ಷಗಳ ಹಿಂದೆ ನಡೆಯಿತು.

ಇತಿಹಾಸದ ಆ ಅಧ್ಯಾಯದಿಂದ ಹೊರಹೊಮ್ಮಿದ 'ಸ್ವರಾಜ್' (ಸ್ವಯಮಾಡಳಿತ), 'ಸುಶಾಸನ' (ಉತ್ತಮ ಆಡಳಿತ) ಮತ್ತು 'ಸಮೃದ್ಧಿ' (ಸಮೃದ್ಧಿ) ಯ ಮಹಾನ್ ಕಥೆಗಳು ಇಂದಿಗೂ ನಮಗೆ ಸ್ಫೂರ್ತಿ ನೀಡುತ್ತಿವೆ. ರಾಷ್ಟ್ರೀಯ ಕಲ್ಯಾಣ ಮತ್ತು ಸಾರ್ವಜನಿಕ ಕಲ್ಯಾಣದ ತತ್ವಗಳು ಶಿವಾಜಿ ಮಹಾರಾಜರ ಆಡಳಿತದ ಅಡಿಪಾಯವಾಗಿ ಉಳಿದವು. ನಾನು ಛತ್ರಪತಿ ಶಿವಾಜಿ ಮಹಾರಾಜರ ಪಾದಗಳಿಗೆ ತುಂಬಾ ಗೌರವದಿಂದ ನಮಿಸುತ್ತೇನೆ. ಇಂದು, ಸ್ವರಾಜ್ಯದ ಮೊದಲ ರಾಜಧಾನಿಯಾದ ರಾಯಗಡ್ ಕೋಟೆಯ ಅಂಗಳದಲ್ಲಿ ಭವ್ಯವಾದ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಇಡೀ ಮಹಾರಾಷ್ಟ್ರವು ಈ ದಿನವನ್ನು ಭವ್ಯವಾದ ಹಬ್ಬವಾಗಿ ಆಚರಿಸುತ್ತಿದೆ. ಇಂತಹ ಕಾರ್ಯಕ್ರಮಗಳು ಮಹಾರಾಷ್ಟ್ರದಲ್ಲಿ ವರ್ಷವಿಡೀ ನಡೆಯುತ್ತವೆ. ಈ ಪ್ರಯತ್ನಕ್ಕಾಗಿ ನಾನು ಮಹಾರಾಷ್ಟ್ರ ಸರ್ಕಾರಕ್ಕೆ ನನ್ನ ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ಮುನ್ನೂರ ಐವತ್ತು ವರ್ಷಗಳ ಹಿಂದೆ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ನಡೆದಾಗ, ಅದು ಸ್ವಯಮಾಡಳಿತದ ಆಕಾಂಕ್ಷೆ ಮತ್ತು ರಾಷ್ಟ್ರೀಯತೆಯ ವಿಜಯದ ಮಂತ್ರಗಳನ್ನು ಸಂಕೇತಿಸಿತು. ಅವರು ಯಾವಾಗಲೂ ಭಾರತದ ಏಕತೆ ಮತ್ತು ಸಮಗ್ರತೆಗೆ ಆದ್ಯತೆ ನೀಡಿದರು. ಇಂದು, ನಾವು ಛತ್ರಪತಿ ಶಿವಾಜಿ ಮಹಾರಾಜ್ ಅವರ ಆದರ್ಶಗಳ ಪ್ರತಿಬಿಂಬವನ್ನು 'ಏಕ್ ಭಾರತ್, ಶ್ರೇಷ್ಠ ಭಾರತ್' ದೃಷ್ಟಿಕೋನದಲ್ಲಿ ನೋಡಬಹುದು.

ಸ್ನೇಹಿತರೇ,

ಇತಿಹಾಸದ ವೀರರಿಂದ ಹಿಡಿದು ಇಂದಿನ ಯುಗದಲ್ಲಿ ನಾಯಕತ್ವವನ್ನು ಸಂಶೋಧಿಸುವ ಮ್ಯಾನೇಜ್ಮೆಂಟ್ ಗುರುಗಳವರೆಗೆ, ಪ್ರತಿಯೊಂದು ಯುಗದ ಯಾವುದೇ ನಾಯಕನ ದೊಡ್ಡ ಜವಾಬ್ದಾರಿಯೆಂದರೆ ತಮ್ಮ ದೇಶವಾಸಿಗಳನ್ನು ಪ್ರೇರೇಪಿಸುವುದು ಮತ್ತು ವಿಶ್ವಾಸದಿಂದ ಇಡುವುದು. ಛತ್ರಪತಿ ಶಿವಾಜಿ ಮಹಾರಾಜರ ಯುಗದಲ್ಲಿ ದೇಶದ ಪರಿಸ್ಥಿತಿಗಳನ್ನು ನೀವು ಊಹಿಸಬಹುದು. ಶತಮಾನಗಳ ಗುಲಾಮಗಿರಿ ಮತ್ತು ಆಕ್ರಮಣಗಳು ಜನರ ಆತ್ಮವಿಶ್ವಾಸವನ್ನು ಕುಗ್ಗಿಸಿದ್ದವು. ಆಕ್ರಮಣಕಾರರು ಹೇರಿದ ಶೋಷಣೆ ಮತ್ತು ಬಡತನವು ಸಮಾಜವನ್ನು ದುರ್ಬಲಗೊಳಿಸಿತ್ತು.

ನಮ್ಮ ಸಾಂಸ್ಕೃತಿಕ ಕೇಂದ್ರಗಳ ಮೇಲೆ ದಾಳಿ ಮಾಡುವ ಮೂಲಕ ಜನರ ನೈತಿಕ ಸ್ಥೈರ್ಯವನ್ನು ಮುರಿಯುವ ಪ್ರಯತ್ನ ನಡೆಯಿತು. ಅಂತಹ ಸಮಯದಲ್ಲಿ ಜನರಲ್ಲಿ ಆತ್ಮವಿಶ್ವಾಸವನ್ನು ತುಂಬುವುದು ಸವಾಲಿನ ಕೆಲಸವಾಗಿತ್ತು. ಆದಾಗ್ಯೂ, ಛತ್ರಪತಿ ಶಿವಾಜಿ ಮಹಾರಾಜರು ಆಕ್ರಮಣಕಾರರನ್ನು ಎದುರಿಸಿದ್ದು ಮಾತ್ರವಲ್ಲದೆ ಜನರ ಹೃದಯ ಮತ್ತು ಮನಸ್ಸಿನಲ್ಲಿ ಸ್ವಯಂ ಆಡಳಿತ ಸಾಧ್ಯ ಎಂಬ ನಂಬಿಕೆಯನ್ನು ಮೂಡಿಸಿದರು. ಅವರು ಗುಲಾಮಗಿರಿಯ ಮನಸ್ಥಿತಿಯನ್ನು ತೊಡೆದುಹಾಕಿದರು ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ಜನರನ್ನು ಪ್ರೇರೇಪಿಸಿದರು.

ಸ್ನೇಹಿತರೇ,

ಮಿಲಿಟರಿ ಶಕ್ತಿಯಲ್ಲಿ ಉತ್ಕೃಷ್ಟತೆಯನ್ನು ಸಾಧಿಸಿದ ಆದರೆ ಆಡಳಿತಾತ್ಮಕ ಸಾಮರ್ಥ್ಯಗಳನ್ನು ಹೊಂದಿರದ ಅನೇಕ ಆಡಳಿತಗಾರರು ಇದ್ದಾರೆ ಎಂದು ನಾವು ಇತಿಹಾಸದಲ್ಲಿ ನೋಡಿದ್ದೇವೆ. ಅಂತೆಯೇ, ಅತ್ಯುತ್ತಮ ಆಡಳಿತಕ್ಕೆ ಹೆಸರುವಾಸಿಯಾದ ಆದರೆ ದುರ್ಬಲ ಮಿಲಿಟರಿ ನಾಯಕತ್ವವನ್ನು ಹೊಂದಿದ್ದ ಆಡಳಿತಗಾರರು ಇದ್ದಾರೆ. ಆದಾಗ್ಯೂ, ಛತ್ರಪತಿ ಶಿವಾಜಿ ಮಹಾರಾಜ್ ಗಮನಾರ್ಹ ವ್ಯಕ್ತಿತ್ವವನ್ನು ಹೊಂದಿದ್ದರು. ಅವರು 'ಸ್ವರಾಜ್ಯ' (ಸ್ವಯಮಾಡಳಿತ) ವನ್ನು ಸ್ಥಾಪಿಸಿದ್ದಲ್ಲದೆ, 'ಸೂರಜ್' (ಉತ್ತಮ ಆಡಳಿತ) ವನ್ನು ಸಾಕಾರಗೊಳಿಸಿದರು. ಅವರು ತಮ್ಮ ಶೌರ್ಯ ಮತ್ತು ಆಳುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದರು. ಚಿಕ್ಕ ವಯಸ್ಸಿನಲ್ಲಿಯೇ, ಅವನು ಕೋಟೆಗಳನ್ನು ಗೆದ್ದರು, ಶತ್ರುಗಳನ್ನು ಸೋಲಿಸಿದರು ಮತ್ತು ಮಿಲಿಟರಿ ನಾಯಕರಾಗಿ ಖ್ಯಾತಿಯನ್ನು ಹೊಂದಿದರು. ಮತ್ತೊಂದೆಡೆ, ರಾಜರಾಗಿ, ಅವರು ಸಾರ್ವಜನಿಕ ಆಡಳಿತದಲ್ಲಿ ಸುಧಾರಣೆಗಳನ್ನು ಪರಿಚಯಿಸಿರು ಮತ್ತು ಉತ್ತಮ ಆಡಳಿತದ ಮಾರ್ಗವನ್ನು ಪ್ರದರ್ಶಿಸಿದರು.

ಒಂದೆಡೆ, ಅವರು ತನ್ನ ರಾಜ್ಯ ಮತ್ತು ಸಂಸ್ಕೃತಿಯನ್ನು ಆಕ್ರಮಣಕಾರರಿಂದ ರಕ್ಷಿಸಿದರು, ಮತ್ತೊಂದೆಡೆ, ಅವರು ರಾಷ್ಟ್ರ ನಿರ್ಮಾಣದ ಸಮಗ್ರ ದೃಷ್ಟಿಕೋನವನ್ನು ಪ್ರಸ್ತುತಪಡಿಸಿದರು. ಅವರ ದೂರದೃಷ್ಟಿಯಿಂದಾಗಿಯೇ ಅವರು ಇತಿಹಾಸದ ಇತರ ನಾಯಕರಿಂದ ಪ್ರತ್ಯೇಕವಾಗಿ ನಿಲ್ಲುತ್ತಾರೆ. ಅವರು ಆಡಳಿತದ ಕಲ್ಯಾಣ-ಆಧಾರಿತ ಗುಣಲಕ್ಷಣವನ್ನು ಒತ್ತಿಹೇಳಿದರು ಮತ್ತು ಆತ್ಮಗೌರವದಿಂದ ಬದುಕುವ ವಿಶ್ವಾಸವನ್ನು ಜನರಲ್ಲಿ ತುಂಬಿದರು. ಇದರೊಂದಿಗೆ, ಛತ್ರಪತಿ ಶಿವಾಜಿ ಮಹಾರಾಜ್ ಅವರು ಸ್ವಯಮಾಡಳಿತ, ಧರ್ಮ, ಸಂಸ್ಕೃತಿ ಮತ್ತು ಪರಂಪರೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುವವರಿಗೆ ಸಂಕೇತ ನೀಡಿದರು. ಇದು ಜನಸಾಮಾನ್ಯರಲ್ಲಿ ಬಲವಾದ ನಂಬಿಕೆಯನ್ನು ಸೃಷ್ಟಿಸಿತು, ಸ್ವಾವಲಂಬನೆಯ ಪ್ರಜ್ಞೆಯನ್ನು ಬೆಳೆಸಿತು ಮತ್ತು ರಾಷ್ಟ್ರದ ಘನತೆಯನ್ನು ಹೆಚ್ಚಿಸಿತು. ಅವರ ಕ್ರಮಗಳು, ಆಡಳಿತ ಮತ್ತು ನೀತಿಗಳು ಇಂದಿಗೂ ಪ್ರಸ್ತುತವಾಗಿವೆ, ಅದು ರೈತರ ಕಲ್ಯಾಣ, ಮಹಿಳಾ ಸಬಲೀಕರಣ, ಆಡಳಿತವನ್ನು ಸಾಮಾನ್ಯ ವ್ಯಕ್ತಿಗಳಿಗೆ ಲಭ್ಯವಾಗುವಂತೆ ಮಾಡುವುದು ಅಥವಾ ಅವರ ಆಡಳಿತ ವ್ಯವಸ್ಥೆ.

ಸ್ನೇಹಿತರೇ,

ಛತ್ರಪತಿ ಶಿವಾಜಿ ಮಹಾರಾಜರ ವ್ಯಕ್ತಿತ್ವವು ಅನೇಕ ಮುಖಗಳನ್ನು ಹೊಂದಿದೆ, ಅವರ ಜೀವನವು ನಿಸ್ಸಂದೇಹವಾಗಿ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಮೇಲೆ ಪ್ರಭಾವ ಬೀರುತ್ತದೆ. ಅವರು ಭಾರತದ ಕಡಲ ಶಕ್ತಿಯನ್ನು ಗುರುತಿಸಿದ ರೀತಿ, ನೌಕಾಪಡೆಯನ್ನು ವಿಸ್ತರಿಸಿದ ರೀತಿ ಮತ್ತು ಅವರ ಆಡಳಿತಾತ್ಮಕ ಕೌಶಲ್ಯಗಳನ್ನು ಪ್ರದರ್ಶಿಸಿದ ರೀತಿ ಎಲ್ಲರಿಗೂ ಸ್ಫೂರ್ತಿ ನೀಡುತ್ತಲೇ ಇದೆ. ಅವರು ನಿರ್ಮಿಸಿದ ಸಮುದ್ರ ಕೋಟೆಗಳು ಸಮುದ್ರದ ಭೀಕರ ಅಲೆಗಳು ಮತ್ತು ಪ್ರಕ್ಷುಬ್ಧ ಬಿರುಗಾಳಿಗಳ ನಡುವೆ ಹೆಮ್ಮೆಯಿಂದ ನಿಂತಿವೆ ಮತ್ತು ಇಂದಿಗೂ ವಿಸ್ಮಯಕಾರಿಯಾಗಿವೆ. ಅವರು ಸಮುದ್ರದ ದಡದಿಂದ ಪರ್ವತಗಳವರೆಗೆ ಕೋಟೆಗಳನ್ನು ನಿರ್ಮಿಸಿ ತನ್ನ ರಾಜ್ಯವನ್ನು ವಿಸ್ತರಿಸಿದರು. ಆ ಸಮಯದಲ್ಲಿ ಅವರು ಸ್ಥಾಪಿಸಿದ ನೀರಿನ ನಿರ್ವಹಣಾ ವ್ಯವಸ್ಥೆಗಳು ತಜ್ಞರನ್ನು ಗೊಂದಲಕ್ಕೀಡು ಮಾಡುತ್ತಲೇ ಇವೆ. ಛತ್ರಪತಿ ಶಿವಾಜಿ ಮಹಾರಾಜರಿಂದ ಸ್ಫೂರ್ತಿ ಪಡೆದು ಕಳೆದ ವರ್ಷ ಭಾರತವು ತನ್ನ ನೌಕಾಪಡೆಯನ್ನು ಗುಲಾಮಗಿರಿಯ ಸಂಕೋಲೆಗಳಿಂದ ಮುಕ್ತಗೊಳಿಸಿದ್ದು ನಮ್ಮ ಸರ್ಕಾರದ ಸೌಭಾಗ್ಯ. ನಾವು ಭಾರತೀಯ ನೌಕಾಪಡೆಯ ಧ್ವಜದಿಂದ ಬ್ರಿಟಿಷ್ ಆಳ್ವಿಕೆಯ ಗುರುತನ್ನು ತೆಗೆದುಹಾಕಿದ್ದೇವೆ ಮತ್ತು ಅದನ್ನು ಶಿವಾಜಿ ಮಹಾರಾಜರ ಲಾಂಛನದೊಂದಿಗೆ ಬದಲಾಯಿಸಿದ್ದೇವೆ. ಈಗ, ಈ ಧ್ವಜವು ಸಮುದ್ರ ಮತ್ತು ಆಕಾಶದಲ್ಲಿ ಹಾರಾಡುವ ನವ ಭಾರತದ ಭವ್ಯತೆ ಮತ್ತು ಹೆಮ್ಮೆಯನ್ನು ಪ್ರತಿನಿಧಿಸುತ್ತದೆ.

ಸ್ನೇಹಿತರೇ,

ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ, ಸಿದ್ಧಾಂತ ಮತ್ತು ನ್ಯಾಯದ ಪ್ರಜ್ಞೆ ಹಲವಾರು ತಲೆಮಾರುಗಳಿಗೆ ಸ್ಫೂರ್ತಿ ನೀಡಿದೆ. ಅವರ ಧೈರ್ಯಶಾಲಿ ವಿಧಾನ, ಮಿಲಿಟರಿ ಕೌಶಲ್ಯಗಳು ಮತ್ತು ಶಾಂತಿಯುತ ರಾಜಕೀಯ ವ್ಯವಸ್ಥೆ ನಮಗೆ ಸ್ಫೂರ್ತಿಯ ಮೂಲವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ನೀತಿಗಳ ಬಗ್ಗೆ ಚರ್ಚೆಗಳು ಮತ್ತು ಸಂಶೋಧನೆಗಳು ಇಂದಿಗೂ ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ನಡೆಯುತ್ತವೆ ಎಂಬ ಅಂಶದ ಬಗ್ಗೆ ನಾವು ಹೆಮ್ಮೆಪಡುತ್ತೇವೆ. ಒಂದು ತಿಂಗಳ ಹಿಂದಷ್ಟೇ ಮಾರಿಷಸ್ ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಸ್ವಾತಂತ್ರ್ಯದ 'ಅಮೃತ ಕಾಲ'ದ ಸಮಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪಟ್ಟಾಭಿಷೇಕದ 350 ವರ್ಷಗಳನ್ನು ಪೂರ್ಣಗೊಳಿಸಿರುವುದು ಒಂದು ಪ್ರೇರಕ ಸಂದರ್ಭವಾಗಿದೆ. ಇಷ್ಟು ವರ್ಷಗಳ ನಂತರವೂ, ಅವರು ಸ್ಥಾಪಿಸಿದ ಮೌಲ್ಯಗಳು ನಮಗೆ ಪ್ರಗತಿಯ ಹಾದಿಯನ್ನು ತೋರಿಸುತ್ತಿವೆ. ಈ ಮೌಲ್ಯಗಳ ಆಧಾರದ ಮೇಲೆ ನಾವು ಸ್ವಾತಂತ್ರ್ಯದ 'ಅಮೃತ ಕಾಲ'ದ 25 ವರ್ಷಗಳ ಪ್ರಯಾಣವನ್ನು ಪೂರ್ಣಗೊಳಿಸಬೇಕು. ಈ ಪ್ರಯಾಣವು ಛತ್ರಪತಿ ಶಿವಾಜಿ ಮಹಾರಾಜ್ ಅವರ ದೂರದೃಷ್ಟಿಯ ಭಾರತವನ್ನು ನಿರ್ಮಿಸುವ ಅವರ ಕನಸುಗಳನ್ನು ಸಾಕಾರಗೊಳಿಸುವ ಬಗ್ಗೆ ಇರುತ್ತದೆ. ಈ ಪ್ರಯಾಣವು 'ಸ್ವರಾಜ್' (ಸ್ವಯಮಾಡಳಿತ), 'ಸುಶಾಸನ' (ಉತ್ತಮ ಆಡಳಿತ) ಮತ್ತು 'ಆತ್ಮನಿರ್ಭರ' (ಸ್ವಾವಲಂಬನೆ) ಬಗ್ಗೆ ಇರುತ್ತದೆ. ಈ ಪ್ರಯಾಣವು ಅಭಿವೃದ್ಧಿ ಹೊಂದಿದ ಭಾರತದ ಬಗ್ಗೆ ಇರುತ್ತದೆ. ಮತ್ತೊಮ್ಮೆ, ಪಟ್ಟಾಭಿಷೇಕ ಸಮಾರಂಭದ 350 ನೇ ವರ್ಷದ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು - 'ಶಿವ ರಾಜ್ಯಾಭಿಷೇಕ'!

ಜೈ ಹಿಂದಿ, ಭಾರತ್ ಮಾತಾ ಕಿ ಜೈ!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Why The SHANTI Bill Makes Modi Government’s Nuclear Energy Push Truly Futuristic

Media Coverage

Why The SHANTI Bill Makes Modi Government’s Nuclear Energy Push Truly Futuristic
NM on the go

Nm on the go

Always be the first to hear from the PM. Get the App Now!
...
Chief Minister of Gujarat meets Prime Minister
December 19, 2025

The Chief Minister of Gujarat, Shri Bhupendra Patel met Prime Minister, Shri Narendra Modi today in New Delhi.

The Prime Minister’s Office posted on X;

“Chief Minister of Gujarat, Shri @Bhupendrapbjp met Prime Minister @narendramodi.

@CMOGuj”