ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದಿನ ತಮ್ಮ ಕರ್ನಾಟಕ ತಮ್ಮ ಭೇಟಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಕರ್ನಾಟಕದ ಮಂಡ್ಯ ಜಿಲ್ಲೆಯ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಉದ್ಘಾಟಿಸಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಪವಿತ್ರ ಸ್ಥಳವು ದೇಶದ ಕಾಲಾತೀತ ಆಧ್ಯಾತ್ಮಿಕ ನೀತಿ ಹಾಗೂ ಸೇವೆ ಮತ್ತು ಜ್ಞಾನದ ನಿರಂತರ ಸಂಪ್ರದಾಯಗಳಿಗೆ ಗೌರವ ಸೂಚಕವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ತಮ್ಮ ಭೇಟಿಯ ಸಮಯದಲ್ಲಿ, ಪ್ರಧಾನಮಂತ್ರಿಯವರು ಜ್ವಾಲಾ ಪೀಠಕ್ಕೂ ಭೇಟಿ ನೀಡಿ ಶ್ರೀ ಕಾಲಭೈರವ ದೇವಾಲದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರಿಗೂ ಪ್ರಧಾನಮಂತ್ರಿ ಗೌರವ ಸಲ್ಲಿಸಿದರು. ಅವರು ಆಧ್ಯಾತ್ಮಿಕತೆ ಮತ್ತು ಸೇವೆಯ ದಾರಿದೀಪವಾಗಿದ್ದರು, ಸಾಮಾಜಿಕ ಸಬಲೀಕರಣದಲ್ಲಿ ಅವರ ಶ್ಲಾಘನೀಯ ಪ್ರಯತ್ನಗಳು ಪ್ರಪಂಚದಾದ್ಯಂತ ಅಸಂಖ್ಯಾತರನ್ನು ತಲುಪಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ಶ್ರೀ ಮೋದಿ ಅವರು ಸರಣಿ ಎಕ್ಸ್ ಪೋಸ್ಟ್ಗಳಲ್ಲಿ ಹೀಗೆ ಹೇಳಿದ್ದಾರೆ:
“ಕರ್ನಾಟಕದ ಮಂಡ್ಯ ಜಿಲ್ಲೆಯ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಇಂದು ಬೆಳಗ್ಗೆ ಉದ್ಘಾಟಿಸಲಾಯಿತು.
ಈ ಪವಿತ್ರ ಸ್ಥಳವು ನಮ್ಮ ಭೂಮಿಯ ಕಾಲಾತೀತ ಆಧ್ಯಾತ್ಮಿಕ ನೀತಿ ಹಾಗೂ ಸೇವೆ ಮತ್ತು ವಿವೇಕದ ನಿರಂತರ ಸಂಪ್ರದಾಯಗಳಿಗೆ ಗೌರವ ಸೂಚಕವಾಗಿದೆ."
This morning, the Sri Guru Bhairavaikya Mandira was inaugurated at the Sri Adichunchanagiri Mahasamsthana Math in Mandya District, Karnataka.
— Narendra Modi (@narendramodi) April 15, 2026
This sacred space stands as a tribute to the timeless spiritual ethos and the enduring traditions of service and wisdom of our land. pic.twitter.com/VG435WyEUe
"ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ, ಜ್ವಾಲಾ ಪೀಠಕ್ಕೆ ಭೇಟಿ ನೀಡಿದೆ ಮತ್ತು ಶ್ರೀ ಕಾಲಭೈರವ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದೆ."




At the Sri Adichunchanagiri Mahasamsthana Math, visited the Jwala Peetha and prayed at Sri Kalabhairava Temple. pic.twitter.com/MPgiFqzdx2
— Narendra Modi (@narendramodi) April 15, 2026
“ಪರಮಪೂಜ್ಯ ಜಗದ್ಗುರುಗಳಿಗೆ ಗೌರವ ನಮನ ಸಲ್ಲಿಸಿದೆ”
"ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರು ಸಾಮಾಜಿಕ ಸಬಲೀಕರಣದಲ್ಲಿ ಶ್ಲಾಘನೀಯ ಪ್ರಯತ್ನಗಳನ್ನು ಮಾಡಿದ್ದು, ಅವರು ಆಧ್ಯಾತ್ಮಿಕತೆ ಮತ್ತು ಸೇವೆಯ ಸಂಕೇತವಾಗಿದ್ದಾರೆ. ಅವರ ಕಾರ್ಯವು ಪ್ರಪಂಚದಾದ್ಯಂತ ಅಸಂಖ್ಯಾತರನ್ನು ತಲುಪಿದೆ.”

Paid homage to His Holiness Jagadguru Paramapoojya
— Narendra Modi (@narendramodi) April 15, 2026
Sri Sri Sri Dr. Balagangadharanatha Mahaswamiji. He is a beacon of spirituality and service, who has made commendable efforts in societal empowerment. His work has touched countless lives across the world. pic.twitter.com/ZNQrsGkXSm
ಇಂದು ಬೆಳಗ್ಗೆ ಕರ್ನಾಟಕದ ಮಂಡ್ಯ ಜಿಲ್ಲೆಯ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಉದ್ಘಾಟಿಸಲಾಯಿತು.
— Narendra Modi (@narendramodi) April 15, 2026
ಈ ಪವಿತ್ರ ಕ್ಷೇತ್ರವು ನಮ್ಮ ನಾಡಿನ ಶಾಶ್ವತ ಆಧ್ಯಾತ್ಮಿಕ ನೀತಿ, ಸೇವೆ ಹಾಗೂ ಜ್ಞಾನದ ಅಮರ ಸಂಪ್ರದಾಯಗಳಿಗೆ ಸಲ್ಲಿಸುವ ಗೌರವದ ಸಂಕೇತವಾಗಿದೆ. pic.twitter.com/yIlrotFl3f
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಜ್ವಾಲಾ ಪೀಠಕ್ಕೆ ಭೇಟಿ ನೀಡಿ, ಶ್ರೀ ಕಾಲಭೈರವೇಶ್ವರ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. pic.twitter.com/2iS8ZUb1Yt
— Narendra Modi (@narendramodi) April 15, 2026
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರಿಗೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಲಾಯಿತು. ಆಧ್ಯಾತ್ಮ ಮತ್ತು ಸೇವೆಯ ಸಾಕಾರ ರೂಪದಂತಿರುವ ಅವರು ಸಮಾಜದ ಸಬಲೀಕರಣಕ್ಕಾಗಿ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ಅವರ ಲೋಕಕಲ್ಯಾಣದ ಕಾರ್ಯಗಳು ಜಗತ್ತಿನಾದ್ಯಂತ ಅಸಂಖ್ಯಾತ ಜನರ ಬದುಕಿನಲ್ಲಿ ಬೆಳಕಾಗಿವೆ. pic.twitter.com/wbzdbulv2I
— Narendra Modi (@narendramodi) April 15, 2026


