INS Vikrant is not just a warship, it is a testimony to 21st-century India's hard work, talent, impact and commitment: PM
INS Vikrant is a towering symbol of Aatmanirbhar Bharat and Made in India: PM
The extraordinary coordination among the three services together compelled Pakistan to surrender during Operation Sindoor: PM
Over the past decade, our defence forces have steadily moved towards becoming self-reliant: PM
Our goal is to make India one of the world's top defence exporters: PM
The Indian Navy stands as the guardian of the Indian Ocean: PM
Thanks to the valour and determination of our security forces, the nation has achieved a significant milestone, We are eliminating Maoist terrorism: PM

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಇಂದು ಅದ್ಭುತ ದಿನ, ಈ ಕ್ಷಣವನ್ನು ಮರೆಯಲಾಗದು, ಇವತ್ತಿನ ಈ ದೃಶ್ಯ ಅಸಾಧಾರಣವಾಗಿದೆ. ನನ್ನ ಒಂದು ಬದಿಯಲ್ಲಿ ವಿಶಾಲವಾದ ಅಮಿತ ಸಾಗರವಿದೆ, ಇನ್ನೊಂದು ಬದಿಯಲ್ಲಿ ಭಾರತ ಮಾತೆಯ ಧೈರ್ಯಶಾಲಿ ಸೈನಿಕರ ಅಪಾರ ಶಕ್ತಿಯೇ ಇದೆ. ನನ್ನ ಒಂದು ಬದಿಯಲ್ಲಿ ಅನಂತ ದಿಗಂತ ಮತ್ತು ಅಂತ್ಯ ಕಾಣದ ಆಗಸವಿದೆ, ಇನ್ನೊಂದು ಬದಿಯಲ್ಲಿ ತನ್ನೊಳಗೆ ಅನಂತ ಶಕ್ತಿಯನ್ನು ಸಾಕಾರಗೊಳಿಸುವ ಪ್ರಬಲ ಮತ್ತು ಭವ್ಯವಾದ ಐಎನ್ಎಸ್ ವಿಕ್ರಾಂತ್ ನೆಲೆ ನಿಂತಿದೆ. ಸಾಗರ ನೀರಿನ ಮೇಲೆ ಸೂರ್ಯನ ಬೆಳಕಿನ ಹೊಳಪು, ಒಂದು ರೀತಿಯಲ್ಲಿ, ನಮ್ಮ ಧೈರ್ಯಶಾಲಿ ಸೈನಿಕರು ಬೆಳಗಿದ ದೀಪಾವಳಿ ದೀಪಗಳಂತೆ ಕಾಣುತ್ತಿದ್ದಾರೆ. ಇವು ನಮ್ಮ ದೈವಿಕ ಬೆಳಕಿನ ಹಾರಗಳಾಗಿವೆ. ಈ ಬಾರಿ ನಾನು ನಮ್ಮ ನೌಕಾಪಡೆಯ ಅಪ್ರತಿಮ ಯೋಧರ ನಡುವೆ ದೀಪಾವಳಿಯ ಪವಿತ್ರ ಹಬ್ಬ ಆಚರಿಸುತ್ತಿರುವುದು ನನ್ನ ಪಾಲಿನ ದೊಡ್ಡ ಅದೃಷ್ಟವೇ ಆಗಿದೆ.

 

ಸ್ನೇಹಿತರೆ,

ನಿನ್ನೆ ನಾನು ಐ.ಎನ್.ಎಸ್ ವಿಕ್ರಾಂತ್‌ನಲ್ಲಿ ಕಳೆದ ರಾತ್ರಿಯ ಅನುಭವವನ್ನು ಕೇವಲ ಪದಗಳಲ್ಲಿ ವ್ಯಕ್ತಪಡಿಸುವುದು ಕಷ್ಟ. ನಿಮ್ಮೆಲ್ಲರಲ್ಲೂ ತುಂಬಿದ ಉತ್ಸಾಹ ಮತ್ತು ಚೈತನ್ಯವನ್ನು ನಾನು ನೋಡಿದೆ. ನಿನ್ನೆ ನೀವು ನಿಮ್ಮ ಸ್ವಂತ ಸೃಷ್ಟಿಯ ಹಾಡುಗಳನ್ನು ಹಾಡುವುದನ್ನು ನಾನು ನೋಡಿದಾಗ, ಮತ್ತು ಆ ಹಾಡುಗಳಲ್ಲಿ ನೀವು ಆಪರೇಷನ್ ಸಿಂಧೂರ್ ಅನ್ನು ವಿವರಿಸಿದ ರೀತಿ ... ಬಹುಶಃ ಯುದ್ಧಭೂಮಿಯಲ್ಲಿ ನಿಂತಿರುವ ಸೈನಿಕನಿಗೆ ಇರುವ ಭಾವನೆಗಳನ್ನು ಯಾವುದೇ ಕವಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಒಂದೆಡೆ, ನಾನು ನನ್ನ ಕಣ್ಣುಗಳ ಮುಂದೆ ಸೈನ್ಯದ ದೈತ್ಯ ಶಕ್ತಿಯನ್ನು ಕಂಡೆ.

ಸ್ನೇಹಿತರೆ,

ಈ ಮಹಾನ್ ಹಡಗುಗಳು, ಗಾಳಿಗಿಂತ ವೇಗವಾಗಿ ಹಾರುವ ಈ ವಿಮಾನಗಳು ಮತ್ತು ಈ ಜಲಾಂತರ್ಗಾಮಿ ನೌಕೆಗಳು ತಮ್ಮದೇ ಆದ ಸ್ಥಾನ ಹೊಂದಿವೆ. ಆದರೆ ನಿಮ್ಮ ಆತ್ಮ, ನಿಮ್ಮ ಉತ್ಸಾಹ, ಅವುಗಳಲ್ಲಿ ಜೀವ ತುಂಬುತ್ತದೆ. ಈ ಹಡಗುಗಳನ್ನು ಕಬ್ಬಿಣದಿಂದ ತಯಾರಿಸಿರಬಹುದು, ಆದರೆ ನೀವು ಅವುಗಳನ್ನು ಹತ್ತಿದಾಗ, ಅವು ಜೀವಂತ, ನಿರ್ಭೀತ ಶೌರ್ಯದ ಶಕ್ತಿಗಳಾಗುತ್ತವೆ. ನಾನು ನಿನ್ನೆಯಿಂದ ನಿಮ್ಮೊಂದಿಗಿದ್ದೇನೆ, ಪ್ರತಿ ಕ್ಷಣವೂ ನನಗೆ ಹೊಸದನ್ನು ಕಲಿಸಿದೆ, ನನಗೆ ಹೊಸದನ್ನು ತೋರಿಸಿದೆ. ನಾನು ದೆಹಲಿಯಿಂದ ಹೊರಟಾಗ, ನನ್ನ ಹೃದಯ ಈ ಕ್ಷಣವನ್ನು ಬದುಕಲು ಹಾತೊರೆಯುತ್ತಿತ್ತು.

ಆದರೆ ಸ್ನೇಹಿತರೆ,

ನಿಮ್ಮ ಕಠಿಣ ಪರಿಶ್ರಮ, ನಿಮ್ಮ ಸಮರ್ಪಣೆ, ನಿಮ್ಮ ಶಿಸ್ತು, ನಿಮ್ಮ ಭಕ್ತಿ, ಇವೆಲ್ಲವೂ ಎಷ್ಟು ಉನ್ನತ ಮಟ್ಟದಲ್ಲಿವೆಯೆಂದರೆ, ನಾನು ಅದನ್ನು ಸಂಪೂರ್ಣವಾಗಿ ಬದುಕಲು ಸಾಧ್ಯವಾಗಿಲ್ಲ. ಆದರೆ ನಾನು ಖಂಡಿತವಾಗಿಯೂ ಅದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು. ನಾನು ಅದನ್ನು ತಿಳಿದುಕೊಂಡಿದ್ದೇನೆ. ಆ ಜೀವನವನ್ನು ನಡೆಸುವುದು ಎಷ್ಟು ಕಷ್ಟ ಎಂದು ನಾನು ಊಹಿಸಬಲ್ಲೆ. ಆದರೆ ನಾನು ನಿಮ್ಮ ಹತ್ತಿರದಲ್ಲಿದ್ದಾಗ, ನಿಮ್ಮ ಉಸಿರನ್ನು ಅನುಭವಿಸಿದಾಗ, ನಿಮ್ಮ ಹೃದಯ ಬಡಿತವನ್ನು ಅನುಭವಿಸಿದಾಗ, ನಿನ್ನೆ ರಾತ್ರಿ ನಿಮ್ಮ ಕಣ್ಣುಗಳಲ್ಲಿ ಆ ಹೊಳಪು ನೋಡಿ, ನಾನು ಸ್ವಲ್ಪ ಬೇಗನೆ ಮಲಗಿದೆ, ಅದು ನನಗೆ ಸಾಮಾನ್ಯವಲ್ಲ. ಬಹುಶಃ ನಾನು ಬೇಗನೆ ನಿದ್ರಿಸಲು ಕಾರಣ ದಿನವಿಡೀ ನಿಮ್ಮೆಲ್ಲರನ್ನೂ ನೋಡಿದ ನಂತರ ನಾನು ಅನುಭವಿಸಿದ ಆಳವಾದ ಸಂತೃಪ್ತಿಯ ಭಾವನೆ. ಅದು ಕೇವಲ ನಿದ್ರೆಯಲ್ಲ, ಅದು ಆ ಆಂತರಿಕ ತೃಪ್ತಿಯಿಂದ ಹುಟ್ಟಿದ ನೆಮ್ಮದಿಯ ನಿದ್ರೆಯಾಗಿತ್ತು.

 

ಸ್ನೇಹಿತರೆ,

ಸಾಗರದ ಮೇಲಿನ ಆಳವಾದ ರಾತ್ರಿ ಮತ್ತು ಇಂದು ಬೆಳಗ್ಗೆ ಸೂರ್ಯೋದಯವು ನನ್ನ ದೀಪಾವಳಿಯನ್ನು ಹಲವು ವಿಧಗಳಲ್ಲಿ ವಿಶೇಷವಾಗಿಸಿದೆ. ಆದ್ದರಿಂದ ಮತ್ತೊಮ್ಮೆ, ನಾನು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ದೀಪಾವಳಿ ಶುಭಾಶಯಗಳನ್ನು ಕೋರುತ್ತೇನೆ! ನಿಮ್ಮೆಲ್ಲರಿಗೂ ಮತ್ತು ಐಎನ್ಎಸ್ ವಿಕ್ರಾಂತ್‌ನ ಈ ವೀರ ಭೂಮಿಯಿಂದ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಮತ್ತು ವಿಶೇಷವಾಗಿ ನಿಮ್ಮ ಕುಟುಂಬಗಳಿಗೂ ದೀಪಾವಳಿ ಶುಭಾಶಯಗಳನ್ನು ಸಲ್ಲಿಸುತ್ತೇನೆ!

ಸ್ನೇಹಿತರೆ,

ದೀಪಾವಳಿ ಹಬ್ಬವನ್ನು ಪ್ರತಿಯೊಬ್ಬರೂ ತಮ್ಮ ಕುಟುಂಬಗಳೊಂದಿಗೆ ಆಚರಿಸಲು ಬಯಸುತ್ತಾರೆ. ನಾನು ಕೂಡ ನನ್ನ ಕುಟುಂಬದೊಂದಿಗೆ ದೀಪಾವಳಿ ಆಚರಿಸಲು ಒಗ್ಗಿಕೊಂಡಿದ್ದೇನೆ. ನೀವೇ ನನ್ನ ಕುಟುಂಬವಾಗಿರುವುದರಿಂದ, ನಾನು ದೀಪಾವಳಿ ಆಚರಿಸಲು ನಿಮ್ಮೊಂದಿಗೆ ಇಲ್ಲಿಗೆ ಬಂದಿದ್ದೇನೆ. ನಾನು ಈ ದೀಪಾವಳಿಯನ್ನು ನನ್ನ ಕುಟುಂಬದೊಂದಿಗೆ ಆಚರಿಸುತ್ತಿದ್ದೇನೆ, ಹಾಗಾಗಿ, ಈ ದೀಪಾವಳಿ ನನಗೆ ತುಂಬಾ ವಿಶೇಷವಾಗಿದೆ.

ಸ್ನೇಹಿತರೆ,

ಐ.ಎನ್.ಎಸ್ ವಿಕ್ರಾಂತ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದಾಗ ನಾನು ಹೀಗೆ ಹೇಳಿದ್ದೆ: ವಿಕ್ರಾಂತ್ ವಿಶಾಲ, ಭವ್ಯ ಮತ್ತು ಅದ್ಭುತ ಎಂದು. ವಿಕ್ರಾಂತ್ ನಿಜಕ್ಕೂ ವಿಶಿಷ್ಟ, ಅದು ಅಸಾಧಾರಣ. ವಿಕ್ರಾಂತ್ ಕೇವಲ ಯುದ್ಧನೌಕೆಯಲ್ಲ, ಇದು 21ನೇ ಶತಮಾನದಲ್ಲಿ ಭಾರತದ ಕಠಿಣ ಪರಿಶ್ರಮ, ಪ್ರತಿಭೆ, ಪ್ರಭಾವ ಮತ್ತು ಬದ್ಧತೆಯ ಸಂಕೇತವಾಗಿದೆ. ಭಾರತವು ಸ್ಥಳೀಯ ಐ.ಎನ್.ಎಸ್ ವಿಕ್ರಾಂತ್ ಅನ್ನು ಸ್ವೀಕರಿಸಿದ ದಿನವನ್ನು ನೀವೆಲ್ಲರೂ ನೆನಪಿಸಿಕೊಳ್ಳುತ್ತೀರಿ, ನಮ್ಮ ನೌಕಾಪಡೆಯು ವಸಾಹತುಶಾಹಿಯ ಪ್ರಮುಖ ಸಂಕೇತವನ್ನು ಸಹ ಕೈಬಿಟ್ಟಿತು. ಛತ್ರಪತಿ ಶಿವಾಜಿ ಮಹಾರಾಜರಿಂದ ಪ್ರೇರಿತವಾಗಿ, ನಮ್ಮ ನೌಕಾಪಡೆಯು ಹೊಸ ನೌಕಾ ಧ್ವಜವನ್ನು ಅಳವಡಿಸಿಕೊಂಡಿದೆ. ಛತ್ರಪತಿ ಶಿವಾಜಿ ಮಹಾರಾಜ್ ಕಿ ಜೈ! ಛತ್ರಪತಿ ಶಿವಾಜಿ ಮಹಾರಾಜ್ ಕಿ ಜೈ! ಛತ್ರಪತಿ ಶಿವಾಜಿ ಮಹಾರಾಜ್ ಕಿ ಜೈ!

ನಮ್ಮ ಐ.ಎನ್.ಎಸ್ ವಿಕ್ರಾಂತ್ ಇಂದು 'ಆತ್ಮನಿರ್ಭರ ಭಾರತ'(ಸ್ವಾವಲಂಬಿ ಭಾರತ) ಮತ್ತು 'ಭಾರತದಲ್ಲಿ ತಯಾರಿಸಲ್ಪಟ್ಟಿದೆ' ಎಂಬ ಪ್ರಬಲ ಸಂಕೇತ ಹೊಂದಿದೆ. ಸಾಗರದ ಮೂಲಕ ಸಾಗುವ ಸ್ಥಳೀಯ ಐ.ಎನ್.ಎಸ್ ವಿಕ್ರಾಂತ್ ಭಾರತದ ಸೇನಾಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಕೆಲವೇ ತಿಂಗಳ ಹಿಂದೆ, ವಿಕ್ರಾಂತ್ ಎಂಬ ಹೆಸರೇ ಪಾಕಿಸ್ತಾನದಾದ್ಯಂತ ಆಘಾತಕಾರಿ ಅಲೆಗಳನ್ನು ಎಬ್ಬಿಸಿ, ರಾತ್ರಿಯಲ್ಲಿ ಅವರ ನಿದ್ರೆ ಹಾಳು ಮಾಡಿದ್ದನ್ನು ನಾವು ನೋಡಿದ್ದೇವೆ. ಅಂತಹ ಐಎನ್ಎಸ್ ವಿಕ್ರಾಂತ್, ಶತ್ರುಗಳ ಧೈರ್ಯವನ್ನು ಹತ್ತಿಕ್ಕುವ ಏಕೈಕ ಹೆಸರು. ಅದು ಐ.ಎನ್.ಎಸ್ ವಿಕ್ರಾಂತ್! ಅದು ಐ.ಎನ್.ಎಸ್ ವಿಕ್ರಾಂತ್! ಅದು ಐ.ಎನ್.ಎಸ್ ವಿಕ್ರಾಂತ್!

 

ಸ್ನೇಹಿತರೆ,

ಈ ಸಂದರ್ಭದಲ್ಲಿ, ನಾನು ವಿಶೇಷವಾಗಿ ನಮ್ಮ ಸಶಸ್ತ್ರ ಪಡೆಗಳಿಗೆ ನಮಸ್ಕರಿಸಲು ಬಯಸುತ್ತೇನೆ. ಭಾರತೀಯ ನೌಕಾಪಡೆಯು ಸೃಷ್ಟಿಸಿದ ಭಯ, ಭಾರತೀಯ ವಾಯುಪಡೆಯು ತೋರಿಸಿದ ಅಸಾಧಾರಣ ಕೌಶಲ್ಯ ಮತ್ತು ಭಾರತೀಯ ಸೇನೆಯ ಶೌರ್ಯ ಮತ್ತು 3 ಪಡೆಗಳ ಗಮನಾರ್ಹ ಸಮನ್ವಯವು ಆಪರೇಷನ್ ಸಿಂದೂರ್ ಸಮಯದಲ್ಲಿ ಪಾಕಿಸ್ತಾನವನ್ನು ಇಷ್ಟು ಬೇಗ ಶರಣಾಗುವಂತೆ ಮಾಡಿತು. ಆದ್ದರಿಂದ, ಸ್ನೇಹಿತರೆ, ಮತ್ತೊಮ್ಮೆ, ಈ ಪವಿತ್ರ ಸೇವಾ ಸ್ಥಳದಿಂದ, ಐಎನ್ಎಸ್ ವಿಕ್ರಾಂತ್‌ನಲ್ಲಿರುವ ಈ ಶೌರ್ಯದ ಭೂಮಿಯಿಂದ, ನಾನು 3 ಸಶಸ್ತ್ರ ಪಡೆಗಳ ಧೈರ್ಯಶಾಲಿ ಸೈನಿಕರಿಗೆ ನಮಸ್ಕರಿಸುತ್ತೇನೆ.

ಸ್ನೇಹಿತರೆ,

ಶತ್ರುಗಳು ಕಣ್ಣಿಗೆ ಬಿದ್ದಾಗ, ಯುದ್ಧ ಸನ್ನಿಹಿತವಾದಾಗ, ಸ್ವಂತವಾಗಿ ಹೋರಾಡುವ ಶಕ್ತಿ ಹೊಂದಿರುವ ವ್ಯಕ್ತಿಯ ಸ್ಥಾನ ಯಾವಾಗಲೂ ಬಲವಾಗಿರುತ್ತದೆ. ಪಡೆಗಳು ಬಲವಾಗಿರುವಾಗ, ಅವರು ಸ್ವಾವಲಂಬಿಗಳಾಗುವುದು ಅತ್ಯಗತ್ಯ. ಈ ಧೈರ್ಯಶಾಲಿ ಸೈನಿಕರು ಈ ಮಣ್ಣಿನಿಂದಲೇ ಹುಟ್ಟಿ, ಅದರಲ್ಲಿ ಬೆಳೆದಿದ್ದಾರೆ. ಅವರು ಯಾರ ಮಡಿಲಿನಿಂದ ಜನಿಸಿದರೋ ಆ ತಾಯಿಯೂ ಇದೇ ಮಣ್ಣಿನಲ್ಲಿಯೇ ಪೋಷಿಸುತ್ತಿದ್ದಾಳೆ. ಅದಕ್ಕಾಗಿಯೇ ಅವರು ಆಂತರಿಕ ಸ್ಫೂರ್ತಿಯನ್ನು ಹೊಂದಿದ್ದಾರೆ, ಈ ಮಾತೃಭೂಮಿಯ ಗೌರವಕ್ಕಾಗಿ ತಮ್ಮ ಎಲ್ಲವನ್ನೂ, ತಮ್ಮ ಜೀವನವನ್ನು ಸಹ ನೀಡುವ ಸ್ಫೂರ್ತಿ ಹೊಂದಿದ್ದಾರೆ. ನಾನು ಪ್ರಪಂಚದಾದ್ಯಂತದ ಬಲಿಷ್ಠ, ಎತ್ತರದ ಸೈನಿಕರನ್ನು ಕರೆತಂದು ಅವರಿಗೆ ಎಲ್ಲಾ ಹಣವನ್ನು ಅರ್ಪಿಸಿದರೂ, ಅವರು ನಿಮ್ಮಂತೆ ಸಾಯಲು ಸಿದ್ಧರಿರುತ್ತಾರೆಯೇ? ನಿಮ್ಮಂತೆಯೇ ಅವರು ಎಲ್ಲವನ್ನೂ ನೀಡುತ್ತಾರೆಯೇ? ಭಾರತೀಯರಾಗಿರುವುದರಿಂದ ಬರುವ ಶಕ್ತಿ, ನಿಮ್ಮ ಜೀವನವು ಭಾರತದ ಮಣ್ಣಿನಲ್ಲೇ ಆಳವಾಗಿ ಬೇರೂರಿರುವುದರಿಂದ, ಅದೇ ರೀತಿ, ಪ್ರತಿಯೊಂದು ಉಪಕರಣ, ಪ್ರತಿಯೊಂದು ಆಯುಧ, ಪ್ರತಿಯೊಂದು ಘಟಕವು ಭಾರತೀಯವಾಗುವುದರಿಂದ, ನಮ್ಮ ಶಕ್ತಿ ಹಲವು ಪಟ್ಟು ಹೆಚ್ಚಾಗುತ್ತದೆ. ಕಳೆದ ದಶಕದಲ್ಲಿ ನಮ್ಮ ಸಶಸ್ತ್ರ ಪಡೆಗಳು ಸ್ವಾವಲಂಬನೆಯತ್ತ ತ್ವರಿತ ಹೆಜ್ಜೆಗಳನ್ನು ಇಟ್ಟಿವೆ ಎಂದು ನಾವು ಹೆಮ್ಮೆಪಡುತ್ತೇವೆ. ನಮ್ಮ ಸಶಸ್ತ್ರ ಪಡೆಗಳು ಸಾವಿರಾರು ವಸ್ತುಗಳ ಪಟ್ಟಿಯಲ್ಲಿ ತಯಾರಿಸಲ್ಪಟ್ಟಿವೆ, ಅವುಗಳನ್ನು ಇನ್ನು ಮುಂದೆ ಆಮದು ಮಾಡಿಕೊಳ್ಳಬೇಕಿಲ್ಲ ಎಂದು ನಿರ್ಧರಿಸಿದವು. ಇದರ ಪರಿಣಾಮವಾಗಿ, ಪಡೆಗಳಿಗೆ ಅಗತ್ಯವಾದ ಹೆಚ್ಚಿನ ಉಪಕರಣಗಳನ್ನು ಈಗ ದೇಶದೊಳಗೆ ಉತ್ಪಾದಿಸಲಾಗುತ್ತಿದೆ. ಕಳೆದ 11 ವರ್ಷಗಳಲ್ಲಿ, ನಮ್ಮ ರಕ್ಷಣಾ ಉತ್ಪಾದನೆಯು 3 ಪಟ್ಟು ಹೆಚ್ಚಾಗಿದೆ. ಕಳೆದ ವರ್ಷವಷ್ಟೇ ಇದು 1.5 ಲಕ್ಷ ಕೋಟಿ ರೂಪಾಯಿಗಳ ದಾಖಲೆಯನ್ನು ದಾಟಿದೆ. ಇನ್ನೊಂದು ಉದಾಹರಣೆಯನ್ನು ನಾನು ದೇಶದೊಂದಿಗೆ ಹಂಚಿಕೊಳ್ಳುತ್ತೇನೆ. 2014ರಿಂದ, ಭಾರತೀಯ ನೌಕಾಪಡೆಯು ಭಾರತೀಯ ಹಡಗುಕಟ್ಟೆಗಳಿಂದ 40ಕ್ಕೂ ಹೆಚ್ಚು ಸ್ಥಳೀಯ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳನ್ನು ಪಡೆದುಕೊಂಡಿದೆ. ನನ್ನ ಮಾತು ಕೇಳುತ್ತಿರುವ ಎಲ್ಲಾ ಭಾರತೀಯರು ಈ ಸಂಖ್ಯೆಯನ್ನು ನೆನಪಿಡಿ. ನೀವು ಇದನ್ನು ಕೇಳಿದ ನಂತರ, ನಿಮ್ಮ ದೀಪಾವಳಿ ದೀಪಗಳ ಬೆಳಕು ಇನ್ನಷ್ಟು ಪ್ರಕಾಶಮಾನವಾಗಿ ಬೆಳಗುತ್ತದೆ ಎಂಬ ವಿಶ್ವಾಸ ನನಗಿದೆ. ಇಂದು ನಮ್ಮ ಸಾಮರ್ಥ್ಯ ಏನು? ಸರಾಸರಿ, ಪ್ರತಿ 40 ದಿನಗಳಿಗೊಮ್ಮೆ ನೌಕಾಪಡೆಗೆ ಒಂದು ಹೊಸ ಸ್ಥಳೀಯ ಯುದ್ಧನೌಕೆ ಅಥವಾ ಜಲಾಂತರ್ಗಾಮಿ ನೌಕೆಯನ್ನು ಸೇರಿಸಲಾಗುತ್ತಿದೆ. ಪ್ರತಿ 40 ದಿನಗಳಿಗೊಮ್ಮೆ!

ಸ್ನೇಹಿತರೆ,

ಬ್ರಹ್ಮೋಸ್ ಮತ್ತು ಆಕಾಶ್‌ನಂತಹ ನಮ್ಮ ಕ್ಷಿಪಣಿಗಳು ಆಪರೇಷನ್ ಸಿಂದೂರ್‌ನಲ್ಲೂ ತಮ್ಮ ಸಾಮರ್ಥ್ಯಗಳನ್ನು ಸಾಬೀತುಪಡಿಸಿವೆ. ಬ್ರಹ್ಮೋಸ್ - ಕೇವಲ ಹೆಸರೇ ಭಯ ಉಂಟುಮಾಡುತ್ತದೆ. ಜನರು ಬ್ರಹ್ಮೋಸ್ ಬರುತ್ತಿದೆ ಎಂದು ಕೇಳಿದ ಕ್ಷಣ, ಅನೇಕರು ಚಿಂತೆ ಮಾಡಲು ಪ್ರಾರಂಭಿಸುತ್ತಾರೆ! ಈಗ, ವಿಶ್ವಾದ್ಯಂತದ ಹಲವಾರು ದೇಶಗಳು ಈ ಕ್ಷಿಪಣಿಗಳನ್ನು ಖರೀದಿಸಲು ಬಯಸುತ್ತಿವೆ. ನಾನು ವಿಶ್ವ ನಾಯಕರನ್ನು ಭೇಟಿಯಾದಾಗಲೆಲ್ಲಾ, ಅನೇಕರು ತಮಗೆ ಅವು ಬೇಕು ಎಂಬ ಬಯಕೆ ವ್ಯಕ್ತಪಡಿಸುತ್ತಾರೆ! ಭಾರತವು ಈಗ 3 ಸೇವೆಗಳಿಗೆ ಶಸ್ತ್ರಾಸ್ತ್ರಗಳು ಮತ್ತು ರಕ್ಷಣಾ ಸಾಧನಗಳನ್ನು ರಫ್ತು ಮಾಡುವ ಸಾಮರ್ಥ್ಯ ಹೊಂದಿದೆ. ಭಾರತವನ್ನು ವಿಶ್ವದ ಅಗ್ರ ರಕ್ಷಣಾ ರಫ್ತುದಾರರಲ್ಲಿ ಇರಿಸುವುದು ನಮ್ಮ ಗುರಿಯಾಗಿದೆ. ಕಳೆದ ದಶಕದಲ್ಲಿ, ನಮ್ಮ ರಕ್ಷಣಾ ರಫ್ತುಗಳು 30 ಪಟ್ಟು ಹೆಚ್ಚು ಬೆಳೆದಿವೆ! ಈ ಯಶಸ್ಸಿನ ಹಿಂದೆ ನಮ್ಮ ರಕ್ಷಣಾ ವಲಯದ ನವೋದ್ಯಮಗಳು ಮತ್ತು ದೇಶೀಯ ರಕ್ಷಣಾ ಉತ್ಪಾದನಾ ಘಟಕಗಳು ವಹಿಸಿದ ದೊಡ್ಡ ಪಾತ್ರವಿದೆ. ನಮ್ಮ ನವೋದ್ಯಮಗಳು ಸಹ ಇಂದು ಉತ್ತಮ ಶಕ್ತಿ ಮತ್ತು ನಾವೀನ್ಯತೆಯನ್ನು ತೋರಿಸುತ್ತಿವೆ!

ಸ್ನೇಹಿತರೆ,

ಶಕ್ತಿ ಮತ್ತು ಸಾಮರ್ಥ್ಯದ ವಿಷಯಕ್ಕೆ ಬಂದಾಗ, ಭಾರತವು ಯಾವಾಗಲೂ ಈ ಸಂಪ್ರದಾಯವನ್ನು ಅನುಸರಿಸಿದೆ: ಜ್ಞಾನಾಯ ದಾನಾಯ ಚ ರಕ್ಷಣಾಯ! ಅಂದರೆ, ಜ್ಞಾನ, ಸಮೃದ್ಧಿ ಮತ್ತು ಶಕ್ತಿ ಮತ್ತು ಎಲ್ಲವೂ ಮಾನವತೆಯ ಸೇವೆ ಮತ್ತು ರಕ್ಷಣೆಗಾಗಿ. ಇಂದು ಈ ಪರಸ್ಪರ ಸಂಪರ್ಕಿತ ಜಗತ್ತಿನಲ್ಲಿ, ಜಾಗತಿಕ ಆರ್ಥಿಕತೆಗಳು ಮತ್ತು ಅಭಿವೃದ್ಧಿಯು ಸಮುದ್ರ ವ್ಯಾಪಾರ ಮಾರ್ಗಗಳ ಮೇಲೆ ಹೆಚ್ಚು ಅವಲಂಬಿತವಾಗಿರುವಾಗ, ಭಾರತೀಯ ನೌಕಾಪಡೆಯು ಜಾಗತಿಕ ಸ್ಥಿರತೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಇಂದು ವಿಶ್ವದ ತೈಲ ಪೂರೈಕೆಯ 66% ಮತ್ತು ಜಾಗತಿಕ ಕಂಟೇನರ್ ಸಾಗಣೆಯ 50% ಹಿಂದೂ ಮಹಾಸಾಗರದ ಮೂಲಕ ಹಾದು ಹೋಗುತ್ತದೆ. ಈ ಮಾರ್ಗಗಳನ್ನು ಸುರಕ್ಷಿತಗೊಳಿಸುವಲ್ಲಿ, ಭಾರತೀಯ ನೌಕಾಪಡೆಯು ಹಿಂದೂ ಮಹಾಸಾಗರದ ಕಾವಲುಗಾರನಂತೆ ಕಾವಲು ಕಾಯುತ್ತಿದೆ. ನೀವು ಈ ಕೆಲಸವನ್ನು ಮಾಡುತ್ತಿದ್ದೀರಿ. ಇದಲ್ಲದೆ, ಭಾರತೀಯ ನೌಕಾಪಡೆಯು ಈ ಇಡೀ ಪ್ರದೇಶದಲ್ಲಿ ಮಿಷನ್ ಆಧಾರಿತ ನಿಯೋಜನೆಗಳು, ಕಡಲ್ಗಳ್ಳತನ ಪ್ರತಿಬಂಧಕ ಗಸ್ತು ಮತ್ತು ಮಾನವೀಯ ನೆರವು ಕಾರ್ಯಾಚರಣೆಗಳ ಮೂಲಕ ಜಾಗತಿಕ ಭದ್ರತಾ ಪಾಲುದಾರನಾಗಿ ಕಾರ್ಯ ನಿರ್ವಹಿಸುತ್ತಿದೆ.

 

ಸ್ನೇಹಿತರೆ,

ನಮ್ಮ ದ್ವೀಪಗಳ ಭದ್ರತೆ ಮತ್ತು ಸಮಗ್ರತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ನಮ್ಮ ನೌಕಾಪಡೆ ಪ್ರಮುಖ ಪಾತ್ರ ವಹಿಸುತ್ತಿದೆ. ಕೆಲವು ಸಮಯದ ಹಿಂದೆ, ಗಣರಾಜ್ಯೋತ್ಸವದಂದು ದೇಶದ ಪ್ರತಿಯೊಂದು ದ್ವೀಪದಲ್ಲಿ ತ್ರಿವರ್ಣ ಧ್ವಜ ಹಾರಿಸಬೇಕೆಂದು ನಾವು ನಿರ್ಧರಿಸಿದ್ದೇವೆ. ನೌಕಾಪಡೆಯು ಪ್ರತಿ ಜನವರಿ 26ರಂದು ಈ ನಿರ್ಣಯವನ್ನು ಬಹಳ ಹೆಮ್ಮೆ ಮತ್ತು ಗೌರವದಿಂದ ಪೂರೈಸುತ್ತಿದೆ. ಅದಕ್ಕಾಗಿ ನಾನು ನಮ್ಮ ನೌಕಾಪಡೆಯನ್ನು ಅಭಿನಂದಿಸುತ್ತೇನೆ. ಇಂದು ಭಾರತೀಯ ನೌಕಾಪಡೆಯು ಭಾರತದ ಪ್ರತಿಯೊಂದು ದ್ವೀಪದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದೆ.

ಸ್ನೇಹಿತರೆ,

ಭಾರತವು ವೇಗವಾಗಿ ಮುಂದುವರಿಯುತ್ತಿದ್ದಂತೆ, ಜಾಗತಿಕ ದಕ್ಷಿಣದ ಎಲ್ಲಾ ದೇಶಗಳು ನಮ್ಮೊಂದಿಗೆ ಪ್ರಗತಿ ಸಾಧಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಶ್ರಮಿಸುತ್ತಿದ್ದೇವೆ. ಇದಕ್ಕಾಗಿ, ನಾವು "ಸಾಗರ್ - ಕಡಲ ದೃಷ್ಟಿ"ಯಲ್ಲಿ ವೇಗವಾಗಿ ಕೆಲಸ ಮಾಡುತ್ತಿದ್ದೇವೆ. ನಾವು ಅನೇಕ ರಾಷ್ಟ್ರಗಳಿಗೆ ಅಭಿವೃದ್ಧಿ ಪಾಲುದಾರರಾಗುತ್ತಿದ್ದೇವೆ. ಅಗತ್ಯ ಬಿದ್ದಾಗ, ಪ್ರಪಂಚದ ಎಲ್ಲಿಯಾದರೂ ಮಾನವೀಯ ಸಹಾಯ ನೀಡಲು ನಾವು ಸಿದ್ಧರಿದ್ದೇವೆ. ಆಫ್ರಿಕಾದಿಂದ ಆಗ್ನೇಯ ಏಷ್ಯಾದವರೆಗೆ, ವಿಪತ್ತು ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಜಗತ್ತು ಈಗ ಭಾರತವನ್ನು ನಿಜವಾದ ಜಾಗತಿಕ ಸ್ನೇಹಿತನಾಗಿ ನೋಡುತ್ತಿದೆ. 2014ರಲ್ಲಿ, ನಮ್ಮ ನೆರೆಯ ದೇಶ ಮಾಲ್ಡೀವ್ಸ್ ಕುಡಿಯುವ ನೀರಿನ ಬಿಕ್ಕಟ್ಟು ಎದುರಿಸಿದಾಗ, ನಾವು ಆಪರೇಷನ್ ಜಲ ಪ್ರಾರಂಭಿಸಿದೆವು, ನಮ್ಮ ನೌಕಾಪಡೆಯು ಶುದ್ಧ ನೀರಿನ ಸರಬರಾಜಿನೊಂದಿಗೆ ಅಲ್ಲಿಗೆ ತಲುಪಿತು. 2017ರಲ್ಲಿ ಶ್ರೀಲಂಕಾವು ವಿನಾಶಕಾರಿ ಪ್ರವಾಹಕ್ಕೆ ಒಳಗಾದಾಗ, ಭಾರತವು ಮೊದಲು ಸಹಾಯಹಸ್ತ ಚಾಚಿತು. 2018ರಲ್ಲಿ, ಸುನಾಮಿ ಇಂಡೋನೇಷ್ಯಾವನ್ನು ಅಪ್ಪಳಿಸಿದಾಗ, ಭಾರತವು ರಕ್ಷಣೆ ಮತ್ತು ಪರಿಹಾರ ಪ್ರಯತ್ನಗಳಲ್ಲಿ ಇಂಡೋನೇಷ್ಯಾದ ಜನರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿತು. ಅದೇ ರೀತಿ, ಮ್ಯಾನ್ಮಾರ್‌ ಭೂಕಂಪವಾಗಲಿ, 2019ರಲ್ಲಿ ಮೊಜಾಂಬಿಕ್ ಮತ್ತು 2020ರಲ್ಲಿ ಮಡಗಾಸ್ಕರ್‌ ಬಿಕ್ಕಟ್ಟುಗಳಾಗಲಿ, ಭಾರತವು ಸೇವಾ ಮನೋಭಾವ ಮತ್ತು ಕರುಣೆಯ ಮನೋಭಾವದಿಂದ ಎಲ್ಲೆಡೆ ತಲುಪಿದೆ.

ಸ್ನೇಹಿತರೆ,

ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ನಮ್ಮ ಸಶಸ್ತ್ರ ಪಡೆಗಳು ಕಾಲಕಾಲಕ್ಕೆ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿವೆ. ಯೆಮೆನ್‌ನಿಂದ ಸುಡಾನ್‌ವರೆಗೆ, ಅಗತ್ಯವಿರುವಲ್ಲೆಲ್ಲಾ, ನಿಮ್ಮ ಧೈರ್ಯ ಮತ್ತು ಶೌರ್ಯವು ಪ್ರಪಂಚದಾದ್ಯಂತ ವಾಸಿಸುವ ಭಾರತೀಯರ ನಂಬಿಕೆಯನ್ನು ಬಲಪಡಿಸಿದೆ. ನಾವು ನಮ್ಮ ಸಾವಿರಾರು ನಾಗರಿಕರನ್ನು ರಕ್ಷಿಸಿದ್ದಲ್ಲದೆ, ಆ ದೇಶಗಳಲ್ಲಿ ಸಿಲುಕಿರುವ ಇತರ ರಾಷ್ಟ್ರಗಳ ನಾಗರಿಕರನ್ನು ರಕ್ಷಿಸಿ ಸುರಕ್ಷಿತವಾಗಿ ಮನೆಗೆ ಕರೆತಂದಿದ್ದೇವೆ.

ಸ್ನೇಹಿತರೆ,

ನಮ್ಮ ಮಿಲಿಟರಿ ಪಡೆಗಳು ಭೂಮಿಯಲ್ಲಿ, ಸಮುದ್ರದಲ್ಲಿ ಮತ್ತು ಗಾಳಿಯಲ್ಲಿ, ಸಂಪೂರ್ಣ ಸಮರ್ಪಣೆ, ಸೂಕ್ಷ್ಮತೆ ಮತ್ತು ಭಕ್ತಿಯಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸಿವೆ. ಸಮುದ್ರದಲ್ಲಿ, ನಮ್ಮ ನೌಕಾಪಡೆಯು ರಾಷ್ಟ್ರದ ಸಮುದ್ರ ಗಡಿಗಳು ಮತ್ತು ವ್ಯಾಪಾರ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ. ಆಕಾಶದಲ್ಲಿ, ನಮ್ಮ ವಾಯುಪಡೆಯು ಭಾರತದ ಭದ್ರತೆಗೆ ಯಾವಾಗಲೂ ಬದ್ಧವಾಗಿದೆ. ಭೂಮಿಯ ಮೇಲೆ, ಸುಡುವ ಮರುಭೂಮಿಗಳಿಂದ ಹಿಮಾವೃತ ಹಿಮನದಿಗಳವರೆಗೆ, ನಮ್ಮ ಸೈನ್ಯ, ಬಿಎಸ್‌ಎಫ್ ಮತ್ತು ಐಟಿಬಿಪಿ ಸಿಬ್ಬಂದಿ ಮುರಿಯಲಾಗದ ತಡೆಗೋಡೆಯಂತೆ ನಿಂತಿದ್ದಾರೆ. ಅದೇ ರೀತಿ, ವಿವಿಧ ರಂಗಗಳಲ್ಲಿ, ಎಸ್‌ಎಸ್‌ಬಿ, ಅಸ್ಸಾಂ ರೈಫಲ್ಸ್, ಸಿಆರ್‌ಪಿಎಫ್, ಸಿಐಎಸ್‌ಎಫ್ ಮತ್ತು ನಮ್ಮ ಗುಪ್ತಚರ ಸಂಸ್ಥೆಗಳು ಭಾರತ ಮಾತೆಯ ಸೇವೆಯಲ್ಲಿ ಒಂದೇ ಘಟಕವಾಗಿ ಸರಾಗವಾಗಿ ಕಾರ್ಯ ನಿರ್ವಹಿಸುತ್ತವೆ. ನಮ್ಮ ಕರಾವಳಿಯನ್ನು ಹಗಲು ರಾತ್ರಿ ಸುರಕ್ಷಿತವಾಗಿಡಲು ನೌಕಾಪಡೆಯೊಂದಿಗೆ ಪರಿಪೂರ್ಣ ಸಮನ್ವಯದಿಂದ ಕಾರ್ಯ ನಿರ್ವಹಿಸುವ ಭಾರತೀಯ ಕರಾವಳಿ ಕಾವಲು ಪಡೆಯನ್ನು ಶ್ಲಾಘಿಸಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ. ರಾಷ್ಟ್ರೀಯ ರಕ್ಷಣೆಯ ಈ ಮಹಾ ಧ್ಯೇಯಕ್ಕೆ ಅವರ ಕೊಡುಗೆ ನಿಜಕ್ಕೂ ಅಪಾರ.

 

ಸ್ನೇಹಿತರೆ,

ನಮ್ಮ ಭದ್ರತಾ ಪಡೆಗಳ ಶೌರ್ಯ ಮತ್ತು ಧೈರ್ಯದಿಂದಾಗಿ ದೇಶವು ಇತ್ತೀಚಿನ ವರ್ಷಗಳಲ್ಲಿ ಮತ್ತೊಂದು ಪ್ರಮುಖ ಯಶಸ್ಸನ್ನು ಸಾಧಿಸಿದೆ,  ಈ ಸಾಧನೆಯೆಂದರೆ ಮಾವೋವಾದಿ ಭಯೋತ್ಪಾದನೆಯ ನಿರ್ಮೂಲನೆ. ಇಂದು ದೇಶವು ನಕ್ಸಲೀಯ-ಮಾವೋವಾದಿ ಹಿಂಸಾಚಾರದಿಂದ ಸಂಪೂರ್ಣ ಸ್ವಾತಂತ್ರ್ಯದ ಅಂಚಿನಲ್ಲಿದೆ, ಆ ವಿಮೋಚನೆಯು ಬಾಗಿಲು ತಟ್ಟುತ್ತಿದೆ! ಸ್ನೇಹಿತರೆ, 2014ಕ್ಕಿಂತ ಮೊದಲು, ದೇಶದ ಸುಮಾರು 125 ಜಿಲ್ಲೆಗಳು ಮಾವೋವಾದಿ ಹಿಂಸಾಚಾರದಿಂದ ಪ್ರಭಾವಿತವಾಗಿದ್ದವು. ಕಳೆದ 10 ವರ್ಷಗಳಲ್ಲಿ, ಈ ಸಂಖ್ಯೆ 125 ಜಿಲ್ಲೆಗಳಿಂದ ಕೇವಲ 11ಕ್ಕೆ ಇಳಿಯುತ್ತ ಬಂದಿದೆ, ಆದರೆ ಇವುಗಳಲ್ಲಿ ಕೇವಲ 3 ಜಿಲ್ಲೆಗಳು ಮಾತ್ರ ತಮ್ಮ ಪ್ರಭಾವದ ಕುರುಹುಗಳನ್ನು ತೋರಿಸುತ್ತಿವೆ. 125ರಲ್ಲಿ ಕೇವಲ 3 ಜಿಲ್ಲೆಗಳು ಮಾತ್ರ ಉಳಿದಿವೆ! ಮೊದಲ ಬಾರಿಗೆ, 100ಕ್ಕೂ ಹೆಚ್ಚು ಜಿಲ್ಲೆಗಳು ಈಗ ಮಾವೋವಾದಿ ಭಯೋತ್ಪಾದನೆಯಿಂದ ಸಂಪೂರ್ಣವಾಗಿ ಮುಕ್ತವಾಗಿವೆ, ಸ್ವಾತಂತ್ರ್ಯದ ತಾಜಾ ಗಾಳಿಯನ್ನು ಉಸಿರಾಡುತ್ತಿವೆ, ನಿಜಕ್ಕೂ ಸಂತೋಷದಾಯಕ ದೀಪಾವಳಿ ಆಚರಿಸುತ್ತಿವೆ. ತಲೆಮಾರುಗಳ ಭಯ ಮತ್ತು ಹಿಂಸಾಚಾರದ ನಂತರ, ಲಕ್ಷಾಂತರ ಜನರು ಈಗ ಅಭಿವೃದ್ಧಿಯ ಮುಖ್ಯವಾಹಿನಿಗೆ ಕಾಲಿಡುತ್ತಿದ್ದಾರೆ. ಒಂದು ಕಾಲದಲ್ಲಿ ಮಾವೋವಾದಿಗಳು ರಸ್ತೆಗಳು, ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸದಂತೆ ತಡೆದ, ಅಸ್ತಿತ್ವದಲ್ಲಿರುವ ಶಾಲೆಗಳನ್ನು ಸ್ಫೋಟಿಸಿದ ಮತ್ತು ವೈದ್ಯರನ್ನು ಗುಂಡಿಕ್ಕಿ ಕೊಂದ ಮತ್ತು ಮೊಬೈಲ್ ಟವರ್‌ಗಳನ್ನು ಸಹ ಸ್ಥಾಪಿಸಲು ಅನುಮತಿ ನೀಡದ ಪ್ರದೇಶಗಳಲ್ಲಿ ಇಂದು ಹೆದ್ದಾರಿಗಳು ನಿರ್ಮಾಣವಾಗುತ್ತಿವೆ, ಕೈಗಾರಿಕೆಗಳು ಹುಟ್ಟಿಕೊಳ್ಳುತ್ತಿವೆ, ಶಾಲೆಗಳು ಮತ್ತು ಆಸ್ಪತ್ರೆಗಳು ಮಕ್ಕಳ ಭವಿಷ್ಯ ರೂಪಿಸುತ್ತಿವೆ. ಈ ಯಶಸ್ಸು ಸಂಪೂರ್ಣವಾಗಿ ನಮ್ಮ ಭದ್ರತಾ ಪಡೆಗಳ ತ್ಯಾಗ, ಸಮರ್ಪಣೆ ಮತ್ತು ಧೈರ್ಯಕ್ಕೆ ಸಾಕ್ಷಿಯಾಗಿದೆ. ಈ ವರ್ಷ ಈ ಹಲವು ಜಿಲ್ಲೆಗಳಲ್ಲಿ ಮೊದಲ ಬಾರಿಗೆ ಜನರು ಹೆಮ್ಮೆ ಮತ್ತು ಸಂತೋಷದಿಂದ ದೀಪಾವಳಿ ಆಚರಿಸುತ್ತಿದ್ದಾರೆ ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ.

ಸ್ನೇಹಿತರೆ,

ಇಂದು ನಾನು ನಮ್ಮ ಧೈರ್ಯಶಾಲಿ ಸೈನಿಕರ ನಡುವೆ ನಿಂತಿದ್ದೇನೆ. ನಮ್ಮ ನೌಕಾಪಡೆಯ ಸಿಬ್ಬಂದಿ ತಮ್ಮ ಕೈಯಲ್ಲಿ ಸಾವನ್ನು ಹಿಡಿದು ನಿರ್ಭಯವಾಗಿ ನಡೆಯುವಾಗ, ಧೈರ್ಯ ನಿಮಗೆ ಸ್ವಾಭಾವಿಕವಾಗಿ ಬರುತ್ತದೆ. ಆದರೆ ನಮ್ಮ ಪೊಲೀಸ್ ಸಿಬ್ಬಂದಿಯ ಬಗ್ಗೆ ಯೋಚಿಸಿ, ಅವರು ಸಾಮಾನ್ಯವಾಗಿ ಕೋಲು ಮಾತ್ರ ಹಿಡಿದಿರುತ್ತಾರೆ. ಅವರಿಗೆ ಒಂದೇ ರೀತಿಯ ಸಂಪನ್ಮೂಲಗಳು ಅಥವಾ ತರಬೇತಿ ಇಲ್ಲ, ಅವರ ಕೆಲಸವು ನಾಗರಿಕರೊಂದಿಗೆ ಶಾಂತಿ ಮತ್ತು ಸಾಮರಸ್ಯ ಕಾಪಾಡಿಕೊಳ್ಳುವುದಾಗಿದೆ. ಆದರೂ, ಈ ಪೊಲೀಸ್ ಪಡೆಗಳು, ಅದು ಬಿಎಸ್‌ಎಫ್, ಸಿಆರ್‌ಪಿಎಫ್ ಅಥವಾ ಇತರೆ ಪಡೆಗಳಾಗಲಿ, ನಕ್ಸಲೀಯರ ವಿರುದ್ಧ ಅಸಾಧಾರಣ ಶೌರ್ಯದಿಂದ ಹೋರಾಡಿವೆ. ಅವರು ಹೋರಾಡಿದ ಯುದ್ಧಗಳು ಅತ್ಯುನ್ನತ ಪ್ರಶಂಸೆಗೆ ಅರ್ಹವಾಗಿವೆ. ಈ ಪವಿತ್ರ ದೀಪಾವಳಿ ಹಬ್ಬದಂದು, ನನ್ನ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನನಗೆ ಅನೇಕ ಧೈರ್ಯಶಾಲಿ ಪುರುಷರು ಮತ್ತು ಮಹಿಳೆಯರು ಗೊತ್ತು, ಅವರು ತಮ್ಮ ಕಾಲುಗಳನ್ನು ಕಳೆದುಕೊಂಡರೂ ಚೈತನ್ಯವನ್ನು ಕಳೆದುಕೊಂಡಿಲ್ಲ, ಕೆಲವರು ತೋಳುಗಳನ್ನು ಕಳೆದುಕೊಂಡರೂ ಧೈರ್ಯವನ್ನು ಕಳೆದುಕೊಂಡಿಲ್ಲ; ಕೆಲವರು ಇನ್ನು ಮುಂದೆ ಗಾಲಿಕುರ್ಚಿ ಇಲ್ಲದೆ ನಡೆಯಲು ಸಾಧ್ಯವಿಲ್ಲ, ಆದರೆ ಅವರ ಹೃದಯಗಳು ಅಲುಗಾಡದೆ ಉಳಿದಿವೆ. ಮಾವೋವಾದಿ ಉಗ್ರಗಾಮಿಗಳಿಂದ ಗುರಿಯಾಗಿಸಿಕೊಂಡ ಕುಟುಂಬಗಳ ಕೈಕಾಲುಗಳನ್ನು ಕತ್ತರಿಸಲಾಯಿತು, ಅವರ ಹಳ್ಳಿಗಳು ವಾಸಿಸಲು ಯೋಗ್ಯವಲ್ಲದವು ಎಂದು ನನಗೆ ತಿಳಿದಿದೆ. ಈ ಅಸಂಖ್ಯಾತ ವೀರರು ಅಪಾರ ನೋವು ಸಹಿಸಿಕೊಂಡಿದ್ದಾರೆ. ಶಾಂತಿ ನೆಲೆಸಲು, ನಾಗರಿಕರು ಉತ್ತಮ ಜೀವನ ನಡೆಸಲು ಮತ್ತು ಮಕ್ಕಳು ಅಧ್ಯಯನ ಮಾಡಲು ಮತ್ತು ಉಜ್ವಲ ಭವಿಷ್ಯದ ಕನಸು ಕಾಣಲು ದೊಡ್ಡ ತ್ಯಾಗಗಳನ್ನು ಮಾಡಿದ್ದಾರೆ. ಅವರು ರಾಷ್ಟ್ರದ ಶಾಂತಿ ಮತ್ತು ಪ್ರಗತಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ.

ಸ್ನೇಹಿತರೆ,

ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ, ನಮ್ಮ ಪೊಲೀಸ್ ಪಡೆಗಳು ಇಂತಹ ಬೃಹತ್ ಸವಾಲನ್ನು ಎದುರಿಸಿದವು. ಆದರೆ ಕಳೆದ 10 ವರ್ಷಗಳಲ್ಲಿ ಅವರು ಈ 50 ವರ್ಷಗಳಷ್ಟು ಹಳೆಯದಾದ ಪಿಡುಗನ್ನು ಬಹುತೇಕ ನಿರ್ಮೂಲನೆ ಮಾಡಿದ್ದಾರೆ ಎಂಬ ವಿಶ್ವಾಸ ನನಗಿದೆ, ಅವರು ಸುಮಾರು 90% ಪ್ರಕರಣಗಳಲ್ಲಿ ಯಶಸ್ವಿಯಾಗಿದ್ದಾರೆ. ನೀವು ಯುದ್ಧವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ, ಆದರೆ ಒಬ್ಬರ ಸ್ವಂತ ಭೂಮಿಯೊಳಗೆ ಯುದ್ಧ ನಡೆದಾಗ, ಅದಕ್ಕೆ ಅಪಾರ ತಾಳ್ಮೆ ಮತ್ತು ಸಂಯಮ ಬೇಕಾಗುತ್ತದೆ, ಯಾವುದೇ ಮುಗ್ಧ ಜೀವವನ್ನು ಕಳೆದುಕೊಳ್ಳದಂತೆ ಅದು ನೋಡಿಕೊಳ್ಳುತ್ತದೆ. ಇದು ಒಂದು ಗಮನಾರ್ಹ ಪ್ರಯತ್ನವಾಗಿದ್ದು, ಮುಂದೊಂದು ದಿನ, ಈ ರೀತಿಯ ಆಂತರಿಕ ಮಾವೋವಾದಿ ಯುದ್ಧವನ್ನು ಹೇಗೆ ನಿರ್ವಹಿಸಲಾಯಿತು ಎಂಬುದರ ಕುರಿತು ಸಂಪುಟಗಳನ್ನು ಬರೆಯಲಾಗುವುದು. ಭಾರತದ ಕೆಚ್ಚೆದೆಯ ಪಡೆಗಳು ತಮ್ಮ ಶೌರ್ಯ ಮತ್ತು ಕಾರ್ಯತಂತ್ರದ ಮೂಲಕ ಮಾವೋವಾದಿ ಭಯೋತ್ಪಾದನೆಯನ್ನು ಹೇಗೆ ನಾಶ ಮಾಡಿದವು ಎಂಬುದನ್ನು ಜಗತ್ತು ಅಧ್ಯಯನ ಮಾಡುತ್ತದೆ. ನಮ್ಮ ಮಣ್ಣಿನಲ್ಲಿ ಅಂತಹ ವೀರತ್ವ ಬೇರೂರಿದೆ ಎಂಬುದು ಭಾರತೀಯರಾದ ನಮಗೆಲ್ಲಾ ಹೆಮ್ಮೆ ಇದೆ.

ಸ್ನೇಹಿತರೆ,

ಇಂದು ಈ ಜಿಲ್ಲೆಗಳು ಜಿಎಸ್‌ಟಿ ಬಚತ್ ಉತ್ಸವ(ಉಳಿತಾಯ ಉತ್ಸವ) ಸಮಯದಲ್ಲಿ ದಾಖಲೆಯ ಮಟ್ಟದ ಮಾರಾಟ ಮತ್ತು ಖರೀದಿಗಳನ್ನು ಕಾಣುತ್ತಿವೆ. ಒಂದು ಕಾಲದಲ್ಲಿ ಮಾವೋವಾದಿಗಳು ಸಂವಿಧಾನದ ಉಲ್ಲೇಖವನ್ನು ಸಹ ಅನುಮತಿಸದ ಪ್ರದೇಶಗಳಲ್ಲಿ, ಅದರ ಅಸ್ತಿತ್ವವನ್ನು ನಿರಾಕರಿಸಲಾಗಿತ್ತು, ಇಂದು "ಸ್ವದೇಶಿ"(ಸ್ವಾವಲಂಬನೆ) ಮನೋಭಾವವು ಪ್ರತಿಯೊಂದು ಮೂಲೆಯಲ್ಲೂ ಪ್ರತಿಧ್ವನಿಸುತ್ತದೆ. ಒಂದು ಕಾಲದಲ್ಲಿ 303 ರೈಫಲ್‌ಗಳನ್ನು ಹೊತ್ತಿದ್ದ ದಾರಿ ತಪ್ಪಿದ ಯುವಕರು ಈಗ ಸಂವಿಧಾನವನ್ನು ಸ್ವೀಕರಿಸುತ್ತಿದ್ದಾರೆ.

ಸ್ನೇಹಿತರೆ,

ಭಾರತ ಇಂದು ಗಮನಾರ್ಹ ವೇಗದಲ್ಲಿ ಮುನ್ನಡೆಯುತ್ತಿದೆ. ನಾವು 140 ಕೋಟಿ ದೇಶವಾಸಿಗಳ ಕನಸುಗಳನ್ನು ನನಸಾಗಿಸುತ್ತಿದ್ದೇವೆ. ಭೂಮಿಯಿಂದ ಆಕಾಶದವರೆಗೆ, ಒಂದು ಕಾಲದಲ್ಲಿ ಊಹಿಸಲಾಗದಿದ್ದದ್ದು ಈಗ ನಮ್ಮ ಕಣ್ಣ ಮುಂದೆ ವಾಸ್ತವವಾಗುತ್ತಿದೆ. ಈ ಆವೇಗ, ಪ್ರಗತಿ ಮತ್ತು ಪರಿವರ್ತನೆಯು ರಾಷ್ಟ್ರದ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ, ಆ ನಂಬಿಕೆಯಿಂದ ಅಭಿವೃದ್ಧಿಯ ಮಂತ್ರ ಹೊರಹೊಮ್ಮುತ್ತಿದೆ. ರಾಷ್ಟ್ರ ನಿರ್ಮಾಣದ ಈ ಸುದೀರ್ಘ ಪ್ರಯಾಣದಲ್ಲಿ, ನಮ್ಮ ಸಶಸ್ತ್ರ ಪಡೆಗಳು ಒಂದು ಮಹತ್ವದ ಪಾತ್ರ ಹೊಂದಿವೆ. ನೀವು ಕೇವಲ ಪ್ರವಾಹದೊಂದಿಗೆ ಹರಿಯುವವರಲ್ಲ. ಗಂಗಾ ಕಹೇ ಗಂಗಾದಾಸ್, ಜಮುನಾ ಕಹೆ ಜಮುನಾದಾಸ್, ಇದು ಸೈನ್ಯದ ರಕ್ತನಾಳಗಳಲ್ಲಿಲ್ಲ, ಇಲ್ಲ, ನೀವು ಅಲೆಯುವವರಲ್ಲ. ಪ್ರವಾಹವನ್ನು ನಿರ್ದೇಶಿಸುವ, ಅದರ ಹಾದಿಯನ್ನು ಬದಲಾಯಿಸುವ ಶಕ್ತಿ ನಿಮ್ಮಲ್ಲಿದೆ! ಕಾಲವನ್ನೇ ಮಾರ್ಗದರ್ಶಿಸುವ ಧೈರ್ಯ, ಅಸಾಧ್ಯವನ್ನು ದಾಟುವ ಶೌರ್ಯ ಮತ್ತು ಪ್ರತಿಯೊಂದು ಅಡೆತಡೆಯನ್ನು ನಿವಾರಿಸುವ ಚೈತನ್ಯ ನಿಮ್ಮಲ್ಲಿದೆ. ನಮ್ಮ ಸೈನಿಕರು ಸದೃಢವಾಗಿ ನಿಂತಿರುವ ಪರ್ವತ ಶಿಖರಗಳು, ಇವು ಭಾರತದ ವಿಜಯದ ಸಂಕೇತಗಳಾಗಿವೆ. ನಮ್ಮ ನೌಕಾಪಡೆ ಕಾವಲು ನಿಂತಿರುವ ಸಮುದ್ರಗಳು, ಸಾಗರದ ಪ್ರಬಲ ಅಲೆಗಳು ಸಹ ಭಾರತದ ವಿಜಯವನ್ನು ಜಪಿಸುತ್ತಿವೆ. "ಭಾರತ್ ಮಾತಾ ಕಿ ಜೈ!" - ನಿಮ್ಮ ಧ್ವನಿಗಳು ಮಾತ್ರವಲ್ಲ, ಪ್ರತಿ ಅಲೆಯೂ ಅದನ್ನು ಪ್ರತಿಧ್ವನಿಸುತ್ತದೆ. ನೀವು ಸಾಗರದ ಉಬ್ಬರವಿಳಿತಗಳನ್ನು ಸಹ " ಭಾರತ ಮಾತೆಗೆ ವಿಜಯ!" ಎಂದು ಘೋಷಿಸಲು ಪ್ರೇರೇಪಿಸಿದ್ದೀರಿ! ಸಮುದ್ರದ ಘರ್ಜನೆಯಿಂದ, ಪರ್ವತಗಳಿಂದ ಬರುವ ಗಾಳಿಯಿಂದ, ಮರುಭೂಮಿಗಳಿಂದ ಬರುವ ಧೂಳಿನಿಂದ, ಹೃದಯ ಮತ್ತು ಮನಸ್ಸನ್ನು ಒಗ್ಗೂಡಿಸಿ ಎಚ್ಚರಿಕೆಯಿಂದ ಆಲಿಸಿದರೆ, ಪ್ರತಿಯೊಂದು ಮಣ್ಣಿನ ಕಣ ಮತ್ತು ಪ್ರತಿಯೊಂದು ನೀರಿನ ಹನಿಯಿಂದ ಒಂದೇ ಧ್ವನಿ ಹೊರಹೊಮ್ಮುತ್ತದೆ: ಅದು ಭಾರತ್ ಮಾತಾ ಕಿ ಜೈ! ಭಾರತ್ ಮಾತಾ ಕಿ ಜೈ!" ಈ ಉತ್ಸಾಹ ಮತ್ತು ಆತ್ಮವಿಶ್ವಾಸದ ಮನೋಭಾವದಿಂದ, ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ, ನಿಮ್ಮ ಕುಟುಂಬಗಳಿಗೆ ಮತ್ತು ದೇಶದ 140 ಕೋಟಿ ನಾಗರಿಕರಿಗೆ ನನ್ನ ಹೃತ್ಪೂರ್ವಕ ದೀಪಾವಳಿ ಶುಭಾಶಯಗಳನ್ನು ಸಲ್ಲಿಸುತ್ತೇನೆ. ನೀವು ಯಾವಾಗಲೂ ನಿಮ್ಮೊಳಗೆ ಗೆಲುವು, ನಂಬಿಕೆ ಮತ್ತು ಸಂಕಲ್ಪವನ್ನು ಬೆಳೆಸಿಕೊಳ್ಳಿ. ನಿಮ್ಮ ಕನಸುಗಳು ಹಾರಲಿ ಮತ್ತು ಹೊಸ ಎತ್ತರವನ್ನು ತಲುಪಲಿ.

ಈಗ, ನನ್ನೊಂದಿಗೆ, ಜೋರಾಗಿ ಹೇಳಿ: ಭಾರತ್ ಮಾತಾ ಕಿ ಜೈ! ಭಾರತ್ ಮಾತಾ ಕಿ ಜೈ! ಭಾರತ್ ಮಾತಾ ಕಿ ಜೈ! ವಂದೇ ಮಾತರಂ! ವಂದೇ ಮಾತರಂ! ವಂದೇ ಮಾತರಂ! ವಂದೇ ಮಾತರಂ! ವಂದೇ ಮಾತರಂ! ವಂದೇ ಮಾತರಂ! ವಂದೇ ಮಾತರಂ! ವಂದೇ ಮಾತರಂ! ವಂದೇ ಮಾತರಂ! ವಂದೇ ಮಾತರಂ! ವಂದೇ ಮಾತರಂ! ವಂದೇ ಮಾತರಂ! ವಂದೇ ಮಾತರಂ! ತುಂಬು ಧನ್ಯವಾದಗಳು!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India Emerges As A Top Global Investment Magnet Despite Global Headwinds: Survey

Media Coverage

India Emerges As A Top Global Investment Magnet Despite Global Headwinds: Survey
NM on the go

Nm on the go

Always be the first to hear from the PM. Get the App Now!
...
Prime Minister greets citizens on National Voters’ Day
January 25, 2026
PM calls becoming a voter an occasion of celebration, writes to MY-Bharat volunteers

The Prime Minister, Narendra Modi, today extended greetings to citizens on the occasion of National Voters’ Day.

The Prime Minister said that the day is an opportunity to further deepen faith in the democratic values of the nation. He complimented all those associated with the Election Commission of India for their dedicated efforts to strengthen India’s democratic processes.

Highlighting the importance of voter participation, the Prime Minister noted that being a voter is not only a constitutional privilege but also a vital duty that gives every citizen a voice in shaping India’s future. He urged people to always take part in democratic processes and honour the spirit of democracy, thereby strengthening the foundations of a Viksit Bharat.

Shri Modi has described becoming a voter as an occasion of celebration and underlined the importance of encouraging first-time voters.

On the occasion of National Voters’ Day, the Prime Minister said has written a letter to MY-Bharat volunteers, urging them to rejoice and celebrate whenever someone around them, especially a young person, gets enrolled as a voter for the first time.

In a series of X posts; Shri Modi said;

“Greetings on #NationalVotersDay.

This day is about further deepening our faith in the democratic values of our nation.

My compliments to all those associated with the Election Commission of India for their efforts to strengthen our democratic processes.

Being a voter is not just a constitutional privilege, but an important duty that gives every citizen a voice in shaping India’s future. Let us honour the spirit of our democracy by always taking part in democratic processes, thereby strengthening the foundations of a Viksit Bharat.”

“Becoming a voter is an occasion of celebration! Today, on #NationalVotersDay, penned a letter to MY-Bharat volunteers on how we all must rejoice when someone around us has enrolled as a voter.”

“मतदाता बनना उत्सव मनाने का एक गौरवशाली अवसर है! आज #NationalVotersDay पर मैंने MY-Bharat के वॉलंटियर्स को एक पत्र लिखा है। इसमें मैंने उनसे आग्रह किया है कि जब हमारे आसपास का कोई युवा साथी पहली बार मतदाता के रूप में रजिस्टर्ड हो, तो हमें उस खुशी के मौके को मिलकर सेलिब्रेट करना चाहिए।”