ಕೋಟಾ, ಬುಂಡಿ, ಬರನ್ ಮತ್ತು ಝಾಲಾವರ್ ಸೇರಿದಂತೆ ಇಡೀ ಹಾಡೋತಿ ಪ್ರದೇಶಕ್ಕೆ ಇಂದು ಹೊಸ ಭರವಸೆ ಮತ್ತು ಹೊಸ ಸಾಧನೆಯ ದಿನವಾಗಿದೆ: ಪ್ರಧಾನಮಂತ್ರಿ
ಸುಮಾರು ಒಂದೂವರೆ ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಆಧುನಿಕ ವಿಮಾನ ನಿಲ್ದಾಣವು, ಮುಂಬರುವ ದಿನಗಳಲ್ಲಿ ಇಡೀ ಪ್ರದೇಶದ ಅಭಿವೃದ್ಧಿಗೆ ಹೊಸ ವೇಗವನ್ನು ನೀಡಲಿದೆ: ಪ್ರಧಾನಮಂತ್ರಿ
ಈ ವಿಮಾನ ನಿಲ್ದಾಣವು ಕಾರ್ಯಾರಂಭ ಮಾಡಿದಾಗ, ಪ್ರಯಾಣವು ಸುಲಭವಾಗಲಿದೆ ಮತ್ತು ಕೋಟಾ ಸೇರಿದಂತೆ ಇಡೀ ಪ್ರದೇಶದಲ್ಲಿ ವ್ಯಾಪಾರವು ವೇಗವಾಗಿ ಬೆಳೆಯಲಿದೆ: ಪ್ರಧಾನಮಂತ್ರಿ
ಕೋಟಾ ಇಂದು ಸಂಪರ್ಕದ ಕ್ಷೇತ್ರದಲ್ಲಿ ವೇಗವಾಗಿ ಮುನ್ನಡೆಯುತ್ತಿದೆ: ಪ್ರಧಾನಮಂತ್ರಿ
ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ, ಕೋಟಾದ ಎರಡೂ ಪ್ರಮುಖ ರೈಲ್ವೆ ನಿಲ್ದಾಣಗಳನ್ನು ಆಧುನಿಕ ಸೌಲಭ್ಯಗಳೊಂದಿಗೆ ಸಜ್ಜುಗೊಳಿಸಲಾಗುತ್ತಿದೆ: ಪ್ರಧಾನಮಂತ್ರಿ
ಕೋಟಾ ಮತ್ತು ಬುಂಡಿ ಮೂಲಕ ಹಾದುಹೋಗುವ ದೆಹಲಿ-ಮುಂಬೈ ಎಕ್ಸ್‌ ಪ್ರೆಸ್‌ ವೇ ಇಡೀ ಪ್ರದೇಶದ ಅಭಿವೃದ್ಧಿಗೆ ಹೊಸ ಹೆಬ್ಬಾಗಿಲನ್ನು ತೆರೆಯುತ್ತಿದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ ಕೋಟಾ ವಿಮಾನ ನಿಲ್ದಾಣದ ಶಂಕುಸ್ಥಾಪನೆ ನೆರವೇರಿಸಿದರು. ಇದು ಹಾಡೋತಿ ಪ್ರಾಂತ್ಯದ ಪಾಲಿಗೆ ಒಂದು ಮಹತ್ವದ ಮೈಲಿಗಲ್ಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, "ರಾಜಸ್ಥಾನವು ಅಭೂತಪೂರ್ವ ವೇಗದಲ್ಲಿ ಪ್ರಗತಿ ಹೊಂದುತ್ತಿದೆ. ಈ ಹೊಸ ವಿಮಾನ ನಿಲ್ದಾಣವು ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಗೆ ವೇಗವರ್ಧಕವಾಗಲಿದೆ," ಎಂದು ಒತ್ತಿಹೇಳಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗಷ್ಟೇ ಅಜ್ಮೀರ್‌ಗೆ ಭೇಟಿ ನೀಡಿದ್ದನ್ನು ಸ್ಮರಿಸಿದರು. ಅಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಾಗಿತ್ತು ಮತ್ತು 21,000 ಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಗಿತ್ತು. ಒಂದೇ ವಾರದಲ್ಲಿ ಇಂತಹ ಸತತ ಕಾರ್ಯಕ್ರಮಗಳು ನಡೆಯುತ್ತಿರುವುದು ರಾಜ್ಯದ ಅಭಿವೃದ್ಧಿಯ ಪಥದ ಬಗ್ಗೆ ಪ್ರಬಲ ಸಂದೇಶವನ್ನು ನೀಡುತ್ತವೆ ಎಂದು ತಿಳಿಸಿದ ಅವರು, "ರಾಜಸ್ಥಾನವು ಇಂದು ಎಂತಹ ವೇಗದಲ್ಲಿ ಮುನ್ನಡೆಯುತ್ತಿದೆ ಎಂಬುದನ್ನು ಈ ಕಾರ್ಯಕ್ರಮಗಳು ನಮಗೆ ತಿಳಿಸುತ್ತವೆ," ಎಂದರು.

ಸುಮಾರು 1,500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಆಧುನಿಕ ವಿಮಾನ ನಿಲ್ದಾಣವು ಕೋಟಾ, ಬುಂದಿ, ಬಾರನ್ ಮತ್ತು ಝಾಲಾವರ್ ಜನತೆಗೆ ಹೊಸ ಭರವಸೆಯ ದಿನವಾಗಿದೆ ಎಂದು ಪ್ರಧಾನಮಂತ್ರಿ ಹೈಲೈಟ್ ಮಾಡಿದರು. ಈ ಭಾಗದ ಜನರಿಗೆ ಶುಭ ಹಾರೈಸಿದ ಶ್ರೀ ಮೋದಿಯವರು, "ಈ ಆಧುನಿಕ ವಿಮಾನ ನಿಲ್ದಾಣವು ಮುಂಬರುವ ದಿನಗಳಲ್ಲಿ ಇಡೀ ಪ್ರದೇಶದ ಅಭಿವೃದ್ಧಿಗೆ ಹೊಸ ವೇಗವನ್ನು ನೀಡಲಿದೆ" ಎಂದು ಅಭಿಪ್ರಾಯಪಟ್ಟರು.

ನವೆಂಬರ್ 2023ರ ತಮ್ಮ ಭೇಟಿಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ವಿಮಾನ ನಿಲ್ದಾಣದ ಕುರಿತು ಜನರಿಗೆ ನೀಡಿದ್ದ ಭರವಸೆಯು ಈಗ ಈಡೇರುತ್ತಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದರು. ಈ ಹಿಂದೆ ವಿಮಾನ ಪ್ರಯಾಣಕ್ಕಾಗಿ ಜೈಪುರ ಅಥವಾ ಜೋಧ್‌ ಪುರಕ್ಕೆ ಹೋಗಬೇಕಿದ್ದ ಅನಾನುಕೂಲತೆಯನ್ನು ಪ್ರಸ್ತಾಪಿಸಿದ ಶ್ರೀ ಮೋದಿಯವರು, "ಈ ವಿಮಾನ ನಿಲ್ದಾಣವು ಕಾರ್ಯಾರಂಭ ಮಾಡಿದಾಗ, ಪ್ರಯಾಣವು ಸುಲಭವಾಗಲಿದೆ ಮತ್ತು ಕೋಟಾ ಸೇರಿದಂತೆ ಇಡೀ ಪ್ರದೇಶದಲ್ಲಿ ವ್ಯಾಪಾರವು ವೇಗವಾಗಿ ಬೆಳೆಯಲಿದೆ" ಎಂದು ಪ್ರತಿಪಾದಿಸಿದರು.

ಕೋಟಾವನ್ನು ಶಿಕ್ಷಣ ಮತ್ತು ಇಂಧನ ಎರಡರ ವಿಶಿಷ್ಟ ಕೇಂದ್ರವೆಂದು ಬಣ್ಣಿಸಿದ ಪ್ರಧಾನಮಂತ್ರಿಯವರು, ಇದು ಪರಮಾಣು, ಕಲ್ಲಿದ್ದಲು, ಅನಿಲ ಮತ್ತು ಜಲ ಮೂಲಗಳಿಂದ ವಿದ್ಯುತ್ ಉತ್ಪಾದಿಸುತ್ತಿದೆ ಎಂದು ತಿಳಿಸಿದರು. ಕೋಟಾ ಡೋರಿಯಾ ಸೀರೆಗಳು, ಕೋಟಾ ಕಲ್ಲು ಮತ್ತು ಬುಂದಿಯ ಬಾಸ್ಮತಿ ಅಕ್ಕಿಯಂತಹ ಸ್ಥಳೀಯ ಕೃಷಿ ಉತ್ಪನ್ನಗಳ ಜಾಗತಿಕ ಗುರುತನ್ನು ಶ್ಲಾಘಿಸಿದ ಅವರು, "ಕೋಟಾದ ಈ ಹೊಸ ವಿಮಾನ ನಿಲ್ದಾಣವು ಈ ಸಾಧ್ಯತೆಗಳನ್ನು ಹಲವು ಪಟ್ಟು ಹೆಚ್ಚಿಸುವ ಕೆಲಸ ಮಾಡಲಿದೆ" ಎಂದರು.

ಈ ಪ್ರದೇಶದ ಪ್ರವಾಸೋದ್ಯಮ ಸಾಮರ್ಥ್ಯದ ಬಗ್ಗೆ ಚರ್ಚಿಸಿದ ಪ್ರಧಾನಮಂತ್ರಿ, ಮುಕುಂದರಾ ಹಿಲ್ಸ್‌ ನಂತಹ ವನ್ಯಜೀವಿ ಕೇಂದ್ರಗಳ ಜೊತೆಗೆ ಶ್ರೀ ಮಥುರಾಧೀಶ ಜಿ ಮತ್ತು ಗರಡಿಯಾ ಮಹಾದೇವ್ ಅವರ ಆಧ್ಯಾತ್ಮಿಕ ಮಹತ್ವವನ್ನು ಉಲ್ಲೇಖಿಸಿದರು. "ಹೆಚ್ಚಿದ ವಾಯು ಸಂಪರ್ಕವು ಈ ಪ್ರದೇಶಕ್ಕೆ ಜಾಗತಿಕ ಪ್ರವಾಸಿಗರನ್ನು ಕರೆತರುತ್ತದೆ ಮತ್ತು ಇದರ ನೇರ ಪ್ರಯೋಜನವು ಇಲ್ಲಿನ ಯುವಕರು, ವ್ಯಾಪಾರಿಗಳು ಮತ್ತು ಸ್ಥಳೀಯ ಆರ್ಥಿಕತೆಗೆ ಲಭ್ಯವಾಗಲಿದೆ" ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ಅಮೃತ್ ಭಾರತ್ ಯೋಜನೆಯಡಿ ರೈಲ್ವೆ ನಿಲ್ದಾಣಗಳ ಆಧುನೀಕರಣ ಮತ್ತು ದೆಹಲಿ-ಮುಂಬೈ ಎಕ್ಸ್‌ ಪ್ರೆಸ್‌ ವೇ ಪ್ರಭಾವ ಸೇರಿದಂತೆ ಕೋಟಾದಲ್ಲಿನ ವಿಶಾಲವಾದ ಸಂಪರ್ಕ ಕ್ರಾಂತಿಯ ಬಗ್ಗೆಯೂ ಪ್ರಧಾನಮಂತ್ರಿಯವರು ಮಾತನಾಡಿದರು. ಕೃಷಿ ಆಧಾರಿತ ಕೈಗಾರಿಕೆಗಳತ್ತ ಸಾಗುತ್ತಿರುವ ಬದಲಾವಣೆಯನ್ನು ಎತ್ತಿ ತೋರಿಸಿದ ಶ್ರೀ ಮೋದಿಯವರು, "ರೈಲು ಮತ್ತು ರಸ್ತೆ ಮಾರ್ಗಗಳ ನಂತರ ವಾಯು ಸಂಪರ್ಕದ ಈ ಹೊಸ ಅಧ್ಯಾಯವು ಕೋಟಾದ ಅಭಿವೃದ್ಧಿಗೆ ಹೆಚ್ಚಿನ ವೇಗವನ್ನು ನೀಡುತ್ತದೆ" ಎಂದು ತಿಳಿಸಿದರು.

ಸ್ಥಳೀಯ ನಾಯಕತ್ವದ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಈ ಪ್ರದೇಶದ ಪ್ರಗತಿಗಾಗಿ ಕೋಟಾ ಸಂಸದ ಮತ್ತು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರ ಸಮರ್ಪಣಾ ಮನೋಭಾವವನ್ನು ಕೊಂಡಾಡಿದರು. ಸಂಸತ್ತಿನಲ್ಲಿ ಶ್ರೀ ಬಿರ್ಲಾ ಅವರ ಪಾತ್ರದ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು, "ಕೆಲವು ದೊಡ್ಡ ಕುಟುಂಬಗಳ ಅಶಿಸ್ತಿನ ವಿದ್ಯಾರ್ಥಿಗಳನ್ನು ಎದುರಿಸುವಾಗಲೂ ಇಡೀ ತರಗತಿಯನ್ನು ಉತ್ತಮವಾಗಿ ನಿಭಾಯಿಸುವ ಶಿಕ್ಷಕರು ಅವರು" ಎಂದು ಮಾರ್ಮಿಕವಾಗಿ ನುಡಿದರು.

ರಾಷ್ಟ್ರೀಯ ವಿಮಾನಯಾನ ಕ್ಷೇತ್ರದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, 2014 ರಲ್ಲಿ 70 ರಷ್ಟಿದ್ದ ವಿಮಾನ ನಿಲ್ದಾಣಗಳ ಸಂಖ್ಯೆ ಇಂದು 160ಕ್ಕೂ ಹೆಚ್ಚಿದೆ ಎಂದು ಗಮನಿಸಿದರು. ವಿಕೇಂದ್ರೀಕೃತ ಬೆಳವಣಿಗೆಯ ಉದಾಹರಣೆಗಳಾಗಿ ದೆಹಲಿಯ ಸಮೀಪವಿರುವ ಹೊಸ ಟರ್ಮಿನಲ್‌ಗಳು ಮತ್ತು ವಿಮಾನ ನಿಲ್ದಾಣಗಳನ್ನು ಸೂಚಿಸಿದ ಶ್ರೀ ಮೋದಿಯವರು, "ಕೋಟಾದ ಈ ಹೊಸ ವಿಮಾನ ನಿಲ್ದಾಣವು ಇದೇ ರೀತಿಯಲ್ಲಿ ಈ ಪ್ರದೇಶದ ಅಭಿವೃದ್ಧಿಗೆ ಹೊಸ ವೇಗವನ್ನು ನೀಡುತ್ತದೆ ಎಂಬ ವಿಶ್ವಾಸ ನನಗಿದೆ" ಎಂದು ವ್ಯಕ್ತಪಡಿಸಿದರು.

ತಮ್ಮ ಸಮಾರೋಪ ನುಡಿಗಳಲ್ಲಿ, ಪ್ರಧಾನಮಂತ್ರಿಯವರು ಕ್ಷಿಪ್ರ ಪ್ರಗತಿಯನ್ನು ಸಾಧಿಸಲು "ಡಬಲ್ ಇಂಜಿನ್" ಸರ್ಕಾರ ಮತ್ತು ಸ್ಪಷ್ಟ ಉದ್ದೇಶಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಸಮೃದ್ಧ ಮತ್ತು ಸಶಕ್ತ ರಾಜ್ಯವನ್ನು ಕಲ್ಪಿಸಿಕೊಂಡ ಅವರು, "ಅಭಿವೃದ್ಧಿ ಹೊಂದಿದ ರಾಜಸ್ಥಾನದ ಈ ಬಲವಾದ ಅಡಿಪಾಯವು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತಿದೆ" ಎಂದು ಹೇಳುವ ಮೂಲಕ ಮಾತು ಮುಗಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s first privately built military aircraft C-295 rolled out by Tata in Gujarat

Media Coverage

India’s first privately built military aircraft C-295 rolled out by Tata in Gujarat
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 13 ಮೇ 2026
May 13, 2026

Leadership That Leads by Example: PM Modi's Push for Mindful Growth, Innovation & Infrastructure