ಸ್ವಾತಂತ್ರ್ಯ ಹೋರಾಟಗಾರ ಶ್ಯಾಮ್ಜಿ ಕೃಷ್ಣ ವರ್ಮಾ ಅವರ ದೀರ್ಘಕಾಲದ ಆಶಯವನ್ನು ಈಡೇರಿಸಿದ್ದ ಸುಮಾರು ಎರಡು ದಶಕಗಳ ಹಿಂದೆ ಕೈಗೊಂಡ ದೇಶದ ಅತ್ಯಂತ ತೃಪ್ತಿಕರ ಪ್ರಯತ್ನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಉಲ್ಲೇಖಿಸಿದರು.
ಶ್ಯಾಮ್ಜಿ ಕೃಷ್ಣ ವರ್ಮಾ 1930 ರಲ್ಲಿ ನಿಧನರಾದರು. ಅವರ ಚಿತಾಭಸ್ಮವು ಒಂದು ದಿನ ಸ್ವತಂತ್ರ ಭಾರತಕ್ಕೆ ಮರಳುತ್ತದೆ ಎನ್ನುವ ಆಶಯವನ್ನು ಇಟ್ಟುಕೊಂಡಿದ್ದರು. ಈ ಮಹತ್ವಪೂರ್ಣ ಆಶಯವು ದಶಕಗಳವರೆಗೆ ಅಂದರೆ ಆಗಸ್ಟ್ 2003 ರವರೆಗೆ ಗುಜರಾತ್ ನ ಆಗಿನ ಮುಖ್ಯಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಿಟ್ಜರ್ ಲ್ಯಾಂಡ್ ನ ಜಿನೀವಾದಿಂದ ಅವರ ಚಿತಾಭಸ್ಮವನ್ನು ಮರಳಿ ತರುವ ಐತಿಹಾಸಿಕ ಉಪಕ್ರಮವನ್ನು ಕೈಗೊಳ್ಳುವವರೆಗೆ ಈಡೇರಿರಲಿಲ್ಲ.
ಈ ಉಪಕ್ರಮವು, ಭಾರತಮಾತೆಯ ಧೀರಪುತ್ರನ ಸ್ಮರಣೆಯನ್ನು ಗೌರವಿಸುತ್ತದೆ ಮತ್ತು ಭಾರತದ ಸ್ವಾತಂತ್ರ್ಯ ಚಳವಳಿಯ ಪರಂಪರೆಯನ್ನು ಸಂರಕ್ಷಿಸುವ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.
ಶ್ಯಾಮ್ ಜಿ ಕೃಷ್ಣ ವರ್ಮಾ ಅವರ ಜೀವನ, ನ್ಯಾಯಕ್ಕಾಗಿ ಅವರ ನಿರ್ಭೀತ ಹುಡುಕಾಟ ಮತ್ತು ಭಾರತದ ಸ್ವಾತಂತ್ರ್ಯಕ್ಕಾಗಿ ಅವರ ಅಚಲ ಸಮರ್ಪಣೆಯ ಬಗ್ಗೆ ಹೆಚ್ಚಿನ ಯುವ ಭಾರತೀಯರು ಓದುವರು ಎಂದು ಪ್ರಧಾನಮಂತ್ರಿ ಅವರು ಆಶಯ ವ್ಯಕ್ತಪಡಿಸಿದರು.
ಎಕ್ಸ್ ನಲ್ಲಿ ಮೋದಿ ಆರ್ಕೈವ್ ಹ್ಯಾಂಡಲ್ ನ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿ ಹೀಗೆ ಹೇಳಿದ್ದಾರೆ:
"ಈ ಥ್ರೆಡ್ ಸುಮಾರು ಎರಡು ದಶಕಗಳ ಹಿಂದೆ ಕೈಗೊಂಡ ತೃಪ್ತಿಕರ ಪ್ರಯತ್ನವನ್ನು ಉಲ್ಲೇಖಿಸಿದೆ, ಆ ಮೂಲಕ ಶ್ಯಾಮ್ಜಿ ಕೃಷ್ಣ ವರ್ಮಾ ಅವರ ಆಶಯವನ್ನು ಈಡೇರಿಸುತ್ತದೆ ಮತ್ತು ಭಾರತಮಾತೆಯ ಧೀರಪುತ್ರನನ್ನು ಗೌರವಿಸುತ್ತದೆ.
ಅವರ ಶ್ರೇಷ್ಠತೆ ಮತ್ತು ಶೌರ್ಯದ ಬಗ್ಗೆ ಹೆಚ್ಚಿನ ಯುವಕರು ಓದುವಂತಾಗಲಿ!"
This thread highlights a very satisfying effort undertaken about two decades ago, thus fulfilling a wish of Shyamji Krishna Varma and honouring a courageous son of Maa Bharti.
— Narendra Modi (@narendramodi) October 4, 2025
May more youngsters read about his greatness and bravery! https://t.co/H6NwdQC3zu




