ಸಾವಿರ ವರ್ಷಗಳ ನಂತರವೂ ಸೋಮನಾಥ ದೇವಾಲಯದ ಮೇಲೆ ಹಾರಾಡುತ್ತಿರುವ ಧ್ವಜವು ಭಾರತದ ಶಕ್ತಿ ಮತ್ತು ಚೈತನ್ಯವನ್ನು ಜಗತ್ತಿಗೆ ಸಾರುತ್ತಿದೆ: ಪ್ರಧಾನಮಂತ್ರಿ
ಸೋಮನಾಥ ಸ್ವಾಭಿಮಾನ ಪರ್ವವು ಸಾವಿರ ವರ್ಷಗಳ ಪಯಣದ ಸಂಕೇತವಾಗಿದೆ, ಇದು ಭಾರತದ ಅಸ್ತಿತ್ವ ಮತ್ತು ಸ್ವಾಭಿಮಾನದ ಆಚರಣೆಯಾಗಿದೆ: ಪ್ರಧಾನಮಂತ್ರಿ
ಸೋಮನಾಥದ ಇತಿಹಾಸವು ವಿನಾಶ ಅಥವಾ ಸೋಲಿನ ಇತಿಹಾಸವಲ್ಲ, ಅದು ವಿಜಯ ಮತ್ತು ನವೋದಯದ ಇತಿಹಾಸವಾಗಿದೆ: ಪ್ರಧಾನಮಂತ್ರಿ
ಸೋಮನಾಥವನ್ನು ನಾಶಮಾಡುವ ಉದ್ದೇಶದಿಂದ ಬಂದವರು ಇಂದು ಇತಿಹಾಸದ ಕೆಲವು ಪುಟಗಳಿಗೆ ಸೀಮಿತವಾಗಿದ್ದಾರೆ; ಆದರೆ ಸೋಮನಾಥ ದೇವಾಲಯವು ವಿಶಾಲ ಸಮುದ್ರ ತೀರದಲ್ಲಿ ತನ್ನ ನಂಬಿಕೆಯ ಧ್ವಜವನ್ನು ಎತ್ತರದಲ್ಲಿ ಹಾರಿಸುತ್ತಾ ಇಂದಿಗೂ ಭವ್ಯವಾಗಿ ನಿಂತಿದೆ: ಪ್ರಧಾನಮಂತ್ರಿ
ಸೃಷ್ಟಿಯ ಪ್ರಕ್ರಿಯೆಯು ಸಮಯವನ್ನು ತೆಗೆದುಕೊಳ್ಳಬಹುದು, ಆದರೆ ಅದು ಮಾತ್ರವೇ ಶಾಶ್ವತವಾಗಿ ಉಳಿಯುತ್ತದೆ ಎಂಬುದನ್ನು ಸೋಮನಾಥ ತೋರಿಸಿಕೊಡುತ್ತದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್‌ ನ ಸೋಮನಾಥದಲ್ಲಿ ನಡೆದ 'ಸೋಮನಾಥ ಸ್ವಾಭಿಮಾನ ಪರ್ವ' ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ "ಈ ಸಮಯ ಅಸಾಧಾರಣವಾದುದು, ಈ ವಾತಾವರಣ ಅಸಾಧಾರಣವಾದುದು ಮತ್ತು ಈ ಆಚರಣೆಯೂ ಅಸಾಧಾರಣವಾದುದು" ಎಂದು ಅವರು ಬಣ್ಣಿಸಿದರು. ಒಂದು ಕಡೆ ಸಾಕ್ಷಾತ್ ಮಹಾದೇವನಿದ್ದರೆ, ಮತ್ತೊಂದೆಡೆ ಸಮುದ್ರದ ಬೃಹತ್ ಅಲೆಗಳು, ಸೂರ್ಯನ ಕಿರಣಗಳು, ಮಂತ್ರಘೋಷಗಳ ಅನುರಣನ ಮತ್ತು ಭಕ್ತಿಯ ಉಲ್ಬಣವಿದೆ ಎಂದು ಅವರು ವಿವರಿಸಿದರು. ಈ ದೈವಿಕ ಪರಿಸರದಲ್ಲಿ ಸೋಮನಾಥನ ಭಕ್ತರ ಉಪಸ್ಥಿತಿಯು ಈ ಸಂದರ್ಭವನ್ನು ಮತ್ತಷ್ಟು ಭವ್ಯ ಹಾಗೂ ಪವಿತ್ರವಾಗಿಸಿದೆ ಎಂದು ಅವರು ತಿಳಿಸಿದರು. ಸೋಮನಾಥ ದೇವಾಲಯ ಟ್ರಸ್ಟ್‌ನ ಅಧ್ಯಕ್ಷರಾಗಿ, ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ತಮ್ಮ ಮಹಾನ್ ಸೌಭಾಗ್ಯ ಎಂದು ಶ್ರೀ ಮೋದಿ ಹಂಚಿಕೊಂಡರು. ಕಳೆದ 72 ಗಂಟೆಗಳಿಂದ ನಿರಂತರವಾಗಿ ನಡೆಯುತ್ತಿರುವ ಓಂಕಾರ ಜಪ ಮತ್ತು ಮಂತ್ರಘೋಷಗಳ ಪಠಣವನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು. ನಿನ್ನೆ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಾವಿರ ಡ್ರೋನ್‌ ಗಳು ಮತ್ತು ವೇದ ಪಾಠಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ಸೋಮನಾಥದ ಸಾವಿರ ವರ್ಷಗಳ ಭವ್ಯ ಇತಿಹಾಸವನ್ನು ಪ್ರಸ್ತುತಪಡಿಸಿದ್ದನ್ನು ಅವರು ಉಲ್ಲೇಖಿಸಿದರು. ಅಲ್ಲದೆ, ಇಂದು 108 ಕುದುರೆಗಳನ್ನೊಳಗೊಂಡ 'ಶೌರ್ಯ ಯಾತ್ರೆ' ದೇವಾಲಯವನ್ನು ತಲುಪಿದೆ ಎಂದು ತಿಳಿಸಿದರು. ಮಂತ್ರಗಳು ಮತ್ತು ಭಜನೆಗಳ ಈ ಮನಮೋಹಕ ಪ್ರಸ್ತುತಿಯು ಪದಗಳಿಗೆ ನಿಲುಕದ್ದು, ಈ ಅನುಭವವನ್ನು ಕಾಲ ಮಾತ್ರವೇ ಸೆರೆಹಿಡಿಯಲು ಸಾಧ್ಯ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಸಂಭ್ರಮವು ಕೇವಲ ಒಂದು ಉತ್ಸವವಲ್ಲ; ಇದು ಸ್ವಾಭಿಮಾನ, ಗೌರವ, ಘನತೆ, ಜ್ಞಾನ, ಭವ್ಯತೆ, ಪರಂಪರೆ, ಆಧ್ಯಾತ್ಮಿಕತೆ, ಸಾಕ್ಷಾತ್ಕಾರ, ಆನಂದ ಮತ್ತು ಆತ್ಮೀಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ಎಲ್ಲಕ್ಕಿಂತ ಮಿಗಿಲಾಗಿ, ಈ ಕಾರ್ಯಕ್ರಮವು ಭಗವಾನ್ ಮಹಾದೇವನ ಆಶೀರ್ವಾದವನ್ನು ಹೊಂದಿದೆ ಎಂದು ಅವರು ಒತ್ತಿ ಹೇಳಿದರು.

 

ಇಂದು ಇಲ್ಲಿ ಮಾತನಾಡುತ್ತಿರುವಾಗ, ಈಗ ಜನರು ಕುಳಿತಿರುವ ಇದೇ ಜಾಗದಲ್ಲಿ ಸರಿಯಾಗಿ ಸಾವಿರ ವರ್ಷಗಳ ಹಿಂದೆ ವಾತಾವರಣ ಹೇಗಿದ್ದಿರಬಹುದು ಎಂಬ ಆಲೋಚನೆ ನನ್ನ ಮನಸ್ಸಿನಲ್ಲಿ ಪದೇ ಪದೇ ಮೂಡುತ್ತಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಇಲ್ಲಿ ನೆರೆದಿರುವವರ ಪೂರ್ವಜರು ತಮ್ಮ ನಂಬಿಕೆಗಾಗಿ, ವಿಶ್ವಾಸಕ್ಕಾಗಿ ಮತ್ತು ತಮ್ಮ ಆರಾಧ್ಯ ದೈವ ಮಹದೇವನಿಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು, ತಮಗಿದ್ದ ಸರ್ವಸ್ವವನ್ನೂ ಅರ್ಪಿಸಿದ್ದಾರೆ ಎಂದು ಅವರು ಸ್ಮರಿಸಿದರು. ಸಾವಿರ ವರ್ಷಗಳ ಹಿಂದೆ ದಾಳಿಕೋರರು ತಾವು ಗೆದ್ದಿದ್ದೇವೆ ಎಂದು ಭಾವಿಸಿದ್ದರು, ಆದರೆ ಒಂದು ಸಹಸ್ರಮಾನದ ನಂತರವೂ ಇಂದು ಸೋಮನಾಥ ಮಹಾದೇವನ ದೇವಾಲಯದ ಮೇಲಿರುವ ಧ್ವಜವು ಇಡೀ ಸೃಷ್ಟಿಗೆ ಹಿಂದೂಸ್ತಾನದ ಶಕ್ತಿ ಮತ್ತು ಸಾಮರ್ಥ್ಯವನ್ನು ಸಾರುತ್ತಿದೆ ಎಂದು ಅವರು ಹೇಳಿದರು. ಪ್ರಭಾಸ್ ಪಟಾಣ್ ಮಣ್ಣಿನ ಪ್ರತಿಯೊಂದು ಕಣವೂ ಶೌರ್ಯ, ಧೈರ್ಯ ಮತ್ತು ಪರಾಕ್ರಮಕ್ಕೆ ಸಾಕ್ಷಿಯಾಗಿದೆ ಹಾಗೂ ಸೋಮನಾಥನ ಸ್ವರೂಪದ ರಕ್ಷಣೆಗಾಗಿ ಅಸಂಖ್ಯಾತ ಶಿವಭಕ್ತರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ ಎಂದು ಶ್ರೀ ಮೋದಿಯವರು ಒತ್ತಿ ಹೇಳಿದರು. ಸೋಮನಾಥ ಸ್ವಾಭಿಮಾನ ಪರ್ವದ ಈ ಸಂದರ್ಭದಲ್ಲಿ, ಸೋಮನಾಥನ ರಕ್ಷಣೆ ಮತ್ತು ಪುನರ್ನಿರ್ಮಾಣಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಮತ್ತು ಭಗವಾನ್ ಮಹದೇವನಿಗೆ ಸರ್ವಸ್ವವನ್ನೂ ಅರ್ಪಿಸಿದ ಪ್ರತಿಯೊಬ್ಬ ವೀರ ಪುರುಷ ಹಾಗೂ ಮಹಿಳೆಗೆ ತಾನು ಮೊದಲು ತಲೆಬಾಗುತ್ತೇನೆ ಎಂದು ಅವರು ಹೇಳಿದರು.

ಪ್ರಭಾಸ್ ಪಟಾಣ್ ಕೇವಲ ಭಗವಾನ್ ಶಿವನ ಕ್ಷೇತ್ರ ಮಾತ್ರವಲ್ಲದೆ ಭಗವಾನ್ ಶ್ರೀಕೃಷ್ಣನಿಂದಲೂ ಪವಿತ್ರಗೊಂಡಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿಯವರು, ಮಹಾಭಾರತ ಕಾಲದಲ್ಲಿ ಪಾಂಡವರು ಕೂಡ ಈ ಪುಣ್ಯಕ್ಷೇತ್ರದಲ್ಲಿ ತಪಸ್ಸು ಮಾಡಿದ್ದರು ಎಂದು ತಿಳಿಸಿದರು. ಆದ್ದರಿಂದ ಈ ಸಂದರ್ಭವು ಭಾರತದ ಅಸಂಖ್ಯಾತ ಆಯಾಮಗಳಿಗೆ ಗೌರವ ಸಲ್ಲಿಸುವ ಒಂದು ಅವಕಾಶವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಸೋಮನಾಥದ ಸ್ವಾಭಿಮಾನದ ಪ್ರಯಾಣವು ಸಾವಿರ ವರ್ಷಗಳನ್ನು ಪೂರೈಸುತ್ತಿರುವಂತೆಯೇ, 1951 ರಲ್ಲಿ ದೇವಾಲಯದ ಪುನರ್ನಿರ್ಮಾಣವಾಗಿ ಎಪ್ಪತ್ತೈದು ವರ್ಷಗಳು ಪೂರೈಸುತ್ತಿರುವುದು ಒಂದು ಅದೃಷ್ಟದ ಕಾಕತಾಳೀಯವಾಗಿದೆ ಎಂದು ಅವರು ಗಮನಿಸಿದರು. ಸೋಮನಾಥ ಸ್ವಾಭಿಮಾನ ಪರ್ವದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ವಿಶ್ವದಾದ್ಯಂತ ಇರುವ ಕೋಟ್ಯಂತರ ಭಕ್ತರಿಗೆ ಶುಭಾಶಯಗಳನ್ನು ಕೋರಿದರು.

ಈ ಉತ್ಸವವು ಕೇವಲ ಸಾವಿರ ವರ್ಷಗಳ ಹಿಂದೆ ನಡೆದ ವಿನಾಶದ ಸ್ಮರಣೆಯಲ್ಲ, ಬದಲಾಗಿ ಇದು ಸಾವಿರ ವರ್ಷಗಳ ಸುದೀರ್ಘ ಪ್ರಯಾಣದ ಸಂಭ್ರಮ ಹಾಗೂ ಭಾರತದ ಅಸ್ತಿತ್ವ ಮತ್ತು ಹೆಮ್ಮೆಯ ಆಚರಣೆಯಾಗಿದೆ ಎಂದು ಪ್ರಧಾನಮಂತ್ರಿಯವರು ಪ್ರತಿಪಾದಿಸಿದರು. ಪ್ರತಿ ಹಂತ ಮತ್ತು ಮೈಲಿಗಲ್ಲುಗಳಲ್ಲಿ ಸೋಮನಾಥ ಮತ್ತು ಭಾರತದ ನಡುವೆ ವಿಶಿಷ್ಟವಾದ ಸಾಮ್ಯತೆಗಳನ್ನು ಕಾಣಬಹುದು ಎಂದು ಅವರು ಆಚರಿಸಿದರು. ಸೋಮನಾಥವನ್ನು ನಾಶಮಾಡಲು ಅಸಂಖ್ಯಾತ ಪ್ರಯತ್ನಗಳು ನಡೆದಂತೆಯೇ, ವಿದೇಶಿ ಆಕ್ರಮಣಕಾರರು ಶತಮಾನಗಳ ಕಾಲ ಭಾರತವನ್ನು ನಿರ್ನಾಮ ಮಾಡಲು ಪ್ರಯತ್ನಿಸಿದರು. ಆದರೂ ಸೋಮನಾಥವೂ ನಾಶವಾಗಲಿಲ್ಲ ಅಥವಾ ಭಾರತವೂ ಅಳಿಯಲಿಲ್ಲ, ಏಕೆಂದರೆ ಭಾರತ ಮತ್ತು ಅದರ ನಂಬಿಕೆಯ ಕೇಂದ್ರಗಳು ಅವಿಭಾಜ್ಯವಾಗಿ ಒಂದಾಗಿವೆ ಎಂದು ಅವರು ಹೇಳಿದರು.

 

ಸಾವಿರ ವರ್ಷಗಳ ಹಿಂದಿನ ಇತಿಹಾಸವನ್ನು ನಾವು ಕಲ್ಪಿಸಿಕೊಳ್ಳಬೇಕು, ಕ್ರಿ.ಶ. 1026 ರಲ್ಲಿ ಮೊಹಮ್ಮದ್ ಘಜ್ನಿ ಮೊದಲ ಬಾರಿಗೆ ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿ ಅದನ್ನು ನಾಶಪಡಿಸಿದಾಗ, ಅದರ ಅಸ್ತಿತ್ವವನ್ನೇ ಅಳಿಸಿಹಾಕಿದ್ದೇನೆ ಎಂದು ಅವನು ನಂಬಿದ್ದನು ಎಂದು ಶ್ರೀ ಮೋದಿಯವರು ಸ್ಮರಿಸಿದರು. ಆದರೆ ಕೆಲವೇ ವರ್ಷಗಳಲ್ಲಿ ಸೋಮನಾಥವನ್ನು ಪುನರ್ನಿರ್ಮಿಸಲಾಯಿತು ಮತ್ತು ಹನ್ನೆರಡನೇ ಶತಮಾನದಲ್ಲಿ ರಾಜ ಕುಮಾರಪಾಲನು ದೇವಾಲಯದ ಭವ್ಯ ಜೀರ್ಣೋದ್ಧಾರವನ್ನು ಕೈಗೊಂಡನು ಎಂದು ಅವರು ತಿಳಿಸಿದರು. ಹದಿಮೂರನೇ ಶತಮಾನದ ಕೊನೆಯಲ್ಲಿ ಅಲಾವುದ್ದೀನ್ ಖಿಲ್ಜಿ ಮತ್ತೆ ಸೋಮನಾಥದ ಮೇಲೆ ದಾಳಿ ಮಾಡುವ ಧೈರ್ಯ ಮಾಡಿದನು, ಆದರೆ ಜಾಲೋರ್‌ ನ ಅರಸನು ಖಿಲ್ಜಿಯ ಸೈನ್ಯದ ವಿರುದ್ಧ ವೀರಾವೇಶದಿಂದ ಹೋರಾಡಿದನು ಎಂದು ಅವರು ಉಲ್ಲೇಖಿಸಿದರು. ಹದಿನಾಲ್ಕನೇ ಶತಮಾನದ ಆರಂಭದಲ್ಲಿ ಜುನಾಗಢದ ರಾಜನು ಮತ್ತೊಮ್ಮೆ ದೇವಾಲಯದ ಘನತೆಯನ್ನು ಮರುಸ್ಥಾಪಿಸಿದನು ಮತ್ತು ಅದೇ ಶತಮಾನದ ನಂತರದ ಭಾಗದಲ್ಲಿ ಮುಜಫರ್ ಖಾನ್ ಸೋಮನಾಥದ ಮೇಲೆ ದಾಳಿ ಮಾಡಿದನು, ಆದರೆ ಅವನ ಪ್ರಯತ್ನವೂ ವಿಫಲವಾಯಿತು ಎಂದು ಪ್ರಧಾನಮಂತ್ರಿ ತಿಳಿಸಿದರು. ಹದಿನೈದನೇ ಶತಮಾನದಲ್ಲಿ ಸುಲ್ತಾನ್ ಅಹಮದ್ ಶಾ ದೇವಾಲಯವನ್ನು ಅಪವಿತ್ರಗೊಳಿಸಲು ಪ್ರಯತ್ನಿಸಿದನು ಮತ್ತು ಅವನ ಮೊಮ್ಮಗ ಸುಲ್ತಾನ್ ಮಹಮ್ಮದ್ ಬೇಗಡ ಅದನ್ನು ಮಸೀದಿಯನ್ನಾಗಿ ಪರಿವರ್ತಿಸಲು ಯತ್ನಿಸಿದನು, ಆದರೆ ಮಹದೇವನ ಭಕ್ತರ ಪರಿಶ್ರಮದಿಂದ ದೇವಾಲಯವು ಮತ್ತೊಮ್ಮೆ ಪುನರುಜ್ಜೀವನಗೊಂಡಿತು ಎಂದು ಅವರು ನೆನಪಿಸಿಕೊಂಡರು. ಹದಿನೇಳು ಮತ್ತು ಹದಿನೆಂಟನೇ ಶತಮಾನಗಳಲ್ಲಿ ಔರಂಗಜೇಬ್ ಸೋಮನಾಥವನ್ನು ಅಪವಿತ್ರಗೊಳಿಸಿ ಅದನ್ನು ಮತ್ತೆ ಮಸೀದಿಯನ್ನಾಗಿ ಬದಲಿಸಲು ಪ್ರಯತ್ನಿಸಿದನು, ಆದರೆ ನಂತರದ ದಿನಗಳಲ್ಲಿ ಅಹಲ್ಯಾಬಾಯಿ ಹೋಳ್ಕರ್ ಹೊಸ ದೇವಾಲಯವನ್ನು ಸ್ಥಾಪಿಸಿ ಸೋಮನಾಥಕ್ಕೆ ಮರುಜೀವ ನೀಡಿದರು ಎಂದು ಅವರು ಒತ್ತಿ ಹೇಳಿದರು. "ಸೋಮನಾಥದ ಇತಿಹಾಸವು ವಿನಾಶ ಮತ್ತು ಸೋಲಿನ ಕಥೆಯಲ್ಲ, ಬದಲಾಗಿ ಅದು ವಿಜಯ ಮತ್ತು ಪುನರ್ನಿರ್ಮಾಣದ ಇತಿಹಾಸವಾಗಿದೆ" ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಆಕ್ರಮಣಕಾರರು ಬರುತ್ತಲೇ ಇದ್ದರು, ಧಾರ್ಮಿಕ ಭಯೋತ್ಪಾದನೆಯ ಹೊಸ ದಾಳಿಗಳು ನಡೆಯುತ್ತಲೇ ಇದ್ದವು, ಆದರೆ ಪ್ರತಿ ಯುಗದಲ್ಲೂ ಸೋಮನಾಥವನ್ನು ಪದೇ ಪದೇ ಮರುಸ್ಥಾಪಿಸಲಾಯಿತು ಎಂದು ಅವರು ಹೇಳಿದರು. ಇಂತಹ ಶತಮಾನಗಳ ಸುದೀರ್ಘ ಹೋರಾಟ, ಸುದೀರ್ಘ ಪ್ರತಿರೋಧ, ಅಸಾಧಾರಣ ತಾಳ್ಮೆ, ಸೃಜನಶೀಲತೆ ಮತ್ತು ಪುನರ್ನಿರ್ಮಾಣದ ಶಕ್ತಿ ಹಾಗೂ ಸಂಸ್ಕೃತಿ ಮತ್ತು ನಂಬಿಕೆಯ ಮೇಲಿನ ಅಚಲವಾದ ವಿಶ್ವಾಸವು ವಿಶ್ವ ಇತಿಹಾಸದಲ್ಲೇ ಅಪ್ರತಿಮವಾದುದು ಎಂದು ಅವರು ಅಭಿಪ್ರಾಯಪಟ್ಟರು.

ನಮ್ಮ ಪೂರ್ವಜರ ಶೌರ್ಯವನ್ನು ನಾವು ನೆನಪಿಟ್ಟುಕೊಳ್ಳಬಾರದೇ ಮತ್ತು ಅವರು ಪ್ರದರ್ಶಿಸಿದ ಧೈರ್ಯದಿಂದ ನಾವು ಪ್ರೇರಣೆ ಪಡೆಯಬಾರದೇ ಎಂದು ನಾವು ನಮ್ಮನ್ನು ನಾವೇ ಕೇಳಿಕೊಳ್ಳಬೇಕು ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಯಾವೊಬ್ಬ ಪುತ್ರನಾಗಲಿ ಅಥವಾ ವಂಶಸ್ಥನಾಗಲಿ ತಮ್ಮ ಪೂರ್ವಜರ ವೀರಗಾಥೆಗಳನ್ನು ಮರೆತಂತೆ ಎಂದಿಗೂ ನಟಿಸಬಾರದು ಎಂದು ಅವರು ಒತ್ತಿ ಹೇಳಿದರು. ಇಂತಹ ಸ್ಮರಣೆಯು ಕೇವಲ ಒಂದು ಕರ್ತವ್ಯ ಮಾತ್ರವಲ್ಲದೆ ಶಕ್ತಿಯ ಮೂಲವೂ ಆಗಿದೆ ಎಂದು ಪ್ರತಿಪಾದಿಸಿದ ಅವರು, ನಮ್ಮ ಪೂರ್ವಜರ ತ್ಯಾಗ ಮತ್ತು ಸಾಹಸಗಳು ನಮ್ಮ ಪ್ರಜ್ಞೆಯಲ್ಲಿ ಸದಾ ಜೀವಂತವಾಗಿರುವಂತೆ ನೋಡಿಕೊಳ್ಳಲು ಎಲ್ಲರಿಗೂ ಕರೆ ನೀಡಿದರು.

ಘಜ್ನಿಯಿಂದ ಹಿಡಿದು ಔರಂಗಜೇಬನವರೆಗಿನ ಆಕ್ರಮಣಕಾರರು ಸೋಮನಾಥದ ಮೇಲೆ ದಾಳಿ ಮಾಡಿದಾಗ, ತಮ್ಮ ಖಡ್ಗಗಳು ಶಾಶ್ವತ ಸೋಮನಾಥವನ್ನು ಗೆಲ್ಲುತ್ತಿವೆ ಎಂದು ಅವರು ನಂಬಿದ್ದರು. ಆದರೆ 'ಸೋಮ' ಎಂಬ ಹೆಸರಿನಲ್ಲೇ ಅಮೃತದ ಸಾರವಿದೆ ಮತ್ತು ವಿಷವನ್ನು ಸೇವಿಸಿದ ನಂತರವೂ ಅಮರನಾಗಿರುವ ಕಲ್ಪನೆ ಅಡಗಿದೆ ಎಂಬುದನ್ನು ಆ ಧರ್ಮಾಂಧರು ಅರ್ಥಮಾಡಿಕೊಳ್ಳಲು ವಿಫಲರಾದರು ಎಂದು ಶ್ರೀ ಮೋದಿಯವರು ಹೇಳಿದರು. ಸೋಮನಾಥದೊಳಗೆ ಕರುಣಾಮಯಿಯೂ ಮತ್ತು ಉಗ್ರರೂ ಆದ "ಪ್ರಚಂಡ ತಾಂಡವ ಶಿವ" ಸ್ವರೂಪದ ಸದಾಶಿವ ಮಹಾದೇವನ ಚೈತನ್ಯ ಶಕ್ತಿಯು ನೆಲೆಸಿದೆ ಎಂದು ಅವರು ತಿಳಿಸಿದರು.

 

ಸೋಮನಾಥದಲ್ಲಿ ನೆಲೆಸಿರುವ ಭಗವಾನ್ ಮಹಾದೇವನ ಹೆಸರುಗಳಲ್ಲಿ ಒಂದಾದ 'ಮೃತ್ಯುಂಜಯ' ಎಂದರೆ ಮೃತ್ಯುವನ್ನು ಗೆದ್ದವನು ಮತ್ತು ಅವನೇ ಕಾಲದ ಸ್ವರೂಪಿಯಾಗಿದ್ದಾನೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಶ್ಲೋಕವೊಂದನ್ನು ಉಲ್ಲೇಖಿಸಿದ ಶ್ರೀ ಮೋದಿಯವರು, ಸೃಷ್ಟಿಯು ಅವನಿಂದಲೇ ಉದ್ಭವಿಸುತ್ತದೆ ಮತ್ತು ಅವನಲ್ಲೇ ಲೀನವಾಗುತ್ತದೆ ಎಂದು ವಿವರಿಸಿದರು. ಶಿವನು ಇಡೀ ಬ್ರಹ್ಮಾಂಡದಲ್ಲಿ ವ್ಯಾಪಿಸಿದ್ದಾನೆ ಮತ್ತು ಪ್ರತಿಯೊಂದು ಕಣದಲ್ಲೂ ಶಂಕರನಿದ್ದಾನೆ ಎಂಬ ನಂಬಿಕೆಯನ್ನು ಅವರು ದೃಢಪಡಿಸಿದರು. ಶಂಕರನ ಅಸಂಖ್ಯಾತ ರೂಪಗಳನ್ನು ಯಾರೂ ನಾಶಮಾಡಲು ಸಾಧ್ಯವಿಲ್ಲ, ಏಕೆಂದರೆ ಜೀವರಾಶಿಗಳಲ್ಲಿಯೂ ನಾವು ಶಿವನನ್ನು ಕಾಣುತ್ತೇವೆ; ಆದ್ದರಿಂದ ಯಾವುದೇ ಶಕ್ತಿಯು ನಮ್ಮ ನಂಬಿಕೆಯನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು. ಸೋಮನಾಥವನ್ನು ನಾಶಮಾಡಲು ಹವಣಿಸಿದ ಆ ಧರ್ಮಾಂಧ ಆಕ್ರಮಣಕಾರರನ್ನು ಕಾಲಚಕ್ರವು ಇತಿಹಾಸದ ಪುಟಗಳಿಗೆ ಸೀಮಿತಗೊಳಿಸಿದೆ, ಆದರೆ ವಿಶಾಲವಾದ ಸಮುದ್ರದ ದಡದಲ್ಲಿ ಭವ್ಯವಾದ ಧರ್ಮಧ್ವಜವನ್ನು ಎತ್ತಿ ಹಿಡಿದಿರುವ ಈ ದೇವಾಲಯವು ಇಂದಿಗೂ ಎತ್ತರವಾಗಿ ನಿಂತಿದೆ ಎಂದು ಪ್ರಧಾನಿ ಹೈಲೈಟ್ ಮಾಡಿದರು. "ನಾನು ಚಂದ್ರಶೇಖರ ಶಿವನನ್ನು ಅವಲಂಬಿಸಿದ್ದೇನೆ, ಕಾಲವು ನನಗೆ ಏನು ತಾನೇ ಮಾಡಬಲ್ಲದು?" ಎಂದು ಸೋಮನಾಥದ ಶಿಖರವು ಸಾರುತ್ತಿದೆ ಎಂದು ಅವರು ಉಲ್ಲೇಖಿಸಿದರು.

ಸೋಮನಾಥ ಸ್ವಾಭಿಮಾನ ಪರ್ವವು ಕೇವಲ ಐತಿಹಾಸಿಕ ಹೆಮ್ಮೆಯ ಉತ್ಸವ ಮಾತ್ರವಲ್ಲದೆ, ಭವಿಷ್ಯಕ್ಕಾಗಿ ಶಾಶ್ವತ ಪ್ರಯಾಣವನ್ನು ಜೀವಂತವಾಗಿರಿಸುವ ಮಾಧ್ಯಮವಾಗಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿಯವರು, ನಮ್ಮ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಬಲಪಡಿಸಲು ಈ ಸಂದರ್ಭವನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ಕೆಲವು ರಾಷ್ಟ್ರಗಳು ಕೇವಲ ಕೆಲವು ಶತಮಾನಗಳ ಹಳೆಯ ಪರಂಪರೆಯನ್ನು ಜಗತ್ತಿನ ಮುಂದೆ ತಮ್ಮ ಅಸ್ಮಿತೆಯಾಗಿ ಪ್ರಸ್ತುತಪಡಿಸುತ್ತವೆ, ಆದರೆ ಭಾರತವು ಸಾವಿರಾರು ವರ್ಷಗಳ ಇತಿಹಾಸವಿರುವ ಸೋಮನಾಥದಂತಹ ಪವಿತ್ರ ಸ್ಥಳಗಳನ್ನು ಹೊಂದಿದೆ; ಇವು ಶಕ್ತಿ, ಪ್ರತಿರೋಧ ಮತ್ತು ಪರಂಪರೆಯ ಸಂಕೇತಗಳಾಗಿವೆ ಎಂದು ಅವರು ಗಮನಿಸಿದರು. ದುರದೃಷ್ಟವಶಾತ್, ಸ್ವಾತಂತ್ರ್ಯಾನಂತರ ವಸಾಹತುಶಾಹಿ ಮನಸ್ಥಿತಿಯುಳ್ಳವರು ಇಂತಹ ಪರಂಪರೆಯಿಂದ ದೂರವಿರಲು ಪ್ರಯತ್ನಿಸಿದರು ಮತ್ತು ಈ ಇತಿಹಾಸವನ್ನು ಅಳಿಸಿಹಾಕಲು ದುರುದ್ದೇಶಪೂರಿತ ಪ್ರಯತ್ನಗಳು ನಡೆದವು ಎಂದು ಅವರು ವಿಷಾದಿಸಿದರು. ಸೋಮನಾಥನ ರಕ್ಷಣೆಗಾಗಿ ಮಾಡಿದ ತ್ಯಾಗಗಳನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ರಾವಲ್ ಕನ್ಹರ್ ದೇವ್ ಅಂತಹ ಅರಸರ ಪ್ರಯತ್ನಗಳು, ವೀರ್ ಹಮೀರ್ ಜಿ ಗೋಹಿಲ್ ಅವರ ಶೌರ್ಯ ಮತ್ತು ವೇಗ್ದಾ ಭಿಲ್ ಅವರ ಪರಾಕ್ರಮವನ್ನು ಉಲ್ಲೇಖಿಸಿದರು. ಇಂತಹ ಅನೇಕ ವೀರರು ದೇವಾಲಯದ ಇತಿಹಾಸದೊಂದಿಗೆ ಬೆಸೆದುಕೊಂಡಿದ್ದಾರೆ, ಆದರೆ ಅವರಿಗೆ ಎಂದಿಗೂ ತಕ್ಕ ಮನ್ನಣೆ ಸಿಗಲಿಲ್ಲ ಎಂದು ಅವರು ಗಮನಿಸಿದರು. ಕೆಲವು ಇತಿಹಾಸಕಾರರು ಮತ್ತು ರಾಜಕಾರಣಿಗಳು ಆಕ್ರಮಣಗಳ ಇತಿಹಾಸವನ್ನು ಮುಚ್ಚಿಹಾಕಲು ಪ್ರಯತ್ನಿಸಿದರು, ಧಾರ್ಮಿಕ ಧರ್ಮಾಂಧತೆಯನ್ನು ಕೇವಲ ಲೂಟಿ ಎಂದು ಬಿಂಬಿಸಿದರು ಮತ್ತು ಸತ್ಯವನ್ನು ಮರೆಮಾಚಲು ಪುಸ್ತಕಗಳನ್ನು ಬರೆದರು ಎಂದು ಅವರು ಟೀಕಿಸಿದರು. ಸೋಮನಾಥದ ಮೇಲೆ ಕೇವಲ ಒಂದು ಬಾರಿ ದಾಳಿ ನಡೆಯಲಿಲ್ಲ, ಬದಲಾಗಿ ಪದೇ ಪದೇ ದಾಳಿಗಳು ನಡೆದವು; ಈ ದಾಳಿಗಳು ಕೇವಲ ಆರ್ಥಿಕ ಲೂಟಿಗಾಗಿ ಆಗಿದ್ದರೆ ಸಾವಿರ ವರ್ಷಗಳ ಹಿಂದಿನ ಮೊದಲ ಪ್ರಮುಖ ಲೂಟಿಯ ನಂತರ ಅವು ನಿಲ್ಲಬೇಕಿತ್ತು, ಆದರೆ ಹಾಗಾಗಲಿಲ್ಲ ಎಂದು ಅವರು ಒತ್ತಿ ಹೇಳಿದರು. ಸೋಮನಾಥದ ಪವಿತ್ರ ವಿಗ್ರಹಗಳನ್ನು ಒಡೆಯಲಾಯಿತು, ದೇವಾಲಯದ ಸ್ವರೂಪವನ್ನು ಪದೇ ಪದೇ ಬದಲಾಯಿಸಲಾಯಿತು; ಆದರೂ ಸೋಮನಾಥ ಕೇವಲ ಲೂಟಿಗಾಗಿ ನಾಶವಾಯಿತು ಎಂದು ಜನರಿಗೆ ಕಲಿಸಲಾಯಿತು. ದ್ವೇಷ, ದಬ್ಬಾಳಿಕೆ ಮತ್ತು ಭಯೋತ್ಪಾದನೆಯ ಕ್ರೂರ ಇತಿಹಾಸವನ್ನು ನಮ್ಮಿಂದ ಮರೆಮಾಡಲಾಗಿತ್ತು ಎಂದು ಅವರು ಹೇಳಿದರು.

ತಮ್ಮ ನಂಬಿಕೆಗೆ ಪ್ರಾಮಾಣಿಕವಾಗಿರುವ ಯಾವುದೇ ವ್ಯಕ್ತಿಯು ಇಂತಹ ಉಗ್ರಗಾಮಿ ಚಿಂತನೆಯನ್ನು ಎಂದಿಗೂ ಬೆಂಬಲಿಸುವುದಿಲ್ಲ, ಆದರೆ ಓಲೈಕೆಯಿಂದ ಪ್ರೇರಿತರಾದವರು ಯಾವಾಗಲೂ ಅದರ ಮುಂದೆ ತಲೆಬಾಗಿದ್ದಾರೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಭಾರತವು ಗುಲಾಮಗಿರಿಯ ಸರಪಳಿಯಿಂದ ಮುಕ್ತವಾದಾಗ ಮತ್ತು ಸರ್ದಾರ್ ಪಟೇಲರು ಸೋಮನಾಥವನ್ನು ಪುನರ್ನಿರ್ಮಿಸುವ ಪ್ರತಿಜ್ಞೆ ಮಾಡಿದಾಗ, ಅವರನ್ನು ತಡೆಯಲು ಪ್ರಯತ್ನಗಳು ನಡೆದವು ಮತ್ತು 1951 ರಲ್ಲಿ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಬಂದಾಗಲೂ ಆಕ್ಷೇಪಣೆಗಳನ್ನು ಎತ್ತಲಾಗಿತ್ತು ಎಂದು ಅವರು ಹೈಲೈಟ್ ಮಾಡಿದರು. ಆ ಸಮಯದಲ್ಲಿ ಸೌರಾಷ್ಟ್ರದ ದೊರೆಯಾಗಿದ್ದ ಜಾಮ್ ಸಾಹೇಬ್ ಮಹಾರಾಜ ದಿಗ್ವಿಜಯ ಸಿಂಗ್ ಜಿ ಅವರು ರಾಷ್ಟ್ರೀಯ ಹೆಮ್ಮೆಯನ್ನು ಎಲ್ಲಕ್ಕಿಂತ ಮಿಗಿಲಾಗಿರಿಸಿದ್ದರು, ಸೋಮನಾಥ ದೇವಾಲಯಕ್ಕೆ ಒಂದು ಲಕ್ಷ ರೂಪಾಯಿಗಳನ್ನು ನೀಡಿದ್ದರು ಮತ್ತು ಟ್ರಸ್ಟ್‌ ನ ಮೊದಲ ಅಧ್ಯಕ್ಷರಾಗಿ ಹೆಚ್ಚಿನ ಜವಾಬ್ದಾರಿಯೊಂದಿಗೆ ಸೇವೆ ಸಲ್ಲಿಸಿದ್ದರು ಎಂದು ಅವರು ಸ್ಮರಿಸಿದರು.

 

ದುರದೃಷ್ಟವಶಾತ್, ಸೋಮನಾಥದ ಪುನರ್ನಿರ್ಮಾಣವನ್ನು ವಿರೋಧಿಸಿದ ಶಕ್ತಿಗಳು ಇಂದಿಗೂ ದೇಶದಲ್ಲಿ ಸಕ್ರಿಯವಾಗಿವೆ ಎಂದು ಒತ್ತಿ ಹೇಳಿದ ಶ್ರೀ ಮೋದಿಯವರು, ಈಗ ಭಾರತದ ವಿರುದ್ಧದ ಪಿತೂರಿಗಳನ್ನು ಖಡ್ಗಗಳ ಬದಲಿಗೆ ಇತರ ದುರುದ್ದೇಶಪೂರಿತ ವಿಧಾನಗಳ ಮೂಲಕ ನಡೆಸಲಾಗುತ್ತಿದೆ ಎಂದು ಹೇಳಿದರು. ನಾವು ಜಾಗರೂಕರಾಗಿರಬೇಕು, ಬಲಶಾಲಿಯಾಗಿರಬೇಕು ಮತ್ತು ಒಗ್ಗಟ್ಟಿನಿಂದ ಇರಬೇಕು ಹಾಗೂ ನಮ್ಮನ್ನು ವಿಭಜಿಸಲು ಪ್ರಯತ್ನಿಸುವ ಪ್ರತಿಯೊಂದು ಶಕ್ತಿಯನ್ನು ಸೋಲಿಸಬೇಕು ಎಂದು ಅವರು ಕರೆ ನೀಡಿದರು.

ನಾವು ನಮ್ಮ ನಂಬಿಕೆ, ನಮ್ಮ ಬೇರುಗಳೊಂದಿಗೆ ಸಂಪರ್ಕ ಹೊಂದಿದಾಗ ಮತ್ತು ಪೂರ್ಣ ಹೆಮ್ಮೆಯಿಂದ ನಮ್ಮ ಪರಂಪರೆಯನ್ನು ಸಂರಕ್ಷಿಸಿದಾಗ ಮಾತ್ರ ನಮ್ಮ ನಾಗರಿಕತೆಯ ಅಡಿಪಾಯವು ಬಲಗೊಳ್ಳುತ್ತದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಈ ಸಾವಿರ ವರ್ಷಗಳ ಪ್ರಯಾಣವು ಮುಂದಿನ ಸಾವಿರ ವರ್ಷಗಳಿಗಾಗಿ ಸಿದ್ಧರಾಗಲು ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.

ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯ ಐತಿಹಾಸಿಕ ಸಂದರ್ಭವನ್ನು ಸ್ಮರಿಸಿದ ಶ್ರೀ ಮೋದಿಯವರು, "ದೇವನಿಂದ ದೇಶ" (ದೇವ್‌ ಸೇ ದೇಶ್‌) ಎಂಬ ದೃಷ್ಟಿಕೋನದೊಂದಿಗೆ ಮುನ್ನಡೆಯುವ ಬಗ್ಗೆ ಮಾತನಾಡುತ್ತಾ, ಅಂದು ಭಾರತಕ್ಕಾಗಿ ಸಾವಿರ ವರ್ಷಗಳ ಭವ್ಯ ದೃಷ್ಟಿಕೋನವನ್ನು ಮಂಡಿಸಿದ್ದಾಗಿ ತಿಳಿಸಿದರು. ಇಂದು ಭಾರತದ ಸಾಂಸ್ಕೃತಿಕ ಪುನರುತ್ಥಾನವು ಕೋಟ್ಯಂತರ ನಾಗರಿಕರಲ್ಲಿ ಹೊಸ ಆತ್ಮವಿಶ್ವಾಸವನ್ನು ತುಂಬುತ್ತಿದೆ, ಪ್ರತಿಯೊಬ್ಬ ಭಾರತೀಯನೂ ಅಭಿವೃದ್ಧಿ ಹೊಂದಿದ ಭಾರತಕ್ಕೆ ಬದ್ಧನಾಗಿದ್ದಾನೆ ಮತ್ತು 140 ಕೋಟಿ ಜನರು ಭವಿಷ್ಯದ ಗುರಿಗಳತ್ತ ದೃಢಸಂಕಲ್ಪ ತೊಟ್ಟಿದ್ದಾರೆ ಎಂದು ಅವರು ಹೇಳಿದರು. ಭಾರತವು ತನ್ನ ಕೀರ್ತಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ, ಬಡತನದ ವಿರುದ್ಧದ ಹೋರಾಟವನ್ನು ಗೆಲ್ಲಲಿದೆ ಮತ್ತು ಅಭಿವೃದ್ಧಿಯ ಹೊಸ ಹಂತಗಳನ್ನು ತಲುಪಲಿದೆ; ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಮತ್ತು ಅದಕ್ಕೂ ಮೀರಿ ಬೆಳೆಯುವ ಗುರಿಯನ್ನು ಹೊಂದಿದ್ದು, ಸೋಮನಾಥ ದೇವಾಲಯದ ಶಕ್ತಿಯು ಈ ಸಂಕಲ್ಪಗಳಿಗೆ ಆಶೀರ್ವಾದ ನೀಡುತ್ತಿದೆ ಎಂದು ಅವರು ದೃಢಪಡಿಸಿದರು. ಇಂದಿನ ಭಾರತವು ಪರಂಪರೆಯಿಂದ ಅಭಿವೃದ್ಧಿಯತ್ತ ಪ್ರೇರಣೆ ಪಡೆದು ಮುನ್ನಡೆಯುತ್ತಿದೆ ಮತ್ತು ಸೋಮನಾಥವು ಈ ಎರಡನ್ನೂ ಒಳಗೊಂಡಿದೆ ಎಂದು ಪ್ರಧಾನಮಂತ್ರಿಯವರು ಹೈಲೈಟ್ ಮಾಡಿದರು. ದೇವಾಲಯದ ಸಾಂಸ್ಕೃತಿಕ ವಿಸ್ತರಣೆ, ಸೋಮನಾಥ ಸಂಸ್ಕೃತ ವಿಶ್ವವಿದ್ಯಾಲಯದ ಸ್ಥಾಪನೆ, ಮಾಧವಪುರ ಮೇಳದ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಗಿರ್ ಸಿಂಹಗಳ ಸಂರಕ್ಷಣೆಯು ಪರಂಪರೆಯನ್ನು ಬಲಪಡಿಸುತ್ತಿದ್ದರೆ, ಪ್ರಭಾಸ್ ಪಟಾಣ್ ಅಭಿವೃದ್ಧಿಯ ಹೊಸ ಆಯಾಮಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ಗಮನಿಸಿದರು. ಕೇಶೋದ್ ವಿಮಾನ ನಿಲ್ದಾಣದ ವಿಸ್ತರಣೆಯು ಭಾರತ ಮತ್ತು ವಿದೇಶಗಳ ಯಾತ್ರಾರ್ಥಿಗಳಿಗೆ ನೇರ ಪ್ರವೇಶವನ್ನು ಕಲ್ಪಿಸುತ್ತಿದೆ, ಅಹಮದಾಬಾದ್-ವೇರಾವಳ ವಂದೇ ಭಾರತ್ ರೈಲಿನ ಪ್ರಾರಂಭವು ಪ್ರಯಾಣದ ಸಮಯವನ್ನು ಕಡಿಮೆ ಮಾಡಿದೆ ಮತ್ತು ಈ ಪ್ರದೇಶದಲ್ಲಿ ಯಾತ್ರಾ ಸ್ಥಳಗಳ ಸರ್ಕ್ಯೂಟ್ (Pilgrimage Circuit) ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಸೂಚಿಸಿದರು. ಇಂದಿನ ಭಾರತವು ತನ್ನ ನಂಬಿಕೆಯನ್ನು ಸ್ಮರಿಸುವ ಜೊತೆಗೆ ಮೂಲಸೌಕರ್ಯ, ಸಂಪರ್ಕ ಮತ್ತು ತಂತ್ರಜ್ಞಾನದ ಮೂಲಕ ಭವಿಷ್ಯಕ್ಕಾಗಿ ಅದನ್ನು ಸಬಲೀಕರಣಗೊಳಿಸುತ್ತಿದೆ ಎಂದು ಶ್ರೀ ಮೋದಿಯವರು ಒತ್ತಿ ಹೇಳಿದರು.

 

ಭಾರತದ ನಾಗರಿಕತೆಯ ಸಂದೇಶವು ಎಂದಿಗೂ ಇತರರನ್ನು ಸೋಲಿಸುವುದಾಗಿರಲಿಲ್ಲ, ಬದಲಾಗಿ ಜೀವನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದಾಗಿತ್ತು ಎಂದು ಒತ್ತಿ ಹೇಳಿದ ಶ್ರೀ ಮೋದಿಯವರು, ನಂಬಿಕೆಯು ನಮ್ಮನ್ನು ದ್ವೇಷದತ್ತ ಕೊಂಡೊಯ್ಯುವುದಿಲ್ಲ ಮತ್ತು ಶಕ್ತಿಯು ನಮಗೆ ವಿನಾಶದ ಅಹಂಕಾರವನ್ನು ನೀಡುವುದಿಲ್ಲ ಎಂದು ಹೇಳಿದರು. ಸೃಷ್ಟಿಯ ಹಾದಿ ದೀರ್ಘವಾದದ್ದು ಆದರೆ ಶಾಶ್ವತವಾದದ್ದು, ಕತ್ತಿಯ ತುದಿಯಿಂದ ಹೃದಯಗಳನ್ನು ಗೆಲ್ಲಲು ಸಾಧ್ಯವಿಲ್ಲ ಮತ್ತು ಇತರರನ್ನು ಅಳಿಸಿಹಾಕಲು ಬಯಸುವ ನಾಗರಿಕತೆಗಳು ತಾವೇ ಕಾಲಗರ್ಭದಲ್ಲಿ ಕಳೆದುಹೋಗುತ್ತವೆ ಎಂಬ ಪಾಠವನ್ನು ಸೋಮನಾಥ ನಮಗೆ ಕಲಿಸುತ್ತದೆ ಎಂದು ಅವರು ತಿಳಿಸಿದರು. ಇತರರನ್ನು ಸೋಲಿಸಿ ಗೆಲ್ಲುವುದು ಹೇಗೆ ಎಂಬುದನ್ನಲ್ಲ, ಬದಲಾಗಿ ಹೃದಯಗಳನ್ನು ಗೆದ್ದು ಬದುಕುವುದು ಹೇಗೆ ಎಂಬುದನ್ನು ಭಾರತ ಜಗತ್ತಿಗೆ ಕಲಿಸಿದೆ; ಈ ಚಿಂತನೆಯ ಅಗತ್ಯ ಇಂದು ಜಗತ್ತಿಗಿದೆ ಎಂದು ಅವರು ಒತ್ತಿ ಹೇಳಿದರು.

ಸೋಮನಾಥನ ಸಾವಿರ ವರ್ಷಗಳ ಈ ಗಾಥೆಯು ಮಾನವಕುಲಕ್ಕೆ ಈ ಪಾಠವನ್ನು ನೀಡುತ್ತದೆ ಎಂದು ಹೇಳುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ನಮ್ಮ ಭೂತಕಾಲ ಮತ್ತು ಪರಂಪರೆಯೊಂದಿಗೆ ಸಂಪರ್ಕದಲ್ಲಿರುವಾಗಲೇ ಅಭಿವೃದ್ಧಿ ಮತ್ತು ಭವಿಷ್ಯದತ್ತ ಸಾಗಲು, ನಮ್ಮ ಪ್ರಜ್ಞೆಯನ್ನು ಉಳಿಸಿಕೊಂಡೇ ಆಧುನಿಕತೆಯನ್ನು ಅಳವಡಿಸಿಕೊಳ್ಳಲು ಮತ್ತು ಸೋಮನಾಥ ಸ್ವಾಭಿಮಾನ ಪರ್ವದಿಂದ ಸ್ಫೂರ್ತಿ ಪಡೆದು ಪ್ರಗತಿಯ ಹಾದಿಯಲ್ಲಿ ವೇಗವಾಗಿ ಮುನ್ನಡೆಯಲು ಅವರು ಕರೆ ನೀಡಿದರು. ಪ್ರತಿಯೊಂದು ಸವಾಲನ್ನು ಜಯಿಸಿ ನಮ್ಮ ಗುರಿಗಳನ್ನು ತಲುಪಲು ಸಂಕಲ್ಪ ಮಾಡೋಣ ಎಂದು ಹೇಳುತ್ತಾ, ಅವರು ಎಲ್ಲಾ ನಾಗರಿಕರಿಗೆ ಮತ್ತೊಮ್ಮೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು.

 

ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯ್ ಪಟೇಲ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

ಹಿನ್ನೆಲೆ

2026ರ ಜನವರಿ 8 ರಿಂದ 11 ರವರೆಗೆ ಸೋಮನಾಥದಲ್ಲಿ 'ಸೋಮನಾಥ ಸ್ವಾಭಿಮಾನ ಪರ್ವ'ವನ್ನು ಆಯೋಜಿಸಲಾಗಿದೆ. ದೇವಾಲಯವನ್ನು ರಕ್ಷಿಸಲು ಪ್ರಾಣತ್ಯಾಗ ಮಾಡಿದ ಭಾರತದ ಅಸಂಖ್ಯಾತ ನಾಗರಿಕರನ್ನು ಸ್ಮರಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅವರ ಬಲಿದಾನವು ಮುಂದಿನ ಪೀಳಿಗೆಯ ಸಾಂಸ್ಕೃತಿಕ ಪ್ರಜ್ಞೆಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತದೆ.

ಕ್ರಿ.ಶ. 1026ರಲ್ಲಿ ಮೊಹಮ್ಮದ್ ಘಜ್ನಿಯು ಸೋಮನಾಥ ದೇವಾಲಯದ ಮೇಲೆ ನಡೆಸಿದ ಕ್ರೂರ ಆಕ್ರಮಣಕ್ಕೆ ಸರಿಯಾಗಿ 1,000 ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶತಮಾನಗಳ ಕಾಲ ಇದನ್ನು ನಾಶಪಡಿಸಲು ಪದೇ ಪದೇ ಹಲವು ಪ್ರಯತ್ನಗಳು ನಡೆದಿದ್ದರೂ ಸಹ, ಸೋಮನಾಥ ದೇವಾಲಯವನ್ನು ಅದರ ಪ್ರಾಚೀನ ವೈಭವಕ್ಕೆ ಮರುಸ್ಥಾಪಿಸುವ ಸಾಮೂಹಿಕ ಸಂಕಲ್ಪ ಮತ್ತು ಪ್ರಯತ್ನಗಳಿಂದಾಗಿ, ಅದು ಇಂದು ಚೇತರಿಸಿಕೊಳ್ಳುವ ಶಕ್ತಿ, ನಂಬಿಕೆ ಮತ್ತು ರಾಷ್ಟ್ರೀಯ ಹೆಮ್ಮೆಯ ಪ್ರಬಲ ಸಂಕೇತವಾಗಿ ನಿಂತಿದೆ.

 

ಸ್ವಾತಂತ್ರ್ಯದ ನಂತರ, ಈ ಪುಣ್ಯಕ್ಷೇತ್ರದ ಪುನರುತ್ಥಾನದ ಮಹತ್ಕಾರ್ಯವನ್ನು ಸರ್ದಾರ್ ಪಟೇಲರು ಕೈಗೆತ್ತಿಕೊಂಡರು. ಈ ಪುನರುಜ್ಜೀವನದ ಪಯಣದಲ್ಲಿ ಅತ್ಯಂತ ಪ್ರಮುಖ ಮೈಲಿಗಲ್ಲು ಸ್ಥಾಪನೆಯಾಗಿದ್ದು 1951ರಲ್ಲಿ. ಅಂದಿನ ಭಾರತದ ರಾಷ್ಟ್ರಪತಿಗಳಾದ ಡಾ. ರಾಜೇಂದ್ರ ಪ್ರಸಾದ್ ಅವರ ಘನ ಉಪಸ್ಥಿತಿಯಲ್ಲಿ, ಪುನರ್ನಿರ್ಮಾಣಗೊಂಡ ಸೋಮನಾಥ ದೇವಾಲಯವನ್ನು ಭಕ್ತಾದಿಗಳ ದರ್ಶನಕ್ಕಾಗಿ ವಿದ್ಯುಕ್ತವಾಗಿ ಮುಕ್ತಗೊಳಿಸಲಾಯಿತು. 2026ರಲ್ಲಿ ಈ ಐತಿಹಾಸಿಕ ಪುನರ್ನಿರ್ಮಾಣ ಕಾರ್ಯಕ್ಕೆ 75 ವರ್ಷಗಳು ತುಂಬುತ್ತಿರುವುದು 'ಸೋಮನಾಥ ಸ್ವಾಭಿಮಾನ ಪರ್ವ'ಕ್ಕೆ ವಿಶೇಷ ಅರ್ಥ ಮತ್ತು ಮಹತ್ವವನ್ನು ನೀಡಿದೆ.

ಈ ಸಂಭ್ರಮಾಚರಣೆಯಲ್ಲಿ ದೇಶದಾದ್ಯಂತದ ನೂರಾರು ಮಂದಿ ಸಾಧು-ಸಂತರು ಪಾಲ್ಗೊಳ್ಳಲಿದ್ದಾರೆ. ಅಲ್ಲದೆ, ದೇವಾಲಯದ ಪ್ರಾಂಗಣದಲ್ಲಿ ಸತತ 72 ಗಂಟೆಗಳ ಕಾಲ ಅವಿರತವಾಗಿ 'ಓಂಕಾರ' ಜಪ ಮೊಳಗಲಿದೆ.

ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಪ್ರಧಾನಮಂತ್ರಿಯವರ ಪಾಲ್ಗೊಳ್ಳುವಿಕೆಯು ಭಾರತೀಯ ನಾಗರಿಕತೆಯ ಅವಿನಾಶಿ ಚೈತನ್ಯವನ್ನು ಉಲ್ಲೇಖಿಸುತ್ತದೆ. ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಸಂರಕ್ಷಿಸುವ ಹಾಗೂ ಆಚರಿಸುವ ಅವರ ದೃಢ ಸಂಕಲ್ಪವನ್ನು ಮತ್ತೊಮ್ಮೆ ದೃಢಪಡಿಸುತ್ತದೆ.

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Target Olympic Podium Scheme becomes bigger with more responsibility and streamlining

Media Coverage

Target Olympic Podium Scheme becomes bigger with more responsibility and streamlining
NM on the go

Nm on the go

Always be the first to hear from the PM. Get the App Now!
...
Prime Minister urges citizens to take precautions amid soaring temperatures across India
May 27, 2026
Prime Minister calls for vigilance, hydration and care for vulnerable people during heatwave
Prime Minister appeals to citizens to help birds, animals and those affected by extreme heat

The Prime Minister, Shri Narendra Modi has urged citizens across the country to take all possible precautions amid soaring temperatures being witnessed in different parts of India.

Shri Modi urged people to stay hydrated, carry water while stepping out and extend help to others by offering them water during the harsh weather conditions.

The Prime Minister also advised people to remain alert to signs of heat exhaustion such as dizziness, nausea and extreme fatigue. He urged citizens to immediately help anyone feeling unwell, weak or suffering from headaches by moving them to a cool and shaded place and ensuring availability of water and ORS.

Shri Modi noted that children, elderly people and those working outdoors are especially vulnerable during extreme heat and cautioned that ignoring warning signs may lead to heatstroke.

Shri Modi also called upon people to regularly check on elderly parents, grandparents and loved ones during the heatwave and remind them to stay hydrated, avoid stepping out during peak afternoon hours and take adequate rest.

Emphasising compassion during extreme weather conditions, the Prime Minister appealed to citizens to keep bowls of water outside homes, balconies, terraces, shops and offices for birds and animals.

In a series of X posts, Shri Modi said;

“Different parts of India are witnessing soaring temperatures and the challenges that come with it. This heat is harsh on all of us and I urge you all to take as many precautions as possible. Please stay hydrated, keep water with you when stepping out. Offer a glass of water to others. In weather like this, such kindness goes a long way.”

“Watch for signs of heat exhaustion like dizziness, nausea or extreme fatigue. If someone around you feels unusually unwell, weak or develops a headache, it is best to help move them to a cool and shaded place immediately. Ensure they get water, ORS etc. that helps them. Children, the elderly and those working outdoors are especially vulnerable during extreme heat. Ignoring these warning signs can quickly turn dangerous and may even lead to heatstroke. In such weather, timely care and attention go a long way.”

“Whenever possible, call and check on elderly parents, grandparents and loved ones during this heatwave. Remind them to stay hydrated, avoid stepping out in peak afternoon hours and take rest whenever possible.”

“In this extreme heat, let us also remember the birds and animals around us. A small bowl of water kept outside your home, balconies, terraces, shops or offices can become a lifeline for a thirsty bird. May compassion guide us in these difficult days.”

“देश के अलग-अलग हिस्सों में तापमान लगातार बढ़ रहा है और इसके साथ ही दैनिक जीवन में गर्मी से होने वाली कई कठिनाइयां भी बढ़ रही हैं। मैं सभी देशवासियों से आग्रह करता हूं कि जितनी अधिक सावधानी बरत सकें, अवश्य बरतें। कृपया स्वयं को हाइड्रेटेड रखें, घर से बाहर निकलते समय पानी साथ रखें। ऐसे मौसम में आपकी संवेदनशीलता भी बहुत बड़ा सहारा बन जाती है। यदि संभव हो, तो किसी प्यासे व्यक्ति को एक गिलास पानी अवश्य दें। मैं ऐसे लोगों की सराहना भी करूँगा जो अपने घरों के और दुकानों के बाहर मटके में जल रखते हैं ताकि कोई भी उनसे पानी पी सके।”

“अत्यधिक गर्मी से होने वाली परेशानी, जैसे चक्कर आना, मतली या ज्यादा थकान लगे तो उसे बिल्कुल भी नजरअंदाज न करें। यदि आपके आसपास किसी व्यक्ति को अचानक बेहोशी जैसा लगे, कमजोरी महसूस करे या फिर अस्वस्थ दिखाई दे, तो उसे तुरंत किसी ठंडी और छायादार जगह पर ले जाएं। उसे पानी, ORS या अन्य तरल पदार्थ दें, जिससे शरीर को राहत मिल सके। बच्चे, बुज़ुर्ग और धूप में काम करने वाले लोग इस भीषण गर्मी में सबसे अधिक प्रभावित होते हैं। समय रहते ध्यान न देने पर यह स्थिति हीटस्ट्रोक जैसी गंभीर समस्या का रूप ले सकती है। ऐसे समय में आपकी सतर्कता और देखभाल किसी का जीवन बचा सकती है।”

“जब भी संभव हो, अपने माता-पिता, दादा-दादी, नाना-नानी और अन्य प्रियजनों को फोन कर उनका हालचाल अवश्य पूछें। उन्हें पर्याप्त पानी पीने, दोपहर की तेज धूप में बाहर न निकलने और जितना हो सके, आराम करने की सलाह दें।”

“इस प्रचंड गर्मी में हमें अपने आसपास के पशु-पक्षियों को भी नहीं भूलना चाहिए। अपने घर, बालकनी, छत, दुकान या ऑफिस के बाहर पानी से भरा एक छोटा-सा बर्तन रखना भी किसी प्यासे पक्षी के लिए जीवनदान बन सकता है। आइए, इन कठिन दिनों में पूरी संवेदनशीलता और करुणा के साथ एक-दूसरे का ध्यान रखें।”