ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಶ್ರೀ ಶಿಬೂ ಸೊರೆನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದರು. ವನವಾಸಿ ಸಮುದಾಯ, ಬಡವರು ಹಾಗೂ ದೀನರ ಸಬಲೀಕರಣಕ್ಕಾಗಿ ಅವರ ಆಸಕ್ತಿಯನ್ನು ಶ್ರೀ ಮೋದಿ ಅವರು ಶ್ಲಾಘಿಸಿದರು.
ಎಕ್ಸ್ ಪೋಸ್ಟ್ ನಲ್ಲಿ ಅವರು ಹೀಗೆ ಹೇಳಿದ್ದಾರೆ:
“ಶ್ರೀ ಶಿಬೂ ಸೊರೆನ್ ಅವರು ತಳಹಂತದ ನಾಯಕರಾಗಿದ್ದು, ಜನರಿಗಾಗಿ ದೃಢ ಸಮರ್ಪಣೆಯ ಮೂಲಕ ಸಾರ್ವಜನಿಕ ಜೀವನದಲ್ಲಿ ಉನ್ನತಕ್ಕೇರಿದರು. ವನವಾಸಿ ಸಮುದಾಯ, ಬಡವರು ಹಾಗೂ ದೀನರ ಸಬಲೀಕರಣಕ್ಕಾಗಿ ಅವರ ಆಸಕ್ತಿ ಪ್ರಮುಖವಾಗಿತ್ತು. ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಕುಟುಂಬ ಹಾಗೂ ಬೆಂಬಲಿಗರಿಗೆ ನನ್ನ ಸಾಂತ್ವನಗಳು. ಜಾರ್ಖಂಡ್ ಮುಖ್ಯಮಂತ್ರಿ ಶ್ರೀ ಹೇಮಂತ್ ಸೊರೆನ್ ಅವರೊಂದಿಗೆ ಮಾತನಾಡಿದೆ ಮತ್ತು ಸಂತಾಪ ವ್ಯಕ್ತಪಡಿಸಿದೆ. ಓಂ ಶಾಂತಿ.”
Shri Shibu Soren Ji was a grassroots leader who rose through the ranks of public life with unwavering dedication to the people. He was particularly passionate about empowering tribal communities, the poor and downtrodden. Pained by his passing away. My thoughts are with his…
— Narendra Modi (@narendramodi) August 4, 2025


