ಆರ್ಯ ಸಮಾಜದ 150ನೇ ವಾರ್ಷಿಕೋತ್ಸವವು ಕೇವಲ ಒಂದು ನಿರ್ದಿಷ್ಟ ಸಮುದಾಯ ಅಥವಾ ಪಂಗಡಕ್ಕೆ ಮಾತ್ರ ಸೀಮಿತವಾದುದಲ್ಲ - ಇದು ಇಡೀ ರಾಷ್ಟ್ರದ ವೈದಿಕ ಗುರುತಿಗೆ ಆಳವಾಗಿ ಸಂಬಂಧಿಸಿದ ಆಚರಣೆಯಾಗಿದೆ: ಪ್ರಧಾನಮಂತ್ರಿ
ಆರ್ಯ ಸಮಾಜವು ಭಾರತೀಯತೆಯ ಸಾರವನ್ನು ನಿರ್ಭಯವಾಗಿ ಎತ್ತಿಹಿಡಿದಿದೆ ಮತ್ತು ಉತ್ತೇಜಿಸಿದೆ: ಪ್ರಧಾನಮಂತ್ರಿ
ಸ್ವಾಮಿ ದಯಾನಂದ ಜೀ ಒಬ್ಬ ದಾರ್ಶನಿಕ, ಮಹಾನ್ ವ್ಯಕ್ತಿ: ಪ್ರಧಾನಮಂತ್ರಿ
ಇಂದು, ಸುಸ್ಥಿರ ಅಭಿವೃದ್ಧಿಯ ಅನ್ವೇಷಣೆಯಲ್ಲಿ ಭಾರತವು ಪ್ರಮುಖ ಜಾಗತಿಕ ಧ್ವನಿಯಾಗಿ ಹೊರಹೊಮ್ಮಿದೆ: ಪ್ರಧಾನಮಂತ್ರಿ

ನವದೆಹಲಿಯ ರೋಹಿಣಿಯಲ್ಲಿ ಇಂದು ಅಂತರರಾಷ್ಟ್ರೀಯ ಆರ್ಯ ಮಹಾಸಮ್ಮೇಳನ 2025ನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀ ಮೋದಿ, ಈಗಷ್ಟೇ ಕೇಳಿದ ಮಂತ್ರಗಳ ಶಕ್ತಿಯನ್ನು ಎಲ್ಲರೂ ಅನುಭವಿಸಬಹುದು ಎಂದು ಹೇಳಿದರು. ತಾವು ಸಭೆಗೆ ಬಂದಾಗಲೆಲ್ಲಾ ತಮಗೆ ಆಗಿರುವ ಅನುಭವವು ದೈವಿಕ ಮತ್ತು ಅಸಾಮಾನ್ಯವಾದುದು ಎಂದು ಅವರು ಒತ್ತಿ ಹೇಳಿದರು. ಈ ಭಾವನೆಗೆ ಸ್ವಾಮಿ ದಯಾನಂದ ಜೀ ಅವರ ಆಶೀರ್ವಾದ ಕಾರಣವೆಂದೂ ಅವರು ಹೇಳಿದರು. ಸ್ವಾಮಿ ದಯಾನಂದ ಜೀ ಅವರ ಆದರ್ಶಗಳ ಬಗ್ಗೆ ಪ್ರಧಾನಮಂತ್ರಿ ತಮ್ಮ ಆಳವಾದ ಗೌರವವನ್ನು ವ್ಯಕ್ತಪಡಿಸಿದರು. ಹಾಜರಿದ್ದ ಎಲ್ಲಾ ಚಿಂತಕರೊಂದಿಗಿನ ತಮ್ಮ ದಶಕಗಳಷ್ಟು ಹಳೆಯದಾದ ಬಾಂಧವ್ಯವನ್ನು ಅವರು ನೆನೆಪಿಸಿಕೊಂಡರು. ಅದು ತಮಗೆ ಪದೇ ಪದೇ ಅವರ ನಡುವೆ ಇರಲು ಅವಕಾಶವನ್ನು ನೀಡಿದೆ. ಅವರನ್ನು ಭೇಟಿಯಾದಾಗಲೆಲ್ಲಾ ಮತ್ತು ಅವರ ಜೊತೆ ಸಂವಹನ ನಡೆಸಿದಾಗಲೆಲ್ಲಾ ತಾವು ವಿಶಿಷ್ಟ ಶಕ್ತಿ ಮತ್ತು ಅನನ್ಯ ಸ್ಫೂರ್ತಿಯನ್ನು ಪಡೆಯುತ್ತಿರುವುದಾಗಿಯೂ ಅವರು ಹೇಳಿದರು.

ಕಳೆದ ವರ್ಷ ಗುಜರಾತ್‌ನ ಮಹರ್ಷಿ ದಯಾನಂದ ಸರಸ್ವತಿ ಜೀ ಅವರ ಜನ್ಮಸ್ಥಳದಲ್ಲಿ ವಿಶೇಷ ಕಾರ್ಯಕ್ರಮ ನಡೆದಿತ್ತು, ಅದರಲ್ಲಿ ತಾವು ವೀಡಿಯೊ ಸಂದೇಶದ ಮೂಲಕ ಭಾಗವಹಿಸಿದ್ದನ್ನು ಶ್ರೀ ಮೋದಿ ನೆನಪಿಸಿಕೊಂಡರು. ಅದಕ್ಕೂ ಮೊದಲು, ದೆಹಲಿಯಲ್ಲಿ ಮಹರ್ಷಿ ದಯಾನಂದ ಸರಸ್ವತಿ ಜೀ ಅವರ 200 ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸುವ ಸೌಭಾಗ್ಯ ತಮಗೆ ಸಿಕ್ಕಿತ್ತು. ವೇದ ಮಂತ್ರಗಳ ಘೋಷ ಮತ್ತು ಪವಿತ್ರ ಹವನ ಆಚರಣೆಗಳ ಮೂಲಕ ಸಂಚಯವಾದ ಶಕ್ತಿಯು ನಿನ್ನೆಯಷ್ಟೇ ನಡೆದಿದೆಯೇನೋ ಎಂಬಂತೆ ಇನ್ನೂ ತಾಜಾವಾಗಿ ಉಳಿದಿದೆ ಎಂದು ಅವರು ಹೇಳಿದರು.

 

ಹಿಂದಿನ ಕಾರ್ಯಕ್ರಮದಲ್ಲಿ, ಭಾಗವಹಿಸಿದವರೆಲ್ಲರೂ ಮಹರ್ಷಿ ದಯಾನಂದ ಸರಸ್ವತಿ ಜೀ ಅವರ ದ್ವಿಶತಮಾನೋತ್ಸವ ಆಚರಣೆಯನ್ನು 'ವಿಚಾರ ಯಜ್ಞ'ವಾಗಿ ಎರಡು ವರ್ಷಗಳ ಕಾಲ ಮುಂದುವರಿಸಲು ಸಂಕಲ್ಪ ಮಾಡಿದ್ದರು ಎಂದು ಪ್ರಧಾನಮಂತ್ರಿ ನೆನಪಿಸಿಕೊಂಡರು. ಈ ನಿರಂತರ ಬೌದ್ಧಿಕ ಕೊಡುಗೆ ಪೂರ್ಣ ಅವಧಿಗೆ ಮುಂದುವರಿದಿದ್ದಕ್ಕಾಗಿ ಅವರು ಸಂತೋಷ ವ್ಯಕ್ತಪಡಿಸಿದರು. ಈ ಅವಧಿಯಲ್ಲಿ ಕೈಗೊಂಡ ಪ್ರಯತ್ನಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ತಮಗೆ ನಿಯಮಿತವಾಗಿ ತಿಳಿಸಲಾಗಿತ್ತು ಎಂಬುದನ್ನೂ ಶ್ರೀ ಮೋದಿ ಗಮನಿಸಿದರು. ಇಂದು ಮತ್ತೊಮ್ಮೆ ಆರ್ಯ ಸಮಾಜದ 150 ನೇ ಸಂಸ್ಥಾಪನಾ ವರ್ಷದ ಆಚರಣೆಯ ಸಂದರ್ಭದಲ್ಲಿ ತಮ್ಮ ಹೃತ್ಪೂರ್ವಕ ಗೌರವ ಸಲ್ಲಿಸುವ ಅವಕಾಶ ಸಿಕ್ಕಿದೆ ಎಂದು ಅವರು ಹೇಳಿದರು. ಅವರು ಸ್ವಾಮಿ ದಯಾನಂದ ಸರಸ್ವತಿ ಜೀ ಅವರ ಪಾದಗಳಿಗೆ ನಮನ ಮತ್ತು ಗೌರವ ಸಲ್ಲಿಸಿದರು. ಅಂತರರಾಷ್ಟ್ರೀಯ ಶೃಂಗಸಭೆಯಲ್ಲಿ ಭಾಗವಹಿಸುವ ಎಲ್ಲರಿಗೂ ಅವರು ಶುಭಾಶಯಗಳನ್ನು ಕೋರಿದರು. ಈ ಸಂದರ್ಭದಲ್ಲಿ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡುವುದು ಒಂದು ಸುಯೋಗ ಎಂದು ಅವರು ಹೇಳಿದರು.

"ಆರ್ಯ ಸಮಾಜದ 150 ನೇ ವಾರ್ಷಿಕೋತ್ಸವವು ಕೇವಲ ಒಂದು ನಿರ್ದಿಷ್ಟ ಸಮುದಾಯ ಅಥವಾ ಪಂಗಡಕ್ಕೆ ಮಾತ್ರ ಸೀಮಿತವಾದ ಸಂದರ್ಭವಲ್ಲ - ಇದು ಇಡೀ ರಾಷ್ಟ್ರದ ವೈದಿಕ ಗುರುತಿಗೆ ಆಳವಾಗಿ ಸಂಬಂಧಿಸಿದ ಆಚರಣೆಯಾಗಿದೆ" ಎಂದು ಪ್ರಧಾನಮಂತ್ರಿ ಉದ್ಗರಿಸಿದರು. ಇದು ಗಂಗಾ ನದಿಯ ಹರಿವಿನಂತೆ ಸ್ವಯಂ ಶುದ್ಧೀಕರಣದ ಶಕ್ತಿಯನ್ನು ಹೊಂದಿರುವ ಭಾರತೀಯ ತಾತ್ವಿಕ ಸಂಪ್ರದಾಯಕ್ಕೆ ಸಂಬಂಧಿಸಿದೆ ಎಂದು ಅವರು ಹೇಳಿದರು. ಈ ಕಾರ್ಯಕ್ರಮ ಸಂದರ್ಭವು ಆರ್ಯ ಸಮಾಜವು ನಿರಂತರವಾಗಿ ಮುನ್ನಡೆಸುತ್ತಿರುವ ಸಾಮಾಜಿಕ ಸುಧಾರಣೆಯ ಮಹಾನ್ ಪರಂಪರೆಯಲ್ಲಿ ಬೇರೂರಿದೆ ಎಂದು ಶ್ರೀ ಮೋದಿ ಎತ್ತಿ ತೋರಿಸಿದರು. ಈ ಚಳುವಳಿ ಹಲವಾರು ಸ್ವಾತಂತ್ರ್ಯ ಹೋರಾಟಗಾರರಿಗೆ ಸೈದ್ಧಾಂತಿಕ ಶಕ್ತಿಯನ್ನು ಒದಗಿಸಿದೆ ಎಂದೂ ಅವರು ನುಡಿದರು. ಆರ್ಯ ಸಮಾಜದಿಂದ ಸ್ಫೂರ್ತಿ ಪಡೆದು ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡ ಅನೇಕ ಕ್ರಾಂತಿಕಾರಿಗಳಲ್ಲಿ ಲಾಲಾ ಲಜಪತ್ ರಾಯ್ ಮತ್ತು ಹುತಾತ್ಮ ರಾಮಪ್ರಸಾದ್ ಬಿಸ್ಮಿಲ್ ಅವರಂತಹ ಉದಾಹರಣೆಗಳನ್ನು ಅವರು ಉಲ್ಲೇಖಿಸಿದರು. ರಾಜಕೀಯ ಕಾರಣಗಳಿಂದಾಗಿ, ಸ್ವಾತಂತ್ರ್ಯ ಚಳವಳಿಯಲ್ಲಿ ಆರ್ಯ ಸಮಾಜದ ಮಹತ್ವದ ಪಾತ್ರಕ್ಕೆ ನಿಜವಾಗಿಯೂ ಅರ್ಹವಾದ ಮನ್ನಣೆ ಸಿಗಲಿಲ್ಲ ಎಂದು ಪ್ರಧಾನಮಂತ್ರಿ ವಿಷಾದ ವ್ಯಕ್ತಪಡಿಸಿದರು.

 

ಆರಂಭದಿಂದಲೂ ಆರ್ಯ ಸಮಾಜವು ಕಟ್ಟಾ ದೇಶಭಕ್ತರ ಸಂಸ್ಥೆಯಾಗಿದೆ ಎಂದು ಹೇಳಿದ ಶ್ರೀ ಮೋದಿ, "ಆರ್ಯ ಸಮಾಜವು ಭಾರತೀಯತೆಯ ಸಾರವನ್ನು ನಿರ್ಭಯವಾಗಿ ಎತ್ತಿಹಿಡಿದು ಉತ್ತೇಜಿಸಿದೆ" ಎಂದು ಒತ್ತಿ ಹೇಳಿದರು. ಭಾರತ ವಿರೋಧಿ ಸಿದ್ಧಾಂತಗಳಾಗಿರಲಿ, ವಿದೇಶಿ ಸಿದ್ಧಾಂತಗಳನ್ನು ಹೇರುವ ಪ್ರಯತ್ನಗಳಿರಲಿ, ವಿಭಜಕ ಮನಸ್ಥಿತಿಗಳಾಗಿರಲಿ ಅಥವಾ ಸಾಂಸ್ಕೃತಿಕ ಚೌಕಟ್ಟನ್ನು ಕಲುಷಿತಗೊಳಿಸುವ ಪ್ರಯತ್ನಗಳಾಗಿರಲಿ, ಆರ್ಯ ಸಮಾಜವು ಅವುಗಳನ್ನು ಪ್ರಶ್ನಿಸಲು ಸದಾ ಎದ್ದು ನಿಂತಿದೆ ಎಂದು ಅವರು ಹೇಳಿದರು. ಆರ್ಯ ಸಮಾಜವು 150 ನೇ ವರ್ಷವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಸಮಾಜ ಮತ್ತು ರಾಷ್ಟ್ರವು ದಯಾನಂದ ಸರಸ್ವತಿ ಜೀ ಅವರ ಶ್ರೇಷ್ಠ ಆದರ್ಶಗಳಿಗೆ ಇಷ್ಟೊಂದು ಭವ್ಯ ಮತ್ತು ಅರ್ಥಪೂರ್ಣ ರೀತಿಯಲ್ಲಿ ಗೌರವ ಸಲ್ಲಿಸುತ್ತಿರುವುದಕ್ಕೆ ಪ್ರಧಾನಮಂತ್ರಿ ತೃಪ್ತಿ ವ್ಯಕ್ತಪಡಿಸಿದರು.

ಧಾರ್ಮಿಕ ಜಾಗೃತಿಯ ಮೂಲಕ ಇತಿಹಾಸದ ಹಾದಿಗೆ ಹೊಸ ನಿರ್ದೇಶನ ನೀಡಿದ ಸ್ವಾಮಿ ಶ್ರದ್ಧಾನಂದರಂತಹ ಆರ್ಯ ಸಮಾಜದ ಅನೇಕ ವಿದ್ವಾಂಸರಿಗೆ ಗೌರವ ಸಲ್ಲಿಸಿದ ಪ್ರಧಾನಮಂತ್ರಿ, ಅಂತಹ ಮಹಾನ್ ಆತ್ಮಗಳ ಶಕ್ತಿ ಮತ್ತು ಆಶೀರ್ವಾದಗಳು ಈ ಐತಿಹಾಸಿಕ ಕ್ಷಣದಲ್ಲಿವೆ ಎಂದು ಹೇಳಿದರು. ವೇದಿಕೆಯಿಂದ, ಅವರು ಈ ಅಸಂಖ್ಯಾತ ಉದಾತ್ತ ಆತ್ಮಗಳಿಗೆ ನಮನಗಳನ್ನು ಸಲ್ಲಿಸಿದರು ಮತ್ತು ಅವರ ಗೌರವ ಸ್ಮರಣೆಯನ್ನು ಮಾಡಿದರು

ಭಾರತವು ಹಲವು ವಿಧಗಳಲ್ಲಿ ವಿಶಿಷ್ಟವಾಗಿದೆ - ಅದರ ನೆಲ, ಅದರ ನಾಗರಿಕತೆ ಮತ್ತು ಅದರ ವೈದಿಕ ಸಂಪ್ರದಾಯವು ಯುಗಯುಗಾಂತರಗಳಲ್ಲಿ ಶಾಶ್ವತವಾಗಿ ಉಳಿದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಹೊಸ ಸವಾಲುಗಳು ಉದ್ಭವಿಸಿದಾಗ ಮತ್ತು ಸಮಯ ಸಂದರ್ಭಗಳು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದಾಗಲೆಲ್ಲಾ, ಕೆಲವು ಮಹಾನ್ ವ್ಯಕ್ತಿತ್ವಗಳು ಉತ್ತರಗಳೊಂದಿಗೆ ಹೊರಹೊಮ್ಮುತ್ತವೆ ಎಂದು ಅವರು ಒತ್ತಿ ಹೇಳಿದರು. ಕೆಲವು ಋಷಿಗಳು, ದಾರ್ಶನಿಕರು ಅಥವಾ ವಿದ್ವಾಂಸರು ಸದಾ ಸಮಾಜಕ್ಕೆ ಮಾರ್ಗದರ್ಶನ ನೀಡಲು ಮುಂದೆ ಬರುತ್ತಾರೆ ಎಂದು ಅವರು ಗಮನಿಸಿದರು. ಸ್ವಾಮಿ ದಯಾನಂದ ಸರಸ್ವತಿ ಜೀ ಅವರು ಈ ಭವ್ಯ ಸಂಪ್ರದಾಯದಲ್ಲಿ ಅಂತಹ ಒಬ್ಬ ಮಹರ್ಷಿ ಎಂದು ಅವರು ಹೇಳಿದರು. ಶತಮಾನಗಳ ಗುಲಾಮಗಿರಿಯು ರಾಷ್ಟ್ರ ಮತ್ತು ಸಮಾಜವನ್ನು ಛಿದ್ರಗೊಳಿಸುತ್ತಿರುವಾಗ, ಸ್ವಾಮಿ ದಯಾನಂದ ಜೀ ವಸಾಹತುಶಾಹಿ ಅಧೀನತೆಯ ಅವಧಿಯಲ್ಲಿ ಜನಿಸಿದರು ಎಂದು ಶ್ರೀ ಮೋದಿ ನೆನಪಿಸಿಕೊಂಡರು. ಮೂಢನಂಬಿಕೆ ಮತ್ತು ಸಾಮಾಜಿಕ ಅನಿಷ್ಟಗಳು ಚಿಂತನೆ ಮತ್ತು ಪ್ರತಿಬಿಂಬವನ್ನು ಬದಲಾಯಿಸಿವೆ ಮತ್ತು ವಸಾಹತುಶಾಹಿ ಆಳ್ವಿಕೆಯನ್ನು ಸಮರ್ಥಿಸಲು ಬ್ರಿಟಿಷರು ಭಾರತೀಯ ಸಂಪ್ರದಾಯಗಳು ಮತ್ತು ನಂಬಿಕೆಗಳನ್ನು ಅವಮಾನಿಸಿದ್ದಾರೆ ಎಂಬುದನ್ನು ಅವರು ಗಮನಿಸಿದರು. ಅಂತಹ ಸಂದರ್ಭಗಳಲ್ಲಿ, ಸಮಾಜವು ಹೊಸ, ಮೂಲ ವಿಚಾರಗಳನ್ನು ವ್ಯಕ್ತಪಡಿಸುವ ಧೈರ್ಯವನ್ನು ಕಳೆದುಕೊಂಡಿತ್ತು. ಈ ಕಷ್ಟದ ಸಮಯದಲ್ಲಿಯೇ ಒಬ್ಬ ಯುವ ತಪಸ್ವಿ ಹೊರಹೊಮ್ಮಿದರು, ಹಿಮಾಲಯದ ದೂರದ ಮತ್ತು ಕಠಿಣ ಭೂಪ್ರದೇಶಗಳಲ್ಲಿ ತೀವ್ರವಾದ ಆಧ್ಯಾತ್ಮಿಕ ಅಭ್ಯಾಸವನ್ನು ಕೈಗೊಂಡರು, ಕಠಿಣ ತಪಸ್ಸಿನ ಮೂಲಕ ತಮ್ಮನ್ನು ತಾವು ಪರೀಕ್ಷಿಸಿಕೊಂಡರು. ಹಿಂದಿರುಗಿದ ನಂತರ, ಅವರು ಕೀಳರಿಮೆಯಲ್ಲಿ ಸಿಲುಕಿರುವ ಭಾರತೀಯ ಸಮಾಜವನ್ನು ನಡುಗಿಸಿದರು. ಇಡೀ ಬ್ರಿಟಿಷ್ ಸಂಸ್ಥೆಯು ಭಾರತೀಯ ಗುರುತನ್ನು ಕಡೆಗಣಿಸುವಲ್ಲಿ ನಿರತವಾಗಿದ್ದಾಗ ಮತ್ತು ಸಾಮಾಜಿಕ ಆದರ್ಶಗಳು ಮತ್ತು ನೈತಿಕತೆಯ ಅವನತಿಯನ್ನು ಆಧುನೀಕರಣವೆಂದು ಬಿಂಬಿಸಲಾಗುತ್ತಿದ್ದಾಗ, ಈ ಆತ್ಮವಿಶ್ವಾಸದ ಋಷಿ ತಮ್ಮ ಸಮಾಜಕ್ಕೆ ಕರೆ ನೀಡಿದರು - "ವೇದಗಳಿಗೆ ಹಿಂತಿರುಗಿ!" ವಸಾಹತುಶಾಹಿ ಆಳ್ವಿಕೆಯ ಯುಗದಲ್ಲಿ ದಮನಿಸಲ್ಪಟ್ಟ ರಾಷ್ಟ್ರೀಯ ಪ್ರಜ್ಞೆಯನ್ನು ಮತ್ತೆ ಜಾಗೃತಗೊಳಿಸಿದ ಗಮನಾರ್ಹ ವ್ಯಕ್ತಿ ಸ್ವಾಮಿ ದಯಾನಂದ ಜೀ ಯವರಾಗಿದ್ದಾರೆ ಎಂದು ಪ್ರಧಾನಮಂತ್ರಿ ಬಣ್ಣಿಸಿದರು.

 

ಭಾರತ ಪ್ರಗತಿ ಸಾಧಿಸಲು ವಸಾಹತುಶಾಹಿ ಆಳ್ವಿಕೆಯ ಸರಪಳಿಗಳನ್ನು ಮುರಿಯುವುದು ಸಾಕಾಗುವುದಿಲ್ಲ - ಭಾರತವು ತನ್ನ ಸಮಾಜವನ್ನು ಬಂಧಿಸಿರುವ ಸಂಕೋಲೆಗಳನ್ನು ಮುರಿಯಬೇಕು ಎಂದು ಸ್ವಾಮಿ ದಯಾನಂದ ಸರಸ್ವತಿ ಜೀ ಅವರು ಹೇಗೆ ಅರ್ಥಮಾಡಿಕೊಂಡರು ಎಂಬುದನ್ನು ಶ್ರೀ ಮೋದಿ ಎತ್ತಿ ತೋರಿಸಿದರು. ಸ್ವಾಮಿ ದಯಾನಂದ ಜೀ ಅವರು ಜಾತಿ ಆಧಾರಿತ ತಾರತಮ್ಯ ಮತ್ತು ಅಸ್ಪೃಶ್ಯತೆಯನ್ನು ತಿರಸ್ಕರಿಸಿದರು ಎಂದು ಅವರು ಒತ್ತಿ ಹೇಳಿದರು. ಅವರು ಅನಕ್ಷರತೆಯ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಿದರು ಮತ್ತು ವೇದಗಳು ಹಾಗು ಧರ್ಮಗ್ರಂಥಗಳ ವ್ಯಾಖ್ಯಾನಗಳನ್ನು ವಿರೂಪಗೊಳಿಸುವವರಿಗೆ ಮತ್ತು ಕಲಬೆರಕೆ ಮಾಡುವವರಿಗೆ ಸವಾಲು ಹಾಕಿದರು. ಅವರು ವಿದೇಶಿ ನಿರೂಪಣೆಗಳನ್ನು ಸಂಘರ್ಷವನ್ನು ಎದುರಿಸಿದರು ಮತ್ತು ಶಾಸ್ತ್ರಾರ್ಥದ ಸಾಂಪ್ರದಾಯಿಕ ಆಚರಣೆಯ ಮೂಲಕ ಸತ್ಯವನ್ನು ಎತ್ತಿಹಿಡಿದರು. ವೈಯಕ್ತಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಮಹಿಳೆಯರ ಪ್ರಮುಖ ಪಾತ್ರವನ್ನು ಗುರುತಿಸಿದ ಮತ್ತು ಮಹಿಳೆಯರನ್ನು ಮನೆಯ ಗಡಿಗಳಿಗೆ ಸೀಮಿತಗೊಳಿಸುವ ಮನಸ್ಥಿತಿಯನ್ನು ಪ್ರಶ್ನಿಸಿದ ದಾರ್ಶನಿಕ ಋಷಿ ಅವರು ಎಂದು ಪ್ರಧಾನಮಂತ್ರಿ ಸ್ವಾಮಿ ದಯಾನಂದ ಜೀ ಅವರನ್ನು ಬಣ್ಣಿಸಿದರು. ಅವರ ಪ್ರೇರಣೆಯಿಂದ, ಆರ್ಯ ಸಮಾಜ ಶಾಲೆಗಳು ಹುಡುಗಿಯರಿಗೆ ಶಿಕ್ಷಣ ನೀಡಲು ಪ್ರಾರಂಭಿಸಿದವು ಮತ್ತು ಜಲಂಧರ್‌ನಲ್ಲಿ ಪ್ರಾರಂಭವಾದ ಬಾಲಕಿಯರ ಶಾಲೆಯು ಶೀಘ್ರದಲ್ಲೇ ಪೂರ್ಣ ಪ್ರಮಾಣದ ಮಹಿಳಾ ಕಾಲೇಜಾಗಿ ವಿಕಸನಗೊಂಡಿತು. ಅಂತಹ ಆರ್ಯ ಸಮಾಜ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ಲಕ್ಷಾಂತರ ಹೆಣ್ಣುಮಕ್ಕಳು ಈಗ ರಾಷ್ಟ್ರದ ಅಡಿಪಾಯವನ್ನು ಬಲಪಡಿಸುತ್ತಿದ್ದಾರೆ ಎಂಬುದನ್ನು ಪ್ರಧಾನಮಂತ್ರಿ ಎತ್ತಿ ತೋರಿಸಿದರು.

ವೇದಿಕೆಯಲ್ಲಿ ದೆಹಲಿ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ ಅವರ ಉಪಸ್ಥಿತಿಯನ್ನು ಗುರುತಿಸಿದ ಶ್ರೀ ಮೋದಿ, ಕೇವಲ ಎರಡು ದಿನಗಳ ಹಿಂದೆ, ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಸ್ಕ್ವಾಡ್ರನ್ ಲೀಡರ್ ಶಿವಾಂಗಿ ಸಿಂಗ್ ಅವರೊಂದಿಗೆ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು ಎಂದು ಒತ್ತಿ ಹೇಳಿದರು. ಇಂದು ಭಾರತದ ಹೆಣ್ಣುಮಕ್ಕಳು ಯುದ್ಧ ವಿಮಾನಗಳನ್ನು ಹಾರಿಸುತ್ತಿದ್ದಾರೆ ಮತ್ತು ಆಧುನಿಕ ಕೃಷಿಯನ್ನು "ಡ್ರೋನ್ ದೀದಿಗಳಾಗಿ" ಪ್ರಚಾರ ಮಾಡುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತವು ಈಗ ವಿಶ್ವದಲ್ಲೇ ಅತಿ ಹೆಚ್ಚು ಮಹಿಳಾ ಸ್ಟೆಮ್ (STEM) ಪದವೀಧರರನ್ನು ಹೊಂದಿದೆ ಎಂದು ಅವರು ಹೆಮ್ಮೆಯಿಂದ ಹೇಳಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹಿಳೆಯರು ಹೆಚ್ಚಾಗಿ ನಾಯಕತ್ವದ ಪಾತ್ರಗಳನ್ನು ವಹಿಸಿಕೊಳ್ಳುತ್ತಿದ್ದಾರೆ ಎಂಬುದರತ್ತಲೂ ಅವರು ಬೆಟ್ಟು ಮಾಡಿದರು. ಭಾರತದ ಪ್ರಮುಖ ಸಂಶೋಧನಾ ಸಂಸ್ಥೆಗಳ ಮಹಿಳಾ ವಿಜ್ಞಾನಿಗಳು ಮಂಗಳಯಾನ, ಚಂದ್ರಯಾನ ಮತ್ತು ಗಗನಯಾನ್‌ನಂತಹ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಈ ಪರಿವರ್ತನಾಶೀಲ ಬೆಳವಣಿಗೆಗಳು ದೇಶವು ಸರಿಯಾದ ಹಾದಿಯಲ್ಲಿ ಮುಂದುವರಿಯುತ್ತಿದೆ ಮತ್ತು ಸ್ವಾಮಿ ದಯಾನಂದ ಜೀ ಅವರ ಕನಸುಗಳನ್ನು ಈಡೇರಿಸುತ್ತಿದೆ ಎಂದು ಅವರು ದೃಢವಾಗಿ ನುಡಿದರು.

ಸ್ವಾಮಿ ದಯಾನಂದ ಜೀ ಅವರ ಒಂದು ನಿರ್ದಿಷ್ಟ ಚಿಂತನೆಯ ಬಗ್ಗೆ ತಾವು ಆಗಾಗ್ಗೆ ಯೋಚಿಸುತ್ತಿರುವುದನ್ನು ಪ್ರಧಾನಮಂತ್ರಿ ಹಂಚಿಕೊಂಡರು, ಮತ್ತು ತಾವು ಅದನ್ನು ಇತರರಿಗೆ ತಿಳಿಸುವುದನ್ನೂ ಪ್ರಸ್ತಾಪಿಸಿದರು. ಸ್ವಾಮಿ ಜೀ ಹೇಳಿದ್ದರು, "ಕಡಿಮೆ ಸೇವಿಸುವ ಮತ್ತು ಹೆಚ್ಚಿನ ಕೊಡುಗೆ ನೀಡುವ ವ್ಯಕ್ತಿ ನಿಜವಾಗಿಯೂ ಪ್ರಬುದ್ಧ." ಈ ಕೆಲವು ಪದಗಳು ಎಷ್ಟು ಆಳವಾದ ಬುದ್ಧಿವಂತಿಕೆಯನ್ನು ಹೊಂದಿವೆಯೆಂದರೆ, ಬಹುಶಃ ಅವುಗಳನ್ನು ಅರ್ಥೈಸಲು ಇಡೀ ಪುಸ್ತಕಗಳನ್ನು ಬರೆಯಬಹುದು ಎಂದು ಅವರು ಹೇಳಿದರು. ಒಂದು ಕಲ್ಪನೆಯ ನಿಜವಾದ ಶಕ್ತಿ ಅದರ ಅರ್ಥದಲ್ಲಿ ಮಾತ್ರವಲ್ಲ, ಅದು ಎಷ್ಟು ಕಾಲ ಉಳಿಯುತ್ತದೆ ಮತ್ತು ಅದು ಎಷ್ಟು ಪ್ರಮಾಣದಲ್ಲಿ ಜೀವನವನ್ನು ಪರಿವರ್ತಿಸುತ್ತದೆ ಎಂಬುದರಲ್ಲಿ ಅಡಗಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಈ ಮಾನದಂಡದ ಕುರಿತು ಮಹರ್ಷಿ ದಯಾನಂದ ಜೀ ಅವರ ಆಲೋಚನೆಗಳನ್ನು ನಾವು ಮೌಲ್ಯಮಾಪನ ಮಾಡಿದಾಗ ಮತ್ತು ಆರ್ಯ ಸಮಾಜದ ಸಮರ್ಪಿತ ಅನುಯಾಯಿಗಳನ್ನು ಗಮನಿಸಿದಾಗ, ಅವರ ಆಲೋಚನೆಗಳು ಕಾಲಾನಂತರದಲ್ಲಿ ಇನ್ನಷ್ಟು ಪ್ರಕಾಶಮಾನವಾಗಿ ಹೇಗೆ ಬೆಳೆದಿವೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

 

ಸ್ವಾಮಿ ದಯಾನಂದ ಸರಸ್ವತಿ ಅವರು ತಮ್ಮ ಜೀವಿತಾವಧಿಯಲ್ಲಿ ಪರೋಪ್ಕಾರಿಣಿ ಸಭೆಯನ್ನು ಸ್ಥಾಪಿಸಿದ್ದರು ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿ, ಸ್ವಾಮೀಜೀ ಅವರು ನೆಟ್ಟ ಬೀಜವು ಗುರುಕುಲ ಕಾಂಗ್ರಿ, ಗುರುಕುಲ ಕುರುಕ್ಷೇತ್ರ, ಡಿಎವಿ ಮತ್ತು ಇತರ ಶೈಕ್ಷಣಿಕ ಕೇಂದ್ರಗಳು ಸೇರಿದಂತೆ ಅನೇಕ ಶಾಖೆಗಳನ್ನು ಹೊಂದಿರುವ ವಿಶಾಲವಾದ ಮರವಾಗಿ ಬೆಳೆದಿದೆ ಎಂದು ಹೇಳಿದರು. ಇವೆಲ್ಲವೂ ಆಯಾ ಕ್ಷೇತ್ರಗಳಲ್ಲಿ ಶ್ರದ್ಧೆಯಿಂದ ಕೆಲಸ ಮಾಡುತ್ತಿವೆ. ರಾಷ್ಟ್ರವು ಬಿಕ್ಕಟ್ಟನ್ನು ಎದುರಿಸಿದಾಗಲೆಲ್ಲಾ, ಆರ್ಯ ಸಮಾಜದ ಸದಸ್ಯರು ನಿಸ್ವಾರ್ಥವಾಗಿ ಸಹವರ್ತಿ ನಾಗರಿಕರ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ ಎಂಬುದನ್ನು ಅವರು ಎತ್ತಿ ತೋರಿಸಿದರು. ವಿಭಜನೆಯ ಭೀಕರತೆಯ ಸಮಯದಲ್ಲಿ ಎಲ್ಲವನ್ನೂ ಕಳೆದುಕೊಂಡು ಭಾರತಕ್ಕೆ ಆಗಮಿಸಿದ ನಿರಾಶ್ರಿತರಿಗೆ ಸಹಾಯ, ಪುನರ್ವಸತಿ ಮತ್ತು ಶಿಕ್ಷಣ ನೀಡುವಲ್ಲಿ ಆರ್ಯ ಸಮಾಜದ ಮಹತ್ವದ ಪಾತ್ರವನ್ನು ಶ್ರೀ ಮೋದಿ ಅವರು ಉಲ್ಲೇಖಿಸಿದರು - ಇದು ಇತಿಹಾಸದಲ್ಲಿ ಸ್ಪಷ್ಟವಾಗಿ ದಾಖಲಾಗಿರುವ ಕೊಡುಗೆಯಾಗಿದೆ ಎಂದರು. ಇಂದಿಗೂ ಸಹ, ಪ್ರಕೃತಿ ವಿಕೋಪಗಳ ಸಮಯದಲ್ಲಿ ಸಂತ್ರಸ್ತರಿಗೆ ಸೇವೆ ಸಲ್ಲಿಸುವಲ್ಲಿ ಆರ್ಯ ಸಮಾಜವು ಮುಂಚೂಣಿಯಲ್ಲಿದೆ ಎಂದೂ ಅವರು ಹೇಳಿದರು.

ಆರ್ಯ ಸಮಾಜದ ಅನೇಕ ಕೊಡುಗೆಗಳಲ್ಲಿ, ಭಾರತದ ಗುರುಕುಲ ಸಂಪ್ರದಾಯವನ್ನು ಸಂರಕ್ಷಿಸುವಲ್ಲಿ ಅದರ ಪಾತ್ರವು ಅತ್ಯಂತ ಪ್ರಮುಖವಾದುದು ಎಂದು ಒತ್ತಿ ಹೇಳಿದ ಶ್ರೀ ಮೋದಿ, ಭಾರತವು ಒಂದು ಕಾಲದಲ್ಲಿ ತನ್ನ ಗುರುಕುಲಗಳ ಬಲದಿಂದಾಗಿ ಜ್ಞಾನ ಮತ್ತು ವಿಜ್ಞಾನದ ಉತ್ತುಂಗದಲ್ಲಿತ್ತು ಎಂದು ನೆನಪಿಸಿಕೊಂಡರು. ವಸಾಹತುಶಾಹಿ ಆಳ್ವಿಕೆಯಲ್ಲಿ, ಈ ವ್ಯವಸ್ಥೆಯ ಮೇಲೆ ಉದ್ದೇಶಪೂರ್ವಕ ದಾಳಿಗಳನ್ನು ನಡೆಸಲಾಯಿತು, ಇದು ಜ್ಞಾನದ ನಾಶ, ಮೌಲ್ಯಗಳ ಸವೆತ ಮತ್ತು ಹೊಸ ಪೀಳಿಗೆಯನ್ನು ದುರ್ಬಲಗೊಳಿಸಲು ಕಾರಣವಾಯಿತು. ಕುಸಿಯುತ್ತಿರುವ ಗುರುಕುಲ ಸಂಪ್ರದಾಯವನ್ನು ರಕ್ಷಿಸಲು ಆರ್ಯ ಸಮಾಜವು ಮುಂದೆ ಬಂದಿತು. ಇದು ಸಂಪ್ರದಾಯವನ್ನು ಸಂರಕ್ಷಿಸಿದ್ದಲ್ಲದೆ, ಆಧುನಿಕ ಶಿಕ್ಷಣವನ್ನು ಸಂಯೋಜಿಸುವ ಮೂಲಕ ಕಾಲಾನಂತರದಲ್ಲಿ ಅದನ್ನು ಪರಿಷ್ಕರಿಸಿತು. ದೇಶವು ಈಗ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಶಿಕ್ಷಣವನ್ನು ಮೌಲ್ಯಗಳು ಮತ್ತು ವ್ಯಕ್ತಿತ್ವ ನಿರ್ಮಾಣದೊಂದಿಗೆ ಮರುಸಂಪರ್ಕಿಸುತ್ತಿರುವ ಸಂದರ್ಭವನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಭಾರತದ ಪವಿತ್ರ ಜ್ಞಾನ ಸಂಪ್ರದಾಯವನ್ನು ರಕ್ಷಿಸಿದ್ದಕ್ಕಾಗಿ ಆರ್ಯ ಸಮಾಜಕ್ಕೆ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ ಎಂದೂ ಹೇಳಿದರು.  

"ಇಡೀ ಜಗತ್ತನ್ನು ಉತ್ಕೃಷ್ಟಗೊಳಿಸೋಣ ಮತ್ತು ಅದನ್ನು ಉದಾತ್ತ ಚಿಂತನೆಗಳತ್ತ ಸಾಗುವಂತೆ ಮಾರ್ಗದರ್ಶನ ಮಾಡೋಣ" ಎಂಬ ವೇದ ಶ್ಲೋಕವನ್ನು ಉಲ್ಲೇಖಿಸಿದ ಶ್ರೀ ಮೋದಿ, ಸ್ವಾಮಿ ದಯಾನಂದ ಜೀ ಅವರು ಈ ಶ್ಲೋಕವನ್ನು ಆರ್ಯ ಸಮಾಜದ ಮಾರ್ಗದರ್ಶಿ ಧ್ಯೇಯವಾಕ್ಯವಾಗಿ ಅಳವಡಿಸಿಕೊಂಡಿದ್ದಾರೆ ಎಂಬುದರತ್ತ ಗಮನ ಸೆಳೆದರು. ಈ ಶ್ಲೋಕವು ಈಗ ಭಾರತದ ಅಭಿವೃದ್ಧಿ ಪ್ರಯಾಣದ ಅಡಿಪಾಯದ ಮಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು - ಅಲ್ಲಿ ಭಾರತದ ಪ್ರಗತಿ ಜಾಗತಿಕ ಕಲ್ಯಾಣಕ್ಕೆ ಕೊಡುಗೆ ನೀಡುತ್ತದೆ ಮತ್ತು ಅದರ ಸಮೃದ್ಧಿ ಮಾನವೀಯತೆಗೆ ಸೇವೆ ಸಲ್ಲಿಸುತ್ತದೆ. ಸುಸ್ಥಿರ ಅಭಿವೃದ್ಧಿಯ ಕ್ಷೇತ್ರದಲ್ಲಿ ಭಾರತವು ಪ್ರಮುಖ ಜಾಗತಿಕ ಧ್ವನಿಯಾಗಿದೆ ಎಂದು ಅವರು ಹೇಳಿದರು. ವೇದಗಳಿಗೆ ಮರಳಲು ಸ್ವಾಮೀಜಿ ಅವರ ಕರೆಗೆ ಸಮಾನಾಂತರವಾಗಿ, ಭಾರತವು ಈಗ ಜಾಗತಿಕ ವೇದಿಕೆಯಲ್ಲಿ ವೈದಿಕ ಆದರ್ಶಗಳು ಮತ್ತು ಜೀವನಶೈಲಿಯನ್ನು ಪ್ರತಿಪಾದಿಸುತ್ತಿದೆ ಎಂದು ಪ್ರಧಾನಮಂತ್ರಿ ಅವರು ಎತ್ತಿ ತೋರಿಸಿದರು. ಜಾಗತಿಕ ಬೆಂಬಲವನ್ನು ಪಡೆದಿರುವ ಮಿಷನ್ ಲೈಫ್ ಪ್ರಾರಂಭಿಸಿರುವುದನ್ನು ಅವರು ಉಲ್ಲೇಖಿಸಿದರು. "ಒಂದು ಸೂರ್ಯ, ಒಂದು ಜಗತ್ತು, ಒಂದು ಜಾಲ" ಎಂಬ ಚಿಂತನೆಯ ಮೂಲಕ, ಭಾರತವು ಶುದ್ಧ ಶಕ್ತಿಯನ್ನು ಜಾಗತಿಕ ಚಳುವಳಿಯಾಗಿ ಪರಿವರ್ತಿಸುತ್ತಿದೆ. ಅಂತರರಾಷ್ಟ್ರೀಯ ಯೋಗ ದಿನದ ಮೂಲಕ ಯೋಗವು 190 ಕ್ಕೂ ಹೆಚ್ಚು ದೇಶಗಳನ್ನು ತಲುಪಿದೆ, ಯೋಗ ಜೀವನ ವಿಧಾನ ಮತ್ತು ಪರಿಸರ ಪ್ರಜ್ಞೆಯನ್ನು ಉತ್ತೇಜಿಸುತ್ತಿದೆ ಎಂದೂ ಅವರು ಹೇಳಿದರು.

 

ಮಿಷನ್ ಲೈಫ್ ನಂತಹ ಜಾಗತಿಕ ಉಪಕ್ರಮಗಳು ಈಗ ವಿಶ್ವಾದ್ಯಂತ ಆಸಕ್ತಿಯನ್ನು ಗಳಿಸುತ್ತಿವೆ ಎಂದು ಪ್ರಧಾನಮಂತ್ರಿ ಹೇಳಿದರು, ಇವು ಆರ್ಯ ಸಮಾಜ ಸದಸ್ಯರ ಶಿಸ್ತುಬದ್ಧ ಜೀವನದಲ್ಲಿ ಬಹಳ ಹಿಂದಿನಿಂದಲೂ ಅವಿಭಾಜ್ಯ ಅಂಗವಾಗಿವೆ. ಸರಳ ಜೀವನ, ಸೇವಾ-ಆಧಾರಿತ ಮೌಲ್ಯಗಳು, ಸಾಂಪ್ರದಾಯಿಕ ಭಾರತೀಯ ಉಡುಪುಗಳಿಗೆ ಆದ್ಯತೆ, ಪರಿಸರ ಕಾಳಜಿ ಮತ್ತು ಭಾರತೀಯ ಸಂಸ್ಕೃತಿಯ ಪ್ರಚಾರಕ್ಕೆ ಅವರ ಬದ್ಧತೆಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಭಾರತವು "ಸರ್ವೇ ಭವಂತು ಸುಖಿನಃ" ಎಂಬ ಆದರ್ಶದೊಂದಿಗೆ ಜಾಗತಿಕ ಕಲ್ಯಾಣವನ್ನು ಮುನ್ನಡೆಸುತ್ತಿರುವಾಗ ಮತ್ತು ಜಾಗತಿಕ ಸಹೋದರನಾಗಿ ತನ್ನ ಪಾತ್ರವನ್ನು ಬಲಪಡಿಸುತ್ತಿರುವಾಗ, ಆರ್ಯ ಸಮಾಜದ ಪ್ರತಿಯೊಬ್ಬ ಸದಸ್ಯರು ಸ್ವಾಭಾವಿಕವಾಗಿ ಈ ಧ್ಯೇಯದೊಂದಿಗೆ ಹೊಂದಿಕೆಯಾಗುತ್ತಾರೆ ಎಂದು ಅವರು ದೃಢವಾಗಿ ನುಡಿದರು. ಅವರ ಕೊಡುಗೆಗಳನ್ನು ಪ್ರಧಾನಮಂತ್ರಿ ಅವರು ಪೂರ್ಣ ಹೃದಯದಿಂದ ಶ್ಲಾಘಿಸಿದರು ಮತ್ತು ಕೊಂಡಾಡಿದರು.

ಸ್ವಾಮಿ ದಯಾನಂದ ಸರಸ್ವತಿ ಜೀ ಅವರು ಬೆಳಗಿದ ಜ್ಯೋತಿ ಕಳೆದ 150 ವರ್ಷಗಳಿಂದ ಆರ್ಯ ಸಮಾಜದ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಸ್ವಾಮೀಜೀ ನಮ್ಮೆಲ್ಲರಲ್ಲೂ ಆಳವಾದ ಜವಾಬ್ದಾರಿಯ ಪ್ರಜ್ಞೆಯನ್ನು - ಹೊಸ ಆಲೋಚನೆಗಳನ್ನು ಮುಂದಿಡುವ ಮತ್ತು ಪ್ರಗತಿಗೆ ಅಡ್ಡಿಯಾಗುವ ಕಠಿಣ ಸಂಪ್ರದಾಯಗಳನ್ನು ಮುರಿಯುವ ಜವಾಬ್ದಾರಿಯನ್ನು - ತುಂಬಿದ್ದಾರೆ ಎಂದೂ ನುಡಿದರು. ಆರ್ಯ ಸಮಾಜ ಸಮುದಾಯದಿಂದ ತಮಗೆ ದೊರೆತ ಪ್ರೀತಿ ಮತ್ತು ಬೆಂಬಲವನ್ನು ಅವರು ಉಲ್ಲೇಖಿಸಿದರು ಮತ್ತು ಭಾಗವಹಿಸಲು ಮಾತ್ರವಲ್ಲದೆ ಕೆಲವು ವಿನಂತಿಗಳನ್ನು ಮಾಡಲು ಬಂದಿದ್ದೇನೆ ಎಂದು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು.

ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಆರ್ಯ ಸಮಾಜವು ಈಗಾಗಲೇ ಅಪಾರ ಕೊಡುಗೆ ನೀಡಿದ್ದರೂ, ದೇಶದ ಪ್ರಸ್ತುತ ಆದ್ಯತೆಗಳಲ್ಲಿ ಕೆಲವನ್ನು ಪುನರುಚ್ಚರಿಸಲು ತಾವು ಬಯಸಿರುವುದಾಗಿ ಶ್ರೀ ಮೋದಿ ಒತ್ತಿ ಹೇಳಿದರು. ಆರ್ಯ ಸಮಾಜದೊಂದಿಗೆ ಸ್ವದೇಶೀ ಚಳವಳಿಯ ಐತಿಹಾಸಿಕ ಸಂಬಂಧವನ್ನು ಅವರು ಗುರುತಿಸಿದರು. ದೇಶವು ಮತ್ತೊಮ್ಮೆ ಸ್ಥಳೀಯ ವಸ್ತುಗಳನ್ನು ಉತ್ತೇಜಿಸುವ ಜವಾಬ್ದಾರಿಯನ್ನು ಸ್ವೀಕರಿಸಿ, ಸ್ಥಳೀಯ ಉತ್ಪನ್ನಗಳನ್ನು ಖರೀದಿಸಬೇಕೆಂಬ ಸಿದ್ಧಾಂತವನ್ನು ಪ್ರಚುರಪಡಿಸಿ ಸ್ಥಳೀಯರಿಗೆ ಧ್ವನಿಯಾಗುತ್ತಿರುವಾಗ, ಈ ಧ್ಯೇಯದಲ್ಲಿ ಆರ್ಯ ಸಮಾಜದ ಪಾತ್ರ ಇನ್ನಷ್ಟು ಮಹತ್ವದ್ದಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

ಭಾರತದ ಪ್ರಾಚೀನ ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸುವ ಮತ್ತು ಸಂರಕ್ಷಿಸುವ ಗುರಿಯನ್ನು ಹೊಂದಿರುವ ಇತ್ತೀಚೆಗೆ ಪ್ರಾರಂಭಿಸಲಾದ ಜ್ಞಾನ ಭಾರತಂ ಮಿಷನ್ ನೆನಪಿಸಿಕೊಂಡ ಪ್ರಧಾನಮಂತ್ರಿ, ಯುವ ಪೀಳಿಗೆ ಅದರೊಂದಿಗೆ ಸಂಪರ್ಕ ಸಾಧಿಸಿದಾಗ ಮತ್ತು ಅದರ ಮಹತ್ವವನ್ನು ಅರ್ಥಮಾಡಿಕೊಂಡಾಗ ಮಾತ್ರ ಈ ವಿಶಾಲವಾದ ಜ್ಞಾನ ಭಂಡಾರವನ್ನು ನಿಜವಾಗಿಯೂ ರಕ್ಷಿಸಬಹುದು ಎಂದು ಒತ್ತಿ ಹೇಳಿದರು. ಕಳೆದ 150 ವರ್ಷಗಳಿಂದ, ಆರ್ಯ ಸಮಾಜವು ಭಾರತದ ಪವಿತ್ರ ಪ್ರಾಚೀನ ಗ್ರಂಥಗಳನ್ನು ಕಂಡುಹಿಡಿಯುವಲ್ಲಿ ಮತ್ತು ಸಂರಕ್ಷಿಸುವಲ್ಲಿ ತೊಡಗಿಸಿಕೊಂಡಿದೆ ಎಂಬುದನ್ನು ಗಮನಿಸಿದ ಶ್ರೀ ಮೋದಿ, ಈ ಧ್ಯೇಯದಲ್ಲಿ ಸಕ್ರಿಯವಾಗಿ ಭಾಗವಹಿಸಲು ಆರ್ಯ ಸಮಾಜಕ್ಕೆ ಕರೆ ನೀಡಿದರು. ಈ ಗ್ರಂಥಗಳ ಸ್ವಂತಿಕೆಯನ್ನು ಕಾಪಾಡಿಕೊಳ್ಳುವಲ್ಲಿ ಆರ್ಯ ಸಮಾಜದ ಸದಸ್ಯರ ಬಹು-ಪೀಳಿಗೆಯ ಪ್ರಯತ್ನಗಳನ್ನು ಅವರು ಗುರುತಿಸಿದರು. ಜ್ಞಾನ ಭಾರತಂ ಮಿಷನ್ ಈಗ ಈ ಪ್ರಯತ್ನವನ್ನು ರಾಷ್ಟ್ರೀಯ ಮಟ್ಟಕ್ಕೆ ಏರಿಸುತ್ತದೆ ಮತ್ತು ಇದನ್ನು ತಮ್ಮದೇ ಆದ ಅಭಿಯಾನವೆಂದು ಪರಿಗಣಿಸುವಂತೆ ಆರ್ಯ ಸಮಾಜವನ್ನು ಅವರು ಒತ್ತಾಯಿಸಿದರು. ತಮ್ಮ ಗುರುಕುಲಗಳು ಮತ್ತು ಸಂಸ್ಥೆಗಳ ಮೂಲಕ ಹಸ್ತಪ್ರತಿಗಳ ಅಧ್ಯಯನ ಮತ್ತು ಸಂಶೋಧನೆಯಲ್ಲಿ ಯುವಜನರನ್ನು ತೊಡಗಿಸಿಕೊಳ್ಳಲು ಅವರು ಪ್ರೋತ್ಸಾಹಿಸಿದರು.

 

ಮಹರ್ಷಿ ದಯಾನಂದ ಜೀ ಅವರ 200 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ, ಯಜ್ಞಗಳಲ್ಲಿ ಬಳಸುವ ಧಾನ್ಯಗಳ ಬಗ್ಗೆ ತಾವು ಮಾತನಾಡಿದ್ದನ್ನು ಪ್ರಧಾನಮಂತ್ರಿ ಶ್ರೀ ಮೋದಿ ಸ್ಮರಿಸಿದರು. ಯಜ್ಞಗಳಲ್ಲಿ ಸಾಂಪ್ರದಾಯಿಕವಾಗಿ ಬಳಸುವ ಧಾನ್ಯಗಳಾದ "ಶ್ರೀ ಅನ್ನ"ದ ಪವಿತ್ರ ಮಹತ್ವವನ್ನು ಅವರು ಒತ್ತಿ ಹೇಳಿದರು ಮತ್ತು ಭಾರತದ ಪ್ರಾಚೀನ ಶ್ರೀ ಅನ್ನ ಸಂಪ್ರದಾಯವನ್ನು ಉತ್ತೇಜಿಸುವ ಅಗತ್ಯವನ್ನೂ ಎತ್ತಿ ತೋರಿಸಿದರು. ಈ ಧಾನ್ಯಗಳ ಪ್ರಮುಖ ಲಕ್ಷಣವೆಂದರೆ ಅವುಗಳನ್ನು ನೈಸರ್ಗಿಕವಾಗಿ ಬೆಳೆಯಲಾಗುತ್ತದೆ ಎಂಬುದರತ್ತ ಅವರು ಗಮನ ಸೆಳೆದರು. ನೈಸರ್ಗಿಕ ಕೃಷಿಯು ಒಂದು ಕಾಲದಲ್ಲಿ ಭಾರತದ ಆರ್ಥಿಕತೆಯ ಪ್ರಮುಖ ಆಧಾರಸ್ತಂಭವಾಗಿತ್ತು ಮತ್ತು ಜಗತ್ತು ಮತ್ತೊಮ್ಮೆ ಅದರ ಪ್ರಾಮುಖ್ಯತೆಯನ್ನು ಗುರುತಿಸಲು ಪ್ರಾರಂಭಿಸಿದೆ ಎಂದು ಅವರು ಹೇಳಿದರು. ನೈಸರ್ಗಿಕ ಕೃಷಿಯ ಆರ್ಥಿಕ ಮತ್ತು ಆಧ್ಯಾತ್ಮಿಕ ಆಯಾಮಗಳ ಬಗ್ಗೆ ಜಾಗೃತಿ ಮೂಡಿಸಲು ಆರ್ಯ ಸಮಾಜವನ್ನು ಪ್ರಧಾನಮಂತ್ರಿ ಒತ್ತಾಯಿಸಿದರು.

ಜಲ ಸಂರಕ್ಷಣೆಯ ವಿಷಯವನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ, ದೇಶವು ಪ್ರತಿ ಹಳ್ಳಿಗೂ ಶುದ್ಧ ಕುಡಿಯುವ ನೀರನ್ನು ತಲುಪಿಸಲು ಜಲ ಜೀವನ್ ಮಿಷನ್ ಮೂಲಕ ಕೆಲಸ ಮಾಡುತ್ತಿದೆ ಎಂದು ಹೇಳಿದರು, ಇದು ವಿಶ್ವದ ಅತ್ಯಂತ ವಿಶಿಷ್ಟ ಅಭಿಯಾನಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಿದರು. ಆದಾಗ್ಯೂ, ಭವಿಷ್ಯದ ಪೀಳಿಗೆಗೆ ಸಾಕಷ್ಟು ನೀರನ್ನು ಸಂರಕ್ಷಿಸಿದರೆ ಮಾತ್ರ ನೀರು ವಿತರಣಾ ವ್ಯವಸ್ಥೆಗಳು ಪರಿಣಾಮಕಾರಿಯಾಗುತ್ತವೆ ಎಂದು ಅವರು ಎಚ್ಚರಿಸಿದರು. ಈ ನಿಟ್ಟಿನಲ್ಲಿ ಸರ್ಕಾರ ಹನಿ ನೀರಾವರಿಯನ್ನು ಉತ್ತೇಜಿಸುತ್ತಿದ್ದು, 60,000 ಕ್ಕೂ ಹೆಚ್ಚು ಅಮೃತ ಸರೋವರಗಳ ಸೃಷ್ಟಿಯನ್ನು ಕೈಗೆತ್ತಿಕೊಂಡಿದೆ. ಸರ್ಕಾರದೊಂದಿಗೆ ಈ ಪ್ರಯತ್ನಗಳನ್ನು ಸಕ್ರಿಯವಾಗಿ ಬೆಂಬಲಿಸುವಂತೆ ಪ್ರಧಾನಮಂತ್ರಿ ಸಮಾಜಕ್ಕೆ ಕರೆ ನೀಡಿದರು.

ಪ್ರತಿಯೊಂದು ಹಳ್ಳಿಯಲ್ಲೂ ಕೊಳಗಳು, ಸರೋವರಗಳು, ಬಾವಿಗಳು ಮತ್ತು ಮೆಟ್ಟಿಲುಬಾವಿಗಳ ಸಾಂಪ್ರದಾಯಿಕ ಹಾಜರಾತಿಯನ್ನು ಉಲ್ಲೇಖಿಸಿದ ಅವರು, ಅವು ಕಾಲಾನಂತರದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿ ಬತ್ತಿಹೋಗಿವೆ ಎಂದೂ ನುಡಿದರು, ಈ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು ನಿರಂತರ ಸಾರ್ವಜನಿಕ ಜಾಗೃತಿಯ ಅಗತ್ಯವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. "ಏಕ್ ಪೆಡ್ ಮಾ ಕೆ ನಾಮ್" ಅಭಿಯಾನದ ಯಶಸ್ಸನ್ನು ಪ್ರಧಾನಮಂತ್ರಿ ಅವರು ಎತ್ತಿ ತೋರಿಸಿದರು, ಇದು ಅಲ್ಪಾವಧಿಯ ಉಪಕ್ರಮವಲ್ಲ, ಅರಣ್ಯೀಕರಣಕ್ಕಾಗಿ ನಿರಂತರ ಚಳುವಳಿಯಾಗಿದೆ ಎಂದು ಹೇಳಿದರು. ಈ ಅಭಿಯಾನದೊಂದಿಗೆ ಸಾಧ್ಯವಾದಷ್ಟು ಜನರನ್ನು ಸಂಪರ್ಕಿಸಲು ಅವರು ಆರ್ಯ ಸಮಾಜದ ಸದಸ್ಯರನ್ನು ಪ್ರೋತ್ಸಾಹಿಸಿದರು.

ಒಟ್ಟಿಗೆ ನಡೆಯಲು, ಒಟ್ಟಿಗೆ ಮಾತನಾಡಲು ಮತ್ತು ಪರಸ್ಪರರ ಮನಸ್ಸನ್ನು ಅರ್ಥಮಾಡಿಕೊಳ್ಳಲು ಕಲಿಸುವ "ಸಂಗಚ್ಛಧ್ವಂ ಸಂವಾದಧ್ವಂ ಸಂ ವೋ ಮನಾಂಸಿ ಜನತಂ" ಎಂಬ ವೇದ ಶ್ಲೋಕವನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು - ಪರಸ್ಪರರ ಆಲೋಚನೆಗಳಿಗೆ ಪರಸ್ಪರ ಗೌರವವನ್ನು ಇದು ಒತ್ತಿಹೇಳುತ್ತದೆ. ಈ ವೇದದ ಪ್ರಾರ್ಥನೆಯನ್ನು ರಾಷ್ಟ್ರೀಯ ಕ್ರಿಯೆಯ ಕರೆಯಾಗಿಯೂ ನೋಡಬೇಕು ಎಂದು ಅವರು ಹೇಳಿದರು. ಶ್ರೀ ಮೋದಿ ಪ್ರತಿಯೊಬ್ಬರೂ ರಾಷ್ಟ್ರದ ನಿರ್ಣಯಗಳನ್ನು ತಮ್ಮದೇ ಎಂದು ಅಳವಡಿಸಿಕೊಳ್ಳಬೇಕೆಂದು ಮತ್ತು ಸಾರ್ವಜನಿಕ ಭಾಗವಹಿಸುವಿಕೆಯ ಮನೋಭಾವದ ಮೂಲಕ ಸಾಮೂಹಿಕ ಪ್ರಯತ್ನಗಳನ್ನು ಮುನ್ನಡೆಸಬೇಕೆಂದು ಒತ್ತಾಯಿಸಿದರು. ಕಳೆದ 150 ವರ್ಷಗಳಿಂದ ಆರ್ಯ ಸಮಾಜವು ಈ ಮನೋಭಾವವನ್ನು ನಿರಂತರವಾಗಿ ಸಾಕಾರಗೊಳಿಸಿದೆ ಎಂದು ಅವರು ಹೇಳಿದರು ಮತ್ತು ಅದನ್ನು ನಿರಂತರವಾಗಿ ಬಲಪಡಿಸುವಂತೆ ಕರೆ ನೀಡಿದರು. ಮಹರ್ಷಿ ದಯಾನಂದ ಸರಸ್ವತಿ ಅವರ ಚಿಂತನೆಗಳು ಮಾನವ ಕಲ್ಯಾಣದ ಹಾದಿಯನ್ನು ಬೆಳಗಿಸುತ್ತಲೇ ಇರುತ್ತವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುವ ಮೂಲಕ ಪ್ರಧಾನಮಂತ್ರಿ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಆರ್ಯ ಸಮಾಜದ 150 ವರ್ಷಗಳ ಸಂದರ್ಭದಲ್ಲಿ ಅವರು ಮತ್ತೊಮ್ಮೆ ಎಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದರು.

ಗುಜರಾತ್ ಮತ್ತು ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ್, ದೆಹಲಿಯ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ ಸೇರಿದಂತೆ ಇತರ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಮಹರ್ಷಿ ದಯಾನಂದ ಸರಸ್ವತಿ ಜೀ ಅವರ 200 ನೇ ಜನ್ಮ ದಿನಾಚರಣೆ ಮತ್ತು ಸಮಾಜಕ್ಕೆ ಆರ್ಯ ಸಮಾಜದ 150 ವರ್ಷಗಳ ಸೇವೆಯನ್ನು ಸ್ಮರಿಸುವ ಜ್ಞಾನ ಜ್ಯೋತಿ ಉತ್ಸವದ ಪ್ರಮುಖ ಭಾಗವೆಂದರೆ ಅಂತರರಾಷ್ಟ್ರೀಯ ಆರ್ಯ ಶೃಂಗಸಭೆ 2025 ಕಾರ್ಯಕ್ರಮ.

ಮಹರ್ಷಿ ದಯಾನಂದರ ಸುಧಾರಣಾವಾದಿ ಆದರ್ಶಗಳ ಸಾರ್ವತ್ರಿಕ ಪ್ರಸ್ತುತತೆ ಮತ್ತು ಸಂಸ್ಥೆಯ ಜಾಗತಿಕ ಪ್ರಭಾವವನ್ನು ಪ್ರತಿಬಿಂಬಿಸುವ ಭಾರತ ಮತ್ತು ವಿದೇಶಗಳಾದ್ಯಂತ ಆರ್ಯ ಸಮಾಜ ಘಟಕಗಳ ಪ್ರತಿನಿಧಿಗಳನ್ನು ಶೃಂಗಸಭೆಯು ಒಟ್ಟುಗೂಡಿಸುತ್ತದೆ. ಇದು ಶಿಕ್ಷಣ, ಸಾಮಾಜಿಕ ಸುಧಾರಣೆ ಮತ್ತು ಆಧ್ಯಾತ್ಮಿಕ ಉನ್ನತಿಯಲ್ಲಿ ಆರ್ಯ ಸಮಾಜದ ಪರಿವರ್ತನಾ ಪ್ರಯಾಣವನ್ನು ಪ್ರದರ್ಶಿಸುವ "150 ಸುವರ್ಣ ವರ್ಷಗಳ ಸೇವೆ" ಎಂಬ ಶೀರ್ಷಿಕೆಯ ಪ್ರದರ್ಶನವನ್ನು ಸಹ ಒಳಗೊಂಡಿರುತ್ತದೆ.

ಮಹರ್ಷಿ ದಯಾನಂದ ಸರಸ್ವತಿ ಅವರ ಸುಧಾರಣಾವಾದಿ ಮತ್ತು ಶೈಕ್ಷಣಿಕ ಪರಂಪರೆಯನ್ನು ಗೌರವಿಸುವುದು, ಶಿಕ್ಷಣ, ಸಾಮಾಜಿಕ ಸುಧಾರಣೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಆರ್ಯ ಸಮಾಜದ 150 ವರ್ಷಗಳ ಸೇವೆಯನ್ನು ಆಚರಿಸುವುದು ಮತ್ತು ವಿಕಸಿತ ಭಾರತ್ 2047 ರೊಂದಿಗೆ ಹೊಂದಾಣಿಕೆಯಲ್ಲಿ ವೈದಿಕ ತತ್ವಗಳು ಮತ್ತು ಸ್ವದೇಶಿ ಮೌಲ್ಯಗಳ ಜಾಗತಿಕ ಜಾಗೃತಿಯನ್ನು ಪ್ರೇರೇಪಿಸುವುದು ಈ ಶೃಂಗಸಭೆಯ ಉದ್ದೇಶವಾಗಿದೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's electronics exports cross $47 billion in 2025 on iPhone push

Media Coverage

India's electronics exports cross $47 billion in 2025 on iPhone push
NM on the go

Nm on the go

Always be the first to hear from the PM. Get the App Now!
...
List of Outcomes: Visit of His Highness Sheikh Mohamed bin Zayed Al Nahyan, President of UAE to India
January 19, 2026
S.NoAgreements / MoUs / LoIsObjectives

1

Letter of Intent on Investment Cooperation between the Government of Gujarat, Republic of India and the Ministry of Investment of the United Arab Emirates for Development of Dholera Special Investment region

To pursue investment cooperation for UAE partnership in development of the Special Investment Region in Dholera, Gujarat. The envisioned partnership would include the development of key strategic infrastructure, including an international airport, a pilot training school, a maintenance, repair and overhaul (MRO) facility, a greenfield port, a smart urban township, railway connectivity, and energy infrastructure.

2

Letter of Intent between the Indian National Space Promotion and Authorisation Centre (IN-SPACe) of India and the Space Agency of the United Arab Emirates for a Joint Initiative to Enable Space Industry Development and Commercial Collaboration

To pursue India-UAE partnership in developing joint infrastructure for space and commercialization, including launch complexes, manufacturing and technology zones, incubation centre and accelerator for space start-ups, training institute and exchange programmes.

3

Letter of Intent between the Republic of India and the United Arab Emirates on the Strategic Defence Partnership

Work together to establish Strategic Defence Partnership Framework Agreement and expand defence cooperation across a number of areas, including defence industrial collaboration, defence innovation and advanced technology, training, education and doctrine, special operations and interoperability, cyber space, counter terrorism.

4

Sales & Purchase Agreement (SPA) between Hindustan Petroleum Corporation Limited, (HPCL) and the Abu Dhabi National Oil Company Gas (ADNOC Gas)

The long-term Agreement provides for purchase of 0.5 MMPTA LNG by HPCL from ADNOC Gas over a period of 10 years starting from 2028.

5

MoU on Food Safety and Technical requirements between Agricultural and Processed Food Products Export Development Authority (APEDA), Ministry of Commerce and Industry of India, and the Ministry of Climate Change and Environment of the United Arab Emirates.

The MoU provides for sanitary and quality parameters to facilitate the trade, exchange, promotion of cooperation in the food sector, and to encourage rice, food products and other agricultural products exports from India to UAE. It will benefit the farmers from India and contribute to food security of the UAE.

S.NoAnnouncementsObjective

6

Establishment of a supercomputing cluster in India.

It has been agreed in principle that C-DAC India and G-42 company of the UAE will collaborate to set up a supercomputing cluster in India. The initiative will be part of the AI India Mission and once established the facility be available to private and public sector for research, application development and commercial use.

7

Double bilateral Trade to US$ 200 billion by 2032

The two sides agreed to double bilateral trade to over US$ 200 billion by 2032. The focus will also be on linking MSME industries on both sides and promote new markets through initiatives like Bharat Mart, Virtual Trade Corridor and Bharat-Africa Setu.

8

Promote bilateral Civil Nuclear Cooperation

To capitalise on the new opportunities created by the Sustainable Harnessing and Advancement of Nuclear Energy for Transforming India (SHANTI) Act 2025, it was agreed to develop a partnership in advance nuclear technologies, including development and deployment of large nuclear reactors and Small Modular Reactors (SMRs) and cooperation in advance reactor systems, nuclear power plant operations and maintenance, and Nuclear Safety.

9

Setting up of offices and operations of UAE companies –First Abu Dhabi Bank (FAB) and DP World in the GIFT City in Gujarat

The First Abu Dhabi Bank will have a branch in GIFT that will promote trade and investment ties. DP World will have operations from the GIFT City, including for leasing of ships for its global operations.

10

Explore Establishment of ‘Digital/ Data Embassies’

It has been agreed that both sides would explore the possibility of setting up Digital Embassies under mutually recognised sovereignty arrangements.

11

Establishment of a ‘House of India’ in Abu Dhabi

It has been agreed in Principle that India and UAE will cooperate on a flagship project to establish a cultural space consisting of, among others, a museum of Indian art, heritage and archaeology in Abu Dhabi.

12

Promotion of Youth Exchanges

It has been agreed in principle to work towards arranging visits of a group of youth delegates from either country to foster deeper understanding, academic and research collaboration, and cultural bonds between the future generations.