PM to visit Rajasthan, inaugurate several major highway projects
PM Modi to visit the Pratap Gaurav Kendra in Udaipur

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜಾಸ್ಥಾನದ ಉದಯಪುರಕ್ಕೆ ನಾಳೆ ಭೇಟಿ ನೀಡಲಿದ್ದಾರೆ.

ಅಲ್ಲಿ ಅವರು ಹಲವು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಉದ್ಘಾಟನೆಯನ್ನೂ ಮಾಡಲಿದ್ದಾರೆ. ಈ ಯೋಜನೆಗಳ ಒಟ್ಟು ಅಂದಾಜು 15,000 ಕೋಟಿ ರೂಪಾಯಿಗಳಾಗಿವೆ.

ಉದ್ಘಾಟನೆ ಆಗಲಿರುವ ಯೋಜನೆಗಳ ಪೈಕಿ: ಕೋಟಾದಲ್ಲಿ ಚಂಬಲ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತಂತಿಯಿಂದ ಬಿಗಿಯಲಾದ ಆರು ಪಥದ ಸೇತುವೆ ಮಾರ್ಗ; ರಾಷ್ಟ್ರೀಯ ಹೆದ್ದಾರಿ 8ರ ಉದಯಪುರ ವಿಭಾಗದಲ್ಲಿ ಗೋಮಾತಿ ಚೌರಾಹಾ ಚತುಷ್ಪಥ ಮಾರ್ಗ; ಮತ್ತು ರಾಷ್ಟ್ರೀಯ ಹೆದ್ದಾರಿ-758 ರ ರಾಜ್ಸಾಮಂದ್-ಭಿಲ್ವಾರ ವಿಭಾಗದ ಚತುಷ್ಪಥ ಸೇರಿವೆ. ಶಂಕುಸ್ಥಾಪನೆ ನೆರವೇರಲಿರುವ ಪ್ರಮುಖ ಯೋಜನೆಗಳಲ್ಲಿ ಜೈಪುರ ವರ್ತುಲ ರಸ್ತೆ ಸೇರಿದೆ.

ಪ್ರಧಾನಮಂತ್ರಿಯವರು ಸಭಿಕರನ್ನು ಉದ್ದೇಶಿಸಿ ಭಾಷಣವನ್ನೂ ಮಾಡಲಿದ್ದಾರೆ.

ಬಳಿಕ ಪ್ರಧಾನಮಂತ್ರಿಯವರು ಉದಯಪುರದಲ್ಲಿ ಪ್ರತಾಪ್ ಗೌರವ್ ಕೇಂದ್ರಕ್ಕೂ ಭೇಟಿ ನೀಡಲಿದ್ದಾರೆ. ಈ ಕೇಂದ್ರವು ವಿವಿಧ ಪ್ರದರ್ಶನಗಳ ಮೂಲಕ ಅಂದಿನ ಮೇವಾರ್ ಸಾಮ್ರಾಜ್ಯದ ಜನಪ್ರಿಯ ದೊರೆ ಮಹಾರಾಣಾ ಪ್ರತಾಪ ಅವರ ಶೌರ್ಯ, ಸಾಧನೆ ಮತ್ತು ಜೀವನದ ಮಾಹಿತಿ ಒದಗಿಸಲಿದೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Tractor sales cross 10 lakh mark in FY26 on strong rural demand, GST cut

Media Coverage

Tractor sales cross 10 lakh mark in FY26 on strong rural demand, GST cut
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 12 ಎಪ್ರಿಲ್ 2026
April 12, 2026

Trust, Technology & Transformation: How India is Building a Viksit Bharat Under PM Modi