ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2019ರ ಫೆಬ್ರವರಿ 2ರಂದು ಪಶ್ಚಿಮ ಬಂಗಾಳದ ದುರ್ಗಾಪುರಕ್ಕೆ ಭೇಟಿ ನೀಡಲಿದ್ದಾರೆ.
ಈ ಭೇಟಿಯ ವೇಳೆ ಅವರು, ಆಂಡಾಳ್-ಸೈಂಥಿಯಾ-ಪಾಕುರ್-ಮಾಲ್ಡಾ ಮತ್ತು ಖಾನಾ-ಸೈಂಥಿಯಾ ವಿಭಾಗಗಳ ನಡುವಿನ 294 ಕಿ.ಮೀ. ವಿದ್ಯುದ್ದೀಕರಣ ರೈಲು ಮಾರ್ಗವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಈ ವಿಭಾಗದ ವಿದ್ಯುದ್ದೀಕರಣವು ಕಲ್ಲಿದ್ದಲು, ಕಲ್ಲು ಚೂರು ಮತ್ತು ನೀಲುಭಾರವನ್ನು ಉತ್ತರ ಮತ್ತು ಈಶಾನ್ಯ ಭಾರತಕ್ಕೆ ತಡೆರಹಿತವಾಗಿ ಸಾಗಿಸಲು ಅವಕಾಶ ಕಲ್ಪಿಸುತ್ತದೆ.
ಇಪ್ಪತ್ತು ಕಿ.ಮೀ. ಉದ್ದದ ಹಿಜ್ಲಿ – ನಾರಾಯಣ್ ಗರ್ ಮೂರನೇ ಮಾರ್ಗವನ್ನೂ ಅವರು ದೇಶಕ್ಕೆ ಸಮರ್ಪಿಸಲಿದ್ದಾರೆ.


