PM's interaction with ITBP excursion groups of students from Sikkim and Ladakh
Work towards achieving the vision of a prosperous, corruption-free India: PM tells students

ಭಾರತದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಿರುವ ಸಿಕ್ಕಿಂ ಮತ್ತು ಲಡಾಖ್ ನ ಎರಡು ಐಟಿಬಿಪಿ ಪ್ರವಾಸಿ ತಂಡದ 53 ವಿದ್ಯಾರ್ಥಿಗಳು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನಿಂದು ಭೇಟಿ ಮಾಡಿದರು. ಪ್ರಧಾನಮಂತ್ರಿಯವರೊಂದಿಗೆ ಅನೌಪಚಾರಿಕವಾಗಿ ಸಂವಾದ ನಡೆಸಿದ ಅವರು, ಪ್ರಗತಿ ಮತ್ತು ಭ್ರಷ್ಟಾಚಾರ ಮುಕ್ತ ಭಾರತ ಕುರಿತಂತೆ ತಮ್ಮ ನಿಲುವು ಹಂಚಿಕೊಂಡರು. ಪ್ರಧಾನಮಂತ್ರಿಯವರು ಈ ದೃಷ್ಟಿಕೋನದ ಸಾಕಾರಕ್ಕೆ ಶ್ರಮಿಸುವಂತೆ ಪ್ರಚೋದಿಸಿದರು. ಹೆಚ್ಚು ಫಲಪ್ರದತೆಗಾಗಿ ಸದೃಢವಾಗಿರುವಂತೆ ವಿದ್ಯಾರ್ಥಿಗಳಿಗೆ ಪ್ರಧಾನಿ ಮನವಿ ಮಾಡಿದರು. ಈ ನಿಟ್ಟಿನಲ್ಲಿ ಯೋಗದ ಮಹತ್ವದ ಬಗ್ಗೆಯೂ ಚರ್ಚಿಸಲಾಯಿತು.

ಕಲಿಕೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಪ್ರಧಾನಿ, ಎಲ್ಲಾ ಸಮಯದಲ್ಲೂ ಕಲಿಯಲು ವಿದ್ಯಾರ್ಥಿಯಾಗಿರುವ ನೈಸರ್ಗಿಕ ಪ್ರವೃತ್ತಿಯು ಬೆಳೆಸಕೊಳ್ಳಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ಡಿಜಿಟಲ್ ಇಂಡಿಯಾ ಬಗ್ಗೆ ಹೆಚ್ಚಿನ ಆಸಕ್ತಿ ಪ್ರದರ್ಶಿಸಿದರು. ನಗದು ರಹಿತ ವಹಿವಾಟು ಕೂಡ ಈ ಚರ್ಚೆಯ ಸಂದರ್ಭದಲ್ಲಿ ಬಂದವು. ಪ್ರಧಾನಮಂತ್ರಿಯವರು ನೇರ ಸವಲತ್ತು ವರ್ಗಾವಣೆ ಹೇಗೆ ಶ್ರೀಸಾಮಾನ್ಯನಿಗೆ ಉಪಯುಕ್ತವಾಗಿದೆ ಎಂಬುದನ್ನು ವಿವರಿಸಿದರು.

ಅನಗತ್ಯ ಒತ್ತಡ ಮತ್ತು ಒತ್ತಡವಿಲ್ಲದೆಯೇ ಬದುಕು ನಡೆಸಬೇಕೆಂದು ಪ್ರತಿಪಾದಿಸಿ ಪ್ರಧಾನಮಂತ್ರಿಯವರು ಬರೆದಿರುವ “ಎಕ್ಸಾಂ ವಾರಿಯರ್ಸ್’’ ಪುಸ್ತಕದ ಪ್ರಸ್ತಾಪವನ್ನೂ ವಿದ್ಯಾರ್ಥಿಗಳು ಮಾಡಿದರು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Technical textiles critical to footwear sector

Media Coverage

Technical textiles critical to footwear sector
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 29 ಎಪ್ರಿಲ್ 2026
April 29, 2026

Leadership That Plays, Builds & Delivers: PM Modi’s Vision Igniting Youth, Women & Northeast India