Our commitment to peace is just as strong as our commitment to protecting our people & our territory: PM Modi
The Defence Procurement Procedure has been revised with many specific provisions for stimulating growth of domestic defence industry: PM Modi
We are committed to establishing 2 Defence Industrial Corridors: 1 in Tamil Nadu & 1 in Uttar Pradesh; the corridors will become engines of economic development & growth of defence industrial base: PM
We have launched the ‘Innovation for Defence Excellence’ scheme. It will set up Defence Innovation Hubs throughout the country: PM
Not now, Not anymore, Never again, says PM Modi on the issue of policy paralysis in defence sector
Our government resolved the issue of providing bullet proof jackets to Indian soldiers was kept hanging for years: PM Modi

ತಮಿಳುನಾಡಿನ ರಾಜ್ಯಪಾಲರೇ,

 

ಲೋಕಸಭೆಯ ಉಪ ಸಭಾಧ್ಯಕ್ಷರೇ,

 

ತಮಿಳುನಾಡು ಮುಖ್ಯಮಂತ್ರಿಯವರೇ,

 

ತಮಿಳುನಾಡಿನ ಉಪ ಮುಖ್ಯಮಂತ್ರಿಯವರೇ,

 

ನನ್ನ ಸಚಿವ ಸಂಪುಟದ ಸಹೋದ್ಯೋಗಿಗಳೇ,

 

ಗೌರವಾನ್ವಿತ ಸಂದರ್ಶಕರೇ,

 

ಸ್ನೇಹಿತರೇ,

 

ನಿಮ್ಮೆಲ್ಲರಿಗೂ ಶುಭೋದಯ!

 

ಇದು ಡಿ.ಎಫ್.ಇ.ಪಿ.ಒ. 2018 (DEFEXPO-2018 ) ದ 10ನೇ ಆವೃತ್ತಿ.

ನಿಮ್ಮಲ್ಲಿ ಅನೇಕರು, ಈ ಕಾರ್ಯಕ್ರಮದಲ್ಲಿ ಅನೇಕಬಾರಿ ಪಾಲ್ಗೊಂಡಿರಬಹುದು. ಕೆಲವರು ಇದು ಆರಂಭವಾದ ದಿನದಿಂದಲೂ ಭಾಗಿಯಾಗಿರಬಹುದು.

ಆದರೆ, ನನಗೆ ಇದು, ಡಿಫ್ ಎಕ್ಸ್ ಪೋ ಪ್ರಥಮ ಬಾರಿ. ತಮಿಳುನಾಡಿನ ಈ ಐತಿಹಾಸಿಕ ಕಾಂಚಿಪುರದ ವಲಯದಲ್ಲಿ ಇಷ್ಟು ಸಂಖ್ಯೆಯಲ್ಲಿ ಭಾಗಿಯಾಗಿರುವುದು ನನಗೆ ಅತೀವ ಸಂತೋಷವಾಗಿದೆ.

 

ಶಿಕ್ಷಣ ಮತ್ತು ವಾಣಿಜ್ಯದಲ್ಲಿ ಭಾರತಕ್ಕೆ ಐತಿಹಾಸಿಕ ನಾಗರಿಕ ಜೀವನದ ಸಂಪರ್ಕ ಕಲ್ಪಿಸಿದ ಚೋಳರ ಈ ಶ್ರೇಷ್ಠ ನಾಡಿನಲ್ಲಿರಲು ನಾನು ಅತೀವ ಸಂತೋಷಪಡುತ್ತೇನೆ. ಇದು ನಮ್ಮ ವೈಭವದ ಸಾಗರ ಪರಂಪರೆಯ ನಾಡು.

 

ಸಾವಿರಾರು ವರ್ಷಗಳಿಂದ ಭಾರತ ಇಲ್ಲಿಂದ ಪೂರ್ವದತ್ತ ನೋಡುವ ಮತ್ತು ಕ್ರಮ ಕೈಗೊಳ್ಳುವ ನಾಡಾಗಿದೆ.

ಸ್ನೇಹಿತರೆ,

 

500ಕ್ಕೂ ಹೆಚ್ಚು ಭಾರತೀಯ ಕಂಪನಿಗಳೊಂದಿಗೆ ಒಂದು ನೂರ ಐವತ್ತು ವಿದೇಶೀ ಕಂಪನಿಗಳು ಇಲ್ಲಿರುವುದು ನಿಜಕ್ಕೂ ಅದ್ಭುತವೇ ಸರಿ.

 

ನಲವತ್ತಕ್ಕೂ ಹೆಚ್ಚು ದೇಶಗಳು ತಮ್ಮ ಅಧಿಕೃತ ನಿಯೋಗವನ್ನು ಇಲ್ಲಿಗೆ ಕಳುಹಿಸಿದ್ದಾರೆ. ಇದು ಭಾರತದ ರಕ್ಷಣಾ ಅಗತ್ಯಗಳ ಬಗ್ಗೆ ಚರ್ಚಿಸುವ ಎಲ್ಲಕ್ಕಿಂತ ಮಿಗಿಲಾದ ಅವಕಾಶವಷ್ಟೇ ಅಲ್ಲ, ಜೊತೆಗೆ ಪ್ರಪ್ರಥಮ ಬಾರಿಗೆ ಭಾರತದ ಸ್ವಂತ ರಕ್ಷಣಾ ಸಾಮರ್ಥ್ಯವನ್ನು ವಿಶ್ವಕ್ಕೆ ತೋರಲು ಇಂಥ ರೀತಿಯಲ್ಲಿ ಪ್ರದರ್ಶನಕ್ಕಿಟ್ಟಿರುವ ಅವಕಾಶವಾಗಿದೆ.

 

ಸಶಸ್ತ್ರ ಪಡೆಗಳು, ವಿಶ್ವಾದ್ಯಂತದ ಸರಬರಾಜು ಸರಪಳಿಯ ಮಹತ್ವವನ್ನು ಅರಿತಿವೆ. ಆದರೆ, ಇದು ಕೇವಲ ಯುದ್ಧಭೂಮಿಯಲ್ಲಷ್ಟೇ ಅಲ್ಲ, ಜೊತೆಗೆ ರಕ್ಷಣಾ ಉತ್ಪಾದನೆ ಸಂಸ್ಥೆಗಳ ಕೈಗಾರಿಕಾ ನೆಲದಲ್ಲೂ ವ್ಯೂಹಾತ್ಮಕ ನಿರ್ಧಾರಗಳನ್ನು ಮಾಡಲಾಗುತ್ತದೆ.

 

ಇಂದು, ನಾವು ಅಂತರ ಸಂಪರ್ಕಿತ ವಿಶ್ವದಲ್ಲಿ ಜೀವಿಸುತ್ತಿದ್ದೇವೆ. ಸರಬರಾಜು ಸರಪಣಿಯ ದಕ್ಷತೆ ಯಾವುದೇ ಉತ್ಪಾದನಾ ಉದ್ದಿಮೆಗೆ ಪ್ರಮುಖ ಅಂಶವಾಗಿದೆ. ಹೀಗಾಗಿ, ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ಇಂಡಿಯಾ ವ್ಯೂಹಾತ್ಮಕ ಆಜ್ಞಾರ್ಥಕಗಳು ಮತ್ತು ಭಾರತದಿಂದ ವಿಶ್ವಕ್ಕೆ ಸರಬರಾಜು ಮಾಡುವುದು ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ.

 

ಸ್ನೇಹಿತರೇ,

ಭಾರತದ ಸಾವಿರಾರು ವರ್ಷಗಳ ಇತಿಹಾಸ ನಾವು ಎಂದಿಗೂ ಬೇರೆಯವರ ಪ್ರದೇಶವನ್ನು ಎಂದಿಗೂ ಬಯಸಿಲ್ಲ ಎಂಬುದನ್ನು ತೋರಿಸುತ್ತದೆ.

 

ಯುದ್ಧಗಳ ಮೂಲಕ ರಾಷ್ಟ್ರಗಳನ್ನು ಗೆಲ್ಲುವುದಕ್ಕಿಂತ, ಹೃದಯ ಗೆಲ್ಲುವುದರಲ್ಲಿ ಭಾರತ ವಿಶ್ವಾಸವಿಟ್ಟಿದೆ. ವೇದದ ಕಾಲದಿಂದಲೂ ಭ್ರಾತೃತ್ವ ಮತ್ತು ಶಾಂತಿಯ ಸಂದೇಶ ವಿದೇಶಗಳಿಗೆ ಹೋಗಿರುವ ನಾಡು ಇದಾಗಿದೆ.

 

ಈ ನೆಲದಿಂದ ಬೌದ್ಧಮತ ವಿಶ್ವಾದ್ಯಂತ ಹಬ್ಬಿದೆ. ಅಶೋಕನ ಕಾಲದಲ್ಲಿ ಮತ್ತು ಅದಕ್ಕೂ ಮುನ್ನ, ಭಾರತವು ಮಾನವತೆಯ ಅತ್ಯುನ್ನತ ಆದರ್ಶಗಳನ್ನು ಸಂರಕ್ಷಿಸಲು ಬಲಪ್ರಯೋಗದಲ್ಲಿ ನಂಬಿಕೆ ಇಟ್ಟಿತ್ತು.

 

ಆಧುನಿಕ ಕಾಲದಲ್ಲಿ, 130 ಸಾವಿರ ಭಾರತೀಯ ಯೋಧರು ಕಳೆದ ಶತಮಾನದ ವಿಶ್ವಯುದ್ಧಗಳಲ್ಲಿ ತಮ್ಮ ಬದುಕು ತ್ಯಾಗ ಮಾಡಿದ್ದರು. ಭಾರತವು ಭೂಪ್ರದೇಶದ ಮೇಲೆ ಯಾವುದೇ ಹಕ್ಕು ಸಾಧಿಸಿಲ್ಲ, ಆದರೆ, ಭಾರತೀಯ ಯೋಧರು ಶಾಂತಿ ಸ್ಥಾಪಿಸಲು ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಲು ಹೋರಾಡಿದ್ದಾರೆ.

 

ಸ್ವತಂತ್ರ ಭಾರತ ಸಹ ವಿಶ್ವದಾದ್ಯಂತ ವಿಶ್ವ ಸಂಸ್ಥೆಯ ಶಾಂತಿಪಾಲಕರ ಪಡೆಗೆ ಬೃಹತ್ ಸಂಖ್ಯೆಯನ್ನು ಕಳುಹಿಸಿದೆ. ಅದೇ ವೇಳೆ ದೇಶದ ಅತ್ಯಂತ ಮಹತ್ವದ ಜವಾಬ್ದಾರಿ ತನ್ನ ಸ್ವಂತ ಪ್ರಜೆಗಳನ್ನು ರಕ್ಷಿಸುವುದಾಗಿದೆ. ಭಾರತದ ಶ್ರೇಷ್ಠ ಚಿಂತಕ ಮತ್ತು ಕಾರ್ಯತಂತ್ರಜ್ಞ ಕೌಟಿಲ್ಯ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದೆ ಅರ್ಥಶಾಸ್ತ್ರ ಬರೆದಿದ್ದಾರೆ. ರಾಜ ಅಥವಾ ಆಡಳಿತಗಾರ ತನ್ನ ಪ್ರಜೆಗಳನ್ನು ಕಾಪಾಡಬೇಕು ಎಂದು ಹೇಳುತ್ತಾರೆ. ಯುದ್ಧಕ್ಕಿಂತ ಶಾಂತಿಯೇ ಮೇಲು ಎಂದೂ ಹೇಳುತ್ತಾರೆ. ಭಾರತದ ರಕ್ಷಣಾ ಸನ್ನದ್ಧತೆ ಈ ಚಿಂತನೆಗಳಿಂದ ಮಾರ್ಗದರ್ಶಿತವಾಗಿದೆ. ನಮ್ಮ ಜನರನ್ನು ಮತ್ತ ನಮ್ಮ ನೆಲೆಯನ್ನು ರಕ್ಷಿಸಿಕೊಳ್ಳುವ ಬದ್ಧತೆಯಷ್ಟೇ ನಮ್ಮ ಶಾಂತಿಯ ಬದ್ಧತೆಯೂ ಬಲವಾಗಿದೆ. ಇದಕ್ಕಾಗಿ ನಾವು ವ್ಯೂಹಾತ್ಮಕವಾಗಿ ಸ್ವತಂತ್ರವಾದ ರಕ್ಷಣಾ ಕೈಗಾರಿಕಾ ಸಮುಚ್ಛಯದೊಂದಿಗೆ ನಮ್ಮ ಸಶಸ್ತ್ರ ಪಡೆಗಳನ್ನು ಸಜ್ಜುಗೊಳಿಸಲು ಎಲ್ಲ ಕ್ರಮ ಕೈಗೊಳ್ಳಲು ತಯಾರಿದ್ದೇವೆ.

ಸ್ನೇಹಿತರೇ,

ರಕ್ಷಣಾ ಕೈಗಾರಿಕಾ ಸಮುಚ್ಚಯ ರಚನೆ ಸರಳವಲ್ಲ ಎಂಬ ಅರಿವು ನಮಗಿದೆ. ಸಾಕಷ್ಟು ಮಾಡಬೇಕಾದ್ದಿದೆ ಮತ್ತು ಹಲವು ತುಂಡುಗಳನ್ನು ಒಂದುಗೂಡಿಸುವ ಅಗತ್ಯವಿದೆ ಎಂಬುದು ನಮಗೆ ತಿಳಿದಿದೆ. ಸರ್ಕಾರದ ಭಾಗಿತ್ವದಲ್ಲಿ ರಕ್ಷಣಾ ಉತ್ಪಾದನಾ ವಲಯ ಅನನ್ಯವಾದ್ದು ಎಂಬ ಅರಿವೂ ನಮಗಿದೆ. ಉತ್ಪಾದನೆಗೆ ಸರ್ಕಾರ ಪರವಾನಗಿಯ ಅಗತ್ಯ ನಿಮಗಿದೆ. ಭಾರತದಲ್ಲಿ ಸರ್ಕಾರ ಮಾತ್ರವೇ ಏಕೈಕ ಖರೀದಿದಾರನಾಗಿರುವುದರಿಂದ ನಿಮಗೆ ಸರ್ಕಾರದ ಆದೇಶದ ಅಗತ್ಯ ನಿಮಗಿದೆ. ಅಲ್ಲದೆ ಸರ್ಕಾರ ನಿಮಗೆ ರಫ್ತು ಮಾಡಲು ಅನುಮತಿ ನೀಡಬೇಕು ಎಂದೂ ಬಯಸುತ್ತೀರಿ.

 

ಹೀಗಾಗಿ, ಕಳೆದ ಕೆಲವು ವರ್ಷಗಳಲ್ಲಿ, ನಾವು ಆತ್ಮೀಯ ಆರಂಭ ಮಾಡಿದ್ದೇವೆ. ರಕ್ಷಣಾ ಉತ್ಪಾದನೆ ಪರವಾನಗಿಯ ಕುರಿತಂತೆ,ರಕ್ಷಣಾ ಆಫ್ಸೆಟ್ ಗಳ ಕುರಿತಂತೆ, ರಕ್ಷಣಾ ರಫ್ತು ಅನುಮತಿಯ ಕುರಿತಂತೆ, ರಕ್ಷಣಾ ಉತ್ಪಾದನೆಯಲ್ಲಿ ವಿದೇಶೀ ನೇರ ಬಂಡವಾಳ ಹೂಡಿಕೆಯ ಕುರಿತಂತೆ, ಮತ್ತು ನಮ್ಮ ರಕ್ಷಣಾ ದಾಸ್ತಾನು ಸುಧಾರಣೆಯ ಕುರಿತಂತೆ ನಾವು ಹಲವು ಕ್ರಮ ಕೈಗೊಂಡಿದ್ದೇವೆ.

 

ಈ ಎಲ್ಲ ಕ್ಷೇತ್ರಗಳಲ್ಲಿ, ನಮ್ಮ ನಿಯಂತ್ರಣಗಳು, ಪ್ರಕ್ರಿಯೆಗಳು ಮತ್ತು ಕಾರ್ಯವಿಧಾನಗಳನ್ನು ಹೆಚ್ಚು ಕೈಗಾರಿಕಾ ಸ್ನೇಹಿ ಮಾಡಲಾಗಿದೆ, ಇದು ಹೆಚ್ಚು ಫಲಶ್ರುತಿ ಆಧಾರಿತ, ಹೆಚ್ಚು ಊಹಾತ್ಮಕ ಮತ್ತು ಹೆಚ್ಚು ಪಾರದರ್ಶಕವಾಗಿದೆ. ಪರವಾನಗಿ ನೀಡುವ ಉದ್ದೇಶಕ್ಕಾಗಿ ರಕ್ಷಣಾ ಉತ್ಪನ್ನಗಳ ಪಟ್ಟಿಯನ್ನು ಪರಿಷ್ಕರಿಸಲಾಗಿದೆ, ಮತ್ತು ಕೈಗಾರಿಕೆಗಳ ಅದರಲ್ಲೂ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಪ್ರವೇಶಕ್ಕೆ ಇದ್ದ ತಡೆಗಳನ್ನು ಕಡಿಮೆ ಮಾಡಲು ಬಹುತೇಕ ಘಟಕಗಳು, ಭಾಗಗಳು, ಉಪ-ವ್ಯವಸ್ಥೆಗಳು, ಪರೀಕ್ಷಾ ಉಪಕರಣಗಳು ಮತ್ತು ಉತ್ಪಾದನಾ ಸಲಕರಣೆಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಕೈಗಾರಿಕಾ ಪರವಾನಗಿಗಳ ಆರಂಭಿಕ ಸಿಂಧುತ್ವದ ಅವಧಿಯನ್ನು ಮತ್ತೆ 3 ವರ್ಷಗಳ ಅವಧಿಗೆ ವಿಸ್ತರಿಸುವ ನಿಯಮದೊಂದಿಗೆ 3 ವರ್ಷಗಳಿಂದ 15 ವರ್ಷಗಳಿಗೆ ಹೆಚ್ಚಿಸಲಾಗಿದೆ. ಭಾರತೀಯ ಆಫ್ ಸೆಟ್ ಪಾಲುದಾರರು ಮತ್ತು ಆಫ್ ಸೆಟ್ ಘಟಕಗಳು, ಈಗಾಗಲೇ ಒಪ್ಪಂದಕ್ಕೆ ಅಂಕಿತ ಹಾಕಿರುವ ಗುತ್ತಿಗೆಯೂ ಸೇರಿ ಆಫ್ ಸೆಟ್ ಮಾರ್ಗಸೂಚಿಗಳನ್ನು ನಮ್ಯಗೊಳಿಸಲಾಗಿದೆ.

 

ಸಲಕರಣೆಗಳ ವಿದೇಶಗಳ ಮೂಲ ತಯಾರಕರಿಗೆ ಈಗ ಒಪ್ಪಂದಕ್ಕೆಸಹಿ ಹಾಕುವಾಗ ಭಾರತೀಯ ಆಫ್ ಸೆಟ್ ಪಾಲುದಾರರ ಮತ್ತು ಉತ್ಪನ್ನಗಳ ವಿವರ ನಮೂದಿಸುವ ಅಗತ್ಯವಿರುವುದಿಲ್ಲ. ನಾವು ಆಫ್ಸೆಟ್ ಗಳನ್ನು ಹೊರಹಾಕುವ ಮಾರ್ಗವಾಗಿ ಸೇವೆಗಳನ್ನು ಮರುಸ್ಥಾಪಿಸಿದ್ದೇವೆ.

 

ರಫ್ತು ಅಧಿಕಾರಗಳ ವಿತರಣೆಗಾಗಿ ಗುಣಮಟ್ಟದ ನಿರ್ವಹಣಾ ವಿಧಾನ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಅನ್ನು ಸರಳೀಕರಿಸಲಾಗಿದೆ ಮತ್ತು ಸಾರ್ವಜನಿಕರಿಗೆ ಲಭ್ಯವಾಗುವಂತೆ ಇಡಲಾಗಿದೆ. ಭಾಗಗಳನ್ನು ಮತ್ತು ಘಟಕಗಳ ರಫ್ತು ಮತ್ತು ಇತರ ಸೂಕ್ಷ್ಮವಲ್ಲದ ಸೇನಾ ಮಳಿಗೆಗಳು, ಉಪ-ಸಭೆಗಳು ಮತ್ತು ಉಪ-ವ್ಯವಸ್ಥೆಗಳನ್ನು ರಫ್ತು ಮಾಡಲು ಸರ್ಕಾರ-ಸಹಿ ಮಾಡಿದ ಕೊನೆಯ ಬಳಕೆದಾರರ ಪ್ರಮಾಣಪತ್ರದ ಅವಶ್ಯಕತೆಯನ್ನು ದೂರ ಮಾಡಲಾಗಿದೆ.

 

2001ರವರೆಗೆ ರಕ್ಷಣಾ ಕೈಗಾರಿಕಾ ವಲಯ ಖಾಸಗಿ ವಲಯಕ್ಕೆ ಮುಕ್ತವಾಗಿರಲಿಲ್ಲ, ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಮೊದಲ ಬಾರಿಗೆ ಇದನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸಿತು.

 

ನಾವು ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ, ವಿದೇಶೀ ನೇರ ಬಂಡವಾಳ ಹೂಡಿಕೆಯ ಮಿತಿಯನ್ನು ಪರಿಷ್ಕರಿಸಿದ್ದು, ಸ್ವಯಂಚಾಲಿತ ಮಾರ್ಗದಲ್ಲಿ ಶೇ 29ರಿಂದ ಪ್ರತಿಶತ 49 ಮತ್ತು ಪ್ರತಿಶತ 100ರವರೆಗೆ ಪ್ರಕರಣದಿಂದ ಪ್ರಕರಣದ ಆಧಾರದ ಮೇಲೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ದೇಶೀಯ ರಕ್ಷಣಾ ಉದ್ಯಮದ ಬೆಳವಣಿಗೆಯನ್ನು ಉತ್ತೇಜಿಸಲು ಹಲವು  ರಕ್ಷಣಾ ದಾಸ್ತಾನು ನಿಬಂಧನೆಗಳನ್ನು ಪರಿಷ್ಕರಿಸಲಾಗಿದೆ. ದೇಶೀಯ ರಕ್ಷಣಾ ಸಾಧನ ಉತ್ಪಾದನೆ ಕಾರ್ಖಾನೆಗಳಿಗೆ ಮಾತ್ರವೇ ನಿರ್ದಿಷ್ಟಪಡಿಸಲಾಗಿದ್ದ ಕೆಲವೊಂದು ಉತ್ಪನ್ನಗಳ ಕ್ಷೇತ್ರಕ್ಕೆ ಖಾಸಗಿ, ವಿಶೇಷವಾಗಿ ಖಾಸಗಿ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಪ್ರವೇಶಿಸಲು ನಾವು ಅವಕಾಶ ನೀಡಿದ್ದೇವೆ.

 

ರಕ್ಷಣಾ ವಲಯದಲ್ಲಿ ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳ ಅಭಿವೃದ್ಧಿ ಉತ್ತೇಜಿಸಲು ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳ- ಸಾರ್ವಜನಿಕ ದಾಸ್ತಾನು ನೀತಿಯನ್ನು 2012ರಲ್ಲಿ ಅಧಿಸೂಚಿಸಲಾಗಿದ್ದು, 2015ರ ಏಪ್ರಿಲ್ ನಿಂದ ಕಡ್ಡಾಯಗೊಳಿಸಲಾಗಿದೆ. ನಮಗೆ ದೊರೆತ ಕೆಲವು ಆರಂಭಿಕ ಫಲಿತಾಂಶಗಳೂ ಉತ್ತೇಜನಕಾರಿಯಾಗಿವೆ. ಮೇ 2014ರಲ್ಲಿ ನೀಡಲಾದ ಒಟ್ಟು ರಕ್ಷಣಾ ಪರವಾನಗಿ 215ಆಗಿತ್ತು. ನಾಲ್ಕು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ, ನಾವು 144ಕ್ಕೂ ಹೆಚ್ಚು ಪರವಾನಗಿಗಳನ್ನು ಪಾರದರ್ಶಕ ಮತ್ತು ಊಹಿಸಬಹುದಾದ ಪ್ರಕ್ರಿಯೆಯಲ್ಲಿ  ನೀಡಿದ್ದೇವೆ.

 

2014ರ ಮೇನಲ್ಲಿ, ಮಂಜೂರು ಮಾಡಲಾದ ರಕ್ಷಣಾ ರಫ್ತು ಅನುಮತಿಗಳು 118 ಆಗಿದ್ದು, ಇದರ ಒಟ್ಟು ಮೊಲ್ಯ 577 ದಶಲಕ್ಷ ಡಾಲರ್ ಗಳಾಗಿವೆ. ನಾಲ್ಕು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ, ನಾವು 794ಕ್ಕೂ ಹೆಚ್ಚು ರಫ್ತು ಅನುಮತಿ ನೀಡಿದ್ದು, ಇದರ ಒಟ್ಟು ಮೌಲ್ಯ 1.3 ಶತಕೋಟಿ ಡಾಲರ್ ಗಳಾಗಿವೆ. 2007ರಿಂದ 2013ರವರೆಗೆ ಗುರಿ ಹೊಂದಿದ ಆಫ್ ಸೆಟ್ ಕಟ್ಟುಪಾಡುಗಳು 1.24ಶತಕೋಟಿ ಡಾಲರ್ ಗಳಾಗಿತ್ತು, ಈ ಪೈಕಿ, ಕೇವಲ 0.79 ಶತಕೋಟಿ ಡಾಲರ್ ಮೌಲ್ಯದ ಆಫ್ ಸೆಟ್ ಗಳನ್ನು ವಾಸ್ತವವಾಗಿ ಡಿಸ್ಚಾರ್ಜ್ ಮಾಡಲಾಗಿದೆ. ಇದು ಶೇ.63ರಷ್ಟು ಸಾಧನೆ ದರವಾಗಿದೆ. 2014 ರಿಂದ 2017 ರವರೆಗೆ, ಉದ್ದೇಶಿತ ಆಫ್ಸೆಟ್ ಗಳ ಕಟ್ಟುಪಾಡುಗಳು 1.79 ಶತಕೋಟಿ ಡಾಲರ್ ಗಳಾಗಿವೆ, ಅದರಲ್ಲಿ 1.42 ಶತಕೋಟಿ ಡಾಲರ್ ಮೌಲ್ಯದ ಆಫ್ಸೆಟ್ ಗಳನ್ನು ಸಾಧಿಸಲಾಗಿದೆ. ಇದರ ಸಾಧನೆಯ ದರ ಶೇ.80ರ ಸನಿಹದಲ್ಲಿದೆ. ರಕ್ಷಣಾ ಸಾರ್ವಜನಿಕ ವಲಯದ ಉದ್ದಿಮೆ ಮತ್ತು ರಕ್ಷಣಾ ಸಾಧನ ತಯಾರಿಕಾ ಕೈಗಾರಿಕೆಗಳು ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳಿಂದ ಮಾಡಿಕೊಂಡ ದಾಸ್ತಾನು 2014-15ರಲ್ಲಿ 3300ಕೋಟಿ ರೂಪಾಯಿಯಿಂದ 2016-17ರ ಸಾಲಿನಲ್ಲಿ 4250 ಕೋಟಿ ರೂಪಾಯಿಗಳಿಗೆ ಏರಿದೆ.  ಈ ಏರಿಕೆ ಪ್ರತಿಶತ 30ಕ್ಕೆ ಹತ್ತಿರವಾಗಿದೆ.

 

ರಕ್ಷಣಾ ಉತ್ಪಾದನೆಯಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ವಲಯದ ಕೊಡುಗೆ ಕಳೆದ 4 ವರ್ಷಗಳಲ್ಲಿ ಶೇ.200ರಷ್ಟು ಬೆಳೆದಿದೆ ಎಂದು ಹೃದಯತುಂಬಿ ತಿಳಿಸುತ್ತೇನೆ. ಅಲ್ಲದೆಅವು ಜಾಗತಿಕ ಪೂರೈಕೆ ಸರಣಿಯ ಭಾಗವಾಗುತ್ತಿವೆ.

 

ರಕ್ಷಣಾ ಬಂಡವಾಳ ವೆಚ್ಚದ ಮೂಲಕ ಮಾಡಿಕೊಂಡ ಖರೀದಿ-ದಾಸ್ತಾನುಗಳಲ್ಲಿ  ಭಾರತೀಯ ಮಾರಾಟಗಾರರ ಪಾಲು 2011-14ನೇ ಸಾಲಿನಲ್ಲಿದ್ದ ಶೇ 50 ರಿಂದ ಕಳೆದ ಮೂರು ವರ್ಷಗಳಲ್ಲಿ ಅದು ಶೇಕಡಾ 60ರಷ್ಟು ಹೆಚ್ಚಿದೆ. ಇದು ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಳವಾಗಲಿದೆ.

ಸ್ನೇಹಿತರೇ,

ನಾವು ಇನ್ನೂ ಹೆಚ್ಚಿನದನ್ನು ಸಾಧಿಸಬೇಕು ಎಂಬ ಅರಿವು ನನಗಿದೆ. ನಾವು ಅದಕ್ಕೆ ಬದ್ಧರಾಗಿದ್ದೇವೆ.

 

ನಾವು ರಕ್ಷಣಾ ಕೈಗಾರಿಕಾ ಸಂಕೀರ್ಣ ನಿರ್ಮಾಣಕ್ಕೆ ಬದ್ಧರಾಗಿದ್ದೇವೆ, ಇದರಲ್ಲಿ ಸಾರ್ವಜನಿಕ ವಲಯ, ಖಾಸಗಿ ಕ್ಷೇತ್ರ ಮತ್ತು ವಿದೇಶೀ ಸಂಸ್ಥೆಗಳಿಗೂ ಅವಕಾಶವಿರುತ್ತದೆ.

 

ತಮಿಳುನಾಡಿನಲ್ಲಿ ಒಂದು ಹಾಗೂ ಉತ್ತರ ಪ್ರದೇಶದಲ್ಲಿ ಮತ್ತೊಂದು ಹೀಗೆ ಎರಡು ಕೈಗಾರಿಕಾ ಕಾರಿಡಾರ್ ಸ್ಥಾಪಿಸಲೂ ನಾವು ಬದ್ಧರಾಗಿದ್ದೇವೆ. ಈ ರಕ್ಷಣಾ ಕೈಗಾರಿಕಾ ಕಾರಿಡಾರ್ ಗಳು ಈವಲಯಗಳಲ್ಲಿ ಹಾಲಿ ಇರುವ ರಕ್ಷಣಾ ಉತ್ಪಾದನೆ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ನಿರ್ಮಿಸುತ್ತದೆ.

 

ಈ ಕಾರಿಡಾರ್ ಗಳು ದೇಶದ ಆರ್ಥಿಕ ಅಭಿವೃದ್ಧಿ ಮತ್ತು ರಕ್ಷಣಾ ಕೈಗಾರಿಕೆ ನೆಲೆಯ ಚಾಲಕ ಶಕ್ತಿಯಾಗುತ್ತವೆ. ರಕ್ಷಣಾ ಉತ್ಪಾದನೆಯಲ್ಲಿ ತೊಡಗಿರುವ ಹೂಡಿಕೆದಾರರಿಗೆ ನೆರವು ನೀಡಲು ನಾವು ರಕ್ಷಣಾ ಹೂಡಿಕೆ ಕೋಶವನ್ನೂ ಸ್ಥಾಪಿಸಿದ್ದೇವೆ.

 

ಸ್ನೇಹಿತರೇ,

ರಕ್ಷಣಾ ವಲಯಕ್ಕೆ ತಂತ್ರಜ್ಞಾನ, ನಾವಿನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ ಅಗತ್ಯವಾಗಿದ್ದು, ಇದಕ್ಕೆ ಸರ್ಕಾರದ ಬೆಂಬಲದ ಅಗತ್ಯವಿದೆ. ತಂತ್ರಜ್ಞಾನ ಅಭಿವೃದ್ಧಿ, ಪಾಲುದಾರಿಕೆಗಳು ಮತ್ತು ಉತ್ಪಾದನಾ ವ್ಯವಸ್ಥೆಗಳನ್ನು ಯೋಜಿಸಲು ಮತ್ತು ಪ್ರಾರಂಭಿಸಲು ಉದ್ಯಮಕ್ಕೆ ಸಹಾಯ ಮಾಡಲು ತಾಂತ್ರಿಕ ದೃಷ್ಟಿಕೋನ ಮತ್ತು ಸಾಮರ್ಥ್ಯವನ್ನು ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

 

ಭಾರತೀಯ ವಾಣಿಜ್ಯ  ಪರಿಸರ ವ್ಯವಸ್ಥೆಯಲ್ಲಿ ನಾವಿನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಇತ್ತೀಚಿನ ವರ್ಷಗಳಲ್ಲಿ,ನಾವು ಮೇಕ್ ಇನ್ ಇಂಡಿಯಾ, ಸಾರ್ಟ್ ಅಪ್ ಇಂಡಿಯಾ ಮತ್ತು ಅಟಲ್ ನಾವಿನ್ಯ ಅಭಿಯಾನದಂಥ ಕ್ರಮಗಳನ್ನು ಕೈಗೊಂಡಿದ್ದೇವೆ.

 

ಇಂದು, ನಾವು ‘ರಕ್ಷಣಾ ಔನ್ನತ್ಯಕ್ಕಾಗಿ ನಾವಿನ್ಯತೆ’ ಯೋಜನೆ ಆರಂಭಿಸಿದ್ದೇವೆ. ಇದು ರಕ್ಷಣಾ ವಲಯದ ನವೋದ್ಯಮಗಳಿಗೆ ಮೂಲಸೌಕರ್ಯ ಮತ್ತು ಆರಂಭಿಕ ಅಗತ್ಯಗಳಿಗಾಗಿ ಬೆಂಬಲ ನೀಡಲು ದೇಶದಾದ್ಯಂತ ರಕ್ಷಣಾ ನಾವಿನ್ಯತೆ ತಾಣಗಳನ್ನು ಸ್ಥಾಪಿಸಲಿದೆ.

 

ರಕ್ಷಣಾ ವಲಯದಲ್ಲಿ ಅದರಲ್ಲೂ ನವೋದ್ಯಮಗಳಲ್ಲಿ ಖಾಸಗಿ ಬಂಡವಾಳವನ್ನು ಉತ್ತೇಜಿಸಲಾಗುತ್ತದೆ.

 

ಹೊಸ ಮತ್ತು ಹೊರಹೊಮ್ಮುವ ತಂತ್ರಜ್ಞಾನ ಅಂದರೆ, ಕೃತಕ ಬುದ್ಧಿಮತ್ತೆ ಮತ್ತು ರೋಬೋಟಿಕ್ಸ್ ಗಳು, ಭವಿಷ್ಯದಲ್ಲಿ ಯಾವುದೇ ರಕ್ಷಣಾ ಶಕ್ತಿಗೆ ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ಸಾಮರ್ಥ್ಯಗಳ ಪ್ರಮುಖ ನಿರ್ಣಾಯಕಗಳಾಗಿವೆ. ಭಾರತವು ತನ್ನ ನಾಯಕತ್ವದಲ್ಲಿ ಮಾಹಿತಿ ತಂತ್ರಜ್ಞಾನ ವೇದಿಕೆಯಲ್ಲಿ ತನ್ನ ಪ್ರಯೋಜನಕ್ಕಾಗಿ ಈ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಪ್ರಯತ್ನಶೀಲವಾಗಿದೆ.

ಸ್ನೇಹಿತರೆ,

 

ಮಾಜಿ ರಾಷ್ಟ್ರಪತಿ, ತಮಿಳುನಾಡು ಮತ್ತು ಭಾರತದ ಶ್ರೇಷ್ಠ ಪುತ್ರ, ಭಾರತರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ನಮ್ಮೆಲ್ಲರಿಗೂ ‘ಕನಸು, ಕನಸು, ಕನಸು ಕಾಣಿ, ಕನಸುಗಳು ಚಿಂತನೆಗಳಾಗಿ ಪರಿವರ್ತಿತವಾಗುತ್ತವೆ ಮತ್ತು ಆ ಚಿಂತನೆಗಳು ಕ್ರಿಯಾ ಫಲ ನೀಡುತ್ತದೆ’ ಎಂದು ಕರೆ ಕೊಟ್ಟಿದ್ದರು.

 

ರಕ್ಷಣಾ ಉತ್ಪಾದನಾ ವಲಯದಲ್ಲಿ ಹೊಸ ಮತ್ತು ಸೃಜನಶೀಲ ಉದ್ಯಮಶೀಲತೆಯ ಪರಿಸರವನ್ನು ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ನಮ್ಮ ಕನಸು.

 

ಇದಕ್ಕಾಗಿ, ಮುಂಬರುವ ವಾರಗಳಲ್ಲಿ, ನಾವು ನಮ್ಮ ರಕ್ಷಣಾ ಉತ್ಪಾದನೆ ಮತ್ತು ರಕ್ಷಣಾ ದಾಸ್ತಾನು ನೀತಿ ಕುರಿತಂತೆ ಭಾರತ ಮತ್ತು ವಿದೇಶೀ ಕಂಪನಿಗಳು ಸೇರಿದಂತೆ ಎಲ್ಲ ಬಾಧ್ಯಸ್ಥರೊಂದಿಗೆ ವ್ಯಾಪಕ ಮಾತುಕತೆ ನಡೆಸಲಿದ್ದೇವೆ. ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನಾನು ನಿಮ್ಮೆಲ್ಲರಿಗೂ ಕರೆ ನೀಡುತ್ತೇನೆ. ನಮ್ಮ ಗುರಿ ಕೇವಲ ಚರ್ಚೆ ಮಾಡುವುದಷ್ಟೇ ಅಲ್ಲ, ಜೊತೆಗೆ ಸೂಕ್ತ ಪಠ್ಯ ರೂಪಿಸುವುದೂ ಆಗಿದೆ. ನಮ್ಮ ಉದ್ದೇಶ ಉಪನ್ಯಾಸವಲ್ಲ, ಬದಲಾಗಿ, ಆಲಿಸುವುದಾಗಿದೆ. ನಮ್ಮ ಗುರಿ ಕೇವಲ ಚಿಂತನೆಯಲ್ಲ ಬದಲಾಗಿ ಪರಿವರ್ತನೆಯಾಗಿದೆ.

 

ಸ್ನೇಹಿತರೆ,

ನಾವು ವೇಗವಾಗಿ ಸಾಗಲು ಬಯಸುತ್ತೇವೆ. ಆದರೆ, ನಾವು ಅದಕ್ಕಾಗಿ ಅಡ್ಡದಾರಿ ಹಿಡಿಯುವುದಿಲ್ಲ.

 

ಆಡಳಿತದ ಹಲವು ಅಂಶಗಳಂತೆಯೇ, ರಕ್ಷಣಾ ಸನ್ನದ್ಧತೆಯ ನಿರ್ಣಾಯಕ ವಿಷಯಗಳ ನೀತಿ ಕೂಡ ಬಾಧಿತವಾಗಿ ಪಾರ್ಶ್ವವಾಯು ಪೀಡಿತವಾಗಿದ್ದ ಕಾಲವೊಂದಿತ್ತು.

ಅಂತಹ ಸೋಮಾರಿತನ, ಅಸಮರ್ಥತೆ ಅಥವಾ ಕೆಲವು ಗುಪ್ತ ಉದ್ದೇಶಗಳು ಹೇಗೆ ದೇಶಕ್ಕೆ ಹಾನಿ ಮಾಡಿರುವುದನ್ನು ನಾವು ನೋಡಿದ್ದೇವೆ.

 

ಈಗಲ್ಲ, ಮುಂದೆಂದೂ ಅಲ್ಲ. ಮತ್ತೆ ಅಲ್ಲವೇ ಅಲ್ಲ. ಹಿಂದಿನ ಸರಕಾರಗಳು ದೀರ್ಘಕಾಲದಿಂದ ಮಾಡಲಾಗದೆ ಉಳಿದಿದ್ದ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ.

 

ಭಾರತೀಯ ಸೇನಾಪಡೆಯ ಯೋಧರಿಗೆ ಗುಂಡು ನಿರೋಧಕ ಅಂಗಿಗಳನ್ನು ಒದಗಿಸುವ ವಿಚಾರ ವರ್ಷಗಳವರೆಗೆ ನೆನೆಗುದಿಗೆ ಬಿದ್ದಿತ್ತು ಎಂಬುದನ್ನು ನೀವು ನೋಡಿದ್ದೀರಿ.

 

ಭಾರತದಲ್ಲಿ ರಕ್ಷಣಾ ಉತ್ಪಾದನೆಗೆ ಉತ್ತೇಜನ ನೀಡುವ ಒಂದು ಒಪ್ಪಂದದೊಂದಿಗೆ ನಾವು ಯಶಸ್ವಿ ಪ್ರಕ್ರಿಯೆಗೆ ಈ ಪ್ರಕ್ರಿಯೆಯನ್ನು ತಂದಿದ್ದೇವೆ ಎಂಬುದನ್ನೂ ನೀವು ನೋಡಿದ್ದೀರಿ. ಯುದ್ಧ ವಿಮಾನಗಳ ಖರೀದಿಯಲ್ಲಿ ಕೊನೆಗೂ ಆಖೈರಾಗದ ದೀರ್ಘ ಕಾಲೀನ ಪ್ರಕ್ರಿಯೆಗಳನ್ನೂ ನೀವು ಸ್ಮರಿಸಬಹುದು.

 

ನಮ್ಮ ತಕ್ಷಣದ ನಿರ್ಣಾಯಕ ಅವಶ್ಯಕತೆಗಳನ್ನು ಪೂರೈಸಲು ನಾವು ದಿಟ್ಟ ಕ್ರಮವನ್ನು ತೆಗೆದುಕೊಂಡಿದ್ದಷ್ಟೇ ಅಲ್ಲ, 110 ಫೈಟರ್ ವಿಮಾನಗಳನ್ನು ಪಡೆದುಕೊಳ್ಳಲು ಒಂದು ಹೊಸ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ. ಯಾವುದೇ ಫಲಶ್ರುತಿ ಇಲ್ಲದೆ 10 ವರ್ಷಗಳ ಕಾಲ  ಚರ್ಚೆಯಲ್ಲೇ ಕಾಲಹರಣ ಮಾಡಲು ನಾವು ಬಯಸುವುದಿಲ್ಲ. ನಮ್ಮ ರಕ್ಷಣಾ ಪಡೆಗಳಲ್ಲಿ ಅತ್ಯಾಧುನಿಕ ಸುಸಜ್ಜಿತ ವ್ಯವಸ್ಥೆ ಅಳವಡಿಸಿಕೊಳ್ಳಲು ಮತ್ತು ಅದನ್ನು ಸಾಧಿಸಲು ಅಗತ್ಯವಿರುವ ದೇಶೀಯ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ರೂಪಿಸಲು ನಾವು ಅಭಿಯಾನದೋಪಾದಿಯಲ್ಲಿ ಕೆಲಸ ಮಾಡುತ್ತೇವೆ. ನಿಮ್ಮೊಂದಿಗೆ ಪಾಲುದಾರಿಕೆಯಲ್ಲಿ ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಮುಂದುವರಿಸಲು ನಮ್ಮ ಎಲ್ಲಾ ಪ್ರಯತ್ನಗಳಲ್ಲಿ, ನಾವು ಸಮಗ್ರತೆ ಮತ್ತು ಪ್ರಾಮಾಣಿಕತೆಯ ಅತ್ಯುನ್ನತ ಆದರ್ಶಗಳ ಮಾರ್ಗದರ್ಶನ ಹೊಂದಿದ್ದೇವೆ.

 

ಸ್ನೇಹಿತರೆ,

ಈ ಪವಿತ್ರ ಭೂಮಿ ದಂತಕತೆ ತಿರುವಳ್ಳುವರ್ ಅವರನ್ನು ಸ್ಮರಿಸುತ್ತದೆ. ಅವರು ತಮಿಳಿನ ಹೆಸರಾಂತ ಕವಿ ಮತ್ತು ತತ್ವಜ್ಞಾನಿ.

 

ಅವರು ಹೇಳುತ್ತಾರೆ:

“ಮರಳು ಮಣ್ಣಿನಲ್ಲಿ, ನೀವು ಆಳಕ್ಕೆ ಇಳಿದಾಗ, ನೀವು ಕೆಳಗಿನ ಬುಗ್ಗೆಗಳನ್ನು ತಲುಪುತ್ತೀರಿ;, ಸ್ವತಂತ್ರವಾದ ಬುದ್ಧಿವಂತಿಕೆಯ ಹರಿವಿನ ಪ್ರವಾಹಗಳಲ್ಲಿ ಹೆಚ್ಚು ನೀವು ಕಲಿಯುವಿರಿ.”

ಡಿಫ್ ಎಕ್ಸ್ ಪೋ ವೃತ್ತಿಪರರಿಗೆ ಮತ್ತು ಕೈಗಾರಿಕೆಗಳಿಗೆ ಸೇನಾ ಕೈಗಾರಿಕಾ ಉದ್ದಿಮೆ ಅಭಿವೃದ್ಧಿಪಡಿಸಲು ಹೊಸ ಸಭಾ ವೇದಿಕೆ ಒದಗಿಸಲು ಅವಕಾಶ ಕಲ್ಪಿಸುತ್ತದೆ ಎಂಬ ವಿಶ್ವಾಸ ನನಗಿದೆ.

 

ಧನ್ಯವಾದಗಳು

 

ತುಂಬಾ ತುಂಬಾ ಧನ್ಯವಾದಗಳು

I am delighted & overwhelmed to see an enthusiastic gathering in this historic region of Kanchipuram in the great State of Tamil Nadu.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India-New Zealand elevate ties to strategic partnership; Scripts 2030 roadmap, $20bn investment & Indo-Pacific security

Media Coverage

India-New Zealand elevate ties to strategic partnership; Scripts 2030 roadmap, $20bn investment & Indo-Pacific security
NM on the go

Nm on the go

Always be the first to hear from the PM. Get the App Now!
...
Prime Minister condoles the passing of Father Amir of State of Qatar HH Sheikh Hamad bin Khalifa Al Thani
July 12, 2026

The Prime Minister, Shri Narendra Modi, has expressed deep grief over the passing of the Father Amir of the State of Qatar, HH Sheikh Hamad bin Khalifa Al Thani.

The Prime Minister described him as a visionary leader who led Qatar to great levels of development and prosperity. Shri Modi also remembered him as a true friend whom he had the honour of meeting during his visit to Qatar in February 2024.

The Prime Minister conveyed his sincere condolences to the Amir of Qatar, HH Sheikh Tamim bin Hamad Al Thani, the entire royal family and the people of Qatar.

The Prime Minister wrote on X;

“We deeply mourn the passing of Father Amir of State of Qatar, HH Sheikh Hamad bin Khalifa Al Thani. A visionary leader who led Qatar to great levels of development and prosperity, we remember him also as a true friend whom I had the honour of meeting during my last visit to Qatar in February 2024. I convey my sincere condolences to the Amir of Qatar, HH Sheikh Tamim bin Hamad Al Thani and the entire royal family and people of Qatar. May the departed soul rest in eternal peace.

@TamimBinHamad”