"ತಮ್ಮ ಸರ್ಕಾರವು ಜನ ಧನ್, ವ್ಯಾನ್ ಧನ್ ಮತ್ತು ಗೋಬರ್ ಧನ್ ಮೇಲೆ ಗಮನ ನೀಡುತ್ತಿದೆ ಎಂದು ಹೇಳಿದ್ದಾರೆ ಪ್ರಧಾನಿ ಮೋದಿ "
"ಸರ್ದಾರ್ ಪಟೇಲ್ ಅವರ ಮಾರ್ಗದರ್ಶನದಲ್ಲಿ, ಅಹಮದಾಬಾದ್ ನಲ್ಲಿ ಪ್ರೀತಾರಾಯಿ ದೇಸಾಯಿ ಜಿ ಸಹಕಾರ ವಸತಿಗಾಗಿ ದೊಡ್ಡ ಕೆಲಸ ಮಾಡಿದರು. ಈ ಪ್ರಯತ್ನಗಳು ಅನೇಕ ಜನರ ಆಕಾಂಕ್ಷೆಗಳಿಗೆ ರೆಕ್ಕೆಗಳನ್ನು ನೀಡಿತು: ಆನಂದ್ ನಲ್ಲಿ ಪ್ರಧಾನಿ ಮೋದಿ "
"ಅಮುಲ್ ಹಾಲು ಸಂಸ್ಕರಣೆಯ ಬಗ್ಗೆ ಮಾತ್ರವಲ್ಲ. ಇದು ಸಬಲೀಕರಣದ ಉತ್ತಮ ಮಾದರಿಯಾಗಿದೆ ಎಂದು ಹೇಳಿದ್ದಾರೆ ಪ್ರಧಾನಿ ಮೋದಿ "
"ಸರ್ದಾರ್ ಪಟೇಲ್ ಸಹಕಾರ ವಸತಿಗಾಗಿ ದೊಡ್ಡ ರೀತಿಯಲ್ಲಿ ಕೆಲಸ ಮಾಡಿದ್ದಾರೆ: ಪ್ರಧಾನಿ ಮೋದಿ "
ಇಂದು, ನಾವೀನ್ಯತೆ ಮತ್ತು ಮೌಲ್ಯ ಸೇರ್ಪಡೆಗೆ ಮಹತ್ವ ನೀಡುವ ಸಮಯವಾಗಿದೆ : ಆನಂದ್ ನಲ್ಲಿ ಪ್ರಧಾನಿ ಮೋದಿ

ಅಮುಲ್ ನ ಅತ್ಯಾಧುನಿಕ ಚಾಕೋಲೇಟ್ ಘಟಕವೂ ಸೇರಿದಂತೆ ಆನಂದ್ ನಲ್ಲಿ ಅಧುನಿಕ ಆಹಾರ ಸಂಸ್ಕರಣಾ ವ್ಯವಸ್ಥೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಅವರು ಚಾಕೋಲೇಟ್ ಘಟಕಕ್ಕೆ ಭೇಟಿ ನೀಡಿದರು. ಘಟಕದಲ್ಲಿ ಅನುಷ್ಠಾನಗೊಳಿಸಿದ ವಿವಿಧ ತಂತ್ರಜ್ಞಾನಗಳು ಮತ್ತು ಅವುಗಳಿಂದ ತಯಾರಿಸುವ ಉತ್ಪನ್ನಗಳ ಬಗ್ಗೆ ಅವರಿಗೆ ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೃಹತ್ ಸಂಖ್ಯೆಯಲ್ಲಿ ನೆರೆದದ್ದಕ್ಕಾಗಿ ಆನಂದ್ ನ ಜನತೆಗೆ ಅಭಿನಂದನೆ ಸಲ್ಲಿಸಿದರು.

ಇಂತಹ ಅಭಿವೃದ್ಧಿ ಯೋಜನೆಗಳು ಉದ್ಘಾಟನೆಗೊಳ್ಳುತ್ತಿರುವುದು ಸಹಕಾರಿ ಕ್ಷೇತ್ರಕ್ಕೆ ಶುಭಲಕ್ಷಣದ ಮುನ್ಸೂಚನೆಯಾಗಿದೆ. ಅಮುಲ್ ಬ್ರ್ಯಾಂಡ್ ಇಂದು ಜಾಗತಿಕವಾಗಿ ಹೆಸರುವಾಸಿಯಾಗಿದೆ, ಮತ್ತು ಜಾಗತಿಕವಾಗಿ ಪ್ರೇರಣೆಯಾಗಿದೆ. ಅಮುಲ್ ಎಂದರೆ ಕೇವಲ ಹಾಲು ಸಂಸ್ಕರಣೆ ಮಾತ್ರ ಎಂದು ಭಾವಿಸಬೇಡಿ, ಅದು ಸಬಲೀಕರಣದ ಅತ್ಯುತ್ತಮ ಮಾದರಿಯಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಸಹಕಾರಿ ಸಂಸ್ಥೆಗಳ ಮೂಲಕ ಸರ್ದಾರ್ ಪಟೇಲ್ ಅವರು ಮಾಡಿ ತೋರಿಸಿದ್ದನ್ನು ಸರಕಾರದಿಂದ ಅಥವಾ ಕೈಗಾರಿಕೋದ್ಯಮಿಗಳಿಂದ ಸಾದ್ಯವಾಗಿಲ್ಲ. ಗಣತೆಯಾಗುವುದಕ್ಕೆ ಇದೊಂದು ಅನನ್ಯ ಮಾದರಿಯಾಗಿದೆ. ಅವರು ಗುಜರಾತಿನ ಸಹಕಾರ ಕ್ಷೇತ್ರಕ್ಕೆ ನೀಡಿದ ಪ್ರಯತ್ನಗಳು ಜನತೆಗೆ ಪ್ರಯೋಜನಕಾರಿಯಾಗಿದ್ದು, ಅದರಲ್ಲೂ ರೈತರಿಗೆ. ಸರ್ದಾರ್ ಪಟೇಲ್ ಅವರು ನಗರಾಭಿವೃದ್ಧಿ ಬಗ್ಗೆ ಮಹತ್ವ ನೀಡಿದ್ದರು ಎಂದು ಪ್ರಧಾನಮಂತ್ರಿ ತಿಳಿಸಿದರು.

2022ನೇ ಇಸವಿಯ ಭಾರತದ 75ನೇ ಗಣರಾಜ್ಯೋತ್ಸವವನ್ನು ಉದ್ಧೇಶಿಸಿ, ಹಾಲು ಸಂಸ್ಕರಣೆಯಲ್ಲಿ ಭಾರತವು ಉತ್ತಮ ಸ್ಥಿತಿಯಲ್ಲಿದೆ, ಆದರೆ ಇನ್ನೂ ಉತ್ತಮ ಸಾಧನೆ ಮಾಡಬಹುದು. ನಾವಿನ್ಯತೆಗೆ ಮತ್ತು ಮೌಲ್ಯ ವರ್ಧನೆಗೆ ಮಹತ್ವ ನೀಡುವ ಕಾಲವಿದು ಎಂದು ಪ್ರಧಾನಮಂತ್ರಿ ತಿಳಿಸಿದರು
ಈ ಸಂದರ್ಭದಲ್ಲಿ ಅವರು ಜೇನು ಉತ್ಪಾದನೆ ಕುರಿತು ಮಾತನಾಡಿದರು.

 

 

 

 

 

 

 

 

 

 

 

 

 

 

Click here to read full text speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Parliament passes Jan Vishwas Bill 2026, decriminalising 717 offences, fines up to Rs 1 crore

Media Coverage

Parliament passes Jan Vishwas Bill 2026, decriminalising 717 offences, fines up to Rs 1 crore
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 3 ಎಪ್ರಿಲ್ 2026
April 03, 2026

India’s Sweet, Fast & High-Tech Revolution: FY26 Milestones That Signal Viksit Bharat Has Arrived