ಸಾರ್ವಜನಿಕ ಸೇವೆ ಮತ್ತು ಕಲ್ಯಾಣ ಕೇಂದ್ರಿತ ಕಾನೂನುಗಳೊಂದಿಗೆ ಹೊಸ ಯುಗ ಪ್ರಾರಂಭವಾಗಿದೆ: ಪ್ರಧಾನಿ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023, ಭಾರತೀಯ ನ್ಯಾಯ ಸಂಹಿತೆ-2023 ಮತ್ತು ಭಾರತೀಯ ಸಾಕ್ಷಿ ಅಧಿನಿಯಮ-2023 ಅನ್ನು ಸಂಸತ್ತು ಅಂಗೀಕರಿಸಿರುವುದನ್ನು ಶ್ಲಾಘಿಸಿದ್ದಾರೆ. ಇದು ಭಾರತದ ಇತಿಹಾಸದಲ್ಲಿ ಐತಿಹಾಸಿಕ(ಬಹುದೊಡ್ಡ ಬದಲಾವಣೆ) ಕ್ಷಣ ಎಂದು ಕರೆದಿದ್ದಾರೆ. ಈ ಮಸೂದೆಗಳು ಸಮಾಜದ ಬಡವರು, ನಿರ್ಲಕ್ಷಿತರು ಮತ್ತು ದುರ್ಬಲ ವರ್ಗಗಳಿಗೆ ಹೆಚ್ಚಿನ ರಕ್ಷಣೆ ಖಾತ್ರಿಪಡಿಸುತ್ತವೆ. ಸಂಘಟಿತ ಅಪರಾಧ, ಭಯೋತ್ಪಾದನೆ ಮತ್ತು ಇತರ ಅಪರಾಧಗಳ ನಿಯಂತ್ರಣಕ್ಕೆ ಅವಕಾಶ ಕಲ್ಪಿಸುತ್ತವೆ. ಈ ಕಾನೂನು ಸುಧಾರಣೆಗಳು ಭಾರತದ ಕಾನೂನು ಚೌಕಟ್ಟನ್ನು ಹೆಚ್ಚು ಪ್ರಸ್ತುತವಾಗುವಂತೆ ಮತ್ತು ಅಮೃತ ಕಾಲದಲ್ಲಿ ಪರಾನುಭೂತಿಯಿಂದ ಮರುವ್ಯಾಖ್ಯಾನಿಸುತ್ತವೆ ಎಂದು ಪ್ರಧಾನ ಮಂತ್ರಿ ಹೇಳಿದರು. ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 3 ವಿಧೇಯಕಗಳ ಕುರಿತು ಚರ್ಚೆ ನಡೆಸುತ್ತಿರುವ ವೀಡಿಯೊವನ್ನು ಅವರು ಹಂಚಿಕೊಂಡಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಪ್ರಧಾನಿ:

“ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023, ಭಾರತೀಯ ನ್ಯಾಯ ಸಂಹಿತೆ-2023 ಮತ್ತು ಭಾರತೀಯ ಸಾಕ್ಷಿ ಅಧಿನಿಯಮ-2023ರ ಅಂಗೀಕಾರವು ನಮ್ಮ ಇತಿಹಾಸದಲ್ಲಿ ಒಂದು ಅದ್ಭುತ ಬದಲಾವಣೆಯ ಕ್ಷಣವಾಗಿದೆ. ಈ ಮಸೂದೆಗಳು ವಸಾಹತುಶಾಹಿ ಯುಗದ ಕಾನೂನುಗಳ ಅಂತ್ಯವನ್ನು ಸೂಚಿಸುತ್ತವೆ. ಸಾರ್ವಜನಿಕ ಸೇವೆ ಮತ್ತು ಕಲ್ಯಾಣ ಕೇಂದ್ರಿತ ಕಾನೂನುಗಳೊಂದಿಗೆ ಹೊಸ ಯುಗ ಪ್ರಾರಂಭವಾಗಿದೆ ಎಂದಿದ್ದಾರೆ.

ಈ ಪರಿವರ್ತನೀಯ ಮಸೂದೆಗಳು ಸುಧಾರಣೆಗಳನ್ನು ತರುವ ಭಾರತದ ಬದ್ಧತೆಗೆ ಸಾಕ್ಷಿಯಾಗಿದೆ. ತಂತ್ರಜ್ಞಾನ ಮತ್ತು ನ್ಯಾಯ ವಿಜ್ಞಾನದ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ನಮ್ಮ ಕಾನೂನು, ಪೊಲೀಸ್ ಮತ್ತು ತನಿಖಾ ವ್ಯವಸ್ಥೆಗಳನ್ನು ಆಧುನಿಕ ಯುಗಕ್ಕೆ ತರಲಾಗಿದೆ. ಈ ಮಸೂದೆಗಳು ನಮ್ಮ ಸಮಾಜದ ಬಡವರು, ನಿರ್ಲಕ್ಷಿತರು ಮತ್ತು ದುರ್ಬಲ ವರ್ಗಗಳಿಗೆ ಹೆಚ್ಚಿನ ರಕ್ಷಣೆ ಖಚಿತಪಡಿಸುತ್ತವೆ ಎಂದು ಪ್ರಧಾನಿ ತಿಳಿಸಿದರು.

ಅದೇ ಸಮಯದಲ್ಲಿ, ಈ ಮಸೂದೆಗಳು ಸಂಘಟಿತ ಅಪರಾಧ, ಭಯೋತ್ಪಾದನೆ ಮತ್ತು ಪ್ರಗತಿಯತ್ತ ನಮ್ಮ ಶಾಂತಿಯುತ ಪ್ರಯಾಣದ ಮೂಲವನ್ನು ಒಡೆಯುವ ಇಂತಹ ಅಪರಾಧಗಳ ನಿಯಂತ್ರಣಕ್ಕೆ ಅವಕಾಶ ಕಲ್ಪಿಸುತ್ತವೆ. ಇದರ ಮೂಲಕ ನಾವು ದೇಶದ್ರೋಹದ ಹಳತಾದ ವಿಷಯಗಳಿಗೆ ವಿದಾಯ ಹೇಳಿದ್ದೇವೆ.

ನಮ್ಮ ಅಮೃತ ಕಾಲಘಟಟ್ದಲ್ಲಿ ಈ ಕಾನೂನು ಸುಧಾರಣೆಗಳು ನಮ್ಮ ಕಾನೂನು ಚೌಕಟ್ಟನ್ನು ಹೆಚ್ಚು ಪ್ರಸ್ತುತ ಮತ್ತು ಪರಾನುಭೂತಿ ಚಾಲಿತವಾಗುವಂತೆ ಮರುವ್ಯಾಖ್ಯಾನಿಸಿವೆ. ಗೃಹ ಸಚಿವ ಶ್ರೀ ಅಮಿತ್ ಶಾ ಜಿಯವರ ಭಾಷಣವು ಈ ಮಸೂದೆಗಳ ಪ್ರಮುಖ ಲಕ್ಷಣಗಳನ್ನು ಮತ್ತಷ್ಟು ವಿವರಿಸುತ್ತವೆ ಎಂದು ಪ್ರಧಾನಿ ತಿಳಿಸಿದರು.

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's $13 billion semiconductor mission: Boosting domestic chip manufacturing and design

Media Coverage

India's $13 billion semiconductor mission: Boosting domestic chip manufacturing and design
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 8 ಸೆಪ್ಟೆಂಬರ್ 2026
September 08, 2026

Viksit Bharat, Many Engines: Defence, Diplomacy, Growth & Green Power Under PM Modi