ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ನವೋದಯ ವಿದ್ಯಾಲಯ ಯೋಜನೆಯ (ಕೇಂದ್ರ ವಲಯದ ಯೋಜನೆ) ವ್ಯಾಪ್ತಿಗೆ ಒಳಪಡದ ದೇಶದ ಜಿಲ್ಲೆಗಳಲ್ಲಿ 28 ನವೋದಯ ವಿದ್ಯಾಲಯಗಳನ್ನು (ಎನ್‌ ವಿ) ಸ್ಥಾಪಿಸಲು ಅನುಮೋದನೆ ನೀಡಿದೆ. ಈ 28 ಎನ್‌ ವಿ ಗಳ ಪಟ್ಟಿಯನ್ನು ಅನುಬಂಧದಲ್ಲಿ ಲಗತ್ತಿಸಲಾಗಿದೆ.

2024-25 ರಿಂದ 2028-29 ರವರೆಗಿನ ಐದು ವರ್ಷಗಳ ಅವಧಿಯಲ್ಲಿ 28 ನವೋದಯ ವಿದ್ಯಾಲಯಗಳ ಸ್ಥಾಪನೆಗೆ ಒಟ್ಟು ಅಂದಾಜು ಹಣಕಾಸು ಅವಶ್ಯಕತೆ 2359.82 ಕೋಟಿ ರೂ. ಆಗಿದೆ. ಇದು 1944.19 ಕೋಟಿ ರೂ.ಗಳ ಬಂಡವಾಳ ವೆಚ್ಚಮತ್ತು  415.63 ಕೋಟಿರೂ. ಗಳ ಕಾರ್ಯಾಚರಣೆಯ ವೆಚ್ಚವನ್ನು ಒಳಗೊಂಡಿದೆ.

ಯೋಜನೆಯ ಅನುಷ್ಠಾನಕ್ಕೆ 560 ವಿದ್ಯಾರ್ಥಿಗಳ ಸಾಮರ್ಥ್ಯದೊಂದಿಗೆ ಪೂರ್ಣ ಪ್ರಮಾಣದ ನವೋದಯ ವಿದ್ಯಾಲಯವನ್ನು ನಡೆಸಲು ಸಮಿತಿಯು ನಿರ್ಧರಿಸಿದ ನಿಯಮಗಳ ಪ್ರಕಾರ ಆಡಳಿತ ರಚನೆಯಲ್ಲಿ ಹುದ್ದೆಗಳನ್ನು ರಚಿಸುವ ಅಗತ್ಯವಿದೆ. ಹೀಗಾಗಿ 560 x 28 = 15680 ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ. ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ಪೂರ್ಣ ಪ್ರಮಾಣದ ನವೋದಯ ವಿದ್ಯಾಲಯವು 47 ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ ಮತ್ತು ಅದರ ಪ್ರಕಾರ ಮಂಜೂರಾದ 28 ನವೋದಯ ವಿದ್ಯಾಲಯಗಳು 1316 ಜನರಿಗೆ ನೇರ ಖಾಯಂ ಉದ್ಯೋಗವನ್ನು ಒದಗಿಸುತ್ತವೆ. ಶಾಲಾ ಮೂಲಸೌಕರ್ಯಗಳನ್ನು ನಿರ್ಮಿಸಲು ನಿರ್ಮಾಣ ಮತ್ತು ಸಂಬಂಧಿತ ಚಟುವಟಿಕೆಗಳು ಅನೇಕ ಕುಶಲ ಮತ್ತು ಕೌಶಲ್ಯರಹಿತ ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ. ಅದರ ವಸತಿ ಸ್ವರೂಪದಿಂದಾಗಿ ಪ್ರತಿ ನವೋದಯ ವಿದ್ಯಾಲಯವು ಸ್ಥಳೀಯ ಮಾರಾಟಗಾರರಿಗೆ ಆಹಾರ, ಉಪಭೋಗ್ಯ ವಸ್ತುಗಳು, ಪೀಠೋಪಕರಣಗಳು, ಬೋಧನಾ ಸಾಮಗ್ರಿಗಳು ಇತ್ಯಾದಿಗಳನ್ನು ಪೂರೈಸಲು ಮತ್ತು ಕ್ಷೌರಿಕರು, ಟೈಲರ್‌ ಗಳು, ಚಮ್ಮಾರರು, ಮನೆಗೆಲಸ ಮತ್ತು ಭದ್ರತಾ ಸೇವೆಗಳಿಗೆ ಮಾನವಶಕ್ತಿಯಂತಹ ಸ್ಥಳೀಯ ಸೇವಾ ಪೂರೈಕೆದಾರರಿಗೆ ಅವಕಾಶಗಳನ್ನು ಒದಗಿಸುತ್ತದೆ.

ನವೋದಯ ವಿದ್ಯಾಲಯಗಳು ಸಂಪೂರ್ಣವಾಗಿ ವಸತಿ, ಸಹ-ಶಿಕ್ಷಣ ಶಾಲೆಗಳಾಗಿದ್ದು, ಅವರ ಕುಟುಂಬದ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಪರಿಗಣಿಸದೆ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳ ಪ್ರತಿಭಾವಂತ ಮಕ್ಕಳಿಗೆ VI ರಿಂದ XII ನೇ ತರಗತಿಯವರೆಗೆ ಉತ್ತಮ ಗುಣಮಟ್ಟದ ಆಧುನಿಕ ಶಿಕ್ಷಣವನ್ನು ಒದಗಿಸುತ್ತವೆ. ಈ ಶಾಲೆಗಳಿಗೆ ಪ್ರವೇಶವನ್ನು ಆಯ್ಕೆ ಪರೀಕ್ಷೆಯ ಆಧಾರದ ಮೇಲೆ ಮಾಡಲಾಗುತ್ತದೆ. ಅಂದಾಜು 49,640 ವಿದ್ಯಾರ್ಥಿಗಳು ನವೋದಯ ವಿದ್ಯಾಲಯಗಳಲ್ಲಿ ಪ್ರತಿ ವರ್ಷ VI ನೇ ತರಗತಿಗೆ ಪ್ರವೇಶ ಪಡೆಯುತ್ತಾರೆ.

ಇಲ್ಲಿಯವರೆಗೆ, ದೇಶಾದ್ಯಂತ 661 ಮಂಜೂರಾದ ಎನ್‌ ವಿಗಳಿವೆ [ಎಸ್‌ ಸಿ/ಎಸ್‌ ಟಿ ಜನಸಂಖ್ಯೆಯ ಮೇಲೆ ಹೆಚ್ಚಾಗಿ ಕೇಂದ್ರೀಕರಿಸಿರುವ 20 ಜಿಲ್ಲೆಗಳಲ್ಲಿ 2 ನೇ ಎನ್‌ ವಿ ಗಳು ಮತ್ತು 3 ವಿಶೇಷ ಎನ್‌ ವಿ ಗಳನ್ನು ಒಳಗೊಂಡಿವೆ]. ಇವುಗಳಲ್ಲಿ 653 ಎನ್‌ ವಿಗಳು ಕಾರ್ಯನಿರ್ವಹಿಸುತ್ತಿವೆ.

ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅನುಸಾರವಾಗಿ, ಬಹುತೇಕ ಎಲ್ಲಾ ನವೋದಯ ವಿದ್ಯಾಲಯಗಳನ್ನು ಪಿಎಂ ಶ್ರೀ ಶಾಲೆಗಳಾಗಿ ಮಾಡಲಾಗಿದೆ, ಇದು ಎನ್‌ ಇ ಪಿ 2020 ರ ಅನುಷ್ಠಾನವನ್ನು ಪ್ರತಿಬಿಂಬಿಸುತ್ತದೆ ಮತ್ತು ಇತರರಿಗೆ ಮಾದರಿ ಶಾಲೆಗಳಾಗಿ ಕಾರ್ಯನಿರ್ವಹಿಸುತ್ತದೆ. ಈ ಯೋಜನೆಯು ಹೆಚ್ಚು ಮೆಚ್ಚುಗೆ ಪಡೆಯುತ್ತಿದೆ ಮತ್ತು ಪ್ರತಿ ವರ್ಷ ನವೋದಯ ವಿದ್ಯಾಲಯಗಳಲ್ಲಿ VI ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಸ್ಥಿರವಾದ ಹೆಚ್ಚಳ ಕಂಡುಬಂದಿದೆ. ಇತ್ತೀಚಿನ ವರ್ಷಗಳಲ್ಲಿ, ನವೋದಯ ವಿದ್ಯಾಲಯಗಳು ಬಾಲಕಿಯರು (42%), ಜೊತೆಗೆ ಎಸ್‌ ಸಿ (24%), ಎಸ್‌ ಟಿ (20%) ಮತ್ತು ಒಬಿಸಿ (39%) ಮಕ್ಕಳ ದಾಖಲಾತಿಯನ್ನು ಹೆಚ್ಚಿಸಿವೆ, ಇದರಿಂದಾಗಿ ಗುಣಮಟ್ಟದ ಶಿಕ್ಷಣವು ಎಲ್ಲರಿಗೂ ಲಭ್ಯವಾಗುವುದನ್ನು ಖಚಿತಪಡಿಸುತ್ತದೆ.

ಸಿ ಬಿ ಎಸ್‌ ಇ ನಡೆಸುವ ಬೋರ್ಡ್ ಪರೀಕ್ಷೆಗಳಲ್ಲಿ ನವೋದಯ ವಿದ್ಯಾಲಯಗಳ ವಿದ್ಯಾರ್ಥಿಗಳ ಸಾಧನೆಯು ಎಲ್ಲಾ ಶೈಕ್ಷಣಿಕ ವ್ಯವಸ್ಥೆಗಳಲ್ಲಿ ಸತತವಾಗಿ ಅತ್ಯುತ್ತಮವಾಗಿದೆ. ನವೋದಯ ವಿದ್ಯಾಲಯಗಳ ವಿದ್ಯಾರ್ಥಿಗಳು ಎಂಜಿನಿಯರಿಂಗ್, ವೈದ್ಯಕೀಯ ವಿಜ್ಞಾನ, ಸಶಸ್ತ್ರ ಪಡೆಗಳು, ನಾಗರಿಕ ಸೇವೆಗಳು ಮುಂತಾದ ವಿವಿಧ ಕ್ಷೇತ್ರಗಳಲ್ಲಿ ನಗರ ಭಾರತದ ಅತ್ಯುತ್ತಮ ಪ್ರತಿಭೆಗಳಿಗೆ ಸಮನಾಗಿ ಉತ್ತಮ ಸಾಧನೆ ಮಾಡುತ್ತಿದ್ದಾರೆ.

ಅನುಬಂಧ

ಕ್ರ.ಸಂ.

ರಾಜ್ಯದ ಹೆಸರು

ಎನ್‌ ವಿ ಮಂಜೂರಾದ ಜಿಲ್ಲೆಯ ಹೆಸರು

 

ಅರುಣಾಚಲ ಪ್ರದೇಶ

ಅಪ್ಪರ್‌ ಸುಬಾನ್ಸಿರಿ

 

ಕ್ರಾಡಾಡಿ

 

ಲೇಪ ರಾಡಾ

 

ಲೋವರ್ ನೂನ್

 

ಲೋಹಿತ್

 

ಪ್ಯಾಕ್-ಕೆಸಾಂಗ್

 

ಶಿ-ಯೋಮಿ

 

ಸಿಯಾಂಗ್

 

ಸೋನಿತ್ಪುರ್

 

ಅಸ್ಸಾಂ

ಚರೈದೇವ್

 

ಹೋಜೈ

 

ಮಜುಲಿ

 

ಸೌತ್ ಸಾಲ್ಮರ ಮನಕಾಚಾರ್

 

ಪಶ್ಚಿಮ ಕಾರ್ಬಿಯಾನ್ಗಾಂಗ್

 

ತೌಬಲ್

 

ಮಣಿಪುರ

ಕಾಂಗ್ಪೋಕಿ

 

ನೋನಿ‌

 

ಕರ್ನಾಟಕ

ಬಳ್ಳಾರಿ

 

ಮಹಾರಾಷ್ಟ್ರ

ಥಾಣೆ

 

 

ಜಗತಿಯಾಲ್

 

ನಿಜಾಮಾಬಾದ್

 

ತೆಲಂಗಾಣ

ಕೊತಗುಡೆಂ ಭದ್ರಾದ್ರಿ

 

ಮೇಡ್ಚಲ್ ಮಲ್ಕಾಜಗಿರಿ‌

 

ಮಹೆಬೂಬ್‌ನಗರ

 

ಸಂಗಾರೆಡ್ಡಿ

 

ಸೂರ್ಯಪೇಟ್

 

ಪಶ್ಚಿಮ ಬಂಗಾಳ

ಪೂರ್ಬ ಬರ್ಧಮಾನ್

 

ಜಾರ್ಗ್ರಾಮ್

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Vehicles, copper, steel drive 4.86% rise in FY26 engineering exports to $122.4 billion

Media Coverage

Vehicles, copper, steel drive 4.86% rise in FY26 engineering exports to $122.4 billion
NM on the go

Nm on the go

Always be the first to hear from the PM. Get the App Now!
...
PM greets public representatives across the country on the occasion of Panchayati Raj Day
April 24, 2026

The Prime Minister, Shri Narendra Modi, shared a Sanskrit Subhashitam highlighting the the essence of people’s representative:

“प्रजासुखे सुखं राज्ञः प्रजानां च हिते हितम्।

नात्मप्रियं प्रियं राज्ञः प्रजानां तु प्रियं प्रियम्॥"

The Subhashitam conveys, "The happiness of the people’s representative lies in the happiness of the people; his welfare lies in the welfare of the people. People’s representative has no personal favourites. Whatever is dear to the people is what is dear to him."

Shri Modi also greeted public representatives across the country on the occasion of Panchayati Raj Day,today. "Your dedication to public service and service to the nation is truly inspiring for everyone" Shri Modi remarked.

The Prime Minister wrote on X;

“पंचायती राज दिवस के अवसर पर देशभर के जनप्रतिनिधियों का हार्दिक अभिनंदन! जनसेवा के साथ राष्ट्रसेवा के प्रति आप सभी का समर्पण हर किसी को प्रेरित करने वाला है।

प्रजासुखे सुखं राज्ञः प्रजानां च हिते हितम्।

नात्मप्रियं प्रियं राज्ञः प्रजानां तु प्रियं प्रियम्॥"