1. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಸುಮಾರು ₹10,000 ಕೋಟಿಗಳ ಒಟ್ಟು ಹೂಡಿಕೆಯೊಂದಿಗೆ 3 ಪ್ರಮುಖ ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಭಾರತೀಯ ರೈಲ್ವೆಯ ಪ್ರಸ್ತಾವನೆಯನ್ನು ಅನುಮೋದಿಸಿದೆ.

    ಎ) ಹೊಸ ದೆಹಲಿ ರೈಲು ನಿಲ್ದಾಣ;

    ಬಿ) ಅಹಮದಾಬಾದ್ ರೈಲು ನಿಲ್ದಾಣ; ಮತ್ತು

    ಸಿ) ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್‌ಎಮ್‌ಟಿ) ಮುಂಬೈ

     

    ರೈಲು ನಿಲ್ದಾಣವು ಯಾವುದೇ ನಗರಕ್ಕೆ ಪ್ರಮುಖ ಮತ್ತು ಕೇಂದ್ರ ಪ್ರದೇಶವಾಗಿದೆ. ಪ್ರಧಾನ ಮಂತ್ರಿ ಶೇ. ನರೇಂದ್ರ ಮೋದಿ ಅವರು ರೈಲ್ವೆಯ ಪರಿವರ್ತನೆಯಲ್ಲಿ ನಿಲ್ದಾಣಗಳ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಿದ್ದಾರೆ. ಇಂದಿನ ಸಚಿವ ಸಂಪುಟದ ನಿರ್ಧಾರವು ನಿಲ್ದಾಣದ ಅಭಿವೃದ್ಧಿಗೆ ಹೊಸ ದಿಕ್ಕನ್ನು ನೀಡುತ್ತದೆ. 199 ನಿಲ್ದಾಣಗಳ ಪುನರಾಭಿವೃದ್ಧಿ ಕೆಲಸ ನಡೆಯುತ್ತಿದೆ. ಈ ಪೈಕಿ 47 ಕೇಂದ್ರಗಳಿಗೆ ಟೆಂಡರ್‌ ನೀಡಲಾಗಿದೆ. ಉಳಿದವುಗಳಿಗೆ ಯೋಜನೆ ಮತ್ತು ವಿನ್ಯಾಸ ನಡೆಯುತ್ತಿದೆ. 32 ನಿಲ್ದಾಣಗಳ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಇಂದು ಸಚಿವ ಸಂಪುಟವು. ನವದೆಹಲಿ, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್‌ಎಮ್‌ಟಿ), ಮುಂಬೈ ಮತ್ತು ಅಹಮದಾಬಾದ್ ರೈಲು ನಿಲ್ದಾಣಗಳಂತಹ 3 ಪ್ರಮುಖ ದೊಡ್ಡ ನಿಲ್ದಾಣಗಳಿಗೆ 10,000 ಕೋಟಿ ರೂಪಾಯಿಗಳ ಹೂಡಿಕೆಗೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.

    ನಿಲ್ದಾಣದ ವಿನ್ಯಾಸದ ಮೂಲ ಅಂಶಗಳು ಹೀಗಿವೆ:

    1.    ಪ್ರತಿ ನಿಲ್ದಾಣವು ವಿಶಾಲವಾದ ಮೇಲ್ಛಾವಣಿಯನ್ನು (36/72/108 ಮೀ) ಹೊಂದಿದ್ದು, ಚಿಲ್ಲರೆ ವ್ಯಾಪಾರ, ಕೆಫೆಟೇರಿಯಾಗಳು, ಮನರಂಜನಾ ಸೌಲಭ್ಯಗಳ ಸ್ಥಳಗಳೊಂದಿಗೆ ಒಂದೇ ಸ್ಥಳದಲ್ಲಿ ಎಲ್ಲಾ ಪ್ರಯಾಣಿಕರ ಸೌಕರ್ಯಗಳನ್ನು ಹೊಂದಿರುತ್ತದೆ. 
    2.     ನಗರದ ಎರಡೂ ಬದಿಗಳನ್ನು ನಿಲ್ದಾಣಕ್ಕೆ ಸಂಪರ್ಕಿಸಲಾಗುವುದು; ರೈಲು ಹಳಿಗಳ ಎರಡೂ ಬದಿಯಲ್ಲಿ ನಿಲ್ದಾಣದ ಕಟ್ಟಡ ನಿರ್ಮಾಣವಾಗಲಿದೆ. 
    3.    ಫುಡ್ ಕೋರ್ಟ್, ಕ್ಯಾಂಟೀನ್, ಕಾಯುವ ಪ್ರದೇಶ, ಮಕ್ಕಳ ಆಟದ ಪ್ರದೇಶ, ಸ್ಥಳೀಯ ಉತ್ಪನ್ನಗಳಿಗೆ ಸ್ಥಳ ಮುಂತಾದ ಸೌಲಭ್ಯಗಳು ಲಭ್ಯವಿರುತ್ತವೆ.  
    4.     ನಗರದೊಳಗೆ ಇರುವ ನಿಲ್ದಾಣಗಳು ನಗರ ಕೇಂದ್ರದಂತಹ ಜಾಗವನ್ನು ಹೊಂದಿರುತ್ತದೆ.
    5.     ನಿಲ್ದಾಣಗಳನ್ನು ಆರಾಮದಾಯಕವಾಗಿಸಲು, ಸರಿಯಾದ ಬೆಳಕು, ಮಾರ್ಗ ಪತ್ತೆ ಸಂಕೇತಗಳು/ಸೂಚನೆಗಳು, ಧ್ವನಿ ವ್ಯವಸ್ಥೆ ಮತ್ತು ಲಿಫ್ಟ್‌ಗಳು /ಎಸ್ಕಲೇಟರ್‌ಗಳು/ ಟ್ರಾವಲೇಟರ್‌ಗಳು ಇರುತ್ತವೆ.
    6.     ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಸುಗಮ ಸಂಚಾರಕ್ಕೆ ಯೋಜನೆಯನ್ನು ಸಿದ್ಧಪಡಿಸಲಾಗಿದೆ.
    7.    ಮೆಟ್ರೋ, ಬಸ್ ಇತ್ಯಾದಿ ಇತರ ಸಾರಿಗೆ ವಿಧಾನಗಳೊಂದಿಗೆ ಸಮನ್ವಯವಿರುತ್ತದೆ
    8.     ಸೌರ ಶಕ್ತಿ, ನೀರಿನ ಸಂರಕ್ಷಣೆ/ಮರುಬಳಕೆ ಮತ್ತು ಸುಧಾರಿತ ಮರದ ಹೊದಿಕೆಯೊಂದಿಗೆ ಪರಿಸರ ಸ್ನೇಹಿ ಕಟ್ಟಡ ತಂತ್ರಗಳನ್ನು ಬಳಸಲಾಗುವುದು.
    9.    ದಿವ್ಯಾಂಗ, ವಿಶೇಷ ಚೇತನ ಸ್ನೇಹಿ ಸೌಲಭ್ಯಗಳನ್ನು ಒದಗಿಸಲು ವಿಶೇಷ ಕಾಳಜಿ ವಹಿಸಲಾಗುವುದು.
    10.    ಆಧುನಿಕ ಇಂಟೆಲಿಜೆಂಟ್‌ ಬಿಲ್ಡಿಂಗ್‌ ಪರಿಕಲ್ಪನೆಯಲ್ಲಿ ಈ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುವುದು.
    11.     ಆಗಮನ/ನಿರ್ಗಮನಗಳ ಪ್ರತ್ಯೇಕತೆ, ಅಸ್ತವ್ಯಸ್ತತೆ ಮುಕ್ತ ಪ್ಲಾಟ್‌ಫಾರ್ಮ್‌ಗಳು, ಸುಧಾರಿತ ಮೇಲ್ಮೈಗಳು, ಸಂಪೂರ್ಣವಾಗಿ ಮುಚ್ಚಿದ ಪ್ಲಾಟ್‌ಫಾರ್ಮ್‌ಗಳು ಇರುತ್ತವೆ. 
    12.    ಸಿಸಿಟಿವಿ ಅಳವಡಿಕೆ ಮತ್ತು ಪ್ರವೇಶದ ನಿಯಂತ್ರಣದಿಂದ ನಿಲ್ದಾಣಗಳು ಸುರಕ್ಷಿತವಾಗಿರುತ್ತವೆ 
    13.    ಇವು ವಿಶೇಷ ಮಾದರಿಯ ನಿಲ್ದಾಣದ ಕಟ್ಟಡಗಳಾಗಲಿವೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
A Milestone in Financial Inclusion: The Success Story of PMSBY

Media Coverage

A Milestone in Financial Inclusion: The Success Story of PMSBY
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 9 ಮೇ 2026
May 09, 2026

Citizens Celebrate India’s Civilisational & Economic Awakening Under PM Narendra Modi