ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) 2025-26ರ ಮಾರುಕಟ್ಟೆ ಋತುವಿನಲ್ಲಿ ಎಲ್ಲ ಕಡ್ಡಾಯ ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) ಹೆಚ್ಚಳಕ್ಕೆ ತನ್ನ ಅನುಮೋದನೆ ನೀಡಿದೆ.

ಬೆಳೆಗಾರರು ತಮ್ಮ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 2025-26 ರ ಮಾರುಕಟ್ಟೆ ಋತುವಿನಲ್ಲಿ ಹಿಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ. ರಾಪ್ಸೀಡ್ ಮತ್ತು ಸಾಸಿವೆಗೆ ಪ್ರತಿ ಕ್ವಿಂಟಾಲ್ ಗೆ 300 ರೂ., ಮಸೂರ (ಮಸೂರ್) ಪ್ರತಿ ಕ್ವಿಂಟಾಲ್ ಗೆ 275 ರೂ.ಗಳ ಕನಿಷ್ಠ ಬೆಂಬಲ ಬೆಲೆಯಲ್ಲಿ ಸಂಪೂರ್ಣ ಗರಿಷ್ಠ ಹೆಚ್ಚಳವನ್ನು ಘೋಷಿಸಲಾಗಿದೆ. ಕಡಲೆ, ಗೋಧಿ, ಕುಸುಬೆ ಮತ್ತು ಬಾರ್ಲಿ ಬೆಳೆಗಳಿಗೆ ಪ್ರತಿ ಕ್ವಿಂಟಾಲ್ ಗೆ ಕ್ರಮವಾಗಿ 210 ರೂ., 150 ರೂ., 140 ರೂ., 130 ರೂ. ಘೋಷಿಸಲಾಗಿದೆ.

2025-26ರ ಮಾರುಕಟ್ಟೆ ಋತುವಿನಲ್ಲಿ ಎಲ್ಲಾ ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳು

(ಪ್ರತಿ ಕ್ವಿಂಟಾಲ್ ಗೆ ರೂ.)

ಕ್ರ.ಸಂ.

ಬೆಳೆಗಳು

ಎಂಎಸ್ ಪಿ  ಆರ್ ಎಂಎಸ್ 2025-26

ಉತ್ಪಾದನಾ ವೆಚ್ಚ ಆರ್ ಎಂಎಸ್ 2025-26

ವೆಚ್ಚಕ್ಕಿಂತ ಹೆಚ್ಚಿನ ಮಾರ್ಜಿನ್ (ಪ್ರತಿಶತದಲ್ಲಿ)

ಎಂಎಸ್ ಪಿ ಆರ್ ಎಸ್ 2024-25

ಎಂಎಸ್ ಪಿ ಹೆಚ್ಚಳ (ಸಂಪೂರ್ಣ)

1

ಗೋಧಿ

2425

1182

105

2275

150

2

ಬಾರ್ಲಿ

1980

1239

60

1850

130

3

ಕಡಲೆ

5650

3527

60

5440

210

4

ಬೇಳೆಕಾಳು (ಮಸೂರ್)

6700

3537

89

6425

275

5

ರಾಪ್ಸೀಡ್ ಮತ್ತು ಸಾಸಿವೆ

5950

3011

98

5650

300

 

6

ಕುಸುಬೆ

 5940

3960

50

5800

140

ಕೂಲಿ ಮಾನವ ಕಾರ್ಮಿಕರು, ಎತ್ತಿನ ಕಾರ್ಮಿಕರು/ ಯಂತ್ರ ಕಾರ್ಮಿಕರು, ಭೂಮಿಯಲ್ಲಿ ಗುತ್ತಿಗೆಗೆ ಪಾವತಿಸಿದ ಬಾಡಿಗೆ, ಬೀಜಗಳು, ರಸಗೊಬ್ಬರಗಳು, ಗೊಬ್ಬರಗಳು, ನೀರಾವರಿ ಶುಲ್ಕಗಳು, ಉಪಕರಣಗಳು ಮತ್ತು ಕೃಷಿ ಕಟ್ಟಡಗಳ ಸವಕಳಿ, ದುಡಿಯುವ ಬಂಡವಾಳದ ಮೇಲಿನ ಬಡ್ಡಿ, ಪಂಪ್ ಸೆಟ್ ಗಳ ಕಾರ್ಯಾಚರಣೆಗೆ ಡೀಸೆಲ್ / ವಿದ್ಯುತ್ ಇತ್ಯಾದಿಗಳಂತಹ ಎಲ್ಲಾ ಪಾವತಿಸಿದ ವೆಚ್ಚಗಳನ್ನು ಒಳಗೊಂಡಿರುವ ವೆಚ್ಚವನ್ನು ಸೂಚಿಸುತ್ತದೆ. ವಿವಿಧ ವೆಚ್ಚಗಳು ಮತ್ತು ಕುಟುಂಬದ ದುಡಿಮೆಯ ಮೌಲ್ಯವನ್ನು ಸೂಚಿಸುತ್ತದೆ.

 

2025-26ರ ಮಾರುಕಟ್ಟೆ ಋತುವಿನಲ್ಲಿ ಕಡ್ಡಾಯ ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಹೆಚ್ಚಳವು ಅಖಿಲ ಭಾರತ ತೂಕದ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸುವ ಕೇಂದ್ರ ಬಜೆಟ್ 2018-19 ರ ಘೋಷಣೆಗೆ ಅನುಗುಣವಾಗಿದೆ. ಅಖಿಲ ಭಾರತ ತೂಕದ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ನಿರೀಕ್ಷಿತ ಲಾಭವು ಗೋಧಿಗೆ ಶೇ.105 , ನಂತರ ರಾಪ್ಸೀಡ್ ಮತ್ತು ಸಾಸಿವೆಗೆ ಶೇ.98 ; ಬೇಳೆಕಾಳುಗಳಿಗೆ ಶೇ.89; ಕಡಲೆಗೆ ಶೇ.60 ; ಬಾರ್ಲಿಗೆ ಶೇ.60 ; ಮತ್ತು ಕುಸುಬೆಗೆ ಶೇ.50 ರಷ್ಟು ನೀಡಲಾಗಿದೆ. ಹಿಂಗಾರು ಬೆಳೆಗಳ ಈ ಹೆಚ್ಚಿದ ಎಂಎಸ್ ಪಿ ರೈತರಿಗೆ ಲಾಭದಾಯಕ ಬೆಲೆಗಳನ್ನು ಖಚಿತಪಡಿಸುತ್ತದೆ ಮತ್ತು ಬೆಳೆ ವೈವಿಧ್ಯತೆಯನ್ನು ಉತ್ತೇಜಿಸುತ್ತದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
How NPS transformed in 2025: 80% withdrawals, 100% equity, and everything else that made it a future ready retirement planning tool

Media Coverage

How NPS transformed in 2025: 80% withdrawals, 100% equity, and everything else that made it a future ready retirement planning tool
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 20 ಡಿಸೆಂಬರ್ 2025
December 20, 2025

Empowering Roots, Elevating Horizons: PM Modi's Leadership in Diplomacy, Economy, and Ecology