ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಇಂದು ತ್ವರಿತ ವಿಶೇಷ ನ್ಯಾಯಾಲಯವನ್ನು (FTSCs) ಏಪ್ರಿಲ್ 1ರಿಂದ  ಮಾರ್ಚ್ 31, 2026 ರವರೆಗೆ ಕೇಂದ್ರ ಪ್ರಾಯೋಜಿತ ಯೋಜನೆಯಾಗಿ (CSS) ಮುಂದುವರಿಸಲು ಅನುಮೋದಿಸಿದೆ. 

1,952.23 ಕೋಟಿ ರೂಪಾಯಿ (ಕೇಂದ್ರದ ಪಾಲು 1,207.24 ಕೋಟಿ ರೂ. ಮತ್ತು ರಾಜ್ಯದ ಪಾಲು 744.99 ಕೋಟಿ ರೂ). ಕೇಂದ್ರ ಸರ್ಕಾರದ ನಿಧಿ ನಿರ್ಭಯಾ ನಿಧಿಯಿಂದಾಗಿರುತ್ತದೆ. ಈ ಯೋಜನೆಯನ್ನು ಅಕ್ಟೋಬರ್ 2, 2019ರಂದು ಪ್ರಾರಂಭಿಸಲಾಗಿತ್ತು. 
'ಬೇಟಿ ಬಚಾವೋ ಬೇಟಿ ಪಢಾವೋ' ಕಾರ್ಯಕ್ರಮದಂತಹ ಹಲವಾರು ಉಪಕ್ರಮಗಳ ಮೂಲಕ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಖಾತರಿಪಡಿಸುವಲ್ಲಿ ಸರ್ಕಾರದ ಅಚಲ ಆದ್ಯತೆಯು ಸ್ಪಷ್ಟವಾಗಿದೆ. ಹೆಣ್ಣು ಮಗು ಮತ್ತು ಮಹಿಳೆಯರ ಮೇಲಿನ ಅತ್ಯಾಚಾರವನ್ನು ಒಳಗೊಂಡ ಘಟನೆಗಳು ರಾಷ್ಟ್ರದ ಮೇಲೆ ಆಳವಾದ ಪರಿಣಾಮ ಬೀರಿವೆ. ಅಂತಹ ಘಟನೆಗಳ ಪುನರಾವರ್ತನೆ ಅಪರಾಧಿಗಳ ದೀರ್ಘಾವಧಿಯ ವಿಚಾರಣೆಗಳನ್ನು ತ್ವರಿತಗೊಳಿಸುವ ಮತ್ತು ಲೈಂಗಿಕ ಅಪರಾಧಗಳಲ್ಲಿ ಸಂತ್ರಸ್ತರಿಗೆ ತಕ್ಷಣದ ಪರಿಹಾರವನ್ನು ತಲುಪಿಸುವ ಸಾಮರ್ಥ್ಯವನ್ನು ಹೊಂದಿರುವ ಮೀಸಲಾದ ನ್ಯಾಯಾಲಯದ ವ್ಯವಸ್ಥೆಯನ್ನು ಸ್ಥಾಪಿಸುವ ಅಗತ್ಯವಿತ್ತು. 

ಕೇಂದ್ರ ಸರ್ಕಾರವು "ಕ್ರಿಮಿನಲ್ ಕಾನೂನು (ತಿದ್ದುಪಡಿ) ಕಾಯಿದೆ. 2018" ನ್ನು ಜಾರಿಗೊಳಿಸಿತು, ಇದು ಅತ್ಯಾಚಾರ ಅಪರಾಧಿಗಳಿಗೆ ಮರಣದಂಡನೆ ಸೇರಿದಂತೆ ಕಠಿಣ ಶಿಕ್ಷೆಯನ್ನು ಒಳಗೊಂಡಿತ್ತು, ಇದು ತ್ವರಿತ ವಿಶೇಷ ನ್ಯಾಯಾಲಯಗಳನ್ನು (FTSCs) ರಚಿಸುವುದಕ್ಕೆ ಕಾರಣವಾಯಿತು.

ಮೀಸಲಾದ ನ್ಯಾಯಾಲಯಗಳಾಗಿ ವಿನ್ಯಾಸಗೊಳಿಸಲಾದ ಎಫ್ ಟಿಎಸ್ ಸಿಗಳು, ಲೈಂಗಿಕ ಅಪರಾಧಿಗಳಿಗೆ ಪ್ರತಿಬಂಧಕ ಚೌಕಟ್ಟನ್ನು ಬಲಪಡಿಸುವ ಸಂದರ್ಭದಲ್ಲಿ ಸಂತ್ರಸ್ತರಿಗೆ ತ್ವರಿತ ಪರಿಹಾರವನ್ನು ನೀಡುವ, ನ್ಯಾಯದ ತ್ವರಿತ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ನಿರೀಕ್ಷಿಸಲಾಗಿದೆ.

2019 ರ ಆಗಸ್ಟ್‌ನಲ್ಲಿ ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (POCSO ಕಾಯಿದೆ) ಗೆ ಸಂಬಂಧಿಸಿದ ಪ್ರಕರಣಗಳ ಸಮಯೋಚಿತ ವಿಲೇವಾರಿಗಾಗಿ ಎಫ್ ಟಿಎಸ್ ಸಿಗಳನ್ನು ಸ್ಥಾಪಿಸಲು ಕೇಂದ್ರ ಪ್ರಾಯೋಜಿತ ಯೋಜನೆಯನ್ನು ಭಾರತ ಒಕ್ಕೂಟವು ರೂಪಿಸಿದೆ. ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಅನುಸರಿಸಿ 25.07.2019 ರಂದು ಸ್ವಯಂ ಮೋಟೋ ರಿಟ್ ಅರ್ಜಿ (ಕ್ರಿಮಿನಲ್) ನಂ.1/2019 ರಲ್ಲಿ, ಈ ಯೋಜನೆಯು 100ಕ್ಕೂ ಹೆಚ್ಚು ಪೋಕ್ಸೋ ಆಕ್ಟ್ ಪ್ರಕರಣಗಳಿರುವ ಜಿಲ್ಲೆಗಳಿಗೆ ವಿಶೇಷ ಪೋಕ್ಸೋ ನ್ಯಾಯಾಲಯಗಳನ್ನು ಸ್ಥಾಪಿಸುವುದನ್ನು ಕಡ್ಡಾಯಗೊಳಿಸಿದೆ. 

ಆರಂಭದಲ್ಲಿ 2019 ರ ಅಕ್ಟೋಬರ್ ನಲ್ಲಿ ಒಂದು ವರ್ಷಕ್ಕೆ ಪ್ರಾರಂಭವಾಯಿತು, ಈ ಯೋಜನೆಯನ್ನು ಹೆಚ್ಚುವರಿ ಎರಡು ವರ್ಷಗಳವರೆಗೆ ಈ ವರ್ಷದ ಮಾರ್ಚ್ ಕೊನೆಯವರೆಗೆ ವಿಸ್ತರಿಸಲಾಯಿತು. ಈಗ, ಇದನ್ನು ಮಾರ್ಚ್ 31, 2026 ರವರೆಗೆ ಮತ್ತಷ್ಟು ವಿಸ್ತರಿಸಲಾಗಿದೆ, ಇದರೊಂದಿಗೆ 1952.23 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರದ ಪಾಲಿನ ಹಣದ ಜೊತೆಗೆ ನಿರ್ಭಯಾ ನಿಧಿಯನ್ನು ಒದಗಿಸಲಾಗಿದೆ. 

ಕಾನೂನು, ನ್ಯಾಯಾಂಗ ಮತ್ತು ನ್ಯಾಯ ಸಚಿವಾಲಯದಿಂದ ಇದನ್ನು ಜಾರಿಗೊಳಿಸಲಾಗಿದೆ, ಎಫ್ ಟಿಎಸ್ ಸಿಗಳ ಕೇಂದ್ರ ಪ್ರಾಯೋಜಿತ ಯೋಜನೆಯು ದೇಶಾದ್ಯಂತ ಎಫ್ ಟಿಎಸ್ ಸಿಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರದ ಸಂಪನ್ಮೂಲಗಳನ್ನು ಹೆಚ್ಚಿಸುತ್ತದೆ, ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳ ತ್ವರಿತ ವಿಲೇವಾರಿಯನ್ನು ಮಾಡುತ್ತವೆ. 

ಮೂವತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಈ ಯೋಜನೆಯಲ್ಲಿ ಭಾಗವಹಿಸಿದ್ದು, 414 ವಿಶೇಷ ಪೋಕ್ಸೋ ನ್ಯಾಯಾಲಯಗಳನ್ನು ಒಳಗೊಂಡಂತೆ 761 ಎಫ್ ಟಿಎಸ್ ಸಿಗಳನ್ನು ಕಾರ್ಯಗತಗೊಳಿಸಿವೆ, ಇದು 1,95,000 ಪ್ರಕರಣಗಳನ್ನು ಪರಿಹರಿಸಿದೆ. ಈ ನ್ಯಾಯಾಲಯಗಳು ಲೈಂಗಿಕ ಅಪರಾಧಗಳ ಸಂತ್ರಸ್ತರಿಗೆ ಸಕಾಲಿಕದಲ್ಲಿ ನ್ಯಾಯವನ್ನು ಒದಗಿಸಲು ರಾಜ್ಯ/ಕೇಂದ್ರಾಡಳಿತ ಸರ್ಕಾರಗಳು ಪ್ರಯತ್ನಿಸುತ್ತವೆ. 

ಯೋಜನೆಯ ನಿರೀಕ್ಷಿತ ಫಲಿತಾಂಶಗಳು:

* ಲೈಂಗಿಕ ಮತ್ತು ಲಿಂಗ ಆಧಾರಿತ ಹಿಂಸೆಯನ್ನು ಕೊನೆಗೊಳಿಸಲು ರಾಷ್ಟ್ರದ ಬದ್ಧತೆಯನ್ನು ತೋರಿಸುತ್ತದೆ.

* ಅತ್ಯಾಚಾರ ಮತ್ತು ಪೋಕ್ಸೊ ಕಾಯ್ದೆಯ ಬಾಕಿ ಇರುವ ಪ್ರಕರಣಗಳನ್ನು ಗಣನೀಯವಾಗಿ ಕಡಿಮೆ ಮಾಡಿ, ನ್ಯಾಯಾಂಗ ವ್ಯವಸ್ಥೆಯ ಮೇಲಿನ ಹೊರೆಯನ್ನು ತಪ್ಪಿಸುತ್ತದೆ. 

* ಸುಧಾರಿತ ಸೌಲಭ್ಯಗಳು ಮತ್ತು ತ್ವರಿತ ಪ್ರಯೋಗಗಳ ಮೂಲಕ ಲೈಂಗಿಕ ಅಪರಾಧಗಳ ಸಂತ್ರಸ್ತರಿಗೆ ತ್ವರಿತ ನ್ಯಾಯ ವಿಲೇವಾರಿ. 

* ಪ್ರಕರಣಗಳ ಹೊರೆಯನ್ನು ನಿರ್ವಹಿಸಬಹುದಾದಷ್ಟು ಸಂಖ್ಯೆಗಳಿಗೆ ಕಡಿಮೆ ಮಾಡುವುದು  

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
'Will Not Let Bengalis Become Minority': PM Modi Promises Speedy Implementation Of UCC In Bengal

Media Coverage

'Will Not Let Bengalis Become Minority': PM Modi Promises Speedy Implementation Of UCC In Bengal
NM on the go

Nm on the go

Always be the first to hear from the PM. Get the App Now!
...
PM to address ‘Nari Shakti Vandan Sammelan’ on 13th April
April 12, 2026
Sammelan to witness participation of eminent personalities and women achievers from diverse fields
Sammelan to highlight the government’s commitment towards women-led development in the journey towards Viksit Bharat 2047
Sammelan underscores the importance of enhanced representation of women in decision-making processes

Prime Minister Shri Narendra Modi will attend a national level ‘Nari Shakti Vandan Sammelan’ on 13th April 2026 at Vigyan Bhawan, New Delhi at around 11 AM. He will also address the gathering on the occasion.

The programme will witness participation of eminent personalities and women achievers from diverse fields. It will bring together representatives from different sectors such as government, academia, science, sports, entrepreneurship, media, social work and culture.

In September 2023, Parliament passed the ‘Nari Shakti Vandan Adhiniyam’ marking a significant step towards enhancing women’s representation in legislative bodies. The Act provided for reservation of one-third of seats for women in Lok Sabha and State Legislative Assemblies. Now, with a focus on implementation of women’s reservation across the country, a Parliament session is being convened on 16th April.

The Sammelan is being organised to reinforce the commitment towards greater participation of women in shaping India’s development trajectory. It will also highlight the increasing role of women in governance and leadership across all levels, from Panchayats to Parliament. The programme will underscore the importance of enhanced representation of women in decision-making processes.

The Sammelan will highlight the role of women in the journey towards Viksit Bharat 2047. It will reflect the government’s continued commitment towards women-led development as a central pillar of the vision for Viksit Bharat 2047.