ಭಾರತ ಸರ್ಕಾರದ ಎರಡು ಕಾರ್ಯದರ್ಶಿಗಳ ಗುಂಪು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮುಂದೆ ಶಿಕ್ಷಣ ಮತ್ತು ಬಿಕ್ಕಟ್ಟು ನಿರ್ವಹಣೆ ಕುರಿತಂತೆ ತಮ್ಮ ಕಲ್ಪನೆಗಳನ್ನು ಮಂಡಿಸಿತು.
ಕೇಂದ್ರ ಸಚಿವರು ಮತ್ತು ನೀತಿ ಆಯೋಗದ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಇದರೊಂದಿಗೆ, ಪ್ರಸಕ್ತ ಸರಣಿಯಲ್ಲಿ ವಿವಿಧ ಆಡಳಿತ ಸಂಬಂಧಿಧ್ಯೇಯಗಳ ಕುರಿತ ಎಲ್ಲ ಒಂಬತ್ತು ಪ್ರಾತ್ಯಕ್ಷಿಕೆಗಳೂ ಮಂಡನೆ ಆದಂತೆ ಆಗಿದೆ.
ಪ್ರಾತ್ಯಕ್ಷಿಕೆ ಮಂಡನೆಯ ಕೊನೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿಗಳು, ಕೇಂದ್ರ ಸರ್ಕಾರ ಸದಾ ಹೊಸ ಕಲ್ಪನೆಗಳಿಗೆ ಮುಕ್ತ ಮನಸ್ಸು ಹೊಂದಿದೆ ಎಂದು ತಿಳಿಸಿದರು. ಸಮಗ್ರ ಫಲಿತಾಂಶಕ್ಕಾಗಿ ಸಮ್ಯಕ್ ಚಿಂತನೆ ಮುಂದುವರಿಸುವಂತೆ ಮತ್ತು ಅದಕ್ಕೆ ಉನ್ನತ ಆದ್ಯತೆ ನೀಡುವಂತೆ ಕಾರ್ಯದರ್ಶಿಗಳಿಗೆ ಅವರು ತಿಳಿಸಿದರು.


