परसों जो भयंकर cyclone आया, और उसके कारण आंध्र को और कुछ भाग में उड़ीसा को जो संकट झेलना पड़ा, अनेक लोगों को अपने प्राण खोने पड़े, इस कठिनाइयों से गुजरे हुए सभी नागरिक भाइयों-बहनों के प्रति मैं अपनी सहानुभूति प्रकट करता हूं। इस संकट के समय पूरा देश, भारत सरकार, आंध्र के साथ Vizag के लोगों के साथ पूरी ताकत से खडे हैं। आवश्यक सभी मदद भारत सरकार करेगी। 

इस Cyclone में Technology का बहुत ही Perfect उपयोग हुआ, पहले दिन से ही। इस Cyclone में मौसम विभाग ने Technology का बखूबी उपयोग किया और 6 तारीख से ही ये संकेत दे दिए गए थे। जो अनुमान थे, उतनी ही Velocity रही। जो दिशा थी अनुमानित, वही दिशा रही। जो अनुमानित Time था, वही Time रहा। और एक प्रकार से इस संकट से बचने में ये Technology का उपयोग भी काफी काम आया। 

दूसरी सबसे महत्‍वपूर्ण बात हुई, जब केंद्र और राज्‍य, दोनों, कंधे-से-कंधा मिला करके काम करते हैं, सही दिशा में काम करते हैं, तो कितने बड़े संकट क्‍यों न हो, उन संकटों से उभरा जा सकता है। आंध्र Government और भारत सरकार ने 5 दिन लगातार minute-to-minute Perfect Co-ordination के साथ काम किया। Local Body ने भी उसको पूरी तरह Follow किया। मैं Vizag के नागरिकों का भी अभिनंदन करना चाहता हूं कि संकट के समय उन्‍होंने सरकार की सूचनाओं का पालन किया। पूरी तरह से discipline को माना, और उसके कारण लोगों की जिंदगी बचाने में हम सफल हुए। इन संकटों के बावजूद भी, यह एक भयंकर Cyclone था। आपने तो इसको खुद ही अनुभव किया है। 

आपने जो धैर्य रखा.... और आज भी मैं बहुत दूर गया। मैंने हवाई निरीक्षण करके ओडि़शा का इलाका भी देखा आज। मैंने पहले कहा, उस प्रकार से भारत सरकार इस संकट के समय पूरी तरह आंध्र सरकार के साथ रहेगी। भारत सरकार के जो कई establishments हैं, उनका भी भारी नुकसान हुआ है। Coast guard हो, Navy हो, Railways, Airlines, National Highways, उन सबके लिए भी भारत सरकार की तरफ से लोग आएंगे, survey करेंगे और उसकी चिंता भी हम करेंगे। 

अभी जितनी जानकारी मुझे मिली है, detailed survey भी हम करेंगे, भारत सरकार की भी team आएगी। किसानों का भी यह फसल का आखिरी समय था। इसलिए बहुत नुकसान उसके कारण किसानों का भी हुआ था। तो Agriculture survey, Property का जो नुकसान हुआ है, उसके लिए, मैं Insurance कंपनियों को भी सूचना करूंगा, वो तत्‍काल अपने लोग लगाएं। और Private Insurance वाले जो लोग हैं, उनके साथ बैठ करके सहानुभूतिपूर्वक उनकी सारी Claims को तुरंत workout करे, उनकी मदद करें। मैं Insurance Companies को भी आग्रहपूर्वक ये विषय बता दूंगा। 

तत्‍काल जो अवस्था हैं, उसमें इतना बड़ा काम है। आंध्र प्रदेश एक तो नया-नया राज्‍य बना है। उसको अभी कई चीजें करनी बांकी है। ऐसे में इतना बड़ा संकट आया है। दूसरी तरफ, अभी 15 दिन पहले तो मैं इतना उत्‍साह और उमंग से उछल रहा था। Vizag को Smart City बनाने का सपना ले कर के। अचानक ये कसौटी आ गई है, लेकिन मुझे विश्‍वास है कि हम इस कसौटी से बाहर निकलेंगे। और बहुत ही जल्‍द सारी व्‍यवस्‍थाएं Normal हो जाएंगी और जो नुकसान हुआ, उसको भी ठीक करने में हम सफल हो जाएंगे। बिजली, पानी, Communication, इन चीजों को हमने प्राथमिकता दी है और कुछ ही घंटों में बहुत ही जल्‍द इन चीजों में सुधार आ जाएगा। 

भारत सरकार के प्रतिनिधियों को मैंने Special इस काम के लिए depute किया है। आंध्र सरकार पूरी तरह लगी हुई है। तो जनसुविधा की जो प्राथमिक आवश्‍यकताएं हैं, वो भी तुरंत चालू कर दी जाएँगीं। अभी पूरा सर्वे होना बांकी है। लेकिन तत्‍काल इतने बड़े संकट को पहुंचने के लिए भारत सरकार की तरफ से एक Interim Assistance के रूप में 1,000 करोड़ रुपए भारत सरकार की तरफ से देने की मैं घोषणा करता हूं। 

तुरंत Survey होने के बाद आगे भी भारत सरकार आंध्र के साथ, वाइजाग के साथ पूरी तरह साथ रहकर के इन समस्‍याओं से निकलने के लिए जो भी आवश्‍यकता होगी, उसको पूरा करेंगे। जिन लोगों ने अपना जीवन खो दिया है, जिनकी मृत्‍यु हुई है, उन (के परिजनों) को प्रधानमंत्री राहत कोष से 2 लाख रुपए और जिनको injury हुई है, उनको 50,000 रुपए भी भारत सरकार के प्रधानमंत्री राहतकोष से हम देंगें। 

धन्‍यवाद। 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Indian Railways approve projects worth ₹630 crore across Gujarat, Bihar, and West Bengal

Media Coverage

Indian Railways approve projects worth ₹630 crore across Gujarat, Bihar, and West Bengal
NM on the go

Nm on the go

Always be the first to hear from the PM. Get the App Now!
...
26ನೇ ಎಸ್.ಸಿ.ಒ. ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಯ ಕನ್ನಡ ಅನುವಾದ
September 01, 2026

ಕಿರ್ಗಿಸ್ತಾನ್ ಅಧ್ಯಕ್ಷರೇ,

ಗೌರವಾನ್ವಿತರೇ,

ನಮಸ್ಕಾರ!

ಎಸ್.ಸಿ.ಒ.ನ 25ನೇ ವಾರ್ಷಿಕೋತ್ಸವದ ಈ ವಿಶೇಷ ಸಂದರ್ಭದಲ್ಲಿ ನಿಮ್ಮೆಲ್ಲರ ನಡುವೆ ಇರುವುದು ನನಗೆ ತುಂಬಾ ಸಂತೋಷದ ವಿಷಯ.

ಬಿಷ್ಕೆಕ್‌ನಲ್ಲಿ ನಮಗೆ ನೀಡಿದ ಆತ್ಮೀಯ ಸ್ವಾಗತ ಮತ್ತು ಉದಾತ್ತ ಆತಿಥ್ಯಕ್ಕಾಗಿ ಅಧ್ಯಕ್ಷ ಜಪರೋವ್ ಅವರಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ.

ನಿನ್ನೆ, ಕಿರ್ಗಿಸ್ತಾನ್‌ನ ಸ್ವಾತಂತ್ರ್ಯ ದಿನಾಚರಣೆಯಂದು ಇಲ್ಲಿಗೆ ಬರುವ ಸೌಭಾಗ್ಯ ನಮಗೆ ದೊರಕಿತ್ತು. ಮತ್ತೊಮ್ಮೆ ಕಿರ್ಗಿಸ್ತಾನ್ ಅಧ್ಯಕ್ಷರು ಮತ್ತು ಜನರಿಗೆ ನನ್ನ ಆತ್ಮೀಯ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಮತ್ತು ಇಂದು, ಉಜ್ಬೇಕಿಸ್ತಾನ್‌ನ ಸ್ವಾತಂತ್ರ್ಯ ದಿನಾಚರಣೆಯಂದು, ಅಧ್ಯಕ್ಷರು ಮತ್ತು ಉಜ್ಬೇಕಿಸ್ತಾನ್ ಜನರಿಗೆ ನನ್ನ ಆತ್ಮೀಯ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ವಿಶ್ವ ಅಲೆಮಾರಿ ಕ್ರೀಡಾಕೂಟದ ಅದ್ಭುತ ಉದ್ಘಾಟನಾ ಸಮಾರಂಭದಲ್ಲಿ, ನಾವೆಲ್ಲರೂ ಕಿರ್ಗಿಸ್ತಾನ್‌ನ ಶ್ರೀಮಂತ ಸಂಸ್ಕೃತಿ ಮತ್ತು ನಮ್ಮ ಹಂಚಿಕೆಯ ಪರಂಪರೆಯ ಒಂದು ನೋಟವನ್ನು ಪಡೆದುಕೊಂಡೆವು. ಈ ಹಂಚಿಕೆಯ ಪರಂಪರೆ ಮತ್ತು ನಮ್ಮ ಆಳವಾದ ಜನತೆ ಮತ್ತು ಜನತೆಯ ಸಂಪರ್ಕಗಳು ಎಸ್.ಸಿ.ಒ. ಕುಟುಂಬದ ದೊಡ್ಡ ಶಕ್ತಿಗಳಲ್ಲಿ ಒಂದಾಗಿ ಸೇರಿವೆ.

ಸ್ನೇಹಿತರೇ,

ಕಳೆದ ಇಪ್ಪತ್ತೈದು ವರ್ಷಗಳಲ್ಲಿ, ಎಸ್.ಸಿ.ಒ. ಯುರೇಷಿಯಾದ ವಿಶಾಲ ವಿಸ್ತಾರದಲ್ಲಿ ಸಂವಾದ ಮತ್ತು ಸಹಕಾರದ ಬಲವಾದ ಸಂಪ್ರದಾಯವನ್ನು ಅಭಿವೃದ್ಧಿಪಡಿಸಿದೆ. ಒಟ್ಟಾಗಿ, ನಾವು ನಮ್ಮ ಜನರ ಯೋಗಕ್ಷೇಮಕ್ಕೆ ಮಾತ್ರವಲ್ಲದೆ ಮಾನವೀಯತೆಯ ಪ್ರಗತಿಗೂ ಅಮೂಲ್ಯ ಕೊಡುಗೆಗಳನ್ನು ನೀಡಿದ್ದೇವೆ. ಈ ಇಪ್ಪತ್ತೈದು ವರ್ಷಗಳಲ್ಲಿ, ನಾವು ಸಹಕಾರಕ್ಕಾಗಿ ಬಲವಾದ ಅಡಿಪಾಯವನ್ನು ಹಾಕಿದ್ದೇವೆ. ಮುಂದಿನ ಇಪ್ಪತ್ತೈದು ವರ್ಷಗಳಲ್ಲಿ, ಈ ಸಹಕಾರವನ್ನು ಸ್ಪಷ್ಟ ಫಲಿತಾಂಶಗಳಾಗಿ ಪರಿವರ್ತಿಸುವುದು ನಮ್ಮ ಗುರಿಯಾಗಿರಬೇಕು.

ಜಗತ್ತು ಅನಿಶ್ಚಿತತೆ ಮತ್ತು ಅಸ್ಥಿರತೆಯ ನಡುವೆ ಸಾಗುತಿರುವ ಈ ಸಮಯದಲ್ಲಿ, ನಾವು ನಮ್ಮ ಹಂಚಿಕೆಯ ಭೌಗೋಳಿಕತೆಯನ್ನು ಹಂಚಿಕೆಯ ಅವಕಾಶಗಳಾಗಿ ಪರಿವರ್ತಿಸಬೇಕು. ಮತ್ತು ನಮ್ಮ ಪ್ರಯತ್ನಗಳ ಮೂಲಕ, ನಮ್ಮ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಬೇಕು.

ಸ್ನೇಹಿತರೇ,

ಹಿಂದಿನ ಸಭೆಯಲ್ಲಿ, ನಾನು ಎಸ್.ಸಿ.ಒ. ಗಾಗಿ ಭಾರತದ ದೃಷ್ಟಿಕೋನದ ಮೂರು ಪ್ರಮುಖ ಸ್ತಂಭಗಳನ್ನು ವಿವರಿಸಿದ್ದೆ:

ಎಸ್ - ಅಂದರೆ ಸೆಕ್ಯುರಿಟಿ- ಭದ್ರತೆ,

ಸಿ - ಅಂದರೆ ಕನೆಕ್ಟಿವಿಟಿ ಸಂಪರ್ಕ ಮತ್ತು

ಓ - ಅಂದರೆ ಅಪರ್ಚುನಿಟಿ – ಅವಕಾಶ

ಈ ಮೂರು ಸ್ತಂಭಗಳನ್ನು ಚಿಂತನಾ ದೃಷ್ಟಿಕೋನದಿಂದ ಹೊರಗೆ ಕೊಂಡೊಯ್ದು ಅವುಗಳನ್ನು ಬಲಿಷ್ಟ ಕಾಂಕ್ರೀಟ್ ಫಲಿತಾಂಶಗಳಾಗಿ ಪರಿವರ್ತಿಸುವ ಸಮಯ ಬಂದಿದೆ. ಇದಕ್ಕೆ ಮೊದಲ ಮತ್ತು ಪ್ರಮುಖ ಅವಶ್ಯಕತೆ ಶಾಂತಿ ಮತ್ತು ಭದ್ರತೆ. ಭಯೋತ್ಪಾದನೆಯು ಒಟ್ಟಾರೆಯಾಗಿ ಮಾನವೀಯತೆಗೆ ಗಂಭೀರ ಸವಾಲನ್ನು ಒಡ್ಡುತ್ತಲೇ ಇದೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ, ನಾವು ಕ್ರಿಯೆ-ಪ್ರತಿಕ್ರಿಯೆ ವಿಧಾನಕ್ಕೆ ಸೀಮಿತವಾಗಿರಲು ಸಾಧ್ಯವಿಲ್ಲ.

ಭಯೋತ್ಪಾದನಾ ಹಣಕಾಸು, ನೇಮಕಾತಿ, ಕ್ರಾಂತಿಯ ಮನೋಭಾವ ಮತ್ತು ಸುರಕ್ಷಿತ ತಾಣಗಳ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ನಾವು ಕೆಡವಬೇಕು. ಈ ಗಂಭೀರ ವಿಷಯದ ಬಗ್ಗೆ ದ್ವಿಮುಖ ನೀತಿಗಳಿಗೆ ಅವಕಾಶವಿಲ್ಲ ಹಾಗು ನಾವು ಒಂದೇ ಧ್ವನಿಯಲ್ಲಿ ಮಾತನಾಡಬೇಕು ಮತ್ತು ದ್ವಿಮುಖ ನೀತಿಗೆ ಅವಕಾಶ ಇಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು.

ಭಯೋತ್ಪಾದನೆಯನ್ನು ನೀತಿಯ ಸಾಧನವಾಗಿ ಬಳಸುವ ಮತ್ತು ಭಯೋತ್ಪಾದಕರಿಗೆ ಸುರಕ್ಷಿತ ತಾಣ ಹಾಗು ಬೆಂಬಲವನ್ನು ಒದಗಿಸುವ ದೇಶಗಳಿಗೆ ಭಯೋತ್ಪಾದನೆ ಎಂದಿಗೂ ಯಾರಿಗೂ ಕಾರ್ಯತಂತ್ರದ ಆಸ್ತಿಯಾಗಲು ಸಾಧ್ಯವಿಲ್ಲ ಎಂಬ ಬಲವಾದ ಸಂದೇಶವನ್ನು ನಾವು ಕಳುಹಿಸಬೇಕು.

ಶಾಂತಿಯುತ ಮತ್ತು ಸುರಕ್ಷಿತ ಯುರೇಷಿಯಾಕ್ಕಾಗಿ ನಮ್ಮ ಹಂಚಿಕೆಯ ಆಕಾಂಕ್ಷೆಯು ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆಯ ಜೊತೆಗೆ ನಿಕಟ ಸಂಬಂಧ ಹೊಂದಿದೆ. ಭಾರತವು ಅಫ್ಘಾನಿಸ್ತಾನದ ಜನರಿಗೆ ಅಭಿವೃದ್ಧಿ ಮತ್ತು ಮಾನವೀಯ ನೆರವು ಒದಗಿಸುವಲ್ಲಿ ಕೊಡುಗೆ ನೀಡುತ್ತಿದೆ ಮತ್ತು ಅದನ್ನು ಮುಂದುವರಿಸುತ್ತದೆ.

ಇಂದಿನ ಅಂತರ್ಸಂಪರ್ಕಿತ ಜಗತ್ತಿನಲ್ಲಿ, ಭದ್ರತೆಯ ವ್ಯಾಪ್ತಿ ಇನ್ನಷ್ಟು ವಿಸ್ತಾರವಾಗಿದೆ. ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟು ಒಂದು ಪ್ರದೇಶದಲ್ಲಿನ ಸಂಘರ್ಷವು ಆ ಪ್ರದೇಶಕ್ಕೆ ಸೀಮಿತವಾಗಿಲ್ಲ ಎಂಬುದನ್ನು ತೋರಿಸಿದೆ. ಇದರ ಪರಿಣಾಮವು ಪ್ರಪಂಚದಾದ್ಯಂತ ಕಂಡುಬರುತ್ತಿದ್ದು, ಇಂಧನ ಭದ್ರತೆ, ಕಡಲ ವ್ಯಾಪಾರ ಮತ್ತು ಪೂರೈಕೆ ಸರಪಳಿಗಳ ಮೇಲೆ ಪರಿಣಾಮ ಬೀರುತ್ತಿದೆ. ಜಾಗತಿಕ ದಕ್ಷಿಣದ ದೇಶಗಳು ಇಂತಹ ಅಡಚಣೆಗಳ ದೊಡ್ಡ ಹೊರೆಯನ್ನು ಹೊರುತ್ತಿವೆ. ಆದ್ದರಿಂದ, ಭಾರತವು ಎಲ್ಲಾ ಉದ್ವಿಗ್ನತೆಗಳು ಮತ್ತು ಸಂಘರ್ಷಗಳನ್ನು ಯುದ್ಧಭೂಮಿಯಲ್ಲಿ ಅಲ್ಲ, ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬೇಕೆಂದು ನಿರಂತರವಾಗಿ ಕರೆ ನೀಡಿದೆ.

ಮಾದಕ ವಸ್ತುಗಳ ಕಳ್ಳಸಾಗಣೆ ಕೇವಲ ಅಪರಾಧವಲ್ಲ; ಇದು ನಮ್ಮ ಯುವ ಪೀಳಿಗೆ ಮತ್ತು ಪ್ರಾದೇಶಿಕ ಭದ್ರತೆಗೆ ಗಂಭೀರ ಬೆದರಿಕೆಯಾಗಿದೆ. ಭದ್ರತಾ ಬೆದರಿಕೆಗಳು, ಸಂಘಟಿತ ಅಪರಾಧ, ಮಾಹಿತಿ ಭದ್ರತೆ ಮತ್ತು ಮಾದಕವಸ್ತುಗಳಂತಹ ಸವಾಲುಗಳನ್ನು ಎದುರಿಸಲು ಎಸ್.ಸಿ.ಒ. ಅಡಿಯಲ್ಲಿ ಸ್ಥಾಪಿಸಲಾಗುತ್ತಿರುವ ಕೇಂದ್ರಗಳು ಸಕಾರಾತ್ಮಕ ಹೆಜ್ಜೆಯಾಗಿದೆ. ನಾವು ಈ ಕೇಂದ್ರಗಳನ್ನು ಪ್ರಾಯೋಗಿಕ ಸಮನ್ವಯ ಮತ್ತು ಸಕಾಲಿಕ ಕ್ರಮಕ್ಕಾಗಿ ಪರಿಣಾಮಕಾರಿ ಸಾಧನವನ್ನಾಗಿ ಮಾಡಬೇಕು.

ಸ್ನೇಹಿತರೇ

ನಮ್ಮ ಹಂಚಿಕೆಯ ಅಭಿವೃದ್ಧಿಯ ಎರಡನೇ ಸ್ತಂಭ ಬಲವಾದ ಮತ್ತು ವಿಶ್ವಾಸಾರ್ಹ ಸಂಪರ್ಕ. ಮಾರುಕಟ್ಟೆಗಳನ್ನು ಸಂಪರ್ಕಿಸುವ, ವ್ಯಾಪಾರವನ್ನು ಸುಗಮಗೊಳಿಸುವ ಮತ್ತು ಅಭಿವೃದ್ಧಿಗೆ ಹೊಸ ಮಾರ್ಗಗಳನ್ನು ತೆರೆಯುವ ಎಲ್ಲಾ ಪ್ರಯತ್ನಗಳನ್ನು ಭಾರತ ಬೆಂಬಲಿಸುತ್ತದೆ. ಆದಾಗ್ಯೂ, ಅಂತಹ ಪ್ರಯತ್ನಗಳು ಎಲ್ಲಾ ದೇಶಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದು ಅಷ್ಟೇ ಅವಶ್ಯಕ. ಇದು ಎಸ್.ಸಿ.ಒ. ಚಾರ್ಟರ್‌ನ ಮೂಲಭೂತ ಮನೋಭಾವವೂ ಆಗಿದೆ.

ಮುಂದೆ ಸಾಗಿದಂತೆ, ಸಂಪರ್ಕದ ವ್ಯಾಪ್ತಿಯು ಇನ್ನಷ್ಟು ವಿಸ್ತಾರವಾಗಲಿದೆ. ರಸ್ತೆಗಳು, ರೈಲ್ವೆಗಳು ಮತ್ತು ವಾಯು ಕಾರಿಡಾರ್‌ಗಳ ಜೊತೆಗೆ, ನಾವು ಕಸ್ಟಮ್ಸ್ ಪ್ರಕ್ರಿಯೆಗಳನ್ನು ಸರಳಗೊಳಿಸಬೇಕು, ಡಿಜಿಟಲ್ ದಾಖಲಾತಿಯನ್ನು ಉತ್ತೇಜಿಸಬೇಕು ಮತ್ತು ಲಾಜಿಸ್ಟಿಕ್ಸ್ ನೆಟ್‌ವರ್ಕ್‌ಗಳನ್ನು ಹೆಚ್ಚು ದಕ್ಷತಾಯುಕ್ತವನ್ನಾಗಿಸಿ ಪರಿಣಾಮಕಾರಿಯಾಗಿ ಮಾಡಬೇಕು.

ಸ್ನೇಹಿತರೇ,

ಮೂರನೇ ಸ್ತಂಭ - ಅವಕಾಶ.

ಎಸ್.ಸಿ.ಒ. ಸಹಕಾರದ ಪ್ರಯೋಜನಗಳು ನಮ್ಮ ಜನರನ್ನು ನೇರವಾಗಿ ತಲುಪಬೇಕು ಎಂದರ್ಥ. ನಮ್ಮ ಜನರ ನಡುವಿನ ಸಂಪರ್ಕಗಳು ನಮ್ಮ ದೊಡ್ಡ ಶಕ್ತಿ. ಭಾರತಕ್ಕೆ, ಎಸ್.ಸಿ.ಒ. ಶ್ರೇಷ್ಠ ನಾಗರಿಕತೆಗಳು, ಸಂಸ್ಕೃತಿಗಳು ಮತ್ತು ವಿಚಾರಗಳ ಸಂಗಮವಾಗಿದೆ. ಎಸ್.ಸಿ.ಒ. ನ ಮುಂದಿನ ಇಪ್ಪತ್ತೈದು ವರ್ಷಗಳಲ್ಲಿ, ಜನರಿಂದ ಜನರಿಗೆ ಸಂಬಂಧಗಳು ನಮ್ಮ ಸಹಕಾರದ ಹೃದಯಭಾಗದಲ್ಲಿ ಉಳಿಯಬೇಕು.

ನಮ್ಮ ಯಶಸ್ಸಿನ ನಿಜವಾದ ಅಳತಗೋಲು ನಮ್ಮ ಪ್ರಯತ್ನಗಳು ಯುವಜನರಿಗೆ ಎಷ್ಟು ಹೊಸ ಅವಕಾಶಗಳನ್ನು ಸೃಷ್ಟಿಸುತ್ತವೆ, ನಮ್ಮ ಉದ್ಯಮಿಗಳಿಗೆ ಎಷ್ಟು ಹೊಸ ಮಾರುಕಟ್ಟೆಗಳು ತೆರೆದುಕೊಳ್ಳುತ್ತವೆ, ನಮ್ಮ ರೈತರು ತಂತ್ರಜ್ಞಾನದಿಂದ ಎಷ್ಟು ಪ್ರಯೋಜನ ಪಡೆಯುತ್ತಾರೆ ಮತ್ತು ನಮ್ಮ ನಾಗರಿಕರ ಜೀವನ ಎಷ್ಟು ಉತ್ತಮಗೊಳ್ಳುತ್ತದೆ ಎಂಬುದರಲ್ಲಿದೆ

ಇದು "ಭದ್ರತೆ, ಸಂಪರ್ಕ ಮತ್ತು ಅವಕಾಶ"ದ ನಿಜವಾದ ಅರ್ಥ.

ಎಸ್.ಸಿ.ಒ.ದಲ್ಲಿ ನಮ್ಮ ಸಹಕಾರವು ಕೇವಲ ಸರ್ಕಾರದಿಂದ ನಡೆಸಲ್ಪಡುವಂತಿರಬಾರದು; ಅದು ಜನರಿಂದ ಕೂಡಿರಬೇಕು. ಕಿರ್ಗಿಸ್ತಾನ್ ಅಧ್ಯಕ್ಷತೆಯಲ್ಲಿ, ಎಸ್.ಸಿ.ಒ. ಯೊಳಗೆ ಯುವಜನರ ಭಾಗವಹಿಸುವಿಕೆಗೆ ವಿಶೇಷ ಒತ್ತು ನೀಡಲಾಗಿದೆ ಎಂದು ನನಗೆ ಸಂತೋಷವಾಗಿದೆ. ಭಾರತ ಎಸ್.ಸಿ.ಒ. ಸ್ಟಾರ್ಟ್-ಅಪ್ ಫೋರಂ, ಯುವ ಲೇಖಕರ ಸಮಾವೇಶ ಮತ್ತು ಯುವ ವಿಜ್ಞಾನಿಗಳ ವೇದಿಕೆಯಂತಹ ಉಪಕ್ರಮಗಳನ್ನು ತೆಗೆದುಕೊಂಡಿದೆ.

ಕಳೆದ ವರ್ಷ, ಭಾರತ ಎಸ್.ಸಿ.ಒ ನಾಗರಿಕತಾ ಸಂವಾದ ವೇದಿಕೆಯನ್ನು ಪ್ರಸ್ತಾಪಿಸಿತು. ಈ ವರ್ಷ ಅದರ ಮೊದಲ ಅಧಿವೇಶನ ಭಾರತದಲ್ಲಿ ನಡೆಯಲಿದೆ ಎಂದು ನನಗೆ ಸಂತೋಷವಾಗಿದೆ. ನಿಮ್ಮೆಲ್ಲರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ, ಈ ವೇದಿಕೆ ಎಸ್.ಸಿ.ಒ ಯೊಳಗಿನ ರೋಮಾಂಚಕ ಸಂವಾದಕ್ಕೆ ಬಲವಾದ ವೇದಿಕೆಯಾಗಲಿದೆ ಎಂದು ನನಗೆ ವಿಶ್ವಾಸವಿದೆ.

ಸ್ನೇಹಿತರೇ,

ಕಿರ್ಗಿಸ್ತಾನ್‌ನ ಮಹಾನ್ ಸಾಹಿತಿ ಚಿಂಗಿಜ್ ಐತ್ಮಾಟೋವ್, ಜಗತ್ತಿಗೆ ಸುಂದರವಾದ ಮತ್ತು ಆಳವಾದ ಚಿಂತನೆಯನ್ನು ನೀಡಿದರು. ನಾವು ಹೆಚ್ಚಾಗಿ ನಮ್ಮನ್ನು ವಿಭಜಿಸುವ ವಿಷಯಗಳ ಮೇಲೆ ಹೆಚ್ಚು ಗಮನಹರಿಸುತ್ತೇವೆ ಮತ್ತು ನಮ್ಮನ್ನು ಒಂದುಗೂಡಿಸುವ ವಿಷಯಗಳ ಮೇಲೆ ಕಡಿಮೆ ಗಮನಹರಿಸುತ್ತೇವೆ ಎಂದು ಅವರು ಹೇಳಿದ್ದರು

ಈ ಸಂದೇಶವು ಇಂದು ಎಸ್.ಸಿ.ಒ. ಗೂ ಅಷ್ಟೇ ಪ್ರಸ್ತುತವಾಗಿದೆ. ನಮ್ಮ ವೈವಿಧ್ಯತೆಯು ನಮ್ಮ ಗುರುತು, ಹಾಗು ನಮ್ಮ ಹಂಚಿಕೆಯ ಉದ್ದೇಶವು ನಮ್ಮ ಶಕ್ತಿ. ಬಿಷ್ಕೆಕ್‌ನಿಂದ, ನಾವು ಈ ಸಂಕಲ್ಪದೊಂದಿಗೆ ಮುಂದುವರಿಯಬೇಕು:

ಹಂಚಿಕೆಯ ಭೌಗೋಳಿಕತೆಯಿಂದ ಹಂಚಿಕೆಯ ಅವಕಾಶಗಳತ್ತ,

ದೃಷ್ಟಿಕೋನದಿಂದ ಫಲಿತಾಂಶಗಳತ್ತ,

ಮತ್ತು ಸರ್ಕಾರ-ಚಾಲಿತ ಸಹಕಾರದಿಂದ ಜನ-ಚಾಲಿತ ಪಾಲುದಾರಿಕೆಯತ್ತ.

ಇದೇ ನಂಬಿಕೆ ಮತ್ತು ಬದ್ಧತೆಯೊಂದಿಗೆ, ಭಾರತವು ಎಸ್.ಸಿ.ಒ. ಕುಟುಂಬದ ಹಂಚಿಕೆಯ ಪ್ರಯಾಣಕ್ಕೆ ಕೊಡುಗೆ ನೀಡಲು ಸಿದ್ಧವಾಗಿದೆ.

ಹೃತ್ಪೂರ್ವಕ ಧನ್ಯವಾದಗಳು.

ಘೋಷಣೆ ಇದು ಪ್ರಧಾನಮಂತ್ರಿ ಅವರ ಹೇಳಿಕೆಯ ಸರಿಸುಮಾರಾದ ಭಾಷಾಂತರವಾಗಿದೆ. ಮೂಲ ಹೇಳಿಕೆಯನ್ನು ಹಿಂದಿಯಲ್ಲಿ ನೀಡಲಾಗಿದೆ.