22 lakh houses to be constructed in UP, 21.5 already approved, 14 lakh families already got their housing unit
Guru Saheb’s life and message inspires us to take on the challenges while following the path of service and truth: PM Modi
Uttar Pradesh is among the states that are moving the fastest on building houses for the poor: PM Modi
Aatmnirbhar Bharat is directly linked to the self-confidence of the country’s citizens and a house of one’s own enhances this self-confidence manifold: PM

ನಿಮ್ಮೆಲ್ಲರಿಗೂ, ಅದರಲ್ಲೂ ವಿಶೇಷವಾಗಿ ತಾಯಂದಿರು ಮತ್ತು ಸಹೋದರಿಯರಿಗೆ ಅಭಿನಂದನೆಗಳು. ಬಹಳ ಬೇಗ ನೀವು ನಿಮ್ಮದೇ ಆದ ಮನೆಯನ್ನು, ಕನಸಿನ ಮನೆಯನ್ನು ಪಡೆಯಲಿದ್ದೀರಿ. ಕೆಲವು ದಿನಗಳ ಹಿಂದೆ, ಸೂರ್ಯ ಉತ್ತರಾಯಣ ಪ್ರವೇಶಿಸಿದ್ದಾನೆ. ಉತ್ತಮ ಆಶಯಗಳಿಗೆ ಇದು ಸೂಕ್ತ ಮತ್ತು ಪ್ರಶಸ್ತ ಕಾಲ ಎಂದು ಹೇಳಲಾಗುತ್ತದೆ. ಈ ಪ್ರಶಸ್ತ ಕಾಲದಲ್ಲಿ ನಿಮ್ಮ ಮನೆ ನಿರ್ಮಾಣ ಮಾಡಲು ನಿಮಗೆ ಹಣ ದೊರೆತರೆ, ಸಂತೋಷ ಇನ್ನಷ್ಟು ಹೆಚ್ಚಾಗುತ್ತದೆ. ಕೆಲವು ದಿನಗಳ ಹಿಂದೆ, ದೇಶವು ವಿಶ್ವದ ಅತ್ಯಂತ ದೊಡ್ಡ ಕೊರೊನಾ ಲಸಿಕಾ ಕಾರ್ಯಕ್ರಮವನ್ನು ಆರಂಭಿಸಿದೆ. ಇದು ಜನರ ಉತ್ಸಾಹವನ್ನು ಹೆಚ್ಚಿಸುತ್ತಿದೆ. ನಿಮ್ಮೆಲ್ಲರೊಂದಿಗೆ ಸಂವಾದ ನಡೆಸುವ ಅವಕಾಶ ನನಗೆ ಲಭಿಸಿತ್ತು. ನೀವು ಕೂಡಾ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದೀರಿ ಮತ್ತು ಆಶೀರ್ವಾದಗಳನ್ನು ನೀಡಿದ್ದೀರಿ. ಮತ್ತು ನಾನು ನಿಮ್ಮ ಮುಖಗಳಲ್ಲಿ ಸಂತೋಷ ಹಾಗು ತೃಪ್ತಿಯನ್ನು ಕಾಣುತ್ತಿದ್ದೇನೆ. ಶ್ರೇಷ್ಟ ಬದುಕಿನ ಅತ್ಯಂತ ದೊಡ್ಡ ಕನಸು ನನಸಾಗುತ್ತಿದೆ. ನಾನಿದನ್ನು ನಿಮ್ಮ ಕಣ್ಣುಗಳಲ್ಲಿ ಕಾಣುತ್ತಿದ್ದೇನೆ. ನಿಮ್ಮ ಸಂತೋಷ ಮತ್ತು ಸೌಲಭ್ಯಯುಕ್ತ ಅನುಕೂಲಕರ ಜೀವನ ನನಗೆ ಅತ್ಯಂತ ದೊಡ್ಡ ಆಶೀರ್ವಾದ ಮತ್ತು ನಾನು ಪ್ರಧಾನ ಮಂತ್ರಿ ಆವಾಸ್ ಯೋಜನಾ-ಗ್ರಾಮೀಣದ ಎಲ್ಲಾ ಫಲಾನುಭವಿಗಳಿಗೆ ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಈ ಕಾರ್ಯಕ್ರಮದಲ್ಲಿ ನನ್ನೊಂದಿಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಜೀ , ನಮ್ಮ ಸಂಪುಟ ಸಹೋದ್ಯೋಗಿಗಳಾದ ಶ್ರೀ ನರೇಂದ್ರ ಸಿಂಗ್ ತೋಮರ್ ಜೀ, ಉತ್ತರ ಪ್ರದೇಶದ ಪ್ರಖ್ಯಾತ ಮುಖ್ಯಮಂತ್ರಿಗಳಾದ ಶ್ರೀ ಯೋಗಿ ಆದಿತ್ಯನಾಥ ಜೀ , ಉತ್ತರ ಪ್ರದೇಶ ಗ್ರಾಮೀಣಾಭಿವೃದ್ಧಿ ಸಚಿವರಾದ ಮಹೇಂದ್ರ ಸಿಂಗ್ ಜೀ, ಈ ಎಲ್ಲಾ ಫಲಾನುಭವಿಗಳು, ವಿವಿಧ ಗ್ರಾಮಗಳ ಸಹೋದರರು ಮತ್ತು ಸಹೋದರಿಯರು ಸೇರಿಕೊಂಡಿದ್ದಾರೆ. ಇಂದು ಹತ್ತನೇ ಗುರು ಗೋವಿಂದ ಸಿಂಗ್ ಜೀ ಅವರ ಜನ್ಮ ದಿನ .ಈ ಪವಿತ್ರ ಸಂದರ್ಭದಲ್ಲಿ ಗುರು ಗೋವಿಂದ ಸಿಂಗ್ ಸಾಹೇಬ್ ಅವರಿಗೆ ನಾನು ಶಿರಬಾಗಿ ನಮಿಸುತ್ತೇನೆ. ಈ ಸಂದರ್ಭದಲ್ಲಿ ನಾನು ನನ್ನ ದೇಶವಾಸಿಗಳಿಗೆ ಹೃದಯಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ. ಗುರು ಸಾಹೀಬ್ ಅವರು ನನ್ನ ವಿಷಯದಲ್ಲಿ ಕರುಣಾಳುಗಳಾಗಿರುವುದು ನನ್ನ ಭಾಗ್ಯ. ಗುರು ಸಾಹೀಬ್ ಈ ಸೇವಕನಿಂದ ನಿರಂತರ ಸೇವೆಗಳನ್ನು ಪಡೆಯುತ್ತಿದ್ದಾರೆ. ಸೇವೆ ಮತ್ತು ಸತ್ಯದ ಮಾರ್ಗದಲ್ಲಿ ನಡೆಯುವಾಗ ನಾವು ಜೀವನದ ಬಹಳ ದೊಡ್ಡ ಸವಾಲುಗಳನ್ನು ಎದುರಿಸುವುದಕ್ಕೂ ಗುರು ಗೋವಿಂದ ಸಿಂಗ್ ಜೀ ಅವರ ಬದುಕು ಪ್ರೇರಣೆ ನೀಡುತ್ತದೆ. "सवा लाख से एक लड़ाऊँ, चिड़ियों से मैं बाज लड़ाऊँ, तबे गोबिंदसिंह नाम कहाऊँ" (ಓರ್ವ ಹೋರಾಟಗಾರ 1.25 ಲಕ್ಷಕ್ಕೆ ಸಮ, ಗುಬ್ಬಚ್ಚಿಗಳು ಗಿಡುಗನ ಜೊತೆ ಹೋರಾಡುವಂತೆ ಮಾಡುತ್ತೇನೆ, ಆಗ ಮಾತ್ರ ನಾನು ಗೋವಿಂದ ಸಿಂಗ್ ಎಂದು ಕರೆಸಿಕೊಳ್ಳುತ್ತೇನೆ”) ಈ ಅದಮ್ಯ ಸ್ಪೂರ್ತಿ ಧೈರ್ಯ, ಸೇವೆ ಮತ್ತು ಸತ್ಯದ ಶಕ್ತಿಯಿಂದ ಬರುತ್ತದೆ. ಗುರು ಗೋವಿಂದ ಸಿಂಗ್ ಜೀ ತೋರಿದ ಹಾದಿಯಲ್ಲಿ ದೇಶವು ಮುನ್ನಡೆಯುತ್ತಿದೆ. ದೇಶದಲ್ಲಿಂದು ಬಡವರ, ಬಲಿಪಶುಗಳಾದವರ , ಶೋಷಣೆಗೆ ಒಳಗಾದವರ ಮತ್ತು ನಿರ್ಗತಿಕರ ಬದುಕನ್ನು ಬದಲಾಯಿಸಲು ಮತ್ತು ಅವರ ಸೇವೆ ಮಾಡಲು ಅಭೂತಪೂರ್ವ ರೀತಿಯಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ.

ಐದು ವರ್ಷಗಳ ಹಿಂದೆ, ಪ್ರಧಾನ ಮಂತ್ರಿ ಆವಾಸ್ ಯೋಜನಾವನ್ನು ಉತ್ತರ ಪ್ರದೇಶದಲ್ಲಿರುವ ಆಗ್ರಾದಿಂದ ಆರಂಭ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಇಂತಹ ಅತ್ಯಲ್ಪ ಸಮಯದಲ್ಲಿ, ಈ ಯೋಜನೆಯು ದೇಶದ ಗ್ರಾಮಗಳ ಚಿತ್ರಣವನ್ನು ಬದಲು ಮಾಡಲು ಆರಂಭಿಸಿದೆ. ಕೋಟ್ಯಾಂತರ ಜನರ ನಿರೀಕ್ಷೆಗಳು ಮತ್ತು ಕನಸುಗಳು ಈ ಯೋಜನೆಯ ಜೊತೆ ಜೋಡಿಸಲ್ಪಟ್ಟಿವೆ. ಪ್ರಧಾನ ಮಂತ್ರಿ ಆವಾಸ್ ಯೋಜನಾ ಬಡವರಲ್ಲಿ ಬಡವರಿಗೆ “ಹೌದು, ಇಂದಲ್ಲದಿದ್ದರೆ ನಾಳೆ, ನಾನು ಕೂಡಾ ನನ್ನದೇ ಮನೆಯನ್ನು ಹೊಂದಬಲ್ಲೆ” ಎಂಬ ಭರವಸೆಯನ್ನು ಮೂಡಿಸಿದೆ.

ಸ್ನೇಹಿತರೇ,

ಗ್ರಾಮೀಣ, ಹಳ್ಳಿ ಪ್ರದೇಶಗಳಲ್ಲಿರುವ ಬಡವರಿಗೆ ಮನೆಗಳನ್ನು ನಿರ್ಮಿಸುವ ಕೆಲಸ ತ್ವರಿತಗತಿಯಿಂದ ಸಾಗುತ್ತಿರುವ ರಾಜ್ಯಗಳಲ್ಲಿ ಉತ್ತರ ಪ್ರದೇಶ ಕೂಡಾ ಇರುವುದು ನನಗೆ ಸಂತೋಷ ತಂದಿದೆ. ಈ ಕಾರ್ಯಕ್ರಮ ಈ ವೇಗಕ್ಕೆ ಒಂದು ಉದಾಹರಣೆ. ಇಂದು ಸುಮಾರು 2700 ಕೋ.ರೂ.ಗಳನ್ನು ನೇರವಾಗಿ ಉತ್ತರ ಪ್ರದೇಶದ ಆರು ಲಕ್ಷಕ್ಕೂ ಅಧಿಕ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ. ಇದರಲ್ಲಿ ತಮ್ಮ ಮನೆಯನ್ನು ಕಟ್ಟಲು ಮೊದಲ ಕಂತಿನ ಹಣ ಪಡೆದ ಐದು ಲಕ್ಷಕ್ಕೂ ಅಧಿಕ ಕುಟುಂಬಗಳೂ ಸೇರಿವೆ. ಅಂದರೆ, ಐದು ಲಕ್ಷಕ್ಕೂ ಅಧಿಕ ಕುಟುಂಬಗಳ ಕಾಯುವಿಕೆ ಇಂದು ಮುಕ್ತಾಯಗೊಳ್ಳುತ್ತಿದೆ. ಇಂದು ನಿಮಗೆಲ್ಲರಿಗೂ ಶುಭ ದಿನ ಮತ್ತು ಅದು ಪವಿತ್ರ ಕೂಡಾ, ನಾನು ನಿಮ್ಮ ಭಾವನೆಯನ್ನು ಅರ್ಥ ಮಾಡಿಕೊಳ್ಳಬಲ್ಲೆ. ಇದು ನನಗೆ ತೃಪ್ತಿಯ ಭಾವನೆಯನ್ನು ನೀಡುತ್ತಿದೆ ಮತ್ತು ಬಡವರಿಗೆ ಇನ್ನಷ್ಟನ್ನು ಮಾಡಲು ಪ್ರೇರೇಪಣೆ ನೀಡುತ್ತಿದೆ. ಅದೇ ರೀತಿ ಇಂದು ಅಲ್ಲಿ 80,000 ಕುಟುಂಬಗಳು ತಮ್ಮ ಮನೆಯ ಎರಡನೆಯ ಕಂತಿನ ಹಣವನ್ನು ಪಡೆಯುತ್ತಿವೆ. ಈಗ ಮುಂದಿನ ಚಳಿಗಾಲ ನಿಮ್ಮ ಕುಟುಂಬಕ್ಕೆ ಕಠಿಣವಾಗಿರಲಾರದು. ನೀವು ಮುಂದಿನ ಚಳಿಗಾಲದ ವೇಳೆಗೆ ನಿಮ್ಮ ಮನೆಯನ್ನು ಹೊಂದಿರುತ್ತೀರಿ ಮತ್ತು ಮನೆಯಲ್ಲಿ ಸವಲತ್ತುಗಳು ಇರುತ್ತವೆ.

ಸ್ನೇಹಿತರೇ,

ಆತ್ಮನಿರ್ಭರ ಭಾರತ ನೇರವಾಗಿ ದೇಶದ ನಾಗರಿಕರ ಆತ್ಮವಿಶ್ವಾಸವನ್ನು ಅವಲಂಬಿಸಿರುತ್ತದೆ. ಮತ್ತು ಮನೆ ಒಂದು ವ್ಯವಸ್ಥೆ;ಅದು ವ್ಯಕ್ತಿಯ ಆತ್ಮವಿಶ್ವಾಸವನ್ನು ಹಲವು ಪಟ್ಟು ಹೆಚ್ಚಿಸುವ ಗೌರವಾನ್ವಿತ ಉಡುಗೊರೆ. ನೀವು ನಿಮ್ಮದೇ ಮನೆಯನ್ನು ಹೊಂದಿದ್ದರೆ, ಅಲ್ಲಿ ನಿರ್ದಿಷ್ಟತೆ, ಖಚಿತತೆ ಇರುತ್ತದೆ. ಆತ ಒಂದು ವೇಳೆ ಜೀವನದಲ್ಲಿ ಯಾವುದೇ ಏರಿಳಿತಗಳು ಬಂದರೂ ಅಲ್ಲಿ ಮನೆಯೊಂದು ಸಹಾಯಕ್ಕಿದೆ ಎಂದು ಭಾವಿಸುತ್ತಾನೆ. ಆತ ತಾನು ಮನೆ ಕಟ್ಟಿರುವಾಗ, ತನ್ನ ಬಡತನವನ್ನೂ ಒಂದು ದಿನ ಹೊಡೆದೋಡಿಸುತ್ತಾನೆ. ಆದರೆ ಈ ಹಿಂದಿನ ಸರಕಾರಗಳ ಅವಧಿಯಲ್ಲಿ ಯಾವ ಸ್ಥಿತಿ ಇತ್ತು ಎಂಬುದನ್ನು ನಾವು ನೋಡಿದ್ದೇವೆ. ನಾನು ನಿರ್ದಿಷ್ಟವಾಗಿ ಉತ್ತರಪ್ರದೇಶದ ಬಗೆಗೆ ಮಾತನಾಡುತ್ತಿದ್ದೇನೆ. ಬಡವರು ತಮಗೆ ಮನೆ ಕಟ್ಟಲು ಸರಕಾರ ಸಹಾಯ ಮಾಡುತ್ತದೆ ಎಂಬುದನ್ನು ನಂಬುತ್ತಿರಲಿಲ್ಲ. ಈ ಮೊದಲಿನ ಮನೆ ಯೋಜನೆಗಳು, ಅವುಗಳಡಿಯಲ್ಲಿ ನಿರ್ಮಾಣವಾದ ಮನೆಗಳ ಮಟ್ಟ ಇತ್ಯಾದಿ ವಿಷಯಗಳು ಯಾರಿಗೂ ಗೊತ್ತಿಲ್ಲದೆ ಇಲ್ಲ. ದೋಷ ಇದ್ದದ್ದು ತಪ್ಪು ನೀತಿಯಲ್ಲಿ. ಆದರೆ ನನ್ನ ಬಡ ಸಹೋದರರು ಮತ್ತು ಸಹೋದರಿಯರು “ಅದೃಷ್ಟ”ದ ಹೆಸರಿನಲ್ಲಿ ತೊಂದರೆಗಳನ್ನು ಅನುಭವಿಸಬೇಕಾಯಿತು. ಪ್ರಧಾನ ಮಂತ್ರಿ ಆವಾಸ್ ಯೋಜನಾ –ಗ್ರಾಮೀಣವನ್ನು ಗ್ರಾಮೀಣ ಪ್ರದೆಶಗಳಲ್ಲಿ ಬದುಕುತ್ತಿರುವ ಬಡವರನ್ನು ಈ ಸಮಸ್ಯೆಯಿಂದ ಮುಕ್ತ ಮಾಡಲು ಮತ್ತು ಅವರಿಗೆ ಪಕ್ಕಾ ಮನೆಯನ್ನು ಒದಗಿಸುವುದಕ್ಕಾಗಿ ಆರಂಭಿಸಲಾಯಿತು. 75 ವರ್ಷಗಳ ಸ್ವಾತಂತ್ರ್ಯೋತ್ಸವದ ವೇಳೆಗೆ ಪ್ರತೀ ಬಡ ಕುಟುಂಬಕ್ಕೂ ಪಕ್ಕಾ ಮನೆ ಒದಗಿಸುವ ಗುರಿಯನ್ನು ದೇಶವು ಹಾಕಿಕೊಂಡಿದೆ. ಈ ಗುರಿಯನ್ನು ಸಾಧಿಸಲು ಕಳೆದ ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು ಎರಡು ಕೋಟಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಅದೂ ಪ್ರಧಾನ ಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ 1.25 ಕೋಟಿ ಮನೆಗಳ ಕೀಲಿ ಕೈಯನ್ನು ಜನತೆಗೆ ಹಸ್ತಾಂತರಿಸಲಾಗಿದೆ. ಸುಮಾರು 1.5 ಲಕ್ಷ ಕೋಟಿ ರೂಪಾಯಿಗಳನ್ನು ಕೇಂದ್ರ ಸರಕಾರವು ಈ ಮನೆಗಳನ್ನು ಕಟ್ಟುವುದಕ್ಕಾಗಿ ಮಂಜೂರು ಮಾಡಿದೆ.

ಸ್ನೇಹಿತರೇ,

ಉತ್ತರ ಪ್ರದೇಶದ ವಸತಿ ಯೋಜನೆಗೆ ಸಂಬಂಧಿಸಿ ನನಗೆ ಹಳೆಯ ನೆನಪುಗಳು ಬರುತ್ತಿವೆ. ಈ ಮೊದಲ ಸರಕಾರಗಳು ಇದ್ದಾಗ, ಬಳಿಕ ನೀವು ಅವುಗಳನ್ನು ತೆಗೆದು ಹಾಕಿದಿರಿ, ನನಗೆ ನೆನಪಿದೆ , 2016ರಲ್ಲಿ ನಾವು ಈ ಯೋಜನೆಯನ್ನು ಆರಂಭಿಸಿದೆವು ಮತ್ತು ಅಲ್ಲಿ ಹಲವಾರು ತೊಂದರೆಗಳಿದ್ದವು. ಭಾರತ ಸರಕಾರದ ಪರವಾಗಿ ನನ್ನ ಕಚೇರಿಯಿಂದ ಹಲವಾರು ಪತ್ರಗಳನ್ನು ಹಿಂದಿನ ಸರಕಾರಗಳಿಗೆ ಬರೆಯಲಾಗಿತ್ತು. ಈ ಯೋಜನೆ ಅಡಿಯಲ್ಲಿ ಬಡ ಫಲಾನುಭವಿಗಳಿಗೆ ಅವರ ಖಾತೆಗಳಿಗೆ ಹಣ ಕಳುಹಿಸಲು ಅನುಕೂಲವಾಗುವಂತೆ ಅವರ ಹೆಸರುಗಳನ್ನು ಕಳುಹಿಸಿಕೊಡುವಂತೆ ಕೋರಲಾಗಿತ್ತು. ನಾವು ಹಣ ಕಳುಹಿಸಲು ತಯಾರಾಗಿದ್ದೆವು. ಆದರೆ ಕೇಂದ್ರ ಸರಕಾರದ ಎಲ್ಲ ಪತ್ರಗಳನ್ನೂ, ಸಭೆಗಳಲ್ಲಿ ಮಾಡಲಾದ ಎಲ್ಲಾ ಕೋರಿಕೆಗಳನ್ನೂ ನಿರ್ಲಕ್ಷಿಸಲಾಯಿತು. ಉತ್ತರ ಪ್ರದೇಶದ ಬಡವರು ಆ ಸರಕಾರದ ವರ್ತನೆಯನ್ನು ಇಂದಿಗೂ ಮರೆತಿಲ್ಲ. ಇಂದು ಯೋಗೀ ಜೀ ಸರಕಾರದ ಸಕಾಲಿಕ ಕ್ರಮ ಮತ್ತು ಅವರ ಇಡೀ ತಂಡದ ಕಠಿಣ ಶ್ರಮ ವಸತಿ ಯೋಜನೆಯ ವೇಗ ಮತ್ತು ದಿಕ್ಕನ್ನು ಬದಲಾಯಿಸಿದೆ. ಈ ಯೋಜನೆ ಅಡಿಯಲ್ಲಿ ಸುಮಾರು 22 ಲಕ್ಷ ಗ್ರಾಮೀಣ ಮನೆಗಳನ್ನು ಉತ್ತರ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಇವುಗಳಲ್ಲಿ 21.5 ಲಕ್ಷ ಮನೆಗಳು ಈಗಾಗಲೇ ಮಂಜೂರಾಗಿವೆ. ಇಷ್ಟೊಂದು ಅಲ್ಪ ಕಾಲಾವಧಿಯಲ್ಲಿ ಉತ್ತರ ಪ್ರದೇಶದ ಹಳ್ಳಿಗಳಲ್ಲಿರುವ 14.5 ಲಕ್ಷ ಬಡ ಕುಟುಂಬಗಳು ಅವರ ಪಕ್ಕಾ ಮನೆಯನ್ನು ಪಡೆದಿವೆ. ಮತ್ತು ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಗಳ ವಸತಿ ಯೋಜನೆಯ ಬಹುಪಾಲು ಕೆಲಸ ಈ ಸರಕಾರದ ಅವಧಿಯಲ್ಲಿ ಆಗಿದೆ ಎಂಬುದು ಇಂದು ನನಗೆ ಬಹಳ ಆನಂದವನ್ನುಂಟು ಮಾಡಿದೆ.

ಸ್ನೇಹಿತರೇ,

ನಮ್ಮ ದೇಶದಲ್ಲಿ ವಸತಿ ಯೋಜನೆಗಳಿಗೆ ದಶಕದ ಇತಿಹಾಸವಿದೆ. ಈ ಮೊದಲೂ ಬಡವರಿಗೆ ಉತ್ತಮ ಮತ್ತು ಕೈಗೆಟಕುವ ದರದಲ್ಲಿ ಮನೆಗಳ ಅವಶ್ಯಕತೆ ಇತ್ತು. ಆದರೆ ಆ ಯೋಜನೆಗಳ ಅನುಭವ ಬಡವರಿಗೆ ಬಹಳ ಕಹಿಯಾದುದಾಗಿತ್ತು. ಹಾಗಾಗಿ, ಕೇಂದ್ರ ಸರಕಾರವು ನಾಲ್ಕೈದು ವರ್ಷಗಳ ಹಿಂದೆ ಈ ವಸತಿ ಯೋಜನೆಗಳ ಬಗ್ಗೆ ಕಾರ್ಯನಿರತವಾಗಿದ್ದಾಗ, ನಾವು ಈ ಎಲ್ಲಾ ತಪ್ಪುಗಳಿಂದ ಮುಕ್ತರಾಗಲು ವಿಶೇಷ ಗಮನವನ್ನು ಕೊಟ್ಟೆವು. ಮತ್ತು ತಪ್ಪು ನೀತಿಗಳನ್ನು ಕೈಬಿಟ್ಟು ಹೊಸ ದಾರಿಗಳನ್ನು ಹಾಗು ನೀತಿಗಳನ್ನು ರೂಪಿಸಲು ತೊಡಗಿದೆವು. ಮತ್ತು ಹಳ್ಳಿಗಳಲ್ಲಿರುವ ಬಡವರಿಗೆ, ಮನೆಗಳನ್ನು ಹೊಂದುವ ಭರವಸೆಯನ್ನೇ ಕಳೆದುಕೊಂಡವರಿಗೆ, ಜೀವನವನ್ನು ಫುಟ್ ಪಾತ್ ಗಳಲ್ಲಿ, ಗುಡಿಸಲುಗಳಲ್ಲಿ ಕಳೆಯಬೇಕಾಗುತ್ತದೆ ಎಂದು ಭಾವಿಸಿಕೊಂಡವರಿಗೆ ಮೊದಲು ಈ ಮನೆಗಳು ದೊರೆಯಬೇಕು. ಆದುದರಿಂದ, ಅವರ ಚಿಂತೆ ನಮ್ಮ ಮೊದಲ ಆದ್ಯತೆಯಾಗಿತ್ತು. ಎರಡನೇಯದಾಗಿ ಮಂಜೂರಾತಿಯಲ್ಲಿ ಸಂಪೂರ್ಣ ಪಾರದರ್ಶಕತೆ ಇರುತ್ತದೆ ಎಂದು ನಾವು ಹೇಳಿದ್ದೆವು, ಸ್ವಜನ ಪಕ್ಷಪಾತ ಇಲ್ಲ, ಮತ ಬ್ಯಾಂಕ್ ಇಲ್ಲ, ಜಾತಿ ಇಲ್ಲ ಎಂಬುದಾಗಿಯೂ ಹೇಳಿದ್ದೆವು. ಅರ್ಹ ಬಡವರಿಗೆ ಮೊದಲು ಎಂದಿದ್ದೆವು. ಮೂರನೇಯದಾಗಿ ಘನತೆ, ಸ್ವಾಭಿಮಾನ ಮತ್ತು ಮಹಿಳೆಯರ ಹಕ್ಕುಗಳಿಗೆ ಪ್ರಾಧಾನ್ಯ ನೀಡಲಾಯಿತು. ಮತ್ತು ಅದರಿಂದಾಗಿ ಮಹಿಳೆಯರಿಗೆ ಮನೆಗಳನು ಒದಗಿಸಲು ತೀರ್ಮಾನಿಸಲಾಯಿತು ಮತ್ತು ಅವರು ಇದರ ಮಾಲಕರಾಗಬೇಕು ಎಂದು ನಿರ್ಧರಿಸಲಾಯಿತು. ನಾಲ್ಕನೇಯದಾಗಿ, ಮನೆಗಳ ನಿರ್ಮಾಣ ಕಾರ್ಯವನ್ನು ತಂತ್ರಜ್ಞಾನದ ಮೂಲಕ ಮೇಲುಸ್ತುವಾರಿ ಮಾಡಲು ನಿರ್ಧರಿಸಲಾಯಿತು. ಮನೆಗಳನ್ನು ಬರೇ ಕಲ್ಲು ಮತ್ತು ಇಟ್ಟಿಗೆಗಳಿಂದ ನಿರ್ಮಾಣ ಮಾಡುವುದಲ್ಲ. ಮನೆಗಳು ಬರೇ ನಾಲ್ಕು ಗೋಡೆಗಳನ್ನು ಮಾತ್ರ ಹೊಂದಿರುವುದಲ್ಲ. ಅವುಗಳು ವ್ಯಕ್ತಿಯು ನೈಜ ಅರ್ಥದಲ್ಲಿ ಜೀವನವನ್ನು ಅನುಭವಿಸುವ ಎಲ್ಲ ಸೌಲಭ್ಯಗಳನ್ನು ಹೊಂದಿರಬೇಕು. ಪ್ರಧಾನ ಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ ಈ ಮನೆಗಳನ್ನು ಗುಡಿಸಲುಗಳಲ್ಲಿ ವಾಸಿಸುತ್ತಿರುವ, ತಮ್ಮದೇ ಪಕ್ಕಾ ಮನೆಗಳನ್ನು ಹೊಂದಿರದ ಕುಟುಂಬಗಳಿಗೆ ವಿತರಿಸಲಾಗುತ್ತದೆ. ಹಳ್ಳಿಗಳಲ್ಲಿ ವಾಸಿಸುತ್ತಿರುವ ಸಾಮಾನ್ಯ ಕರಕುಶಲ ಕರ್ಮಿಗಳು, ನಮ್ಮ ದಿನಗೂಲಿ ಕಾರ್ಮಿಕರು, ಮತ್ತು ಕೃಷಿ ಕಾರ್ಮಿಕರು ಇದರಲ್ಲಿ ಸೇರಿದ್ದಾರೆ. ಹಳ್ಳಿಗಳಲ್ಲಿ ವಾಸಿಸುತ್ತಿರುವ ಒಂದು ಅಥವಾ ಎರಡು ಬಿಘಾ ಭೂಮಿ ಹೊಂದಿರುವ ಬಡ ರೈತರು ಇದರಿಂದ ಹೆಚ್ಚು ಲಾಭ ಪಡೆಯಲಿದ್ದಾರೆ. ನಮ್ಮ ದೇಶದಲ್ಲಿ ಬೃಹತ್ ಸಂಖ್ಯೆಯ ಭೂ ರಹಿತ ಕಾರ್ಮಿಕರು ಇದ್ದಾರೆ. ಅವರು ಹೇಗಾದರೂ ಬದುಕಿಕೊಂಡಿದ್ದಾರೆ. ಅವರ ಹಲವಾರು ತಲೆಮಾರುಗಳೇ ಆಗಿ ಹೋಗಿವೆ, ಅವರು ತಮ್ಮ ಕಠಿಣ ಪರಿಶ್ರಮದ ಮೂಲಕ ದೇಶಕ್ಕೆ ಅನ್ನಾಹಾರ ನೀಡುತ್ತಿದ್ದಾರೆ. ಆದರೆ ಅವರಿಗೆ ಪಕ್ಕಾ ಮನೆ ಹೊಂದುವುದು ಸಾಧ್ಯವಾಗಿಲ್ಲ. ಇಂದು, ಇಂತಹ ಎಲ್ಲಾ ಕುಟುಂಬಗಳನ್ನೂ ಗುರುತಿಸಿ ಈ ಯೋಜನೆಯ ಜೊತೆ ಸೇರಿಸಲಾಗುತ್ತಿದೆ. ಈ ಯೋಜನೆಯ ಬಹುಪಾಲು ಮನೆಗಳು ಮಹಿಳೆಯರ ಹೆಸರಿನಲ್ಲಿ ನೀಡಲ್ಪಡುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳ ಮಹಿಳೆಯರ ಸಶಕ್ತೀಕರಣಕ್ಕೆ ಪ್ರಮುಖ ಮಾಧ್ಯಮಗಳಾಗಲಿವೆ. ಭೂಮಿ ಇಲ್ಲದವರಿಗೆ ಭೂಮಿಯನ್ನು ಲೀಸ್ ಮೇಲೆ ನೀಡಲಾಗುತ್ತದೆ. ಇಡೀ ಆಂದೋಲನದ ಪ್ರಮುಖ ಭಾಗವೆಂದರೆ ಮನೆ ಕಟ್ಟುತ್ತಿರುವ ಬಡವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ನೇರವಾಗಿ ಜಮಾ ಮಾಡಲಾಗುತ್ತದೆ. ಕೇಂದ್ರ ಮತ್ತು ಉತ್ತರ ಪ್ರದೇಶ ಸರಕಾರಗಳು ಯಾವುದೇ ಫಲಾನುಭವಿಗೆ ಯಾವುದೇ ಸಮಸ್ಯೆ ಎದುರಾಗದಂತೆ ಖಾತ್ರಿಪಡಿಸಲು ಮತ್ತು ಭ್ರಷ್ಟಾಚಾರದ ಬಲಿಪಶುವಾಗದಂತೆ ನೋಡಿಕೊಳ್ಳಲು ಸತತವಾಗಿ ಪ್ರಯತ್ನಗಳನ್ನು ಮಾಡುತ್ತಿವೆ.

ಸ್ನೇಹಿತರೇ,

ಇಂದು, ದೇಶವು ಹಳ್ಳಿಗಳು ಮತ್ತು ನಗರಗಳ ನಡುವೆ ಮೂಲ ಸೌಕರ್ಯಗಳಿಗೆ ಸಂಬಂಧಿಸಿ ಇರುವ ಅಂತರವನ್ನು ಜೋಡಿಸುವ ನಿಟ್ಟಿನಲ್ಲಿ ಕಾರ್ಯತತ್ಪರವಾಗಿದೆ. ಸಾಮಾನ್ಯ ಮನುಷ್ಯನ ಬದುಕು ಮತ್ತು ಹಳ್ಳಿಗಳ ಬಡವರ ಬದುಕು ದೊಡ್ಡ ನಗರಗಳಲ್ಲಿರುವಂತೆ ಅನುಕೂಲತೆಗಳಿಂದ ಕೂಡಿರಬೇಕು. ಅದಕ್ಕಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನಾವನ್ನು ಶೌಚಾಲಯ, ವಿದ್ಯುತ್, ನೀರು, ಇತ್ಯಾದಿ ಮೂಲಸೌಕರ್ಯಗಳ ಜೊತೆ ಬೆಸೆಯಲಾಗುತ್ತಿದೆ. ವಿದ್ಯುತ್ ಸಂಪರ್ಕಗಳು, ಅನಿಲ ಸಂಪರ್ಕಗಳು, ಶೌಚಾಲಯಗಳು, -ಇವೆಲ್ಲವುಗಳನ್ನು ಮನೆಗಳ ಜೊತೆ ಒದಗಿಸಲಾಗುತ್ತಿದೆ. ದೇಶವು ಈಗ “ಜಲ ಜೀವನ ಆಂದೋಲನ” ವನ್ನು ಹಳ್ಳಿಗಳಿಗೆ ಶುದ್ಧ ನಳ್ಳಿ ನೀರನ್ನು ಒದಗಿಸುವುದಕ್ಕಾಗಿ ಕೈಗೆತ್ತಿಕೊಂಡಿದೆ. ಇದರ ಉದ್ದೇಶ ಯಾರೇ ಬಡವರು ಮೂಲಸೌಕರ್ಯಗಳಿಗಾಗಿ ಪರದಾಡುವಂತಾಗಬಾರದು ಎಂಬುದಾಗಿದೆ.

ಸಹೋದರರೇ ಮತ್ತು ಸಹೋದರಿಯರೇ,

ನಮ್ಮ ಹಳ್ಳಿಗಳ ಜನರಿಗೆ ಸಹಾಯ ಮಾಡುತ್ತಿರುವ ಇನ್ನೊಂದು ಉಪಕ್ರಮ ಎಂದರೆ ಪ್ರಧಾನ ಮಂತ್ರಿ “ಸ್ವಾಮಿತ್ವ ಯೋಜನಾ” ಮತ್ತು ಇದರ ಪೂರ್ಣ ಪ್ರಯೋಜನವನ್ನು ಜನರು ಪಡೆಯಬೇಕು ಎನ್ನುವುದು ನನ್ನ ಆಶಯವಾಗಿದೆ. ಬರಲಿರುವ ದಿನಗಳಲ್ಲಿ ಈ ಯೋಜನೆಯು ದೇಶದ ಹಳ್ಳಿಗಳಲ್ಲಿ ವಾಸಿಸುತ್ತಿರುವ ಜನರ ಅದೃಷ್ಟವನ್ನು ಬದಲಾಯಿಸಬಲ್ಲದು. ಮತ್ತು ಪ್ರಧಾನ ಮಂತ್ರಿ ಸ್ವಾಮಿತ್ವ ಯೋಜನಾ ಅನುಷ್ಟಾನಗೊಳ್ಳುತ್ತಿರುವ ರಾಜ್ಯಗಳಲ್ಲಿ ಉತ್ತರ ಪ್ರದೇಶ ಮೊದಲ ರಾಜ್ಯವಾಗಿದೆ ಹಾಗು ಹಳ್ಳಿಗಳಲ್ಲಿ ಕೆಲಸ ಸಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ಹಳ್ಳಿಗಳಲ್ಲಿ ವಾಸಿಸುತ್ತಿರುವ ಜನರಿಗೆ ಅವರ ಮನೆಗಳನ್ನು ಮತ್ತು ಭೂಮಿಯನ್ನು ತಂತ್ರಜ್ಞಾನ ಬಳಸಿ ಅಳತೆ ಮಾಡಿದ ಬಳಿಕ ಅವರಿಗೆ ಭೂಮಿಯ ಮಾಲಕತ್ವ ದಾಖಲೆಯನ್ನು ನೀಡಲಾಗುತ್ತದೆ. ಈಗಿನ ದಿನಗಳಲ್ಲಿ ಡ್ರೋನ್ ಗಳನ್ನು ಬಳಸಿ ಉತ್ತರ ಪ್ರದೇಶದ ಸಾವಿರಾರು ಹಳ್ಳಿಗಳಲ್ಲಿ ಸರ್ವೇ ಮತ್ತು ಮ್ಯಾಪಿಂಗ್ ನಡೆಸಲಾಗುತ್ತಿದೆ. ಇದರಿಂದ ಸರಕಾರಿ ದಾಖಲೆಗಳಲ್ಲಿ ನಿಮ್ಮ ಆಸ್ತಿ ನಿಮ್ಮ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿರುತ್ತದೆ. ಈ ಯೋಜನೆ ಬಳಿಕ ಹಳ್ಳಿಗಳಲ್ಲಿ ಆಸ್ತಿ ವಿವಾದಗಳು ಅಂತ್ಯ ಕಾಣುತ್ತವೆ. ಇದರ ಅತ್ಯಂತ ದೊಡ್ಡ ಪ್ರಯೋಜನ ಎಂದರೆ ನಿಮಗೆ ಬೇಕಾದಾಗೆಲ್ಲ ನೀವು ನಿಮ್ಮ ಗ್ರಾಮೀಣ ಆಸ್ತಿಯನ್ನು ತೋರಿಸಿ ಬ್ಯಾಂಕುಗಳಿಂದ ಸಾಲ ಪಡೆಯಬಹುದು. ಮತ್ತು ಬ್ಯಾಂಕ್ ಸಾಲಕ್ಕೆ ಅರ್ಹತೆ ಪಡೆದಿರುವ ಆಸ್ತಿ ಯಾವಾಗಲೂ ಉತ್ತಮ ಮೌಲ್ಯವನ್ನು ತರುತ್ತದೆ ಎಂಬುದು ನಿಮಗೆ ಗೊತ್ತಿದೆ. ಅಂದರೆ, ಸ್ವಾಮಿತ್ವ ಯೋಜನಾ ಈಗ ಗ್ರಾಮಗಳಲ್ಲಿಯ ಭೂಮಿಯ ಮತ್ತು ಮನೆಗಳ ಬೆಲೆಗಳ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ಈ ಯೋಜನೆ ಕೋಟ್ಯಾಂತರ ನಮ್ಮ ಬಡ ಸಹೋದರರು ಮತ್ತು ಸಹೋದರಿಯರನ್ನು ಸಶಕ್ತೀಕರಣ ಮಾಡಲಿದೆ. ಉತ್ತರ ಪ್ರದೇಶದ 8,500 ಕ್ಕೂ ಅಧಿಕ ಗ್ರಾಮಗಳಲ್ಲಿ ಇದರ ಕೆಲಸ ಪೂರ್ಣಗೊಂಡಿದೆ. ಉತ್ತರ ಪ್ರದೇಶದಲ್ಲಿ ಸರ್ವೇ ಬಳಿಕ ಜನರಿಗೆ ದೊರೆಯುತ್ತಿರುವ ಡಿಜಿಟಲ್ ಪ್ರಮಾಣ ಪತ್ರಗಳನ್ನು “ಘರೋನಿ” ಎಂದು ಕರೆಯಲಾಗುತ್ತಿದೆ. 51,000 ಕ್ಕೂ ಅಧಿಕ “ಘರೋನಿ” ಪ್ರಮಾಣ ಪತ್ರಗಳನು ವಿತರಿಸಲಾಗಿದೆ ಮತ್ತು ಬಹಳ ಶೀಘ್ರವಾಗಿ ನಮ್ಮ ಗ್ರಾಮಗಳ ಒಂದು ಲಕ್ಷ ಜನರಿಗೆ ಘರೋನಿ ಪ್ರಮಾಣ ಪತ್ರಗಳು ವಿತರಣೆಯಾಗಲಿವೆ ಎಂದು ನನಗೆ ತಿಳಿಸಲಾಗಿದೆ.

ಸ್ನೇಹಿತರೇ,

ಇಂದು, ಗ್ರಾಮಗಳಲ್ಲಿ, ಹಳ್ಳಿಗಳಲ್ಲಿ ಇಷ್ಟೊಂದು ಯೋಜನೆಗಳು ಲಭ್ಯ ಇರುವಾಗ, ಅವುಗಳು ಸೌಲಭ್ಯಗಳನ್ನು ಹೆಚ್ಚಿಸುವುದು ಮಾತ್ರವಲ್ಲ, ಗ್ರಾಮೀಣ ಆರ್ಥಿಕತೆಗೂ ವೇಗ ದೊರೆಯುತ್ತದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನಾ ಅಡಿಯಲ್ಲಿ 60,000 ಕಿ.ಮೀ.ಗಳಿಗೂ ಅಧಿಕ ಗ್ರಾಮೀಣ ರಸ್ತೆಗಳನ್ನು ಉತ್ತರ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಈ ರಸ್ತೆಗಳು ಅಭಿವೃದ್ಧಿಯ ಮಾದ್ಯಮವಾಗಿವೆ ಮತ್ತು ಗ್ರಾಮೀಣ ಜನತೆಯ ಜೀವನವನ್ನು ಸುಲಭಗೊಳಿಸುತ್ತಿವೆ. ನೀವು ನೋಡಿ, ಸ್ವಲ್ಪ ಸ್ವಲ್ಪ ಗಾರೆ ಕೆಲಸ ಗೊತ್ತಿದ್ದ ಹಲವಾರು ಯುವಕರು ಹಳ್ಳಿಗಳಲ್ಲಿದ್ದಾರೆ, ಆದರೆ ಅವರಿಗೆ ಅವಕಾಶಗಳಿಲ್ಲ. ಹಲವಾರು ಮನೆಗಳ ನಿರ್ಮಾಣ ಮತ್ತು ರಸ್ತೆಗಳ ನಿರ್ಮಾಣದಿಂದ ಹಲವಾರು ಗಾರೆ/ಕೂಲಿ ಕೆಲಸದವರಿಗೆ ಅವಕಾಶಗಳು ದೊರೆತಿವೆ. ಸರಕಾರ ಕೂಡಾ ಅದಕ್ಕಾಗಿ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ನೀಡುತ್ತಿದೆ. ಉತ್ತರ ಪ್ರದೇಶದಲ್ಲಿ ಸಾವಿರಾರು ಯುವಜನರು ತರಬೇತಿಗಳನ್ನು ಪಡೆದಿದ್ದಾರೆ. ಮತ್ತು ಈಗ ಮಹಿಳೆಯರು ಕೂಡಾ ಮೇಸ್ತ್ರಿಗಳಾಗಿ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಅವರಿಗೆ ಕೂಡಾ ಉದ್ಯೋಗಾವಕಾಶಗಳು ತೆರೆಯಲ್ಪಟ್ಟಿವೆ. ಇಷ್ಟೊಂದು ಕೆಲಸಗಳನ್ನು ಮಾಡಲಾಗುತ್ತಿದ್ದರೂ, ಅಲ್ಲಿ ಸಿಮೆಂಟಿನ ಅಗತ್ಯವಿದೆ, ರಾಡ್ ಗಳು, ಕಟ್ಟಡ ಸಾಮಗ್ರಿಗಳು, ಅದರ ಅಂಗಡಿಗಳು, ಇತರ ಸೇವೆಗಳ ಅವಶ್ಯಕತೆ ಇದೆ ಮತ್ತು ಬೇಡಿಕೆ ಹೆಚ್ಚುತ್ತಲೇ ಇದೆ. ಇದರಿಂದ ಕೂಡಾ ಯುವಜನತೆಗೆ ಉದ್ಯೋಗಾವಕಾಶ ಲಭ್ಯವಾಗಿದೆ. ಬರೇ ಕೆಲವು ತಿಂಗಳ ಹಿಂದೆ, ದೇಶವು ನಮ್ಮ ಗ್ರಾಮಗಳಲ್ಲಿರುವ ಜನತೆಗೆ ಪ್ರಯೋಜನಕಾರಿಯಾದಂತಹ ಇನ್ನೊಂದು ಆಂದೋಲನವನ್ನು ಆರಂಭಿಸಿತು. ಹೆಚ್ಚು ವೇಗದ ಅಂತರ್ಜಾಲ ಸೌಲಭ್ಯವನ್ನು ದೇಶದ ಆರು ಲಕ್ಷಕ್ಕೂ ಅಧಿಕ ಗ್ರಾಮಗಳಿಗೆ ಒದಗಿಸುವುದು ಈ ಆಂದೋಲನದ ಉದ್ದೇಶ. ಈ ಆಂದೋಲನದಡಿಯಲ್ಲಿ ಲಕ್ಷಾಂತರ ಗ್ರಾಮಗಳಲ್ಲಿ ಆಪ್ಟಿಕಲ್ ಫೈಬರ್ ಅಳವಡಿಸಲಾಗುವುದು. ಇದು ಕೂಡಾ ಗ್ರಾಮೀಣ ಜನತೆಗೆ ಹೊಸ ಉದ್ಯೋಗವಕಾಶಗಳನ್ನು ನಿರ್ಮಾಣ ಮಾಡುತ್ತದೆ

ಸ್ನೇಹಿತರೇ,

ಕೊರೊನಾದ ಈ ಅವಧಿ ಇಡೀ ದೇಶದ ಮೇಲೆ, ಇಡೀ ವಿಶ್ವದ ಮೇಲೆ, ಮಾನವ ಕುಲದ ಮೇಲೆ, ಪ್ರತೀ ವ್ಯಕ್ತಿಯ ಮೇಲೆ ಪರಿಣಾಮ ಬೀರಿದೆ. ಆದರೆ ಉತ್ತರ ಪ್ರದೇಶವು ಅಭಿವೃದ್ಧಿಯ ತನ್ನ ಪ್ರಯತ್ನಗಳನ್ನು ಕೈಬಿಟ್ಟಿಲ್ಲ. ಅದು ಕೆಲಸಗಳನ್ನು ಮುಂದುವರೆಸಿದೆ ಮತ್ತು ತ್ವರಿತಗತಿಯಿಂದ ಮುನ್ನಡೆದಿದೆ. ನಮ್ಮ ವಲಸೆ ಕಾರ್ಮಿಕ ಸ್ನೇಹಿತರ ಸುರಕ್ಷಿತ ಹಿಂತಿರುಗುವಿಕೆಗೆ ಕೈಗೊಂಡ ಕ್ರಮಗಳಿಗಾಗಿ ಉತ್ತರ ಪ್ರದೇಶ ಶ್ಲಾಘಿಸಲ್ಪಡುತ್ತಿದೆ. ಗರೀಬ್ ಕಲ್ಯಾಣ್ ರೋಜಗಾರ್ ಅಭಿಯಾನ ಅಡಿಯಲ್ಲಿ ಉತ್ತರ ಪ್ರದೇಶವು 10 ಕೋಟಿ ಮಾನವ ದಿನಗಳ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಮತ್ತು ಅದು ದೇಶದಲ್ಲಿ ಮೊದಲ ಸ್ಥಾನವನ್ನು ಪಡೆದಿದೆ. ಇದರಿಂದ ಗ್ರಾಮೀಣ ಜನತೆಗೆ ಹಳ್ಳಿಗಳಲ್ಲಿ/ಗ್ರಾಮಗಳಲ್ಲಿ ಉದ್ಯೋಗ ಲಭಿಸುವುದು ಸಾಧ್ಯವಾಗಿದೆ. ಮತ್ತು ಅವರ ಜೀವನಕ್ಕೆ ಅನುಕೂಲಕರವಾಗಿದೆ.

ಸ್ನೇಹಿತರೇ,

ಇಂದು, ಪೂರ್ವದಿಂದ ಪಶ್ಚಿಮದವರೆಗೆ ಮತ್ತು ಅವಧ್ ನಿಂದ ಬುಂದೇಲ್ಕಂಡದವರೆಗೆ ಪ್ರತಿಯೊಬ್ಬರೂ ಸಾಮಾನ್ಯ ಜನರ ಜೀವನವನ್ನು ಸುಲಭಗೊಳಿಸಲು ಉತ್ತರ ಪ್ರದೇಶದಲ್ಲಿ ಆಗುತ್ತಿರುವ ಕೆಲಸಗಳನ್ನು ಮನಗಂಡಿದ್ದಾರೆ. ಅದು ಆಯುಷ್ಮಾನ ಭಾರತ್ ಇರಲಿ ಅಥವಾ ರಾಷ್ಟ್ರೀಯ ಪೋಷಣಾ ಅಭಿಯಾನ ಇರಲಿ, ಉಜ್ವಲಾ ಯೋಜನಾ ಅಥವಾ ಉಜಾಲ ಯೋಜನಾ ಇರಲಿ, ಮಿಲಿಯಾಂತರ ಅಗ್ಗದ ಎಲ್.ಇ.ಡಿ. ಬಲ್ಬ್ ಗಳು ಜನತೆಯ ಹಣವನ್ನು ಉಳಿತಾಯ ಮಾಡುತ್ತಿವೆ ಮತ್ತು ಅವರ ಬದುಕನ್ನು ಸುಲಭಗೊಳಿಸಿವೆ. ಕೇಂದ್ರ ಸರಕಾರದ ಯೋಜನೆಗಳನ್ನು ಉತ್ತರ ಪ್ರದೇಶ ಸರಕಾರ ಅನುಷ್ಟಾನ ಮಾಡುತ್ತಿರುವ ವೇಗದಿಂದಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಉತ್ತರ ಪ್ರದೇಶಕ್ಕೆ ಹೊಸ ಗುರುತಿಸುವಿಕೆ ಒದಗಿ ಬಂದಿದೆ. ಒಂದೆಡೆ ಕ್ರಿಮಿನಲ್ ಗಳು ಮತ್ತು ದಂಗೆಕೋರರ ವಿರುದ್ಧ ಕಠಿಣ ಕ್ರಮಗಳು ಮತ್ತು ಇನ್ನೊಂದೆಡೆ ಕಾನೂನು ಸುವ್ಯವಸ್ಥೆ ಮೇಲಣ ನಿಯಂತ್ರಣ, ಹಲವಾರು ಎಕ್ಸ್ ಪ್ರೆಸ್ ವೇ ಗಳ ಕಾಮಗಾರಿ ತ್ವರಿತಗತಿಯಿಂದ ಸಾಗುತ್ತಿರುವಿಕೆ ಮತ್ತು ಎ.ಐ.ಐ.ಎಂ.ಎಸ್. ನಂತಹ ಸಂಸ್ಥೆಗಳ ಸ್ಥಾಪನೆ, ಮೀರತ್ ಎಕ್ಸ್ ಪ್ರೆಸ್ ವೇ ಮತ್ತು ಬುಂದೇಲ್ ಖಂಡ –ಗಂಗಾ ಎಕ್ಸ್ ಪ್ರೆಸ್ ವೇ ಗಳು ಉತ್ತರ ಪ್ರದೇಶದ ಅಭಿವೃದ್ಧಿಯನ್ನು ತ್ವರಿತಗೊಳಿಸಬಲ್ಲವು. ಅದರಿಂದಾಗಿ ಇಂದು, ಹಲವಾರು ಬೃಹತ್ ಕಂಪೆನಿಗಳು ಉತ್ತರ ಪ್ರದೇಶಕ್ಕೆ ಬರುತ್ತಿವೆ. ಮತ್ತು ಸಣ್ಣ ಕೈಗಾರಿಕೆಗಳಿಗೂ ಅವಕಾಶಗಳು ಲಭ್ಯವಾಗಲಿವೆ. ಉತ್ತರ ಪ್ರದೇಶದಲ್ಲಿ ’ಒಂದು ಜಿಲ್ಲೆ, ಒಂದು ಉತ್ಪನ್ನ” ಯೋಜನೆ ಅಡಿಯಲ್ಲಿ ಸ್ಥಳೀಯ ಕರಕುಶಲಕರ್ಮಿಗಳಿಗೆ ಕೆಲಸ ದೊರೆಯಲಾರಂಭಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಸ್ಥಳೀಯ ಕರಕುಶಲ ಕರ್ಮಿಗಳ, ಬಡವರ ಮತ್ತು ಕಾರ್ಮಿಕರ ಸ್ವಾವಲಂಬನೆ ಆತ್ಮನಿರ್ಭರ ಭಾರತದ ಗುರಿಯನ್ನು ಸಾಧಿಸಬಲ್ಲದು ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ ನೀಡಲಾಗುತ್ತಿರುವ ಮನೆಗಳು ಅವರಿಗೆ ದೊಡ್ಡ ಶಕ್ತಿಯಾಗಬಲ್ಲವು.

ಉತ್ತರಾಯಣದ ಅವಧಿಯು ನಿಮ್ಮ ಜೀವನದ ಕನಸುಗಳನ್ನು ಈಡೇರಿಸಲಿ!. ಮನೆ ಎಂಬುದು ಒಂದು ಬಹಳ ದೊಡ್ದ ವ್ಯವಸ್ಥೆ. ಈಗ ನೋಡಿ, ಮಕ್ಕಳ ಜೀವನವೂ ಬದಲಾಗಲಿದೆ, ಅವರ ಶಾಲಾ ವ್ಯವಸ್ಥೆಯೂ ಬದಲಾಗಲಿದೆ.ಮತ್ತು ಅಲ್ಲಿ ಹೊಸ ಆತ್ಮ ವಿಶ್ವಾಸ ಮೂಡಲಿದೆ. ಮತ್ತು ಇದಕ್ಕಾಗಿ ನಿಮ್ಮೆಲ್ಲರಿಗೂ ನನ್ನ ಶುಭ ಹಾರೈಕೆಗಳು. ನನ್ನನ್ನು ಆಶೀರ್ವದಿಸಿದ ಎಲ್ಲಾ ತಾಯಂದಿರಿಗೂ ಮತ್ತು ಪುತ್ರಿಯರಿಗೂ ನನ್ನ ಹೃದಯಾಂತರಾಳದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಮತ್ತು ನಿಮಗೆ ಬಹಳ ಧನ್ಯವಾದಗಳು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India to become second nation with commercial fast breeder reactor: Singh

Media Coverage

India to become second nation with commercial fast breeder reactor: Singh
NM on the go

Nm on the go

Always be the first to hear from the PM. Get the App Now!
...
Prime Minister shares a Sanskrit Subhashitam highlighting fundamental causes of progress
April 28, 2026

Prime Minister Shri Narendra Modi shared a Sanskrit Subhashitam today highlighting that effort, self-control, skill, vigilance, patience, memory, and initiating any task with thoughtful consideration are the fundamental causes of progress.

The Prime Minister remarked that hard work performed with patience and dedication can yield remarkable success, further pointing out that it also infuses the nation's prosperity and strength with fresh vigor.

The Prime Minister wrote on X:

"संयम और समर्पण के साथ किया गया परिश्रम अद्भुत सफलता दे सकता है। इससे राष्ट्र की समृद्धि और सामर्थ्य को भी एक नई ऊर्जा मिलती है।

उत्थानं संयमो दाक्ष्यमप्रमादो धृतिः स्मृतिः।

समीक्ष्य च समारम्भो विद्धिमूलं भवस्य तु॥"

Effort, self-control, skill, vigilance, patience, memory and initiating any task with thoughtful consideration, these are all the fundamental causes of progress.