ನಮಸ್ತೆ ಆಸ್ಟ್ರೇಲಿಯಾ!

ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಮತ್ತು ನನ್ನ ಆತ್ಮೀಯ ಸ್ನೇಹಿತರಾದ ಗೌರವಾನ್ವಿತ ಆಂಥೋನಿ ಅಲ್ಬನೀಸ್ ಅವರೇ, ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಘನತೆವೆತ್ತ ಸ್ಕಾಟ್ ಮಾರಿಸನ್ ಅವರೇ, ನ್ಯೂ ಸೌತ್ ವೇಲ್ಸ್ ಪ್ರಧಾನಿ ಕ್ರಿಸ್ ಮಿನ್ಸ್ ಅವರೇ, ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಅವರೇ, ಸಂವಹನ ಸಚಿವ ಮಿಚೆಲ್ ರೋಲ್ಯಾಂಡ್ ಅವರೇ, ಇಂಧನ ಸಚಿವರಾದ ಕ್ರಿಸ್ ಬೋವೆನ್ ಅವರೇ, ವಿರೋಧ ಪಕ್ಷದ ನಾಯಕ ಪೀಟರ್ ಡಟ್ಟನ್ ಅವರೇ, ಸಹಾಯಕ ವಿದೇಶಾಂಗ ಸಚಿವ ಟಿಮ್ ವ್ಯಾಟ್ಸ್ ಅವರೇ, ಇಲ್ಲಿ ಹಾಜರಿರುವ ನ್ಯೂ ಸೌತ್ ವೇಲ್ಸ್ ಸಂಪುಟದ ಗೌರವಾನ್ವಿತ ಸದಸ್ಯರೇ,  ಪಾರ್ರಮಟ್ಟದ ಸಂಸತ್ ಸದಸ್ಯ ಡಾ. ಆಂಡ್ರ್ಯೂ ಚಾರ್ಲ್ಟನ್ ಅವರೇ, ಇಲ್ಲಿ ಉಪಸ್ಥಿತರಿರುವ ಆಸ್ಟ್ರೇಲಿಯಾದ ಸಂಸತ್ ಸದಸ್ಯರು, ಮೇಯರ್‌ಗಳು, ಉಪ ಮೇಯರ್‌ಗಳು, ಕೌನ್ಸಿಲರ್‌ಗಳೇ ಮತ್ತು ಇಂದು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ಸೇರಿರುವ ಆಸ್ಟ್ರೇಲಿಯಾ ನಿವಾಸಿ ಭಾರತೀಯ ವಲಸಿಗರೇ! ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು!

ಮೊದಲನೆಯದಾಗಿ, ನಾವು ಇಂದು ಇಲ್ಲಿ ಭೇಟಿಯಾಗುತ್ತಿರುವ ಈ ನೆಲದ ಸಾಂಪ್ರದಾಯಿಕ ರಕ್ಷಕರನ್ನು ನಾನು ಗೌರವಿಸಲು ಬಯಸುತ್ತೇನೆ. ಭೂತ, ವರ್ತಮಾನ ಮತ್ತು ಉದಯೋನ್ಮುಖ ಹಿರಿಯರಿಗೆ ನಾನು ಗೌರವ ಸಲ್ಲಿಸುತ್ತೇನೆ. 

ಸ್ನೇಹಿತರೇ,

ನಾನು 2014ರಲ್ಲಿ ಇಲ್ಲಿಗೆ ಬಂದಾಗ, ಭಾರತದ ಮತ್ತಾವುದೇ ಪ್ರಧಾನಿಗಾಗಿ ನೀವು ಮತ್ತೆ 28 ವರ್ಷಗಳ ಕಾಲ ಕಾಯುವ ಅಗತ್ಯವಿಲ್ಲ ಎಂದು ನಾನು ನಿಮಗೆ ಭರವಸೆ ನೀಡಿದ್ದೆ. ಅದರಂತೆಯೇ ಇಂದು ಸಿಡ್ನಿಯ ಈ ವೇದಿಕೆಯಲ್ಲಿ ಮತ್ತೊಮ್ಮೆ ನಾನು ಹಾಜರಿದ್ದೇನೆ. ಆದರೆ, ಈ ಬಾರಿ ನಾನು ಏಕಾಂಗಿಯಾಗಿ ಬಂದಿಲ್ಲ. ಪ್ರಧಾನಿ ಅಲ್ಬನೀಸ್ ಕೂಡ ನನ್ನೊಂದಿಗೆ ಬಂದಿದ್ದಾರೆ. ಮಾನ್ಯ ಪ್ರಧಾನ ಮಂತ್ರಿಯವರೇ, ನಿಮ್ಮ ಅತ್ಯಂತ ಅವಿಶ್ರಾಂತ ವೇಳಾಪಟ್ಟಿಯ ಹೊರತಾಗಿಯೂ, ನೀವು ನಮ್ಮೆಲ್ಲರಿಗಾಗಿ ಸಮಯವನ್ನು ನೀಡಿದ್ದೀರಿ. ಇದು ಭಾರತೀಯರಾದ ನಮ್ಮ ಬಗ್ಗೆ ನಿಮ್ಮ ಪ್ರೀತಿಯನ್ನು ಸೂಚಿಸುತ್ತದೆ. ನೀವು ಈಗ ಹೇಳಿದ ಮಾತುಗಳು ಭಾರತದ ಬಗ್ಗೆ ಆಸ್ಟ್ರೇಲಿಯಾ ಹೊಂದಿರುವ ಪ್ರೀತಿಯನ್ನು ನಮಗೆ ತಿಳಿಸುತ್ತದೆ. ಈ ವರ್ಷ ಅಹ್ಮದಾಬಾದ್‌ನಲ್ಲಿ ಭಾರತದ ನೆಲದಲ್ಲಿ ಇಲ್ಲಿನ ಪ್ರಧಾನಮಂತ್ರಿಯವರನ್ನು ಸ್ವಾಗತಿಸುವ ಅವಕಾಶವೂ ನನಗೆ ಸಿಕ್ಕಿತ್ತು. ಇಂದು, ಇಲ್ಲಿ ʻಲಿಟಲ್ ಇಂಡಿಯಾʼಕ್ಕೆ ಶಂಕುಸ್ಥಾಪನೆ ನೆರವೇರಿಸುವಾಗ ಅವರು ನನ್ನೊಂದಿಗಿದ್ದರು. ನಾನು ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ! ನನ್ನ ಸ್ನೇಹಿತ ಆಂಥೋನಿ ಅವರಿಗೆ ಧನ್ಯವಾದಗಳು! ಆಸ್ಟ್ರೇಲಿಯಾದ ಅಭಿವೃದ್ಧಿಗೆ ಭಾರತೀಯ ಸಮುದಾಯದ ಕೊಡುಗೆಯನ್ನು ಈ ʻಲಿಟಲ್‌ ಇಂಡಿಯಾʼ ಗುರುತಿಸುತ್ತದೆ. ಈ ವಿಶೇಷ ಗೌರವಕ್ಕಾಗಿ ನಾನು ನ್ಯೂ ಸೌತ್ ವೇಲ್ಸ್‌ನ ಪ್ರಧಾನ ಮಂತ್ರಿ, ಮೇಯರ್, ಉಪ ಮೇಯರ್ ಮತ್ತು ಪರಮಟ್ಟ ನಗರದ ಕೌನ್ಸಿಲರ್‌ಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಸ್ನೇಹಿತರೇ,

ನ್ಯೂ ಸೌತ್ ವೇಲ್ಸ್‌ನಲ್ಲಿರುವ ಅನೇಕ ಭಾರತೀಯ ವಲಸಿಗರು ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವುದು ಮತ್ತು ಅವರಿಗೆ ಸ್ಥಾನವನ್ನು ನೀಡುತ್ತಿರುವುದು ಎಂದು ನನಗೆ ಅತೀವ ಸಂತೋಷ ತಂದಿದೆ. ಪ್ರಸ್ತುತ ನ್ಯೂ ಸೌತ್ ವೇಲ್ಸ್ ಸರ್ಕಾರದ ಉಪ ಪ್ರಧಾನ ಮಂತ್ರಿ ಪ್ರೂ ಕಾರ್ ಮತ್ತು ಖಜಾಂಚಿ ಡೇನಿಯಲ್ ಮುಖೆ ಅವರು ಈ ನಿಟ್ಟಿನಲ್ಲಿ ಪ್ರಮುಖ ಕೊಡುಗೆ ನೀಡುತ್ತಿದ್ದಾರೆ. ನಿನ್ನೆಯಷ್ಟೇ ಸಮೀರ್ ಪಾಂಡೆ ಅವರು ಪರಮಟ್ಟದ ಮೇಯರ್ ಆಗಿ ಆಯ್ಕೆಯಾದರು. ಇದಕ್ಕಾಗಿ ನಾನು ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ! ನನ್ನ ಹೃತ್ಪೂರ್ವಕ ಅಭಿನಂದನೆಗಳು!

ಸ್ನೇಹಿತರೇ,

ಇಂದು, ಪರಮಟ್ಟಾದಲ್ಲಿ ಈ ಬೆಳವಣಿಗೆಗಳು ನಡೆಯುತ್ತಿರುವ ಸಂದರ್ಭದಲ್ಲೇ, ಪಶ್ಚಿಮ ಆಸ್ಟ್ರೇಲಿಯಾದ ಪರ್ತ್ ನಗರದಲ್ಲಿ ಭಾರತೀಯ ಸೈನಿಕ ನೈನ್ ಸಿಂಗ್ ಸೈಲಾನಿ ಅವರ ಹೆಸರನ್ನು ಸೈಲಾನಿ ಅವೆನ್ಯೂಗೆ ನಾಮಕರಣ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಮೊದಲ ಮಹಾಯುದ್ಧದ ಸಮಯದಲ್ಲಿ ಆಸ್ಟ್ರೇಲಿಯಾದ ಸೈನ್ಯಕ್ಕಾಗಿ ಹೋರಾಡುವಾಗ ಅವರು ಹುತಾತ್ಮರಾದರು. ಈ ಗೌರವಕ್ಕಾಗಿ ನಾನು ಪಶ್ಚಿಮ ಆಸ್ಟ್ರೇಲಿಯಾದ ನಾಯಕತ್ವವನ್ನು ಅತ್ಯಂತ ಗೌರವದಿಂದ ಅಭಿನಂದಿಸುತ್ತೇನೆ.

ಸ್ನೇಹಿತರೇ,

ʻ3 ಸಿʼ (3C) ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಂಬಂಧವನ್ನು ವ್ಯಾಖ್ಯಾನಿಸುತ್ತದೆ ಎಂದು ಹೇಳುತ್ತಿದ್ದ ಸಮಯವಿತ್ತು. ಈ 3 ʻಸಿʼಗಳು ಯಾವುವು? ಅವುಗಳೆಂದರೆ – ಕಾಮನ್ವೆಲ್ತ್, ಕ್ರಿಕೆಟ್ ಮತ್ತು ಕರಿ. ಭಾರತ ಮತ್ತು ಆಸ್ಟ್ರೇಲಿಯಾ ಸಂಬಂಧಗಳು ʻ3 ಡಿʼ ಅಂದರೆ ಪ್ರಜಾಪ್ರಭುತ್ವ, ಡಯಾಸ್ಪೊರಾ ಮತ್ತು ದೋಸ್ತಿಯನ್ನು ಆಧರಿಸಿವೆ ಎಂದು ನಂತರ ಹೇಳಲಾಯಿತು. ಭಾರತ-ಆಸ್ಟ್ರೇಲಿಯಾ ಸಂಬಂಧಗಳು ʻ3 ಇʼ ಅಥವಾ ಇಂಧನ, ಆರ್ಥಿಕತೆ ಮತ್ತು ಶಿಕ್ಷಣವನ್ನು ಆಧರಿಸಿವೆ ಎಂದು ಕೆಲವರು ಹೇಳಿದರು. ಅಂದರೆ, ಅದು ಕೆಲವೊಮ್ಮೆ ʻಸಿʼ, ಕೆಲವೊಮ್ಮೆ ʻಡಿʼ, ಮತ್ತು ಕೆಲವೊಮ್ಮೆ ʻಇʼಆಗಿತ್ತು. ಇದು ಬಹುಶಃ ವಿಭಿನ್ನ ಅವಧಿಗಳಲ್ಲಿ ನಿಜವಾಗಿದೆ. ಆದರೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐತಿಹಾಸಿಕ ಸಂಬಂಧಗಳ ವ್ಯಾಪ್ತಿ ಇದಕ್ಕಿಂತ ದೊಡ್ಡದಾಗಿದೆ, ಈ ಎಲ್ಲಾ ಸಂಬಂಧಗಳ ದೊಡ್ಡ ಅಡಿಪಾಯ ಯಾವುದು ಎಂದು ನಿಮಗೆ ಗೊತ್ತೇ? ಅದರ ಬಗ್ಗೆ ನಿಮಗೆ ತಿಳಿದಿದೆಯೇ? ಪರಸ್ಪರ ನಂಬಿಕೆ ಮತ್ತು ಪರಸ್ಪರ ಗೌರವವೇ ಎರಡೂ ದೇಶಗಳ ನಡುವಿನ ಸಂಬಂಧದ ದೊಡ್ಡ ಅಡಿಪಾಯವಾಗಿದೆ! ಈ ಪರಸ್ಪರ ನಂಬಿಕೆ ಮತ್ತು ಪರಸ್ಪರ ಗೌರವವು ಭಾರತ ಮತ್ತು ಆಸ್ಟ್ರೇಲಿಯಾದ ರಾಜತಾಂತ್ರಿಕ ಸಂಬಂಧಗಳಿಂದಾಗಿ ಮಾತ್ರ ಬೆಳೆದಿಲ್ಲ. ಇದರ ಹಿಂದಿನ ನಿಜವಾದ ಕಾರಣ ಮತ್ತು ನಿಜವಾದ ಶಕ್ತಿ ನೀವೆಲ್ಲರೂ ಆಗಿದ್ದೀರಿ, ಆಸ್ಟ್ರೇಲಿಯಾದಲ್ಲಿ ವಾಸಿಸುವ ಪ್ರತಿಯೊಬ್ಬ ಭಾರತೀಯರೂ ಆಗಿದ್ದೀರಿ! ನೀವು ಅದರ ನಿಜವಾದ ಶಕ್ತಿ. ಆಸ್ಟ್ರೇಲಿಯಾದ 2.5 ಕೋಟಿಗೂ ಹೆಚ್ಚು ನಾಗರಿಕರು ಇದರ ಹಿಂದಿನ ನಿಜವಾದ ಕಾರಣವಾಗಿದ್ದಾರೆ. 

ಸ್ನೇಹಿತರೇ,

ಖಂಡಿತವಾಗಿಯೂ ನಮ್ಮ ನಡುವೆ ಭೌಗೋಳಿಕ ಅಂತರವಿದೆ, ಆದರೆ ಹಿಂದೂ ಮಹಾಸಾಗರವು ನಮ್ಮನ್ನು ಸಂಪರ್ಕಿಸುತ್ತದೆ. ನಮ್ಮ ಜೀವನಶೈಲಿ ವಿಭಿನ್ನವಾಗಿದ್ದರೂ, ಯೋಗವು ಈಗ ನಮ್ಮನ್ನು ಸಂಪರ್ಕಿಸುತ್ತದೆ. ನಾವು ಬಹಳ ಸಮಯದಿಂದ ಕ್ರಿಕೆಟ್‌ನೊಂದಿಗೆ ಸಂಬಂಧ ಹೊಂದಿದ್ದೇವೆ, ಆದರೆ ಈಗ ಟೆನಿಸ್ ಮತ್ತು ಚಲನಚಿತ್ರಗಳು ಸಹ ನಮ್ಮನ್ನು ಸಂಪರ್ಕಿಸುತ್ತಿವೆ. ನಾವು ಅಡುಗೆಯ ವಿಭಿನ್ನ ಶೈಲಿಗಳನ್ನು ಹೊಂದಿರಬಹುದು, ಆದರೆ ಈಗ ಮಾಸ್ಟರ್ ಚೆಫ್ ನಮ್ಮನ್ನು ಒಂದುಗೂಡಿಸುತ್ತದೆ. ನಮ್ಮ ದೇಶದಲ್ಲಿ ಹಬ್ಬಗಳನ್ನು ವಿಭಿನ್ನವಾಗಿ ಆಚರಿಸಲಾಗುತ್ತಿದ್ದರೂ, ನಾವು ದೀಪಾವಳಿಯ ದೀಪಗಳು ಮತ್ತು ಬೈಸಾಖಿ ಆಚರಣೆಗಳೊಂದಿಗೆ ಸಂಪರ್ಕ ಹೊಂದಿದ್ದೇವೆ. ಎರಡೂ ದೇಶಗಳು ವಿಭಿನ್ನ ಭಾಷೆಗಳನ್ನು ಮಾತನಾಡಬಹುದು ಆದರೆ ಮಲಯಾಳಂ, ತಮಿಳು, ತೆಲುಗು, ಪಂಜಾಬಿ, ಹಿಂದಿ ಭಾಷೆಗಳನ್ನು ಕಲಿಸುವ ಶಾಲೆಗಳು ನಮ್ಮಲ್ಲಿ ಹೇರಳವಾಗಿವೆ.

ಸ್ನೇಹಿತರೇ,

ಆಸ್ಟ್ರೇಲಿಯಾದ ಜನರು, ಇಲ್ಲಿನ ನಿವಾಸಿಗಳು ಕರುಣಾಮಯಿ ಹೃದಯವನ್ನು ಹೊಂದಿದ್ದಾರೆ. ಅವರು ಎಷ್ಟು ಒಳ್ಳೆಯವರು ಮತ್ತು ಪರಿಶುದ್ಧ ಹೃದಯವಂತರು ಎಂದರೆ ಅವರು ಭಾರತದ ಈ ವೈವಿಧ್ಯತೆಯನ್ನು ತೆರೆದ ಹೃದಯದಿಂದ ಸ್ವೀಕರಿಸುತ್ತಾರೆ ಮತ್ತು ಅದಕ್ಕಾಗಿಯೇ ಪರಮಟ್ಟ ಚೌಕವು ಕೆಲವರಿಗೆ 'ಪರಮಾತ್ಮ' (ದೈವಿಕ) ಚೌಕವಾಗಿದೆ; ವಿಗ್ರಾಮ್ ಸ್ಟ್ರೀಟ್ ಅನ್ನು ʻವಿಕ್ರಮ್ ಸ್ಟ್ರೀಟ್ʼ ಎಂದು ಕರೆಯಲಾಗುತ್ತದೆ ಮತ್ತು ಹ್ಯಾರಿಸ್ ಪಾರ್ಕ್ ಅನೇಕ ಜನರಿಗೆ ʻಹರೀಶ್ ಪಾರ್ಕ್ʼ ಆಗುತ್ತದೆ. ಅಂದಹಾಗೆ, ಹ್ಯಾರಿಸ್ ಪಾರ್ಕ್‌ನಲ್ಲಿ ʻಚಟ್ಕಾಜ್‌ʼ ಚಾಟ್ ಮತ್ತು ʻಜೈಪುರ್ ಸ್ವೀಟ್ಸ್‌ʼನ ಜಿಲೇಬಿಗಳ ರುಚಿಯನ್ನು ಯಾರೂ ಮೀರಿಸಲು ಸಾಧ್ಯವಿಲ್ಲ ಎಂದು ನಾನು ಕೇಳಿದ್ದೇನೆ. ನಿಮ್ಮೆಲ್ಲರಿಗೂ ನನ್ನದೊಂದು ವಿನಂತಿಯಿದೆ. ದಯವಿಟ್ಟು ನನ್ನ ಸ್ನೇಹಿತ ಪ್ರಧಾನಿ ಅಲ್ಬನೀಸ್ ಅವರನ್ನು ಈ ಸ್ಥಳಗಳಿಗೆ ಕರೆದೊಯ್ಯಿರಿ. 

ಸ್ನೇಹಿತರೇ,

ಆಹಾರ ಮತ್ತು ಚಾಟ್ ವಿಷಯಕ್ಕೆ ಬಂದಾಗ, ಲಖನೌ ನಗರವನ್ನು ಉಲ್ಲೇಖಿಸುವುದು ಸಾಮಾನ್ಯ. ಸಿಡ್ನಿ ಬಳಿ ಲಖನೌ ಎಂಬ ಸ್ಥಳವಿದೆ ಎಂದು ನಾನು ಕೇಳಿದ್ದೇನೆ. ಆದರೆ ಅಲ್ಲಿಯೂ ಚಾಟ್ ಲಭ್ಯವಿದೆಯೇ ಎಂದು ನನಗೆ ಗೊತ್ತಿಲ್ಲ. ಸರಿ, ಇಲ್ಲಿಯೂ, ಲಖನೌ ಬಳಿ ದೆಹಲಿಯೊಂದು ಇರಲೇಬೇಕಲ್ಲವೇ? ವಾಸ್ತವವಾಗಿ, ದೆಹಲಿ ಸ್ಟ್ರೀಟ್, ಬಾಂಬೆ ಸ್ಟ್ರೀಟ್, ಕಾಶ್ಮೀರ್ ಅವೆನ್ಯೂ, ಮಲಬಾರ್ ಅವೆನ್ಯೂ ಮುಂತಾದ ಆಸ್ಟ್ರೇಲಿಯಾದ ಅನೇಕ ಬೀದಿಗಳು ನಿಮ್ಮನ್ನು ಭಾರತಕ್ಕೆ ಸಂಪರ್ಕಿಸುತ್ತವೆ. ಈಗ ಗ್ರೇಟರ್ ಸಿಡ್ನಿಯಲ್ಲಿ ಇಂಡಿಯಾ ಪೆರೇಡ್ ಕೂಡ ಪ್ರಾರಂಭವಾಗಲಿದೆ ಎಂದು ನಾನು ಕೇಳಲ್ಪಟ್ಟೆ. ಇಲ್ಲಿ ನೀವೆಲ್ಲರೂ 'ಸ್ವಾತಂತ್ರ್ಯದ ಅಮೃತ ಮಹೋತ್ಸವ'ವನ್ನು ಬಹಳ ಆಡಂಬರ ಮತ್ತು ಅದ್ಧೂರಿಯಾಗಿ ಆಚರಿಸಿದ್ದೀರಿ ಎಂದು ತಿಳಿದು ನನಗೆ ತುಂಬಾ ಸಂತೋಷವಾಗಿದೆ. ಇಲ್ಲಿನ ವಿವಿಧ ನಗರ ಸಭೆಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಿಡ್ನಿ ಒಪೇರಾ ಹೌಸ್ ಅನ್ನು ತ್ರಿವರ್ಣ ಧ್ವಜದಿಂದ ಬೆಳಗಿಸಿದಾಗ ಭಾರತೀಯರ ಹೃದಯವು ಉಲ್ಲಾಸಿತಗೊಳ್ಳುತ್ತದೆ. ಅಲ್ಲಿ ಭಾರತವೂ ಸಂಭ್ರಮಿಸುತ್ತಿತ್ತು ಮತ್ತು ಅದಕ್ಕಾಗಿ ನಾನು ನ್ಯೂ ಸೌತ್ ವೇಲ್ಸ್ ಸರ್ಕಾರಕ್ಕೆ ನನ್ನ ವಿಶೇಷ ಕೃತಜ್ಞತೆಯನ್ನು ಅರ್ಪಿಸುತ್ತೇನೆ.

ಸ್ನೇಹಿತರೇ,

ನಮ್ಮ ಕ್ರಿಕೆಟ್ ಸಂಬಂಧ ಕೂಡ 75 ವರ್ಷಗಳನ್ನು ಪೂರೈಸಿದೆ. ಕ್ರಿಕೆಟ್ ಮೈದಾನದಲ್ಲಿ ಉತ್ಸಾಹ ಹೆಚ್ಚಾದಷ್ಟೂ ಮೈದಾನದ ಹೊರಗೆ ನಮ್ಮ ಸ್ನೇಹ ಗಾಢವಾಗುತ್ತದೆ. ಈ ಬಾರಿ, ಆಸ್ಟ್ರೇಲಿಯಾದ ಅನೇಕ ಮಹಿಳಾ ಕ್ರಿಕೆಟ್ ಆಟಗಾರರು ʻಐಪಿಎಲ್ʼ ಆಡಲು ಮೊದಲ ಬಾರಿಗೆ ಭಾರತಕ್ಕೆ ಬಂದರು. ಸ್ನೇಹಿತರೇ, ನಾವು ಸ್ನೇಹಿತರು ಸಂತೋಷದ ಸಮಯದಲ್ಲಿ ಮಾತ್ರವಲ್ಲದೆ, ದುಃಖದ ಸಮಯದಲ್ಲೂ ಒಡನಾಡಿ ಆಗಿರುತ್ತಾನೆ. ಕಳೆದ ವರ್ಷ ಶೇನ್ ವಾರ್ನ್ ನಿಧನರಾದಾಗ, ಆಸ್ಟ್ರೇಲಿಯಾದೊಂದಿಗೆ ಕೋಟ್ಯಂತರ ಭಾರತೀಯರು ಸಹ ಶೋಕ ವ್ಯಕ್ತಪಡಿಸಿದ್ದರು. ನಾವು ಕುಟುಂಬದ ಒಬ್ಬ ಸದಸ್ಯನನ್ನು ಕಳೆದುಕೊಂಡಂತೆ ಭಾಸವಾಯಿತು.

ಸ್ನೇಹಿತರೇ,

ನೀವೆಲ್ಲರೂ ಇಲ್ಲಿ ಆಸ್ಟ್ರೇಲಿಯಾದಲ್ಲಿದ್ದೀರಿ. ಇಲ್ಲಿನ ಅಭಿವೃದ್ಧಿಯನ್ನು ನೋಡಿ, ನಮ್ಮ ಭಾರತವೂ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು ಎಂದು ನೀವೆಲ್ಲರೂ ಕನಸು ಕಂಡಿದ್ದೀರಿ. ಇದು ನಿಮ್ಮ ಕನಸಲ್ಲವೇ? ನಿಮ್ಮ ಹೃದಯದಲ್ಲಿರುವ ಕನಸು ನನ್ನ ಹೃದಯದಲ್ಲೂ ಇದೆ. ಇದು ನನ್ನ ಕನಸೂ ಹೌದು. ಇದು 140 ಕೋಟಿ ಭಾರತೀಯರ ಕನಸು. 

ಸ್ನೇಹಿತರೇ,

ಭಾರತದಲ್ಲಿ ಸಾಮರ್ಥ್ಯದ ಕೊರತೆಯಿಲ್ಲ. ಭಾರತದಲ್ಲಿ ಸಂಪನ್ಮೂಲಗಳ ಕೊರತೆಯೂ ಇಲ್ಲ. ಇಂದು, ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಯುವ ಪ್ರತಿಭೆಯ ಕಾರ್ಖಾನೆಯನ್ನು ಹೊಂದಿರುವ ದೇಶ ಭಾರತ. ನೀವು ಹೇಳಿದ್ದು ಸರಿ, ಅದೇ ಭಾರತ. ನಾನು ಇದನ್ನು ಮತ್ತೆ ಪುನರಾವರ್ತಿಸುತ್ತಿದ್ದೇನೆ. ಇಂದು, ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಯುವ ಪ್ರತಿಭಾ ಸಂಪತ್ತನ್ನು ಹೊಂದಿರುವ ದೇಶ ಭಾರತ! ಇದು ಭಾರತ! ಇದು ಭಾರತ! ಈಗ ನಾನು ಕೆಲವು ಸಂಗತಿಗಳನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ. ನಾನು ನಿಮ್ಮಿಂದ ಸರಿಯಾದ ಉತ್ತರವನ್ನು ತಿಳಿದುಕೊಳ್ಳಲು ಬಯಸುತ್ತೇನೆ. ನೀವು ಸಿದ್ಧರಿದ್ದೀರಾ? ಈ ಕರೋನಾ ಸಾಂಕ್ರಾಮಿಕ ಸಮಯದಲ್ಲಿ, ವಿಶ್ವದ ಅತ್ಯಂತ ವೇಗದ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಪ್ರಾರಂಭಿಸಿದ ದೇಶ  ಭಾರತ, ಆ ದೇಶ ಯಾವುದು? ಅದು ಭಾರತ ದೇಶ! ಅದು ಭಾರತ ದೇಶ! ಇಂದು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಹೊಂದಿರುವ ದೇಶ - ಭಾರತ. ಅದು ಭಾರತ ದೇಶ! ಅದು ಭಾರತ ದೇಶ! ಇಂದು ವಿಶ್ವದ ನಂಬರ್ 1 ಸ್ಮಾರ್ಟ್ಫೋನ್ ಡೇಟಾ ಬಳಕೆದಾರ ದೇಶ ಭಾರತ! ಅದು ಭಾರತ ದೇಶ! ಅದು ಭಾರತ ದೇಶ! ಇಂದು ಫಿನ್ ಟೆಕ್ ಅಳವಡಿಕೆ ದರದಲ್ಲಿ ನಂಬರ್ 1 ಸ್ಥಾನದಲ್ಲಿರುವ ದೇಶ ಭಾರತ! ಅದು ಭಾರತ ದೇಶ! ಅದು ಭಾರತ ದೇಶ! ಇಂದು ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲೇ ನಂ.1 ಸ್ಥಾನದಲ್ಲಿರುವ ದೇಶ ಭಾರತ! ಅದು ಭಾರತ ದೇಶ! ಅದು ಭಾರತ ದೇಶ! ಇಂದು ಇಂಟರ್ನೆಟ್ ಬಳಕೆದಾರರ ವಿಷಯದಲ್ಲಿ ವಿಶ್ವದಲ್ಲಿ 2ನೇ ಸ್ಥಾನದಲ್ಲಿರುವ ದೇಶ: ಭಾರತ! ಅದು ಭಾರತ! ಇಂದು, ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ತಯಾರಕ ದೇಶ, ಅದು ಭಾರತ ದೇಶ! ಅದು ಭಾರತ ದೇಶ! ಇಂದು, ಅಕ್ಕಿ, ಗೋಧಿ, ಕಬ್ಬಿನ ಉತ್ಪಾದನೆಯ ವಿಷಯದಲ್ಲಿ ವಿಶ್ವದಲ್ಲಿ 2 ನೇ ಸ್ಥಾನದಲ್ಲಿರುವ ದೇಶವೆಂದರೆ: ಭಾರತ, ಅದು ಭಾರತ! ಇಂದು ವಿಶ್ವದಲ್ಲಿ ಹಣ್ಣು ಮತ್ತು ತರಕಾರಿ ಉತ್ಪಾದನೆಯಲ್ಲಿ 2 ನೇ ಸ್ಥಾನದಲ್ಲಿರುವ ದೇಶ ಭಾರತ, ಅದು ಭಾರತ! ಇಂದು, ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿರುವ ದೇಶವೆಂದರೆ ಭಾರತ, ಅದು ಭಾರತ! ವಿಶ್ವದ ಮೂರನೇ ಅತಿದೊಡ್ಡ ಆಟೋಮೊಬೈಲ್ ಮಾರುಕಟ್ಟೆ ಇರುವ ದೇಶವೂ ಭಾರತವೇ. ಅದು ಭಾರತ ದೇಶ! ವಿಶ್ವದ ಮೂರನೇ ಅತಿದೊಡ್ಡ ನಾಗರಿಕ ವಿಮಾನಯಾನ ಮಾರುಕಟ್ಟೆಯನ್ನು ಹೊಂದಿರುವ ದೇಶ ಭಾರತ, ಅದು ಭಾರತ ದೇಶ! ಈಗ ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯೊಂದಿಗೆ ಮುಂದುವರಿಯುತ್ತಿರುವ ದೇಶ ಭಾರತ, ಅದು ಭಾರತ ದೇಶ!

ಸ್ನೇಹಿತರೇ,

ಇಂದು ವಿಶ್ವ ಹಣಕಾಸು ನಿಧಿ (ಐಎಂಎಫ್) ಭಾರತವನ್ನು ಜಾಗತಿಕ ಆರ್ಥಿಕತೆಯ ಉಜ್ವಲ ತಾಣವೆಂದು ಪರಿಗಣಿಸುತ್ತದೆ. ಜೊತೆಗೆ ಯಾವುದಾದರೂ ದೇಶವೊಂದು ಜಾಗತಿಕ ಪ್ರತಿಕೂಲ ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸುತ್ತದೆ ಎಂದರೆ ಅದು ಭಾರತ ಎಂದು ವಿಶ್ವ ಬ್ಯಾಂಕ್ ನಂಬುತ್ತದೆ. ಇಂದು, ವಿಶ್ವದ ಅನೇಕ ದೇಶಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಬಿಕ್ಕಟ್ಟು ತಲೆದರೋರಿದೆ. ಆದರೆ ಮತ್ತೊಂದೆಡೆ, ಭಾರತೀಯ ಬ್ಯಾಂಕುಗಳ ಶಕ್ತಿಯನ್ನು ಎಲ್ಲೆಡೆ ಶ್ಲಾಘಿಸಲಾಗುತ್ತಿದೆ. 100 ವರ್ಷಗಳಲೇ ವಿಶ್ವದ ಕಂಡ ಅತಿದೊಡ್ಡ ಸಾಂಕ್ರಾಮಿಕದ ಬಿಕ್ಕಟ್ಟಿನ ಮಧ್ಯೆ, ಭಾರತವು ಕಳೆದ ವರ್ಷ ದಾಖಲೆಯ ರಫ್ತು ಮಾಡಿದೆ. ಇಂದು ನಮ್ಮ ವಿದೇಶೀ ವಿನಿಮಯ ಮೀಸಲು ಹೊಸ ಎತ್ತರವನ್ನು ಮುಟ್ಟುತ್ತಿದೆ.

ಸ್ನೇಹಿತರೇ,

ಜಾಗತಿಕ ಒಳಿತಿಗಾಗಿ ಭಾರತ ಹೇಗೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ನಮ್ಮ ಡಿಜಿಟಲ್ ಪಾಲು ಒಂದು ಉದಾಹರಣೆಯಾಗಿದೆ. ಭಾರತದ ʻಫಿನ್‌ಟೆಕ್ʼ ಕ್ರಾಂತಿಯ ಬಗ್ಗೆ ನಿಮಗೆಲ್ಲರಿಗೂ ಗೊತ್ತಿದೆ. 2014ರಲ್ಲಿ ನಾನು ಇಲ್ಲಿಗೆ ಬಂದಾಗ, ನಾನು ನಿಮ್ಮೊಂದಿಗೆ ಒಂದು ಕನಸನ್ನು ಹಂಚಿಕೊಂಡಿದ್ದು ನಿಮಗೆ ನೆನಪಿರಬಹುದು. ಭಾರತದ ಕಡುಬಡವರು ತಮ್ಮದೇ ಆದ ಬ್ಯಾಂಕ್ ಖಾತೆಗಳನ್ನು ಹೊಂದಿರಬೇಕು ಎಂಬುದು ನನ್ನ ಕನಸಾಗಿತ್ತು. ಸ್ನೇಹಿತರೇ, ನೀವು ಹೆಮ್ಮೆ ಪಡುತ್ತೀರಿ; ಕಳೆದ 9 ವರ್ಷಗಳಲ್ಲಿ, ನಾವು ಸುಮಾರು 50 ಕೋಟಿ ಭಾರತೀಯರ ಬ್ಯಾಂಕ್ ಖಾತೆಗಳನ್ನು ತೆರೆದಿದ್ದೇವೆ, ಅಂದರೆ ಸುಮಾರು 500 ದಶಲಕ್ಷ ಜನರು! ಜೊತೆಗೆ, ನಮ್ಮ ಯಶಸ್ಸು ಕೇವಲ ಬ್ಯಾಂಕ್ ಖಾತೆಗಳನ್ನು ತೆರೆಯುವುದಕ್ಕೆ ಸೀಮಿತವಾಗಿಲ್ಲ. ನಾವು ಅಲ್ಲಿಗೇ ನಿಲ್ಲಲಿಲ್ಲ. ಇದು ಭಾರತದಲ್ಲಿ ನಾಗರಿಕ ಸರಬರಾಜಿನ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಪರಿವರ್ತಿಸಿದೆ. ನಾವು ʻಜನ್ ಧನ್ʼ ಬ್ಯಾಂಕ್ ಖಾತೆ, ಮೊಬೈಲ್ ಫೋನ್ ಮತ್ತು ಆಧಾರ್ ಐಡಿಯ ʻಜೆಎಎಂ ಟ್ರಿನಿಟಿʼ ಅಥವಾ ʻಜೆಎಎಂ ತ್ರಿವಳಿʼಯನ್ನು ರಚಿಸಿದ್ದೇವೆ. ಇದು ಕೇವಲ ಒಂದು ಕ್ಲಿಕ್‌ ಮೂಲಕ ಕೋಟ್ಯಂತರ ದೇಶವಾಸಿಗಳಿಗೆ ನೇರ ಲಾಭ ವರ್ಗಾವಣೆಯನ್ನು(ಡಿಬಿಟಿ) ಸಾಧ್ಯವಾಗಿಸಿದೆ, ಕಳೆದ 9 ವರ್ಷಗಳಲ್ಲಿ ದಾಖಲಾದ ಈ ಅಂಕಿ ಅಂಶವು ನಿಮಗೆ ಸಾಕಷ್ಟು ಸಂತೋಷವನ್ನು ನೀಡುತ್ತದೆ - ಕಳೆದ 9 ವರ್ಷಗಳಲ್ಲಿ 28 ಲಕ್ಷ ಕೋಟಿ ರೂ.ಗಳನ್ನು ಅಂದರೆ 500 ಶತಕೋಟಿ ಆಸ್ಟ್ರೇಲಿಯನ್ ಡಾಲರ್‌ಗಳನ್ನು ಅಗತ್ಯವಿರುವವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಕಳುಹಿಸಲಾಗಿದೆ ಎಂದು ತಿಳಿದರೆ ನಿಮಗೆ ಖುಷಿಯಾಗಬಹುದು. ಕರೋನಾ ಅವಧಿಯಲ್ಲಿ, ಅನೇಕ ದೇಶಗಳು ತಮ್ಮ ನಾಗರಿಕರಿಗೆ ಹಣವನ್ನು ಕಳುಹಿಸಲು ಕಷ್ಟಪಟ್ಟವು, ಆದರೆ ಒಂದೇ ಕ್ಲಿಕ್‌ನಲ್ಲಿ ಕಣ್ಣು ಮಿಟುಕಿಸುವಷ್ಟರಲ್ಲಿ ಈ ಕೆಲಸವನ್ನು ಮಾಡುತ್ತಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ʻಯೂನಿವರ್ಸಲ್ ಪಬ್ಲಿಕ್ ಇಂಟರ್ಫೇಸ್ʼ ಅಂದರೆ ಯುಪಿಐ ಭಾರತದಲ್ಲಿ ಆರ್ಥಿಕ ಸೇರ್ಪಡೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ. ಇಂದು ವಿಶ್ವದ ನೈಜ ಸಮಯದ ಡಿಜಿಟಲ್ ಪಾವತಿಗಳಲ್ಲಿ 40 ಪ್ರತಿಶತವು ಭಾರತದಲ್ಲಿ ಮಾತ್ರ ನಡೆಯುತ್ತದೆ. ನೀವು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದರೆ, ಹಣ್ಣು, ತರಕಾರಿ ಅಥವಾ ಪಾನಿಪುರಿ ಬಂಡಿಗಳು ಅಥವಾ ಚಹಾ ಅಂಗಡಿಗಳು ಸೇರಿದಂತೆ ಎಲ್ಲೆಡೆ ಡಿಜಿಟಲ್ ವಹಿವಾಟುಗಳು ನಡೆಯುತ್ತಿರುವುದನ್ನು ನೀವು ನೋಡಿರಬಹುದು.

ಸ್ನೇಹಿತರೇ,

ಭಾರತದ ಈ ಡಿಜಿಟಲ್ ಕ್ರಾಂತಿ ಕೇವಲ ʻಫಿನ್‌ಟೆಕ್ʼಗೆ ಮಾತ್ರ ಸೀಮಿತವಾಗಿಲ್ಲ. ಭಾರತವು ಆಧುನಿಕ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಜನರ ಜೀವನ ಸುಗಮತೆ ಹೆಚ್ಚುತ್ತಿದೆ. ಇದಕ್ಕೆ ಒಂದು ಉದಾಹರಣೆಯೆಂದರೆ ಭಾರತದ ʻಡಿಜಿಲಾಕರ್ʼ, ಇದು ಚಾಲನಾ ಪರವಾನಗಿಯಿಂದ ಹಿಡಿದು ಪದವಿಗಳು ಮತ್ತು ಆಸ್ತಿ ದಾಖಲೆಗಳವರೆಗೆ ಸರ್ಕಾರವು ನೀಡುವ ಪ್ರತಿಯೊಂದು ದಾಖಲೆಯನ್ನು ಸಂಗ್ರಹಿಸುತ್ತದೆ. ʻಡಿಜಿಟಲ್ ಲಾಕರ್ʼನಲ್ಲಿ ಸುಮಾರು ನೂರಾರು ರೀತಿಯ ದಾಖಲೆಗಳು ಪ್ರತಿಬಿಂಬಿತವಾಗುತ್ತವೆ. ನೀವು ಭೌತಿಕ ನಕಲು ಪ್ರತಿಯನ್ನು ಸಂಗ್ರಹಿಸುವ ಅಗತ್ಯವಿಲ್ಲ. ಕೇವಲ ಒಂದು ಪಾಸ್ ವರ್ಡ್ ಇದ್ದರೆ ಸಾಕು. ಈಗ 15 ಕೋಟಿಗೂ ಹೆಚ್ಚು ಅಂದರೆ 150 ದಶಲಕ್ಷಕ್ಕೂ ಹೆಚ್ಚು ಭಾರತೀಯರು ಇದರಲ್ಲಿ ಸೇರಿದ್ದಾರೆ. ಅಂತಹ ಅನೇಕ ಡಿಜಿಟಲ್ ವೇದಿಕೆಗಳು ಇಂದು ಭಾರತೀಯರನ್ನು ಶಕ್ತಿಶಾಲಿಗಳನ್ನಾಗಿ ಮಾಡುತ್ತಿವೆ. 

ಸ್ನೇಹಿತರೇ,

ಇಂದು ಜಗತ್ತು ಭಾರತದ ಪ್ರತಿಯೊಂದು ಹೆಜ್ಜೆ ಮತ್ತು ಪ್ರತಿಯೊಂದು ಸಾಧನೆಯ ಬಗ್ಗೆ ತಿಳಿಯಲು ಬಯಸುತ್ತದೆ. ಸಮಕಾಲೀನ ಜಗತ್ತು ಸಾಗುತ್ತಿರುವ ವಿಶ್ವ ಕ್ರಮವನ್ನು ನೋಡುವುದು ಮತ್ತು ಸಾಧ್ಯತೆಗಳನ್ನು ಹುಡುಕುವುದು ಸ್ವಾಭಾವಿಕವಾಗಿದೆ. ಭಾರತವು ಸಾವಿರಾರು ವರ್ಷಗಳಷ್ಟು ಹಳೆಯದಾದ ಜೀವಂತ ನಾಗರಿಕತೆಯಾಗಿದೆ. ಭಾರತವು ಪ್ರಜಾಪ್ರಭುತ್ವದ ತಾಯಿ. ನಾವು ಸಮಯಕ್ಕೆ ಅನುಗುಣವಾಗಿ ನಮ್ಮನ್ನು ರೂಪಿಸಿಕೊಂಡಿದ್ದೇವೆ ಆದರೆ ಯಾವಾಗಲೂ ನಮ್ಮ ಮೂಲಭೂತ ಅಂಶಗಳಿಗೆ ಅಂಟಿಕೊಂಡಿದ್ದೇವೆ. ನಾವು ರಾಷ್ಟ್ರವನ್ನು ಒಂದು ಕುಟುಂಬವಾಗಿ ನೋಡುತ್ತೇವೆ ಮತ್ತು ಜಗತ್ತನ್ನು 'ವಸುದೈವ ಕುಟುಂಬಕಂ' ಎಂದು ಪರಿಗಣಿಸುತ್ತೇವೆ. ಭಾರತದ ಜಿ-20 ಅಧ್ಯಕ್ಷತೆಯ ಧ್ಯೇಯವಾಕ್ಯವು ಭಾರತವು ತನ್ನ ಆದರ್ಶಗಳಿಂದ ಹೇಗೆ ಬದುಕುತ್ತದೆ ಎಂಬುದು ಪ್ರತಿಬಿಂಬಿಸುತ್ತದೆ. ಜಿ-20 ಅಧ್ಯಕ್ಷನಾಗಿ, ಭಾರತವು 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂದು ಹೇಳುತ್ತದೆ. ಪರಿಸರವನ್ನು ರಕ್ಷಿಸಲು ಭಾರತವು ಸೌರ ಶಕ್ತಿಯ ವಿಷಯದಲ್ಲಿ ಬೃಹತ್ ಗುರಿಗಳನ್ನು ನಿಗದಿಪಡಿಸಿದೆ. 'ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್' ಎಂದು ಭಾರತ ಹೇಳುತ್ತದೆ. ಜಾಗತಿಕ ಸಮುದಾಯವು ಆರೋಗ್ಯಕರವಾಗಿರಬೇಕು ಎಂದು ಬಯಸುವ ಭಾರತವು ಈ ನಿಟ್ಟಿನಲ್ಲಿ 'ಒಂದು ಭೂಮಿ, ಒಂದು ಆರೋಗ್ಯ' ಮಂತ್ರವನ್ನು ಪಠಿಸುತ್ತದೆ. ಕರೋನಾ ಬಿಕ್ಕಟ್ಟಿನ ಸಮಯದಲ್ಲಿ ವಿಶ್ವದ 150ಕ್ಕೂ ಹೆಚ್ಚು ದೇಶಗಳಿಗೆ ಔಷಧಗಳನ್ನು ಕಳುಹಿಸಿದ ದೇಶ ಭಾರತ. ಭಾರತವು 100ಕ್ಕೂ ಹೆಚ್ಚು ದೇಶಗಳಿಗೆ ಉಚಿತ ಲಸಿಕೆಗಳನ್ನು ನೀಡುವ ಮೂಲಕ ಕೋಟ್ಯಂತರ ಜನರ ಜೀವವನ್ನು ಉಳಿಸಿದ ದೇಶವಾಗಿದೆ. ಕೊರೊನಾ ಸಮಯದಲ್ಲಿ ನೀವು ಇಲ್ಲಿ ಕೆಲಸ ಮಾಡಿದ ಸೇವಾ ಮನೋಭಾವವು ನಮ್ಮ ಸಂಸ್ಕೃತಿಯ ವಿಶೇಷತೆಯಾಗಿದೆ. ಇಂದು ಐದನೇ ಸಿಖ್ ಗುರು ಶ್ರೀ ಗುರು ಅರ್ಜುನ್ ದೇವ್ ಜಿ ಅವರ ಹುತಾತ್ಮ ದಿನ. ಗುರೂಜಿಯವರ ಜೀವನವು ಎಲ್ಲರಿಗೂ ಸೇವೆ ಸಲ್ಲಿಸುವ ಪಾಠವನ್ನು ಕಲಿಸಿದೆ. ಗುರು ಅರ್ಜುನ್ ದೇವ್ ಜಿ ಅವರು ʻದಸ್ವಂಧʼ ವ್ಯವಸ್ಥೆಯನ್ನು ಪ್ರಾರಂಭಿಸಿದರು. ಅದರಿಂದ ಸ್ಫೂರ್ತಿ ಪಡೆದು, ಕರೋನಾ ಸಮಯದಲ್ಲಿಯೂ, ಅನೇಕ ಗುರುದ್ವಾರಗಳು ಇಲ್ಲಿನ ಜನರಿಗೆ ಸಹಾಯ ಮಾಡಿದವು. ಆ ಅವಧಿಯಲ್ಲಿ, ಇಲ್ಲಿ ಅನೇಕ ದೇವಾಲಯಗಳ ಅಡುಗೆಮನೆಗಳನ್ನು ಸೋಂಕು ಪೀಡಿತ ವ್ಯಕ್ತಿಗಳಿಗಾಗಿ ತೆರೆಯಲಾಯಿತು. ಆಸ್ಟ್ರೇಲಿಯಾದಲ್ಲಿ ವಾಸಿಸುವ ಮತ್ತು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಸಹಾಯ ಮಾಡಲು ಮುಂದೆ ಬಂದರು. ವಿವಿಧ ಸಾಮಾಜಿಕ ಸಂಸ್ಥೆಗಳು ಸಹ ಈ ಅವಧಿಯಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡಿದವು. ಭಾರತೀಯರು ಎಲ್ಲೇ ಇರಲಿ, ಅವರಲ್ಲಿ ಮಾನವೀಯ ಮನೋಭಾವ ಹಾಗೇ ಉಳಿದಿದೆ.

ಸ್ನೇಹಿತರೇ,

ಮಾನವೀಯತೆಯ ಹಿತದೃಷ್ಟಿಯಿಂದ ಮಾಡಿದ ಇಂತಹ ಕಾರ್ಯಗಳಿಂದಾಗಿ, ಇಂದು ಭಾರತವನ್ನು ಜಾಗತಿಕ ಒಳಿತಿನ ಶಕ್ತಿ ಎಂದು ಕರೆಯಲಾಗುತ್ತಿದೆ. ಎಲ್ಲೆಲ್ಲಿ ವಿಪತ್ತು ಸಂಭವಿಸಿದರೂ, ಭಾರತವು ಸಹಾಯ ಮಾಡಲು ಸದಾ ಸಿದ್ಧವಾಗಿದೆ. ಬಿಕ್ಕಟ್ಟು ಎದುರಾದಾಗಲೆಲ್ಲಾ ಅದನ್ನು ಪರಿಹರಿಸಲು ಭಾರತ ಸಿದ್ಧವಿದೆ. ಇಂದು, ʻಅಂತರರಾಷ್ಟ್ರೀಯ ಸೌರ ಮೈತ್ರಿಕೂಟʼದ ಮೂಲಕ ಸೌರ ಶಕ್ತಿಯ ಬಳಕೆಯನ್ನು ಹೆಚ್ಚಿಸುವುದರಿಲಿ, ಪರಸ್ಪರ ಸಹಕಾರದ ಮೂಲಕ ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯವನ್ನು ರಚಿಸುವುದಿರಲಿ, ʻಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲೈಯನ್ಸ್ʼ ಅನ್ನು ಮುನ್ನಡೆಸುವುದಿರಲಿ, ಭಾರತವು ಸದಾ ವಿವಿಧ ದೇಶಗಳನ್ನು ಒಂದುಗೂಡಿಸುವ ಬಂಧಕ ಶಕ್ತಿಯಾಗಿದೆ. ಇತ್ತೀಚೆಗೆ, ಟರ್ಕಿಯಲ್ಲಿ ವಿನಾಶಕಾರಿ ಭೂಕಂಪ ಸಂಭವಿಸಿದಾಗ, ಭಾರತವು ʻಆಪರೇಷನ್ ದೋಸ್ತ್ʼ ಮೂಲಕ ಸಹಾಯ ಹಸ್ತ ಚಾಚಿತು. ಭಾರತವು ತನ್ನ ಹಿತಾಸಕ್ತಿಗಳನ್ನು ಎಲ್ಲರ ಹಿತಾಸಕ್ತಿಗಳೊಂದಿಗೆ ಜೋಡಿಸುತ್ತದೆ. 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್' (ಎಲ್ಲರ ಬೆಂಬಲ, ಎಲ್ಲರ ಅಭಿವೃದ್ಧಿ, ಪ್ರತಿಯೊಬ್ಬರ ನಂಬಿಕೆ ಮತ್ತು ಪ್ರತಿಯೊಬ್ಬರ ಪ್ರಯತ್ನಗಳು) ನಮ್ಮ ದೇಶೀಯ ಆಡಳಿತದ ಆಧಾರ ಮಾತ್ರವಲ್ಲ, ಜಾಗತಿಕ ಆಡಳಿತದ ದೂರದೃಷ್ಟಿಯೂ ಆಗಿದೆ.

ಸ್ನೇಹಿತರೇ,

ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವ್ಯೂಹಾತ್ಮಕ ಸಹಭಾಗಿತ್ವವು ನಿರಂತರವಾಗಿ ಆಳವಾಗಿ ಬೆಳೆಯುತ್ತಿದೆ. ಇತ್ತೀಚೆಗೆ ನಾವು ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದಕ್ಕೆ (ಇಸಿಟಿಎ) ಸಹಿ ಹಾಕಿದ್ದೇವೆ. ಮುಂದಿನ ಐದು ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರವು ದ್ವಿಗುಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಈಗ ನಾವು ಸಮಗ್ರ ಆರ್ಥಿಕ ಸಹಕಾರ ಒಪ್ಪಂದದ ಮೇಲೆ ಕೆಲಸ ಮಾಡುತ್ತಿದ್ದೇವೆ. ನಾವು ಸ್ಥಿತಿಸ್ಥಾಪಕ ಮತ್ತು ವಿಶ್ವಾಸಾರ್ಹ ಪೂರೈಕೆ ಸರಪಳಿಗಳನ್ನು ನಿರ್ಮಿಸುತ್ತಿದ್ದೇವೆ. ಇದು ಎರಡೂ ದೇಶಗಳ ವ್ಯವಹಾರವನ್ನು ಹೆಚ್ಚಿಸುವುದಲ್ಲದೆ, ವಿಶ್ವದಲ್ಲಿ ಹೊಸ ವಿಶ್ವಾಸವನ್ನು ಮೂಡಿಸುತ್ತದೆ. ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅನೇಕ ನೇರ ವಿಮಾನಗಳಿವೆ. ವರ್ಷಗಳಲ್ಲಿ ವಿಮಾನಗಳ ಸಂಖ್ಯೆ ಹೆಚ್ಚಾಗಿದೆ. ಮುಂಬರುವ ದಿನಗಳಲ್ಲಿ ಅವರ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಎರಡೂ ದೇಶಗಳು ಪರಸ್ಪರರ ಪದವಿಗಳನ್ನು ಗುರುತಿಸುವಲ್ಲಿ ಮುಂದೆ ಸಾಗಿವೆ. ಇದರಿಂದ ನಮ್ಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವವಾಗುತ್ತದೆ. ʻವಲಸೆ ಮತ್ತು ಚಲನಶೀಲತೆ ಪಾಲುದಾರಿಕೆʼ ಒಪ್ಪಂದದ ಬಗ್ಗೆಯೂ ಒಮ್ಮತಕ್ಕೆ ಬರಲಾಗಿದೆ. ಇದು ನಮ್ಮ ನುರಿತ ವೃತ್ತಿಪರರಿಗೆ ಆಸ್ಟ್ರೇಲಿಯಾಕ್ಕೆ ಬಂದು ಇಲ್ಲಿ ಕೆಲಸ ಮಾಡುವುದನ್ನು ಸುಲಭಗೊಳಿಸುತ್ತದೆ, ಜೊತೆಗೆ, ಸ್ನೇಹಿತರೇ, ನಾನು ಇಲ್ಲಿರುವಾಗಲೇ ಒಂದು ಘೋಷಣೆ ಮಾಡಲು ಬಯಸುತ್ತೇನೆ, ಬ್ರಿಸ್ಬೇನ್‌ನಲ್ಲಿರುವ ಭಾರತೀಯ ಸಮುದಾಯದ ಬೇಡಿಕೆ ಈಗ ಈಡೇರಲಿದೆ. ಶೀಘ್ರದಲ್ಲೇ ಬ್ರಿಸ್ಬೇನ್‌ನಲ್ಲಿ ಹೊಸ ಭಾರತೀಯ ದೂತಾವಾಸವನ್ನು ತೆರೆಯಲಾಗುವುದು.

ಸ್ನೇಹಿತರೇ,

ಭಾರತ ಮತ್ತು ಆಸ್ಟ್ರೇಲಿಯಾದ ಗಾಢವಾದ ಪಾಲುದಾರಿಕೆಯು ತಾಯಿ ಭಾರತಿಯಲ್ಲಿ ನಂಬಿಕೆ ಹೊಂದಿರುವ ಪ್ರತಿಯೊಬ್ಬರನ್ನೂ ಸಶಕ್ತಗೊಳಿಸುತ್ತದೆ. ನೀವು ಪ್ರತಿಭೆಯನ್ನು ಹೊಂದಿದ್ದೀರಿ, ನಿಮ್ಮ ಕೌಶಲ್ಯಗಳೇ ನಿಮ್ಮ ಶಕ್ತಿ. ನೀವು ನಿಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಸಹ ಹೊಂದಿದ್ದೀರಿ. ಆಸ್ಟ್ರೇಲಿಯಾದ ಜನರೊಂದಿಗೆ ಬೆರೆಯಲು ನಿಮಗೆ ಸಹಾಯ ಮಾಡುವಲ್ಲಿ ಈ ಮೌಲ್ಯಗಳು ಪ್ರಮುಖ ಪಾತ್ರವಹಿಸುತ್ತವೆ. ನಾನು ನಿನ್ನೆ ಪಪುವಾ ನ್ಯೂ ಗಿನಿಯಾದಿಂದ ಬಂದಿದ್ದೇನೆ. ಅಲ್ಲಿ ನಾನು ʻತಿರುಕ್ಕುರಲ್ʼ ಎಂಬ ತಮಿಳು ಸಾಹಿತ್ಯದ ಸ್ಥಳೀಯ ಭಾಷಾ ಅನುವಾದವನ್ನು ಲೋಕಾರ್ಪಣೆ ಮಾಡಿದೆ. ಈ ಭಾಷಾಂತರವನ್ನು ಅಲ್ಲಿನ ಭಾರತೀಯ ಮೂಲದ ಸ್ಥಳೀಯ ರಾಜ್ಯಪಾಲರು ಮಾಡಿದ್ದಾರೆ. ವಿದೇಶದಲ್ಲಿ ವಾಸಿಸುವಾಗಲೂ, ನಾವು ನಮ್ಮ ಬೇರುಗಳ ಬಗ್ಗೆ ಹೆಮ್ಮೆಪಡಬೇಕು ಮತ್ತು ನಮ್ಮ ಬೇರುಗಳೊಂದಿಗೆ ಹೇಗೆ ಸಂಪರ್ಕದಲ್ಲಿರಬೇಕು ಎಂಬುದಕ್ಕೆ ಇದು ಜೀವಂತ ಉದಾಹರಣೆಯಾಗಿದೆ. ನೀವು ಭಾರತೀಯ ಸಂಸ್ಕೃತಿಯ ಪರಿಮಳವನ್ನು ಆಸ್ಟ್ರೇಲಿಯಾದಲ್ಲಿ ಹರಡುತ್ತಿದ್ದೀರಿ. ನೀವು ಭಾರತದ ಸಾಂಸ್ಕೃತಿಕ ರಾಯಭಾರಿಗಳು, ಆಸ್ಟ್ರೇಲಿಯಾದಲ್ಲಿ ಭಾರತದ ಬ್ರಾಂಡ್ ಅಂಬಾಸಿಡರ್‌ಗಳು.

ಸ್ನೇಹಿತರೇ,

ನಾನು ಮಾತು ಮುಗಿಸುವ ಮೊದಲು ನಿಮ್ಮಿಂದ ಒಂದು ಕೇಳಲು ಬಯಸುತ್ತೇನೆ. ನೀವು ಅದನ್ನು ನನಗೆ ಕೊಡಬಲ್ಲಿರಾ? ನಿಮ್ಮ ಧ್ವನಿ ಸ್ವಲ್ಪ ದುರ್ಬಲಗೊಂಡಿದೆ. ನೀವು ಅದನ್ನು ನನಗೆ ಕೊಡುತ್ತೀರಾ? ಖಂಡಿತ? ಹೇಳಿ? ನೀವು ಭಾರತಕ್ಕೆ ಬಂದಾಗಲೆಲ್ಲಾ, ನೀವು ಭಾರತಕ್ಕೆ ಬಂದಾಗಲೆಲ್ಲಾ, ಕನಿಷ್ಠ ಒಬ್ಬ ಆಸ್ಟ್ರೇಲಿಯಾದ ಸ್ನೇಹಿತ ಮತ್ತು ಅವರ ಕುಟುಂಬವನ್ನು ನಿಮ್ಮೊಂದಿಗೆ ಕರೆತರಬೇಕೆಂದು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಇದು ಅವರಿಗೆ ಭಾರತವನ್ನು ಅರ್ಥಮಾಡಿಕೊಳ್ಳಲು ಮತ್ತು ತಿಳಿದುಕೊಳ್ಳಲು ಉತ್ತಮ ಅವಕಾಶವನ್ನು ನೀಡುತ್ತದೆ. ನೀವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದೀರಿ. ಬಹಳ ಸಮಯದ ನಂತರ ನಿಮ್ಮನ್ನು ಭೇಟಿಯಾಗುವ ಅವಕಾಶ ನನಗೆ ಸಿಕ್ಕಿದೆ. ನಾನು ನಿಮಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ಸಂತೋಷವನ್ನು ಬಯಸುತ್ತೇನೆ! ಮತ್ತೊಮ್ಮೆ, ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು!

ನನ್ನೊಂದಿಗೆ ಹೇಳಿ - ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಅನಂತ ಧನ್ಯವಾದಗಳು!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Millennials Rejected Them, Gen Z Too…’: PM Modi Dismisses Rahul Gandhi’s ‘Vote Chori’ Claims

Media Coverage

Millennials Rejected Them, Gen Z Too…’: PM Modi Dismisses Rahul Gandhi’s ‘Vote Chori’ Claims
NM on the go

Nm on the go

Always be the first to hear from the PM. Get the App Now!
...
Text of PM’s address during launch of development works, nationwide campaign for HPV vaccination from Ajmer
February 28, 2026
Our government is committed to all-round development: PM
Today, I had the privilege of launching the nationwide HPV vaccination campaign from Ajmer, inaugurating and laying foundation stones for multiple projects and distributing appointment letters to the youth: PM
The HPV vaccination campaign has commenced from Ajmer, this campaign is a significant step towards empowering the Nari Shakti of the country: PM
The double-engine government is moving forward by taking both Rajasthan’s heritage and development together: PM
The campaign to link rivers started by our government will significantly benefit Rajasthan: PM
There is no shortage of sunlight in Rajasthan, this very sunshine is becoming a source of savings and income for the common man: PM
A very significant role is being played by the PM Surya Ghar Free Electricity Scheme, this scheme has the power to change Rajasthan's destiny: PM

भारत माता की जय।

भारत माता की जय।

भारत माता की जय।

तीर्थराज पुष्कर और माता सावित्री की इस पावन भूमि पर, आज मुझे आप सबके बीच आने का, आपके आशीर्वाद प्राप्त करने का अवसर मिला है। इस मंच से मैं सुरसुरा के तेजाजी धाम को, पृथ्वीराज की भूमि अजमेर को प्रणाम करता हूं।

मेरे साथ बोलिए –

तीर्थराज पुष्कर की जय।

तीर्थराज पुष्कर की जय।

वीर तेजाजी महाराज की जय।

वीर तेजाजी महाराज की जय।

भगवान देव नारायण की जय।

भगवान देव नारायण की जय।

वरूण अवतार भगवान झूलेलाल जी की जय।

भगवान झूलेलाल जी की जय।

मंच पर विराजमान राजस्थान के राज्यपाल हरिभाउ बागडे जी, राज्य के लोकप्रिय मुख्यमंत्री श्री भजनलाल शर्मा जी, पूर्व मुख्यमंत्री बहन वसुंधरा जी, केंद्रीय मंत्रिमंडल में मेरे साथी भगीरथ चौधरी जी, उपमुख्यमंत्री प्रेमचंद भैरवा जी, दिया कुमारी जी, संसद में मेरे साथी, भाजपा के प्रदेश अध्यक्ष मदन राठौर जी, उपस्थित अन्य मंत्रिगण, अन्य महानुभाव और राजस्थान के मेरे प्यारे भाई और बहनों। मैं पूज्य संतों का बहुत आभारी हूं, कि हमें आशीर्वाद देने के लिए इतनी बड़ी संख्या में पूज्य संतगण यहां मौजूद हैं।

साथियों,

अजमेर आस्था और शौर्य की धरती है। यहां तीर्थ भी है और क्रांतिवीरों के पदचिन्ह भी हैं। अभी कल ही मैं इजराइल की यात्रा को पूरा करके भारत लौटा हूं। राजस्थान के सपूत मेजर दलपत सिंह के शौर्य को इजराइल के लोग आज भी गौरव से याद करते हैं। मुझे भी इजराइल की संसद में, मेजर दलपत सिंह जी के शौर्य को नमन करने का सौभाग्य मिला। राजस्थान के वीर बाकुरों की, इजराइल के हाइफा शहर को आजाद कराने में जो भूमिका थी, मुझे उसका गौरवगान करने का अवसर मिला है।

साथियों,

कुछ समय पहले ही, राजस्थान में भाजपा की डबल इंजर सरकार को दो साल पूरे हुए हैं, मुझे संतोष है कि आज राजस्थान विकास के नए पथ पर अग्रसर है। विकास के जिन वायदों के साथ भाजपा सरकार आपकी सेवा में आई थी, उन्हें तेजी के साथ पूरा कर रही है। और आज का दिन, विकास के इसी अभियान को तेज करने का दिवस है। थोड़ी देर पहले यहां राजस्थान के विकास से जुड़ी करबी 17 हजार करोड़ रूपयों की परियोजनाओं का शिलान्यास और लोकार्पण हुआ है। सड़क, बिजली, पानी, स्वास्थ्य, शिक्षा, हर क्षेत्र में नई शक्ति जुड़ रही है। ये सारे प्रोजेक्टस राजस्थान की जनता की सुविधा बढ़ाएंगे और राजस्थान के युवाओं के लिए, रोजगार के भी अवसर पैदा करेंगे।

साथियों,

भाजपा की डबल इंजर सरकार लगातार युवा शक्ति को सशक्त कर रही है। दो साल पहले तक राजस्थान से भर्तियों में भ्रष्टाचार और पेपर लीक की ही खबरें चमकती रहती थीं, आती रहती थीं। अब राजस्थान में पेपर लीक पर लगाम लगी है, दोषियों पर सख्त कार्रवाई हो रही है। आज यहां इसी मंच से राजस्थान के 21 हजार से अधिक युवाओं को नियुक्ति पत्र भी सौंपे गए हैं। ये बहुत बड़ा बदलाव आया है। मैं इस बदलाव के लिए, नई नौकरियों के लिए, विकास के सभी कामों के लिए, राजस्थान के आप सभी लोगों को बहुत-बहुत बधाई देता हूं।

साथियों,

आज वीरांगनाओं की इस धरती से, मुझे देशभर की बेटियों के लिए एक अहम अभियान शुरू करने का अवसर मिला है। यहां अजमेर से HPV वैक्सीनेशन अभियान शुरू हुआ है। ये अभियान, देश की नारीशक्ति को सशक्त करने की दिशा में अहम कदम है।

साथियों,

हम सब जानते हैं कि परिवार में जब मां बीमार होती है, तो घर बिखर सा जाता है। अगर मां स्वस्थ है, तो परिवार हर संकट का सामना करने में सक्षम रहता है। इसी भाव से, भाजपा सरकार ने महिलाओं को संबल देने वाली अनेक योजनाएं चलाई हैं।

साथियों,

हमने 2014 से पहले का वो दौर देखा है, जिसमें शौचालय के अभाव में बहनों-बेटियों को कितनी पीड़ा, कितना अपमान झेलना पड़ता था। बच्चियां स्कूल छोड़ देती थीं, क्योंकि वहां अलग टॉयलेट की सुविधा नहीं होती थी। गरीब बेटियां सेनिटरी पैड्स नहीं ले पाती थीं। पहले जो सत्ता में रहे, उनके लिए ये छोटी बातें थीं। इसलिए इन समस्याओं की चर्चा तक नहीं होती थी। लेकिन हमारे लिए ये बहनों-बेटियों को बीमार करने वाला, उनके अपमान से जुड़ा संवेदनशील मसला था। इसलिए, हमने इनका मिशन मोड पर समाधान किया।

साथियों,

गर्भावस्था के दौरान कुपोषण माताओं के जीवन के लिए बहुत बड़ा खतरा होता था। हमने सुरक्षित मातृत्व के लिए योजना चलाई, मां को पोषक आहार मिले, इसके लिए पांच हज़ार रुपए बहनों के खाते में जमा करने की योजना शुरु की। मां धुएं में खांसती रहती थी, लेकिन उफ्फ तक नहीं करती थी। हमने कहा ये नहीं चलेगा। और इसलिए उज्जवला गैस योजना बनाई गई। ये सब इसलिए संभव हुआ, क्योंकि भाजपा सरकार, सत्ता भाव से नहीं, संवेदनशीलता के साथ काम करती है।

साथियों,

21वीं सदी का एक चौथाई हिस्सा बीत चुका है। आज का समय राजस्थान के विकास के लिए बड़ा महत्वपूर्ण है। भाजपा की डबल इंजन सरकार, राजस्थान की विरासत और विकास, दोनों को साथ लेकर चल रही है। हम सब जानते हैं, अच्छी सड़क, अच्छी रेल और हवाई सुविधा सिर्फ सफर आसान नहीं करती, वो पूरे इलाके की किस्मत बदल देती है। जब गांव-गांव तक अच्छी सड़क पहुँचती है, तो किसान अपनी फसल सही दाम पर बेच पाता है। व्यापारी आसानी से अपना सामान बाहर भेज पाते हैं। और हमारा अजमेर-पुष्कर तो, उसकी पर्यटन की ताकत कौन नहीं जानता। अच्छी कनेक्टिविटी का पर्यटन पर सबसे अच्छा असर पड़ता है। जब सफर आसान होता है, तो ज्यादा लोग घूमने आते हैं।

और साथियों,

जब पर्यटक आते हैं तो स्वाभाविक है होटल चलते हैं, ढाबे चलते हैं, कचौड़ी और दाल बाटी ज्यादा बिकती है, यहां राजस्थान के कारीगरों का बनाया सामान बिकता है, टैक्सी चलती है, गाइड को काम मिलता है। यानी एक पर्यटक कई परिवारों की रोज़ी-रोटी बन जाता है। इसी सोच के साथ हमारी सरकार, राजस्थान में आधुनिक कनेक्टिविटी पर बहुत बल दे रही है।

साथियों,

जैसे-जैसे राजस्थान में कनेक्टिविटी का विस्तार हो रहा है, वैसे-वैसे यहां निवेश के लिए भी अवसर लगातार बढ़ते जा रहे हैं। दिल्ली-मुंबई इंडस्ट्रियल कॉरिडोर के इर्द-गिर्द उद्योगों के लिए एक बहुत ही शानदार इंफ्रास्ट्रक्चर बनाया जा रहा है। यानी राजस्थान को अवसरों की भूमि बनाने के लिए, डबल इंजन सरकार हर संभव, अनेक विध काम कर रही है।

साथियों,

राजस्थान की माताएं अपने बच्चों को पालने में ही, राष्ट्र भक्ति का संस्कार देती हैं। राजस्थान की ये धरा जानती है कि देश का सम्मान क्या होता है, और इसीलिए आज राजस्थान की इस धरा पर, मैं आप लोगों से एक और बात कहने आया हूं।

साथियों,

हाल में ही, दिल्ली में, दुनिया का सबसे बड़ा AI सम्मेलन हुआ, Artificial Intelligence इसमें दुनिया के अनेक देशों के प्रधानमंत्री, अनेक देशों के राष्ट्रपति, अनेक देशों के मंत्रि, उस कार्यक्रम में आए थे। दुनिया की बड़ी-बड़ी कंपनियां, उन कंपनियों के कर्ता-धर्ता वो भी एक छत के नीचे इकट्ठे हुए थे। सबने भारत की खुले मन से प्रशंसा की। मैं जरा राजस्थान के मेरे भाई-बहनों से पूछना चाहता हूं। जब दुनिया के इतने सारे लोग, भारत की प्रशंसा करते हैं, ये सुनकर के आपको गर्व होता है की नहीं होता है? आपको गर्व होता है कि नहीं होता है? आपको अभिमान होता है कि नहीं होता है? आपका माथा ऊंचा हुआ या नहीं हुआ? आपका सीना चौड़ा हुआ कि नहीं हुआ?

साथियों,

आपको गर्व हुआ, लेकिन हताशा निराशा में डूबी, लगातार पराजय के कारण थक चुकी कांग्रेस ने क्या किया, ये आपने देखा है। दुनियाभर के मेहमानों के सामने, कांग्रेस ने देश को बदनाम करने की कोशिश की। इन्होंने विदेशी मेहमानों के सामने देश को बेइज्जत करने के लिए पूरा ड्रामा किया।

साथियों,

कांग्रेस, पूरे देश में ल्रगातार हार रही है, और गुस्से में वो इसका बदला, वो भारत को बदनाम करके ले रही है। कभी कांग्रेस, INC यानी इंडियन नेशनल कांग्रेस थी, लेकिन अब INC नहीं बची है, इंडियन नेशनल कांग्रेस नहीं बची है, आज वो INC के बजाय MMC, MMC बन गई है। MMC यानी मुस्लिम लीगी माओवादी कांग्रेस हो चुकी है।

राजस्थान के मेरे वीरों,

इतिहास गवाह है, मुस्लिम लीग भारत से नफरत करती थी, और इसलिए मुस्लिम लीग ने देश बांट दिया। आज कांग्रेस भी वही कर रही है। माओवादी भी, भारत की समृद्धि, हमारे संविधान और हमारे सफल लोकतंत्र से नफरत करते हैं, ये घात लगाकर हमला करते हैं, कांग्रेस भी घात लगाकर, देश को बदनाम करने के लिए कहीं भी घुस जाती है। कांग्रेस के ऐसे कुकर्मों को देश कभी माफ नहीं करेगा।

साथियों,

देश को बदनाम करना, देश की सेनाओं को कमजोर करना, ये कांग्रेस की पुरानी आदत रही है। आप याद कीजिए, यही कांग्रेस है, जिसने हमारी सेना के जवानों को हथियारों और वर्दी तक के लिए तरसा कर रखा था। ये वही कांग्रेस है, जिसने सालों तक हमारे सैनिक परिवारों को वन रैंक वन पेंशन से वंचित रखा था। ये वही कांग्रेस है, जिसके जमाने में विदेशों से होने वाले रक्षा सौदों में बड़े-बड़े घोटाले होते थे।

साथियों,

बीते 11 वर्षों में भारत की सेना ने हर मोर्चे पर आतंकियों पर, देश के दुश्मनों पर करारा प्रहार किया। हमारी सेना, हर मिशन, हर मोर्चे में विजयी रही। सर्जिकल स्ट्राइक से लेकर ऑपरेशन सिंदूर तक, वीरता का लोहा मनवाया, लेकिन कांग्रेस के नेताओं ने इसमें भी दुश्मनों के झूठ को ही आगे बढ़ाया। देश के लिए जो भी शुभ है, जो भी अच्छा है, जो भी देशवासियों का भला करने वाला है, कांग्रेस उस सबका विरोध करती है। इसलिए, देश आज कांग्रेस को सबक सिखा रहा है।

साथियों,

राजस्थान में तो आपने कांग्रेस के कुशासन को करीब से अनुभव किया है। यहां जितने दिन कांग्रेस की सरकार रही, वो भ्रष्टाचार करने और आपसी लड़ाई-झगड़े में ही उलझी रही। कांग्रेस ने हमारे किसानों को भी हमेशा धोखा दिया है। आप याद कीजिए, कांग्रेस ने दशकों तक सिंचाई की परियोजनाओं को कैसे लटकाए रखा। इसका राजस्थान के किसानों को बहुत अधिक नुकसान हुआ है। ERCP परियोजना को कांग्रेस की सरकारों ने केवल फाइलों और घोषणाओं में उलझाकर रखा। हमारी सरकार ने आते ही इस स्कीम को फाइलों से निकालकर धरातल पर उतारने का प्रयास किया है।

साथियों,

हमारी सरकार ने नदियों को जोड़ने का जो अभियान शुरु किया है, उसका बहुत अधिक फायदा राजस्थान को मिलना तय है। संशोधित पार्वती-कालीसिंध-चंबल लिंक परियोजना हो, यमुना-राजस्थान लिंक प्रोजेक्ट हो, डबल इंजन सरकार ऐसी अनेक सिंचाई परियोजनाओं का लाभ किसानों तक पहुंचाने के लिए प्रतिबद्ध है। आज भी झालावाड़, बारां, कोटा और बूंदी जिले के लिए पानी की अनेक परियोजनाओं पर काम शुरु हुआ है। हमारा प्रयास है, कि राजस्थान में भूजल का स्तर भी ऊपर उठे।

साथियों,

भाजपा सरकार, राजस्थान के सामर्थ्य को समझते हुए, योजनाएं बना रही है, उन्हें लागू कर रही है। मुझे खुशी है कि राजस्थान अब, सूरज की ताकत से समृद्धि कमाने वाली धरती बन गया है। हम सब जानते हैं, हमारे राजस्थान में धूप की कोई कमी नहीं। अब यही धूप, सामान्य मानवी के घर की बचत और कमाई का साधन बन रही है। और इसमें बहुत बड़ी भूमिका है, प्रधानमंत्री सूर्यघर मुफ्त बिजली योजना की। इस योजना में राजस्थान का भाग्य बदलने की ताकत है। इस योजना में भाजपा सरकार लोगों को अपनी छत पर सोलर पैनल लगाने के लिए 78 हजार रुपए की सहायता देती है। सरकार सीधे आपके बैंक खाते में पैसे भेजती है। आजादी के बाज सब बजट, सब योजनाएं देख लीजिए, जिसमें मध्यम वर्ग को सबसे ज्यादा लाभ होने वाला है, ऐेसी योजना कभी नजर नहीं आएगी, आज इन परिवारों को सोलर पैनल लगाने के लिए 78 हजार रुपए सीधा सरकार देती है। सबसे अधिक लाभ मध्यम वर्ग के लोग ले रहे हैं। और जिससे घर पर एक छोटा सा बिजली घर तैयार हो जाता है। दिन में सूरज की रोशनी से बिजली बनती है, घर में वही बिजली काम आती है और जो ज्यादा बिजली बनती है, वो बिजली ग्रिड में जाती है। और जिस घर में बिजली बनी होती है, उसे भी इसका लाभ मिलता है।

साथियों,

आज राजस्थान में सवा लाख से अधिक परिवार इस योजना से जुड़ चुके हैं। और इस योजना की वजह से, कई घरों का बिजली बिल लगभग जीरो आ रहा है। यानी खर्च कम हुआ है, बचत ज़्यादा हुई है।

साथियों,

विकसित राजस्थान से विकसित भारत के मंत्र पर हम लगातार काम कर रहे हैं। आज जिन योजनाओं पर काम शुरू हुआ है, वो विकसित राजस्थान की नींव को और अधिक मजबूत करेंगे। जब राजस्थान विकसित होगा, तो यहां के हर परिवार का जीवन समृद्ध होगा। आप सभी को एक बार फिर, विकास परियोजनाओं के लिए बहुत-बहुत शुभकामनाएं। मेरे साथ बोलिये-

भारत माता की जय!

भारत माता की जय!

वंदे मातरम के 150 साल देश मना रहा है। मेरे साथ बोलिये-

वंदे मातरम।

वंदे मातरम।

वंदे मातरम।

वंदे मातरम।

वंदे मातरम।

वंदे मातरम।

वंदे मातरम।

वंदे मातरम।

वंदे मातरम।

वंदे मातरम।

बहुत-बहुत धन्यवाद।