"ಇದು ಭಾರತದ ಇತಿಹಾಸದಲ್ಲಿ, ದೇಶವು ದಾಪುಗಾಲು ಇಡುವ ಅವಧಿಯಾಗಿದೆ"
"ಭಾರತಕ್ಕೆ ಇದು ಸರಿಯಾದ ಸಮಯ, ಇದು ಭಾರತದ ಸಮಯ”
"ರಾಷ್ಟ್ರೀಯ ಪ್ರಯತ್ನಗಳು ಒಂದೇ ಗುರಿಯತ್ತ ಕೇಂದ್ರೀಕೃತವಾಗಿರುವ ಈ ಸಂದರ್ಭದಲ್ಲಿ, ನಮ್ಮ ಸ್ವಾತಂತ್ರ್ಯ ಹೋರಾಟವು ನಮಗೆ ದೊಡ್ಡ ಸ್ಫೂರ್ತಿಯಾಗಿದೆ"
"ಇಂದು, ನಿಮ್ಮ ಗುರಿಗಳು, ನಿಮ್ಮ ಸಂಕಲ್ಪಗಳು ಒಂದೇ ಆಗಿರಬೇಕು ಅದು - ʻಅಭಿವೃದ್ಧಿ ಹೊಂದಿದ ಭಾರತʼ ಆಗಿರಬೇಕು"
"India (ಭಾರತ) ಮಾದರಿಯಲ್ಲೇ Idea(ಆಲೋಚನೆ) ಪದವು ʻIʼ (ನಾನು) ನಿಂದ ಪ್ರಾರಂಭವಾಗುತ್ತದೆ, ಅಭಿವೃದ್ಧಿ ಪ್ರಯತ್ನಗಳು ʻನಾನುʼ (ಸ್ವಯಂ) ಇಂದ ಪ್ರಾರಂಭವಾಗುತ್ತವೆʼʼ
"ನಾಗರಿಕರು, ತಮ್ಮ ಪಾತ್ರ ಯಾವುದೇ ಇರಲಿ, ತಮ್ಮ ಕರ್ತವ್ಯವನ್ನು ಮಾಡಲು ಪ್ರಾರಂಭಿಸಿದಾಗ, ದೇಶವು ಮುಂದೆ ಸಾಗುತ್ತದೆ"
"ದೇಶದ ಪ್ರಜೆಗಳಾಗಿ, ನಮಗೆ ಪರೀಕ್ಷೆಯ ದಿನಾಂಕವನ್ನು ಘೋಷಿಸಲಾಗಿದೆ. ʻಅಮೃತ ಕಾಲʼಕ್ಕೆ 25 ವರ್ಷಗಳು ನಮ್ಮ ಮುಂದೆ ಇವೆ. ಇದಕ್ಕಾಗಿ ನಾವು ದಿನದ 24 ಗಂಟೆಯೂ ಕೆಲಸ ಮಾಡಬೇಕು.
"ಯುವ ಶಕ್ತಿಯು ಬದಲಾವಣೆಯ ರೂವಾರಿ ಮತ್ತು ಬದಲಾವಣೆಯ ಫಲಾನುಭವಿಗಳು"
"ಪ್ರಗತಿಯ ಮಾರ್ಗಸೂಚಿಯನ್ನು ಸರ್ಕಾರ ಮಾತ್ರ ನಿರ್ಧರಿಸುವುದಿಲ್ಲ, ಜೊತೆಗೆ ರಾಷ್ಟ್ರವು ಅದನ್ನು ನಿರ್ಧರಿಸುತ್ತದೆ. ʻವಿಕಸಿತ ಭಾರತʼವನ್ನು ʻಸಬ್ ಕಾ ಪ್ರಯಾಸ್ʼ ಮೂಲಕ ಮಾತ್ರ ನಿರ್ಮಿಸಬೇಕು"

ನಮಸ್ಕಾರ!

ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಧರ್ಮೇಂದ್ರ ಪ್ರಧಾನ್ ಅವರೇ, ದೇಶಾದ್ಯಂತದ ರಾಜ್ಯಪಾಲರು, ಶಿಕ್ಷಣ ಕ್ಷೇತ್ರದ ಗಣ್ಯ ವ್ಯಕ್ತಿಗಳು, ಮಹಿಳೆಯರೇ ಮತ್ತು ಮಹನೀಯರೇ!

ವಿಕಸಿತ ಭಾರತ'ದ ನಿರ್ಣಯಗಳಿಗೆ ಸಂಬಂಧಿಸಿದಂತೆ ಇಂದು ಬಹಳ ಮುಖ್ಯವಾದ ದಿನ. 'ವಿಕಸಿತ ಭಾರತ'ಕ್ಕೆ ಸಂಬಂಧಿಸಿದ ಈ ಕಾರ್ಯಾಗಾರವನ್ನು ಆಯೋಜಿಸಿದ್ದಕ್ಕಾಗಿ ನಾನು ಎಲ್ಲ ರಾಜ್ಯಪಾಲರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ದೇಶದ ಯುವಕರಿಗೆ ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನು ಹೊತ್ತಿರುವ ಎಲ್ಲ ಸಹೋದ್ಯೋಗಿಗಳನ್ನು ನೀವು ಒಂದೇ ವೇದಿಕೆಯಲ್ಲಿ ತಂದಿದ್ದೀರಿ. ಶಿಕ್ಷಣ ಸಂಸ್ಥೆಗಳ ಪಾತ್ರವು ವೈಯಕ್ತಿಕ ಅಭಿವೃದ್ಧಿಗೆ ಕಾರಣವಾಗುತ್ತದೆ, ಮತ್ತು ರಾಷ್ಟ್ರವನ್ನು ವೈಯಕ್ತಿಕ ಅಭಿವೃದ್ಧಿಯ ಮೂಲಕ ನಿರ್ಮಿಸಲಾಗುತ್ತದೆ. ಭಾರತವು ಪ್ರಸ್ತುತ ತನ್ನನ್ನು ತಾನು ಕಂಡುಕೊಳ್ಳುತ್ತಿರುವ ಯುಗದಲ್ಲಿ, ವೈಯಕ್ತಿಕ ಅಭಿವೃದ್ಧಿಯ ಅಭಿಯಾನವು ಅತ್ಯಂತ ನಿರ್ಣಾಯಕವಾಗಿದೆ. ಯುವ ಧ್ವನಿ ಕಾರ್ಯಾಗಾರದ ಯಶಸ್ಸಿಗೆ ನಾನು ನಿಮ್ಮೆಲ್ಲರಿಗೂ ಶುಭ ಕೋರುತ್ತೇನೆ.

ಸ್ನೇಹಿತರೇ,

ಪ್ರತಿಯೊಂದು ದೇಶವು ತನ್ನ ಅಭಿವೃದ್ಧಿಯ ಪ್ರಯಾಣವನ್ನು ಅನೇಕ ಪಟ್ಟು ಮುಂದೆ ಕೊಂಡೊಯ್ಯುವಾಗ ತನ್ನ ಇತಿಹಾಸದಲ್ಲಿ ಒಂದು ಹಂತವನ್ನು ಅನುಭವಿಸುತ್ತದೆ. ಇದು ಆ ರಾಷ್ಟ್ರಕ್ಕೆ 'ಅಮೃತ ಕಾಲ' (ಸುವರ್ಣ ಯುಗ) ಇದ್ದಂತೆ. ವಿಕಸಿತ ಭಾರತಕ್ಕೆ ಈ 'ಅಮೃತ ಕಾಲ' ಈಗ ಬಂದಿದೆ. ಇದು ಭಾರತದ ಇತಿಹಾಸದಲ್ಲಿ ಒಂದು ದೊಡ್ಡ ಜಿಗಿತವನ್ನು ತೆಗೆದುಕೊಳ್ಳಲಿರುವ ಅವಧಿಯಾಗಿದೆ. ಒಂದು ನಿರ್ದಿಷ್ಟ ಸಮಯದಲ್ಲಿ, ಇಷ್ಟು ದೊಡ್ಡ ಜಿಗಿತವನ್ನು ತೆಗೆದುಕೊಂಡು ತಮ್ಮನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾಗಿ ಪರಿವರ್ತಿಸಿದ ದೇಶಗಳ ಹಲವಾರು ಉದಾಹರಣೆಗಳು ನಮ್ಮ ಸುತ್ತಲೂ ಇವೆ. ಅದಕ್ಕಾಗಿಯೇ ನಾನು ಹೇಳುತ್ತೇನೆ, ಈಗ ಭಾರತಕ್ಕೆ ಸಮಯ, ಇದು ಸರಿಯಾದ ಸಮಯ. ಈ 'ಅಮೃತಕಾಲ'ದ ಪ್ರತಿಯೊಂದು ಕ್ಷಣವನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು; ನಾವು ಒಂದು ಕ್ಷಣವನ್ನೂ ಕಳೆದುಕೊಳ್ಳಲು ಸಾಧ್ಯವಿಲ್ಲ.

ಸ್ನೇಹಿತರೇ,

ಸ್ವಾತಂತ್ರ್ಯಕ್ಕಾಗಿ ನಮ್ಮ ಸುದೀರ್ಘ ಹೋರಾಟವು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ. ಸ್ವಾತಂತ್ರ್ಯವನ್ನು ಅಂತಿಮ ಉದ್ದೇಶವೆಂದು ಪರಿಗಣಿಸಿ, ಉತ್ಸಾಹ ಮತ್ತು ದೃಢನಿಶ್ಚಯದೊಂದಿಗೆ ನಾವು ಗುರಿಯೊಂದಿಗೆ ಕ್ಷೇತ್ರವನ್ನು ಪ್ರವೇಶಿಸಿದಾಗ, ನಾವು ಯಶಸ್ವಿಯಾಗಿದ್ದೇವೆ. ಈ ಅವಧಿಯಲ್ಲಿ, ಸತ್ಯಾಗ್ರಹ, ಕ್ರಾಂತಿಯ ಮಾರ್ಗ, ಸ್ವದೇಶಿ ಬಗ್ಗೆ ಜಾಗೃತಿ ಅಥವಾ ಸಾಮಾಜಿಕ ಮತ್ತು ಶೈಕ್ಷಣಿಕ ಸುಧಾರಣೆಗಳ ಪ್ರಜ್ಞೆಯ ಮೂಲಕ, ಈ ಎಲ್ಲಾ ಧಾರೆಗಳು ಒಟ್ಟಾಗಿ ಸ್ವಾತಂತ್ರ್ಯ ಚಳವಳಿಯ ಶಕ್ತಿಯ ಮೂಲವಾದವು. ಈ ಯುಗದಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಲಕ್ನೋ ವಿಶ್ವವಿದ್ಯಾಲಯ, ವಿಶ್ವ ಭಾರತಿ, ಗುಜರಾತ್ ವಿದ್ಯಾಪೀಠ, ನಾಗ್ಪುರ ವಿಶ್ವವಿದ್ಯಾಲಯ, ಅಣ್ಣಾಮಲೈ ವಿಶ್ವವಿದ್ಯಾಲಯ, ಆಂಧ್ರ ವಿಶ್ವವಿದ್ಯಾಲಯ, ಕೇರಳ ವಿಶ್ವವಿದ್ಯಾಲಯ ಮತ್ತು ಇತರ ಅನೇಕ ಸಂಸ್ಥೆಗಳು ರಾಷ್ಟ್ರದ ಪ್ರಜ್ಞೆಯನ್ನು ಬಲಪಡಿಸಲು ಕೊಡುಗೆ ನೀಡಿವೆ. ಯುವಕರಲ್ಲಿ ಸ್ವಾತಂತ್ರ್ಯದ ಬಗ್ಗೆ ಹೊಸ ಜಾಗೃತಿ ಎಲ್ಲಾ ಧಾರೆಗಳಲ್ಲಿ ಹರಡಿದ ಸಮಯ ಇದು. ಸ್ವಾತಂತ್ರ್ಯಕ್ಕಾಗಿ ಸಮರ್ಪಿತವಾದ ಇಡೀ ಪೀಳಿಗೆ ಹೊರಹೊಮ್ಮಿತು. ಏನು ಮಾಡಬೇಕೋ ಅದು ಸ್ವಾತಂತ್ರ್ಯಕ್ಕಾಗಿ ಇರಬೇಕು ಮತ್ತು ಅದನ್ನು ಈಗಲೇ ಮಾಡಬೇಕು ಎಂಬ ಆಲೋಚನೆ ದೇಶದಲ್ಲಿ ಬೆಳೆಯಿತು. ಯಾರಾದರೂ ಚಕ್ರವನ್ನು ತಿರುಗಿಸಿದರೆ, ಅದು ಸ್ವಾತಂತ್ರ್ಯಕ್ಕಾಗಿಯೂ ಇತ್ತು. ಯಾರಾದರೂ ವಿದೇಶಿ ಸರಕುಗಳನ್ನು ಬಹಿಷ್ಕರಿಸಿದರೆ, ಅದು ಸ್ವಾತಂತ್ರ್ಯಕ್ಕಾಗಿಯೂ ಆಗಿದೆ. ಯಾರಾದರೂ ಕವಿತೆಯನ್ನು ಪಠಿಸಿದರೆ, ಅದು ಸ್ವಾತಂತ್ರ್ಯಕ್ಕಾಗಿಯೂ ಆಗಿದೆ. ಯಾರಾದರೂ ಪುಸ್ತಕ ಅಥವಾ ಪತ್ರಿಕೆಯಲ್ಲಿ ಬರೆದರೆ, ಅದು ಸ್ವಾತಂತ್ರ್ಯಕ್ಕಾಗಿಯೂ ಇತ್ತು. ಯಾರಾದರೂ ಕರಪತ್ರಗಳನ್ನು ವಿತರಿಸಿದರೆ, ಅದು ಸ್ವಾತಂತ್ರ್ಯಕ್ಕಾಗಿಯೂ ಆಗಿದೆ.

 

ಅಂತೆಯೇ, ಇಂದು, ಪ್ರತಿಯೊಬ್ಬ ವ್ಯಕ್ತಿ, ಪ್ರತಿಯೊಂದು ಸಂಸ್ಥೆ ನಾನು ಏನೇ ಮಾಡಿದರೂ ಅದು 'ವಿಕಸಿತ ಭಾರತ' ಕ್ಕಾಗಿ ಇರಬೇಕು ಎಂಬ ಪ್ರತಿಜ್ಞೆಯೊಂದಿಗೆ ಮುಂದುವರಿಯಬೇಕು. ನಿಮ್ಮ ಗುರಿಗಳು, ನಿಮ್ಮ ಸಂಕಲ್ಪಗಳು ಒಂದೇ ಗುರಿಯನ್ನು ಹೊಂದಿರಬೇಕು - 'ವಿಕಸಿತ ಭಾರತ'. ಒಬ್ಬ ಶಿಕ್ಷಕನಾಗಿ, 'ವಿಕಸಿತ ಭಾರತ' ಗುರಿಯನ್ನು ಸಾಧಿಸಲು ದೇಶಕ್ಕೆ ಸಹಾಯ ಮಾಡಲು ನೀವು ಏನು ಮಾಡಬಹುದು ಎಂಬುದರ ಬಗ್ಗೆ ಯೋಚಿಸಿ. ವಿಶ್ವವಿದ್ಯಾಲಯವಾಗಿ, ಭಾರತವನ್ನು ವೇಗವಾಗಿ ಅಭಿವೃದ್ಧಿಪಡಿಸಲು ನೀವು ಏನು ಮಾಡಬಹುದು ಎಂಬುದರ ಬಗ್ಗೆ ಯೋಚಿಸಿ. ನೀವು ಯಾವುದೇ ಕ್ಷೇತ್ರದಲ್ಲಿದ್ದರೂ, ಭಾರತವು ಅಭಿವೃದ್ಧಿಯ ಹಾದಿಯಲ್ಲಿ ವೇಗವಾಗಿ ಮುಂದುವರಿಯಲು ಏನು ಮತ್ತು ಹೇಗೆ ಮಾಡಬಹುದು ಎಂದು ಯೋಚಿಸಿ?

ಸ್ನೇಹಿತರೇ,

ನೀವು ಪ್ರತಿನಿಧಿಸುವ ಶಿಕ್ಷಣ ಸಂಸ್ಥೆಗಳಲ್ಲಿ ನಿಮ್ಮ ಪಾತ್ರವು ಯುವಕರ ಶಕ್ತಿಯನ್ನು ಈ ಗುರಿಯತ್ತ ತಿರುಗಿಸುವುದು. ನಿಮ್ಮ ಸಂಸ್ಥೆಗಳಿಗೆ ಬರುವ ಪ್ರತಿಯೊಬ್ಬ ಯುವಕರು ಕೆಲವು ವಿಶೇಷ ಲಕ್ಷಣಗಳನ್ನು ಹೊಂದಿದ್ದಾರೆ. ಅವರ ವೈವಿಧ್ಯಮಯ ಆಲೋಚನೆಗಳನ್ನು ಲೆಕ್ಕಿಸದೆ 'ವಿಕಸಿತ ಭಾರತ'ವನ್ನು ನಿರ್ಮಿಸುವ ಪ್ರವಾಹದೊಂದಿಗೆ ಅವರನ್ನು ಸಂಪರ್ಕಿಸಬೇಕು. ನೀವೆಲ್ಲರೂ ನಿಮ್ಮ ವ್ಯಾಪ್ತಿಯನ್ನು ಮೀರಿ ಯೋಚಿಸಬೇಕೆಂದು ನಾನು ಬಯಸುತ್ತೇನೆ ಮತ್ತು ವಿಕಸಿತ ಭಾರತ @2047 ಅವರ ದೃಷ್ಟಿಕೋನಕ್ಕೆ ಕೊಡುಗೆ ನೀಡಲು ಪೆಟ್ಟಿಗೆಯಿಂದ ಹೊರಗೆ ಯೋಚಿಸಬೇಕೆಂದು ನಾನು ಬಯಸುತ್ತೇನೆ. ನೀವು ವಿಶೇಷ ಅಭಿಯಾನಗಳನ್ನು ಪ್ರಾರಂಭಿಸಬೇಕು, ನಾಯಕತ್ವವನ್ನು ಒದಗಿಸಬೇಕು ಮತ್ತು ಸರಳ ಭಾಷೆಯಲ್ಲಿ ವಿಷಯಗಳನ್ನು ವ್ಯಕ್ತಪಡಿಸಬೇಕು ಇದರಿಂದ ದೇಶದ ಪ್ರತಿ ಕಾಲೇಜು ಮತ್ತು ವಿಶ್ವವಿದ್ಯಾಲಯದಿಂದ ಹೆಚ್ಚು ಹೆಚ್ಚು ಯುವಕರು ಈ ಅಭಿಯಾನಕ್ಕೆ ಸೇರಬಹುದು. ವಿಕಸಿತ ಭಾರತ @ 2047 ವಿಭಾಗವನ್ನು ಇಂದು ಮೈಗೌನಲ್ಲಿ ಪ್ರಾರಂಭಿಸಲಾಗಿದೆ. ಇದು 'ವಿಕಸಿತ ಭಾರತ'ದ ದೃಷ್ಟಿಕೋನಕ್ಕೆ ಸಂಬಂಧಿಸಿದ ವಿಚಾರಗಳ ವಿಭಾಗವನ್ನು ಒಳಗೊಂಡಿದೆ. 'ಐಡಿಯಾ' ಎಂಬ ಪದದ ಪ್ರಾರಂಭವು 'ನಾನು' ಎಂಬುದರಿಂದ ಪ್ರಾರಂಭವಾಗುವುದರಿಂದ, ಈ ವಿಭಾಗಕ್ಕೆ ವ್ಯಕ್ತಿಗಳು ಸ್ವತಃ ಏನು ಮಾಡಬಹುದು ಎಂಬುದನ್ನು ವಿವರಿಸುವ ಆಲೋಚನೆಗಳು ಬೇಕಾಗುತ್ತವೆ. ಐಡಿಯಾದಲ್ಲಿ 'ಐ' ಮೊದಲ ಸ್ಥಾನದಲ್ಲಿರುವುದರಿಂದ, ಇದು ಭಾರತದಲ್ಲಿಯೂ ಮೊದಲ ಸ್ಥಾನದಲ್ಲಿದೆ. ಇದರರ್ಥ ನಾವು ಯಶಸ್ಸನ್ನು ಸಾಧಿಸಲು, ಗುರಿಗಳನ್ನು ಸಾಧಿಸಲು ಮತ್ತು ಸರಿಯಾದ ಫಲಿತಾಂಶಗಳನ್ನು ತರಲು ಬಯಸಿದರೆ, ಅದು ನಮ್ಮ ಸ್ವಂತ 'ನಾನು' ನಿಂದ ಪ್ರಾರಂಭವಾಗುತ್ತದೆ. ಈ ಆನ್ ಲೈನ್ ಐಡಿಯಾಸ್ ಪೋರ್ಟಲ್ - ಮೈಗೌ ಪ್ಲಾಟ್ ಫಾರ್ಮ್ - ಐದು ವಿಭಿನ್ನ ವಿಷಯಗಳಿಗೆ ಸಲಹೆಗಳನ್ನು ನೀಡಬಹುದು. ಟಾಪ್ ೧೦ ಸಲಹೆಗಳಿಗೆ ಪ್ರಶಸ್ತಿಗಳನ್ನು ನೀಡಲು ಅವಕಾಶವಿದೆ.

ಸ್ನೇಹಿತರೇ,

ನಾನು ಸಲಹೆಗಳ ಬಗ್ಗೆ ಮಾತನಾಡುವಾಗ, ಆಕಾಶವು ನಿಮ್ಮ ಮುಂದೆ ವಿಶಾಲವಾಗಿ ತೆರೆದಿರುತ್ತದೆ. ಮುಂಬರುವ ವರ್ಷಗಳಲ್ಲಿ ದೇಶದ ಬೆನ್ನೆಲುಬಾಗಿರುವ ಪೀಳಿಗೆಯನ್ನು ನಾವು ಸಿದ್ಧಪಡಿಸಬೇಕಾಗಿದೆ, ನಾಯಕತ್ವ ಮತ್ತು ನಿರ್ದೇಶನವನ್ನು ಒದಗಿಸಬೇಕಾಗಿದೆ. ರಾಷ್ಟ್ರದ ಕಲ್ಯಾಣಕ್ಕೆ ಆದ್ಯತೆ ನೀಡುವ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಕರ್ತವ್ಯಗಳನ್ನು ಪರಿಗಣಿಸುವ ದೇಶಕ್ಕಾಗಿ ನಾವು ಯುವ ಪೀಳಿಗೆಯನ್ನು ಸಿದ್ಧಪಡಿಸಬೇಕಾಗಿದೆ. ನಾವು ಕೇವಲ ಶಿಕ್ಷಣ ಮತ್ತು ಕೌಶಲ್ಯಗಳಿಗೆ ನಮ್ಮನ್ನು ಸೀಮಿತಗೊಳಿಸಬಾರದು. ನಾಗರಿಕರಾಗಿ, ದೇಶದ ನಾಗರಿಕರನ್ನು 24/7 ಜಾಗರೂಕರಾಗಿರಿಸುವುದು ಹೇಗೆ ಎಂಬ ದಿಕ್ಕಿನಲ್ಲಿ ನಾವು ಪ್ರಯತ್ನಗಳನ್ನು ಮಾಡಬೇಕಾಗಿದೆ. ಕ್ಯಾಮೆರಾಗಳನ್ನು ಅಳವಡಿಸಿದರೂ ಅಥವಾ ಇಲ್ಲದಿದ್ದರೂ ಅವರು ಟ್ರಾಫಿಕ್ ಸಿಗ್ನಲ್ ಗಳನ್ನು ಜಂಪ್ ಮಾಡಬಾರದು ಎಂದು ನಾವು ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಜನರು ತಮ್ಮ ಕರ್ತವ್ಯ ಪ್ರಜ್ಞೆಯನ್ನು ಹೊಂದಿರಬೇಕು, ಅವರು ಸಮಯಕ್ಕೆ ಸರಿಯಾಗಿ ಕಚೇರಿಗೆ ತಲುಪಬೇಕು ಮತ್ತು ತಮ್ಮ ಜವಾಬ್ದಾರಿಗಳನ್ನು ಪೂರೈಸಲು ಶ್ರದ್ಧೆಯಿಂದ ಕೆಲಸ ಮಾಡಬೇಕು. ಇಲ್ಲಿ ಯಾವುದೇ ಉತ್ಪನ್ನಗಳನ್ನು ತಯಾರಿಸಿದರೂ, ಅವುಗಳ ಗುಣಮಟ್ಟವು ತುಂಬಾ ಅತ್ಯುತ್ತಮವಾಗಿರಬೇಕು, ಅದರ ಮೇಲೆ 'ಮೇಡ್ ಇನ್ ಇಂಡಿಯಾ' ಲೇಬಲ್ ಅನ್ನು ನೋಡಿದಾಗ ಗ್ರಾಹಕರು ಹೆಮ್ಮೆ ಪಡಬೇಕು.

 

ದೇಶದ ಪ್ರತಿಯೊಬ್ಬ ನಾಗರಿಕನು, ತಮ್ಮ ಕರ್ತವ್ಯಗಳನ್ನು ಪೂರೈಸಲು ಪ್ರಾರಂಭಿಸಿದಾಗ, ದೇಶವೂ ಪ್ರಗತಿ ಹೊಂದುತ್ತದೆ. ಈಗ, ಉದಾಹರಣೆಗೆ, ನೈಸರ್ಗಿಕ ಸಂಪನ್ಮೂಲಗಳ ಬಳಕೆಗೆ ಸಂಬಂಧಿಸಿದ ಸಮಸ್ಯೆಗಳು. ನೀರಿನ ಸಂರಕ್ಷಣೆಯ ಬಗ್ಗೆ ಗಂಭೀರತೆ ಹೆಚ್ಚಾದಾಗ, ವಿದ್ಯುತ್ ಉಳಿಸುವ ಬಗ್ಗೆ ಗಂಭೀರತೆ ಹೆಚ್ಚಾದಾಗ, ಭೂಮಿ ತಾಯಿಯನ್ನು ಉಳಿಸಲು ರಾಸಾಯನಿಕಗಳ ಬಳಕೆ ಕಡಿಮೆಯಾದಾಗ, ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸುವ ಬಗ್ಗೆ ಗಂಭೀರತೆ ಇದ್ದಾಗ, ಸಮಾಜ, ದೇಶ ಮತ್ತು ಪ್ರತಿಯೊಂದು ವಲಯವು ಗಮನಾರ್ಹವಾಗಿ ಸಕಾರಾತ್ಮಕ ಪರಿಣಾಮವನ್ನು ಅನುಭವಿಸುತ್ತದೆ. ಅಂತಹ ಸಕಾರಾತ್ಮಕ ಪರಿಣಾಮಗಳ ಹಲವಾರು ಉದಾಹರಣೆಗಳನ್ನು ನಾನು ನಿಮಗೆ ನೀಡಬಲ್ಲೆ.

ಇವು ಸಣ್ಣ ವಿಷಯಗಳು ಎಂದು ನೀವು ಒಪ್ಪುತ್ತೀರಿ ಆದರೆ ಅವು ಗಮನಾರ್ಹ ಪರಿಣಾಮ ಬೀರುತ್ತವೆ. ಸ್ವಚ್ಛತಾ ಆಂದೋಲನಕ್ಕೆ ಹೊಸ ಶಕ್ತಿಯನ್ನು ಹೇಗೆ ನೀಡಬೇಕು ಎಂಬುದರ ಕುರಿತು ನಿಮ್ಮ ಸಲಹೆಗಳು ಸಹ ನಿರ್ಣಾಯಕವಾಗುತ್ತವೆ. ಆಧುನಿಕ ಜೀವನಶೈಲಿಯ ಅಡ್ಡಪರಿಣಾಮಗಳನ್ನು ನಮ್ಮ ಯುವಕರು ಹೇಗೆ ನಿಭಾಯಿಸಬಹುದು ಎಂಬುದರ ಕುರಿತು ನಿಮ್ಮ ಸಲಹೆಗಳು ಸಹ ಮುಖ್ಯವಾಗುತ್ತವೆ. ಮೊಬೈಲ್ ಫೋನ್ ಗಳ ಪ್ರಪಂಚದ ಜೊತೆಗೆ, ನಮ್ಮ ಯುವಕರು ಹೊರಗಿನ ಪ್ರಪಂಚವನ್ನು ಸಹ ಅನ್ವೇಷಿಸಬೇಕು; ಅದೂ ಅಷ್ಟೇ ಅವಶ್ಯಕ. ಒಬ್ಬ ಶಿಕ್ಷಕರಾಗಿ, ನೀವು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯಲ್ಲಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಆಲೋಚನೆಗಳನ್ನು ಬಿತ್ತಬೇಕು. ನೀವು ನಿಮ್ಮ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ದೇಶದ ನಾಗರಿಕರು ದೇಶದ ಹಿತದೃಷ್ಟಿಯಿಂದ ಯೋಚಿಸಿದಾಗ ಮಾತ್ರ ನಾವು ಸಶಕ್ತ ಸಮಾಜವನ್ನು ನಿರ್ಮಿಸಬಹುದು. ಮತ್ತು ಸಮಾಜವು ಯೋಚಿಸುವ ವಿಧಾನವು ಆಡಳಿತದಲ್ಲಿ ಪ್ರತಿಫಲಿಸುತ್ತದೆ ಎಂದು ನಿಮಗೆ ತಿಳಿದಿದೆ. ನಾನು ಶಿಕ್ಷಣ ಕ್ಷೇತ್ರದ ಬಗ್ಗೆ ಮಾತನಾಡಿದರೆ, ಅದಕ್ಕೆ ಸಂಬಂಧಿಸಿದ ಅನೇಕ ವಿಷಯಗಳಿವೆ. ಮೂರರಿಂದ ನಾಲ್ಕು ವರ್ಷಗಳ ಕೋರ್ಸ್ ನಂತರ, ನಮ್ಮ ಶಿಕ್ಷಣ ಸಂಸ್ಥೆಗಳು ಪ್ರಮಾಣಪತ್ರಗಳು ಮತ್ತು ಪದವಿಗಳನ್ನು ಒದಗಿಸುತ್ತವೆ. ಆದರೆ ಪ್ರತಿಯೊಬ್ಬ ವಿದ್ಯಾರ್ಥಿಯು ಕೆಲವು ಕಡ್ಡಾಯ ಕೌಶಲ್ಯಗಳನ್ನು ಹೊಂದಿದ್ದಾನೆ ಎಂದು ನಾವು ಖಚಿತಪಡಿಸಿಕೊಳ್ಳಬೇಕಲ್ಲವೇ? ಈ ವಿಷಯಗಳ ಮೇಲಿನ ಚರ್ಚೆಗಳು ಮತ್ತು ಸಂಬಂಧಿತ ಸಲಹೆಗಳು 'ವಿಕಸಿತ ಭಾರತ' ದೆಡೆಗಿನ ಪ್ರಯಾಣದ ಹಾದಿಯನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತವೆ. ಆದ್ದರಿಂದ, ಸಮಗ್ರ ಚರ್ಚೆಯ ಪ್ರಕ್ರಿಯೆಯ ಭಾಗವಾಗಿ ನೀವು ಪ್ರತಿ ಕ್ಯಾಂಪಸ್, ಸಂಸ್ಥೆ ಮತ್ತು ರಾಜ್ಯ ಮಟ್ಟದಲ್ಲಿ ಈ ವಿಷಯಗಳ ಬಗ್ಗೆ ವ್ಯಾಪಕ ಚರ್ಚೆಗಳನ್ನು ನಡೆಸಬೇಕು.

ಸ್ನೇಹಿತರೇ,

'ವಿಕಸಿತ ಭಾರತ'ವನ್ನು ನಿರ್ಮಿಸುವ ಈ 'ಅಮೃತ ಕಾಲ' ಪರೀಕ್ಷೆಯ ದಿನಗಳಲ್ಲಿ ನಾವು ಆಗಾಗ್ಗೆ ನೋಡುವ ತೀವ್ರ ಗಮನವನ್ನು ಹೋಲುತ್ತದೆ. ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯ ಕಾರ್ಯಕ್ಷಮತೆಯ ಬಗ್ಗೆ ವಿಶ್ವಾಸ ಹೊಂದಿದ್ದಾರೆ, ಆದರೂ ಅವರು ಕೊನೆಯ ಕ್ಷಣದವರೆಗೂ ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯು ಕಠಿಣ ಪರಿಶ್ರಮ ಹಾಕುತ್ತಾನೆ, ಪ್ರತಿ ಕ್ಷಣವನ್ನು ಒಂದೇ ಗುರಿಯೊಂದಿಗೆ ಹೊಂದಿಸುತ್ತಾನೆ. ಮತ್ತು ಪರೀಕ್ಷೆಯ ದಿನಾಂಕಗಳು ಸಮೀಪಿಸಿದಾಗ, ದಿನಾಂಕಗಳನ್ನು ಘೋಷಿಸಿದಾಗ, ಇಡೀ ಕುಟುಂಬದ ಪರೀಕ್ಷಾ ದಿನಾಂಕ ಬಂದಿದೆ ಎಂದು ಅನಿಸುತ್ತದೆ. ಇದು ಕೇವಲ ವಿದ್ಯಾರ್ಥಿಗಳಲ್ಲ; ಇಡೀ ಕುಟುಂಬವು ಶಿಸ್ತಿನ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ನಮಗೂ ಸಹ, ದೇಶದ ಪ್ರಜೆಗಳಾಗಿ, ಪರೀಕ್ಷೆಯ ದಿನಾಂಕವನ್ನು ಘೋಷಿಸಲಾಗಿದೆ. ನಮಗೆ ಅಮೃತ್ ಕಾಲದ 25 ವರ್ಷಗಳ ಅವಧಿ ಇದೆ. ಈ 'ಅಮೃತ ಕಾಲ'ಕ್ಕಾಗಿ ಮತ್ತು 'ವಿಕಸಿತ ಭಾರತ'ದ ಗುರಿಗಳಿಗಾಗಿ ನಾವು ಹಗಲಿರುಳು ಶ್ರಮಿಸಬೇಕಾಗಿದೆ. ಈ ಪರಿಸರವು ನಾವು ಒಟ್ಟಾಗಿ ಅದನ್ನು ಕುಟುಂಬವಾಗಿ ರೂಪಿಸುವ ಅಗತ್ಯವಿದೆ, ಮತ್ತು ಇದು ನಮ್ಮೆಲ್ಲರ ಹಂಚಿಕೆಯ ಜವಾಬ್ದಾರಿಯಾಗಿದೆ.

 

ಸ್ನೇಹಿತರೇ,

ಇಂದು, ವಿಶ್ವದ ಜನಸಂಖ್ಯೆ ವೇಗವಾಗಿ ವಯಸ್ಸಾಗುತ್ತಿದೆ ಮತ್ತು ಭಾರತವು ತನ್ನ ಯುವಕರಿಂದ ಸಬಲೀಕರಣಗೊಂಡಿದೆ. ಮುಂಬರುವ 25-30 ವರ್ಷಗಳಲ್ಲಿ, ದುಡಿಯುವ ವಯಸ್ಸಿನ ಜನಸಂಖ್ಯೆಯ ದೃಷ್ಟಿಯಿಂದ ಭಾರತವು ಮುಂದಿರುತ್ತದೆ ಎಂದು ತಜ್ಞರು ಸೂಚಿಸುತ್ತಾರೆ. ಆದ್ದರಿಂದ, ಇಡೀ ವಿಶ್ವದ ಕಣ್ಣುಗಳು ಭಾರತದ ಯುವಕರ ಮೇಲೆ ಇವೆ. ಯುವಕರು ಬದಲಾವಣೆಯ ಏಜೆಂಟ್ ಮಾತ್ರವಲ್ಲ, ಬದಲಾವಣೆಯ ಫಲಾನುಭವಿಯೂ ಹೌದು. ಇಂದು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿನ ಯುವ ಸಹೋದ್ಯೋಗಿಗಳು ಈ ನಿರ್ಣಾಯಕ 25 ವರ್ಷಗಳಲ್ಲಿ ತಮ್ಮ ವೃತ್ತಿಜೀವನವನ್ನು ರೂಪಿಸುತ್ತಾರೆ. ಈ ಯುವಕರು ಹೊಸ ಕುಟುಂಬಗಳನ್ನು ನಿರ್ಮಿಸುತ್ತಾರೆ, ಹೊಸ ಸಮಾಜವನ್ನು ಸೃಷ್ಟಿಸುತ್ತಾರೆ. ಹೀಗಾಗಿ, ನಾವು ಬಯಸುವ 'ವಿಕಸಿತ ಭಾರತ' ವನ್ನು ನಿರ್ಧರಿಸುವುದು ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಯುವಕರಿಗೆ ಸೇರಿದ ಹಕ್ಕು. ಈ ಸ್ಫೂರ್ತಿಯೊಂದಿಗೆ, ಪ್ರತಿಯೊಬ್ಬ ಯುವಕರನ್ನು 'ವಿಕಸಿತ ಭಾರತ' ಕ್ರಿಯಾ ಯೋಜನೆಯೊಂದಿಗೆ ಸಂಪರ್ಕಿಸುವ ಗುರಿಯನ್ನು ಸರ್ಕಾರ ಹೊಂದಿದೆ. 'ವಿಕಸಿತ ಭಾರತ'ದ ನೀತಿ ಚೌಕಟ್ಟಿನಲ್ಲಿ ದೇಶದ ಯುವಕರ ಧ್ವನಿಯನ್ನು ಅಳವಡಿಸಲು ಅದು ಬಯಸುತ್ತದೆ. ನೀವು ಯುವಕರೊಂದಿಗೆ ನಿಕಟ ಸಂಪರ್ಕದಲ್ಲಿರುವುದರಿಂದ, ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ.

ಸ್ನೇಹಿತರೇ,

ನಾವು ಪ್ರಗತಿಯ ಮಾರ್ಗಸೂಚಿಯಲ್ಲಿ ನಡೆಯಬೇಕಾಗಿದೆ, ಮತ್ತು ಅದನ್ನು ಸರ್ಕಾರ ಮಾತ್ರ ನಿರ್ಧರಿಸುವುದಿಲ್ಲ; ರಾಷ್ಟ್ರವು ಅದನ್ನು ರೂಪಿಸುತ್ತದೆ. ಪ್ರತಿಯೊಬ್ಬ ನಾಗರಿಕನು ತನ್ನ ಸಲಹೆಗಳನ್ನು ನೀಡಬೇಕು ಮತ್ತು ಅದರಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. 'ಸಬ್ಕಾ ಪ್ರಯಾಸ್' ಎಂದರೆ ಎಲ್ಲರ ಪ್ರಯತ್ನ, ಇದು ದೊಡ್ಡ ನಿರ್ಣಯಗಳನ್ನು ವಾಸ್ತವವಾಗಿ ಪರಿವರ್ತಿಸುವ ಮಂತ್ರವಾಗಿದೆ. ಅದು ಸ್ವಚ್ಛ ಭಾರತ ಅಭಿಯಾನವಾಗಲಿ, ಡಿಜಿಟಲ್ ಇಂಡಿಯಾ ಅಭಿಯಾನವಾಗಲಿ, ಕೋವಿಡ್-19 ಅನ್ನು ಎದುರಿಸುವುದಾಗಲಿ ಅಥವಾ ವೋಕಲ್ ಫಾರ್ ಲೋಕಲ್ ಕಲ್ಪನೆಯಾಗಿರಲಿ, ನಾವೆಲ್ಲರೂ 'ಸಬ್ಕಾ ಪ್ರಯಾಸ್' ನ ಶಕ್ತಿಗೆ ಸಾಕ್ಷಿಯಾಗಿದ್ದೇವೆ. 'ಸಬ್ ಕಾ ಪ್ರಯಾಸ್' ಮೂಲಕ 'ವಿಕಸಿತ ಭಾರತ' ಸಾಕಾರಗೊಳ್ಳಲಿದೆ. ವಿದ್ಯಾವಂತರಾದ ನೀವು ದೇಶದ ಅಭಿವೃದ್ಧಿಯ ದೃಷ್ಟಿಕೋನವನ್ನು ರೂಪಿಸುವವರು, ಯುವ ಶಕ್ತಿಯನ್ನು ಹರಿಸುವವರು. ಆದ್ದರಿಂದ, ನಿಮ್ಮಿಂದ ನಿರೀಕ್ಷೆಗಳು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಇದು ರಾಷ್ಟ್ರದ ಭವಿಷ್ಯವನ್ನು ಬರೆಯುವ ಭವ್ಯ ಅಭಿಯಾನವಾಗಿದೆ. ನಿಮ್ಮ ಪ್ರತಿಯೊಂದು ಸಲಹೆಯೂ 'ವಿಕಸಿತ ಭಾರತ'ದ ಭವ್ಯತೆಯನ್ನು ಹೆಚ್ಚಿಸುತ್ತದೆ.

ಮತ್ತೊಮ್ಮೆ, ಇಂದಿನ ಕಾರ್ಯಾಗಾರಕ್ಕೆ ನನ್ನ ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ. ಇಂದಿನಿಂದ ಪ್ರಾರಂಭವಾಗುವ ಆಂದೋಲನವು 2047 ರ ವೇಳೆಗೆ ನಮ್ಮನ್ನು 'ವಿಕಸಿತ ಭಾರತ'ಕ್ಕೆ ಕರೆದೊಯ್ಯುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ. ಪ್ರಯಾಣವು ಇಂದು ಪ್ರಾರಂಭವಾಗುತ್ತದೆ, ನಾಯಕತ್ವವು ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸಂಸ್ಥೆಗಳ ಕೈಯಲ್ಲಿದೆ ಮತ್ತು ಇದು ರಾಷ್ಟ್ರ ಮತ್ತು ಪೀಳಿಗೆಯನ್ನು ನಿರ್ಮಿಸುವ ಅವಧಿಯಾಗಿದೆ. ನಾನು ನಿಮಗೆ ಶುಭ ಹಾರೈಸುತ್ತೇನೆ!

ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
GIFT City scales new heights as India's 1st international finance and IT hub

Media Coverage

GIFT City scales new heights as India's 1st international finance and IT hub
NM on the go

Nm on the go

Always be the first to hear from the PM. Get the App Now!
...
Prime Minister shares address by Shri Amit Shah in Lok Sabha on India’s decisive fight against Naxalism
March 30, 2026

The Prime Minister, Shri Narendra Modi shared the outstanding speech delivered by Union Home Minister Shri Amit Shah ji, noting that it was filled with important facts, historical context, and a detailed account of the Government’s efforts over the past decade. Shri Modi highlighted that for decades, the retrograde Maoist ideology had an adverse impact on the development of several regions, with Left Wing Extremism severely affecting the future of countless youngsters.

He further underlined that over the last ten years, the Government has worked towards uprooting this menace, while simultaneously ensuring that the benefits of development reach areas affected by Naxalism. The Prime Minister reaffirmed that the Government will continue to focus on strengthening good governance and ensuring peace and prosperity for all.

The Prime Minister posted on X:

“This is an outstanding speech by the Home Minister, Shri Amit Shah Ji, filled with important facts, historical context and the efforts of our Government in the last decade.

For decades, the retrograde Maoist ideology had an adverse impact on the development of several regions. Left Wing Extremism has ruined the future of countless youngsters.

In the last decade, our Government has worked towards uprooting this menace and at the same time ensuring the fruits of development reach areas affected by Naxalism. We will keep focusing on furthering good governance and ensuring peace and prosperity for all.”