Quoteಇಂಡಿಯಾ ಮೊಬೈಲ್ ಕಾಂಗ್ರೆಸ್ ನ 8ನೇ ಆವೃತ್ತಿಗೆ ಚಾಲನೆ ನೀಡಿದ ಪ್ರಧಾನಮಂತ್ರಿ ​​​​​​​
Quoteದೂರ ಸಂಪರ್ಕ ಭಾರತಕ್ಕೆ ಕೇವಲ ಸಂಪರ್ಕವಷ್ಟೇ ಅಲ್ಲ, ಇದು ನೀತಿ ಮತ್ತು ಅವಕಾಶದ ಮಾಧ್ಯಮವೂ ಆಗಿದೆ: ಪ್ರಧಾನಮಂತ್ರಿ
Quoteಡಿಜಿಟಲ್ ಇಂಡಿಯಾದಲ್ಲಿ ನಾಲ್ಕು ಆಧಾರ ಸ್ತಂಭಗಳನ್ನು ಗುರುತಿಸಿದ್ದೇವೆ ಮತ್ತು ಎಲ್ಲಾ ಆಧಾರ ಸ್ತಂಭಗಳು ಒಟ್ಟಿಗೆ ಕಾರ್ಯನಿರ್ವಹಿಸುವುದನ್ನು ಪ್ರಾರಂಭಿಸಿವೆ ಹಾಗೂ ಇದರಿಂದ ನಾವು ಫಲಿತಾಂಶ ಪಡೆದಿದ್ದೇವೆ : ಪ್ರಧಾನಮಂತ್ರಿ
Quoteಚಿಪ್ ನಿಂದ ಅಂತಿಮ ಹಂತದವರೆಗೆ ಸಂಪೂರ್ಣವಾಗಿ ಭಾರತದಲ್ಲೇ ತಯಾರಾಗುವ ಮೊಬೈಲ್ ಫೋನ್ ಅನ್ನು ಜಗತ್ತಿಗೆ ನೀಡಲು ನಾವು ಕಾರ್ಯಪ್ರವೃತ್ತವಾಗಿದ್ದೇವೆ: ಪ್ರಧಾನಮಂತ್ರಿ
Quoteಕೇವಲ ಹತ್ತು ವರ್ಷಗಳಲ್ಲಿ ನಾವು ಭೂಮಿಯಿಂದ ಚಂದ್ರನ ಅಂಗಳದ ವರೆಗಿನ ಎಂಟುಪಟ್ಟು ದೂರದ ಪ್ರಮಾಣದಷ್ಟು ಆಫ್ಟಿಕಲ್ ಫೈಬರ್ ಅನ್ನು ಭಾರತದಲ್ಲಿ ಅಳವಡಿಸಿದ್ದೇವೆ: ಪ್ರಧಾನಮಂತ್ರಿ
Quoteಡಿಜಿಟಲ್ ತಂತ್ರಜ್ಞಾನವನ್ನು ಭಾರತ ಪ್ರಜಾಪ್ರಭುತ್ವಗೊಳಿಸಿದೆ: ಪ್ರಧಾನಮಂತ್ರಿ
Quoteಭಾರತದಲ್ಲಿ ನಾವಿಂದು ಡಿಜಿಟಲ್ ಗುಚ್ಚದ ಮೂಲಕ ಕಲ್ಯಾಣ ಕಾರ್ಯಕ್ರಮಗಳನ್ನು ಜಗತ್ತಿನಲ್ಲಿಯೇ ನಾವು ಹೊಸ ಔನತ್ಯಕ್ಕೆ ಕೊಂಡೊಯ್ದಿದ್ದೇವೆ: ಪ್ರಧಾನಮಂತ್ರಿ
Quoteತಂತ್ರಜ್ಞಾನ ಎಲ್ಲರನ್ನೊಳಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಭಾರತ ಕಾರ್ಯಪ್ರವೃತ್ತವಾಗಿದ್ದು, ತಂತ್ರಜ್ಞಾನ ವೇದಿಕೆಗಳ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸಲಾಗುತ್ತಿದೆ: ಪ್ರಧಾನಮಂತ್ರಿ
Quoteಡಿಜಿಟಲ್ ತಂತ್ರಜ್ಞಾನ ಕುರಿತು ಡಿಜಿಟಲ್ ಕಾರ್ಯಚೌಕಟ್ಟಿನ ಮಹತ್ವವನ್ನು ಜಾಗತಿಕ ಸಂಸ್ಥೆಗಳು ಸ್ವೀಕರಿಸುವ ಕಾಲ ಸನ್ನಿಹಿತವಾಗಿದ್ದು, ಇದರಿಂದ ಜಾಗತಿಕ ಆಡಳಿತದ ಮಾರ್ಗಸೂಚಿ ರೂಪಿಸಲು ಸಾಧ್ಯವಾಗಲಿದೆ: ಪ್ರಧಾನಮಂತ್ರಿ
Quoteತಂತ್ರಜ್ಞಾನವನ್ನು ಬಲಿಷ್ಠಗೊಳಿಸುವ ಮತ್ತು ನೈತಿಕವಾಗಿ ಧ್ವನಿ ಎತ್ತರಿಸಲು ನಾವು ಭವಿಷ್ಯದ ತಂತ್ರಜ್ಞಾನವನ್ನು ಖಾತರಿಪಡಿಸುತ್ತಿದ್ದು, ನಮ್ಮ ಭವಿಷ್ಯ ನಾವೀನ್ಯತೆಯಷ್ಟೇ ಅಲ್ಲದೇ ಎಲ್ಲವನ್ನೊ ಒಳಗೊಳ್ಳಲಿದೆ: ಪ್ರಧಾನಮಂತ್ರಿ

ನನ್ನ ಸಂಪುಟ (ಕ್ಯಾಬಿನೆಟ್) ಸಹೋದ್ಯೋಗಿಗಳಾದ ಜ್ಯೋತಿರಾದಿತ್ಯ ಸಿಂಧಿಯಾ ಜೀ, ಚಂದ್ರಶೇಖರ್ ಜೀ, ಐಟಿಯು ಪ್ರಧಾನ ಕಾರ್ಯದರ್ಶಿ, ವಿವಿಧ ದೇಶಗಳ ಸಚಿವರು, ಭಾರತದ ವಿವಿಧ ರಾಜ್ಯಗಳ ಸಚಿವರು, ಉದ್ಯಮದ ಮುಖಂಡರು, ಟೆಲಿಕಾಂ ತಜ್ಞರು, ನವೋದ್ಯಮ ಜಗತ್ತಿನ ಯುವ ಉದ್ಯಮಿಗಳು, ಭಾರತ ಮತ್ತು ವಿದೇಶಗಳ ಗೌರವಾನ್ವಿತ ಅತಿಥಿಗಳೇ, ಮಹಿಳೆಯರೇ ಮತ್ತು ಮಹನೀಯರೇ,

ಇಂಡಿಯಾ ಮೊಬೈಲ್ ಕಾಂಗ್ರೆಸ್ ಗೆ ನಿಮ್ಮೆಲ್ಲರಿಗೂ ಹಾರ್ದಿಕ ಸ್ವಾಗತ! ಅಂತಾರಾಷ್ಟ್ರೀಯ ದೂರಸಂಪರ್ಕ ಯೂನಿಯನ್ (ಐಟಿಯು) ಸಹೋದ್ಯೋಗಿಗಳಿಗೆ ನಾನು ವಿಶೇಷ ಸ್ವಾಗತ ಕೋರಲು ಬಯಸುತ್ತೇನೆ. ನೀವು ಮೊದಲ ಬಾರಿಗೆ ಭಾರತವನ್ನು ಡಬ್ಲ್ಯುಟಿಎಸ್ಎಗೆ ಆಯ್ಕೆ ಮಾಡಿದ್ದೀರಿ. ನಾನು ನಿಮಗೆ ಕೃತಜ್ಞನಾಗಿದ್ದೇನೆ ಮತ್ತು ನಿಮ್ಮ ನಿರ್ಧಾರವನ್ನು ಪ್ರಶಂಸಿಸುತ್ತೇನೆ.

 

|

ಸ್ನೇಹಿತರೇ,

ಇಂದು, ಭಾರತವು ದೂರಸಂಪರ್ಕ ಮತ್ತು ಸಂಬಂಧಿತ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ವಿಶ್ವದ ಅತ್ಯಂತ ಚಾಲ್ತಿಯಲ್ಲಿರುವ  ದೇಶಗಳಲ್ಲಿ ಒಂದಾಗಿದೆ. ಭಾರತದಲ್ಲಿ 120 ಕೋಟಿ ಅಥವಾ 1200 ಮಿಲಿಯನ್ ಮೊಬೈಲ್ ಫೋನ್ ಬಳಕೆದಾರರಿದ್ದಾರೆ. ಭಾರತದಲ್ಲಿ 95 ಕೋಟಿ ಅಥವಾ 950 ಮಿಲಿಯನ್ ಇಂಟರ್ನೆಟ್ ಬಳಕೆದಾರರಿದ್ದಾರೆ. ಭಾರತದಲ್ಲಿ  ವಿಶ್ವದ 40 ಪ್ರತಿಶತಕ್ಕೂ ಹೆಚ್ಚು ನೈಜ-ಸಮಯದ ಡಿಜಿಟಲ್ ವಹಿವಾಟುಗಳು ನಡೆಯುತ್ತವೆ. ಭಾರತವು ಡಿಜಿಟಲ್ ಸಂಪರ್ಕವನ್ನು ಕೊನೆಯ ಮೈಲಿಯವರೆಗೂ ವಿತರಣೆಗೆ ಪರಿಣಾಮಕಾರಿ ಸಾಧನವನ್ನಾಗಿ ಮಾಡಿಕೊಂಡಿದೆ.  ಜಾಗತಿಕ ದೂರಸಂಪರ್ಕ ಮಾನದಂಡಗಳು ಮತ್ತು ಭವಿಷ್ಯವನ್ನು ಇಲ್ಲಿ ಚರ್ಚಿಸುವುದು ಜಾಗತಿಕ ಒಳಿತಿಗೆ ಒಂದು ಮಾಧ್ಯಮವಾಗಿದೆ. ನಿಮ್ಮೆಲ್ಲರಿಗೂ ನನ್ನ ಶುಭ ಹಾರೈಕೆಗಳು.

 

|

ಸ್ನೇಹಿತರೇ,

ಡಬ್ಲ್ಯುಟಿಎಸ್ಎ ಮತ್ತು ಇಂಡಿಯಾ ಮೊಬೈಲ್ ಕಾಂಗ್ರೆಸ್ ಜೊತೆಯಾಗಿ ನಡೆಯುತ್ತಿರುವುದು ಬಹಳ ಮಹತ್ವದ್ದಾಗಿದೆ. ಡಬ್ಲ್ಯುಟಿಎಸ್ಎಯ ಗುರಿ ಜಾಗತಿಕ ಮಾನದಂಡಗಳಲ್ಲಿ ಕೆಲಸ ಮಾಡುವುದು, ಆದರೆ ಇಂಡಿಯಾ ಮೊಬೈಲ್ ಕಾಂಗ್ರೆಸ್ ಸೇವೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ, ಇಂದಿನ ಕಾರ್ಯಕ್ರಮವು ಮಾನದಂಡಗಳು ಮತ್ತು ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟಿಗೆ ತಂದಿದೆ. ಭಾರತವು ಈಗ ಗುಣಮಟ್ಟದ ಸೇವೆಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದೆ. ನಾವು ನಮ್ಮ ಮಾನದಂಡಗಳಿಗೆ ಒತ್ತು ನೀಡುತ್ತಿದ್ದೇವೆ. ಈ ನಿಟ್ಟಿನಲ್ಲಿ, ಡಬ್ಲ್ಯುಟಿಎಸ್ಎಯ ಅನುಭವವು ಭಾರತಕ್ಕೆ ಹೊಸ ಶಕ್ತಿಯನ್ನು ತರುತ್ತದೆ.

ಸ್ನೇಹಿತರೇ,

ಡಬ್ಲ್ಯುಟಿಎಸ್ಎ ಒಮ್ಮತದ ಮೂಲಕ ಜಗತ್ತನ್ನು ಸಬಲೀಕರಣಗೊಳಿಸುವ ಬಗ್ಗೆ ಮಾತನಾಡುತ್ತದೆ. ಇಂಡಿಯಾ ಮೊಬೈಲ್ ಕಾಂಗ್ರೆಸ್ ಸಂಪರ್ಕದ ಮೂಲಕ ಜಗತ್ತನ್ನು ಸಬಲೀಕರಣಗೊಳಿಸುವ ಬಗ್ಗೆ ಮಾತನಾಡುತ್ತದೆ. ಈ ಸಂದರ್ಭದಲ್ಲಿ, ಒಮ್ಮತ ಮತ್ತು ಸಂಪರ್ಕ ಎರಡೂ ಒಟ್ಟಿಗೆ ಬರುತ್ತಿವೆ. ಇಂದು ಸಂಘರ್ಷಗಳಿಂದ ಬಳಲುತ್ತಿರುವ ಜಗತ್ತಿಗೆ ಇವೆರಡೂ ಎಷ್ಟು ಮುಖ್ಯ ಎಂಬುದನ್ನು ನೀವು ಅರ್ಥಮಾಡಿಕೊಂಡಿದ್ದೀರಿ. ಸಾವಿರಾರು ವರ್ಷಗಳಿಂದ, ಭಾರತವು "ವಸುದೈವ ಕುಟುಂಬಕಂ" (ಜಗತ್ತು ಒಂದು ಕುಟುಂಬ) ಎಂಬ ಅಮರ ಸಂದೇಶದ ಮೂಲಕ ಬದುಕಿದೆ. ಜಿ -20 ಮುನ್ನಡೆಸುವ ಅವಕಾಶ ನಮಗೆ ಸಿಕ್ಕಾಗ, ನಾವು "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಎಂಬ ಸಂದೇಶವನ್ನು ನೀಡಿದ್ದೇವೆ. ಜಗತ್ತನ್ನು ಬೆಸೆಯಲು/ಸಂಪರ್ಕಿಸಲು ಮತ್ತು ಸಂಘರ್ಷಗಳನ್ನು ಪರಿಹರಿಸಲು ಭಾರತ ಬದ್ಧವಾಗಿದೆ. ಪ್ರಾಚೀನ ಸಿಲ್ಕ್ ರಸ್ತೆಯಿಂದ ಇಂದಿನ ತಂತ್ರಜ್ಞಾನ ಮಾರ್ಗಗಳವರೆಗೆ, ಭಾರತದ ಧ್ಯೇಯವು ಯಾವಾಗಲೂ ಒಂದೇ ಆಗಿದೆ: ಜಗತ್ತನ್ನು ಸಂಪರ್ಕಿಸುವುದು ಮತ್ತು ಪ್ರಗತಿಯ ಹೊಸ ಮಾರ್ಗಗಳನ್ನು ತೆರೆಯುವುದು. ಈ ನಿಟ್ಟಿನಲ್ಲಿ, ಡಬ್ಲ್ಯುಟಿಎಸ್ಎ ಮತ್ತು ಐಎಂಸಿ ನಡುವಿನ ಸಹಭಾಗಿತ್ವವು ಸ್ಪೂರ್ತಿದಾಯಕ ಮತ್ತು ಅತ್ಯುತ್ತಮ ಸಂದೇಶವನ್ನು ಕಳುಹಿಸುತ್ತದೆ. ಸ್ಥಳೀಯ ಮತ್ತು ಜಾಗತಿಕತೆ ಒಗ್ಗೂಡಿದಾಗ, ಅದು ಒಂದು ದೇಶಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಇದು ನಮ್ಮ ಗುರಿಯಾಗಿದೆ.

 

|

ಸ್ನೇಹಿತರೇ,

21ನೇ ಶತಮಾನದಲ್ಲಿ, ಭಾರತದ ಮೊಬೈಲ್ ಮತ್ತು ಟೆಲಿಕಾಂ ಸಾಗಿ ಬಂದ ಹಾದಿಯು ಇಡೀ ಜಗತ್ತಿಗೆ ಅಧ್ಯಯನದ ವಿಷಯವಾಗಿದೆ. ಜಾಗತಿಕವಾಗಿ, ಮೊಬೈಲ್ ಮತ್ತು ಟೆಲಿಕಾಂ ಗಳನ್ನು ಒಂದು  ಅನುಕೂಲತೆಯಾಗಿ ನೋಡಲಾಗಿದೆ. ಆದರೆ ಭಾರತದ ಮಾದರಿ ವಿಭಿನ್ನವಾಗಿದೆ. ಭಾರತದಲ್ಲಿ, ನಾವು ದೂರಸಂಪರ್ಕವನ್ನು ಕೇವಲ ಸಂಪರ್ಕದ ಸಾಧನವಾಗಿ ನೋಡದೆ, ಸಮಾನತೆ ಮತ್ತು ಅವಕಾಶಗಳ ಮಾಧ್ಯಮವಾಗಿ ನೋಡಿದ್ದೇವೆ. ಈ ಮಾಧ್ಯಮವು ಹಳ್ಳಿಗಳು ಮತ್ತು ನಗರಗಳ ನಡುವಿನ ಅಂತರವನ್ನು ಮತ್ತು ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಿದೆ. 10 ವರ್ಷಗಳ ಹಿಂದೆ ನಾನು ಡಿಜಿಟಲ್ ಇಂಡಿಯಾದ ದೃಷ್ಟಿಕೋನವನ್ನು ದೇಶಕ್ಕೆ ಪ್ರಸ್ತುತಪಡಿಸಿದಾಗ, ನಾವು ತುಣುಕುಗಳಾಗಿ ಕೆಲಸ ಮಾಡಬಾರದು ಆದರೆ ಸಮಗ್ರ ವಿಧಾನದೊಂದಿಗೆ ಕೆಲಸ ಮಾಡಬೇಕು ಎಂದು ಹೇಳಿದ್ದು ನನಗೆ ನೆನಪಿದೆ. ನಾವು ಡಿಜಿಟಲ್ ಇಂಡಿಯಾದ ನಾಲ್ಕು ಸ್ತಂಭಗಳನ್ನು ಗುರುತಿಸಿದ್ದೇವೆ. ಮೊದಲನೆಯದಾಗಿ, ಸಾಧನಗಳ ವೆಚ್ಚ ಕಡಿಮೆ ಇರಬೇಕು. ಎರಡನೆಯದಾಗಿ, ಡಿಜಿಟಲ್ ಸಂಪರ್ಕವು ದೇಶದ ಮೂಲೆ ಮೂಲೆಯನ್ನು ತಲುಪಬೇಕು. ಮೂರನೆಯದಾಗಿ, ಡೇಟಾ ಎಲ್ಲರಿಗೂ ಲಭ್ಯವಿರಬೇಕು. ಮತ್ತು ನಾಲ್ಕನೆಯದಾಗಿ, ನಮ್ಮ ಗುರಿ 'ಡಿಜಿಟಲ್ ಮೊದಲು' ಆಗಿರಬೇಕು. ನಾವು ಏಕಕಾಲದಲ್ಲಿ ಎಲ್ಲಾ ನಾಲ್ಕು ಸ್ತಂಭಗಳ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದ್ದೇವೆ ಮತ್ತು ನಾವು ಫಲಿತಾಂಶಗಳನ್ನು ನೋಡಿದ್ದೇವೆ.

 

|

ಸ್ನೇಹಿತರೇ,

ನಾವು ಭಾರತದಲ್ಲಿ ಫೋನ್ ಗಳನ್ನು ತಯಾರಿಸಲು ಪ್ರಾರಂಭಿಸುವವರೆಗೂ ಫೋನ್ ಗಳು ಕೈಗೆಟುಕುವ ದರದಲ್ಲಿ ಲಭ್ಯವಾಗುವುದು ಸಾಧ್ಯವಾಗಲಿಲ್ಲ. 2014 ರಲ್ಲಿ, ಭಾರತದಲ್ಲಿ ಕೇವಲ ಎರಡು ಮೊಬೈಲ್ ಉತ್ಪಾದನಾ ಘಟಕಗಳು ಇದ್ದವು, ಆದರೆ ಇಂದು, 200 ಕ್ಕೂ ಹೆಚ್ಚು ಉತ್ಪಾದನಾ ಘಟಕಗಳಿವೆ. ಈ ಮೊದಲು, ನಾವು ಹೆಚ್ಚಿನ ಫೋನುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು, ಆದರೆ ಈಗ ನಾವು ಭಾರತದಲ್ಲಿ ಆರು ಪಟ್ಟು ಹೆಚ್ಚು ಫೋನುಗಳನ್ನು ಉತ್ಪಾದಿಸುತ್ತಿದ್ದೇವೆ ಮತ್ತು ನಾವು ಮೊಬೈಲ್ ರಫ್ತುದಾರರಾಗಿ ಗುರುತಿಸಲ್ಪಟ್ಟಿದ್ದೇವೆ. ಆದರೆ ನಾವು ಅಲ್ಲಿಗೆ ನಿಂತಿಲ್ಲ. ಈಗ, ಚಿಪ್ ಗಳಿಂದ ಹಿಡಿದು ಸಿದ್ಧಪಡಿಸಿದ ಉತ್ಪನ್ನಗಳವರೆಗೆ, ನಾವು ಜಗತ್ತಿಗೆ ಸಂಪೂರ್ಣವಾಗಿ ಮೇಡ್ ಇನ್ ಇಂಡಿಯಾ ಫೋನ್ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ಭಾರತದಲ್ಲಿ ಅರೆವಾಹಕ ಪರಿಸರ ವ್ಯವಸ್ಥೆಯಲ್ಲಿ ಗಮನಾರ್ಹ ಹೂಡಿಕೆಗಳನ್ನು ಮಾಡುತ್ತಿದ್ದೇವೆ.

ಸ್ನೇಹಿತರೇ,

ಸಂಪರ್ಕದ ಆಧಾರಸ್ತಂಭದ ಮೇಲೆ ಕೆಲಸ ಮಾಡುವ ಮೂಲಕ, ಭಾರತದ ಪ್ರತಿಯೊಂದು ಮನೆಯೂ ಸಂಪರ್ಕ ಹೊಂದಿರುವುದನ್ನು ನಾವು ಖಚಿತಪಡಿಸಿದ್ದೇವೆ. ನಾವು ದೇಶಾದ್ಯಂತ ಮೊಬೈಲ್ ಟವರ್ ಗಳ ದೃಢವಾದ ಜಾಲವನ್ನು ನಿರ್ಮಿಸಿದ್ದೇವೆ. ಬುಡಕಟ್ಟು ಪ್ರದೇಶಗಳು, ಗುಡ್ಡಗಾಡು ಪ್ರದೇಶಗಳು ಮತ್ತು ಗಡಿ ಪ್ರದೇಶಗಳಲ್ಲಿ, ಕಡಿಮೆ ಸಮಯದಲ್ಲಿ ಸಾವಿರಾರು ಮೊಬೈಲ್ ಟವರ್ ಗಳನ್ನು ಸ್ಥಾಪಿಸಲಾಗಿದೆ. ನಾವು ರೈಲ್ವೆ ನಿಲ್ದಾಣಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ವೈ-ಫೈ ಸೌಲಭ್ಯಗಳನ್ನು ಒದಗಿಸಿದ್ದೇವೆ. ನಾವು ಅಂಡಮಾನ್-ನಿಕೋಬಾರ್ ಮತ್ತು ಲಕ್ಷದ್ವೀಪದಂತಹ ದ್ವೀಪಗಳನ್ನು ಸಮುದ್ರದಾಳದ ಕೇಬಲ್ ಗಳ ಮೂಲಕ ಸಂಪರ್ಕಿಸಿದ್ದೇವೆ. ಕೇವಲ 10 ವರ್ಷಗಳಲ್ಲಿ, ಭಾರತವು ಆಪ್ಟಿಕಲ್ ಫೈಬರ್ ಹಾಕಿದೆ, ಇದು ಭೂಮಿ ಮತ್ತು ಚಂದ್ರನ ನಡುವಿನ ದೂರಕ್ಕೆ ಹೋಲಿಸಿದಾಗ  ಎಂಟು ಪಟ್ಟು ಹೆಚ್ಚಾಗಿದೆ! ಭಾರತದ ವೇಗದ ಒಂದು ಉದಾಹರಣೆಯನ್ನು ನಾನು ನಿಮಗೆ ನೀಡುತ್ತೇನೆ. ನಾವು ಎರಡು ವರ್ಷಗಳ ಹಿಂದೆ ಮೊಬೈಲ್ ಕಾಂಗ್ರೆಸ್ ನಲ್ಲಿ 5 ಜಿ ಪ್ರಾರಂಭಿಸಿದ್ದೇವೆ. ಇಂದು, ಭಾರತದ ಬಹುತೇಕ ಪ್ರತಿಯೊಂದು ಜಿಲ್ಲೆಯೂ 5 ಜಿ ಸೇವೆಗಳಿಗೆ ಸಂಪರ್ಕ ಹೊಂದಿದೆ. ಇಂದು, ಭಾರತವು ವಿಶ್ವದ ಎರಡನೇ ಅತಿದೊಡ್ಡ 5 ಜಿ ಮಾರುಕಟ್ಟೆಯಾಗಿ ಮಾರ್ಪಟ್ಟಿದೆ, ಮತ್ತು ನಾವು ಈಗ 6 ಜಿ ತಂತ್ರಜ್ಞಾನದ ಮೇಲೆ ವೇಗವಾಗಿ ಕೆಲಸ ಮಾಡುತ್ತಿದ್ದೇವೆ.

 

|

ಸ್ನೇಹಿತರೇ,

ಭಾರತದಲ್ಲಿ ದೂರಸಂಪರ್ಕ ಕ್ಷೇತ್ರದಲ್ಲಿನ ಸುಧಾರಣೆಗಳು ಮತ್ತು ಆವಿಷ್ಕಾರಗಳು ಊಹಿಸಲಾಗದಂತಹವು ಮತ್ತು ಅಭೂತಪೂರ್ವವಾಗಿವೆ. ಪರಿಣಾಮವಾಗಿ, ಡೇಟಾ ವೆಚ್ಚಗಳು ಗಮನಾರ್ಹವಾಗಿ ಕಡಿಮೆಯಾಗಿವೆ. ಇಂದು, ಭಾರತದಲ್ಲಿ ಇಂಟರ್ನೆಟ್ ಡೇಟಾದ ವೆಚ್ಚವು ಪ್ರತಿ ಜಿಬಿಗೆ ಸುಮಾರು 12 ಸೆಂಟ್ಸ್ ಆಗಿದ್ದರೆ, ಅನೇಕ ದೇಶಗಳಲ್ಲಿ, ಒಂದು ಜಿಬಿ ಡೇಟಾದ ವೆಚ್ಚವು 10 ರಿಂದ 20 ಪಟ್ಟು ಹೆಚ್ಚು. ಪ್ರತಿಯೊಬ್ಬ ಭಾರತೀಯನು ತಿಂಗಳಿಗೆ ಸರಾಸರಿ 30 ಜಿಬಿ ಡೇಟಾವನ್ನು ಬಳಸುತ್ತಿದ್ದಾನೆ.

ಸ್ನೇಹಿತರೇ,

ಈ ಎಲ್ಲ ಪ್ರಯತ್ನಗಳನ್ನು ನಮ್ಮ ನಾಲ್ಕನೇ ಸ್ತಂಭವಾದ 'ಡಿಜಿಟಲ್ ಫಸ್ಟ್' ಸ್ಫೂರ್ತಿಯಿಂದ ಹೊಸ ಮಟ್ಟಕ್ಕೆ, ಎತ್ತರಕ್ಕೆ ಕೊಂಡೊಯ್ದಿದೆ. ಭಾರತವು ಡಿಜಿಟಲ್ ತಂತ್ರಜ್ಞಾನವನ್ನು ಪ್ರಜಾಪ್ರಭುತ್ವೀಕರಿಸಿದೆ. ನಾವು ಡಿಜಿಟಲ್ ಪ್ಲಾಟ್ ಫಾರ್ಮ್ ಗಳನ್ನು ರಚಿಸಿದ್ದೇವೆ, ಮತ್ತು ಈ ಪ್ಲಾಟ್ ಫಾರ್ಮ್ ಗಳಲ್ಲಿನ ಆವಿಷ್ಕಾರಗಳು ಲಕ್ಷಾಂತರ ಹೊಸ ಅವಕಾಶಗಳನ್ನು ಸೃಷ್ಟಿಸಿವೆ. ಜಾಮ್ ತ್ರಿಕೋನ (ಜನ್ ಧನ್, ಆಧಾರ್ ಮತ್ತು ಮೊಬೈಲ್) ಅನೇಕ ಆವಿಷ್ಕಾರಗಳಿಗೆ ಅಡಿಪಾಯವಾಗಿದೆ. ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಹಲವಾರು ಹೊಸ ಕಂಪನಿಗಳಿಗೆ ಅವಕಾಶಗಳನ್ನು ಸೃಷ್ಟಿಸಿದೆ. ಈ ದಿನಗಳಲ್ಲಿ, ಒಎನ್ಡಿಸಿ (ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್) ಅನ್ನು ಇದೇ ರೀತಿ ಚರ್ಚಿಸಲಾಗುತ್ತಿದೆ ಮತ್ತು ಇದು ಡಿಜಿಟಲ್ ವಾಣಿಜ್ಯದಲ್ಲಿ ಹೊಸ ಕ್ರಾಂತಿಯನ್ನು ತರಲಿದೆ. ಕರೋನಾ ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ, ನಮ್ಮ ಡಿಜಿಟಲ್ ಪ್ಲಾಟ್ಫಾರ್ಮ್ಗಳು ಎಲ್ಲವನ್ನೂ ಹೇಗೆ ಸುಲಭಗೊಳಿಸಿವೆ ಎಂಬುದನ್ನು ನಾವು ನೋಡಿದ್ದೇವೆ - ಅಗತ್ಯವಿರುವವರಿಗೆ ಹಣವನ್ನು ವರ್ಗಾಯಿಸುವುದು, ಕೋವಿಡ್ -19 ನೊಂದಿಗೆ ವ್ಯವಹರಿಸುವ ಉದ್ಯೋಗಿಗಳಿಗೆ ನೈಜ ಸಮಯದ ಮಾರ್ಗಸೂಚಿಗಳನ್ನು ಕಳುಹಿಸುವುದು, ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸುವುದು ಅಥವಾ ಡಿಜಿಟಲ್ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಒದಗಿಸುವುದು - ಎಲ್ಲವೂ ಭಾರತದಲ್ಲಿ ಸುಗಮವಾಗಿ ನಡೆಯಿತು. ಇಂದು, ಭಾರತವು ಡಿಜಿಟಲ್ ಗುಚ್ಛವನ್ನು ಹೊಂದಿದೆ, ಅದು ಕಲ್ಯಾಣ ಯೋಜನೆಗಳನ್ನು ಜಾಗತಿಕವಾಗಿ ಹೊಸ ಎತ್ತರಕ್ಕೆ ಏರಿಸುತ್ತದೆ. ಅದಕ್ಕಾಗಿಯೇ, ಜಿ -20 ಅಧ್ಯಕ್ಷತೆಯ ಸಮಯದಲ್ಲಿ, ಭಾರತವು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಕ್ಕೆ ಒತ್ತು ನೀಡಿತು. ಮತ್ತು ಇಂದು, ಯುಪಿಐಗೆ ಸಂಬಂಧಿಸಿದ ತನ್ನ ಅನುಭವ ಮತ್ತು ಜ್ಞಾನವನ್ನು ಎಲ್ಲಾ ದೇಶಗಳೊಂದಿಗೆ ಹಂಚಿಕೊಳ್ಳಲು ಭಾರತ ಸಂತೋಷಪಡುತ್ತದೆ ಎಂಬುದನ್ನು ನಾನು ಪುನರುಚ್ಚರಿಸುತ್ತೇನೆ.

 

|

ಸ್ನೇಹಿತರೇ,

ಡಬ್ಲ್ಯುಟಿಎಸ್ಎಯಲ್ಲಿ ಮಹಿಳಾ ನೆಟ್ವರ್ಕ್ ಉಪಕ್ರಮದ ಬಗ್ಗೆ ಚರ್ಚೆ ನಡೆಯಲಿದೆ. ಇದು ಬಹಳ ಮುಖ್ಯವಾದ ವಿಷಯವಾಗಿದೆ. ಭಾರತವು ಮಹಿಳಾ ನೇತೃತ್ವದ ಅಭಿವೃದ್ಧಿಗಾಗಿ ಗಂಭೀರವಾಗಿ ಕೆಲಸ ಮಾಡುತ್ತಿದೆ. ಜಿ -20 ಅಧ್ಯಕ್ಷತೆಯ ಅವಧಿಯಲ್ಲಿ, ನಾವು ಈ ವಿಷಯದ ಬಗ್ಗೆ ನಮ್ಮ ಬದ್ಧತೆಯನ್ನು ಹೆಚ್ಚಿಸಿದ್ದೇವೆ. ತಂತ್ರಜ್ಞಾನ ಕ್ಷೇತ್ರವನ್ನು ಅಂತರ್ಗತಗೊಳಿಸುವ ಮತ್ತು ತಂತ್ರಜ್ಞಾನ ವೇದಿಕೆಗಳ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಭಾರತ ಹೊಂದಿದೆ. ನಮ್ಮ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ನಮ್ಮ ಮಹಿಳಾ ವಿಜ್ಞಾನಿಗಳು ಹೇಗೆ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದನ್ನು ನೀವು ನೋಡಿದ್ದೀರಿ. ನಮ್ಮ ನವೋದ್ಯಮಗಳಲ್ಲಿ (ಸ್ಟಾರ್ಟ್ ಅಪ್ )ಗಳಲ್ಲಿ ಮಹಿಳಾ ಸಹ-ಸಂಸ್ಥಾಪಕರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇಂದು, ಭಾರತದಲ್ಲಿ ಸ್ಟೆಮ್ ಶಿಕ್ಷಣದಲ್ಲಿ ಭಾಗವಹಿಸುವವರಲ್ಲಿ 40 ಪ್ರತಿಶತಕ್ಕೂ ಹೆಚ್ಚು ಜನರು ನಮ್ಮ ಹೆಣ್ಣುಮಕ್ಕಳು. ಭಾರತವು ತಂತ್ರಜ್ಞಾನ ನಾಯಕತ್ವದಲ್ಲಿ ಮಹಿಳೆಯರಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ಸೃಷ್ಟಿಸುತ್ತಿದೆ. ಸರ್ಕಾರದ ನಮೋ ಡ್ರೋನ್ ದೀದಿ ಕಾರ್ಯಕ್ರಮದ ಬಗ್ಗೆ ನೀವು ಕೇಳಿರಬಹುದು. ಈ ಕಾರ್ಯಕ್ರಮವು ಕೃಷಿಯಲ್ಲಿ ಡ್ರೋನ್ ಗಳ ಬಳಕೆಯನ್ನು ಉತ್ತೇಜಿಸುತ್ತದೆ ಮತ್ತು ಇದನ್ನು ಭಾರತದ ಹಳ್ಳಿಗಳ ಮಹಿಳೆಯರು ಮುನ್ನಡೆಸುತ್ತಿದ್ದಾರೆ. ಮನೆಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು, ನಾವು ಬ್ಯಾಂಕ್ ಸಖಿ ಕಾರ್ಯಕ್ರಮವನ್ನು ಸಹ ಪ್ರಾರಂಭಿಸಿದ್ದೇವೆ. ಇದರರ್ಥ ಮಹಿಳೆಯರು ಡಿಜಿಟಲ್ ಜಾಗೃತಿ ಉಪಕ್ರಮವನ್ನು ಮುನ್ನಡೆಸಿದ್ದಾರೆ. ನಮ್ಮ ಪ್ರಾಥಮಿಕ ಆರೋಗ್ಯ ರಕ್ಷಣೆ, ಹೆರಿಗೆ ಮತ್ತು ಶಿಶುಪಾಲನೆಯಲ್ಲಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಮಹತ್ವದ ಪಾತ್ರ ವಹಿಸುತ್ತಾರೆ. ಇಂದು, ಈ ಕಾರ್ಮಿಕರು ಟ್ಯಾಬ್ಲೆಟ್ಗಳು ಮತ್ತು ಅಪ್ಲಿಕೇಶನ್ಗಳ ಮೂಲಕ ಈ ಎಲ್ಲಾ ಕೆಲಸಗಳನ್ನು ಟ್ರ್ಯಾಕ್ ಮಾಡುತ್ತಾರೆ. ನಾವು ಮಹಿಳಾ ಉದ್ಯಮಿಗಳಿಗೆ ಆನ್ ಲೈನ್ ಮಾರ್ಕೆಟಿಂಗ್ ವೇದಿಕೆಯಾದ ಮಹಿಳಾ ಇ-ಹಾತ್ ಕಾರ್ಯಕ್ರಮವನ್ನು ಸಹ ನಡೆಸುತ್ತಿದ್ದೇವೆ. ಇದರರ್ಥ, ಒಂದು ಕಾಲದಲ್ಲಿ ಊಹಿಸಲಾಗದ ರೀತಿಯಲ್ಲಿ, ಇಂದು ಭಾರತದ ಮಹಿಳೆಯರು ಹಳ್ಳಿಗಳಲ್ಲಿಯೂ ತಂತ್ರಜ್ಞಾನಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ನಾವು ಈ ಉಪಕ್ರಮವನ್ನು ಇನ್ನಷ್ಟು ವಿಸ್ತರಿಸಲಿದ್ದೇವೆ. ಪ್ರತಿಯೊಬ್ಬ ಮಗಳು ಟೆಕ್ ಲೀಡರ್ ಆಗುವ ಭಾರತವನ್ನು ನಾನು ಕಲ್ಪಿಸಿಕೊಳ್ಳುತ್ತೇನೆ.

 

|

ಸ್ನೇಹಿತರೇ,

ಭಾರತದ ಜಿ-20 ಅಧ್ಯಕ್ಷತೆಯ ಶೃಂಗಸಭೆಯ ಅವಧಿಯಲ್ಲಿ ನಾವು ಗಂಭೀರ ವಿಷಯವನ್ನು ಜಗತ್ತಿಗೆ ಪ್ರಸ್ತುತಪಡಿಸಿದ್ದೇವೆ. ಡಬ್ಲ್ಯುಟಿಎಸ್ಎಯಂತಹ ಜಾಗತಿಕ ವೇದಿಕೆಯಲ್ಲಿ ಈ ವಿಷಯವನ್ನು ಪ್ರಸ್ತುತಪಡಿಸಲು ನಾನು ಬಯಸುತ್ತೇನೆ. ವಿಷಯವು ಡಿಜಿಟಲ್ ತಂತ್ರಜ್ಞಾನಕ್ಕಾಗಿ ಜಾಗತಿಕ ಚೌಕಟ್ಟು ಮತ್ತು ಜಾಗತಿಕ ಮಾರ್ಗಸೂಚಿಗಳು. ಜಾಗತಿಕ ಆಡಳಿತಕ್ಕಾಗಿ ಇದರ ಮಹತ್ವವನ್ನು ಜಾಗತಿಕ ಸಂಸ್ಥೆಗಳು ಗುರುತಿಸುವ ಸಮಯ ಬಂದಿದೆ. ತಂತ್ರಜ್ಞಾನಕ್ಕಾಗಿ ಮಾಡಬೇಕಾದ ಮತ್ತು ಮಾಡಬಾರದ ಜಾಗತಿಕ ಸೆಟ್ ಇರಬೇಕು. ಇಂದು, ಎಲ್ಲಾ ಡಿಜಿಟಲ್ ಸಾಧನಗಳು ಮತ್ತು ಅಪ್ಲಿಕೇಶನ್ಗಳು ಯಾವುದೇ ದೇಶದ ಗಡಿಗಳು ಮತ್ತು ಮಿತಿಗಳನ್ನು ಮೀರಿ ಕಾರ್ಯನಿರ್ವಹಿಸುತ್ತವೆ. ಯಾವುದೇ ಒಂದು ದೇಶವು ತನ್ನ ನಾಗರಿಕರನ್ನು ಸೈಬರ್ ಬೆದರಿಕೆಗಳಿಂದ ರಕ್ಷಿಸಲು ಸಾಧ್ಯವಿಲ್ಲ. ನಾವು ಒಟ್ಟಾಗಿ ಕೆಲಸ ಮಾಡಬೇಕು ಮತ್ತು ಜಾಗತಿಕ ಸಂಸ್ಥೆಗಳು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ನಮ್ಮ ಅನುಭವದಿಂದ, ವಾಯುಯಾನ ಕ್ಷೇತ್ರದಲ್ಲಿ ನಿಯಮಗಳು ಮತ್ತು ನಿಬಂಧನೆಗಳಿಗಾಗಿ ನಾವು ಜಾಗತಿಕ ಚೌಕಟ್ಟನ್ನು ಸ್ಥಾಪಿಸಿದಂತೆಯೇ, ಡಿಜಿಟಲ್ ಜಗತ್ತಿಗೆ ಇದೇ ರೀತಿಯ ಚೌಕಟ್ಟು ಅಗತ್ಯವಿದೆ. ಈ ನಿಟ್ಟಿನಲ್ಲಿ ಡಬ್ಲ್ಯುಟಿಎಸ್ಎ ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಬೇಕಾಗಿದೆ. ದೂರಸಂಪರ್ಕವನ್ನು ಎಲ್ಲರಿಗೂ ಹೇಗೆ ಸುರಕ್ಷಿತವಾಗಿಸಬಹುದು ಎಂಬುದರ ಬಗ್ಗೆ ಯೋಚಿಸುವಂತೆ ನಾನು ಪ್ರತಿಯೊಬ್ಬ ಡಬ್ಲ್ಯುಟಿಎಸ್ಎ ಸದಸ್ಯರನ್ನು ಒತ್ತಾಯಿಸುತ್ತೇನೆ. ಈ ಅಂತರ್ಸಂಪರ್ಕಿತ ಜಗತ್ತಿನಲ್ಲಿ, ಭದ್ರತೆಯು ನಂತರದ ಆಲೋಚನೆಯಾಗಲು ಸಾಧ್ಯವಿಲ್ಲ. ಭಾರತದ ದತ್ತಾಂಶ ಸಂರಕ್ಷಣಾ ಕಾಯ್ದೆ ಮತ್ತು ರಾಷ್ಟ್ರೀಯ ಸೈಬರ್ ಭದ್ರತಾ ಕಾರ್ಯತಂತ್ರವು ಸುರಕ್ಷಿತ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ನಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಭವಿಷ್ಯದ ಪ್ರತಿಯೊಂದು ಸವಾಲಿಗೆ ಅಂತರ್ಗತ, ಸುರಕ್ಷಿತ ಮತ್ತು ಹೊಂದಿಕೊಳ್ಳುವ ಮಾನದಂಡಗಳನ್ನು ರಚಿಸುವಂತೆ ನಾನು ಈ ಅಸೆಂಬ್ಲಿಯ ಸದಸ್ಯರನ್ನು ಒತ್ತಾಯಿಸುತ್ತೇನೆ. ವಿವಿಧ ದೇಶಗಳ ವೈವಿಧ್ಯತೆಯನ್ನು ಗೌರವಿಸುವ ನೈತಿಕ ಎಐ ಮತ್ತು ಡೇಟಾ ಗೌಪ್ಯತೆಗಾಗಿ ನೀವು ಜಾಗತಿಕ ಮಾನದಂಡಗಳನ್ನು ಅಭಿವೃದ್ಧಿಪಡಿಸಬೇಕು.

ಸ್ನೇಹಿತರೇ,

ಈ ತಾಂತ್ರಿಕ ಕ್ರಾಂತಿಯಲ್ಲಿ, ತಂತ್ರಜ್ಞಾನಕ್ಕೆ ಮಾನವ ಕೇಂದ್ರಿತ ಆಯಾಮವನ್ನು ನೀಡಲು ನಾವು ನಿರಂತರವಾಗಿ ಪ್ರಯತ್ನಿಸುವುದು ಬಹಳ ಮುಖ್ಯ. ಈ ಕ್ರಾಂತಿಯು ಜವಾಬ್ದಾರಿಯುತ ಮತ್ತು ಸುಸ್ಥಿರವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಇಂದು ನಾವು ನಿಗದಿಪಡಿಸಿದ ಮಾನದಂಡಗಳು ನಮ್ಮ ಭವಿಷ್ಯದ ದಿಕ್ಕನ್ನು ರೂಪಿಸುತ್ತವೆ. ಆದ್ದರಿಂದ, ಭದ್ರತೆ, ಘನತೆ ಮತ್ತು ಸಮಾನತೆಯ ತತ್ವಗಳು ನಮ್ಮ ಚರ್ಚೆಗಳ ಕೇಂದ್ರವಾಗಿರಬೇಕು. ಈ ಡಿಜಿಟಲ್ ಯುಗದಲ್ಲಿ ಯಾವುದೇ ದೇಶ, ಯಾವುದೇ ಪ್ರದೇಶ ಮತ್ತು ಯಾವುದೇ ಸಮುದಾಯವು ಹಿಂದೆ ಉಳಿಯದಂತೆ ನೋಡಿಕೊಳ್ಳುವುದು ನಮ್ಮ ಗುರಿಯಾಗಿರಬೇಕು. ನಾವೀನ್ಯತೆ ಮತ್ತು ಒಳಗೊಳ್ಳುವಿಕೆಯೊಂದಿಗೆ ನಮ್ಮ ಭವಿಷ್ಯವು ತಾಂತ್ರಿಕವಾಗಿ ಬಲವಾಗಿದೆ ಮತ್ತು ನೈತಿಕವಾಗಿ ಸದೃಢವಾಗಿದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು.

ಸ್ನೇಹಿತರೇ,

ಡಬ್ಲ್ಯುಟಿಎಸ್ಎ ಯಶಸ್ಸಿಗೆ ನಾನು ನನ್ನ ಶುಭ ಹಾರೈಕೆಗಳನ್ನು ಮತ್ತು ಬೆಂಬಲವನ್ನು ನೀಡುತ್ತೇನೆ. ನಾನು ನಿಮಗೆ ಶುಭ ಹಾರೈಸುತ್ತೇನೆ!ತುಂಬಾ ಧನ್ಯವಾದಗಳು!

 

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Over 88% Trust PM Modi On National Security Matters After Op Sindoor: News18 Survey

Media Coverage

Over 88% Trust PM Modi On National Security Matters After Op Sindoor: News18 Survey
NM on the go

Nm on the go

Always be the first to hear from the PM. Get the App Now!
...
PM highlights Nari Shakti's transformative role in the journey towards a developed India
June 08, 2025
QuoteOver the last 11 years, the NDA Government has redefined women-led development: PM
QuoteVarious initiatives, from ensuring dignity through Swachh Bharat to financial inclusion via Jan Dhan accounts, the focus has been on empowering our Nari Shakti: PM

The Prime Minister, Shri Narendra Modi has highlighted the transformative role played by women in the journey towards a developed India, underlining the government’s focus on women-led development over the past 11 years.

The Prime Minister said that our mothers, sisters and daughters have seen times when they had to face difficulties at every step. But today they are not only participating actively in the resolution of a developed India, but are also setting examples in every field from education to business. Shri Modi further added that the successes of Nari Shakti in the last 11 years are a matter of pride for all citizens.

The Prime Minister noted that the NDA Government has redefined women-led development through a series of impactful initiatives. These include ensuring dignity through the Swachh Bharat Abhiyan, financial inclusion via Jan Dhan accounts, and empowerment at the grassroots level.

He cited Ujjwala Yojana as a milestone that brought smoke-free kitchens to several homes. He also highlighted how MUDRA loans have enabled lakhs of women to become entrepreneurs and pursue their dreams independently. The provision of houses in women’s names under the PM Awas Yojana has also made a remarkable impact on their sense of security and empowerment.

The Prime Minister also recalled the Beti Bachao Beti Padhao campaign, which he described as a national movement to protect the girl child.

Shri Modi affirmed that in all sectors- including science, education, sports, StartUps, and the armed forces-women are excelling and inspiring several people.

The Prime Minister shared these remarks through a series of posts on X;

"हमारी माताओं-बहनों और बेटियों ने वो दौर भी देखा है, जब उन्हें कदम-कदम पर मुश्किलों का सामना करना पड़ता था। लेकिन आज वे ना सिर्फ विकसित भारत के संकल्प में बढ़-चढ़कर भागीदारी निभा रही हैं, बल्कि शिक्षा और व्यवसाय से लेकर हर क्षेत्र में मिसाल कायम कर रही हैं। बीते 11 वर्षों में हमारी नारीशक्ति की सफलताएं देशवासियों को गौरवान्वित करने वाली हैं।

#11YearsOfSashaktNari"

"Over the last 11 years, the NDA Government has redefined women-led development.
Various initiatives, from ensuring dignity through Swachh Bharat to financial inclusion via Jan Dhan accounts, the focus has been on empowering our Nari Shakti. Ujjwala Yojana brought smoke-free kitchens to several homes. MUDRA loans enabled lakhs of women entrepreneurs to pursue dreams on their own terms. Houses under the women’s name in PM Awas Yojana too have made a remarkable impact.

Beti Bachao Beti Padhao ignited a national movement to protect the girl child.

In all sectors, including science, education, sports, StartUps and the armed forces, women are excelling and inspiring several people.

#11YearsOfSashaktNari"