ಗೌರವಾನ್ವಿತ ಪ್ರಧಾನ ಮಂತ್ರಿ ಮಾರ್ಕ್ ಕಾರ್ನೆ, ಉಭಯ ದೇಶಗಳ ದೇಶಗಳ ವ್ಯಾಪಾರ ನಾಯಕರೇ, ಮಹಿಳೆಯರೇ ಮತ್ತು ಮಹನೀಯರೇ, ಶುಭಾಶಯಗಳು!

ಭಾರತ - ಕೆನಡಾ ಸಿಇಒ ವೇದಿಕೆಯಲ್ಲಿ ನಿಮ್ಮೆಲ್ಲರೊಂದಿಗೆ ಸೇರಲು ನನಗೆ ಸಂತೋಷವಾಗುತ್ತಿದೆ. ತಮ್ಮ ಸಕಾರಾತ್ಮಕ ಆಲೋಚನೆಗಳನ್ನು ಹಂಚಿಕೊಂಡಿದ್ದಕ್ಕಾಗಿ ನಾನು ಪ್ರಧಾನಮಂತ್ರಿ ಕಾರ್ನೆ ಅವರಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಸ್ನೇಹಿತರೇ,

ಇಂದು ನಾವು ಭಾರತ - ಕೆನಡಾ ಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತಿದ್ದೇವೆ. ಪ್ರಧಾನ ಮಂತ್ರಿ ಕಾರ್ನೆ ಅವರು ಅಧಿಕಾರದಲ್ಲಿ ಒಂದು ವರ್ಷವನ್ನು ಸಹ ಪೂರೈಸಿಲ್ಲ, ಆದರೂ ನಮ್ಮ ಸಂಬಂಧಗಳು ಒಂದು ಬೆಳಕಿನ ವರ್ಷದಿಂದ ಮುಂದುವರೆದಿವೆ. ಇತ್ತೀಚಿನ ತಿಂಗಳುಗಳಲ್ಲಿ, ನಂಬಿಕೆ ಬೆಳೆದಿದೆ, ಸ್ಪಷ್ಟತೆ ಹೊರಹೊಮ್ಮಿದೆ ಮತ್ತು ಹೊಸ ಆವೇಗವನ್ನು ಸೃಷ್ಟಿಸಲಾಗಿದೆ. ಜಗತ್ತು ಆರ್ಥಿಕ ಅನಿಶ್ಚಿತತೆಯನ್ನು ಎದುರಿಸುತ್ತಿರುವ ಮತ್ತು ಜಾಗತಿಕ ಆರ್ಥಿಕ ಕ್ರಮವು ಒತ್ತಡದಲ್ಲಿರುವ ಸಮಯದಲ್ಲಿ ಇದು ನಡೆಯುತ್ತಿದೆ. ಇಂತಹ ಸಮಯದಲ್ಲಿ, ಭಾರತ ಮತ್ತು ಕೆನಡಾದ ವಾಣಿಜ್ಯ ನಾಯಕರ ನಡುವಿನ ಈ ಮಾತುಕತೆ ನಮ್ಮ ಪಾಲುದಾರಿಕೆಗೆ ಹೊಸ ನೀಲನಕ್ಷೆಯನ್ನು ಸಿದ್ಧಪಡಿಸುತ್ತದೆ. ನಿಮ್ಮ ದೂರದೃಷ್ಟಿ ಮತ್ತು ಬದ್ಧತೆಯನ್ನು ನಾನು ಶ್ಲಾಘಿಸುತ್ತೇನೆ.

ಸ್ನೇಹಿತರೇ,

ಭಾರತ ಮತ್ತು ಕೆನಡಾ ರೋಮಾಂಚಕ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿವೆ. ವಿಶ್ವದ ಎರಡು ಪ್ರಮುಖ ಆರ್ಥಿಕತೆಗಳು ಮತ್ತು ಹಂಚಿಕೆಯ ಮೌಲ್ಯಗಳ ಮೇಲೆ ನಿರ್ಮಿಸಲಾದ ಸಮಾಜಗಳಾಗಿವೆ. ಪ್ರಜಾಪ್ರಭುತ್ವ, ವೈವಿಧ್ಯತೆ ಮತ್ತು ಅಭಿವೃದ್ಧಿಯು ನೈಸರ್ಗಿಕ ಪಾಲುದಾರರಾಗಿ ಮುಂದುವರಿಯಲು ನಮಗೆ ಸ್ಫೂರ್ತಿ ನೀಡುತ್ತದೆ. ಇಂದು, ಪ್ರಧಾನಮಂತ್ರಿ ಕಾರ್ನೆ ಮತ್ತು ನಾನು ನಮ್ಮ ಹಂಚಿಕೆಯ ದೃಷ್ಟಿಕೋನವನ್ನು ಮುಂದುವರಿಸಲು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ನಾವು ದ್ವಿಪಕ್ಷೀಯ ವ್ಯಾಪಾರವನ್ನು 50 ಶತಕೋಟಿ ಡಾಲರ್ ಮಟ್ಟಕ್ಕೆ ಏರಿಸುವತ್ತ ಸ್ಥಿರವಾಗಿ ಸಾಗುತ್ತಿದ್ದೇವೆ. ನಾವು ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವನ್ನು ಆದಷ್ಟು ಬೇಗ ಅಂತಿಮಗೊಳಿಸುತ್ತೇವೆ.

ಆದರೆ ಸ್ನೇಹಿತರೇ,

ಸರ್ಕಾರಗಳು ಚೌಕಟ್ಟುಗಳನ್ನು ರಚಿಸಬಹುದು ಮತ್ತು ನೀತಿ ನಿರ್ದೇಶನವನ್ನು ನೀಡಬಹುದು, ಆದರೆ ಆ ದೃಷ್ಟಿಕೋನವನ್ನು ವಾಸ್ತವಕ್ಕೆ ಪರಿವರ್ತಿಸುವ ಶಕ್ತಿ ನಿಮ್ಮೆಲ್ಲರ ಮೇಲಿದೆ.

ಸ್ನೇಹಿತರೇ,

ಇಂದು ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಈ ರೂಪಾಂತರದ ಹಿಂದೆ ಬಲವಾದ ದೇಶೀಯ ಬೇಡಿಕೆ, ಯುವ ಜನಸಂಖ್ಯೆ, ದೊಡ್ಡ ಪ್ರಮಾಣದ ಹೂಡಿಕೆ ಮತ್ತು ಡಿಜಿಟಲ್ ತಂತ್ರಜ್ಞಾನದ ಶಕ್ತಿ ಇದೆ. ಇದು ನಮ್ಮ ನಿರಂತರವಾಗಿ ಚಾಲನೆಯಲ್ಲಿರುವ ಸುಧಾರಣಾ ಎಕ್ಸ್ ಪ್ರೆಸ್ ನ ಫಲಿತಾಂಶವಾಗಿದೆ. ನೀತಿ ಸರಳೀಕರಣದಿಂದ ಉತ್ಪಾದನೆ ಆಧಾರಿತ ಪ್ರೋತ್ಸಾಹಕಗಳವರೆಗೆ, ಲಾಜಿಸ್ಟಿಕ್ಸ್ ಆಧುನೀಕರಣದಿಂದ ತೆರಿಗೆ ಮತ್ತು ದಿವಾಳಿತನ ಸುಧಾರಣೆಗಳವರೆಗೆ, ನಾವು ಪ್ರತಿಯೊಂದು ಕ್ಷೇತ್ರದಲ್ಲೂ ಸುಗಮ ವ್ಯಾಪಾರವನ್ನು ಬಲಪಡಿಸುತ್ತಿದ್ದೇವೆ.

ಸ್ನೇಹಿತರೇ,

ಭಾರತ ಮತ್ತು ಕೆನಡಾ ಒಟ್ಟಾಗಿ ನಿಂತಾಗ, ನಾವು ಕೇವಲ ಎರಡು ಆರ್ಥಿಕತೆಗಳನ್ನು ಸಂಪರ್ಕಿಸುವುದಿಲ್ಲ; ನಾವು ಬಂಡವಾಳ ಮತ್ತು ಸಾಮರ್ಥ್ಯದ ಆರ್ಥಿಕ ಶಕ್ತಿಯನ್ನು ಸೃಷ್ಟಿಸುತ್ತೇವೆ. ನಮ್ಮ ಒಟ್ಟು ಜಿಡಿಪಿ 6 ಟ್ರಿಲಿಯನ್ ಡಾಲರ್ ಗಿಂತ ಹೆಚ್ಚು. ಆದರೆ ನಮ್ಮ ನಿಜವಾದ ಶಕ್ತಿ ನಮ್ಮ ಮಹತ್ವಾಕಾಂಕ್ಷೆಗಳಲ್ಲಿ ಅಡಗಿದೆ. ಈ ಹಂಚಿಕೆಯ ಮಹತ್ವಾಕಾಂಕ್ಷೆಯನ್ನು ಮುಂದುವರಿಸಲು, ನಾನು ನಿಮ್ಮ ಮುಂದೆ ಕೆಲವು ಸಲಹೆಗಳನ್ನು ನೀಡಲು ಬಯಸುತ್ತೇನೆ. ಮೊದಲನೆಯದು-ಶುದ್ಧ ಶಕ್ತಿ. ಇದು ಎರಡೂ ದೇಶಗಳ ಆದ್ಯತೆಯಾಗಿದೆ. ಇಂದು ನಾವು ಯುರೇನಿಯಂ ದೀರ್ಘಾವಧಿಯ ಪೂರೈಕೆಯ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ ಮತ್ತು ಪರಮಾಣು ವಲಯದಲ್ಲಿ ಸಹಕಾರವನ್ನು ಹೆಚ್ಚಿಸಲು ಒಪ್ಪಿದ್ದೇವೆ. ಸ್ವಲ್ಪ ಸಮಯದ ಹಿಂದೆ, ನಾವು ಕಾಮಿಕೊ ಸಿಇಒಗಳ ಸಕಾರಾತ್ಮಕ ಆಲೋಚನೆಗಳನ್ನು ಕೇಳಿದ್ದೇವೆ. ಸಣ್ಣ ಮಾಡ್ಯುಲರ್ ರಿಯಾಕ್ಟರ್ ಗಳು, ಸುಧಾರಿತ ರಿಯಾಕ್ಟರ್ ಗಳು ಮತ್ತು ಪರಮಾಣು ಮೌಲ್ಯ ಸರಪಳಿಯಲ್ಲಿ ನಾವು ಒಟ್ಟಾಗಿ ಮುಂದುವರಿಯಬೇಕು. ನಿರ್ಣಾಯಕ ಖನಿಜಗಳಲ್ಲಿ, ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ನಾವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಕೆನಡಾದ ನಾವಿನ್ಯತೆಯನ್ನು ಭಾರತದ ಸ್ಕೇಲಿಂಗ್ ಸಾಮರ್ಥ್ಯದೊಂದಿಗೆ ಸಂಯೋಜಿಸುವ ಮೂಲಕ, ನಾವು ಬ್ಯಾಟರಿಗಳು ಮತ್ತು ಇಂಧನ ಸಂಗ್ರಹಣೆಯಲ್ಲಿ ಮುಂದುವರಿಯಬಹುದು. ಎರಡನೆಯ ಕ್ಷೇತ್ರವೆಂದರೆ ಮೂಲಸೌಕರ್ಯ ಮತ್ತು ಬಂಡವಾಳ ಸಹಭಾಗಿತ್ವ.

ಈ ವರ್ಷದ ಬಜೆಟ್ ನಲ್ಲಿ ನಾವು ಮೂಲಸೌಕರ್ಯಕ್ಕಾಗಿ ದಾಖಲೆಯ 130 ಶತಕೋಟಿ ಡಾಲರ್ ಹಂಚಿಕೆ ಮಾಡಿದ್ದೇವೆ. ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್ ಅಡಿಯಲ್ಲಿ, 1.3 ಟ್ರಿಲಿಯನ್ ಡಾಲರ್ ಹೂಡಿಕೆ ಮಾಡಲಾಗುತ್ತಿದೆ. ಕೆನಡಾದ ಪಿಂಚಣಿ ನಿಧಿಗಳು ಭಾರತದಲ್ಲಿ 100 ಶತಕೋಟಿ ಡಾಲರ್ ಹೂಡಿಕೆ ಮಾಡಿವೆ. ಇದು ಆಳವಾದ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಭಾರತದ ಮೂಲಸೌಕರ್ಯ ಬೆಳವಣಿಗೆಯ ಕಥೆಯ ಭಾಗವಾಗಲು ನಾನು ನಿಮ್ಮನ್ನು ಆಹ್ವಾನಿಸುತ್ತೇನೆ.

ಮೂರನೆಯ ಕ್ಷೇತ್ರವೆಂದರೆ ಕೃತಕ ಬುದ್ಧಿಮತ್ತೆ. ಒಟ್ಟಾಗಿ ನಾವು ಜಂಟಿ ಕೃತಕ ಬುದ್ಧಿಮತ್ತೆ ಕಂಪ್ಯೂಟ್ ಕಾರಿಡಾರ್ ಗಳನ್ನು ನಿರ್ಮಿಸಬಹುದು. ನಾವು ಸ್ಟಾರ್ಟ್ಅಪ್ ಗಳಿಗಾಗಿ ಎಐ ನಾವೀನ್ಯತೆ ಸ್ಯಾಂಡ್ ಬಾಕ್ಸ್ ಗಳನ್ನು ರಚಿಸಬಹುದು. ನಾಲ್ಕನೇ ಕ್ಷೇತ್ರವೆಂದರೆ ಉತ್ಪಾದನೆ ಮತ್ತು ತಂತ್ರಜ್ಞಾನ. ಕೆನಡಾದ ತಂತ್ರಜ್ಞಾನವನ್ನು ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್ ಮತ್ತು ಎಂಜಿನಿಯರಿಂಗ್ ನಲ್ಲಿ ಭಾರತದ ಪ್ರಮಾಣದೊಂದಿಗೆ ಸಂಯೋಜಿಸುವ ಮೂಲಕ, ನಾವು ಜಾಗತಿಕ ಮೌಲ್ಯ ಸರಪಳಿಗಳನ್ನು ಬಲಪಡಿಸಬಹುದು. ಐದನೇ ಕ್ಷೇತ್ರವೆಂದರೆ ಆಹಾರ ಸಂಸ್ಕರಣೆ. ಇಂದು, ಮೆಗಾ ಫುಡ್ ಪಾರ್ಕ್ ಗಳು, ಕೋಲ್ಡ್ ಚೈನ್ ಗಳು ಮತ್ತು ಆಹಾರ ಪರೀಕ್ಷಾ ಪ್ರಯೋಗಾಲಯಗಳನ್ನು ಭಾರತದಲ್ಲಿ ವೇಗವಾಗಿ ನಿರ್ಮಿಸಲಾಗುತ್ತಿದೆ. ಇದು ಕೂಡ ನಮ್ಮ ಗೆಲುವು-ಗೆಲುವಿನ ಸಹಕಾರಕ್ಕೆ ಮತ್ತೊಂದು ಬಲವಾದ ಉದಾಹರಣೆಯಾಗಬಹುದು.

ಸ್ನೇಹಿತರೇ,

ನಮ್ಮ ಪಾಲುದಾರಿಕೆ ರಾಷ್ಟ್ರ ರಾಜಧಾನಿಗಳಿಗೆ ಮಾತ್ರ ಸೀಮಿತವಾಗಬಾರದು; ನಾವು ಅದನ್ನು ರಾಜ್ಯಗಳು ಮತ್ತು ಪ್ರಾಂತ್ಯಗಳಿಗೆ ವಿಸ್ತರಿಸಬೇಕು. ಆಲ್ಬರ್ಟಾದ ನೈಸರ್ಗಿಕ ಸಂಪನ್ಮೂಲಗಳನ್ನು ಗುಜರಾತ್ ಮತ್ತು ರಾಜಸ್ಥಾನದ ನವೀಕರಿಸಬಹುದಾದ ಮಹತ್ವಾಕಾಂಕ್ಷೆಗಳೊಂದಿಗೆ ಜೋಡಿಸಬೇಕು. ಒಂಟಾರಿಯೊದ ಉತ್ಪಾದನಾ ಶಕ್ತಿಯು ತಮಿಳುನಾಡು ಮತ್ತು ಮಹಾರಾಷ್ಟ್ರದ ಕೈಗಾರಿಕಾ ಕ್ಲಸ್ಟರ್ ಗಳೊಂದಿಗೆ ಸಂಪರ್ಕ ಹೊಂದಿರಬೇಕು. ಮಾಂಟ್ರಿಯಲ್ ನ ಟೆಕ್ ಪರಿಸರ ವ್ಯವಸ್ಥೆಯನ್ನು ಬೆಂಗಳೂರು ಮತ್ತು ಹೈದರಾಬಾದ್ ನ ನಾವೀನ್ಯತೆ ಕೇಂದ್ರಗಳೊಂದಿಗೆ ಸಂಯೋಜಿಸಬೇಕು. ಆಗ ಮಾತ್ರ ನಾವು ಈ ಪಾಲುದಾರಿಕೆಯನ್ನು ನೀತಿಯಿಂದ ಸಮೃದ್ಧಿಗೆ ಪರಿವರ್ತಿಸಲು ಸಾಧ್ಯವಾಗುತ್ತದೆ.

ಸ್ನೇಹಿತರೇ,

ನಿಮ್ಮಲ್ಲಿ ಕೆಲವರು ಕ್ರಿಕೆಟ್ ವೀಕ್ಷಿಸಬಹುದು. ಭಾರತದಲ್ಲಿ ನಡೆಯುತ್ತಿರುವ ಟಿ-20 ಕ್ರಿಕೆಟ್ ವಿಶ್ವಕಪ್ ನಲ್ಲಿ ಕೆನಡಾ ಆಡುತ್ತಿರುವುದನ್ನು ನೋಡಿ ನಮ್ಮೆಲ್ಲರಿಗೂ ಸಂತೋಷವಾಗಿದೆ. ಟಿ20 ಕ್ರಿಕೆಟ್ ನಲ್ಲಿ ವೇಗದ ನಿರ್ಧಾರಗಳು, ನಿರ್ಭೀತ ಹೊಡೆತಗಳು ಮತ್ತು ಪಂದ್ಯ ಗೆಲ್ಲುವ ಜೊತೆಯಾಟದೊಂದಿಗೆ ಭಾರತ ಮತ್ತು ಕೆನಡಾ ಒಟ್ಟಾಗಿ ಭವಿಷ್ಯವನ್ನು ರೂಪಿಸುತ್ತವೆ. ಈ ಸಂಕಲ್ಪದೊಂದಿಗೆ, ಭಾರತದ ಅಭಿವೃದ್ಧಿ ಪಯಣಕ್ಕೆ ಸೇರಲು ನಾನು ನಿಮ್ಮೆಲ್ಲರನ್ನು ಆಹ್ವಾನಿಸುತ್ತೇನೆ.

ತುಂಬಾ ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
On Puri’s Grand Road, a devotee’s submission

Media Coverage

On Puri’s Grand Road, a devotee’s submission
NM on the go

Nm on the go

Always be the first to hear from the PM. Get the App Now!
...
Prime Minister speaks with the Amir of Qatar
July 16, 2026
PM conveys heartfelt condolences on the passing of the Father Amir of Qatar
PM recalls the Father Amir’s visionary leadership and his contribution to strengthening India-Qatar relations
The two leaders reaffirm their resolve to carry forward the Father Amir’s legacy

Prime Minister Shri Narendra Modi had a telephone conversation today with the Amir of the State of Qatar, H.H. Sheikh Tamim bin Hamad Al Thani.

Prime Minister conveyed his heartfelt condolences on the passing of H.H. Sheikh Hamad bin Khalifa Al Thani, the Father Amir of Qatar.

Recalling the Father Amir’s significant contributions as the chief architect of modern Qatar, Prime Minister paid tribute to his visionary leadership, and recalled his pivotal role in strengthening India-Qatar relations over the years as well as his deep affection for India and the Indian community in Qatar.

The Amir of Qatar thanked Prime Minister for his call and conveyed his appreciation for the words of support in this difficult hour.

The two leaders reaffirmed their resolve to carry forward the Father Amir’s legacy and further strengthen the India-Qatar Strategic Partnership and people-to-people ties.

They agreed to remain in close touch.