ಮಕ್ಕಳ ಅಸಾಧಾರಣ ಮನೋಭಾವ ಮತ್ತು ಧೈರ್ಯಕ್ಕಾಗಿ ಅವರನ್ನು ಶ್ಲಾಘಿಸಿದ ಪ್ರಧಾನಮಂತ್ರಿ
ಯೋಗ ಮತ್ತು ನಿಯಮಿತ ಅಭ್ಯಾಸಗಳ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಧಾನಮಂತ್ರಿ ಅವರು ಒತ್ತು ನೀಡಿದ್ದಾರೆ
ಭೂಮಿ ತಾಯಿಗೆ ಕೃತಜ್ಞತೆ ವ್ಯಕ್ತಪಡಿಸಲು 'ತಾಯಿಯ ಹೆಸರಲ್ಲಿ ಒಂದು ಗಿಡ(ಏಕ್ ಪೆಡ್ ಮಾ ಕೆ ನಾಮ್)' ಅಭಿಯಾನದಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ಅವರು ಮಕ್ಕಳಿಗೆ ಕರೆ ನೀಡಿದ್ದಾರೆ

ಪ್ರಧಾನಮಂತ್ರಿ: ಹೃದಯಾಂತರಾಳದಿಂದ ಮಾತನಾಡಲು ಯಾರು ಬಯಸುತ್ತೀರಾ?

ಯುವ ಫಲಾನುಭವಿ: ನಾನು ಹಾಕಿ ಚಾಂಪಿಯನ್. ನಾನು ಹಾಕಿಯಲ್ಲಿ 5 ಪದಕಗಳನ್ನು ಗೆದ್ದಿದ್ದೇನೆ. ನನ್ನ ಶಾಲೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿದಾಗ, ನನ್ನ ಹೃದಯದಲ್ಲಿ ರಂಧ್ರವಿದೆ ಎಂದು ವೈದ್ಯರು ಪತ್ತೆ ಹಚ್ಚಿದರು. ನಾನು ಚಿಕಿತ್ಸೆಗಾಗಿ ಇಲ್ಲಿಗೆ ಬಂದೆ, ಶಸ್ತ್ರಚಿಕಿತ್ಸೆಗೆ ಒಳಗಾದೆ, ನಾನೀಗ ಗುಣಮುಖವಾಗಿದ್ದು, ನಾನು ಮತ್ತೆ ಹಾಕಿ ಆಡಬಹುದು.

ಪ್ರಧಾನಮಂತ್ರಿ: ನಿಮ್ಮ ಶಸ್ತ್ರಚಿಕಿತ್ಸೆ ಯಾವಾಗ ನಡೆಯಿತು?

ಯುವ ಫಲಾನುಭವಿ: 6 ತಿಂಗಳ ಹಿಂದೆ.

ಪ್ರಧಾನಮಂತ್ರಿ: ನೀವು ಮೊದಲು ಆಡುತ್ತಿದ್ದಿರಾ?

ಯುವ ಫಲಾನುಭವಿ: ಹೌದು.

ಪ್ರಧಾನಮಂತ್ರಿ: ನೀವು ಈಗಲೂ ಆಡುತ್ತಿದ್ದೀರಾ?

ಯುವ ಫಲಾನುಭವಿ: ಹೌದು.

ಪ್ರಧಾನಮಂತ್ರಿ: ನೀವು ಭವಿಷ್ಯದಲ್ಲಿ ಏನಾಗಲು ಬಯಸುತ್ತೀರಿ?

ಯುವ ಫಲಾನುಭವಿ: ನಾನು ವೈದ್ಯನಾಗಲು ಬಯಸುತ್ತೇನೆ.

ಪ್ರಧಾನಮಂತ್ರಿ: ವೈದ್ಯನಾದ ನಂತರ ನೀವು ಏನು ಮಾಡುತ್ತೀರಿ?

ಯುವ ಫಲಾನುಭವಿ: ನಾನು ಎಲ್ಲಾ ಮಕ್ಕಳಿಗೆ ಚಿಕಿತ್ಸೆ ನೀಡುತ್ತೇನೆ.

ಪ್ರಧಾನಮಂತ್ರಿ: ಮಕ್ಕಳಿಗೆ ಮಾತ್ರವೇ?

ಯುವ ಫಲಾನುಭವಿ: ಎಲ್ಲರೂ.

ಪ್ರಧಾನಮಂತ್ರಿ: ನೀವು ವೈದ್ಯರಾದಾಗ, ನನಗೆ ಆಗ ವಯಸ್ಸಾಗಿರುತ್ತದೆ - ನೀವು ನನಗೂ ಚಿಕಿತ್ಸೆ ನೀಡುತ್ತೀರಾ?

ಯುವ ಫಲಾನುಭವಿ: ಹೌದು, ನಾನು ಮಾಡುತ್ತೇನೆ.

ಪ್ರಧಾನಮಂತ್ರಿ: ನಿಜವಾಗಿಯೂ?

ಯುವ ಫಲಾನುಭವಿ: ಹೌದು, ಸತ್ಯವಾಗಿ ಮಾಡುತ್ತೇನೆ

 

ಪ್ರಧಾನಮಂತ್ರಿ: ಒಳ್ಳೆಯದು.

ಯುವ ಫಲಾನುಭವಿ: ನಾನು ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಇಂದು ನಾನು ನಿಮ್ಮನ್ನು ಮೊದಲ ಬಾರಿಗೆ ಭೇಟಿಯಾದೆ, ಇದರಿಂದ ನನಗೆ ತುಂಬಾ ಸಂತೋಷವಾಗಿದೆ.

ಯುವ ಫಲಾನುಭವಿ: ನನ್ನ ಒಂದು ವರ್ಷದ ಹಿಂದೆ ಆಪರೇಷನ್ ಮಾಡಲಾಯಿತು. ನಾನು ದೊಡ್ಡವನಾಗುತ್ತಾ ಬಂದಾಗ, ನಾನು ವೈದ್ಯನಾಗಬೇಕು, ಎಲ್ಲರಿಗೂ ಚಿಕಿತ್ಸೆ ನೀಡಬೇಕು ಎಂದು ಬಯಸಿದ್ದೇನೆ

ಪ್ರಧಾನಮಂತ್ರಿ: ಆಪರೇಷನ್ ಸಮಯದಲ್ಲಿ ನೀವು ಅಳುತ್ತಿದ್ದೀರಾ?

ಯುವ ಫಲಾನುಭವಿ: ಇಲ್ಲ, ನಾನು ಅಳಲಿಲ್ಲ.

ಪ್ರಧಾನಮಂತ್ರಿ: ಆದರೆ ವೈದ್ಯರು ನೀವು ತುಂಬಾ ಅತ್ತಿದ್ದೀರಿ ಎಂದು ಹೇಳಿದರು.

ಯುವ ಫಲಾನುಭವಿ: ವೈದ್ಯರು ಯಾವಾಗ ಹಾಗೆ ಹೇಳಿದರು? ಅವರು ಹಾಗೆ ಹೇಳಲಿಲ್ಲ.

ಪ್ರಧಾನಮಂತ್ರಿ: ಇಲ್ಲ?

ಯುವ ಫಲಾನುಭವಿ: ನಾನು ನಿಮಗಾಗಿ ಒಂದು ಮಾತು ಅಥವಾ ನಾಣ್ಣುಡಿ ಹೇಳಲು ಬಯಸುತ್ತೇನೆ.

ಪ್ರಧಾನಮಂತ್ರಿ: ಸರಿ, ಹೇಳಿ.

ಯುವ ಫಲಾನುಭವಿ:

("ನಿಮ್ಮ ಗಮ್ಯಸ್ಥಾನ ಅಥವಾ ಗುರಿಯನ್ನು ದಾಟಿ ಹೊಸದನ್ನು ಹುಡುಕಿ,

ನೀವು ನದಿಯನ್ನು ಹುಡುಕುವುದಾದರೆ, ಸಾಗರವನ್ನೇ ಹುಡುಕಿ.

ಕಲ್ಲಿನ ಹೊಡೆತದಿಂದ ಪ್ರತಿಯೊಂದು ಗಾಜು ಚೂರು ಚೂರಾಗುತ್ತದೆ,

ಆದರೆ ನೀವು ಕಲ್ಲನ್ನೇ ಒಡೆಯುವ ಗಾಜನ್ನು ಹುಡುಕಿ.

ನಿಮ್ಮ ಪ್ರಾರ್ಥನೆಗಳಿಂದ ಏನಾಯಿತು, ಶತಮಾನಗಳು ವ್ಯರ್ಥವಾಗಿ ಕಳೆದಿವೆ,

ನಿಮ್ಮ ಜೀವನವನ್ನೇ ಪರಿವರ್ತಿಸುವ ರೀತಿಯಲ್ಲಿ ಪ್ರಾರ್ಥಿಸಿ.")

ಪ್ರಧಾನಮಂತ್ರಿ: ಅದ್ಭುತ! ತುಂಬಾ ಚೆನ್ನಾಗಿದೆ!

ಯುವ ಫಲಾನುಭವಿ: 2014ರಲ್ಲಿ ನನ್ನ ಶಸ್ತ್ರಚಿಕಿತ್ಸೆ ನಡೆಯಿತು, ಆಗ ನಾನು 14 ತಿಂಗಳ ಮಗುವಾಗಿದ್ದೆ. ಈಗ ನಾನು ಸಂಪೂರ್ಣ ಆರೋಗ್ಯವಾಗಿದ್ದು, ಕ್ರಿಕೆಟ್ ಆಡಲು ಇಷ್ಟಪಡುತ್ತೇನೆ.

ಪ್ರಧಾನಮಂತ್ರಿ: ನೀವು ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಹೋಗುತ್ತೀರಾ? ನಿಮ್ಮ ಶಸ್ತ್ರಚಿಕಿತ್ಸೆಯಾಗಿ 11 ವರ್ಷಗಳಾಗಿವೆ, ಸರಿಯೇ?

 

ಯುವ ಫಲಾನುಭವಿ: ಹೌದು, ಸರ್.

ಪ್ರಧಾನಮಂತ್ರಿ: ಈಗ ಎಲ್ಲವೂ ಸರಿಯಾಗಿದೆಯೇ?

ಯುವ ಫಲಾನುಭವಿ: ಯಾವುದೇ ಸಮಸ್ಯೆಗಳಿಲ್ಲ, ಸರ್.

ಪ್ರಧಾನಮಂತ್ರಿ: ನೀವು ಆಡುತ್ತೀರಾ?

ಯುವ ಫಲಾನುಭವಿ: ಹೌದು, ಸರ್.

ಪ್ರಧಾನಮಂತ್ರಿ: ಕ್ರಿಕೆಟ್?

ಯುವ ಫಲಾನುಭವಿ: ಹೌದು, ಸರ್.

ಯುವ ಫಲಾನುಭವಿ: ನಾನು ನಿಮ್ಮನ್ನು ಭೇಟಿಯಾಗಲು ಬಯಸುತ್ತೇನೆ, ನಾನು 2 ನಿಮಿಷಗಳ ಕಾಲ ನಿಮ್ಮ ಬಳಿ ಬರಬಹುದೇ?

ಪ್ರಧಾನಮಂತ್ರಿ: ಖಂಡಿತ, ಹತ್ತಿರ ಬನ್ನಿ.

ಪ್ರಧಾನಮಂತ್ರಿ: ನೀವು ಆಸ್ಪತ್ರೆಗೆ ದಾಖಲಾದಾಗ ಹೇಗನಿಸಿತು? ನೀವು ಔಷಧಿಗಳನ್ನು ತೆಗೆದುಕೊಳ್ಳಬೇಕಾಗಿತ್ತು, ಇಂಜೆಕ್ಷನ್ ತೆಗೆದುಕೊಳ್ಳಬೇಕಾಗಿತ್ತು – ಹೇಗಿತ್ತು ಆ ದಿನಗಳು?

ಯುವ ಫಲಾನುಭವಿ: ಸರ್, ನನಗೆ ಇಂಜೆಕ್ಷನ್‌ಗಳ ಬಗ್ಗೆ ಭಯವಿರಲಿಲ್ಲ, ಆದ್ದರಿಂದ ನನ್ನ ಶಸ್ತ್ರಚಿಕಿತ್ಸೆ ತುಂಬಾ ಸರಾಗವಾಗಿ ನಡೆಯಿತು, ನನಗೆ ಭಯವಾಗಲಿಲ್ಲ.

ಪ್ರಧಾನಮಂತ್ರಿ: ಅದು ಅದ್ಭುತ. ನಿಮ್ಮ ಶಿಕ್ಷಕರು ನಿಮ್ಮ ಬಗ್ಗೆ ಏನು ಹೇಳುತ್ತಾರೆ?

ಯುವ ಫಲಾನುಭವಿ: ನನ್ನ ಶಿಕ್ಷಕರು ನಾನು ಅಧ್ಯಯನದಲ್ಲಿ ಉತ್ತಮವಾಗಿದ್ದೇನೆ ಎಂದು ಹೇಳುತ್ತಾರೆ, ಆದರೆ ನಾನು ಸ್ವಲ್ಪ ತೊದಲುತ್ತೇನೆ.

ಪ್ರಧಾನಮಂತ್ರಿ: ನನಗೆ ಅರ್ಥವಾಯಿತು. ಆದರೆ ನೀವು ಸತ್ಯ ಹೇಳುತ್ತಿರುವುದು ಒಳ್ಳೆಯದು - ಪ್ರಾಮಾಣಿಕವಾಗಿರುವುದು ಯಾವಾಗಲೂ ಸಹಾಯ ಮಾಡುತ್ತದೆ.

ಯುವ ಫಲಾನುಭವಿ: ನಾನು 7ನೇ ತರಗತಿಯಲ್ಲಿ ಓದುತ್ತಿದ್ದೇನೆ. ನನಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು...

ಪ್ರಧಾನಮಂತ್ರಿ: ನೀವು 7ನೇ ತರಗತಿಯಲ್ಲಿದ್ದೀರಿ, ಸರಿ?

ಯುವ ಫಲಾನುಭವಿ: ಹೌದು, ಸರ್.

ಪ್ರಧಾನಮಂತ್ರಿ: ನೀವು ಸರಿಯಾಗಿ ತಿನ್ನುತ್ತೀರಾ?

ಯುವ ಫಲಾನುಭವಿ: ಹೌದು ಸರ್, ನಾನು ಸೇವಿಸುತ್ತೇನೆ.

ಪ್ರಧಾನಮಂತ್ರಿ: ಅಥವಾ ನೀವು ನಿಮ್ಮ ಶಿಕ್ಷಕರ ತಲೆ ತಿನ್ನುತ್ತೀರಾ? (ನಗುತ್ತಾ) ಸರಿ, ಹೇಳಿ.

 

ಯುವ ಫಲಾನುಭವಿ: ನನಗೆ 2023ರಲ್ಲಿ ಶಸ್ತ್ರಚಿಕಿತ್ಸೆ ನಡೆಯಿತು, ನಾನು ದೊಡ್ಡವನಾಗುತ್ತಾ ಬಂದಾಗ ಶಿಕ್ಷಕನಾಗಲು ಬಯಸಿದೆ. ಬಡ ಮಕ್ಕಳಿಗೆ ಜೀವನದಲ್ಲಿ ಪ್ರಗತಿ ಸಾಧಿಸಲು ನಾನು ಉಚಿತವಾಗಿ ಕಲಿಸಲು ಬಯಸುತ್ತೇನೆ, ಏಕೆಂದರೆ ಶಿಕ್ಷಣವು ನಮ್ಮ ರಾಷ್ಟ್ರದ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಪ್ರಧಾನಮಂತ್ರಿ: ಈ ತಿಂಗಳು ಯಾರ ಶತಮಾನೋತ್ಸವ ಆಚರಿಸಲಾಗುತ್ತಿದೆ ಎಂದು ನಿಮಗೆಲ್ಲರಿಗೂ ತಿಳಿದಿದೆಯೇ? ಸತ್ಯಸಾಯಿ ಬಾಬಾ ಅವರ 100ನೇ ವರ್ಷ. ಹಲವು ವರ್ಷಗಳ ಹಿಂದೆ, ಪುಟ್ಟಪರ್ತಿಯ ಸುತ್ತಮುತ್ತಲ ಪ್ರದೇಶದಲ್ಲಿ ನೀರಿನ ತೀವ್ರ ಕೊರತೆ ಇತ್ತು - ಕೃಷಿಗೆ ಮಾತ್ರವಲ್ಲ, ಕುಡಿಯಲು ಸಹ. ಸುಮಾರು 400 ಹಳ್ಳಿಗಳಿಗೆ ಕುಡಿಯುವ ನೀರು ತರಲು ಅವರು ತುಂಬಾ ಶ್ರಮಿಸಿದರು. ಸರ್ಕಾರಗಳು ಸಹ ಕೆಲವೊಮ್ಮೆ ಅಂತಹ ದೊಡ್ಡ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಮೊದಲು ಹಿಂಜರಿಯುತ್ತವೆ. ನಮಗಾಗಿ ಅವರ ಸಂದೇಶವೆಂದರೆ, ನಾವು ನೀರನ್ನು ಉಳಿಸಬೇಕು ಮತ್ತು ಮರಗಳನ್ನು ನೆಡಬೇಕು. ನಿಮಗೆ ತಿಳಿದಿದೆ, ನಾನು "ಏಕ್ ಪೆಡ್ ಮಾ ಕೆ ನಾಮ್" ಎಂಬ ಅಭಿಯಾನ ನಡೆಸುತ್ತಿದ್ದೇನೆ. ಪ್ರತಿಯೊಬ್ಬರೂ ತಮ್ಮ ತಾಯಿಯನ್ನು ಪ್ರೀತಿಸುತ್ತಾರೆ, ಸರಿಯೇ? ಆದ್ದರಿಂದ ನಾವು ಅವರ ಹೆಸರಿನಲ್ಲಿ ಒಂದು ಸಸಿ ನೆಡಬೇಕು - ಆ ರೀತಿ ಮಾಡುವಾಗ ನಾವು ನಮ್ಮ ತಾಯಿ ಮತ್ತು ಭೂಮಿ ತಾಯಿಗೆ ಪ್ರತಿಫಲ ನೀಡುತ್ತೇವೆ.

ಯುವ ಫಲಾನುಭವಿ: ನನ್ನ ಹೆಸರು ಅಭಿಕ್, ನಾನು ಪಶ್ಚಿಮ ಬಂಗಾಳದಿಂದ ಬಂದಿದ್ದೇನೆ. ನಾನು ದೊಡ್ಡವನಾಗುತ್ತಾ ಬೆಳೆಯುವಾಗ, ನಾನು ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡಬೇಕೆಂದು ಬಯಸಿದ್ದೇನೆ.

ಪ್ರಧಾನಮಂತ್ರಿ: ನೀವು ದೇಶ ಸೇವೆ ಮಾಡುತ್ತೀರಾ?

ಯುವ ಫಲಾನುಭವಿ: ಹೌದು.

ಪ್ರಧಾನಮಂತ್ರಿ: ಖಂಡಿತ?

ಯುವ ಫಲಾನುಭವಿ: ಹೌದು, ಖಂಡಿತ.

ಪ್ರಧಾನಮಂತ್ರಿ: ನೀವು ಯಾಕೆ ಬಯಸುತ್ತೀರಿ?

ಯುವ ಫಲಾನುಭವಿ: ಏಕೆಂದರೆ ಸೈನಿಕರು ನಮ್ಮನ್ನು ರಕ್ಷಿಸುತ್ತಾರೆ, ನಾನು ರಾಷ್ಟ್ರವನ್ನು ಸಹ ರಕ್ಷಿಸಲು ಬಯಸುತ್ತೇನೆ!

ಪ್ರಧಾನಮಂತ್ರಿ: ಅದ್ಭುತ, ಅದ್ಭುತ.

ಯುವ ಫಲಾನುಭವಿ: ನಾನು ನಿಮ್ಮೊಂದಿಗೆ ಕೈಕುಲುಕಲು ಬಯಸುತ್ತೇನೆ.

ಯುವ ಫಲಾನುಭವಿ: ನಿಮ್ಮನ್ನು ಭೇಟಿಯಾಗುವುದು ನನ್ನ ಕನಸಾಗಿತ್ತು.

ಪ್ರಧಾನಮಂತ್ರಿ: ನಿಜವಾಗಿಯೂ? ನೀವು ಯಾವಾಗ ಅದರ ಕನಸು ಕಂಡಿದ್ದೀರಿ - ಇಂದೋ ಅಥವಾ ಮೊದಲೋ?

ಯುವ ಫಲಾನುಭವಿ: ಬಹಳ ಹಿಂದೆಯೇ.

ಪ್ರಧಾನಮಂತ್ರಿ: ನಿಮಗೆ ನನ್ನ ಬಗ್ಗೆ ತಿಳಿದಿತ್ತಾ?

 

ಯುವ ಫಲಾನುಭವಿ: ಹೌದು, ನಾನು ನಿಮ್ಮನ್ನು ಸುದ್ದಿಯಲ್ಲಿ ನೋಡುತ್ತಿದ್ದೆ.

ಪ್ರಧಾನಮಂತ್ರಿ: ಓಹ್, ನೀವು ಸುದ್ದಿ ನೋಡುತ್ತೀರಾ? ತುಂಬಾ ಒಳ್ಳೆಯದು. ನಿಮ್ಮೆಲ್ಲರೊಂದಿಗೆ ಮಾತನಾಡುವುದನ್ನು ನಾನು ನಿಜವಾಗಿಯೂ ಆನಂದಿಸಿದೆ. ನೆನಪಿಡಿ, ನೀವು ಯಾವುದೇ ಒಳ್ಳೆಯ ಕೆಲಸ ಮಾಡಲು ಬಯಸುತ್ತೀರೋ, ನಿಮ್ಮ ದೇಹವು ಅದನ್ನು ಸಾಧಿಸಲು ಸಾಧನವಾಗಿದೆ. ಆದ್ದರಿಂದ ನಿಮ್ಮ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಿ - ಸ್ವಲ್ಪ ಯೋಗ ಮಾಡಿ, ದಿನಚರಿ ಕಾಪಾಡಿಕೊಳ್ಳಿ, ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಿ. ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಿ, ಸರಿಯೇ?

 

ಯುವ ಫಲಾನುಭವಿ: ಹೌದು, ಸರ್!

ಪ್ರಧಾನಮಂತ್ರಿ: ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
500 ethanol pumps by year-end: Union minister Hardeep Singh Puri

Media Coverage

500 ethanol pumps by year-end: Union minister Hardeep Singh Puri
NM on the go

Nm on the go

Always be the first to hear from the PM. Get the App Now!
...
UK Foreign Secretary meets Prime Minister
June 04, 2026

UK Foreign Secretary Yvette Cooper today met Prime Minister Shri Narendra Modi.

The Prime Minister expressed his pleasure upon the meeting and appreciated the deepening of the India-UK partnership in recent times which has unlocked unprecedented growth opportunities for both countries.

The Prime Minister affirmed that the India-UK Vision 2035 will continue to guide the partnership and strengthen joint efforts for the global good.

The Prime Minister posted on X:

"Pleased to meet UK Foreign Secretary Yvette Cooper. Appreciated the deepening of the India-UK partnership in recent times that has unlocked unprecedented growth opportunities for both our countries.

India-UK Vision 2035 will continue to guide our partnership and strengthen our joint efforts for global good.@YvetteCooperMP"