ನಮಸ್ತೆ!

ಕಿಯಾ ಓರಾ ನ್ಯೂಜಿಲೆಂಡ್!

ಭಾರತದಲ್ಲಿ ನಾವೆಲ್ಲರೂ ಈ ನುಡಿಗಟ್ಟನ್ನು ಆಗಾಗ್ಗೆ ಕೇಳುತ್ತೇವೆ. ಅದೇನೆಂದರೆ, 20 ವರ್ಷಗಳ ನಂತರ.... ಆದರೆ ಇಂದು 40 ವರ್ಷಗಳ ನಂತರ, ಭಾರತೀಯ ಪ್ರಧಾನಿಯೊಬ್ಬರು ನ್ಯೂಜಿಲೆಂಡ್ ನೆಲಕ್ಕೆ ಕಾಲಿಟ್ಟಿದ್ದಾರೆ. ಇಲ್ಲಿಗೆ ಬಂದಿರುವುದು ನನ್ನ ಸೌಭಾಗ್ಯ. ನ್ಯೂಜಿಲೆಂಡ್‌ನ ಎಲ್ಲಾ ಜನರಿಗೆ ಮತ್ತು ನಿಮ್ಮಲ್ಲಿ ಪ್ರತಿಯೊಬ್ಬರಿಗೂ 140 ಕೋಟಿ ಭಾರತೀಯರ ಶುಭಾಶಯಗಳನ್ನು ನಾನು ನನ್ನೊಂದಿಗೆ ತಂದಿದ್ದೇನೆ.

ಸ್ನೇಹಿತರೆ,

ಇದು ಪ್ರಧಾನಿಯಾಗಿ ನ್ಯೂಜಿಲೆಂಡ್‌ಗೆ ನನ್ನ ಮೊದಲ ಭೇಟಿಯಾಗಿರಬಹುದು. ಆದರೆ 25ರಿಂದ 30 ವರ್ಷಗಳ ಹಿಂದೆ, ನಾನು ಯಾವುದೇ ಸರ್ಕಾರದ ಭಾಗವಾಗಿರದಿದ್ದಾಗ ಮತ್ತು ಸಾರ್ವಜನಿಕ ಜೀವನದಲ್ಲಿ ಇಲ್ಲದಿದ್ದಾಗ, ನನಗೆ ನ್ಯೂಜಿಲೆಂಡ್‌ಗೆ ಭೇಟಿ ನೀಡುವ ಅವಕಾಶ ಸಿಕ್ಕಿತ್ತು. ಆ ಭೇಟಿಯ ಸಮಯದಲ್ಲಿ, ಯಾರೋ ನನಗೆ 3 ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದರು, ಅದನ್ನು ನಾನು ಭಾರತಕ್ಕೆ ನನ್ನೊಂದಿಗೆ ತೆಗೆದುಕೊಂಡು ಹೋದೆ: ಈ ಮಫ್ಲರ್, ಕ್ಯಾಪ್ ಮತ್ತು ಒಂದು ಜೋಡಿ ಕೈಗವಸುಗಳು, ಏಕೆಂದರೆ ಅದು ಚಳಿಗಾಲವಾಗಿತ್ತು.

ಆ ಉಡುಗೊರೆಗಳಲ್ಲಿ ಒಂದು ಇಂದಿಗೂ ನನ್ನ ಬಳಿ ಇದೆ. ನೀವು ಇಲ್ಲಿ ನೋಡುವ ಮಫ್ಲರ್ ಅನ್ನು 25 ರಿಂದ 30 ವರ್ಷಗಳ ಹಿಂದೆ ನ್ಯೂಜಿಲೆಂಡ್‌ನಲ್ಲಿರುವ ನನ್ನ ಸ್ನೇಹಿತ ನನಗೆ ಉಡುಗೊರೆಯಾಗಿ ನೀಡಿದ್ದ. ನಾನು ಇದನ್ನು ಹಲವು ವರ್ಷಗಳಿಂದ ಹಲವು ಬಾರಿ ಬಳಸಿದ್ದೇನೆ, ನಿಮ್ಮ ಪ್ರೀತಿಯನ್ನು ನಾನು ಗೌರವಿಸುವಂತೆಯೇ ಇಂದಿಗೂ ಅದನ್ನು ಬಹಳ ಎಚ್ಚರಿಕೆಯಿಂದ ಸಂರಕ್ಷಿಸಿದ್ದೇನೆ.

ನ್ಯೂಜಿಲೆಂಡ್‌ ಭೇಟಿ ಅಂತಿಮಗೊಳಿಸಿದಾಗ, ಹವಾಮಾನವು ತುಂಬಾ ಚಳಿ ಇರುತ್ತದೆ ಎಂದು ನನಗೆ ಹೇಳಿದ್ದರಿಂದ, ನಾನು ಅದನ್ನು ನನ್ನೊಂದಿಗೆ ತರುವ ನಿರ್ಧಾರ ತೆಗೆದುಕೊಂಡೆ.

 

ಸ್ನೇಹಿತರೆ,

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸಂಬಂಧವು ಹಂಚಿಕೊಂಡ ನೆನಪುಗಳು, ಸ್ನೇಹ, ಮೌಲ್ಯಗಳು ಮತ್ತು ಹಂಚಿಕೊಂಡ ಬದ್ಧತೆಯ ಮೇಲೆ ನಿರ್ಮಿಸಲ್ಪಟ್ಟಿದೆ. ಈ ಸಂಬಂಧದ ಸಾರವನ್ನು ಸೆರೆ ಹಿಡಿಯುವ ಸುಂದರವಾದ ನ್ಯೂಜಿಲೆಂಡ್ ಸಂಪ್ರದಾಯವಿದೆ. ಶತಮಾನಗಳಿಂದ, ಒಂದೇ ಪದವು ಜನರನ್ನು ಇಲ್ಲಿಗೆ ತಂದಿದೆ - ವಾಕಾ. ವಾಕಾ ಕೇವಲ ದೋಣಿಯಲ್ಲ; ಅದು ನಮ್ಮ ಹಂಚಿಕೊಂಡ ಪ್ರಯಾಣದ ಸಂಕೇತವಾಗಿದೆ. ಇಂದು, ಭಾರತ-ನ್ಯೂಜಿಲೆಂಡ್ ಸಂಬಂಧಗಳ ಆ ವಾಕಾ ಹೊಸ ಪ್ರಯಾಣ ಕೈಗೊಳ್ಳಲು ಸಿದ್ಧವಾಗಿದೆ.

ನಮ್ಮ ಮುಂದೆ ಅವಕಾಶಗಳಿಂದ ತುಂಬಿದ ತೆರೆದ ಸಾಗರವಿದೆ. ಗಾಳಿ ನಮ್ಮೊಂದಿಗಿದೆ. ಸಮುದ್ರದ ವಿಶಾಲ ಅಲೆಗಳು ನಮ್ಮೊಂದಿಗಿವೆ. ನಮ್ಮ ಸಾಮೂಹಿಕ ಸಂಕಲ್ಪದ ನೀಲಿ ಆಕಾಶ ನಮ್ಮೊಂದಿಗಿದೆ. ಸಾಧಿಸಲು ಬಹಳಷ್ಟಿದೆ, ಮತ್ತು ನಾವು ಯಶಸ್ವಿಯಾಗುತ್ತೇವೆ ಎಂದು ನನಗೆ ತಿಳಿದಿದೆ.

ಸ್ನೇಹಿತರೆ,

ಈ ಪ್ರಯಾಣವು ಯಶಸ್ವಿಯಾಗುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಏಕೆ ಎಂದು ನಿಮಗೆ ತಿಳಿದಿದೆಯೇ? ಮೋದಿಯಿಂದಾಗಿ ಅಲ್ಲ, ಆದರೆ ನೀವೆಲ್ಲರೂ ಅದರ ನಿಜವಾದ ನಾವಿಕರು. ಆಕ್ಲೆಂಡ್‌ನಿಂದ ವೆಲ್ಲಿಂಗ್ಟನ್‌ವರೆಗೆ ಮತ್ತು ಕ್ರೈಸ್ಟ್‌ಚರ್ಚ್‌ನಿಂದ ಕ್ವೀನ್ಸ್‌ ಟೌನ್‌ವರೆಗೆ, ನ್ಯೂಜಿಲೆಂಡ್‌ನ ಪ್ರತಿಯೊಂದು ಮೂಲೆಯಲ್ಲಿಯೂ ಹರಡಿರುವ ಭಾರತೀಯ ಸಮುದಾಯವು ಈ ಹಂಚಿಕೊಂಡ ಪ್ರಯಾಣದಲ್ಲಿ ನಾವಿಕರಾಗಿದ್ದಾರೆ.

ಸ್ನೇಹಿತರೆ,

ನಾನು ಮುಂದುವರಿಯುವ ಮೊದಲು, ನನ್ನ ಸ್ನೇಹಿತ ಪ್ರಧಾನ ಮಂತ್ರಿ ಕ್ರಿಸ್ಟೋಫರ್ ಲಕ್ಸನ್, ನ್ಯೂಜಿಲೆಂಡ್ ಸರ್ಕಾರದ ನನ್ನ ಸಹೋದ್ಯೋಗಿಗಳು ಮತ್ತು ಇಲ್ಲಿ ಉಪಸ್ಥಿತರಿರುವ ಲೇಬರ್ ಪಕ್ಷದ ಸದಸ್ಯರಿಗೆ ನಾನು ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ.

ಅವರ ಉಪಸ್ಥಿತಿಯು ಭಾರತ-ನ್ಯೂಜಿಲೆಂಡ್ ಸಂಬಂಧಗಳು ಅನುಭವಿಸುವ ಬಲವಾದ ದ್ವಿಪಕ್ಷೀಯ ಬೆಂಬಲವನ್ನು ಪ್ರತಿಬಿಂಬಿಸುತ್ತದೆ. ಇದು ಕಿವಿ ಭಾರತೀಯ ಸಮುದಾಯದ ಗಮನಾರ್ಹ ಸಾಧನೆಗಳು ಮತ್ತು ಮಹತ್ವದ ಕೊಡುಗೆಗಳನ್ನು ಸಹ ಹೇಳುತ್ತದೆ. ಕಿವಿ ಭಾರತೀಯ ಸಮುದಾಯದ ಈ ಆಚರಣೆಯಲ್ಲಿ ನಿಮ್ಮ ಉಪಸ್ಥಿತಿಯು ಈ ಸಂದರ್ಭವನ್ನು ಇನ್ನಷ್ಟು ರೋಮಾಂಚಕಗೊಳಿಸಿದೆ.

ನೀವು ನಮ್ಮೆಲ್ಲರನ್ನು ಸ್ವಾಗತಿಸುವಾಗ ತೋರಿದ ಪ್ರೀತಿ, ವಾತ್ಸಲ್ಯ ಮತ್ತು ಉತ್ಸಾಹಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ.

 

ಗೌರವಾನ್ವಿತರೆ,

ನೀವು ಕಿವಿ ಭಾರತೀಯ ಸಮುದಾಯವು ಸಹ ಅತ್ಯಂತ ನೆಚ್ಚಿನವರು. ಭಾರತದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನೀವು ಮತ್ತು ಕ್ರಿಸ್ ಹಿಪ್ಕಿನ್ಸ್ ಡ್ಯಾಮ್ ಡ್ಯಾಮ್ ಮಸ್ತ್ ಕಲಂದರ್‌ಗೆ ಪ್ರದರ್ಶಿಸಿದ ನೃತ್ಯವು ವೈರಲ್ ಆಗಿದೆ. ಆ ನೃತ್ಯ ಪ್ರದರ್ಶನಗಳು ಕಿವಿ ಭಾರತೀಯರ ಹೃದಯಗಳಲ್ಲಿ ಶಾಶ್ವತವಾದ ಪ್ರಭಾವ ಬೀರಿವೆ.

ಸ್ನೇಹಿತರೆ,

ನ್ಯೂಜಿಲೆಂಡ್ ನಿಜಕ್ಕೂ ಅದ್ಭುತ ದೇಶ. ಇದು ಶಾಂತಿ, ಸಮೃದ್ಧಿ, ಪ್ರಕೃತಿ ಮತ್ತು ಸಂಸ್ಕೃತಿಯ ಭೂಮಿ. ಆದರೆ ಅದರ ದೊಡ್ಡ ಶಕ್ತಿ ಇಲ್ಲಿನ ಜನರಲ್ಲಿದೆ. ಒಂದು ರಾಷ್ಟ್ರವು ಉತ್ಸಾಹ ಮತ್ತು ಉದ್ದೇಶದೊಂದಿಗೆ ಮುನ್ನಡೆದಾಗ ಅದು ಜಗತ್ತಿಗೆ ಸ್ಫೂರ್ತಿ ನೀಡುತ್ತದೆ ಎಂದು ನ್ಯೂಜಿಲೆಂಡ್ ಜನರು ತೋರಿಸಿದ್ದಾರೆ.

ಇಲ್ಲಿರುವ ಕಿವಿ ಭಾರತೀಯ ಸಮುದಾಯವನ್ನು ನ್ಯೂಜಿಲೆಂಡ್ ಜನರು ಸಹ ಬಹಳ ಪ್ರೀತಿ ಮತ್ತು ವಾತ್ಸಲ್ಯದಿಂದ ಸ್ವೀಕರಿಸಿದ್ದಾರೆ, ಅವರು ನಿಮ್ಮನ್ನು ತಮ್ಮ ತಂಡದ ಅವಿಭಾಜ್ಯ ಅಂಗವಾಗಿಸಿದ್ದಾರೆ. ಅವರು ನಿಮ್ಮ ಪ್ರತಿಭೆ ಮತ್ತು ನಿಮ್ಮ ದೃಷ್ಟಿಕೋನದಲ್ಲಿ ನಂಬಿಕೆ ಇಟ್ಟಿದ್ದಾರೆ. ಇಂದು, ಅದು ನ್ಯೂಜಿಲೆಂಡ್‌ನ ಆರ್ಥಿಕತೆಯಾಗಿರಲಿ ಅಥವಾ ಅದರ ಸಮಾಜವಾಗಿರಲಿ, ಕಿವಿ ಭಾರತೀಯರು ಪ್ರತಿಯೊಂದು ಕ್ಷೇತ್ರಕ್ಕೂ ಹೊಸ ಬಣ್ಣಗಳನ್ನು ಸೇರಿಸುತ್ತಿದ್ದಾರೆ.

ನ್ಯೂಜಿಲೆಂಡ್ ನಿಖಿಲ್ ರವಿಶಂಕರ್ ಏರ್ ನ್ಯೂಜಿಲೆಂಡ್‌ನ ಸಿಇಒ ಆಗಿರುವ ಸ್ಥಳವಾಗಿದೆ, ಅಲ್ಲಿ ಆನಂದ್ ಸತ್ಯಾನಂದ್ ಗವರ್ನರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ. ರಾಚಿನ್ ರವೀಂದ್ರ, ಇಶ್ ಸೋಧಿ ಮತ್ತು ಅಜಾಜ್ ಪಟೇಲ್ ಅವರಂತಹ ಪ್ರತಿಭೆಗಳು ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಅವಕಾಶಗಳನ್ನು ಕಂಡುಕೊಂಡ  ಸ್ಥಳವಾಗಿದೆ.

ನ್ಯೂಜಿಲೆಂಡ್ ರಸ್ತೆಗಳು ಸಹ ಭಾರತೀಯರಿಗೆ ಗೌರವ ಸಲ್ಲಿಸುವ ಸ್ಥಳವಾಗಿದೆ. ಖಂಡಲ್ಲಾ, ಬಾಂಬೆ ಹಿಲ್ಸ್ ಮತ್ತು ಕೋರಮಂಡಲ್ ಇಲ್ಲಿವೆ.

ಕೋಲ್ಕತಾ ಬೀದಿ, ದೆಹಲಿ ಕ್ರೆಸೆಂಟ್ ಮತ್ತು ಅಮೃತಸರ ಬೀದಿ ಮುಂತಾದ ಹಲವು ಬೀದಿಗಳಿವೆ. ಇಲ್ಲಿ ವಾಸಿಸುವ ನೀವು ನಿಜವಾಗಿಯೂ ನೀವೇ ಕಿವಿ ಆಗಿದ್ದೀರಿ. ವಾಸ್ತವವಾಗಿ, ಯಾವುದೇ ವಿಷಯದೊಂದಿಗೆ ಸಂಭಾಷಣೆ ಪ್ರಾರಂಭವಾದರೂ, ಅದು ಶೀಘ್ರದಲ್ಲೇ ಹವಾಮಾನಕ್ಕೆ ತಿರುಗುತ್ತದೆ ಎಂದು ನನಗೆ ಹೇಳಲಾಗಿದೆ!

 

ಸ್ನೇಹಿತರೆ,

ನಾನು ನ್ಯೂಜಿಲೆಂಡ್‌ನ ನಾಯಕರನ್ನು ಭೇಟಿಯಾದಾಗಲೆಲ್ಲಾ, ಅವರು ನಿಮ್ಮೆಲ್ಲರ ಬಗ್ಗೆ ತುಂಬಾ ಮೆಚ್ಚುಗೆಯಿಂದ ಮಾತನಾಡಿದ್ದಾರೆ. ನಿಮ್ಮನ್ನು ಹೊಗಳಿದ್ದಾರೆ, ಅದು ನನಗೆ ಹೆಮ್ಮೆ ತಂದಿದೆ.

ಸ್ನೇಹಿತರೆ,

ನಿಮಗೆಲ್ಲರಿಗೂ ತಿಳಿದಿರುವಂತೆ, ಭಾರತವು ಸಾವಿರಾರು ವರ್ಷಗಳಷ್ಟು ಹಳೆಯದಾದ ನಾಗರಿಕತೆಯಾಗಿದೆ, ಇಂದು ಅದು ತನ್ನ ಪ್ರಾಚೀನ ಪರಂಪರೆಯನ್ನು ಸಂರಕ್ಷಿಸುತ್ತಾ ಆಧುನಿಕತೆಯನ್ನು ಅಳವಡಿಸಿಕೊಳ್ಳುತ್ತಿದೆ. ಪ್ರತಿ ಯುಗದಲ್ಲಿ ಮತ್ತು ಅದರ ಇತಿಹಾಸದ ಪ್ರತಿ ಹಂತದಲ್ಲೂ ಭಾರತವು ತನ್ನನ್ನು ತಾನು ಪರಿವರ್ತಿಸಿಕೊಂಡಿದೆ. ಇದಕ್ಕೆ ಕಾರಣ ಕಲಿಯುವ ನಮ್ಮ ಉತ್ಸಾಹ.

ಭಾರತವು ಎಲ್ಲರಿಂದಲೂ ಕಲಿಯುತ್ತದೆ. ನಮಗೆ ಮುಖ್ಯವಾದುದು ಮತ್ತೊಂದು ದೇಶದ ಜನಸಂಖ್ಯೆಯ ಗಾತ್ರವಲ್ಲ, ಆದರೆ ಸಾರ್ವಜನಿಕ ಕಲ್ಯಾಣಕ್ಕಾಗಿ ಅದರ ಬದ್ಧತೆ. ಅದಕ್ಕಾಗಿಯೇ ನಾವು ನ್ಯೂಜಿಲೆಂಡ್‌ನಿಂದ ಬಹಳಷ್ಟು ಕಲಿತಿದ್ದೇವೆ, ನಾವು ಅದನ್ನು ಮುಂದುವರಿಸುತ್ತೇವೆ.

ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ ವಿಶ್ವದ ಮೊದಲ ದೇಶ ನ್ಯೂಜಿಲೆಂಡ್. ಇಂದು ನ್ಯೂಜಿಲೆಂಡ್‌ನ ಸಮಾಜದಲ್ಲಿ ಮಹಿಳೆಯರು ಗಮನಾರ್ಹ ಕೊಡುಗೆಗಳನ್ನು ನೀಡುತ್ತಿರುವುದನ್ನು ನಾವು ನೋಡುತ್ತೇವೆ. ಭಾರತವು ಸಹ ಮಹಿಳಾ ನೇತೃತ್ವದ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಮಹಿಳೆಯರಿಗೆ ಅವಕಾಶಗಳ ಹೊಸ ಮಾರ್ಗಗಳನ್ನು ತೆರೆಯುತ್ತಿದೆ.

ಸ್ನೇಹಿತರೆ,

ನ್ಯೂಜಿಲೆಂಡ್ ಬಲವಾದ ಗ್ರಾಮೀಣ ಆರ್ಥಿಕತೆಯು ಒಂದು ರಾಷ್ಟ್ರದ ಭವಿಷ್ಯವನ್ನು ಹೇಗೆ ಪರಿವರ್ತಿಸುತ್ತದೆ ಎಂಬುದನ್ನು ಪ್ರದರ್ಶಿಸಿದೆ. ನ್ಯೂಜಿಲೆಂಡ್‌ನ ದೊಡ್ಡ ಶಕ್ತಿಗಳಲ್ಲಿ ಒಂದಾಗಿರುವ ಕೃಷಿಯ ಸುತ್ತಲೂ ನಿರ್ಮಿಸಿರುವ ಪರಿಣಾಮಕಾರಿ ಪರಿಸರ ವ್ಯವಸ್ಥೆಯಾಗಿದೆ. ಅದು ಪತ್ತೆ ಹಚ್ಚುವಿಕೆ, ಆಹಾರ ಸುರಕ್ಷತೆ ಅಥವಾ ಅನುಸರಣೆ ವ್ಯವಸ್ಥೆಗಳಾಗಿರಬಹುದು, ಇವು ಅಮೂಲ್ಯವಾದ ಸ್ಫೂರ್ತಿ ನೀಡುತ್ತವೆ. ಲಕ್ಷಾಂತರ ಸಣ್ಣ ರೈತರನ್ನು ಹೊಂದಿರುವ ಭಾರತದಂತಹ ದೊಡ್ಡ ಕೃಷಿ ರಾಷ್ಟ್ರಕ್ಕೆ ಅವು ಪ್ರಮುಖ ಪಾಠಗಳನ್ನು ಕಲಿಸುತ್ತಿವೆ.

ಜೆಸ್ಪ್ರಿ ಮಾದರಿಯ ಮೂಲಕ ಸಣ್ಣ ರೈತರು ಸಹ ಜಾಗತಿಕವಾಗಿ ಗುರುತಿಸಲ್ಪಟ್ಟ ಬ್ರ್ಯಾಂಡ್‌ಗಳನ್ನು ನಿರ್ಮಿಸಬಹುದು ಎಂದು ನ್ಯೂಜಿಲೆಂಡ್ ತೋರಿಸಿದೆ. ನ್ಯೂಜಿಲೆಂಡ್‌ನ ಹವಾಮಾನ-ಸ್ಮಾರ್ಟ್ ನಿಖರ ಕೃಷಿ ತಂತ್ರಜ್ಞಾನಗಳಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ.

 

ಸ್ನೇಹಿತರೆ,

ಇಲ್ಲಿನ ಮನುಕಾ ಜೇನುತುಪ್ಪವನ್ನು ಹೆಚ್ಚಾಗಿ "ದ್ರವ ಚಿನ್ನ" ಎಂದು ಕರೆಯಲಾಗುತ್ತದೆ. ನ್ಯೂಜಿಲೆಂಡ್‌ನಲ್ಲಿ ಜೇನುತುಪ್ಪವು ಸಂಪ್ರದಾಯ ಮತ್ತು ರುಚಿಯೊಂದಿಗೆ ಮಾತ್ರವಲ್ಲದೆ ಆರೋಗ್ಯ ಮತ್ತು ಸ್ವಾಸ್ಥ್ಯದೊಂದಿಗೆ ಸಂಬಂಧಿಸಿದೆ, ಭಾರತದ ಆಯುರ್ವೇದ ಸಂಪ್ರದಾಯದಲ್ಲಿ ಜೇನುತುಪ್ಪವು ಹೆಚ್ಚಿನ ಮಹತ್ವ ಹೊಂದಿದೆ. ಭಾರತವೂ ಸಹ ಜೇನು ಸಾಕಣೆ ಉತ್ತೇಜಿಸಲು ರಾಷ್ಟ್ರೀಯ ಧ್ಯೇಯವನ್ನು ಜಾರಿಗೆ ತರುತ್ತಿದೆ ಎಂಬುದನ್ನು ತಿಳಿದು ನಿಮಗೆ ಸಂತೋಷವಾಗುತ್ತದೆ. ಪರಿಣಾಮವಾಗಿ, ದೇಶದಲ್ಲಿ ಜೇನುತುಪ್ಪ ಉತ್ಪಾದನೆಯು ಗಮನಾರ್ಹವಾಗಿ ಹೆಚ್ಚಾಗಿದೆ.

ಇತ್ತೀಚಿನ ದಿನಗಳಲ್ಲಿ, ಹಿಮಾಲಯದ ಎತ್ತರದಿಂದ ಬರುವ ಜೇನುತುಪ್ಪವು ಕೇವಲ ಚಿನ್ನವಲ್ಲ, ಆದರೆ ಬಹುತೇಕ ವಜ್ರದಂತೆ ಆಗುತ್ತಿದೆ. ಜೇನುತುಪ್ಪ ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ನಾವು ನ್ಯೂಜಿಲೆಂಡ್‌ನಿಂದ ಬಹಳಷ್ಟು ಕಲಿಯಬಹುದು ಎಂದು ನಾನು ನಂಬುತ್ತೇನೆ.

ಸ್ನೇಹಿತರೆ,

ಈ ವರ್ಷ ಭಾರತ-ನ್ಯೂಜಿಲೆಂಡ್ ಕ್ರೀಡಾ ಸಂಬಂಧಗಳ ಶತಮಾನೋತ್ಸವ. 100 ವರ್ಷಗಳ ಹಿಂದೆ, ನಮ್ಮ ಹಾಕಿ ತಂಡವು ನ್ಯೂಜಿಲೆಂಡ್‌ಗೆ ಆಟವಾಡಲು ಭೇಟಿ ನೀಡಿತು. ಆ ಪ್ರವಾಸದ ಸಮಯದಲ್ಲಿ, ಮೇಜರ್ ಧ್ಯಾನ್ ಚಂದ್ ಅವರ ಅತ್ಯುತ್ತಮ ಪ್ರದರ್ಶನವನ್ನು ವ್ಯಾಪಕವಾಗಿ ಪ್ರಶಂಸಿಸಲಾಯಿತು. ಅವರ ಹಾಕಿ ಕೌಶಲ್ಯಗಳು ನ್ಯೂಜಿಲೆಂಡ್ ಜನರ ಹೃದಯಗಳನ್ನು ಗೆದ್ದವು.

ಸ್ನೇಹಿತರೆ,

ವಿಷಯ ರಚನೆಕಾರರ ಭಾಷೆಯಲ್ಲಿ ಇದು ಸಹಯೋಗದ ಯುಗ ಎಂದು ನಾನು ಹೇಳುತ್ತೇನೆ. ನ್ಯೂಜಿಲೆಂಡ್ ಮತ್ತು ಭಾರತ ಕ್ರೀಡೆಗಳಲ್ಲಿಯೂ ಗಮನಾರ್ಹ ಸಹಯೋಗಗಳನ್ನು ಸ್ಥಾಪಿಸಬಹುದು. ರಗ್ಬಿ ಅಂತಹ ಒಂದು ಉದಾಹರಣೆಯಾಗಿದೆ.

ಸ್ವಲ್ಪ ಸಮಯದ ಹಿಂದೆ ಆಲ್ ಬ್ಲ್ಯಾಕ್ಸ್ ರಗ್ಬಿ ಪಂದ್ಯದಲ್ಲಿ ಗಮನಾರ್ಹ ಜಯ ಸಾಧಿಸಿದೆ ಎಂಬುದು ನನಗೆ ತಿಳಿದುಬಂದಿದೆ. ಭಾರತವು ರಗ್ಬಿ ಕ್ಷೇತ್ರದಲ್ಲಿ ನ್ಯೂಜಿಲೆಂಡ್‌ನಿಂದ ಕಲಿಯಲು ಬಯಸುತ್ತದೆ. ಭಾರತವು ರಗ್ಬಿಯಲ್ಲಿ ಪ್ರಗತಿ ಸಾಧಿಸಲು, ನಮಗೆ ತರಬೇತುದಾರರು ಮತ್ತು ತಜ್ಞರು ಬೇಕಾಗಿದ್ದಾರೆ. ನ್ಯೂಜಿಲೆಂಡ್ ಈ ಕ್ಷೇತ್ರದಲ್ಲಿ ಅಮೂಲ್ಯವಾದ ಬೆಂಬಲ ನೀಡಬಹುದು. ಭುವನೇಶ್ವರದಲ್ಲಿ ನ್ಯೂಜಿಲೆಂಡ್ ರಗ್ಬಿ ಮತ್ತು ರಗ್ಬಿ ಇಂಡಿಯಾ ನಡುವಿನ ಇತ್ತೀಚಿನ ತರಬೇತಿ ಕಾರ್ಯಕ್ರಮವು ಈ ದಿಕ್ಕಿನಲ್ಲಿ ಉತ್ತಮ ಆರಂಭವಾಗಿದೆ.

 

ಸ್ನೇಹಿತರೆ,

ಇಂದು ಇಲ್ಲಿಗೆ ಬರುವ ಮೊದಲು, ನಾನು ನ್ಯೂಜಿಲೆಂಡ್‌ನಲ್ಲಿ ನಡೆದ ಕ್ರೀಡಾ ನವೋದ್ಯಮ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದೆ. ಕ್ರೀಡಾ ತಂತ್ರಜ್ಞಾನದಲ್ಲಿ ಹೊರಹೊಮ್ಮುತ್ತಿರುವ ನಾವೀನ್ಯತೆಗಳು ಮತ್ತು ಹೊಸ ಆಲೋಚನೆಗಳು ನನ್ನನ್ನು ನಿಜವಾಗಿಯೂ ಪ್ರಭಾವಿತಗೊಳಿಸಿದವು. ಕ್ರೀಡಾ ತಂತ್ರಜ್ಞಾನ ಕ್ಷೇತ್ರದಲ್ಲಿ ನಾವು ಒಟ್ಟಾಗಿ ಹೆಚ್ಚಿನದನ್ನು ಸಾಧಿಸಬಹುದು ಎಂಬ ವಿಶ್ವಾಸ ನನಗಿದೆ.

ಭಾರತ ಮತ್ತು ನ್ಯೂಜಿಲೆಂಡ್‌ನ ಭವಿಷ್ಯವು ಪರಸ್ಪರ ಸಂಬಂಧ ಹೊಂದಿದೆ. ಇದಕ್ಕೆ ಒಂದು ಉದಾಹರಣೆಯೆಂದರೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ನಮ್ಮ ಸಹಕಾರ. ಭಾರತದ ಚಂದ್ರಯಾನ ಕಾರ್ಯಕ್ರಮದಲ್ಲಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದಾಗ, ಇಡೀ ನ್ಯೂಜಿಲೆಂಡ್ ಆ ಕ್ಷಣವನ್ನು ಬಹಳ ಉತ್ಸಾಹದಿಂದ ಆಚರಿಸಿತು. ಇದು ನಮಗೆಲ್ಲರಿಗೂ ಹೆಮ್ಮೆಯ ಕ್ಷಣವಾಗಿತ್ತು.

ಈಗ, ನಾನು ನಿಮ್ಮೊಂದಿಗೆ ಮತ್ತೊಂದು ಹೆಮ್ಮೆಯ ವಿಷಯ ಹಂಚಿಕೊಳ್ಳುತ್ತೇನೆ. ನ್ಯೂಜಿಲೆಂಡ್‌ನ ತಂತ್ರಜ್ಞಾನವು ಈ ಯಶಸ್ಸಿಗೆ ಕೊಡುಗೆ ನೀಡಿದೆ, ಇದು ನೀವು ಹೆಮ್ಮೆಪಡಲು ಮತ್ತೊಂದು ಕಾರಣ ನೀಡುತ್ತದೆ. ನ್ಯೂಜಿಲೆಂಡ್‌ನ ಬಾಹ್ಯಾಕಾಶ ಕಂಪನಿಗಳು ಹಲವಾರು ಸಂದರ್ಭಗಳಲ್ಲಿ ನಮ್ಮೊಂದಿಗೆ ಕೆಲಸ ಮಾಡಿವೆ. ಭವಿಷ್ಯದಲ್ಲಿ ಈ ಸಹಕಾರವನ್ನು ಇನ್ನಷ್ಟು ಹೆಚ್ಚಿಸಲು ನಾವು ಕೆಲಸ ಮಾಡುತ್ತಿದ್ದೇವೆ.

ಸ್ನೇಹಿತರೆ,

ಭಾರತ ಮತ್ತು ನ್ಯೂಜಿಲೆಂಡ್‌ನ ಆರ್ಥಿಕತೆಗಳು ಪರಸ್ಪರ ಎಷ್ಟು ನೀಡಬಲ್ಲವು ಎಂಬುದನ್ನು ಪ್ರದರ್ಶಿಸಲು ಬಾಹ್ಯಾಕಾಶ ವಲಯವೇ ಸಾಕು. ಇದು ನಮ್ಮ ವ್ಯಾಪಾರ ಒಪ್ಪಂದದ ಹಿಂದಿನ ಉತ್ಸಾಹವೂ ಆಗಿದೆ. ಈ ವ್ಯಾಪಾರ ಒಪ್ಪಂದವು ಅಭಿವೃದ್ಧಿ ಹೊಂದಿದ ಭಾರತದತ್ತ ನಮ್ಮ ಪ್ರಯಾಣವನ್ನು ವೇಗಗೊಳಿಸುತ್ತದೆ, ಭಾರತ ಮತ್ತು ನ್ಯೂಜಿಲೆಂಡ್ ಎರಡರಲ್ಲೂ ವ್ಯವಹಾರಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ.

ಸ್ನೇಹಿತರೆ,

ಭಾರತ ಮತ್ತು ನ್ಯೂಜಿಲೆಂಡ್ ಮತ್ತೊಂದು ಪ್ರಮುಖ ಹೋಲಿಕೆಯನ್ನು ಹಂಚಿಕೊಳ್ಳುತ್ತವೆ. ನಮ್ಮ ಸ್ಥಳೀಯ ಪರಂಪರೆಯನ್ನು ಆಚರಿಸುವ ಮತ್ತು ಸಂರಕ್ಷಿಸುವಲ್ಲಿ ನಮ್ಮ ಸ್ಥಳೀಯ ಸಂಸ್ಕೃತಿಗಳಲ್ಲಿ ಈ ಹೋಲಿಕೆ ಇದೆ. ಇಂದು ನಾನು ಮಾವೊರಿ ಸಮುದಾಯವನ್ನು ವಿಶೇಷವಾಗಿ ಗುರುತಿಸಲು ಬಯಸುತ್ತೇನೆ.

 

ನಾನು ಹಾಕಾವನ್ನು ಕೇವಲ ಪ್ರದರ್ಶನವಾಗಿ ನೋಡಲಿಲ್ಲ. ಹಾಕಾದಲ್ಲಿ ನಾನು ಒಂದು ಸಮುದಾಯದ ಆತ್ಮವನ್ನು ನೋಡಿದೆ. ಇದು ಧೈರ್ಯ, ಸ್ವಾಭಿಮಾನ, ಒಬ್ಬರ ಪೂರ್ವಜರ ಮೇಲಿನ ಗೌರವ ಮತ್ತು ಇಡೀ ಸಮುದಾಯದ ಸಾಮೂಹಿಕ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.

ಸ್ನೇಹಿತರೆ,

ಮಾವೋರಿ ಸಂಸ್ಕೃತಿಯಲ್ಲಿ ಒಂದು ಸುಂದರವಾದ ಪದವಿದೆ, "ಮನಕಿತಂಗ." ಇದರ ಅರ್ಥ ಗೌರವ ತೋರಿಸುವುದು, ಒಟ್ಟುಗೂಡಿದ ಭಾವನೆಯನ್ನು ನೀಡುವುದು ಮತ್ತು ಯಾರನ್ನಾದರೂ ಪೂರ್ಣ ಹೃದಯದಿಂದ ನೋಡಿಕೊಳ್ಳುವುದು. ಭಾರತದಲ್ಲಿ, ನಾವು "ಅತಿಥಿ ದೇವೋ ಭವ" ಎಂದೂ ಹೇಳುತ್ತೇವೆ, ಅತಿಥಿ ನಮಗೆ  ದೇವರಿದ್ದಂತೆ.

ಪದಗಳು ವಿಭಿನ್ನವಾಗಿವೆ, ಸಂದರ್ಭಗಳು ವಿಭಿನ್ನವಾಗಿವೆ, ಉಡುಪು ವಿಭಿನ್ನವಾಗಿವೆ ಮತ್ತು ಭಾಷೆಗಳು ವಿಭಿನ್ನವಾಗಿವೆ, ಆದರೆ ಭಾವನೆ ಒಂದೇ ಆಗಿದೆ.

ಅದೇ ರೀತಿ, ಮಾವೋರಿ ಸಂಸ್ಕೃತಿಯಲ್ಲಿ, ಕುಟುಂಬಕ್ಕೆ ಒಂದು ಸುಂದರವಾದ ಪದವಿದೆ, "ವಾನೌ", ಅಂದರೆ ಕುಟುಂಬ. ಇದು ಬಹು ತಲೆಮಾರುಗಳು, ಸಂಬಂಧಗಳು ಮತ್ತು ಇಡೀ ಸಮುದಾಯವನ್ನು ಒಳಗೊಂಡಿದೆ. ಭಾರತದಲ್ಲೂ ಸಹ, ನಾವು ಕುಟುಂಬವನ್ನು ಕೇವಲ ಒಂದು ಸಾಮಾಜಿಕ ವ್ಯವಸ್ಥೆಯಾಗಿ ನೋಡುವುದಿಲ್ಲ, ನಮಗೆ ಕುಟುಂಬವು ಒಂದು ಸಂಸ್ಥೆಯಾಗಿದೆ.

ಸ್ನೇಹಿತರೆ,

ಮಾವೋರಿ ಸಂಪ್ರದಾಯದಲ್ಲಿ ಮತ್ತೊಂದು ಸುಂದರವಾದ ಪರಿಕಲ್ಪನೆ ಇದೆ - ಕೈಟಿಯಾಕಿತಂಗ. ನಾವು ಪ್ರಕೃತಿಯ ಮಾಲೀಕರಲ್ಲ, ನಾವು ಅದರ ರಕ್ಷಕರು ಎಂದು ಅದು ನಮಗೆ ಕಲಿಸುತ್ತದೆ. ಭಾರತವೂ ಸಹ ಬಹಳ ಹಿಂದಿನಿಂದಲೂ ಅದೇ ತತ್ವಶಾಸ್ತ್ರ ಎತ್ತಿಹಿಡಿದಿದೆ: "ಮಾತಾ ಭೂಮಿಹ್ ಪುತ್ರೋಹಮ್ ಪೃಥಿವ್ಯಾ" - "ಭೂಮಿ ನಮ್ಮ ತಾಯಿ, ನಾನು ಅವಳ ಮಗ." ಈ ಮನೋಭಾವದಿಂದ ಮಾರ್ಗದರ್ಶಿಸಲ್ಪಟ್ಟ ಭಾರತವು ಭೂಮಿ ತಾಯಿಯನ್ನು ರಕ್ಷಿಸಲು ಹಲವಾರು ಉಪಕ್ರಮಗಳನ್ನು ಪ್ರಾರಂಭಿಸಿದೆ, ಇದರಲ್ಲಿ ಏಕ್ ಪೆಡ್ ಮಾ ಕೆ ನಾಮ್ ಮತ್ತು ನೈಸರ್ಗಿಕ ಕೃಷಿ ಮಿಷನ್ ಸೇರಿವೆ.

ಸ್ನೇಹಿತರೆ,

ನೀವು ಸಾವಿರಾರು ಕಿಲೋಮೀಟರ್ ದೂರದಲ್ಲಿ ವಾಸಿಸುತ್ತಿದ್ದರೂ, ಭಾರತವು ನಿಮ್ಮ ಹೃದಯಗಳಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ ಎಂಬುದು ನನಗೆ ತಿಳಿದಿದೆ. ನಿಮ್ಮ ದೈನಂದಿನ ಜೀವನದಲ್ಲಿ, ಒಂದಲ್ಲ ಒಂದು ರೀತಿಯಲ್ಲಿ ಭಾರತ ಯಾವಾಗಲೂ ಇರುತ್ತದೆ. ಅದು ನಿಜವಲ್ಲವೇ? ನಿಮ್ಮ ದೇಹವು ಇಲ್ಲಿರಬಹುದು, ಆದರೆ ನಿಮ್ಮ ಹೃದಯ ಎಲ್ಲಿದೆ? ಅದಕ್ಕಾಗಿಯೇ ನೀವು ಭಾರತದ ಪ್ರತಿಯೊಂದು ಸಾಧನೆಯನ್ನು ನಿಕಟವಾಗಿ ಅನುಸರಿಸುತ್ತೀರಿ.

 

ನೀವು ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸುವಾಗ, ಅನೇಕ ವಿವರಗಳು ಗಮನಕ್ಕೆ ಬಾರದೆ ಹೋಗಬಹುದು. ಆದರೆ ನೀವು ಅದನ್ನು ಮನೆಯಿಂದ ದೂರದರ್ಶನದಲ್ಲಿ ವೀಕ್ಷಿಸಿದಾಗ, ನೀವು ಪ್ರತಿಯೊಂದು ಸಣ್ಣ ಸೂಕ್ಷ್ಮ ವ್ಯತ್ಯಾಸವನ್ನು ಗ್ರಹಿಸುತ್ತೀರಿ. ಅದೇ ರೀತಿ, ನೀವು ಭಾರತದ ಪ್ರತಿಯೊಂದು ಬೆಳವಣಿಗೆಯ ಬಗ್ಗೆ ತಿಳಿದಿರುತ್ತೀರಿ. ಅದು ನಿಮ್ಮನ್ನು ನಿಜವಾಗಿಯೂ ವಿಶೇಷವಾಗಿಸುತ್ತದೆ.

ವಿದೇಶಗಳಲ್ಲಿ ವಾಸಿಸುವ ಭಾರತೀಯರು ತಮ್ಮ ಮನೆ ಎಂದು ಕರೆಯುವ ದೇಶಗಳ ಪ್ರಗತಿಗೆ ಕೊಡುಗೆ ನೀಡುತ್ತಾರೆ, ಅದೇ ಸಮಯದಲ್ಲಿ ತಮ್ಮ ಸ್ವಂತ ದೇಶದ ಅಭಿವೃದ್ಧಿಯೊಂದಿಗೆ ಆಳವಾಗಿ ಸಂಪರ್ಕದಲ್ಲಿರುತ್ತಾರೆ.

ಸ್ನೇಹಿತರೆ,

ನಾವು ನಮ್ಮ ಜನ್ಮಭೂಮಿ, ನಮ್ಮ ಮಾತೃಭೂಮಿಯನ್ನು ನಮ್ಮ ಹೃದಯದಿಂದ ಪಾಲಿಸುತ್ತೇವೆ, ನಾವು ನಮ್ಮ ಕರ್ಮಭೂಮಿಗೆ ಸಮಾನವಾಗಿ ಬದ್ಧರಾಗಿದ್ದೇವೆ, ನಾವು ಕೆಲಸ ಮಾಡುವ ಮತ್ತು ನಮ್ಮ ಜೀವನವನ್ನು ನಿರ್ಮಿಸುವ ಭೂಮಿ ಇದಾಗಿದೆ.

ಸ್ನೇಹಿತರೆ,

ಜಾಗತಿಕ ಸವಾಲುಗಳ ನಡುವೆ, ಇಂದು ಭಾರತವು ಪ್ರಗತಿ ಹೊಂದುತ್ತಿರುವ ವೇಗವು ನಿಜವಾಗಿಯೂ ಅಭೂತಪೂರ್ವವಾಗಿದೆ. ಭಾರತದ ಸಾಧನೆಗಳ ಪುಷ್ಪಗುಚ್ಛವನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತೇನೆ, ರಾಷ್ಟ್ರದ ಸಾಮರ್ಥ್ಯಗಳನ್ನು ಪ್ರತಿಬಿಂಬಿಸುವ ಪುಷ್ಪಗುಚ್ಛ ಇದಾಗಿದೆ. ನಾನು ಈ ಪುಷ್ಪಗುಚ್ಛವನ್ನು ವಿಶೇಷವಾಗಿ ನಿಮಗಾಗಿ ತಂದಿದ್ದೇನೆ. ಅದು ನೀವು ಮೆಚ್ಚುವ ಕನಿಷ್ಠ ಒಂದು ಹೂವನ್ನು ಹೊಂದಿದೆ ಎಂಬುದು ನನಗೆ ಖಚಿತವಾಗಿದೆ, ಅದು ನಿಮ್ಮನ್ನು ಹೆಮ್ಮೆಯಿಂದ ತುಂಬುತ್ತದೆ.

ಹಾಗಾದರೆ, ನೀವು ಸಿದ್ಧರಿದ್ದೀರಾ? ನಾನು ಹೂಗುಚ್ಛವನ್ನು ನೀಡಲೇ? ನಾನು ಮಾಡುವಂತೆ, ನಿಮಗೆ ಹೆಚ್ಚು ಇಷ್ಟವಾಗುವ ಹೂವನ್ನು ನೀವು ಹುಡುಕಬಹುದು. ಬಹುಶಃ, ಈ ಹೂಗುಚ್ಛದಲ್ಲಿರುವ ಪ್ರತಿಯೊಂದು ಹೂವು ನಿಮಗೆ ಸೇರಿರಬಹುದು.

ಸ್ನೇಹಿತರೆ,

ಭಾರತವೀಗ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಭಾರತವು ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕ ರಾಷ್ಟ್ರವಾಗಿದೆ. ಮೊಬೈಲ್ ಡೇಟಾ ಬಳಕೆಯಲ್ಲಿ ಭಾರತವು ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ಇಂದು ಭಾರತವು ವಿಶ್ವದ 2ನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕ ರಾಷ್ಟ್ರವಾಗಿದೆ. ಇದು ವಿಶ್ವದ 2ನೇ ಅತಿದೊಡ್ಡ ದೂರಸಂಪರ್ಕ ಮಾರುಕಟ್ಟೆಯೂ ಆಗಿದೆ. ಭಾರತವು ವಿಶ್ವದ 2ನೇ ಅತಿದೊಡ್ಡ ಗೋಧಿ ಉತ್ಪಾದಕ ಮತ್ತು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿದೆ. ಇದು ವಿಶ್ವದ 2ನೇ ಅತಿದೊಡ್ಡ ಮೀನು ಉತ್ಪಾದಕ ರಾಷ್ಟ್ರವಾಗಿದೆ.

 

ಸ್ನೇಹಿತರೆ,

ಅಷ್ಟೇ ಅಲ್ಲ, ಭಾರತವೀಗ ವಿಶ್ವದ 3ನೇ ಅತಿದೊಡ್ಡ ಆಟೋಮೊಬೈಲ್ ಮಾರುಕಟ್ಟೆಯಾಗಿದೆ. ಭಾರತವು ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆಯಾಗಿಯೂ ಹೊರಹೊಮ್ಮಿದೆ. ಭಾರತವು ಶೀಘ್ರದಲ್ಲೇ ವಿಶ್ವದ 3ನೇ ಅತಿದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದಕ ರಾಷ್ಟ್ರವಾಗಲು ಸಜ್ಜಾಗಿದೆ. ಸೌರಶಕ್ತಿ ಸಾಮರ್ಥ್ಯದ ವಿಷಯದಲ್ಲಿ ಇದು ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ.

ಸ್ನೇಹಿತರೆ,

ಭಾರತವೀಗ ಜಗತ್ತಿಗೆ ಅಭಿವೃದ್ಧಿಯ ಹೊಸ ಮಾದರಿಗಳನ್ನು ನೀಡುತ್ತಿದೆ. ಭಾರತವು ವಿಶ್ವದ ಅತಿದೊಡ್ಡ ಡಿಜಿಟಲ್ ಗುರುತಿನ ವೇದಿಕೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಭಾರತದಲ್ಲಿ ಈಗ ಪ್ರತಿ ತಿಂಗಳು ಯುಪಿಐ ಮೂಲಕ ಶತಕೋಟಿ ಡಿಜಿಟಲ್ ವಹಿವಾಟುಗಳು ನಡೆಯುತ್ತವೆ. ಪ್ರಪಂಚದಾದ್ಯಂತದ ಹಲವಾರು ದೇಶಗಳು ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಲ್ಲಿ ಆಸಕ್ತಿ ತೋರಿಸುತ್ತಿವೆ. ಭಾರತವು ಡ್ರೋನ್ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಆರ್ಥಿಕತೆಯಲ್ಲಿ ಹೊಸ ಎತ್ತರ ತಲುಪುತ್ತಿದೆ.

ಸ್ನೇಹಿತರೆ,

ಇದು ಹೊಸ ಭಾರತದ ಚಿತ್ರ, ಇದು ನ್ಯೂಜಿಲೆಂಡ್‌ನಂತೆ ಭಾರತವು ಪರಿಸರ ವಿಜ್ಞಾನ ಮತ್ತು ಆರ್ಥಿಕತೆಯ ನಡುವೆ ಸಮತೋಲನವನ್ನು ಹೇಗೆ ಕಾಯ್ದುಕೊಳ್ಳುತ್ತಿದೆ ಎಂಬುದನ್ನು ತೋರಿಸುತ್ತಿದೆ.

ಸ್ನೇಹಿತರೆ,

ಭಾರತದ ಬೆಳವಣಿಗೆಗೆ ಮತ್ತೊಂದು ಪ್ರಮುಖ ಆಯಾಮವಿದೆ. ಅದು ನಮ್ಮ ಪರಂಪರೆ. ಭಾರತವು ತನ್ನ ಆರ್ಥಿಕತೆ ಮತ್ತು ಪರಿಸರ ವಿಜ್ಞಾನಕ್ಕೆ ಪ್ರಾಮುಖ್ಯತೆ ನೀಡುವಂತೆಯೇ, ಅದು ತನ್ನ ಪರಂಪರೆಯನ್ನು ಸಂರಕ್ಷಿಸುವತ್ತ ಸಮಾನ ಒತ್ತು ನೀಡುತ್ತಿದೆ.

ಸ್ನೇಹಿತರೆ,

ಅಗತ್ಯದ ಸಮಯದಲ್ಲಿ ಭಾರತ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದಕ್ಕೆ ಒಂದು ಉದಾಹರಣೆಯೆಂದರೆ, ಗುರು ಗ್ರಂಥ ಸಾಹಿಬ್‌ನ ಪವಿತ್ರ ಸ್ವರೂಪಗಳನ್ನು ನಾವು ನಿರ್ವಹಿಸಿದ ರೀತಿ. ಅಫ್ಘಾನಿಸ್ತಾನದಲ್ಲಿ ಬಿಕ್ಕಟ್ಟು ತೆರೆದುಕೊಂಡಾಗ, ನಾವು ಗುರು ಗ್ರಂಥ ಸಾಹಿಬ್‌ನ ಪವಿತ್ರ ಸ್ವರೂಪಗಳನ್ನು ಭಾರತಕ್ಕೆ ಅತ್ಯಂತ ಗೌರವ ಮತ್ತು ಶ್ರದ್ಧೆಯಿಂದ ತಂದಿದ್ದೇವೆ.

 

ಸ್ನೇಹಿತರೆ,

ನಮ್ಮ ಶ್ರೇಷ್ಠ ಸಿಖ್ ಗುರುಗಳು ಎಲ್ಲಾ ಮಾನವತೆಗೆ ಸೇವೆ, ಧೈರ್ಯ, ಸಮಾನತೆ ಮತ್ತು ಸಹಾನುಭೂತಿಯ ಸಂದೇಶ ನೀಡಿದರು. ಪ್ರಪಂಚದ ಪ್ರತಿಯೊಂದು ಭಾಗದಲ್ಲೂ ಗುರುದ್ವಾರಗಳು ನಿಸ್ವಾರ್ಥ ಸೇವೆಯ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಹಸಿವಿನಿಂದ ಬರುವ ಯಾರಿಗಾದರೂ ಊಟ ನೀಡಲಾಗುತ್ತಿದೆ. ಸಂಕಷ್ಟದಲ್ಲಿರುವ ಯಾರಿಗಾದರೂ ಬೆಂಬಲ ಸಿಗುತ್ತಿದೆ.

ಈ ಮನೋಭಾವದಿಂದ, ಸಿಖ್ ಸಮುದಾಯದ ಸದಸ್ಯರು ಶ್ರೀ ಹರ್ಮಂದಿರ್ ಸಾಹಿಬ್‌ನಲ್ಲಿ ಸೇವೆಯ ಮೇಲೆ ಪರಿಣಾಮ ಬೀರುವ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ(ಎಫ್‌ಸಿಆರ್‌ಎ) ನಿಬಂಧನೆಗಳಿಗೆ ಸಂಬಂಧಿಸಿದ ಕೆಲವು ತೊಂದರೆಗಳನ್ನು ನಮ್ಮ ಗಮನಕ್ಕೆ ತಂದಿದ್ದರು. ನಾವು ಆ ಸಮಸ್ಯೆಯನ್ನು ಪರಿಹರಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಂಡಿದ್ದೇವೆ.

ಸ್ನೇಹಿತರೆ,

ನಿಮಗೆಲ್ಲರಿಗೂ ಹೇಮಕುಂಡ್ ಸಾಹಿಬ್ ಜಿ ಪರಿಚಯವಿದೆ. ಹಿಮಾಲಯದ ಎತ್ತರದಲ್ಲಿ ನೆಲೆಗೊಂಡಿರುವ ಇದು ವರ್ಷದ ಬಹುಪಾಲು ಹಿಮದ ಶಿಖರಗಳಿಂದ ಆವೃತವಾಗಿರುತ್ತದೆ. ತೀರ್ಥಯಾತ್ರೆಯ ಮಾರ್ಗವು ಅತ್ಯಂತ ಸವಾಲಿನದ್ದಾಗಿದೆ, ಸೀಮಿತ ಸಂಖ್ಯೆಯ ಭಕ್ತರು ಮಾತ್ರ ಪ್ರಯಾಣವನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ, ವಿಶೇಷವಾಗಿ ದೇವಾಲಯಕ್ಕೆ ಭೇಟಿ ನೀಡುವ ನಮ್ಮ ಸಿಖ್ ಸಹೋದರ ಸಹೋದರಿಯರು.

ಹೇಮಕುಂಡ್ ಸಾಹಿಬ್‌ಗೆ ತೀರ್ಥಯಾತ್ರೆಯನ್ನು ಹೆಚ್ಚು ಅನುಕೂಲಕರವಾಗಿಸಲು, ವಿಶೇಷವಾಗಿ ನಮ್ಮ ವೃದ್ಧ ಭಕ್ತರು ಮತ್ತು ನಮ್ಮ ಸಿಖ್ ಸಹೋದರ ಸಹೋದರಿಯರಿಗೆ, ಸರ್ಕಾರವು ದೇವಾಲಯಕ್ಕೆ ರೋಪ್‌ವೇ ನಿರ್ಮಿಸುತ್ತಿದೆ.

ಸ್ನೇಹಿತರೆ,

ನಮ್ಮ ಸರ್ಕಾರವು ಸಾಹಿಬ್‌ಜಾದಾಸ್ ಅವರ ಧೈರ್ಯ ಮತ್ತು ತ್ಯಾಗದ ಶಾಶ್ವತ ಸ್ಮರಣಾರ್ಥ ಡಿಸೆಂಬರ್ 26ರಂದು ವಾರ್ಷಿಕ ವೀರ್ ಬಲ್ ದಿವಸ್ ಆಚರಣೆ ಆರಂಭಿಸಿದೆ. ಇಂದು, ಇದು ಇಡೀ ರಾಷ್ಟ್ರಕ್ಕೆ ಸ್ಫೂರ್ತಿಯ ಸಂದರ್ಭವಾಗಿದೆ. ಕೇರಳದಿಂದ ಅಸ್ಸಾಂವರೆಗೆ, ಭಾರತದಾದ್ಯಂತ ಮಕ್ಕಳು ಈಗ 4 ಸಾಹಿಬ್‌ಜಾದಾಸ್ ಮತ್ತು ಮಾತಾ ಗುಜ್ರಿ ಅವರ ತ್ಯಾಗದ ಬಗ್ಗೆ ಕಲಿಯುತ್ತಿದ್ದಾರೆ.

ವೀರ್ ಬಲ್ ದಿವಸ್ ಭಾರತದಾದ್ಯಂತ ಅಸಂಖ್ಯಾತ ಮಕ್ಕಳು ಮತ್ತು ಯುವ ಜನರ ಹೃದಯಗಳಲ್ಲಿ ಅಚಲ ಧೈರ್ಯದ ಮನೋಭಾವ ತುಂಬಿದೆ.

ಸ್ನೇಹಿತರೆ,

ನಾನು ನಿಮ್ಮೊಂದಿಗೆ ಪವಿತ್ರ ಜೋರ್ ಸಾಹಿಬ್ ಬಗ್ಗೆ ಮಾತನಾಡಲು ಬಯಸುತ್ತೇನೆ. ಸರ್ಕಾರದಲ್ಲಿ ನನ್ನ ಸಹೋದ್ಯೋಗಿಗಳಲ್ಲಿ ಒಬ್ಬರು ಶ್ರೀ ಹರ್ದೀಪ್ ಪುರಿ. ಪುರಿ ಕುಟುಂಬದ ಪೂರ್ವಜರು ಗುರು ಗೋಬಿಂದ್ ಸಿಂಗ್‌ಗೆ ಸೇವೆ ಸಲ್ಲಿಸಿದರು. ಶ್ರೀ ಹರ್ದೀಪ್ ಪುರಿ ಅವರು ತಮ್ಮ ಕುಟುಂಬವು ಗುರು ಗೋಬಿಂದ್ ಸಿಂಗ್ ಜಿ ಮತ್ತು ಮಾತಾ ಸಾಹಿಬ್ ಕೌರ್ ಜಿ ಅವರ ಪವಿತ್ರ ಜೋರ್ ಸಾಹಿಬ್ ಅನ್ನು 300 ವರ್ಷಗಳಿಗೂ ಹೆಚ್ಚು ಕಾಲ ಸಂರಕ್ಷಿಸಿದೆ ಎಂಬುದನ್ನು ನನಗೆ ಹೇಳಿದರು.

ವಿಭಜನೆಯ ಸಮಯದಲ್ಲಿ, ಶ್ರೀ ಪುರಿ ಅವರ ಪೂರ್ವಜರು ಈ ಪವಿತ್ರ ಅವಶೇಷಗಳನ್ನು ಸುರಕ್ಷಿತವಾಗಿ ದೆಹಲಿಗೆ ತಂದರು. ಹೆಚ್ಚಿನ ಸಂಖ್ಯೆಯ ಭಕ್ತರು ತಮ್ಮ ಗೌರವ ಸಲ್ಲಿಸಲು ಅವಕಾಶವನ್ನು ಪಡೆಯಲು ಕುಟುಂಬವು ಪವಿತ್ರ ಜೋರ್ ಸಾಹಿಬ್ ಅನ್ನು ಸಿಖ್ ಸಂಗತ್‌ಗೆ ಒಪ್ಪಿಸಲು ಬಯಸಿತು.

ನಂತರ ನಾವು ಒಂದು ಸಮಿತಿ ರಚಿಸಿದ್ದೇವೆ, ಸಿಖ್ ಸಂಪ್ರದಾಯಗಳಲ್ಲಿ ಚೆನ್ನಾಗಿ ಪರಿಣತಿ ಹೊಂದಿರುವ ತಜ್ಞರ ಸಲಹೆಯನ್ನು ಪಡೆದುಕೊಂಡಿದ್ದೇವೆ. ಅವರ ಶಿಫಾರಸುಗಳ ಆಧಾರದ ಮೇಲೆ, ಪವಿತ್ರ ಜೋರ್ ಸಾಹಿಬ್ ಅನ್ನು ಗುರು ಗೋಬಿಂದ್ ಸಿಂಗ್ ಅವರು ಮೊದಲು ಈ ಪವಿತ್ರ ಭೂಮಿ, ಅವರ ಜನ್ಮಸ್ಥಳ, ನಮ್ಮ ಪೂಜ್ಯ ಪಾಟ್ನಾ ಸಾಹಿಬ್‌ನಲ್ಲಿ ಪಾದಾರ್ಪಣೆ ಮಾಡಿದ ಸ್ಥಳಕ್ಕೆ ಕರೆದೊಯ್ಯಬೇಕೆಂದು ನಿರ್ಧರಿಸಲಾಯಿತು.

ಪವಿತ್ರ ಜೋರ್ ಸಾಹಿಬ್ ಈಗ ಪಾಟ್ನಾ ಸಾಹಿಬ್‌ನ ಪವಿತ್ರ ದೇಗುಲದಲ್ಲಿದೆ ಎಂಬುದರಿಂದ ನನಗೆ ಸಂತೋಷವಾಗಿದೆ. ಆ ಪವಿತ್ರ ಸಂದರ್ಭ ವೀಕ್ಷಿಸಲು ಅಲ್ಲಿ ಉಪಸ್ಥಿತರಿರುವುದು ನನ್ನ ಸೌಭಾಗ್ಯ. ನೀವು ಭಾರತಕ್ಕೆ ಭೇಟಿ ನೀಡಿದಾಗಲೆಲ್ಲಾ ಪಾಟ್ನಾ ಸಾಹಿಬ್‌ನಲ್ಲಿ ಗೌರವ ಸಲ್ಲಿಸುವುದನ್ನು ರೂಢಿಸಿಕೊಳ್ಳಿ ಎಂದು ನಾನು ನಿಮ್ಮೆಲ್ಲರನ್ನೂ ಒತ್ತಾಯಿಸುತ್ತೇನೆ.

ಸ್ನೇಹಿತರೆ,

ಇಂದು ನಾನು ಅಪಾರ ಆತ್ಮವಿಶ್ವಾಸ, ಅಪಾರ ಪ್ರೀತಿ ಮತ್ತು ಅಸಂಖ್ಯಾತ ಪ್ರೀತಿಯ ನೆನಪುಗಳೊಂದಿಗೆ ಹೊರಡುತ್ತಿದ್ದೇನೆ. ನಾನು ನಿಮಗೆ ಇದನ್ನೂ ಹೇಳುತ್ತೇನೆ - ಈ ಬಾರಿ ಭಾರತೀಯ ಪ್ರಧಾನಿಯೊಬ್ಬರು ನ್ಯೂಜಿಲೆಂಡ್‌ಗೆ ಭೇಟಿ ನೀಡಲು 40 ವರ್ಷಗಳು ಬೇಕಾಯಿತು. ಆದರೆ ನೀವು ಮತ್ತೆ ಅಷ್ಟು ದಿನ ಕಾಯಬೇಕಾಗಿಲ್ಲ. ಇದು ಇನ್ನೂ 40 ವರ್ಷಗಳನ್ನು ತೆಗೆದುಕೊಳ್ಳುವುದಿಲ್ಲ. ಇದು ಮೋದಿ ಅವರ ಭರವಸೆ. ಮೋದಿ ಅವರ ಭರವಸೆ ಎಂದರೆ, ಅದು ಈಡೇರುತ್ತದೆ ಎಂಬ ಭರವಸೆ.

ಸ್ನೇಹಿತರೆ,

ನಾನು ನಿಮಗೆ ಒಂದು ಮನವಿ ಮಾಡಲು ಬಯಸುತ್ತೇನೆ. ಕೆಲವು ಸಮಯದ ಹಿಂದೆ, ನಮ್ಮ ಭಾರತೀಯ ವಲಸಿಗರ ಮಕ್ಕಳಿಗಾಗಿ ನಾವು ಹೊಸ ಉಪಕ್ರಮ ಪ್ರಾರಂಭಿಸಿದ್ದೇವೆ. ನಮ್ಮ ಮಕ್ಕಳು ಭಾರತವನ್ನು ಅರ್ಥ ಮಾಡಿಕೊಳ್ಳಲು ಮತ್ತು ಭಾರತದ ವೈವಿಧ್ಯತೆಯನ್ನು ಜಗತ್ತಿಗೆ ಪ್ರದರ್ಶಿಸಲು ಸಹಾಯ ಮಾಡಲು, ನಾವು ಭಾರತ್ ಕೋ ಜನಿಯೇ ರಸಪ್ರಶ್ನೆ ಪ್ರಾರಂಭಿಸಿದ್ದೇವೆ. ಇಲ್ಲಿಯವರೆಗೆ, ಆರಂಭಿಕ ಕಾರ್ಯಕ್ರಮಗಳು ಮಾತ್ರ ನಡೆದಿದೆ, ನಮ್ಮ ಯುವ ಜನರು ಭಾಗವಹಿಸಿದ ಉತ್ಸಾಹದಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ.

ಈಗ ನಾವು ಈ ಕಾರ್ಯಕ್ರಮದ 6ನೇ ಆವೃತ್ತಿಯನ್ನು ಇನ್ನಷ್ಟು ತಂತ್ರಜ್ಞಾನ ಆಧಾರಿತವಾಗಿಸುತ್ತಿದ್ದೇವೆ. ಈ ಬಾರಿಯ ಅನೇಕ ಕಾರ್ಯಕ್ರಮಗಳನ್ನು ಅಪ್ಲಿಕೇಶನ್ ಮೂಲಕ ನಡೆಸಲಾಗುವುದು. ಇಲ್ಲಿರುವ ಎಲ್ಲಾ ಯುವ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನಾನು ಒತ್ತಾಯಿಸುತ್ತೇನೆ. ಭಾರತವನ್ನು ಚೆನ್ನಾಗಿ ತಿಳಿದುಕೊಳ್ಳಿ ಮತ್ತು ನ್ಯೂಜಿಲೆಂಡ್ ಜನರನ್ನು ಭಾರತದ ಶ್ರೀಮಂತ ಪರಂಪರೆಯೊಂದಿಗೆ ಸಂಪರ್ಕಿಸಲು ಸಹಾಯ ಮಾಡಿ.

ಸ್ನೇಹಿತರೆ,

ನಾನು ಮುಂದೆ ಉಜ್ವಲ ಭವಿಷ್ಯ ನೋಡುತ್ತಿದ್ದೇನೆ, ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನ ಮತ್ತು ನ್ಯೂಜಿಲೆಂಡ್‌ನ ಸಮೃದ್ಧಿಯಿಂದ ಬೆಳಗಬೇಕು. ಈ ವಿಶ್ವಾಸದೊಂದಿಗೆ, ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು.

ಪ್ರಧಾನ ಮಂತ್ರಿ ಲಕ್ಸನ್ ಮತ್ತು ಅವರ ತಂಡಕ್ಕೆ ನನ್ನ ಪ್ರಾಮಾಣಿಕ ಧನ್ಯವಾದಗಳು. ನ್ಯೂಜಿಲೆಂಡ್‌ನ ಜನರಿಗೆ ನನ್ನ ಕೃತಜ್ಞತೆಗಳು.

ಮತ್ತೊಮ್ಮೆ, ಭಾರತ್ ಮಾತಾ ಕಿ ಜೈ ಎಂದು ಹೇಳಲು ನೀವೆಲ್ಲರೂ ನನ್ನೊಂದಿಗೆ ಸೇರಿ!

ವಂದೇ ಮಾತರಂ!

ಧನ್ಯವಾದಗಳು!

ಕಿಯಾ ಓರಾ!

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
UPI — an eventful journey

Media Coverage

UPI — an eventful journey
NM on the go

Nm on the go

Always be the first to hear from the PM. Get the App Now!
...
PM chairs 53rd PRAGATI Meeting
August 25, 2026
PM reviews six key infrastructure projects across the Railway, Road and Power sectors
Projects reviewed span across 9 States with cumulative investment of more than ₹30,000 crore
PM says Infrastructure projects should be viewed as an integrated whole, rather than as individual sections or packages
PM calls for continuous reforms across all stages of project implementation and a proactive work culture across Ministries and States
PM says Speed must go hand-in-hand with quality
While reviewing AgriStack, PM emphasises the need to leverage the latest digital technologies including AI to derive greater value from agricultural data
On cyber fraud and ‘digital arrest’, PM stresses training, public awareness, cyber-safety education and coordinated action

Prime Minister Shri Narendra Modi chaired the 53rd meeting of PRAGATI, the ICT-enabled, multi-modal platform for Pro-Active Governance and Timely Implementation, at Seva Teerth earlier today.

During the meeting, Prime Minister reviewed six key infrastructure projects across the Railway, Road and Power sectors, spanning nine States with a cumulative cost of more than ₹30,000 crore. The projects, significant for strengthening connectivity, supporting industrial and economic activity and improving public services, were reviewed with particular emphasis on adherence to timelines, inter-agency coordination, resolution of pending issues and expeditious completion.

Prime Minister emphasised that delays in infrastructure projects have consequences beyond cost escalation, as they also postpone the benefits intended for citizens, businesses and the economy. He said that infrastructure projects should be viewed and monitored as an integrated whole, rather than as isolated sections, stretches or packages. He noted that progress in individual packages should ultimately translate into timely completion and operationalisation of the entire project. Ministries and States were therefore asked to adopt an end-to-end approach, and address critical gaps that could delay the overall commissioning and delivery of benefits. He called for fostering a proactive work culture across Ministries and State Governments, with greater ownership at every level of project implementation.

Prime Minister stressed the need to explore common utility corridors for infrastructure services, wherever feasible, particularly while planning major transport and infrastructure projects. He called upon Ministries and States to examine such integrated approaches at the planning stage itself, keeping in view their technical and economic feasibility.

Prime Minister said that speed of execution must be accompanied by uncompromising quality. He called upon Ministries, States and implementing agencies to adopt modern technologies and strengthen quality assurance and supervision at every stage.

While reviewing AgriStack under the Digital Agriculture Mission, Prime Minister emphasised the need to leverage the latest digital technologies, including Artificial Intelligence, to derive greater value from agricultural data. He stressed that the data ecosystem should be effectively utilised across the agricultural value chain, from input planning to processing, enabling more informed interventions, better targeting and data-driven decision-making. He appreciated the efforts of the States and the Central Government in building the AgriStack ecosystem and called for further strengthening its use for delivering better outcomes for farmers.

During the review of cyber fraud cases, including incidents of digital arrest, Prime Minister said that prevention must be strengthened through a sustained focus on training, awareness and education. He stressed the need for continuous and targeted public-awareness campaigns, particularly for senior citizens, youth and other vulnerable sections, to familiarise them with common fraud techniques, warning signs and safe digital practices. He also called for regular capacity-building of personnel involved so that emerging modes of cyber fraud are identified and acted upon swiftly.