" ಯುವ ಶಕ್ತಿಯಿಂದ ದೇಶದ ಅಭಿವೃದ್ಧಿಯು ಹೊಸ ವೇಗವನ್ನು ಪಡೆಯುತ್ತಿದೆ "
" 8 ವರ್ಷಗಳ ಅಲ್ಪಾವಧಿಯಲ್ಲಿ, ದೇಶದ ನವೋದ್ಯಮ ಕಥೆಯು ಭಾರಿ ಪರಿವರ್ತನೆಗೆ ಒಳಗಾಗಿದೆ "
" 2014 ರ ನಂತರ, ಸರ್ಕಾರವು ಯುವಕರ ನಾವೀನ್ಯತೆಯ ಶಕ್ತಿಯಲ್ಲಿ ನಂಬಿಕೆಯನ್ನು ಪುನಃಸ್ಥಾಪಿಸಿತು ಮತ್ತು ಅನುಕೂಲಕರ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಿದೆ "
" 7 ವರ್ಷಗಳ ಹಿಂದೆ ನವೋದ್ಯಮ ಭಾರತವನ್ನು ಪ್ರಾರಂಭಿಸುವುದು ಆಲೋಚನೆಗಳನ್ನು ನಾವೀನ್ಯತೆಯಾಗಿ ಪರಿವರ್ತಿಸುವಲ್ಲಿ ಮತ್ತು ಅವುಗಳನ್ನು ಉದ್ಯಮಕ್ಕೆ ಕೊಂಡೊಯ್ಯುವಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ "
" ಭಾರತದಲ್ಲಿ ವ್ಯಾಪಾರವನ್ನು ಸುಲಭಗೊಳಿಸಲು ಮತ್ತು ಜೀವನವನ್ನು ಸುಗಮಗೊಳಿಸಲು ಅಭೂತಪೂರ್ವ ಒತ್ತು ನೀಡಲಾಗಿದೆ "

ನಮಸ್ಕಾರ!

ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಜೀ, ಮಧ್ಯ ಪ್ರದೇಶ ಸರಕಾರದ ಸಚಿವರೇ, ಸಂಸತ್ ಸದಸ್ಯರೇ, ಶಾಸಕರೇ, ನವೋದ್ಯಮ ಲೋಕದ ನನ್ನ ಮಿತ್ರರೇ, ಮಹಿಳೆಯರೇ ಮತ್ತು ಮಹನೀಯರೇ!

ನವೋದ್ಯಮಗಳಿಗೆ ಸಂಬಂಧಿಸಿದ ಯುವ ಪ್ರತಿಭೆಗಳ ಜೊತೆ ನಾನು ಸಂವಾದ ನಡೆಸಿದ್ದನ್ನು ನೀವೆಲ್ಲ ನೋಡಿರಬಹುದು ಮತ್ತು ಹೃದಯದಲ್ಲಿ ಉತ್ಸಾಹ ಇದ್ದರೆ, ಹೊಸ ಭರವಸೆಗಳಿದ್ದರೆ ಮತ್ತು ಅನ್ವೇಷಣೆಯ ಸ್ಫೂರ್ತಿ, ಉತ್ಸಾಹ ಇದ್ದರೆ ಅದರ ಪರಿಣಾಮ ಸ್ಪಷ್ಟವಾಗಿ ಗೋಚರಿಸುತ್ತದೆ ಎಂಬ ಬಗ್ಗೆ ನನಗಂತೂ ಸ್ಪಷ್ಟವಾಗಿದೆ ಮತ್ತು ನಿಮಗೂ ಇದರ ಮನವರಿಕೆಯಾಗಿರಬಹುದು. ನನಗೆ ನಿಮ್ಮೆಲ್ಲರೊಡನೆ ಮಾತನಾಡುವ ಅವಕಾಶ ಲಭ್ಯವಾಗಿದೆ. ಮತ್ತು ಈ ಸಂವಾದವನ್ನು ಕೇಳಿದವರು ನಮ್ಮ ದೇಶದಲ್ಲಿ ಪರಿಣಾಮಕಾರಿಯಾದಂಥ ನವೋದ್ಯಮ ನೀತಿ ಇರುವುದನ್ನು ಮತ್ತು ನವೋದ್ಯಮ ನಾಯಕತ್ವ ಕೂಡಾ ಶ್ರದ್ಧೆಯುಳ್ಳದ್ದೂ,  ದೃಢವೂ ಅಗಿರುವುದರ ಬಗ್ಗೆ ಪೂರ್ಣ ವಿಶ್ವಾಸದಿಂದ ಹೇಳಬಹುದಾಗಿದೆ. ಆದುದರಿಂದ ದೇಶದ ಅಭಿವೃದ್ಧಿ ಹೊಸ ಯುವಶಕ್ತಿಯೊಂದಿಗೆ ವೇಗವನ್ನು ಪಡೆದುಕೊಳ್ಳುತ್ತಿದೆ. ಮಧ್ಯಪ್ರದೇಶದಲ್ಲಿಂದು ನವೋದ್ಯಮ ಪೋರ್ಟಲ್ ಮತ್ತು ಐ-ಹಬ್ ಇಂದೋರ್ ಗಳನ್ನು ಆರಂಭ ಮಾಡಲಾಗಿದೆ. ನವೋದ್ಯಮಗಳಿಗೆ ಮತ್ತು ಇನ್ಕ್ಯುಬೇಟರುಗಳಿಗೆ ಮಧ್ಯಪ್ರದೇಶದ ನವೋದ್ಯಮ ನೀತಿಯಡಿ ಹಣಕಾಸು ನೆರವನ್ನು ನೀಡಲಾಗುತ್ತಿದೆ. ಈ ಪ್ರಯತ್ನಗಳಿಗಾಗಿ ಮತ್ತು ಈ ಕಾರ್ಯಕ್ರಮವನ್ನು ಆಯೋಜಿಸಿದುದಕ್ಕಾಗಿ ನಾನು ಮಧ್ಯ ಪ್ರದೇಶ ಸರಕಾರವನ್ನು, ದೇಶದ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಮತ್ತು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ.   
 
ಸ್ನೇಹಿತರೇ,

ನಿಮಗೆ ನೆನಪಿರಬಹುದು, 2014ರಲ್ಲಿ ನಮ್ಮ ಸರಕಾರ ರಚನೆಯಾದಾಗ ದೇಶದಲ್ಲಿ ಸುಮಾರು 300-400 ನವೋದ್ಯಮಗಳಿದ್ದವು. ಮತ್ತು ನವೋದ್ಯಮ ಎಂಬ ಶಬ್ದ, ಪದ ಕೇಳಿ ಬರುತ್ತಿರಲಿಲ್ಲ ಮತ್ತು ಆ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿರಲಿಲ್ಲ. ಆದರೆ ಇಂದು ಎಂಟು ವರ್ಷಗಳ  ಬಹಳ ಕಡಿಮೆ ಅವಧಿಯಲ್ಲಿ ಭಾರತದ ನವೋದ್ಯಮಗಳ ಜಗತ್ತಿನಲ್ಲಿ  ಸಂಪೂರ್ಣ ಪರಿವರ್ತನೆ ಆಗಿದೆ. ಇಂದು ನಮ್ಮ ದೇಶದಲ್ಲಿ ಸುಮಾರು 70 ಸಾವಿರ ಮಾನ್ಯತೆ ಪಡೆದ,ಗುರುತಿಸಲ್ಪಟ್ಟ ನವೋದ್ಯಮಗಳಿವೆ. ಇಂದು ಭಾರತವು ಜಗತ್ತಿನಲ್ಲಿಯೇ ಮೂರನೇ ಅತಿ ದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿದ ದೇಶವಾಗಿದೆ. ಜಗತ್ತಿನ ಅತ್ಯಂತ ದೊಡ್ಡ ಯುನಿಕಾರ್ನ್ ಹಬ್ ಗಳಲ್ಲಿ ನಾವು  ಪರಿಗಣಿಸಬೇಕಾದ ಶಕ್ತಿಯಾಗಿ ಮೂಡಿ ಬರುತ್ತಿದ್ದೇವೆ. ಭಾರತದಲ್ಲಿಂದು ನವೋದ್ಯಮವೊಂದು ಸರಾಸರಿ 8-10 ದಿನಗಳಲ್ಲಿ ಯೂನಿಕಾರ್ನ್ ಆಗಿ ಬದಲಾಗುತ್ತಿದೆ. ಸುಮ್ಮನೆ ಕಲ್ಪಿಸಿಕೊಳ್ಳಿ!. ಯೂನಿಕಾರ್ನ್ ಆಗಿ ಪರಿವರ್ತನೆ ಎಂದರೆ ಇಷ್ಟೊಂದು ಕಿರು ಅವಧಿಯಲ್ಲಿ ಶೂನ್ಯದಿಂದ ಆರಂಭ ಮಾಡಿ 7000 ಕೋ.ರೂ.ಗಳವರೆಗಿನ ಮೌಲ್ಯವನ್ನು ಗಳಿಸಿಕೊಳ್ಳುವುದು. ಮತ್ತು ಇಂದು ಪ್ರತೀ 8-10 ದಿನಗಳಲ್ಲಿ ಈ ದೇಶದಲ್ಲಿ ಹೊಸ ಯೂನಿಕಾರ್ನ್ ನ್ನು ನಮ್ಮ ಯುವ ಜನತೆ ಹುಟ್ಟು ಹಾಕುತ್ತಿದ್ದಾರೆ.  
 
 ಸ್ನೇಹಿತರೇ,

ಇದು ಭಾರತದ ಯುವಜನತೆಯ ಶಕ್ತಿ, ಯಶಸ್ಸಿನ ಹೊಸ ಎತ್ತರಗಳನ್ನು ಸಾಧಿಸುವ ಇಚ್ಛಾಶಕ್ತಿಗೆ ಒಂದು  ಉದಾಹರಣೆ. ಮತ್ತು ನಾನು ಆರ್ಥಿಕ ಜಗತ್ತಿನ ನೀತಿಗಳನ್ನು ಅಭ್ಯಸಿಸುತ್ತಿರುವ ತಜ್ಞರಿಗೆ ಒಂದು ಅಂಶವನ್ನು ಗಮನಿಸುವಂತೆ ಹೇಳುತ್ತೇನೆ. ಭಾರತದಲ್ಲಿ ನಮ್ಮ ನವೋದ್ಯಮಗಳ ಮೊತ್ತ, ಗಾತ್ರ ಬಹಳ ದೊಡ್ಡದಾಗಿದೆ ಮತ್ತು ಅದರ ವೈವಿಧ್ಯತೆಯೂ ಅಷ್ಟೇ ವಿಸ್ತಾರವಾಗಿದೆ. ನವೋದ್ಯಮಗಳು ಯಾವುದೇ ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ ಅಥವಾ ಕೆಲವೇ ಮೆಟ್ರೋ ನಗರಗಳಿಗೆ ಸೀಮಿತವಾಗಿರುವುದಲ್ಲ. ಈ ನವೋದ್ಯಮಗಳು ಭಾರತದ ಹಲವಾರು ರಾಜ್ಯಗಳಲ್ಲಿ ಮತ್ತು ಸಣ್ಣ ನಗರಗಳಲ್ಲಿ ಹರಡಿವೆ. ಇವೆಲ್ಲಕ್ಕಿಂತ ಮಿಗಿಲಾಗಿ ಸುಮಾರು 50ಕ್ಕೂ ಅಧಿಕ ವಿವಿಧ ಮಾದರಿಯ ನವೋದ್ಯಮಗಳು ವಿವಿಧ ಕೈಗಾರಿಕೋದ್ಯಮಗಳಿಗೆ ಸಂಬಂಧಿಸಿದವಾಗಿವೆ. ಇವುಗಳು ಪ್ರತೀ ರಾಜ್ಯ ಮತ್ತು ದೇಶದ 650ಕ್ಕೂ ಅಧಿಕ ಜಿಲ್ಲೆಗಳಲ್ಲಿ ಹರಡಿವೆ. ಸುಮಾರು 50 ಪ್ರತಿಶತದಷ್ಟು ನವೋದ್ಯಮಗಳು ಟಯರ್ 2 ಮತ್ತು ಟಯರ್ 3 ನಗರಗಳಲ್ಲಿವೆ. ಕೆಲವೊಮ್ಮೆ ಜನರಲ್ಲಿ ಒಂದು ನಂಬಿಕೆ ಇರುತ್ತದೆ, ನವೋದ್ಯಮಗಳೆಂದರೆ ಕಂಪ್ಯೂಟರಿಗೆ ಸಂಬಂಧಿಸಿದವು ಅಥವಾ ಯುವ ಜನತೆಯ ವ್ಯಾಪಾರೋದ್ಯಮ ಎಂಬ ಭಾವನೆ ಇರುತ್ತದೆ. ಇದು ಬರೇ ಭ್ರಮೆ. ವಾಸ್ತವ ಏನೆಂದರೆ ನವೋದ್ಯಮಗಳ ವ್ಯಾಪ್ತಿ ಬಹಳ ವಿಸ್ತಾರ. ನವೋದ್ಯಮಗಳು ನಮಗೆ ಕಠಿಣ ಸವಾಲುಗಳಿಗೆ ಸರಳ ಪರಿಹಾರಗಳನ್ನು ಒದಗಿಸುತ್ತವೆ. ಮತ್ತು ನಿನ್ನೆಯ ನವೋದ್ಯಮಗಳು ಇಂದು ಬಹುರಾಷ್ಟ್ರೀಯವಾಗುತ್ತಿರುವುದನ್ನು ನಾವು ಕಾಣಬಹುದಾಗಿದೆ. ಇಂದು ಕೃಷಿ, ರಿಟೈಲ್ ವ್ಯಾಪಾರ ಹಾಗು ಆರೋಗ್ಯ ವಲಯಗಳಲ್ಲಿ ಹೊಸ ನವೋದ್ಯಮಗಳು ಉದಯಿಸುತ್ತಿರುವುದು ನನಗೆ ಸಂತಸ ತಂದಿದೆ.

ಸ್ನೇಹಿತರೇ,

ಇಂದು ಜಗತ್ತು ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಕೊಂಡಾಡುವುದನ್ನು ನಾವು ಕೇಳುವಾಗ,  ಪ್ರತಿಯೊಬ್ಬ ಭಾರತೀಯರೂ ಹೆಮ್ಮೆಪಡುತ್ತಾರೆ. ಆದರೆ ಸ್ನೇಹಿತರೇ, ಅಲ್ಲೊಂದು ಪ್ರಶ್ನೆ ಇದೆ. ನವೋದ್ಯಮ ಶಬ್ದ 8 ವರ್ಷಗಳ ಹಿಂದೆ ತಾಂತ್ರಿಕ ಜಗತ್ತಿನ ಕೆಲವು ಕೋನಗಳಲ್ಲಿ ಚರ್ಚೆಯ ಭಾಗವಾಗಿತ್ತು. ಅದೀಗ ಸಾಮಾನ್ಯ ಭಾರತೀಯ ಯುವಜನತೆಯ ಕನಸುಗಳನ್ನು ಈಡೇರಿಸುವ ಶಕ್ತಿ ಶಾಲಿ ಮಾಧ್ಯಮವಾಗಿದೆ. ಅದು ಹೇಗೆ ಈ ಸಂಗತಿಯು ಅವರ ಪ್ರತಿನಿತ್ಯದ ಸಂಭಾಷಣೆಯ ಭಾಗವಾಯಿತು?. ಇಂತಹ ಒಂದು ಗಮನಾರ್ಹವಾದ ಬದಲಾವಣೆ ಹೇಗಾಯಿತು? ಅದು ಇದ್ದಕ್ಕಿದ್ದಂತೆ ಆದುದಲ್ಲ. ಸ್ಪಷ್ಟವಾದ ಗುರಿಗಳು, ಅತ್ಯಂತ ಚಿಂತನಾಶೀಲವಾಗಿ ರೂಪಿಸಲ್ಪಟ್ಟ ವ್ಯೂಹದ ಅಡಿಯಲ್ಲಿ ಸ್ಪಷ್ಟವಾಗಿ ಸೂಚಿಸಲಾದ ದಿಕ್ಕುಗಳಿಂದಾಗಿ ಈ ಬದಲಾವಣೆಗಳಾದವು ಮತ್ತು ನಾನು ಇಂದು  ಇಂದೋರಿನ ನೆಲದೆದುರು ನವೋದ್ಯಮಗಳ ಜಗತ್ತಿನ ಯುವಜನತೆಯನ್ನು ಭೇಟಿ ಮಾಡಿದ್ದೇನೆ. ಇಂದು ನಿಮಗೆ ಕೆಲವು ಸಂಗತಿಗಳನ್ನು ತಿಳಿಸಬೇಕು ಎಂಬ ಭಾವನೆ ನನ್ನದಾಗಿದೆ. ನವೋದ್ಯಮ ಕ್ರಾಂತಿ ಇಂದಿನ ಸ್ವರೂಪವನ್ನು ಹೇಗೆ ಪಡೆದುಕೊಂಡಿತು?. ಇದನ್ನು ಪ್ರತಿಯೊಬ್ಬ ಯುವಜನತೆಯೂ  ತಿಳಿದುಕೊಳ್ಳುವುದು ಬಹಳ ಅವಶ್ಯ ಎಂಬುದು ನನ್ನ ಭಾವನೆ. ಇದರಲ್ಲಿ ಪ್ರೇರಣೆಯೂ ಅಡಕವಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಇದು “ಅಜಾದಿ ಕಾ ಅಮೃತಕಾಲ”ಕ್ಕೆ ಬಹಳ ದೊಡ್ಡ ವೇಗವರ್ಧಕವಾಗಲಿದೆ.   

ಸ್ನೇಹಿತರೇ,

ಭಾರತದಲ್ಲಿ ಸದಾ ಕಾಲವೂ ಅನ್ವೇಷಣೆಗಾಗಿ ಮತ್ತು ಸಮಸ್ಯೆಗಳನ್ನು ಹೊಸ ಚಿಂತನೆಯಿಂದ ಪರಿಹರಿಸುವ ನಿಟ್ಟಿನಲ್ಲಿ ಒತ್ತಡ, ಆಸಕ್ತಿ  ಇತ್ತು. ಮಾಹಿತಿ ತಂತ್ರಜ್ಞಾನ ಕ್ರಾಂತಿ ಕಾಲದಲ್ಲಿ ಇದು  ಬಹಳ ಚೆನ್ನಾಗಿ ನಮ್ಮ ಅನುಭವಕ್ಕೆ ಬಂದಿದೆ. ಆದರೆ ದುರದೃಷ್ಟವಶಾತ್,  ಆ ಕಾಲದಲ್ಲಿ ಸಿಗಬೇಕಾಗಿದ್ದಂತಹ ಪ್ರೋತ್ಸಾಹ ಮತ್ತು ಬೆಂಬಲ ನಮ್ಮ ಯುವ ಜನತೆಗೆ ದೊರೆಯಲಿಲ್ಲ. ಐ.ಟಿ. ಕ್ರಾಂತಿಯಿಂದ ಅಭಿವೃದ್ಧಿಗೊಂಡ ಪರಿಸರವನ್ನು ಸೂಕ್ತ ರೀತಿಯಲ್ಲಿ ಮತ್ತು ಸೂಕ್ತ ದಿಕ್ಕಿನಲ್ಲಿ  ಬಳಸಿಕೊಳಬೇಕಾಗಿತ್ತು. ಆದರೆ ಅದಾಗಲಿಲ್ಲ. ನಾವು ಇಡೀ ದಶಕವು ಹಗರಣಗಳಲ್ಲಿ, ನೀತಿ ಏರು ಪೇರುಗಳಲ್ಲಿ ಮತ್ತು ಸ್ವಜನಪಕ್ಷಪಾತದಲ್ಲಿ ಮುಳುಗೇಳುತ್ತಿದ್ದುದನ್ನು ನೋಡಿದ್ದೇವೆ. ಈ ದೇಶದ ಒಂದು ತಲೆಮಾರಿನ ಕನಸುಗಳು ಕಮರಿ ಹೋದವು. ನಮ್ಮ ಯುವಜನತೆಯಲ್ಲಿ ಚಿಂತನೆಗಳಿದ್ದವು, ಅನ್ವೇಷಣೆಯತ್ತ ಆಸಕ್ತಿಯೂ, ತುಡಿತವೂ ಇತ್ತು ಆದರೆ ಪ್ರತಿಯೊಂದೂ ಹಿಂದಿನ ಸರಕಾರಗಳ ನೀತಿಗಳಲ್ಲಿ ಸಿಕ್ಕಿ ಹಾಕಿಕೊಂಡಿತ್ತು ಇಲ್ಲವೇ ನೀತಿಗಳಿಲ್ಲದೆ ಬಸವಳಿಯಿತು. 
 ಸ್ನೇಹಿತರೇ,

2014ರ ಬಳಿಕ ಚಿಂತನೆಗಳ ಈ ಶಕ್ತಿಯನ್ನು ಮತ್ತು ಯುವಜನತೆಯಲ್ಲಿರುವ ಅನ್ವೇಷಣೆಯ ಈ ಸ್ಫೂರ್ತಿ, ಉತ್ಸಾಹವನ್ನು  ನಾವು ಪರಿಷ್ಕರಿಸಿದೆವು. ನಾವು ಭಾರತದ ಯುವಜನತೆಯ ಶಕ್ತಿಯಲ್ಲಿ ನಂಬಿಕೆ ಇಟ್ಟೆವು. ನಾವು “ಚಿಂತನೆಯಿಂದ ಅನ್ವೇಷಣೆಯಿಂದ ಕೈಗಾರಿಕೋದ್ಯಮ”ಕ್ಕಾಗಿ ಸಂಪೂರ್ಣ ಹಾದಿಯನ್ನು ತಯಾರಿಸಿದೆವು ಮತ್ತು ಮೂರು ಸಂಗತಿಗಳ ಬಗ್ಗೆ ಗಮನ ಕೇಂದ್ರೀಕರಿಸಿದೆವು.

ಮೊದಲನೆಯದ್ದು-“ಚಿಂತನೆ,ಅನ್ವೇಷಣೆ, ಇನ್ಕ್ಯುಬೇಟ್ ಮತ್ತು ಕೈಗಾರಿಕೋದ್ಯಮ” ಕ್ಕೆ ಸಂಯೋಜಿಸಲ್ಪಟ್ಟ ಸಂಸ್ಥೆಗಳಲ್ಲಿ ಮೂಲಸೌಕರ್ಯ ನಿರ್ಮಾಣ.

ಎರಡನೆಯದ್ದು-ಸರಕಾರಿ ಪ್ರಕ್ರಿಯೆಗಳ ಸರಳೀಕರಣ.

ಮೂರನೆಯದ್ದು-ಅನ್ವೇಷಣೆಗಾಗಿ ಮನಸ್ಥಿತಿಯ ಪರಿವರ್ತನೆ; ಹೊಸ ಪರಿಸರ ವ್ಯವಸ್ಥೆಯ ನಿರ್ಮಾಣ.

 ಸ್ನೇಹಿತರೇ,

ಈ ಎಲ್ಲಾ ಸಂಗತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ವಿವಿಧ ರಂಗಗಳಲ್ಲಿ ಒಗ್ಗೂಡಿ ಕಾರ್ಯತತ್ಪರರಾದೆವು. ಇವುಗಳಲ್ಲಿ ಒಂದು ಹ್ಯಾಕಥಾನ್ ಗಳು. ಏಳು-ಎಂಟು ವರ್ಷಗಳಿಗೆ ಹಿಂದೆ, ದೇಶದಲ್ಲಿ ಹ್ಯಾಕಥಾನ್ ಗಳು ನಡೆಯಲಾರಂಭಿಸಿದಾಗ ಅವುಗಳು ನವೋದ್ಯಮಗಳಿಗೆ ಬಲಿಷ್ಠ ನೆಲೆಗಟ್ಟು ಹಾಕಬಲ್ಲವು ಎಂಬ ಚಿಂತನೆ, ಭಾವನೆ ಯಾರಿಗೂ ಇರಲಿಲ್ಲ. ನಾವು ದೇಶದ ಯುವಜನತೆಯ ಎದುರು ಸವಾಲನ್ನು ಎಸೆದೆವು. ಮತ್ತು ಯುವಜನತೆ ಸವಾಲನ್ನು ಅಂಗೀಕರಿಸಿತು ಮತ್ತು ಪರಿಹಾರಗಳನ್ನು ಮುಂದಿಟ್ಟಿತು. ದೇಶದ ಲಕ್ಷಾಂತರ ಯುವಜನತೆ ಜೀವನದಲ್ಲಿ ಒಂದು ಉದ್ದೇಶ ಕಂಡರು ಮತ್ತು ಹ್ಯಾಕಥಾನ್ ನಿಂದಾಗಿ ಅವರಲ್ಲಿ ಜವಾಬ್ದಾರಿಯ ಭಾವನೆ ಹೆಚ್ಚಿತು. ದೇಶವು ಎದುರಿಸುತ್ತಿರುವ ದೈನಂದಿನ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ತಾವೂ ಕಾಣಿಕೆ ಕೊಡಬಹುದು ಎಂಬ ಭಾವನೆಯನ್ನು ಉದ್ದೀಪಿಸಿತು. ಈ ಉತ್ಸಾಹ ನವೋದ್ಯಮಗಳ ಉಗಮಕ್ಕೆ ವೇದಿಕೆಯನ್ನು ಒದಗಿಸಿತು. ನಾವು ಸರಕಾರದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಬಗ್ಗೆಯೇ ಮಾತನಾಡುವುದಾದರೆ ಸುಮಾರು 15 ಲಕ್ಷ ಇಂತಹ ಪ್ರತಿಭಾಸಂಪನ್ನ ಯುವಜನರು ಕಳೆದ ವರ್ಷಗಳಲ್ಲಿ ಇದರ ಜೊತೆ ಸಂಯೋಜಿಸಲ್ಪಟ್ಟಿದ್ದಾರೆ. ಬಹುಷಃ ಇಲ್ಲಿ ಕುಳಿತಿರುವ ನಿಮ್ಮಲ್ಲಿಯೂ ಕೆಲವರು ಇದರ ಅಂಗವಾಗಿರಬಹುದು. ಅಂತಹ ಹ್ಯಾಕಥಾನ್ ಗಳಲ್ಲಿ ಕಲಿಯುವುದಕ್ಕೆ ಮತ್ತು ಅರ್ಥಮಾಡಿಕೊಳ್ಳುವುದಕ್ಕೆ ಹಲವಾರು ಹೊಸ ಸಂಗತಿಗಳು ಇದ್ದುದನ್ನು ನಾನು ನೆನಪಿಟ್ಟುಕೊಂಡಿದ್ದೇನೆ, ಯಾಕೆಂದರೆ ನಾನದನ್ನು ಆನಂದಿಸಿದ್ದೇನೆ!. ಎರಡು ದಿನಗಳ ಕಾಲ ಯುವಜನತೆಯ ಹ್ಯಾಕಥಾನ್ ಕಾರ್ಯಚಟುವಟಿಕೆಯ ಮೇಲೆ ನಾನೂ ನಿಕಟ ನಿಗಾ ಇಡುತ್ತಿದ್ದೆ. ನಾನೂ ರಾತ್ರಿ 12,1,2 ಗಂಟೆಯವರೆಗೂ ಅವರೊಂದಿಗೆ ಗುಂಪು ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದೆ. ನಾನವರ ಹವ್ಯಾಸಗಳನ್ನು, ಬದ್ಧತೆಯನ್ನು ಗಮನಿಸುತ್ತಿದ್ದೆ. ನಾನವರ ಕಾರ್ಯಚಟುವಟಿಕೆಗಳನ್ನು,ಅವರು ಸಮಸ್ಯೆಗಳನ್ನು ಪರಿಹರಿಸುತ್ತಿದ್ದ ರೀತಿಯನ್ನು ಮತ್ತು ಯಶಸ್ಸು ದೊರೆತಾಗ ಕಾಂತಿಯಿಂದ  ಕೂಡಿದ  ಅವರ ಮುಖಗಳನ್ನು ನೋಡುತ್ತಿದ್ದೆ. ನಾನು ಈ ಎಲ್ಲ ಸಂಗತಿಗಳನ್ನು ನಿಕಟವಾಗಿ ಗಮನಿಸುತ್ತಿದ್ದೆ. ಮತ್ತು ಈಗ ಕೂಡಾ ದೇಶದ ಯಾವುದಾದರೊಂದು ಭಾಗದಲ್ಲಿ ಹ್ಯಾಕಥಾನ್ ನಡೆಯುತ್ತಿರುವುದು ತಿಳಿದು ನನಗೆ ಸಂತೋಷವಾಗುತ್ತಿದೆ. ಅಂದರೆ ದೇಶವು ನವೋದ್ಯಮಗಳನ್ನು ನಿರ್ಮಾಣ ಮಾಡುವ ಪ್ರಾರಂಭಿಕ ಪ್ರಕ್ರಿಯೆಯ ಮೇಲೆ ನಿರಂತರವಾಗಿ ಕಾರ್ಯನಿರತವಾಗಿದೆ.

ಸ್ನೇಹಿತರೇ,

7 ವರ್ಷಗಳ ಹಿಂದೆ ನವೋದ್ಯಮ ಭಾರತ ಆಂದೋಲನವು “ಚಿಂತನೆಯಿಂದ ಕೈಗಾರಿಕೋದ್ಯಮಕ್ಕೆ” ಕಲ್ಪನೆಯನ್ನು ಸಾಂಸ್ಥೀಕರಣಗೊಳಿಸುವ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿತ್ತು. ಇಂದು ಅದು ಚಿಂತನೆಗಳನ್ನು ಕೈಗಾರಿಕೋದ್ಯಮವಾಗಿ ಮಾರ್ಪಡಿಸುವ ಪ್ರಮುಖ ಮಾಧ್ಯಮವಾಗಿದೆ. ಇದರ ಮುಂದಿನ ವರ್ಷ ನಾವು ದೇಶದಲ್ಲಿ ಅನ್ವೇಷಣಾ ಮನೋಭಾವವನ್ನು ಮೂಡಿಸಲು ಅಟಲ್ ಅನ್ವೇಷಣಾ ಮಿಶನ್ ಆರಂಭ ಮಾಡಿದೆವು. ಇದರಡಿ, ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ನಿಂದ ಹಿಡಿದು ಇನ್ಕ್ಯುಬೇಶನ್ ಸೆಂಟರ್ ಗಳನ್ನು ಆರಂಭಿಸಿ  ಮತ್ತು ವಿಶ್ವವಿದ್ಯಾಲಯಗಳಲ್ಲಿ ಹ್ಯಾಕಥಾನ್ ಗಳವರೆಗೆ ಬೃಹತ್ ಪರಿಸರ ವ್ಯವಸ್ಥೆಯನ್ನು ನಿರ್ಮಾಣ ಮಾಡಲಾಯಿತು. ಇಂದು ದೇಶಾದ್ಯಂತ 10 ಸಾವಿರಕ್ಕೂ ಅಧಿಕ  ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 75 ಲಕ್ಷಕ್ಕೂ ಅಧಿಕ ಮಕ್ಕಳು ಆಧುನಿಕ ತಂತ್ರಜ್ಞಾನದ ಅರಿವು ಪಡೆಯುತ್ತಿದ್ದಾರೆ ಮತ್ತು ಅನ್ವೇಷಣೆಯ ಆ, ಆ, ಇ, ಈ ..ಕಲಿಯುತ್ತಿದ್ದಾರೆ. ದೇಶಾದ್ಯಂತ ನಿರ್ಮಿಸಲಾದ ಈ ಅಟಲ್ ಟಿಂಕರಿಂಗ್ ಲ್ಯಾಬ್ ಗಳು ನವೋದ್ಯಮಗಳಿಗೆ ಶಿಶುವಿಹಾರದ ತರಗತಿಗಳಂತಾಗಿವೆ. ವಿದ್ಯಾರ್ಥಿ ಕಾಲೇಜು ತಲುಪಿದಾಗ ಆತ ಹೊಂದಿರುವ ಚಿಂತನೆಯನ್ನು ಪೋಷಿಸಲು 700ಕ್ಕೂ ಅಧಿಕ ಅಟಲ್ ಇನ್ಕ್ಯುಬೇಶನ್  ಪ್ರಯೋಗಾಲಯಗಳು ಸ್ಥಾಪನೆಯಾಗಿರುತ್ತವೆ. ರಾಷ್ತ್ರದಲ್ಲಿ ಜಾರಿಯಾಗಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ನಮ್ಮ ವಿದ್ಯಾರ್ಥಿಗಳಲ್ಲಿ ಅನ್ವೇಷಣಾ ಮನೋಭಾವವನ್ನು ಇನ್ನಷ್ಟು ಹೆಚ್ಚಿಸಲು ಸಹಕಾರಿಯಾಗಲಿದೆ.
 
ಸ್ನೇಹಿತರೇ,

 ಪೋಷಣೆಯ (ಇನ್ಕ್ಯುಬೇಶನ್ ) ಜೊತೆ ನವೋದ್ಯಮಗಳಿಗೆ ಹಣಕಾಸು ಕೂಡಾ ಬಹಳ ಮುಖ್ಯ. ಸರಕಾರದ ದೃಢ ನಿರ್ಧಾರಗಳಿಂದಾಗಿ ಅವುಗಳಿಗೆ ಸಹಾಯ ಲಭಿಸುತ್ತಿದೆ. ಅದರ ಪರವಾಗಿ ಸರಕಾರ ಹಣಕಾಸು ನಿಧಿಗಳ ನಿಧಿಯನ್ನು ರೂಪಿಸಿದೆ ಮಾತ್ರವಲ್ಲದೆ ನವೋದ್ಯಮಗಳು ಖಾಸಗಿ ವಲಯದೊಂದಿಗೆ ಕೈಜೋಡಿಸುವಂತೆ ಮಾಡಲು ವಿವಿಧ ವೇದಿಕೆಗಳನ್ನೂ ನಿರ್ಮಾಣ ಮಾಡಿದೆ. ಇಂತಹದೇ ಕ್ರಮಗಳ ಮೂಲಕ ಇಂದು ಕೋಟ್ಯಂತರ ರೂಪಾಯಿಗಳ ಖಾಸಗಿ ಹೂಡಿಕೆ ನವೋದ್ಯಮ ಪರಿಸರ ವ್ಯವಸ್ಥೆಯಲ್ಲಿ ಸೇರ್ಪಡೆಯಾಗಿದೆ. ಮತ್ತು ಅದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

 ಸ್ನೇಹಿತರೇ,

ದೇಶದಲ್ಲಿ ವರ್ಷಗಳಿಂದ ತೆರಿಗೆ ವಿನಾಯತಿಗಳು ಮತ್ತು ಇತರ ಪ್ರೋತ್ಸಾಹಗಳನ್ನು ನೀಡುವಂತಹ ಹಲವಾರು ಸುಧಾರಣೆಗಳನ್ನು ನಿರಂತರವಾಗಿ ಮಾಡುತ್ತಲೇ ಬರಲಾಗಿದೆ. ಬಾಹ್ಯಾಕಾಶ ವಲಯದಲ್ಲಿ ಮ್ಯಾಪಿಂಗ್, ಡ್ರೋನ್ ಗಳು ಇತ್ಯಾದಿ ತಾಂತ್ರಿಕ ಅಂಶಗಳ ಸಹಿತ ವಿವಿಧ ಸುಧಾರಣೆಗಳನ್ನು ಮಾಡುವ ಮೂಲಕ ನವೋದ್ಯಮಗಳಿಗಾಗಿ ಹೊಸ ಕ್ಷೇತ್ರಗಳ ಬಾಗಿಲನ್ನು ತೆರೆಯಲಾಗಿದೆ.

  ಸ್ನೇಹಿತರೇ,

ನಾವು ನವೋದ್ಯಮಗಳ ಇನ್ನೊಂದು ಆವಶ್ಯಕತೆಯ ಬಗ್ಗೆಯೂ ಆದ್ಯ ಗಮನ ನೀಡಿದ್ದೇವೆ. ನವೋದ್ಯಮ ಸ್ಥಾಪನೆಯಾದ ಬಳಿಕ ಮತ್ತು ಅದರ ಸೇವೆಗಳು ಹಾಗು ಉತ್ಪನ್ನಗಳು ಸುಲಭದಲ್ಲಿ ಮಾರುಕಟ್ಟೆಗೆ ತಲುಪಿದಾಗ ಅವುಗಳಿಗೆ ಸರಕಾರದ ರೂಪದಲ್ಲಿ ಪ್ರಮುಖ ಖರೀದಿದಾರರು ಲಭಿಸುತ್ತಾರೆ. ಇದಕ್ಕಾಗಿ ಭಾರತ ಸರಕಾರ  ಜಿ.ಇ.ಎಂ. ಪೋರ್ಟಲಿನಲ್ಲಿ ವಿಶೇಷ ಪ್ರಸ್ತಾವನೆಯನ್ನು ಮಾಡಿಕೊಟ್ಟಿದೆ. ಇಂದು ಜಿ.ಇ.ಎಂ. ಪೋರ್ಟಲಿನಲ್ಲಿ 13 ಸಾವಿರಕ್ಕೂ ಅಧಿಕ ನವೋದ್ಯಮಗಳು ನೊಂದಾಯಿಸಲ್ಪಟ್ಟಿವೆ.ಮತ್ತು ಈ ಪೋರ್ಟಲ್ ಮೂಲಕ ನವೋದ್ಯಮಗಳು 6500 ಕೋ.ರೂ.ಗಳಿಗೂ ಅಧಿಕ ಮೊತ್ತದ ವಹಿವಾಟು ನಡೆಸಿವೆ ಎಂಬುದನ್ನು ತಿಳಿದುಕೊಂಡರೆ ನೀವು ಸಂತೋಷಪಡುತ್ತೀರಿ.

 ಸ್ನೇಹಿತರೇ,

 ಇನ್ನೊಂದು ಪ್ರಮುಖ ಕೆಲಸ ಮಾಡಲಾಗಿರುವುದು ಆಧುನಿಕ ಮೂಲಸೌಕರ್ಯ ವಲಯದಲ್ಲಿ. ಡಿಜಿಟಲ್ ಇಂಡಿಯಾವು ನವೋದ್ಯಮ ಪರಿಸರ ವ್ಯವಸ್ಥೆಯ ವಿಸ್ತರಣೆಯಲ್ಲಿ ಬಹಳ ದೊಡ್ದ ಒತ್ತನ್ನು ನೀಡಿದೆ. ಕಡಿಮೆ ದರದಲ್ಲಿ ಸ್ಮಾರ್ಟ್ ಫೋನ್ ಮತ್ತು ಕಡಿಮೆ ದರದಲ್ಲಿ ದತ್ತಾಂಶಗಳು ಮಧ್ಯಮ ವರ್ಗದವರನ್ನು ಮತ್ತು ಗ್ರಾಮೀಣ ಬಡವರನ್ನು ಜೋಡಿಸಿವೆ. ಇದರಿಂದ ನವೋದ್ಯಮಗಳಿಗೆ ಹೊಸ ಮಾರುಕಟ್ಟೆ ಮತ್ತು ಹೊಸ ಅವಕಾಶಗಳು ತೆರೆಯಲ್ಪಟ್ಟಿವೆ. ಇಂತಹ “ಚಿಂತನೆಯಿಂದ ಕೈಗಾರಿಕೋದ್ಯಮದತ್ತ” ಪ್ರಯತ್ನಗಳ ಫಲವಾಗಿ ಇಂದು ನವೋದ್ಯಮಗಳು ಮತ್ತು ಯೂನಿಕಾರ್ನ್ ಗಳು  ದೇಶದ ಲಕ್ಷಾಂತರ ಯುವಜನತೆಗೆ ಉದ್ಯೋಗವನ್ನು ಒದಗಿಸುತ್ತಿವೆ.

ಸ್ನೇಹಿತರೇ,

 ನವೋದ್ಯಮವೇ ನಿರಂತರವಾಗಿ ಅನ್ವೇಷಣೆಗೆ ಒಳಪಡುತ್ತಿರುತ್ತದೆ. ಅದು ಭೂತಕಾಲದ ಬಗ್ಗೆ ಮಾತನಾಡುವುದಿಲ್ಲ. ನವೋದ್ಯಮದ ಮೂಲ ಗುಣ ಇದು. ಅದು ಸದಾ ಭವಿಷ್ಯದ ಬಗ್ಗೆ ಮಾತನಾಡುತ್ತದೆ. ಇಂದು, ಸ್ವಚ್ಛ ಇಂಧನದಿಂದ ಹಿಡಿದು, ವಾತಾವರಣ ಬದಲಾವಣೆ, ಆರೋಗ್ಯ ರಕ್ಷಣೆವರೆಗೆ ಇಂತಹ ಕ್ಷೇತ್ರಗಳಲ್ಲಿ ಅನ್ವೇಷಣೆ ಮಾಡಲು ನವೋದ್ಯಮಗಳಿಗೆ ಅಪರಿಮಿತವಾದಂತಹ ಅವಕಾಶಗಳಿವೆ. ನವೋದ್ಯಮಗಳು ನಮ್ಮ ದೇಶದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲವು. ಅದೇ ರೀತಿ ನವೋದ್ಯಮಗಳು ವೋಕಲ್ ಫಾರ್ ಲೋಕಲ್ ಗಾಗಿ ಜನಾಂದೋಲನವನ್ನು ಬಲಪಡಿಸಲು ಬಹಳಷ್ಟನ್ನು ಮಾಡಬಲ್ಲವು. ನಮ್ಮ ದೇಶದ ಗುಡಿ ಕೈಗಾರಿಕೆ ಮತ್ತು ಕೈಮಗ್ಗಗಳು ಹಾಗು ನೇಕಾರರು ಮಾಡಿದ ಶ್ಲಾಘನೀಯ ಕಾರ್ಯವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಒಯ್ಯಲು ಮತ್ತು ಅವುಗಳಿಗೆ ಬ್ರ್ಯಾಂಡಿಂಗ್ ಒದಗಿಸಲು ಬಹಳ ದೊಡ್ಡ ಜಾಲ ಮತ್ತು ವೇದಿಕೆಯನ್ನು ಒದಗಿಸಬಲ್ಲವು. ಭಾರತದ ನಮ್ಮ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು , ಅರಣ್ಯವಾಸಿಗಳು ಬಹಳಷ್ಟು ಸುಂದರ ಉತ್ಪನ್ನಗಳನ್ನು ತಯಾರಿಸಬಲ್ಲರು. ಇವುಗಳು ಕೂಡಾ ನವೋದ್ಯಮಗಳಿಗೆ ಕೆಲಸ ಮಾಡಲು ಹೊಸ ಕ್ಷೇತ್ರಗಳಾಗಬಲ್ಲವು. ಅದೇ ರೀತಿ ಮೊಬೈಲ್ ಗೇಮಿಂಗ್ ನಲ್ಲಿ ಭಾರತ ಜಗತ್ತಿನಲ್ಲಿಯೇ ಉನ್ನತ 5 ನೇ ಸ್ಥಾನದಲ್ಲಿದೆ. ಭಾರತದ ಆಟದ ಉದ್ಯಮದ (ಗೇಮಿಂಗ್ ಇಂಡಸ್ಟ್ರಿ) ಬೆಳವಣಿಗೆ ದರ ಪ್ರತಿಶತ 40ಕ್ಕೂ ಅಧಿಕವಿದೆ. ಈ ಬಜೆಟಿನಲ್ಲಿ ನಾವು  ಎ.ವಿ.ಜಿ.ಸಿ.ಅಂದರೆ ಆನಿಮೇಶನ್, ವಿಶುವಲ್ ಪರಿಣಾಮ,ಆಟಗಳು ಮತ್ತು ಕಾಮಿಕ್ ವಲಯಕ್ಕೆ ಹೆಚ್ಚಿನ ಬೆಂಬಲ ನೀಡಲು ಒತ್ತು ಕೊಟ್ಟಿದ್ದೇವೆ. ಭಾರತದ ನವೋದ್ಯಮಗಳಿಗೆ ಇದು ಕೂಡಾ ಒಂದು ಬಹಳ ದೊಡ್ಡ ವಲಯ. ಇದರಲ್ಲಿ ಅವು ಮುಂಚೂಣಿ ಪಾತ್ರವನ್ನು ವಹಿಸಬಹುದು.  ಇಂತಹದರಲ್ಲಿ ಒಂದು ಕ್ಷೇತ್ರವೆಂದರೆ ಆಟಿಕೆಗಳದ್ದು. ಗೊಂಬೆಗಳ ಉದ್ಯಮದ್ದು. ಆಟಿಕೆಗಳು, ಗೊಂಬೆಗಳಿಗೆ ಸಂಬಂಧಿಸಿ ಭಾರತವು ಬಹಳ ಶ್ರೀಮಂತವಾದ ಪರಂಪರೆಯನ್ನು ಹೊಂದಿದೆ. ಭಾರತದ ನವೋದ್ಯಮಗಳು ಇದನ್ನು ಇಡೀ ಜಗತ್ತಿಗೆ ಆಕರ್ಷಣೆಯ ಕೇಂದ್ರವಾಗಿಸಲು ಸಾಧ್ಯವಿದೆ. ಪ್ರಸ್ತುತ ಆಟಿಕೆಗಳ ಕ್ಷೇತ್ರದ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಪಾಲು ಶೇಕಡಾ ಒಂದಕ್ಕಿಂತಲೂ ಕಡಿಮೆ ಇದೆ. ನನ್ನ ದೇಶದ ಯುವ ಜನರು, ಚಿಂತನೆಗಳೊಂದಿಗೆ ಬದುಕುತ್ತಿರುವ ಯುವಜನರು ಈ ಪಾಲನ್ನು ಹೆಚ್ಚಿಸಲು ಏನಾದರೂ ಮಾಡಬಹುದು. ನೀವು ಈ ನವೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಮತ್ತು ಬಹಳ ದೊಡ್ಡ ಕೊಡುಗೆ ನೀಡಬಹುದು. ಭಾರತದ 800 ಕ್ಕೂ ಅಧಿಕ ನವೋದ್ಯಮಗಳು ಕ್ರೀಡಾ ಕ್ಷೇತ್ರದೊಂದಿಗೆ ಸಂಪರ್ಕಿಸಲ್ಪಟ್ಟಿವೆ ಎಂಬುದನ್ನು ಹೇಳಲು ನಾನು ಸಂತೋಷಪಡುತ್ತೇನೆ. ಇದನ್ನು ಕೇಳಿ ನಿಮಗೂ  ಸಂತೋಷವಾಗುತ್ತದೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ. ಇದೂ ಒಂದು ಕ್ಷೇತ್ರವಾಗಬಹುದು ಎಂಬುದನ್ನು ಯಾರೂ ಕಲ್ಪಿಸಿರಲಿಲ್ಲ. ಇದರಲ್ಲಿ ಕೂಡಾ ಕ್ರೀಡಾಳು  ಸಂಸ್ಕೃತಿ, ಕ್ರೀಡಾ ಸ್ಫೂರ್ತಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕ್ಷೇತ್ರದಲ್ಲಿಯೂ ನವೋದ್ಯಮಗಳಿಗೆ  ಹಲವಾರು ಸಾಧ್ಯತೆಗಳು, ಅವಕಾಶಗಳು ಇವೆ. 
 

ಸ್ನೇಹಿತರೇ,

ದೇಶದ ಯಶಸ್ಸಿಗೆ ನಾವು ಹೊಸ ಚಲನೆಯನ್ನು ನೀಡಬೇಕಾಗಿದೆ. ನಾವದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕಾಗಿದೆ. ಇಂದು ಭಾರತವು ಜಿ-20 ರಾಷ್ಟ್ರಗಳಲ್ಲಿ ಅತ್ಯಂತ ತ್ವರಿತಗತಿಯಿಂದ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಭಾರತವು ಜಗತ್ತಿನಲ್ಲಿಯೇ ಮೂರನೇಯ ಬೃಹತ್ ಆರ್ಥಿಕತೆಯಾಗಿದೆ. ಸ್ಮಾರ್ಟ್ ಫೋನ್ ದತ್ತಾಂಶ ಬಳಕೆಯಲ್ಲಿ ಇಂದು ಭಾರತವು ಜಗತ್ತಿಗೇ ಮೊದಲ ಸ್ಥಾನದಲ್ಲಿದೆ. ಅಂತರ್ಜಾಲ ಬಳಕೆದಾರರ ಸಂಖ್ಯೆಯಲ್ಲಿ ಭಾರತವು ಜಗತ್ತಿನಲ್ಲಿಯೇ ಎರಡನೇಯ ಸ್ಥಾನದಲ್ಲಿದೆ. ಜಾಗತಿಕ ರಿಟೈಲ್ ಸೂಚ್ಯಂಕದಲ್ಲಿ ಭಾರತವು ಎರಡನೇಯ ಸ್ಥಾನದಲ್ಲಿದೆ. ಇಂಧನ ಬಳಕೆಯಲ್ಲಿ ಭಾರತವು ಜಗತ್ತಿನಲ್ಲಿಯೇ ಮೂರನೇ ಅತಿ ದೊಡ್ಡ ರಾಷ್ಟ್ರವಾಗಿದೆ. ಜಗತ್ತಿನ ಮೂರನೇಯ ಅತಿ ದೊಡ್ಡ ಬಳಕೆದಾರ ಮಾರುಕಟ್ಟೆ ಎಂದರೆ ಭಾರತ. ಭಾರತವು ಕಳೆದ ಹಣಕಾಸು ವರ್ಷದಲ್ಲಿ ಡಾಲರ್ 417 ಬಿಲಿಯನ್ನಿಗೂ ಅಧಿಕ ಮೌಲ್ಯದ ಅಂದರೆ ರೂ. 30 ಲಕ್ಷ ಕೋಟಿ ಮೌಲ್ಯದ ವಸ್ತುಗಳನ್ನು ರಫ್ತು ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಭಾರತವು ತನ್ನ ಮೂಲ ಸೌಕರ್ಯವನ್ನು ಆಧುನೀಕರಿಸಲು ಇಂದು ಹಿಂದೆಂದೂ ಮಾಡದಿರುವಷ್ಟು ಹಣಕಾಸನ್ನು ಹೂಡಿಕೆ ಮಾಡುತ್ತಿದೆ. ಜೀವಿಸಲು ಅನುಕೂಲಕರ ವಾತಾವರಣ ನಿರ್ಮಾಣ ಮತ್ತು ವ್ಯಾಪಾರೋದ್ಯಮಕ್ಕೆ ಅನುಕೂಲಕರ ತಾಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಭಾರತ ಅಭೂತಪೂರ್ವ ಒತ್ತು ನೀಡುತ್ತಿದೆ. ಇವೆಲ್ಲವೂ ಯಾವುದೇ ಭಾರತೀಯನನ್ನು ಹೆಮ್ಮೆ ಪಡುವಂತೆ ಮಾಡುತ್ತವೆ. ಈ ಎಲ್ಲಾ ಪ್ರಯತ್ನಗಳು ಭರವಸೆ, ವಿಶ್ವಾಸದ ಭಾವನೆಯನ್ನು ಮೂಡಿಸುತ್ತವೆ. ಭಾರತದ ಬೆಳವಣಿಗೆಯ ಕಥೆ, ಭಾರತದ ಯಶೋಗಾಥೆ ಈ ದಶಕದಲ್ಲಿ ಹೊಸ ಹುರುಪಿನೊಂದಿಗೆ ಮುಂದೆ ಸಾಗಲಿದೆ. ಇದು ಭಾರತದ “ಅಜಾದಿ ಕಾ ಅಮೃತ ಮಹೋತ್ಸವ”ದ ಕಾಲಘಟ್ಟ. ನಾವು ನಮ್ಮ ಸ್ವಾತಂತ್ರ್ಯದ 75 ವರ್ಷಗಳನ್ನು ಆಚರಿಸುತ್ತಿದ್ದೇವೆ. ನಾವು ಇಂದು ಏನನ್ನು ಮಾಡುತ್ತಿದ್ದೇವೆಯೋ ಅದರಿಂದ ನವ ಭಾರತದ ಭವಿಷ್ಯ ಮತ್ತು ದೇಶದ ದಿಕ್ಕು ನಿರ್ಧರಿಸಲ್ಪಡಲಿದೆ. ಈ ದೃಢ ಪ್ರಯತ್ನಗಳ ಮೂಲಕ ನಾವು 135 ಕೋಟಿ ಆಶೋತ್ತರಗಳನ್ನು ಈಡೇರಿಸಲು ಸಮರ್ಥರಾಗಲಿದ್ದೇವೆ. ಭಾರತದ ನವೋದ್ಯಮ ಕ್ರಾಂತಿ ಈ “ಅಮೃತ ಕಾಲ”ದ ಪ್ರಮುಖ ಹೆಗ್ಗುರುತಾಗಲಿದೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ. ಎಲ್ಲಾ ಯುವಜನತೆಗೆ ನನ್ನ ಶುಭ ಹಾರೈಕೆಗಳು.
 
ಮಧ್ಯಪ್ರದೇಶ ಸರಕಾರಕ್ಕೆ ಕೂಡಾ ಹೃದಯಪೂರ್ವಕ ಅಭಿನಂದನೆಗಳು!

ಬಹಳ ಧನ್ಯವಾದಗಳು

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
IIT Delhi tops India in QS Rankings 2027; 52 Indian institutions feature

Media Coverage

IIT Delhi tops India in QS Rankings 2027; 52 Indian institutions feature
NM on the go

Nm on the go

Always be the first to hear from the PM. Get the App Now!
...
Text of Prime Minister addresses the Indian Community in Paris
June 18, 2026

नमस्ते!

बों जू!

ऐसा लग रहा है, आप सब छुट्टी के मूड में हैं।

साथियों,

ये पेरिस शहर, Lights का शहर है, रंगों का शहर है, यहां Art है, Ideas हैं, और innovation की प्रेरणा भी है। इस शहर को भारत के अलग-अलग राज्यों से आए आप सभी लोग और भी खूबसूरत बना देते हैं। नए नए रंगों से भर देते हैं।

कोई तमिल है, कोई पंजाबी है, कोई गुजराती है, तो कोई मराठी है, और कोई बंगाली है। भारत के हर कोने का प्रतिनिधित्व यहां दिखाई देता है।

साथियों,

मैं जब 14 जून को नीस पहुंचा था तो सबसे पहले भारत इनोवेट्स कार्यक्रम में शामिल हुआ था। आज जब मैं फ्रांस से वापसी की तैयारी में हूं तो लग रहा है जैसे भारत कनेक्ट्स कार्यक्रम में आ गया हूं।

फ्रांस में रहने वाले आप लोगों ने 21वीं सदी के भारत-फ्रांस रिश्तों को जिस तरह कनेक्ट किया है, वो हमारी Strategic Partnership की बहुत बड़ी ताकत बन रही है। मैं आप सभी के लिए भारत से 140 करोड़ देशवासियों की शुभकामनाएं लेकर आया हूं। इस आत्मीय स्वागत के लिए, मैं आप सभी का हृदय से आभार व्यक्त करता हूं।

साथियों,

आज मैं ऐसे समय में फ्रांस आया हूं जब कुछ ही दिन पहले हमारी सरकार के 12 वर्ष पूरे हुए हैं। चुने हुए प्रधानमंत्री के रूप निरंतर 12 साल तक देश की सेवा करना मेरे जीवन का बहुत बड़ा सौभाग्य रहा है। यह भारत के लोकतंत्र की शक्ति है जिसने एक चायवाले को यहां तक पहुंचा दिया।

साथियों,

बीते 12 वर्ष, 140 करोड़ भारतीयों के अद्भुत सामर्थ्य के रहे हैं। 12 साल के इस कालखंड में भारत का GDP दोगुना हुआ है। Airports की संख्या दोगुनी हुई है। Universities की संख्या भी दोगुनी हो गई है। Highway Construction की स्पीड तीन गुना बढ़ गई। और Metro Network, चार गुणा बड़ा हो गया है।

मैं आपको कुछ और फैक्ट्स दूंगा, उससे आप अंदाजा लगा पाएंगे कि भारत किस स्पीड और कितने बड़े स्केल पर काम कर रहा है। पिछले 12 वर्षों में भारत का Defence Export 35 गुणा यानि Thirty Five Times बढ़ गया है।

औऱ एक फैक्ट सुनिए भारत में मोबाइल मैन्यूफैक्टरिंग यूनिट्स में, 100 गुणा की बढ़ोतरी हुई है। 100 times. भारत अब दुनिया का दूसरा सबसे बड़ा mobile phone manufacturer है। इसी गति, इसी प्रगति का नतीजा है कि आज भारत दुनिया की Fastest Growing Major Economy है।

साथियों,

आज भारत की कहानी सिर्फ Economic Progress की कहानी नहीं है। सिर्फ यहाँ अटक नहीं जाती है। ये Social Transformation की भी कहानी है।

पिछले 12 साल में देश में 25 करोड़ लोग गरीबी से बाहर निकले हैं। यानि एक ऐसी प्रगति जिसका लाभ समाज के अंतिम व्यक्ति तक पहुंच रहा है। फ्रांस में जितने घर हैं, उससे भी अधिक पक्के घर बीते 12 वर्ष में हमने जरूरतमंदों के लिए बनाए हैं।

अब हर परिवार के पास, गरीब से गरीब क्यों न हो, Bank Account है। Financial Inclusion एक सरकारी कार्यक्रम नहीं, बल्कि सामाजिक परिवर्तन का अभियान बना है।

साथियों,

इन 12 वर्षों की उपलब्धियों में, एक उपलब्धि ऐसी भी है जिसे किसी आंकड़े से, या अंकों से, नहीं मापा जा सकता। वह है 140 करोड़ भारतीयों का आत्मविश्वास।

आज का भारत और आज के भारत का युवा बहुत बड़े सपने देख रहा है। भारत का किसान नई संभावनाओं के साथ आगे बढ़ रहा है। भारत की महिलाएं नए नेतृत्व का परिचय दे रही हैं। इसलिए ये सिर्फ Achievements के 12 साल नहीं हैं, ये भारत की एस्पिरेशन्स को नई बुलंदी देने का कालखंड रहा है।

साथियों,

एक समय था जब दूर-दराज के गांवों तक आधुनिक सुविधाएं पहुंचाना वाकई बहुत मुश्किल भरा था। आज उन्हीं गांवों में बिजली भी है, इंटरनेट भी है, और डिजिटल सेवाओं की पूरी दुनिया भी है। आज एक क्लिक पर, कभी भी, कहीं भी बैंकिंग सेवाएं उपलब्ध हैं।

आज मोबाइल फोन, भारत के नागरिकों को अनेक सुविधाओं से कनेक्ट कर रहा है। हमारे किसान, हमारे मछुआरे, हमारे dairy farmers, हमारी महिलाएं, हमारे स्टूडेंट्स, सभी टेक्नोलॉजी के माध्यम से सशक्त हो रहे हैं, और अपने लिए नए अवसर बना रहे हैं।

साथियों,

आपने 125 करोड़ से अधिक Aadhaar IDs के बारे में सुना है। लेकिन आज भारत सिर्फ पहचान को डिजिटल नहीं बना रहा। आज करीब 90 करोड़ भारतीयों की Unique Digital Health IDs बनाई जा चुकी हैं। जिससे मेडिकल रिकॉर्ड सुरक्षित और accessible बन गए हैं। इससे हेल्थकेयर डिलीवरी और अधिक आसान और efficient हो रही है।

साथियों,

इन उपलब्धियों की सबसे बड़ी विशेषता यह है कि इनमें से अधिकांश चीजें कुछ वर्ष पहले तक कल्पना जैसी लगती थीं। कौन सोच सकता था कि गांव-गांव तक हाई-स्पीड इंटरनेट पहुंचेगा ? कौन सोच सकता था कि दूर-सुदूर के गांवों में भी QR code जीवन का हिस्सा बन जायेगा ? गांव में कोई बहन, ड्रोन से खेती करने में मदद करेगी, ये भी असंभव लगता था।

लेकिन आज यह सब, भारत के करोड़ों लोगों के जीवन का सामान्य हिस्सा बनता जा रहा है। और आपको गर्व होगा साथियों, यही नए भारत की पहचान है।

जो कभी सपना था, वह आज सच्चाई है। जो कभी नामुमकिन लगता था, वो आज मुमकिन हुआ है, औऱ ये करने के पीछे सबसे बड़ी ताकत क्या है? किसकी वजह से ये सब संभव हुआ है? यह मोदी के कारण नहीं, वो ताकत है- भारत का लोकतंत्र, भारत की डेमोक्रेसी। इस डेमोक्रेसी में सबका साथ है, सबका विकास है।

साथियों,

आज से 50 या 100 साल बाद जब भारत के इस कालखंड की समीक्षा होगी, तो ये बात उभरकर सामने आएगी कि इस कालखंड को भारत की Aspirations ने ड्राइव किया। यह भारत के एस्पिरेशन्स का नया युग है।

जहां बिजली पहुंची है, वहां लोग सिर्फ बिजली नहीं चाहते, वे Smart Living चाहते हैं। जहां ट्रेन पहुंची है, वहां लोग High-Speed Connectivity चाहते हैं। जहां हाईवे बने हैं, वहां लोग World-Class Expressways चाहते हैं। जहां इंटरनेट पहुंचा है, वहां लोग AI और Digital Innovation में नेतृत्व चाहते हैं।

यानि आज भारत के लोग अपने जीवन को भी Next Level पर ले जाना चाहते हैं, और भारत को भी Next Level पर ले जाना उनका मकसद है, उनका संकल्प है, उनके सपने है।

और साथियों,

यही Aspirations आज भारत की विकास यात्रा की सबसे बड़ी शक्ति हैं। मैं आपको भारत की Space Journey का उदाहरण दूंगा।

भारत ने चंद्रयान को चंद्रमा के South Pole पर उतारा। दुनिया ने इसे एक बहुत बड़ी उपलब्धि माना। लेकिन भारत इसे अपनी मंजिल मानकर रुका नहीं। आज देश गगनयान की तैयारी कर रहा है। भारत अंतरिक्ष में अपना Space Station बनाने की दिशा में आगे बढ़ रहा है।

हमारे Space Startups Global Space Economy में अपनी जगह बनाने के लिए पुरजोश काम कर रहे हैं, आगे बढ़ रहे हैं।

साथियों,

Green Energy के क्षेत्र में भी भारत की यही एस्पिरेशंस दिखाई देती है। Solar Power में भारत की उपलब्धियों की दुनिया भर में लगातार चर्चा हो रही हैं। लेकिन भारत अगली छलांग की तैयारी कर रहा है।

Green Hydrogen में बड़े निवेश हो रहे हैं। Advanced Nuclear Energy पर तेजी से काम हो रहा है। आपने भारत के Fast Breeder nuclear Reactor से जुड़ी प्रोग्रेस के बारे में भी सुना ज़रूर होगा। ये भारत के न्यूक्लियर एनर्जी लैंडस्केप में क्रांतिकारी परिवर्तन करने का बहुत बड़ा अचीवमेंट हमारे सीसेन्टिस्टों ने किया है।

साथियों,

आज का भारत भविष्य का पूरा Ecosystem बना रहा है। भारत एक साथ हर उस क्षेत्र में निवेश कर रहा है, जो आने वाले दशकों की दिशा तय करेगा।

अभी आपने कुछ दिन पहले ही देखा है नीस में भारत इनोवेट्स का एक आयोजन किया। ये इवेंट भारत के डीप टेक सामर्थ्य को दुनिया तक पहुंचाने का एक और माध्यम था। इसमें भारत के 120 Deep-Tech Startups उपस्थित थे। Bharat Innovates में करीब एक हजार चार सौ B2B Meetings हुईं है। कई Startups के लिए Investment Commitments आगे बढ़ीं, Commercial Orders के लिए रास्ते खुले। French और European Universities तथा Incubators के साथ Engagements बढ़ रही हैं।

Student Exchanges, Joint Research, और Innovation Support के नए रास्ते बने। इसलिए Bharat Innovates सिर्फ एक Summit नहीं रहा। यह Innovation Diplomacy का एक नया मॉडल बना है।

और आज ही पेरिस में VivaTech इवेंट के जरिए, इस यात्रा को हमने और आगे बढ़ाया। नीस में हमने Ideas को Capital से जोड़ा और पेरिस में Indian Innovation को Global Scale से जोड़ा। आज दुनिया देख रही है भारत केवल भविष्य के लिए तैयार नहीं हो रहा है। भारत भविष्य को आकार दे रहा है।

साथियों,

एक समय था, जब देशों के बीच रिश्ते केवल व्यापार से तय होते थे। आज व्यापार के साथ-साथ Trust यानि भरोसा भी उतना ही महत्वपूर्ण हो गया है।

हर देश Reliable Supply Chains चाहता है। हर देश Stable Partnerships चाहता है। हर देश ऐसे साथियों की तलाश में है, जिन पर लंबे समय तक भरोसा किया जा सके। और ऐसे समय में, भारत विश्व में एक Trusted Partner के रूप में उभर रहा है।

एवियां में G7 बैठक के दौरान मैंने trust based partnerships बनाने पर ज़ोर दिया। ग्लोबल साउथ के देशों के साथ equal पार्टनर्स के रूप में आगे बढ़ने का आह्वान किया। भारत का G7 समिट में संदेश था Global Governance तभी प्रभावी होगी जब वह Inclusive होगी। Global Growth तभी Sustainable होगी जब वह शेयर्ड होगी। और Global Technology तभी मानवता के लिए उपयोगी होगी जब वह Trusted होगी।

साथियों,

भारत और दुनिया के बीच व्यापारिक रिश्तों में नई ऊर्जा नज़र आ रही है। फ्रांस के साथ भारत का ट्रेड लगतार बढ़ रहा है। पिछले कुछ वर्षों में भारत ने दुनिया के अनेक देशों के साथ Free Trade Agreements किए हैं। यूरोपियन यूनियन हो, यूनाइटेड किंगडम हो दुनिया के हर देश, हर रीजन के साथ भारत समझौते कर रहा है।

अगले महीने से भारत और UK के बीच ट्रेड एग्रीमेंट भी लागू हो जाएगा। यह एग्रीमेंट भारत के farmers, workers और innovators को अनेक नए अवसर प्रदान करेगा।

साथियों,

आज दुनिया Uncertainty और Disruption के दौर से गुजर रही है। ऐसे समय में भारत और फ्रांस की साझेदारी विश्वास, स्थिरता और सहयोग का एक मजबूत स्तंभ बन रहा है।

इस वर्ष हमने भारत और फ्रांस के संबंधों को Special Global Strategic Partnership का दर्जा दिया था। नीस में मेरे मित्र President Macron और मैंने हमारे संबंधों को force for global good बनाने पर चर्चा की। Defence से लेकर space और नुक्लियर तक AI और क्रिटीकल मिनरल्स से लेकर high speed railway तक, हर क्षेत्र में हम मिलकर आगे बढ़ेंगे।

साथियों,

Solar energy हो, या AI के क्षेत्र में सहयोग हो, भारत और फ्रांस मिलकर ऐसे समाधान विकसित कर रहे हैं जो पूरी मानवता के हित में हैं। पिछले वर्ष पेरिस में और इस वर्ष दिल्ली में हमने AI Summit को Co-chair किया।

अब हम साथ मिलकर अगले वर्ष “तृष्णा” satellite को लॉन्च करने जा रहें हैं। यह “तृष्णा” satellite जो विश्व में फूड और वाटर सिक्युरिटी सुनिश्चित करने में योगदान देगा।

और साथियों,

यह सभी गवर्नमेंट टू गवर्नमेंट पहलो में आप सभी का योगदान बहुत महत्वपूर्ण है। ये आप हैं जो भारत और यूरोप के बीच सबसे मजबूत सेतु हैं। आप दोनों समाजों को समझते हैं। दोनों बाजारों को समझते हैं। आने वाले समय में Talent, Trade, Technology, Tourism और Investment के नए अवसरों को आगे बढ़ाने में आपकी भूमिका लगातार बढ़ने वाली हैं।

साथियों,

भारत और फ्रांस के रिश्तों को साझा इतिहास, साझा मूल्यों और साझा विश्वास ने आगे बढ़ाया है। विश्व युद्धों के दौरान फ्रांस की धरती पर बलिदान देने वाले भारतीय सैनिकों की स्मृतियां आज भी हमें जोड़ती हैं।

मुझे पहले नव शापेल में श्रद्धांजलि देने का अवसर मिला, पिछले वर्ष प्रेसिडेंट मैक्रों के साथ मार्सेय के वॉर मेमोरियल जाने का अवसर भी मिला। ये हमारी साझा विरासत है।

फ्रांस, भारतीयों के योगदान को संजोता भी है और सराहता भी है। भारतीय मूल की नूर इनायत खान हों, जिन्होंने फ्रांस की Resistance के लिए अपना जीवन बलिदान किया, या महाराजा रणजीत सिंह के साथ काम करने वाले जनरल जां फ्रांस्वा अलार हों ये सभी भारत और फ्रांस की साझा विरासत के प्रतीक हैं।

भारत के राज्य पुडुचेरी में भी फ्रेंच विरासत की झलक दिखाई देती है। वहां का Architecture, वहां की कला-संस्कृति और खान-पान सभी में हमारे संबंधों की महेक है।

साथियों,

इस समय फ्रांस समेत पूरी दुनिया में International Yoga Day की तैयारी भी चल रही है। इस अवसर पर मैं, फ्रांस में योग को आगे बढ़ाने वाले श्रीमान महेश घाट्राड्याल जी को भी आदरपूर्वक श्रद्धांजलि देता हूं। मैं पद्म पुरस्कार से सम्मानित, शार्लोत शोपां जी को भी प्रणाम करता हूं। जिन्होंने सौ वर्ष की आयु में भी, योग के माध्यम से फ़्रांस को भारत की विरासत से जोड़ा है। उनका जीवन यह सिद्ध करता है: Yoga does not add years to life, it adds life to years.

साथियों,

मैं फ्रेद नेग्री जी को भी आदरपूर्वक श्रद्धापूर्वक याद करता हूं। भारतीय विरासत को संरक्षित करने में उनका योगदान अतुल्य रहा है।

साथियों,

भारत और फ्रांस को कनेक्ट करने वाली एक और चीज है, और वो है फुटबॉल। इस वक्त यहां फुटबॉल फीवर पूरे जोर पर है। फ्रांस में इसकी दीवानगी, चप्पे-चप्पे पर दिखती है। लेकिन भारत में भी फुटबॉल का क्रेज़ सिर चढ़कर बोलता है।

खासतौर पर फ्रांस की टीम के फैन्स भारत में बहुत अधिक हैं। फ़्रांस ने इस वर्ल्ड कप की शुरुआत एक जोरदार जीत से शुरू की है। मैं फ्रांस की टीम को बहुत-बहुत शुभकामनाएं देता हूं।

साथियों,

जाने से पहले, आप सभी के लिए कुछ और अच्छी खबरें भी लेकर के आया हूँ। वो आपके लिए हैं। पिछले वर्ष, मार्सेय में कॉन्सुलेट खोला गया, इससे काफी अधिक सुविधा मिल रही है। कुछ हफ्ते पहले, Indian Nationals के लिए French Airports पर Visa-free Transit की व्यवस्था शुरू हो गई है।

Students और Professionals की Mobility बढ़ाना हो, या Educational Qualifications की Mutual Recognition की बात हो, या फिर French Universities के भारत में Campus खोलना हो, इन सभी पर हम मिलकर आगे बढ़ रहें हैं।

अब फ्रांस में UPI के उपयोग का दायरा भी और बढ़ने जा रहा है। यानि भारत-फ्रांस कनेक्ट भी Instant और आपसी Payment भी Instant!

साथियों,

इन सभी पहलों से, हम भारत और फ़्रांस को और करीब ला रहें हैं। और मैं फिर कहूंगा इस साझेदारी की नींव, इस रिश्ते की असली ताकत आप सभी हैं। आप सब मेरे देशवासी हैं।

आज जब भारत तेज़ी से विकसित भारत के लक्ष्य की ओर बढ़ रहा है, तो मैं आप सभी से भारत के साथ और गहराई से जुडने का आग्रह करूंगा। इससे भारत की विकास यात्रा को नई शक्ति मिलेगी, और आपको अपनी पुरखों की धरती की सेवा करने का अवसर भी मिलेगा।

इन्हीं शब्दों के साथ आप सभी के प्रेम आपके उत्साह और इस आत्मीय स्वागत के लिए मैं एक बार फिर आप सभी का आभार व्यक्त करता हूं।

भारत माता की जय!

बहुत बहुत धन्यवाद।