ದೇಶದ ನೀತಿ ನಿರೂಪಣೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ: ಪ್ರಧಾನಮಂತ್ರಿ
ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಧ್ಯೇಯವು ನಿರಂತರವಾಗಿ ಮುಂದುವರಿಯುತ್ತದೆ; ಮತ್ತು ನಾನು ವಿಕ್ಷಿತ ಭಾರತದ ಬಗ್ಗೆ ಮಾತನಾಡುವಾಗ ಅದರ ಬಲವಾದ ಆಧಾರಸ್ತಂಭ ಭಾರತದ ನಾರಿ ಶಕ್ತಿ: ಪ್ರಧಾನಮಂತ್ರಿ
ಕಾಶಿಯ ಸಂಸತ್ ಸದಸ್ಯನಾಗಿ ಮತ್ತು ರಾಷ್ಟ್ರದ ಪ್ರಧಾನ ಮಂತ್ರಿಯಾಗಿ, ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಮಹತ್ವದ ಗುರಿಯನ್ನು ಸಾಧಿಸಲು ನಾನು ನಿಮ್ಮ ಆಶೀರ್ವಾದವನ್ನು ಕೋರುತ್ತೇನೆ ಮತ್ತು ಈ ಪ್ರಮುಖ ಗುರಿ ಲೋಕಸಭೆ ಹಾಗು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವುದು: ಪ್ರಧಾನಮಂತ್ರಿ
ನಮ್ಮ ಸರ್ಕಾರದ ನೀತಿಗಳು ನಿರಂತರವಾಗಿ ಮಹಿಳಾ ಕಲ್ಯಾಣಕ್ಕೆ ಗರಿಷ್ಠ ಆದ್ಯತೆಯನ್ನು ನೀಡಿವೆ: ಪ್ರಧಾನಮಂತ್ರಿ
ಅನುಕೂಲತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ, ಮಹಿಳೆಯರ ಆರ್ಥಿಕ ಭಾಗವಹಿಸುವಿಕೆಯನ್ನು ಹೆಚ್ಚಿಸುವತ್ತ ನಾವು ಒತ್ತು ನೀಡಿದ್ದೇವೆ: ಪ್ರಧಾನಮಂತ್ರಿ

ನಮಃ ಪಾರ್ವತಿ ಪತಾಯೆ, ಹರ್ ಹರ್ ಮಹಾದೇವ್

ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಇಲ್ಲಿನ ಜನಪ್ರಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ, ಸಂಸತ್ತಿನ  ನನ್ನ ಸಹೋದ್ಯೋಗಿಗಳೆ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ನಿತಿನ್ ನಬಿನ್ ಜಿ, ಉತ್ತರ ಪ್ರದೇಶದ ಸಂಸದ ಮತ್ತು ಯುಪಿ ಬಿಜೆಪಿ ಅಧ್ಯಕ್ಷರಾದ ಶ್ರೀ ಪಂಕಜ್ ಚೌಧರಿ ಜಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಸಹೋದರಿ ಪೂನಂ ಮೌರ್ಯ ಜಿ, ವೇದಿಕೆಯಲ್ಲಿ ಉಪಸ್ಥಿತರಿರುವ ಕಾಶಿಯ ಮಹಿಳಾ ಕೌನ್ಸಿಲರ್‌ಗಳು ಮತ್ತು ಗ್ರಾಮ ಮುಖ್ಯಸ್ಥರೆ, ಇತರೆ ಜನಪ್ರತಿನಿಧಿಗಳೆ ಮತ್ತು ಇಲ್ಲಿಗೆ ಬಂದಿರುವ ನನ್ನ ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳೆ ನಿಮ್ಮೆಲ್ಲರಿಗೂ ನಮಸ್ಕಾರ.

ಸ್ನೇಹಿತರೆ,

ನಮ್ಮ ಕಾಶಿ ದೈವಿಕ ಶಕ್ತಿ ಭೂಮಿ - ಮಾತಾ ಶೃಂಗಾರ್ ಗೌರಿ, ಮಾತಾ ಅನ್ನಪೂರ್ಣ, ಮಾತಾ ವಿಶಾಲಾಕ್ಷಿ, ಮಾತಾ ಸಂಕೇತ ಮತ್ತು ಮಾತೆ ಗಂಗೆ ನೆಲೆಸಿರುವ ಈ ಸ್ಥಳದಲ್ಲಿ ಹಾಜರಿರುವ ಎಲ್ಲ ಸಹೋದರಿಯರು ಮತ್ತು ಹೆಣ್ಣು ಮಕ್ಕಳ ಈ ಸಭೆ ಬಹಳ ದೈವಿಕವಾಗಿಸಿದೆ. ಪವಿತ್ರ ಕಾಶಿ ಭೂಮಿಯ ಮೇಲೆ ನಿಂತು ನಾನು ಎಲ್ಲ ತಾಯಂದಿರು, ಸಹೋದರಿಯರು ಮತ್ತು ಕಾಶಿಯ ಹೆಣ್ಣು ಮಕ್ಕಳಿಗೆ ನಮಸ್ಕರಿಸುತ್ತೇನೆ.

 

ಸ್ನೇಹಿತರೆ,

ಇಂದಿನ ಸಂದರ್ಭವು ನಿಜಕ್ಕೂ ಮಹಿಳಾ ಶಕ್ತಿಯನ್ನು ಗೌರವಿಸುವ ಮತ್ತು ಅಭಿವೃದ್ಧಿಪಡಿಸುವ ಆಚರಣೆಯಾಗಿದೆ. ಸ್ವಲ್ಪ ಸಮಯದ ಹಿಂದೆ ಸಾವಿರಾರು ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಉದ್ಘಾಟಿಸಲಾಯಿತು ಮತ್ತು ಶಂಕುಸ್ಥಾಪನೆ ನೆರವೇರಿಸಲಾಯಿತು. ಇವೆಲ್ಲವೂ ಕಾಶಿಯ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳಾಗಿವೆ. ಇದರೊಂದಿಗೆ, ಕಾಶಿ ಮತ್ತು ಅಯೋಧ್ಯೆಯ ನಡುವಿನ ಸಂಪರ್ಕ ಹೆಚ್ಚಿಸುವ ಯೋಜನೆಗಳಿವೆ. ಸ್ವಲ್ಪ ಸಮಯದ ಹಿಂದೆ, 2 ಅಮೃತ ಭಾರತ್ ರೈಲುಗಳಿಗೆ ಚಾಲನೆ ನೀಡಲಾಯಿತು. ಕಾಶಿಯಿಂದ ಪುಣೆಗೆ ಮತ್ತು ಅಯೋಧ್ಯೆಯಿಂದ ಮುಂಬೈಗೆ, ಈ 2 ಅಮೃತ ಭಾರತ್ ರೈಲುಗಳು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ನಡುವಿನ ಸಂಪರ್ಕವನ್ನು ಮತ್ತಷ್ಟು ಸುಧಾರಿಸುತ್ತವೆ. ಈಗ ಮುಂಬೈ-ಪುಣೆ ಮತ್ತು ಇಡೀ ಮಹಾರಾಷ್ಟ್ರದ ಜನರು ಅಯೋಧ್ಯಾ ಧಾಮ್ ಮತ್ತು ಕಾಶಿ ವಿಶ್ವನಾಥ ಧಾಮ್ ತಲುಪಲು ಮತ್ತೊಂದು ಆಧುನಿಕ ಆಯ್ಕೆ ಹೊಂದಿದ್ದಾರೆ. ಈ ಉದ್ಘಾಟನೆ ಸಂದರ್ಭದಲ್ಲಿ ನಾನು ದೇಶವಾಸಿಗಳನ್ನು ಅಭಿನಂದಿಸುತ್ತೇನೆ.

ಸ್ನೇಹಿತರೆ,

ಭಾರತವನ್ನು ಅಭಿವೃದ್ಧಿಪಡಿಸುವ ಧ್ಯೇಯವು ನಿರಂತರವಾಗಿ ನಡೆಯುತ್ತಿದೆ. ನಾನು ಅಭಿವೃದ್ಧಿ ಹೊಂದಿದ ಭಾರತದ ಬಗ್ಗೆ ಮಾತನಾಡುವಾಗ, ಅದರ ಪ್ರಬಲ ಆಧಾರಸ್ತಂಭವೇ ಭಾರತದ ಮಹಿಳಾ ಶಕ್ತಿಯಾಗಿದೆ. ಇಂದು ಈ ಕಾರ್ಯಕ್ರಮದಲ್ಲಿ ಒಂದು ಮಹಾಯಜ್ಞದ ಆರಂಭಕ್ಕಾಗಿ ಇಲ್ಲಿಗೆ ಬಂದಿರುವ ಸಹೋದರಿಯರು ಮತ್ತು ಹೆಣ್ಣು ಮಕ್ಕಳಿಂದ ಆಶೀರ್ವಾದ ಪಡೆಯಲು ನಾನು ಬಂದಿದ್ದೇನೆ. ಕಾಶಿಯ ಸಂಸತ್ ಸದಸ್ಯನಾಗಿ, ದೇಶದ ಪ್ರಧಾನ ಮಂತ್ರಿಯಾಗಿ, ಒಂದು ದೊಡ್ಡ ರಾಷ್ಟ್ರೀಯ ಗುರಿ ಸಾಧಿಸಲು ನನಗೆ ನಿಮ್ಮ ಆಶೀರ್ವಾದ ಬೇಕು.  ಆ ದೊಡ್ಡ ಗುರಿ ಏನೆಂದರೆ, ಲೋಕಸಭೆ ಮತ್ತು ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಜಾರಿಗೆ ತರುವುದಾಗಿದೆ. ಕೆಲವೇ ದಿನಗಳ ಹಿಂದೆ, ಎಸ್‌ಪಿ ಮತ್ತು ಕಾಂಗ್ರೆಸ್‌ನಂತಹ ಪಕ್ಷಗಳಿಂದಾಗಿ ನಮ್ಮ ಪ್ರಯತ್ನ ಸಂಸತ್ತಿನಲ್ಲಿ ಯಶಸ್ವಿಯಾಗಲಿಲ್ಲ. ಆದರೆ ನಾನು ನಿಮ್ಮೆಲ್ಲ ಸಹೋದರಿಯರಿಗೆ ಮತ್ತೊಮ್ಮೆ ಭರವಸೆ ನೀಡುತ್ತೇನೆ. ನಿಮ್ಮ ಮೀಸಲಾತಿ ಹಕ್ಕನ್ನು ಜಾರಿಗೆ ತರಲು ನಾನು ಯಾವುದೇ ಪ್ರಯತ್ನವನ್ನು ಮಾಡದೆ ಬಿಡುವುದಿಲ್ಲ.

ಸ್ನೇಹಿತರೆ,

ಒಬ್ಬ ಮಹಿಳೆ ಮನೆಯಲ್ಲಿ ಸಬಲೀಕರಣಗೊಂಡಾಗ ಇಡೀ ಕುಟುಂಬವು ಬಲಗೊಳ್ಳುತ್ತದೆ, ಸಮಾಜವು ಬಲಗೊಳ್ಳುತ್ತದೆ, ದೇಶವು ಬಲಗೊಳ್ಳುತ್ತದೆ. ಹಿಂದೆ ಸಹೋದರಿಯರು ಮತ್ತು ಹೆಣ್ಣು ಮಕ್ಕಳು ಬಹಳಷ್ಟು ಕಷ್ಟಪಡಬೇಕಾಯಿತು. ನೀವು ಕಾಶಿಯ ಸಹೋದರಿಯರು ಸಹ ಅನೇಕ ತೊಂದರೆಗಳನ್ನು ಕಂಡಿದ್ದೀರಿ, ನೀವು ಅನೇಕ ಸವಾಲುಗಳನ್ನು ಎದುರಿಸಿದ್ದೀರಿ. ಹೆಣ್ಣು ಮಕ್ಕಳು ಆಗಾಗ್ಗೆ ಅನೇಕ ರೀತಿಯ ಪ್ರಶ್ನೆಗಳನ್ನು ಎದುರಿಸಬೇಕಾಗಿತ್ತು - ಇದನ್ನು ಮಾಡುವುದರಿಂದ ನೀವು ಏನು ಮಾಡುತ್ತೀರಿ? ನಿಮಗೆ ಇದು ಏಕೆ ಬೇಕು? ನೀವು ಏನು ಮಾಡುತ್ತೀರಿ, ನಿಮಗೆ ಏನು ಬೇಕು, ಮೌನವಾಗಿರಿ, ಈ ಕೆಲಸವನ್ನು ನಿಮ್ಮಿಂದ ಮಾಡಲು ಸಾಧ್ಯವಿಲ್ಲ. ಈ ರೀತಿಯ ಹಲವು ಮಾತುಗಳನ್ನು ಕೇಳಬೇಕಾಯಿತು. ನೇರ ಆದೇಶಗಳನ್ನು ನೀಡಲಾಯಿತು - ಇದು ನಿಮ್ಮ ಕೆಲಸವಲ್ಲ ಎಂದು.

 

ಇಂತಹ ಸನ್ನಿವೇಶಗಳು ಕಾಶಿಯ ಸಹೋದರಿಯರಿಗೆ ಮಾತ್ರವಲ್ಲ, ದೇಶದ ಹೆಚ್ಚಿನ ಸಹೋದರಿಯರು ಮತ್ತು ಹೆಣ್ಣು ಮಕ್ಕಳಿಗೆ ಇಂತಹ ಅನುಭವಗಳಾಗಿವೆ, ಇದನ್ನು ಸಾಮಾನ್ಯವೆಂದೇ ಪರಿಗಣಿಸಲಾಗಿತ್ತು. ಅದಕ್ಕಾಗಿಯೇ ನಾನು 25 ವರ್ಷಗಳ ಹಿಂದೆ ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾದಾಗ, ಅಂತಹ ಕಲ್ಪನೆಗಳನ್ನು ಮುರಿಯಲು ನಾನು ಮೊದಲು ಪ್ರಯತ್ನಿಸಿದ್ದೆ. ಆ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಮೀಸಲಾದ 2 ಬೃಹತ್ ಯೋಜನೆಗಳನ್ನು ಪ್ರಾರಂಭಿಸಲಾಯಿತು. ಒಂದು ಶಾಲಾ ಪ್ರವೇಶೋತ್ಸವ, ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗಳನ್ನು ತಲುಪಲು ಮತ್ತು ಮಧ್ಯದಲ್ಲಿ ಶಾಲೆಗಳನ್ನು ಬಿಡದಂತೆ ಶಾಲೆಗಳಲ್ಲಿ ಹುಡುಗಿಯರಿಗೆ ಪ್ರವೇಶ ಕಲ್ಪಿಸುವುದು,  ಎರಡನೆಯದು - ಮುಖ್ಯಮಂತ್ರಿ ಕನ್ಯಾ ಕೆಲವಾಣಿ ನಿಧಿ – ಇದು  ಹೆಣ್ಣು ಮಕ್ಕಳಿಗೆ ಶುಲ್ಕ ಸಹಾಯ ಯೋಜನೆ.

ಸ್ನೇಹಿತರೆ,

ಅಂದಿನಿಂದ ಇಂದಿನವರೆಗೆ ನಮ್ಮ ಸರ್ಕಾರದ ನೀತಿಗಳಲ್ಲಿ ಮಹಿಳಾ ಕಲ್ಯಾಣಕ್ಕೆ ನಿರಂತರವಾಗಿ ಹೆಚ್ಚಿನ ಆದ್ಯತೆ ನೀಡಲಾಗಿದೆ. 2014ರಲ್ಲಿ ನೀವು ನಮಗೆ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ, ದೇಶದಲ್ಲಿ 12 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಯಿತು, "ಇಜ್ಜತ್ ಘರ್‌"ಗಳನ್ನು ನಿರ್ಮಿಸಲಾಯಿತು. 30 ಕೋಟಿಗೂ ಹೆಚ್ಚು ಸಹೋದರಿಯರ ಬ್ಯಾಂಕ್ ಖಾತೆಗಳನ್ನು ತೆರೆಯಲಾಯಿತು. 2.5 ಕೋಟಿಗೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಯಿತು. 12 ಕೋಟಿಗೂ ಹೆಚ್ಚು ಮನೆಗಳಿಗೆ ನಲ್ಲಿ  ನೀರು ತಲುಪಿತು. ಅಂದರೆ, ಸಹೋದರಿಯರು ಮತ್ತು ಹೆಣ್ಣು ಮಕ್ಕಳನ್ನು ಅನೇಕ ದೊಡ್ಡ ಯೋಜನೆಗಳ ಕೇಂದ್ರಬಿಂದುವಾಗಿ ಇರಿಸಲಾಗಿತ್ತು.

ಸ್ನೇಹಿತರೆ,

2 ವರ್ಷಗಳ ಹಿಂದೆ ಬನಾರಸ್‌ನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಗೆ ಸಂಬಂಧಿಸಿದ ಒಂದು ದೊಡ್ಡ ಅಭಿಯಾನ ನಡೆಸಲಾಯಿತು. ಆ ಸಮಯದಲ್ಲಿ ಕೇವಲ ಒಂದು ತಿಂಗಳಲ್ಲಿ,  ಕಾಶಿಯಲ್ಲಿ 27 ಸಾವಿರ ಹೆಣ್ಣು ಮಕ್ಕಳ ಸುಕನ್ಯಾ ಸಮೃದ್ಧಿ ಖಾತೆಗಳನ್ನು ತೆರೆಯಲಾಯಿತು. ಪ್ರತಿ ಹೆಣ್ಣು ಮಗಳ ಬ್ಯಾಂಕ್ ಖಾತೆಗೆ 300 ರೂಪಾಯಿ ವರ್ಗಾಯಿಸಲಾಯಿತು. ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಉತ್ತಮ ಭವಿಷ್ಯದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ದೊಡ್ಡ ಪಾತ್ರ ವಹಿಸುತ್ತಿದೆ. ಈ ಯೋಜನೆ ಹೆಣ್ಣು ಮಕ್ಕಳ ಅಧ್ಯಯನವನ್ನು ಬಲಪಡಿಸಿದೆ, ಮುದ್ರಾ ಯೋಜನೆ ಹೆಣ್ಣು ಮಕ್ಕಳ ಗಳಿಕೆಯನ್ನು ಖಚಿತಪಡಿಸಿದೆ. ಅದೇ ಸಮಯದಲ್ಲಿ ಮಾತೃ ವಂದನಾ ಯೋಜನೆ ಮತ್ತು ಆಯುಷ್ಮಾನ್ ಭಾರತ ಯೋಜನೆಗಳು ಸಹೋದರಿಯರು ಮತ್ತು ಹೆಣ್ಣು ಮಕ್ಕಳಿಗೆ ಔಷಧ ವ್ಯವಸ್ಥೆ ಮಾಡಿವೆ.

ಸ್ನೇಹಿತರೆ,

ಶಿಕ್ಷಣ, ಗಳಿಕೆ ಮತ್ತು ಔಷಧಗಳ ಜೊತೆಗೆ, ಮೊದಲ ಬಾರಿಗೆ ಕೋಟ್ಯಂತರ ಸಹೋದರಿಯರು ತಮ್ಮ ಹೆಸರಿನಲ್ಲಿ ಆಸ್ತಿ ನೋಂದಾಯಿಸಿಕೊಂಡಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ, ಹೆಚ್ಚಿನ ಮನೆಗಳು ಸಹೋದರಿಯರ ಹೆಸರಿನಲ್ಲಿವೆ. ಇಂದು ನಮ್ಮ ತಾಯಂದಿರು ಮತ್ತು ಸಹೋದರಿಯರು ನಿಜವಾಗಿಯೂ ತಮ್ಮ ಸ್ವಂತ ಮನೆಗಳ ಮಾಲೀಕರಾಗಿದ್ದಾರೆ.

 

ಸ್ನೇಹಿತರೆ,

ನಮ್ಮ ಸರ್ಕಾರದ ಸಂಪೂರ್ಣ ಗಮನ ಸಹೋದರಿಯರ ಅನುಕೂಲತೆ ಮತ್ತು ಸುರಕ್ಷತೆಯ ಮೇಲೆ ಕೇಂದ್ರೀಕೃತವಾಗಿದೆ. ಈ 2 ವಿಷಯಗಳು ಸಬಲೀಕರಣದ ಅಡಿಪಾಯವನ್ನು ಬಲಪಡಿಸುತ್ತವೆ. ಉತ್ತರ ಪ್ರದೇಶದಲ್ಲಿ ಪರಿಸ್ಥಿತಿಗಳು ಹೇಗೆ ಬದಲಾಗಿವೆ ಎಂಬುದನ್ನು ನೀವು ನಿಮ್ಮ ಸ್ವಂತ ಕಣ್ಣುಗಳಿಂದ ನೋಡಿದ್ದೀರಿ. ಕೆಲವು ವರ್ಷಗಳ ಹಿಂದೆ, ಸಮಾಜವಾದಿ ಪಕ್ಷದ ಸರ್ಕಾರವಿದ್ದಾಗ ಹೆಣ್ಣು ಮಕ್ಕಳು ತಮ್ಮ ಮನೆಗಳಿಂದ ಹೊರಗೆ ಕಾಲಿಡುವುದು ಸಹ ಕಷ್ಟಕರವಾಗಿತ್ತು. ಆದರೆ ಈಗ ಬಿಜೆಪಿ ಸರ್ಕಾರದಲ್ಲಿ ಹೆಣ್ಣು ಮಕ್ಕಳ ವಿರುದ್ಧ ತಪ್ಪು ಆಲೋಚನೆಗಳನ್ನು ಹೊಂದಿರುವ ಯಾರಿಗಾದರೂ ಅದರ ಪರಿಣಾಮಗಳು ಏನೆಂದು ಚೆನ್ನಾಗಿ ತಿಳಿದಿದೆ.

ಸ್ನೇಹಿತರೆ,

ಭಾರತೀಯ ನ್ಯಾಯ ಸಂಹಿತೆಯು ಸಹೋದರಿಯರು ಮತ್ತು ಹೆಣ್ಣು ಮಕ್ಕಳಿಗೆ ಭದ್ರತೆಯ ಹೊಸ ಭರವಸೆ ನೀಡಿದೆ. ಇದರ ಅಡಿ, ಮಹಿಳೆಯರ ವಿರುದ್ಧದ ಗಂಭೀರ ಅಪರಾಧಗಳಲ್ಲಿ ತ್ವರಿತ ನಿರ್ಧಾರಗಳನ್ನು ನೀಡಲಾಗುತ್ತಿದೆ. ಅದೇ ರೀತಿ, ಮಹಿಳಾ ಪೊಲೀಸ್ ಠಾಣೆಗಳು ಮತ್ತು ಸಮಾಲೋಚನಾ ಕೇಂದ್ರಗಳ ಜಾಲವು ನಿರಂತರವಾಗಿ ವಿಸ್ತರಿಸುತ್ತಿದೆ. ಇಂದು ಇಲ್ಲಿಯೂ ಸಹ ಮಹಿಳಾ ಪೊಲೀಸ್ ಹೊರಠಾಣೆ ಮತ್ತು ಸಮಾಲೋಚನಾ ಕೇಂದ್ರಕ್ಕಾಗಿ ಕಟ್ಟಡದ ನಿರ್ಮಾಣ ಕೆಲಸ ಆರಂಭವಾಗಿದೆ. ಅಂತಹ ಕ್ರಮಗಳು ಹೆಣ್ಣು ಮಕ್ಕಳಿಗೆ ಭದ್ರತೆಯ ಖಾತರಿ ನೀಡುತ್ತವೆ.

ಸ್ನೇಹಿತರೆ,

ಮಹಿಳೆಯರ ಆರ್ಥಿಕ ಶಕ್ತಿ ಹೆಚ್ಚಾದಾಗ ಮನೆಯಲ್ಲಿ ಅವರ ಧ್ವನಿಯೂ ಬಲಗೊಳ್ಳುತ್ತದೆ. ಆದ್ದರಿಂದ ಅನುಕೂಲತೆ ಮತ್ತು ಸುರಕ್ಷತೆಯ ಭರವಸೆ ನೀಡುವ ಜತೆಗೆ, ಸಹೋದರಿಯರ ಆರ್ಥಿಕ ಭಾಗವಹಿಸುವಿಕೆ ಹೆಚ್ಚಿಸಲು ನಾವು ಒತ್ತು ನೀಡಿದ್ದೇವೆ. ಕಳೆದ 11 ವರ್ಷಗಳಲ್ಲಿ ದೇಶದಲ್ಲಿ ಸುಮಾರು 10 ಕೋಟಿ ಸಹೋದರಿಯರು ಸ್ವಸಹಾಯ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಕಾಶಿಯಲ್ಲೂ ಸಹ ಸುಮಾರು 1.25 ಲಕ್ಷ ಸಹೋದರಿಯರು ಅಂತಹ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಈ ಗುಂಪುಗಳು ಲಕ್ಷಾಂತರ ರೂಪಾಯಿ ಸಹಾಯ ಪಡೆಯುತ್ತಿವೆ, ಅದರ ಮೂಲಕ ಸಹೋದರಿಯರು ತಮ್ಮ ಕೆಲಸ ಮಾಡುತ್ತಿದ್ದಾರೆ. ಅಂತಹ ಪ್ರಯತ್ನಗಳ ಮೂಲಕ 3 ಕೋಟಿ ಸಹೋದರಿಯರು ಈಗಾಗಲೇ "ಲಖ್ಪತಿ ದೀದಿಗಳು" - 3 ಕೋಟಿ ಲಕ್ಷಾಧಿಪತಿ ದೀದಿಗಳು - ಅವರಲ್ಲಿ ಬನಾರಸ್‌ನ ಸಾವಿರಾರು ಸಹೋದರಿಯರು ಇದ್ದಾರೆ.

ಸ್ನೇಹಿತರೆ,

ಲಖ್ಪತಿ ದೀದಿ ಅಭಿಯಾನಕ್ಕೆ ಚಾಲನೆ ನೀಡುವಲ್ಲಿ, ನಮ್ಮ ಡೇರಿ ವಲಯವೂ ಬಹುದೊಡ್ಡ ಪಾತ್ರ ವಹಿಸುತ್ತಿದೆ. ಇಲ್ಲಿ ಬನಸ್ಕಾಂತ ಡೇರಿಯೊಂದಿಗೆ ಸಂಪರ್ಕ ಹೊಂದಿದ ಲಕ್ಷಾಂತರ ಸಹೋದರಿಯರು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಇಂದು ಈ ಸಹೋದರಿಯರು ನೇರವಾಗಿ 106 ಕೋಟಿ ರೂಪಾಯಿ ಬೋನಸ್ ಪಡೆದಿದ್ದಾರೆ. ನಾನು ಈ ಎಲ್ಲಾ ಸಹೋದರಿಯರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಕಾಶಿಯಲ್ಲಿ ಡೇರಿ ವಲಯದೊಂದಿಗೆ ಸಂಪರ್ಕ ಹೊಂದಿದ ಮಹಿಳೆಯರಿಗೆ ನಾನು ಹೇಳುತ್ತೇನೆ - ಇದು ಕೇವಲ ಆರಂಭವಾಗಿದೆ, ಬನಾರಸ್ ಬೆಳೆಯುತ್ತದೆ, ಬನಸ್ಕಾಂತ ಡೇರಿಯೂ ಬೆಳೆಯುತ್ತದೆ, ಮತ್ತು ಈ ಬೋನಸ್ ಕೂಡ ಹೆಚ್ಚುತ್ತಲೇ ಇರುತ್ತದೆ.

 

ಸ್ನೇಹಿತರೆ,

ಬಿಜೆಪಿ-ಎನ್‌ಡಿಎ ಸರ್ಕಾರ ಸಹೋದರಿಯರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಿದೆ, ಭಾರತವನ್ನು ಅಭಿವೃದ್ಧಿಪಡಿಸುವ ಅಭಿಯಾನದಲ್ಲಿ ಅವರಿಗೆ ನಾಯಕತ್ವ ನೀಡುತ್ತಿದೆ. ಡಿಜಿಟಲ್ ಪಾವತಿಗಳನ್ನು ಮುನ್ನಡೆಸುವಲ್ಲಿ, ಸಾವಿರಾರು "ಬ್ಯಾಂಕ್ ಸಖಿಗಳು" ದೊಡ್ಡ ಪಾತ್ರ ವಹಿಸುತ್ತಿದ್ದಾರೆ. ವಿಮೆಗೆ ಸಂಬಂಧಿಸಿದ ಕೆಲಸದಲ್ಲಿ, "ಬಿಮಾ ಸಖಿಗಳು" ಮುಂಚೂಣಿಯಲ್ಲಿದ್ದಾರೆ. ನೈಸರ್ಗಿಕ ಕೃಷಿ ಮುನ್ನಡೆಸುವಲ್ಲಿ "ಕೃಷಿ ಸಖಿಗಳು" ದೊಡ್ಡ ಪಾತ್ರ ವಹಿಸುತ್ತಿದ್ದಾರೆ. ಕೃಷಿಯಲ್ಲಿ ಆಗುತ್ತಿರುವ ಡ್ರೋನ್ ಕ್ರಾಂತಿಯಲ್ಲಿ ನಮ್ಮ "ನಮೋ ಡ್ರೋನ್ ದೀದಿಗಳು" ಮುಂಚೂಣಿಯಲ್ಲಿದ್ದಾರೆ. ಕಳೆದ ದಶಕದಲ್ಲಿ ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಹೆಣ್ಣು ಮಕ್ಕಳಿಗೆ ಹೊಸ ಅವಕಾಶಗಳನ್ನು ನೀಡಲಾಗಿದೆ. ಮೊದಲ ಬಾರಿಗೆ ಸೈನಿಕ ಶಾಲೆಗಳು ಮತ್ತು ರಕ್ಷಣಾ ಅಕಾಡೆಮಿಯ ಬಾಗಿಲುಗಳು ಹೆಣ್ಣು ಮಕ್ಕಳಿಗಾಗಿ ತೆರೆದಿವೆ. ಅಂದರೆ ಬಿಜೆಪಿ-ಎನ್‌ಡಿಎ ಸರ್ಕಾರವು ಮಹಿಳೆಯರ ಸಬಲೀಕರಣ, ಮಹಿಳೆಯರ ಉನ್ನತಿ, , ಮಹಿಳೆಯರ ಜೀವನವನ್ನು ಸುಲಭಗೊಳಿಸುತ್ತಿದೆ.

ಸ್ನೇಹಿತರೆ,

ಇಂದು ಪ್ರತಿಯೊಂದು ಕ್ಷೇತ್ರದಲ್ಲೂ, ಪ್ರತಿಯೊಂದು ರಂಗದಲ್ಲೂ ಭಾರತದ ಹೆಣ್ಣು ಮಕ್ಕಳು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಸ್ವಾಭಾವಿಕವಾಗಿ ನೀತಿ ನಿರೂಪಣೆಯಲ್ಲಿ ಮತ್ತು ದೇಶದ ಭವಿಷ್ಯಕ್ಕೆ ಸಂಬಂಧಿಸಿದ ನಿರ್ಧಾರಗಳಲ್ಲಿ ಸಹೋದರಿಯರು ಮತ್ತು ಹೆಣ್ಣು ಮಕ್ಕಳ ಪಾತ್ರ ಮತ್ತಷ್ಟು ಹೆಚ್ಚಾಗಬೇಕು. ಇಂದು ದೇಶಕ್ಕೆ ಇದು ತುಂಬಾ ಅಗತ್ಯವಿದೆ. ಇದಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುತ್ತಿದೆ. ಹೊಸ ಸಂಸತ್ತನ್ನು ನಿರ್ಮಿಸುವ ಹಿಂದಿನ ಒಂದು ದೊಡ್ಡ ಕಾರಣವೆಂದರೆ, ಮಹಿಳೆಯರ ಭಾಗವಹಿಸುವಿಕೆಯ ಕಲ್ಪನೆ. ಹೊಸ ಸಂಸತ್ತು ನಿರ್ಮಿಸಿದಾಗ ನಾವು ಮಾಡಿದ ಮೊದಲ ಕೆಲಸವೆಂದರೆ ಮಹಿಳೆಯರಿಗೆ 33 ಪ್ರತಿಶತ ಮೀಸಲಾತಿ ನೀಡುವುದು. 40 ವರ್ಷಗಳ ಕಾಲ ಸಹೋದರಿಯರ ಈ ಹಕ್ಕು ಸಿಲುಕಿಕೊಂಡು ನೇತಾಡುತ್ತಿತ್ತು. ಆದ್ದರಿಂದ 2023ರಲ್ಲಿ ನಾವು ನಾರಿಶಕ್ತಿ ವಂದನ ಅಧಿನಿಯಮವನ್ನು ಸಂಸತ್ತಿನಲ್ಲಿ ಅಂಗೀಕರಿಸಿದ್ದೇವೆ.

ಒಂದು ಕಾನೂನು ಮಾಡಿದ ನಂತರ, ಅದನ್ನು ಜಾರಿಗೆ ತರುವುದು ಅವಶ್ಯಕ. ಈಗ ಈ ಕಾನೂನನ್ನು ಸಾಧ್ಯವಾದಷ್ಟು ಬೇಗ ಜಾರಿಗೆ ತರುವುದು ಅವಶ್ಯಕ. ಆದ್ದರಿಂದ, ಇತ್ತೀಚಿನ ದಿನಗಳಲ್ಲಿ ಸಂಸತ್ತಿನಲ್ಲಿ ಇದರ ಬಗ್ಗೆ ಚರ್ಚೆ ನಡೆಯಿತು. ನಾವು ಸಾಂವಿಧಾನಿಕ ತಿದ್ದುಪಡಿಗಾಗಿ ಕಾನೂನು ತಂದಿದ್ದೇವೆ. ಅದರ ನಂತರ ಹೆಚ್ಚಿನ ಸಹೋದರಿಯರು ಶಾಸಕಾಂಗ ಸಭೆಗಳು ಮತ್ತು ಸಂಸತ್ತನ್ನು ತಲುಪುವ ರೀತಿಯಲ್ಲಿ ಈ ತಿದ್ದುಪಡಿ ಇತ್ತು.

ಆದರೆ ಸ್ನೇಹಿತರೆ,

ಕಾಂಗ್ರೆಸ್, ಸಮಾಜವಾದಿ ಪಕ್ಷ, ಟಿಎಂಸಿ ಮತ್ತು ಡಿಎಂಕೆ ಮುಂತಾದ ಪಕ್ಷಗಳು ಮತ್ತೊಮ್ಮೆ ದೇಶದ ಮಹಿಳೆಯರಿಗೆ ದ್ರೋಹ ಬಗೆದವು. ಅಂತಹ ಪಕ್ಷಗಳು 40 ವರ್ಷಗಳ ಕಾಲ ಮಹಿಳಾ ಮೀಸಲಾತಿಗೆ ಬ್ರೇಕ್ ಹಾಕಿದ್ದವು. ಈಗ ಸಮಾಜವಾದಿ ಪಕ್ಷ ಮತ್ತೆ ಅದಕ್ಕೆ ಕೆಂಪು ಧ್ವಜ ತೋರಿಸಿದೆ.

 

ಸ್ನೇಹಿತರೆ,

ನಿಜವಾದ ವಿಷಯವೆಂದರೆ, ಈ ಎಲ್ಲಾ ಕುಟುಂಬ ಆಧಾರಿತ ಮತ್ತು ಓಲೈಕೆ ಆಧಾರಿತ ಪಕ್ಷಗಳು ಮಹಿಳಾ ಶಕ್ತಿಗೆ ಹೆದರುತ್ತವೆ, ನಿಮ್ಮೆಲ್ಲರಿಗೂ ಹೆದರುತ್ತವೆ. ಈ ಕುಟುಂಬ ಆಧಾರಿತ ಪಕ್ಷಗಳು ದೇಶದ ಹೆಣ್ಣು ಮಕ್ಕಳು ಶಾಸಕಾಂಗ ಸಭೆಗಳು ಮತ್ತು ಸಂಸತ್ತನ್ನು ತಲುಪಲು ಬಯಸುತ್ತಿಲ್ಲ. ಕಾಲೇಜು ಕ್ಯಾಂಪಸ್‌ಗಳಿಂದ ಪಂಚಾಯಿತಿಗಳು ಮತ್ತು ಸ್ಥಳೀಯ ಸಂಸ್ಥೆಗಳವರೆಗೆ ಎಲ್ಲೆಡೆ ತಮ್ಮದೇ ಆದ ಬಲದಿಂದ ನಾಯಕತ್ವ ನೀಡುತ್ತಿರುವ ಹೆಣ್ಣು ಮಕ್ಕಳು, ನೆಲಮಟ್ಟದಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳು ಎದ್ದರೆ, ಅವರ ನಿಯಂತ್ರಣ ಕೊನೆಗೊಳ್ಳುತ್ತದೆ. ಅವರ ಶಕ್ತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗುತ್ತದೆ ಎಂದು ಅವರಿಗೆ ತಿಳಿದಿದೆ. ಅದಕ್ಕಾಗಿಯೇ ಈ ಕುಟುಂಬ ಆಧಾರಿತ ಪಕ್ಷಗಳು ಸಂಸತ್ತಿನಲ್ಲಿ ವಿರೋಧ ಪಕ್ಷದ ಮುಂಚೂಣಿಯಲ್ಲಿದ್ದವು.

ಸ್ನೇಹಿತರೆ,

ದೇಶದ ಸಹೋದರಿಯರು ಮತ್ತು ಹೆಣ್ಣು ಮಕ್ಕಳು ಅವರ ವಂಚಕ ಉದ್ದೇಶಗಳನ್ನು ಗುರುತಿಸಿದ್ದಾರೆ ಎಂಬ ತೃಪ್ತಿ ನನಗಿದೆ. ಅಸ್ಸಾಂ, ಕೇರಳ, ಪುದುಚೇರಿ,  ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಸಹೋದರಿಯರು ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ ಎಂಬುದನ್ನು ನೀವು ನೋಡುತ್ತಿದ್ದೀರಿ. ಮಹಿಳಾ ಮೀಸಲಾತಿ ವಿರೋಧಿಸುವ ಪಕ್ಷಗಳಿಗೆ ಸಹೋದರಿಯರ ಈ ಮತವು ಈ ಮಹಿಳಾ ವಿರೋಧಿ ಪಕ್ಷಗಳನ್ನು ಶಿಕ್ಷಿಸಲಿದೆ ಎಂಬುದನ್ನು ಅವರು ಅರಿತುಕೊಂಡಿಲ್ಲ.

ಸ್ನೇಹಿತರೆ,

ಬಿಜೆಪಿ-ಎನ್‌ಡಿಎ ಸರ್ಕಾರಕ್ಕೆ ಒಂದೇ ಒಂದು ಮಂತ್ರವಿದೆ - ನಾಗರಿಕ ದೇವೋ ಭವ. ದೇಶದ ನಾಗರಿಕರ ಶಿಕ್ಷಣ, ಗಳಿಕೆ, ಔಷಧಗಳು, ನೀರಾವರಿ ಮತ್ತು ಜನರ ಸಮಸ್ಯೆಗಳ ಆಲಿಕೆ ನಮ್ಮ ಆದ್ಯತೆಯಾಗಿದೆ. ಈ ಮನೋಭಾವದಿಂದ ಇಂದು ಕಾಶಿಯ ಅಭಿವೃದ್ಧಿಯೂ ವಿಸ್ತರಿಸಲ್ಪಟ್ಟಿದೆ. ಗಂಗಾ ನದಿಯ ಮೇಲೆ ಸಿಗ್ನೇಚರ್ ಸೇತುವೆಯ ನಿರ್ಮಾಣದೊಂದಿಗೆ ಪೂರ್ವಾಂಚಲ್‌ನ ಸಂಪರ್ಕವು ಇನ್ನಷ್ಟು ಬಲಗೊಳ್ಳುತ್ತದೆ.

 

ಸ್ನೇಹಿತರೆ,

ಕಳೆದ ದಶಕದಲ್ಲಿ ಕಾಶಿಯು ಉತ್ತರ ಮತ್ತು ಪೂರ್ವ ಭಾರತಕ್ಕೆ ಪ್ರಮುಖ ಆರೋಗ್ಯ ಕೇಂದ್ರವಾಗಿ ಹೊರಹೊಮ್ಮಿದೆ. 500 ಹಾಸಿಗೆಗಳ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಕಾಶಿಯ ಆರೋಗ್ಯ ರಕ್ಷಣಾ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಇದರ ಜೊತೆಗೆ, 100 ಹಾಸಿಗೆಗಳ ನಿರ್ಣಾಯಕ ಆರೈಕೆ ಬ್ಲಾಕ್‌ಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇದು ಗಂಭೀರ ರೋಗಗಳ ಚಿಕಿತ್ಸೆಗಾಗಿ ಕಾಶಿಯಲ್ಲಿ ಬಹಳ ದೊಡ್ಡ ಸೌಲಭ್ಯ ಒದಗಿಸುತ್ತದೆ.

ಸ್ನೇಹಿತರೆ,

ಗಂಗಾ ನದಿ ಶುದ್ಧೀಕರಣವಾಗಲಿ, ಘಾಟ್‌ಗಳ ಅಭಿವೃದ್ಧಿಯಾಗಲಿ, ಆಡಳಿತ ಮತ್ತು ಆಡಳಿತಕ್ಕೆ ಸಂಬಂಧಿಸಿದ ಕಟ್ಟಡಗಳ ನಿರ್ಮಾಣವಾಗಲಿ, ಹರ್ಹುವಾ ಮತ್ತು ಭವಾನಿಪುರದಲ್ಲಿ ರೈತರಿಗೆ ದಾಸ್ತಾನು ಸೌಲಭ್ಯಗಳಾಗಲಿ, ವೃದ್ಧಾಶ್ರಮಗಳು ಅಥವಾ ಮಹಿಳಾ ಹಾಸ್ಟೆಲ್‌ಗಳು - ಇವೆಲ್ಲವೂ ಕಾಶಿಯ ಸೂಕ್ಷ್ಮ ಅಭಿವೃದ್ಧಿಗೆ ಪುರಾವೆಗಳಾಗಿವೆ. ಈ ಎಲ್ಲಾ ಯೋಜನೆಗಳಿಂದ ಬನಾರಸ್‌ ಜನರು ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದಾರೆ.

ಸ್ನೇಹಿತರೆ,

ಕಾಶಿಯ ಪರಂಪರೆ ಮತ್ತು ವೈಭವವನ್ನು ಬಲಪಡಿಸುವ ಅಭಿಯಾನವು ನಿರಂತರವಾಗಿ ನಡೆಯುತ್ತಿದೆ. ಸಂತ ಕಬೀರರ ಸ್ಥಳದ ಅಭಿವೃದ್ಧಿ ಮತ್ತು ನಾಗ್ವಾದಲ್ಲಿರುವ ಸಂತ ರವಿದಾಸ್ ಉದ್ಯಾನವನದ ನವೀಕರಣವು ಈ ಅಭಿಯಾನದ ಭಾಗವಾಗಿದೆ.

ಸ್ನೇಹಿತರೆ,

ನಮ್ಮ ಕಾಶಿ ಶಾಶ್ವತವಾಗಿದೆ, ಇದು ನಿರಂತರವಾಗಿ ಮುಂದುವರಿಯುವ ನಗರ. ಅದೇ ರೀತಿ, ಈ ಅಭಿವೃದ್ಧಿಯ ಅಭಿಯಾನವು ನಿರಂತರವಾಗಿ ಮುಂದುವರಿಯುತ್ತಿದೆ. ಮಹಿಳಾ ಶಕ್ತಿಯನ್ನು ಗೌರವಿಸುವ ಜತೆಗೆ, ನಮಗೆ ಆಶೀರ್ವಾದ ನೀಡಿದ್ದಕ್ಕಾಗಿ ಮತ್ತೊಮ್ಮೆ ನಾನು ನಿಮಗೆ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ, ಈ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ನಾನು ಶುಭಾಶಯಗಳನ್ನು ಸಲ್ಲಿಸುತ್ತೇನೆ. ನನ್ನೊಂದಿಗೆ ಹೇಳಿ -

ಭಾರತ್ ಮಾತಾ ಕಿ ಜೈ.

ಭಾರತ್ ಮಾತಾ ಕಿ ಜೈ.

ಭಾರತ್ ಮಾತಾ ಕಿ ಜೈ.

ವಂದೇ ಮಾತರಂ. ವಂದೇ ಮಾತರಂ. ವಂದೇ ಮಾತರಂ.

ಹರ್-ಹರ್ ಮಹಾದೇವ್.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
‘Modi Govt’s 12 years are transformational for industry’

Media Coverage

‘Modi Govt’s 12 years are transformational for industry’
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 12 ಜೂನ್ 2026
June 12, 2026

Breaking Barriers, Building Bharat: PM Modi’s Historic Push for Gender Equality and Inclusive Growth