The Hospital will remove darkness from the lives of many people in Varanasi and the region, leading them towards light: PM
Kashi is also now becoming famous as a big health center and healthcare hub of Purvanchal in UP: PM
Today, India's health strategy has five pillars - Preventive healthcare, Timely diagnosis of disease, Free and low-cost treatment, Good treatment in small towns and Expansion of technology in healthcare: PM

ಹರ ಹರ ಮಹಾದೇವ!

ಶ್ರೀ ಕಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ, ಪೂಜ್ಯ ಜಗದ್ಗುರುಗಳಾದ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ; ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್; ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್; ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್; ಶಂಕರ ನೇತ್ರ ಪ್ರತಿಷ್ಠಾನದ ಆರ್.ವಿ.ರಮಣಿ; ಡಾ.ಎಸ್.ವಿ. ಬಾಲಸುಬ್ರಮಣ್ಯಂ; ಶ್ರೀ ಮುರಳಿ ಕೃಷ್ಣಮೂರ್ತಿ; ರೇಖಾ ಜುಂಜುನ್‌ವಾಲಾ; ಮತ್ತು ಸಂಸ್ಥೆಯ ಎಲ್ಲಾ ಇತರ ಗೌರವಾನ್ವಿತ ಸದಸ್ಯರೇ, ಮಹಿಳೆಯರೇ ಮತ್ತು ಮಹನೀಯರೇ!

ಈ ಪವಿತ್ರ ತಿಂಗಳಲ್ಲಿ ಕಾಶಿಗೆ ಭೇಟಿ ನೀಡುವುದು ಒಂದು ವಿಶಿಷ್ಟ  ಆಧ್ಯಾತ್ಮಿಕ ಅನುಭವ ನೀಡುತ್ತದೆ. ಇಲ್ಲಿ ನೆರೆದಿರುವವರಲ್ಲಿ ಕಾಶಿಯ ನಿವಾಸಿಗಳು ಮಾತ್ರವಲ್ಲದೆಮ ಸಾಧು- ಸಂತರು, ಪರೋಪಕಾರಿಗಳು ಸಹ ಪಾಲ್ಗೊಂಡಿದ್ದು, ನಿಜವಾಗಿಯೂ ಆಶೀರ್ವದಿಸುವವರ ಅಪೂರ್ವ ಸಂಗಮವೆನಿಸಿದೆ! ಪೂಜ್ಯ ಶಂಕರಾಚಾರ್ಯರವರ ದರ್ಶನ, ಪ್ರಸಾದ ಮತ್ತು ಆಶೀರ್ವಾದ ಪಡೆಯುವ ಭಾಗ್ಯ ನನಗೆ ಒದಗಿ ಬಂದಿದೆ. ಅವರ ಆಶೀರ್ವಾದದಿಂದಲೇ ಕಾಶಿ ಮತ್ತು ಪೂರ್ವಾಂಚಲ ಪ್ರದೇಶಕ್ಕೆ ಇಂದು ಮತ್ತೊಂದು ಅತ್ಯಾಧುನಿಕ ಆಸ್ಪತ್ರೆ ದೊರಕಿದೆ. ಭಗವಂತ ಶಂಕರನ ಈ ದಿವ್ಯ ನಗರದಲ್ಲಿ ಆರ್‌ಜೆ ಶಂಕರ ಕಣ್ಣಿನ ಆಸ್ಪತ್ರೆಯು ಇಂದಿನಿಂದ ಜನತೆಗೆ ಸಮರ್ಪಣೆಯಾಗಿದೆ. ಕಾಶಿ ಮತ್ತು ಪೂರ್ವಾಂಚಲದ ಎಲ್ಲಾ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

 

ಸ್ನೇಹಿತರೇ,

ನಮ್ಮ ಧರ್ಮಗ್ರಂಥಗಳು "ತಮಸೋ ಮಾ ಜ್ಯೋತಿರ್ಗಮಯ:" ಎಂದು ಹೇಳುತ್ತವೆ. ಅದರ ಅರ್ಥ, ನಮ್ಮನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವುದು. ನೂತನ ಆರ್‌ಜೆ ಶಂಕರ ಕಣ್ಣಿನ ಆಸ್ಪತ್ರೆಯು ವಾರಣಾಸಿ ಮತ್ತು ಈ ಪ್ರದೇಶದ ಅಸಂಖ್ಯಾತ ಜನರ ಜೀವನದಲ್ಲಿನ ಕತ್ತಲೆಯನ್ನು ಹೋಗಲಾಡಿಸುತ್ತದೆ, ಜತೆಗೆ ಅವರನ್ನು ಬೆಳಕಿನೆಡೆಗೆ ಕರೆದೊಯ್ಯುತ್ತದೆ. ನಾನು ಈಗಷ್ಟೇ ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಬಂದಿದ್ದು, ಪ್ರತಿಯೊಂದು ಅರ್ಥದಲ್ಲೂ ಇದು ಆಧ್ಯಾತ್ಮಿಕತೆ ಮತ್ತು ಆಧುನಿಕತೆಯ ಸಮ್ಮಿಲನವನ್ನು ಪ್ರತಿನಿಧಿಸುತ್ತದೆ. ಈ ಆಸ್ಪತ್ರೆಯು ಹಿರಿಯ ನಾಗರಿಕರಿಗೆ ಸೇವೆ ಜತೆಗೆ ದೃಷ್ಟಿಹೀನ ಮಕ್ಕಳಿಗೆ ದೃಷ್ಟಿ ಕಲ್ಪಿಸಲು ಪ್ರಯತ್ನಿಸಲಿದೆ. ದೊಡ್ಡ ಸಂಖ್ಯೆಯಲ್ಲಿರುವ ಬಡವರು ಇಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಲಿದ್ದಾರೆ. ಮಾತ್ರವಲ್ಲದೆ, ಈ ಕಣ್ಣಿನ ಆಸ್ಪತ್ರೆಯು ಯುವಜನತೆಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ವೈದ್ಯಕೀಯ ವಿದ್ಯಾರ್ಥಿಗಳು ಇಲ್ಲಿ ಇಂಟರ್ನ್‌ಶಿಪ್ ಮಾಡಲು ಮತ್ತು ವೈದ್ಯಕೀಯ ಅಭ್ಯಾಸ ಮಾಡಲು ಸಾಧ್ಯವಾಗಲಿದೆ. ಹಾಗೆಯೇ, ಸಾಕಷ್ಟು ಮಂದಿ ಸಹಾಯಕ ಸಿಬ್ಬಂದಿಯಾಗಿ ಇಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ.

ಸ್ನೇಹಿತರೇ,

ಈ ಹಿಂದೆಯು ಸಹ ನನಗೆ ಶಂಕರ ನೇತ್ರ ಪ್ರತಿಷ್ಠಾನದ ಉದಾತ್ತ ಸೇವಾ ಪ್ರಯತ್ನದಲ್ಲಿ ಭಾಗಿಯಾಗುವ ಸೌಭಾಗ್ಯ ದೊರಕಿದೆ. ಈ ಹಿಂದೆ ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಲ್ಲಿನ ಶಂಕರ ಕಣ್ಣಿನ ಆಸ್ಪತ್ರೆ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದೆ. ನಿಮ್ಮ ಪೂಜ್ಯ ಗುರೂಜಿಯವರ ಮಾರ್ಗದರ್ಶನದಲ್ಲಿ ಆ ಕೆಲಸವನ್ನು ಕೈಗೆತ್ತಿಕೊಳ್ಳುವ ಗೌರವ ನನಗೆ ಒದಗಿ ಬಂದಿತ್ತು. ಇಂದು, ನಿಮ್ಮ ಮಾರ್ಗದರ್ಶನದಲ್ಲಿ ಇನ್ನಷ್ಟು ಕೊಡುಗೆ ನೀಡಲು ನನಗೆ ಮತ್ತೊಮ್ಮೆ ಅವಕಾಶ ದೊರಕಿರುವುದು ನನಗೆ ಅಪಾರ ತೃಪ್ತಿ ನೀಡಿದೆ. ವಾಸ್ತವವಾಗಿ, ಪೂಜ್ಯ ಸ್ವಾಮೀಜಿಯವರು ನಾನು ಇನ್ನೊಂದು ರೀತಿಯಲ್ಲಿ ಆಶೀರ್ವಾದ ಪಡೆದಿದ್ದೇನೆ ಎಂದು ನೆನಪಿಸಿದರು. ಶ್ರೀ ಕಂಚಿ ಕಾಮಕೋಟಿ ಪೀಠಾಧಿಪತಿ ಜಗದ್ಗುರು ಶಂಕರಾಚಾರ್ಯ ಚಂದ್ರಶೇಖರೇಂದ್ರ ಸರಸ್ವತಿ ಮಹಾಸ್ವಾಮೀಜಿಗಳ ಆಶೀರ್ವಾದ ಪಡೆಯುವ ಭಾಗ್ಯವೂ ನನಗೆ ದೊರಕಿತ್ತು. ನಾನು ಹಲವಾರು ಸಂದರ್ಭಗಳಲ್ಲಿ ಪರಮ ಪೂಜ್ಯ ಆಚಾರ್ಯರ ಪಾದದ ಬಳಿ ಕುಳಿತುಕೊಳ್ಳುವ ಭಾಗ್ಯವೂ ಒದಗಿ ಬಂದಿತ್ತು. ಜತೆಗೆ ಪರಮ ಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿಯವರಿಂದಲೂ ಅಪಾರ ಪ್ರೀತಿ ಪಡೆದಿದ್ದೇನೆ. ಅವರ ಮಾರ್ಗದರ್ಶನದಲ್ಲಿ ನಾನು ಹಲವಾರು ಪ್ರಮುಖ ಯೋಜನೆಗಳನ್ನು ಪೂರ್ಣಗೊಳಿಸಿದ್ದೇನೆ ಮತ್ತು ಈಗ ನಾನು ಜಗದ್ಗುರು ಶಂಕರಾಚಾರ್ಯ ಶ್ರೀ ಶಂಕರ್ ವಿಜಯೇಂದ್ರ ಸರಸ್ವತಿ ಅವರ ಒಡನಾಟದಿಂದ ಆಶೀರ್ವಾದ ಪಡೆದಿದ್ದೇನೆ. ಹಾಗಾಗಿ ಒಂದು ರೀತಿಯಲ್ಲಿ, ಮೂರು ಗುರು ಪರಂಪರೆಯ ಸಂಪರ್ಕ ಹೊಂದುವುದು ಜೀವನದ ಶ್ರೇಷ್ಠ ಆಶೀರ್ವಾದಗಳಲ್ಲಿ ಒಂದಾಗಿದೆ. ಇದು ನನಗೆ  ವೈಯಕ್ತಿಕವಾಗಿ ನನಗೆ ಅಪಾರ ತೃಪ್ತಿಯನ್ನು ನೀಡಿರುವ ಸಂಗತಿಯಾಗಿದೆ. ಜಗದ್ಗುರುಗಳು ಇಂದು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ನಾನು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರಕ್ಕೆ ಪಾದ ಬೆಳೆಸಿದ್ದಾರೆ. ಇಲ್ಲಿನ ಜನರ ಪ್ರತಿನಿಧಿಯಾಗಿ ನಾನು ನಿಮಗೆ ಹೃತ್ಪೂರ್ವಕ ಸ್ವಾಗತ ಕೋರುತ್ತೇನೆ ಮತ್ತು ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ.

ಸ್ನೇಹಿತರೇ,

ಈ ಸಂದರ್ಭದಲ್ಲಿ, ನನ್ನ ಆತ್ಮೀಯ ಗೆಳೆಯ ರಾಕೇಶ್ ಜುಂಜುನ್‌ವಾಲಾ ಅವರನ್ನು ಸಹಜವಾಗಿಯೇ ನೆನಪಿಸಿಕೊಳ್ಳಬೇಕಾಗುತ್ತದೆ. ವ್ಯಾಪಾರ ಕ್ಷೇತ್ರದಲ್ಲಿ ಅವರ ಸ್ಥಾನಮಾನದ ಬಗ್ಗೆ ಜಗತ್ತಿಗೆ ಚೆನ್ನಾಗಿಯೇ ಗೊತ್ತಿದೆ. ಅವರ ಬಗ್ಗೆ ಸಾಕಷ್ಟು ಪ್ರಸ್ತಾಪವಾಗಿದೆ. ಆದಾಗ್ಯೂ, ಸಾಮಾಜಿಕ ಸೇವೆಗೆ ಅವರ ಸಮರ್ಪಣಾ ಮನೋಭಾವ ಗುಣಕ್ಕೆ ಈ ದಿನವೂ ಸಾಕ್ಷಿಯಾಗಿದೆ. ಅವರ ಕುಟುಂಬವು ಈಗ ಅವರ ಪರಂಪರೆಯನ್ನು ಮುಂದುವರಿಸುತ್ತಿದೆ. ರೇಖಾ ಅವರು ಈ ಉದಾತ್ತ ಸೇವಾ ಕೆಲಸಕ್ಕೆ ಸಾಕಷ್ಟು ಸಮಯ ವಿನಿಯೋಗಿಸುತ್ತಿದ್ದಾರೆ. ನನಗೆ ಇಂದು ರಾಕೇಶ್ ಅವರ ಇಡೀ ಕುಟುಂಬವನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದಕ್ಕೆ ಅತೀವ ಸಂತಸವಾಗುತ್ತಿದೆ. ಶಂಕರ ಕಣ್ಣಿನ ಆಸ್ಪತ್ರೆ ಮತ್ತು ಚಿತ್ರಕೂಟ ಕಣ್ಣಿನ ಆಸ್ಪತ್ರೆ ಎರಡನ್ನೂ ವಾರಣಾಸಿಯಲ್ಲಿ ಸ್ಥಾಪಿಸುವಂತೆ ನಾನು ಹಿಂದೆ  ವಿನಂತಿಸಿದ್ದನ್ನು ನೆನಪಿಸಿಕೊಳ್ಳುತ್ತೇನೆ. ಹಾಗೆಯೇ ಕಾಶಿಯ ಜನರ ಆಶಯಗಳನ್ನು ಗೌರವಿಸಿದ್ದಕ್ಕಾಗಿ ನಾನು ಈ ಎರಡೂ ಸಂಸ್ಥೆಗಳಿಗೆ ತುಂಬಾ ಆಭಾರಿಯಾಗಿದ್ದೇನೆ. ಈ ಹಿಂದೆ ನಾನು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದ ಸಾವಿರಾರು ಜನ ಚಿತ್ರಕೂಟ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈಗ, ಈ ಪ್ರದೇಶದ ಜನರಿಗೆ ವಾರಣಾಸಿಯಲ್ಲಿಯೇ ಎರಡು ಹೊಸ ಆಧುನಿಕ ಸಂಸ್ಥೆಗಳಿಂದ ಪ್ರಯೋಜನ ಸಿಗಲಿದೆ.

 

ಸ್ನೇಹಿತರೇ,

ಕಾಶಿ ಹಿಂದಿನಿಂದಲೂ ಧರ್ಮ ಮತ್ತು ಸಂಸ್ಕೃತಿಯ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ. ಈಗ, ಇದು ಉತ್ತರ ಪ್ರದೇಶ ಮತ್ತು ಪೂರ್ವಾಂಚಲ ಪ್ರದೇಶಕ್ಕೆ ಪ್ರಮುಖ ಆರೋಗ್ಯ ಕೇಂದ್ರವಾಗಿ ಮನ್ನಣೆ ಗಳಿಸುತ್ತಿದೆ. ಬಿಎಚ್‌ಯುನಲ್ಲಿರುವ ತುರ್ತು ಚಿಕಿತ್ಸಾ ಕೇಂದ್ರವಾಗಲಿ (ಟ್ರಾಮಾ ಸೆಂಟರ್‌), ಸೂಪರ್- ಸ್ಪೆಷಾಲಿಟಿ ಆಸ್ಪತ್ರೆಯಾಗಿರಲಿ, ದೀನದಯಾಳ್ ಉಪಾಧ್ಯಾಯ ಆಸ್ಪತ್ರೆ ಮತ್ತು ಕಬೀರಚೌರಾ ಆಸ್ಪತ್ರೆಗಳಲ್ಲಿನ ಸುಧಾರಿತ ಸೌಲಭ್ಯಗಳು, ಹಿರಿಯರು ಮತ್ತು ಸರ್ಕಾರಿ ನೌಕರರಿಗೆ ವಿಶೇಷ ಆಸ್ಪತ್ರೆಗಳು ಅಥವಾ ವೈದ್ಯಕೀಯ ಕಾಲೇಜುಗಳು- ಹೀಗೆ ಕಾಶಿಯಲ್ಲಿ ಹಲವು ಆರೋಗ್ಯ ಸುಧಾರಣೆಗಳನ್ನು ಕಳೆದ ಒಂದು ದಶಕದಲ್ಲಿ ತರಲಾಗಿದೆ. ಇಂದು, ಬನಾರಸ್ ಕೂಡ ಆಧುನಿಕ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯವನ್ನು ಹೊಂದಿದೆ. ಹಿಂದೆಲ್ಲಾ ಚಿಕಿತ್ಸೆಗಾಗಿ ದೆಹಲಿ ಅಥವಾ ಮುಂಬೈ ಮೊರೆ ಹೋಗಬೇಕಿದ್ದ ರೋಗಿಗಳಿಗೆ ಈಗ ಸ್ಥಳೀಯವಾಗಿಯೇ ಗುಣಮಟ್ಟದ ಆರೈಕೆಯನ್ನುಪಡೆಯಲು ಅನುವಾಗಿದೆ. ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ ಸೇರಿದಂತೆ ದೇಶದ ನಾನಾ ಭಾಗಗಳಿಂದ ಸಾವಿರಾರು ಜನ ಈಗ ಚಿಕಿತ್ಸೆ ಬಯಸಿ ಇಲ್ಲಿಗೆ ಬರುತ್ತಾರೆ. ನಮ್ಮ ಮೋಕ್ಷದಾಯಿನಿ ಕಾಶಿಯು ಈಗ ಹೊಸ ಚೈತನ್ಯದ ಕೇಂದ್ರವಾಗಿ ವಿಕಸನಗೊಳ್ಳುತ್ತಿದೆ ಹಾಗೂ ಹೊಸ ಶಕ್ತಿ ಮತ್ತು ಸುಧಾರಿತ ಆರೋಗ್ಯ ಸಂಪನ್ಮೂಲಗಳನ್ನು ನೀಡುತ್ತಿದೆ.

ಸ್ನೇಹಿತರೇ,

ಹಿಂದಿನ ಸರ್ಕಾರಗಳ ಅವಧಿಯಲ್ಲಿ ವಾರಣಾಸಿ ಸೇರಿದಂತೆ ಪೂರ್ವಾಂಚಲದಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿತ್ತು. ಪರಿಸ್ಥಿತಿ ಎಷ್ಟು ಭೀಕರವಾಗಿತ್ತು ಎಂದರೆ, ಕೇವಲ 10 ವರ್ಷಗಳ ಹಿಂದೆ, ಪೂರ್ವಾಂಚಲದಲ್ಲಿ ಮಿದುಳಿನ ಜ್ವರಕ್ಕೆ ಚಿಕಿತ್ಸೆಗೆ ಬ್ಲಾಕ್ ಮಟ್ಟದಲ್ಲಿ ಚಿಕಿತ್ಸಾ ಕೇಂದ್ರಗಳೇ ಇರಲಿಲ್ಲ. ಇಂತಹ ಆಘಾತಕಾರಿ ಸ್ಥಿತಿಗತಿಯ ಬಗ್ಗೆ ಮಾಧ್ಯಮಗಳು ಸಾಕಷ್ಟು ವರದಿ ಮಾಡಿದ್ದವು. ಆದರೂ ಹಿಂದಿನ ಸರ್ಕಾರಗಳು ಸಮಸ್ಯೆ ಬಗೆಹರಿಸಲು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕಳೆದ ಒಂದು ದಶಕದಲ್ಲಿ, ನಾವು ಕಾಶಿಯಲ್ಲಿ ಮಾತ್ರವಲ್ಲದೆ, ಇಡೀ ಪೂರ್ವಾಂಚಲ ಪ್ರದೇಶದಾದ್ಯಂತ ಆರೋಗ್ಯ ಸೌಲಭ್ಯಗಳ ವಿಸ್ತರಣೆ ಕಾರ್ಯ ಅಭೂತಪೂರ್ವವಾಗಿ ಕೈಗೊಂಡಿರುವುದಕ್ಕೆ ನನಗೆ ಸಂತಸವಾಗುತ್ತದೆ. ಇಂದು, 100ಕ್ಕೂ ಹೆಚ್ಚು ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇಡೀ ಪೂರ್ವಾಂಚಲದಲ್ಲಿ ಮಿದುಳಿನ ಜ್ವರಕ್ಕೆ ಚಿಕಿತ್ಸೆ ದೊರೆಯುತ್ತಿದೆ. ಕಳೆದ 10 ವರ್ಷಗಳಲ್ಲಿ, ಈ ಪ್ರದೇಶದಾದ್ಯಂತ ಇರುವ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹೊಸದಾಗಿ 10,000ಕ್ಕೂ ಹೆಚ್ಚು ಹೊಸ ಹಾಸಿಗೆಗಳನ್ನು ಸೇರ್ಪಡೆ ಮಾಡಲಾಗಿದೆ. ಇದೇ ಅವಧಿಯಲ್ಲಿ, ಪೂರ್ವಾಂಚಲದ ಹಳ್ಳಿಗಳಲ್ಲಿ 5,500ಕ್ಕೂ ಹೆಚ್ಚು ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ಸ್ಥಾಪಿಸಲಾಗಿದೆ. ದಶಕದ ಹಿಂದೆ ಪೂರ್ವಾಂಚಲದ ಜಿಲ್ಲಾಸ್ಪತ್ರೆಗಳಲ್ಲೂ ಡಯಾಲಿಸಿಸ್ ಸೌಲಭ್ಯ ಇರಲಿಲ್ಲ. ಇಂದು, 20ಕ್ಕೂ ಹೆಚ್ಚು ಡಯಾಲಿಸಿಸ್ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ರೋಗಿಗಳಿಗೆ ಈ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ.

 

ಸ್ನೇಹಿತರೇ,

21ನೇ ಶತಮಾನದ ನವ ಭಾರತವು ಅಪ್ರಸ್ತುತ ಚಿಂತನೆಯಿಂದ ಆರೋಗ್ಯ ರಕ್ಷಣೆಯ ಸುರಕ್ಷಿತ ವಿಧಾನಗಳಾಗಿ ಪರಿವರ್ತನೆಯಾಗಿದೆ. ಇಂದು, ಭಾರತದ ಆರೋಗ್ಯ ರಕ್ಷಣಾ ಕಾರ್ಯತಂತ್ರವು ಐದು ಪ್ರಮುಖ ಆಧಾರ ಸ್ತಂಭಗಳ ಮೇಲೆ ರೂಪುಗೊಂಡಿದೆ. ಮೊದಲನೆಯದಾಗಿ ಮುನ್ನೆಚ್ಚರಿಕಾ ಆರೋಗ್ಯ ರಕ್ಷಣೆ- ಅಂದರೆ ಸಂಭಾವ್ಯ ಅನಾರೋಗ್ಯ ಕಾಡದಂತೆ ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಗಳು. ಎರಡನೆಯದಾಗಿ ರೋಗ, ಆರೋಗ್ಯ ಸಮಸ್ಯೆಗಳಿಗೆ ಸಕಾಲಿಕ ಚಿಕಿತ್ಸೆ. ಮೂರನೆಯದಾಗಿ, ಉಚಿತ ಹಾಗೂ ಕೈಗೆಟುಕುವ ದರದಲ್ಲಿ ಚಿಕಿತ್ಸೆ ಕಲ್ಪಿಸುವುದು ಹಾಗೂ ದುಬಾರಿ ಔಷಧಗಳು ಲಭ್ಯವಾಗುವಂತಹ ವಾತಾವರಣ ಸೃಷ್ಟಿಸುವುದು. ನಾಲ್ಕನೆಯದಾಗಿ, ಸಣ್ಣಪುಟ್ಟ ಪಟ್ಟಣಗಳಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಖಾತರಿಪಡಿಸುವುದು, ವೈದ್ಯರ ಕೊರತೆ ನಿವಾರಿಸುವುದು ಹಾಗೂ ಐದನೆಯದಾಗಿ ಆರೋಗ್ಯ ಕ್ಷೇತ್ರದಲ್ಲಿ ಸುಧಾರಿತ ತಂತ್ರಜ್ಞಾನದ ವಿಸ್ತರಣೆಗೆ ಒತ್ತು.

ಸ್ನೇಹಿತರೇ,

ಪ್ರತಿಯೊಬ್ಬ ವ್ಯಕ್ತಿಗಳನ್ನು ರೋಗದಿಂದ ರಕ್ಷಿಸುವುದು ಭಾರತದ ಆರೋಗ್ಯ ನೀತಿಯ ಪ್ರಮುಖ ಆದ್ಯತೆ ಮತ್ತು ಇದು ಆರೋಗ್ಯ ಕ್ಷೇತ್ರದ ಮೊದಲ ಆಧಾರಸ್ತಂಭವಾಗಿದೆ. ಅನಾರೋಗ್ಯವು ಹಿಂದುಳಿದವರ ಬಡತನವನ್ನು ಹೆಚ್ಚಿಸುತ್ತಾ ಹೋಗುತ್ತದೆ. ನಿಮಗೆಲ್ಲಾ ತಿಳಿದಿರುವಂತೆ, ಕಳೆದ 10 ವರ್ಷಗಳಲ್ಲಿ, 250 ದಶಲಕ್ಷ ಜನರು ಬಡತನದಿಂದ ಹೊರಬಂದಿದ್ದಾರೆ. ಆದಾಗ್ಯೂ, ಗಂಭೀರ, ಮಾರಣಾಂತಿಕ ರೋಗಗಳು ಅವರನ್ನು ಸುಲಭವಾಗಿ ಬಡತನದ ಕೂಪಕ್ಕೆ ತಳ್ಳುತ್ತವೆ. ಆ ಕಾರಣಕ್ಕಾಗಿಯೇ, ಸರ್ಕಾರ ರೋಗ ತಡೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ನಮ್ಮ ಸರ್ಕಾರವು ವಿಶೇಷವಾಗಿ ಸ್ವಚ್ಛತೆ, ಯೋಗ ಮತ್ತು ಆಯುರ್ವೇದ, ಪೌಷ್ಟಿಕ ಆಹಾರ ಮತ್ತು ಸಂಬಂಧಿತ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಿದೆ. ನಾವು ಲಸಿಕೆ ಅಭಿಯಾನವನ್ನು ಸಾಧ್ಯವಾದಷ್ಟು ಮನೆಗಳಿಗೆ ವಿಸ್ತರಿಸಿದ್ದೇವೆ. ಕೇವಲ 10 ವರ್ಷಗಳ ಹಿಂದೆ, ದೇಶದ ಲಸಿಕೀಕರಣ (ವ್ಯಾಕ್ಸಿನೇಷನ್‌) ವ್ಯಾಪ್ತಿಯು ಶೇಕಡಾ 60ರಷ್ಟಿತ್ತು. ಹಾಗಾಗಿ ಕೋಟ್ಯಾಂತರ ಮಕ್ಕಳು ಲಸಿಕೆ ಸುರಕ್ಷತೆಯಿಂದ ವಂಚಿತರಾಗಿದ್ದರು. ಮಾತ್ರವಲ್ಲದೆ, ವ್ಯಾಕ್ಸಿನೇಷನ್ ವ್ಯಾಪ್ತಿಯ ಹೆಚ್ಚಳ ದರವು ವಾರ್ಷಿಕವಾಗಿ ಕೇವಲ ಶೇಕಡಾ 1ರಿಂದ 1.5ರಷ್ಟು ಮಾತ್ರ ಇತ್ತು. ಆ ವೇಗದಲ್ಲೇ ಮುಂದುವರಿದಿದ್ದರೆ, ಪ್ರತಿ ಮಗುವಿಗೆ ಮತ್ತು ಪ್ರತಿ ಪ್ರದೇಶಕ್ಕೆ ಸಾರ್ವತ್ರಿಕ ಲಸಿಕೀಕರಣ ವ್ಯಾಪ್ತಿಯನ್ನು ಸಾಧಿಸಲು ಇನ್ನೂ 40ರಿಂದ 50 ವರ್ಷ ಹಿಡಿಯುತ್ತಿತ್ತು. ರಾಷ್ಟ್ರದ ಯುವ ಪೀಳಿಗೆಯವರಿಗೆ ಎಷ್ಟರ ಮಟ್ಟಿಗೆ ಘೋರ ಅನ್ಯಾಯ ನಡೆದಿತ್ತು ಎಂದು ನೀವು ಅಂದಾಜಿಸಬಹುದು. ಹಾಗಾಗಿ ನಾವು ಸರ್ಕಾರ ರಚಿಸಿದಾಗ, ಮಕ್ಕಳ ವ್ಯಾಕ್ಸಿನೇಷನ್ ಮತ್ತು ಅದರ ವ್ಯಾಪ್ತಿಯನ್ನು ವಿಸ್ತರಿಸಲು ಆದ್ಯತೆ ನೀಡಿದ್ದೇವೆ. ನಾವು ಏಕಕಾಲಕ್ಕೆ ಹಲವು ಸಚಿವಾಲಯಗಳನ್ನು ಒಟ್ಟುಗೂಡಿಸಿ ಮಿಷನ್ ಇಂದ್ರಧನುಷ್ ಅಭಿಯಾನ ಪ್ರಾರಂಭಿಸಿದ್ದೇವೆ. ಇದರ ಪರಿಣಾಮವಾಗಿ, ಲಸಿಕೆ ಪ್ರಮಾಣ ಗಮನಾರ್ಹವಾಗಿ ಏರಿಕೆಯಾಗಿರುವುದು ಮಾತ್ರವಲ್ಲದೆ, ಈ ಹಿಂದೆ ಆ ವ್ಯಾಪ್ತಿಯಿಂದ ಹೊರಗೆ ಉಳಿದಿದ್ದ ಗರ್ಭಿಣಿಯರು ಮತ್ತು ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ. ಭಾರತವು ಲಸಿಕೀಕರಣಕ್ಕೆ ಬಲವಾದ ಒತ್ತು ನೀಡಿದುದರ ಪರಿಣಾಮವು ಕೋವಿಡ್‌- 19 ಸಾಂಕ್ರಾಮಿಕ ರೋಗದ ಹಾವಳಿ ತಲೆದೋರಿದ್ದ ಸಮಯದಲ್ಲಿ ಹೆಚ್ಚು ಪ್ರಯೋಜನಕಾರಿಯಾಯಿತು. ಇಂದು, ಲಸಿಕೆ ಅಭಿಯಾನವು ದೇಶಾದ್ಯಂತ ವೇಗಗತಿಯಲ್ಲಿ ನಡೆದಿದೆ.

 

ಸ್ನೇಹಿತರೇ,

ರೋಗಗಳು ಕಾಣಿಸಿಕೊಳ್ಳದಂತೆ ಮುನ್ನೆಚ್ಚರಿಕೆ ಕ್ರಮಗಳ ಜತೆಗೆ, ಆರಂಭಿಕ ಹಂತದಲ್ಲೇ ತ್ವರಿತವಾಗಿ ರೋಗಗಳನ್ನು ಪತ್ತೆ ಹಚ್ಚುವುದು ಸಹ ಅಷ್ಟೇ ಮುಖ್ಯವೆನಿಸುತ್ತದೆ. ಆ ಕಾರಣಕ್ಕಾಗಿಯೇ, ದೇಶಾದ್ಯಂತ ಲಕ್ಷಾಂತರ ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ಸ್ಥಾಪಿಸಲಾಗಿದೆ. ಆ ಮೂಲಕ ಕ್ಯಾನ್ಸರ್ ಮತ್ತು ಮಧುಮೇಹದಂತಹ ರೋಗಗಳನ್ನು ಮೊದಲೇ ಪತ್ತೆ ಹಚ್ಚುವ ಕಾರ್ಯಕ್ಕೆ ಒತ್ತು ನೀಡಲಾಗಿದೆ. ಇಂದು, ನಾವು ದೇಶಾದ್ಯಂತ ಇರುವ ಕ್ಲಿಷ್ಟಕರ ರೋಗಗಳ ಚಿಕಿತ್ಸಾ ಘಟಕಗಳು (ಕ್ರಿಟಿಕಲ್ ಕೇರ್ ಯುನಿಟ್‌) ಹಾಗೂ ಆಧುನಿಕ ಪ್ರಯೋಗಾಲಯಗಳನ್ನು ಸಂಪರ್ಕಿಸುವ ಜಾಲವನ್ನು ರೂಪಿಸಲಾಗುತ್ತಿದೆ. ಆರೋಗ್ಯ ಕ್ಷೇತ್ರದ ಈ ಎರಡನೇ ಆಧಾರಸ್ತಂಭವು ಲಕ್ಷಾಂತರ ಜನರ ಜೀವ ಉಳಿಸುತ್ತಿದೆ.

ಸ್ನೇಹಿತರೇ,

ಇನ್ನು ಆರೋಗ್ಯ ರಕ್ಷಣೆಯ ಮೂರನೇ ಆಧಾರಸ್ತಂಭವೆನಿಸಿರುವ ಕೈಗೆಟುಕುವ ದರದಲ್ಲಿ ಚಿಕಿತ್ಸೆ ಮತ್ತು ಅಗ್ಗದ ಔಷಧಗಳು ಮುಖ್ಯವಾಗಿವೆ. ಇಂದು, ದೇಶದ ಪ್ರತಿಯೊಬ್ಬ ಪ್ರಜೆಯ ಸರಾಸರಿ ವೈದ್ಯಕೀಯ ವೆಚ್ಚ ಶೇ.25ರಷ್ಟು ಕಡಿಮೆಯಾಗಿದೆ. ಜನರು ಈಗ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳ ಮೂಲಕ ಶೇ. 80ರಷ್ಟು ರಿಯಾಯ್ತಿ ದರದಲ್ಲಿ ಔಷಧಿಗಳನ್ನು ಖರೀದಿಸಲು ಸಾಧ್ಯವಾಗುತ್ತಿದೆ. ಅದು ಹೃದಯನಾಳದ ಸ್ಟೆಂಟ್‌ಗಳು, ಮಂಡಿ ಚಿಪ್ಪು ಅಳವಡಿಕೆ ಅಥವಾ ಕ್ಯಾನ್ಸರ್ ಔಷಧಿಗಳಾಗಿರಲಿ, ಅತ್ಯಾವಶ್ಯಕ ಚಿಕಿತ್ಸೆಗಳ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಬಡವರಿಗೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡುವ ಆಯುಷ್ಮಾನ್ ಯೋಜನೆ ಹಲವರ ಪಾಲಿಗೆ ಜೀವರಕ್ಷಕವೆನಿಸಿದೆ. ಈವರೆಗೆ, ಈ ಯೋಜನೆಯಡಿ ದೇಶಾದ್ಯಂತ 7.5 ಕೋಟಿಗೂ ಹೆಚ್ಚು ರೋಗಿಗಳು ಉಚಿತ ಚಿಕಿತ್ಸೆ ಸೌಲಭ್ಯ ಪಡೆದಿದ್ದಾರೆ. ಈ ಸೇವೆಯನ್ನು ಈಗ ದೇಶಾದ್ಯಂತ ಪ್ರತಿ ಕುಟುಂಬದ ಹಿರಿಯ ನಾಗರಿಕರಿಗೂ ವಿಸ್ತರಿಸಲಾಗುತ್ತಿದೆ.

 

ಸ್ನೇಹಿತರೇ,

ಆರೋಗ್ಯ ರಕ್ಷಣೆಯ ನಾಲ್ಕನೇ ಆಧಾರ ಸ್ತಂಭವು ಚಿಕಿತ್ಸೆಗಾಗಿ ದೆಹಲಿ ಮತ್ತು ಮುಂಬೈನಂತಹ ಪ್ರಮುಖ ನಗರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ಕಳೆದ ಒಂದು ದಶಕದಲ್ಲಿ, ನಾವು ಚಿಕ್ಕ ನಗರಗಳಲ್ಲಿ ಎಐಐಎಂಎಸ್‌,  ವೈದ್ಯಕೀಯ ಕಾಲೇಜುಗಳು ಮತ್ತು ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಿದ್ದೇವೆ. ದೇಶದಲ್ಲಿ ವೈದ್ಯರ ಕೊರತೆ ನೀಗಿಸಲು ಕಳೆದ ದಶಕದಲ್ಲಿ ಸಾವಿರಾರು ಹೊಸ ವೈದ್ಯಕೀಯ ಸೀಟುಗಳು ಸೇರ್ಪಡೆಯಾಗಿವೆ. ಮುಂದಿನ ಐದು ವರ್ಷಗಳಲ್ಲಿ 75,000ಕ್ಕೂ ಹೆಚ್ಚು ವೈದ್ಯಕೀಯ ಸೀಟುಗಳ ಸೇರ್ಪಡೆ ಮಾಡುವ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ.

ಸ್ನೇಹಿತರೇ,

ಆರೋಗ್ಯ ರಕ್ಷಣೆಯ ಐದನೇ ಆಧಾರ ಸ್ತಂಭವು ತಂತ್ರಜ್ಞಾನದ ಮೂಲಕ ಆರೋಗ್ಯ ಸೇವೆಗಳು ಎಲ್ಲರಿಗೂ ಸುಲಭ ಹಾಗೂ ವ್ಯಾಪಕವಾಗಿ ಸಿಗುವಂತೆ ಮಾಡುವುದು. ಇಂದು, ಡಿಜಿಟಲ್ ಆರೋಗ್ಯ ಗುರುತನ್ನು (ಹೆಲ್ತ್ ಐಡಿ) ಸೃಷ್ಟಿಸಲಾಗುತ್ತಿದೆ ಮತ್ತು ಇ-ಸಂಜೀವಿನಿ ಅಪ್ಲಿಕೇಶನ್‌ನಂತಹ ಪ್ಲಾಟ್‌ಫಾರ್ಮ್‌ಗಳ ಮೂಲಕ ರೋಗಿಗಳು ತಾವಿರುವ ಕಡೆಯಲ್ಲೇ ಸಮಾಲೋಚನೆ, ಸ್ಪಂದನೆ ಪಡೆಯಲು ಸಾಧ್ಯವಾಗಿದೆ. ಇ-ಸಂಜೀವನಿ ಅಪ್ಲಿಕೇಶನ್ ಮೂಲಕ 30 ಕೋಟಿಗೂ ಹೆಚ್ಚು ಜನ ಈಗಾಗಲೇ ಸಮಾಲೋಚನೆಯ ಪ್ರಯೋಜನ ಪಡೆದಿದ್ದಾರೆ ಎಂಬ ಮಾಹಿತಿ ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ನಾವು ಆರೋಗ್ಯ ಸೇವೆಗಳೊಂದಿಗೆ ಡ್ರೋನ್ ತಂತ್ರಜ್ಞಾನವನ್ನು ಸಂಯೋಜಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದೇವೆ.

ಸ್ನೇಹಿತರೇ,

ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸಲು ಆರೋಗ್ಯಯುತ ಮತ್ತು ಸಮರ್ಥ ಯುವ ಪೀಳಿಗೆ ಅತ್ಯಗತ್ಯ. ಈ ಧ್ಯೇಯದ ಕಾರ್ಯ ಸಾಧನೆಗೆ ಪರಮ ಪೂಜ್ಯ ಶಂಕರಾಚಾರ್ಯರ ಆಶೀರ್ವಾದವೂ ಇದೆ ಎಂದು ಹೇಳಲು ನನಗೆ ಬಹಳ ಸಂತೋಷವಾಗಿದೆ. ಆರೋಗ್ಯಕರ ಮತ್ತು ಸಮರ್ಥ ಭಾರತಕ್ಕಾಗಿ ಕೈಗೊಂಡಿರುವ ಈ ಮಿಷನ್ ಸಮರ್ಥವಾಗಿ ಬೆಳೆಯಲೆಂದು ಬಾಬಾ ವಿಶ್ವನಾಥರಲ್ಲಿ ಪ್ರಾರ್ಥಿಸುತ್ತೇನೆ. ಇಂದು, ನಾನು ಪೂಜ್ಯ ಶಂಕರಾಚಾರ್ಯರ ಪಾದದ ಬಳಿ ಕುಳಿತಾಗ, ನನಗೆ ನನ್ನ ಬಾಲ್ಯದ ದಿನಗಳು ನೆನಪಾದವು. ನಾನು ಚಿಕ್ಕವನಿದ್ದಾಗ, ನನ್ನ ಹಳ್ಳಿಯ ವೈದ್ಯರು ಪ್ರತಿವರ್ಷ ಸ್ವಯಂಸೇವಕರ ಗುಂಪಿನೊಂದಿಗೆ ಒಂದು ತಿಂಗಳ ಕಾಲ ಬಿಹಾರಕ್ಕೆ ತೆರಳುತ್ತಿದ್ದರು. ಅಲ್ಲಿ ಅವರು ಒಂದು ತಿಂಗಳ ಕಾಲ ದೊಡ್ಡ ಪ್ರಮಾಣದಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಅಭಿಯಾನ ನಡೆಸುತ್ತಿದ್ದರು, ಅದನ್ನು "ನೇತ್ರ ಯಜ್ಞ" ಎಂದೇ ಬಣ್ಣಿಸಬಹುದು. ಆ ವೈದ್ಯರು  ಪ್ರತಿವರ್ಷ ಒಂದು ತಿಂಗಳನ್ನು ಈ ಉದ್ದೇಶಕ್ಕೆಂದೇ ಮೀಸಲಿಟ್ಟಿದ್ದರು. ಅವರೊಂದಿಗೆ ನನ್ನ ಗ್ರಾಮದ ಅನೇಕ ಮಂದಿ ಸ್ವಯಂಸೇವಕರಾಗಿ ಹೋಗಿಬರುತ್ತಿದ್ದರು. ನನ್ನ ಬಾಲ್ಯದ ದಿನಗಳಲ್ಲೂ ಬಿಹಾರದಲ್ಲಿ ಇಂತಹ ಸೇವೆಗಳ ಅಪಾರ ಅವಶ್ಯಕತೆಯ ಬಗ್ಗೆ ನನಗೆ ಅರಿವಿತ್ತು. ಹಾಗಾಗಿ, ಇಂದು ಬಿಹಾರದಲ್ಲಿ ಅದೇರೀತಿಯ ಶಂಕರ ಕಣ್ಣಿನ ಆಸ್ಪತ್ರೆಯನ್ನು ತೆರೆಯಲು ಪರಿಗಣಿಸುವಂತೆ ನಾನು ಪೂಜ್ಯ ಶಂಕರಾಚಾರ್ಯ ಅವರಲ್ಲಿ ಹೃತ್ಪೂರ್ವಕವಾಗಿ ಮನವಿ ಮಾಡುತ್ತೇನೆ. ನನ್ನ ಬಾಲ್ಯದ ಆ ನೆನಪುಗಳು ಬಿಹಾರದ ಜನರಿಗೆ ಅಂತಹ ಸೇವೆಯು ಎಷ್ಟು ಪರಿಣಾಮಕಾರಿಯಾಗಿತ್ತು ಎಂಬುದನ್ನು ನೆನಪಿಸುತ್ತದೆ. ಮಹಾರಾಜ್‌ಜೀ ಅವರು ದೇಶದ ಮೂಲೆ ಮೂಲೆಯನ್ನು ತಲುಪುವ ದೃಷ್ಟಿಯನ್ನು ಹೊಂದಿದ್ದಾರೆ ಮತ್ತು ಬಿಹಾರಕ್ಕೆ ಆದ್ಯತೆ ನೀಡುವ ಜತೆಗೆ ಅಲ್ಲಿನ ಜನರನ್ನು ಆಶೀರ್ವದಿಸಲಿದ್ದಾರೆ ಎಂಬ ವಿಶ್ವಾಸ ನನಗಿದೆ. ಬಿಹಾರದ ಶ್ರದ್ಧೆಯ ಮತ್ತು ಶ್ರಮಿಕ ಜನರಿಗೆ ಸೇವೆ ಸಲ್ಲಿಸಲು ಇದು ಒಂದು ದೊಡ್ಡ ಗೌರವವಾಗಿದೆ ಮತ್ತು ಅವರ ಯೋಗಕ್ಷೇಮಕ್ಕೆ ಕೊಡುಗೆ ನೀಡುವುದು ನಮಗೆ ಜೀವನದಲ್ಲಿ ಹೆಚ್ಚಿನ ಸಾರ್ಥಕತೆಯನ್ನು ತರುತ್ತದೆ. ಮತ್ತೊಮ್ಮೆ ನಿಮ್ಮೆಲ್ಲರಿಗೂ, ವಿಶೇಷವಾಗಿ ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸುವ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ಈ ಉದಾತ್ತ ಕಾರ್ಯಾಚರಣೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಸಹೋದರ ಸಹೋದರಿಯರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಪೂಜ್ಯ ಜಗದ್ಗುರುಗಳ ಮುಂದೆ ಶಿರಬಾಗಿ ಹೃದಯಾಂತರಾಳದ ನಮನಗಳನ್ನು ಸಲ್ಲಿಸುತ್ತೇನೆ. ಅವರ ನಿರಂತರ ಆಶೀರ್ವಾದ ಮತ್ತು ಮಾರ್ಗದರ್ಶನಕ್ಕಾಗಿ ನನ್ನ ಹೃತ್ಪೂರ್ವಕ ಪ್ರಾರ್ಥನೆಗಳನ್ನು ಅರ್ಪಿಸುತ್ತೇನೆ. ನನ್ನ ಮನದಾಳದಿಂದ ಕೃತಜ್ಞತೆಗಳನ್ನುಸಲ್ಲಿಸುತ್ತಾ ನನ್ನ ಭಾಷಣಕ್ಕೆ ವಿರಾಮ ಹೇಳುತ್ತೇನೆ.

ಹರ-ಹರ ಮಹಾದೇವ!

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
From welfare to opportunity: How DPI 2.0 and AI will unlock India’s productivity

Media Coverage

From welfare to opportunity: How DPI 2.0 and AI will unlock India’s productivity
NM on the go

Nm on the go

Always be the first to hear from the PM. Get the App Now!
...
State Visit of Prime Minister to Seychelles
June 28, 2026

As part of Prime Minister Shri Narendra Modi’s State Visit to Seychelles from 27-29 June 2026, Prime Minister and the President of Seychelles, H.E. Dr. Patrick Herminie today held official talks at the State House in Victoria, Mahe.

The talks covered the full spectrum of bilateral relations, with the leaders agreeing to further strengthen cooperation in health, education, capacity building, digital transformation, sustainable development, social infrastructure, renewable energy, maritime security and defence. They also exchanged views on regional and global developments, including challenges in the Indian Ocean region, such as illegal fishing, drug trafficking and piracy. Both leaders expressed satisfaction at the progress made in the implementation of projects and initiatives under the Special Economic Package announced by India. Prime Minister reaffirmed India’s commitment to supporting the development priorities of Seychelles and to further deepen the close and enduring partnership between the two countries.

Following the official talks, both leaders released a joint commemorative logo marking 50 years of the establishment of diplomatic relations between the two countries. Several MoUs/agreements in the fields of Capacity Building, UPI, Health, Agriculture, Shipping, Space, Extradition and Line of Credit were exchanged thereafter. The amount of the Line of Credit stands at INR 1250 crores. The full list of MoUs/agreements may be seen here [link]. In addition, several announcements in the fields of food security, infrastructure, health, vocational training, maritime security and defence were made in support of the development needs of Seychelles. The details of these announcements may be seen here [link]. Seychelles also announced that it is joining the Coalition for Disaster Resilient Infrastructure [CDRI].

Later in the day, Prime Minister addressed an Extraordinary Sitting of the National Assembly of Seychelles, becoming the first Indian Prime Minister to do so. In his address, he highlighted the historical bonds of friendship between India and Seychelles and underscored the shared values of democracy, rule of law and people-centric governance that guide the two countries. He noted that mutual trust and close cooperation have shaped a robust partnership spanning development cooperation, maritime security, technology, innovation, health and capacity building. Prime Minister also called for enhanced parliamentary exchanges between the two democracies. The full address of Prime Minister may be seen here [link]

The Leader of Opposition of Seychelles, H.E. Mr. Bernard Georges, also called on Prime Minister. The two leaders discussed India-Seychelles bilateral ties and conveyed their strong support to further build the special friendship between the two countries.