ಸೃಜನಶೀಲತೆ ಮತ್ತು ಜ್ಞಾನಕ್ಕೆ ಯಾವುದೇ ಮಿತಿ ಇಲ್ಲ
ಠ್ಯಾಗೂರ್ ಬಂಗಾಳದ ಹೆಮ್ಮೆ ಮತ್ತು ಭಾರತೀಯ ವೈವಿಧ್ಯದ ಬಗ್ಗೆ ಸಮಾನ ಹೆಮ್ಮೆ ಹೊಂದಿದ್ದವರು
ರಾಷ್ಟ್ರ ಮೊದಲು ಎನ್ನುವ ಮನೋಭಾವದಿಂದಾಗಿ ಹಲವು ಪರಿಹಾರಗಳು
ಏಕ ಭಾರತ್ – ಶ್ರೇಷ್ಠ ಭಾರತ್ ಗೆ ಬಂಗಾಳ ಪ್ರೇರಣೆ
ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಮುಖ ಮೈಲಿಗಲ್ಲು: ಪ್ರಧಾನಮಂತ್ರಿ

ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಶ್ರೀ ಜಗದೀಪ್ ಧಂಕರ್ ಜಿ, ವಿಶ್ವಭಾರತಿಯ ಉಪಕುಲಪತಿ ಪ್ರೊ. ಬಿದ್ಯುತ್ ಚಕ್ರವರ್ತಿಜಿ, ಎಲ್ಲಾ ಶಿಕ್ಷಕರು, ಸಿಬ್ಬಂದಿ ವರ್ಗ ಮತ್ತು ನನ್ನ ಶಕ್ತಿಯುತ ಯುವ ಸಹೋದ್ಯೋಗಿಗಳೇ!

ಗುರುದೇವ್ ರವೀಂದ್ರನಾಥ ಠ್ಯಾಗೋರ್ ಅವರು ತಾಯಿ ಭಾರತಿಗೆ ಸಮರ್ಪಿಸಿರುವ ಅದ್ಭುತ ಪರಂಪರೆಯ ಭಾಗವಾಗಿರಲು ಮತ್ತು ಎಲ್ಲಾ ಸಹೋದ್ಯೋಗಿಗಳೊಂದಿಗೆ ಜೊತೆಯಾಗಿರುವುದು ನನಗೆ ಹೊಸ ಶಕ್ತಿಯನ್ನು ನೀಡಿದೆ ಹಾಗೂ ಇದು ನನಗೆ ಸ್ಪೂರ್ತಿದಾಯಕ ಮತ್ತು ಆನಂದದಾಯಕವಾಗಿದೆ. ಈ ಪವಿತ್ರ ನೆಲದಲ್ಲಿ ನಾನೇ ಖುದ್ದು ನಿಮ್ಮೆಲ್ಲರನ್ನು ಭೇಟಿಯಾಗಬಹುದೆಂದು ಬಯಸಿದ್ದೆ. ಆದರೆ ನಾವು ಅನುಸರಿಸಬೇಕಾದ ಹೊಸ ನಿಯಮಗಳಿಂದಾಗಿ, ನಾನು ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಮತ್ತು ನನ್ನ ಶುಭಾಶಯಗಳನ್ನು ದೂರದಿಂದಲೇ ನಿಮಗೆ ಅರ್ಪಿಸಿ ಈ ಪವಿತ್ರ ಭೂಮಿಗೆ ನಮಸ್ಕರಿಸುತ್ತೇನೆ. ಸ್ವಲ್ಪ ಸಮಯದ ಅಂತರದಲ್ಲಿ ನನಗೆ ಎರಡನೇ ಬಾರಿ ಈ ಅವಕಾಶ ಸಿಕ್ಕಿದೆ. ನಿಮ್ಮ ಜೀವನದ ಈ ಮಹತ್ವದ ಸಂದರ್ಭದಲ್ಲಿ, ನಾನು ಎಲ್ಲಾ ಯುವ ಸಹೋದ್ಯೋಗಿಗಳು, ಪೋಷಕರು ಮತ್ತು ಶಿಕ್ಷಕರನ್ನು ಅಭಿನಂದಿಸುತ್ತೇನೆ ಮತ್ತು ಹಾರೈಸುತ್ತೇನೆ.

ಸ್ನೇಹಿತರೇ,

ಇಂದು ಮತ್ತೊಂದು ಶುಭ ಸಂದರ್ಭ, ದೊಡ್ಡ ಸ್ಫೂರ್ತಿಯ ದಿನ. ಇಂದು ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನ. ಛತ್ರಪತಿ ಶಿವಾಜಿ ಮಹಾರಾಜ್ ಜಿ ಅವರ ಜನ್ಮ ದಿನಾಚರಣೆಯಂದು ನನ್ನ ಎಲ್ಲಾ ದೇಶವಾಸಿಗಳಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಗುರುದೇವ್ ರವೀಂದ್ರನಾಥ ಠಾಗೋರ್ ಜಿ ಅವರು ಧೈರ್ಯಶಾಲಿ ಶಿವಾಜಿಯ ಮೇಲೆ ಶಿವಾಜಿ-ಉತ್ಸವ್ ಎಂಬ ಕವನವನ್ನು ಬರೆದಿದ್ದಾರೆ. ಅವರು ಹೀಗೆ ಬರೆದಿದ್ದಾರೆ:

कोन्‌ दूर शताब्देर

कोन्‌-एक अख्यात दिबसे

नाहि जानि आजि, नाहि जानि आजि,

माराठार कोन्‌ शोएले अरण्येर

अन्धकारे बसे,

हे राजा शिबाजि,

तब भाल उद्भासिया ए भाबना तड़ित्प्रभाबत्

एसेछिल नामि–

“एकधर्म राज्यपाशे खण्ड

छिन्न बिखिप्त भारत

बेँधे दिब आमि।’’

ಅಂದರೆ, ಹಲವಾರು ಶತಮಾನಗಳ ಹಿಂದೆ, ಸಾಮಾನ್ಯ ದಿನದಂದು, ನಾನು ಆ ದಿನವನ್ನು ಊಹಿಸಲೂ ಸಾಧ್ಯವಿಲ್ಲ… ಈ ಆಲೋಚನೆ ನಿಮಗೆ ಬಂದಿದೆಯೆ ಓ ಶಿವಾಜಿ ಮಹಾರಾಜರೇ ಪರ್ವತದ ಎತ್ತರದ ಶಿಖರ ಮತ್ತು ದಟ್ಟವಾದ ಕಾಡಿನಿಂದ ಬಂದ ಮಿಂಚಿನಂತೆ… ಈ ಆಲೋಚನೆ ನಿಮಗೆ ಬಂದಿತೇ? ಈ ಛಿದ್ರಗೊಂಡ ದೇಶವನ್ನು ನೀವು ಒಂದುಗೂಡಿಸಲೆಂದು ಬಂದಿತೆ? ಇದಕ್ಕಾಗಿ ನನ್ನನ್ನು ನಾನು ಅರ್ಪಿಸಿಕೊಳ್ಳಬೇಕೆ? ಛತ್ರಪತಿ ವೀರ ಶಿವಾಜಿಯಿಂದ ಪ್ರೇರಿತರಾಗಿ, ಭಾರತದ ಏಕತೆಗೆ, ಈ ಸಾಲುಗಳಲ್ಲಿ ಭಾರತವನ್ನು ಒಂದಾಗಿಸಲು ಕರೆ ಬಂದಿತು. ದೇಶದ ಏಕತೆಯನ್ನು ಬಲಪಡಿಸುವ ಈ ಭಾವನೆಗಳನ್ನು ನಾವು ಮರೆಯುವಂತಿಲ್ಲ. ನಮ್ಮ ಜೀವನದ ಪ್ರತಿ ಕ್ಷಣವೂ ದೇಶದ ಏಕತೆ ಮತ್ತು ಸಮಗ್ರತೆಯ ಈ ಮಂತ್ರವನ್ನು ನಾವು ನೆನಪಿಟ್ಟುಕೊಂಡು ಬದುಕಬೇಕು. ಅದು ನಮಗೆ ಠ್ಯಾಗೋರ್ ಅವರು ನೀಡಿದ ಸಂದೇಶ.

ಸ್ನೇಹಿತರೇ,

ನೀವು ಕೇವಲ ವಿಶ್ವವಿದ್ಯಾನಿಲಯದ ಭಾಗವಲ್ಲ, ಆದರೆ ರೋಮಾಂಚಕ ಸಂಪ್ರದಾಯವನ್ನು ಹೊತ್ತು ಹಿಡಿದವರು. ಗುರುದೇವ್ ಅವರು ವಿಶ್ವ-ಭಾರತಿಯನ್ನು ಕೇವಲ ವಿಶ್ವವಿದ್ಯಾನಿಲಯವಾಗಿ ನೋಡಲು ಬಯಸಿದರೆ ಅದಕ್ಕೆ ಗ್ಲೋಬಲ್ ಯೂನಿವರ್ಸಿಟಿ ಎಂದು ಹೆಸರಿಸಬಹುದಿತ್ತು ಅಥವಾ ಅದಕ್ಕೆ ಬೇರೆ ಹೆಸರನ್ನು ನೀಡಬಹುದಿತ್ತು. ಆದರೆ ಅವರು ಅದನ್ನು ವಿಶ್ವ ಭಾರತಿ ವಿಶ್ವವಿದ್ಯಾಲಯ ಎಂದು ಕರೆದರು. ಅವರು ಹೇಳಿದರು : ‘ ವಿಶ್ವ ಭಾರತಿಯು ತನ್ನ ಅತ್ಯುತ್ತಮ ಸಂಸ್ಕೃತಿಯನ್ನು ಇತರರಿಗೆ ನೀಡುವ ಭಾರತದ ಜವಾಬ್ದಾರಿಯನ್ನು ಅಂಗೀಕರಿಸಿದೆ ಮತ್ತು ಇತರರಿಂದ ಅತ್ಯುತ್ತಮವಾದುದನ್ನು ಸ್ವೀಕರಿಸುವ ಹಕ್ಕನ್ನು ಹೊಂದಿದೆ.’’

ವಿಶ್ವ ಭಾರತಿಯಲ್ಲಿ ಕಲಿಯಲು ಬರುವ ಯಾರಾದರೂ ಭಾರತ ಮತ್ತು ಭಾರತೀಯತೆಯ ದೃಷ್ಟಿಕೋನದಿಂದ ಇಡೀ ಜಗತ್ತನ್ನು ನೋಡುತ್ತಾರೆ ಎಂಬುದು ಗುರುದೇವ್ ಅವರ ನಿರೀಕ್ಷೆಯಾಗಿತ್ತು. ಗುರುದೇವರ ಈ ಮಾದರಿಯು ಬ್ರಹ್ಮ, ತ್ಯಜಿಸುವಿಕೆ ಮತ್ತು ಆನಂದದ ಮೌಲ್ಯಗಳಿಂದ ಪ್ರೇರಿತವಾಗಿತ್ತು. ಆದ್ದರಿಂದ, ಅವರು ವಿಶ್ವ ಭಾರತಿಯನ್ನು ಅಂತಹ ಕಲಿಕೆಯ ಸ್ಥಳವನ್ನಾಗಿ ಮಾಡಿದರು, ಇದು ಭಾರತದ ಶ್ರೀಮಂತ ಪರಂಪರೆ, ಸಂಶೋಧನೆ ಮತ್ತು ಬಡವರಿಗಿಂತ ಬಡವರ ಸಮಸ್ಯೆಗಳನ್ನು ಪರಿಹರಿಸುವ ಕೆಲಸವನ್ನು ಸ್ವೀಕರಿಸುತ್ತದೆ. ಈ ಮೌಲ್ಯಗಳನ್ನು ನಾನು ಇಲ್ಲಿಂದ ಹಿಂದಿನ ವಿದ್ಯಾರ್ಥಿಗಳಲ್ಲಿ ನೋಡಿದ್ದೇನೆ ಮತ್ತು ದೇಶವು ನಿಮ್ಮಿಂದಲೂ ಇದನ್ನು ನಿರೀಕ್ಷಿಸುತ್ತದೆ.

 

ಸ್ನೇಹಿತರೇ,

ಗುರುದೇವ್ ಠ್ಯಾಗೋರರಿಗೆ, ವಿಶ್ವ ಭಾರತಿ ಕೇವಲ ಜ್ಞಾನವನ್ನು ನೀಡುವ ಮತ್ತು ಪೂರೈಸುವ ಸಂಸ್ಥೆಯಾಗಿರಲಿಲ್ಲ. ಭಾರತೀಯ ಸಂಸ್ಕೃತಿಯ ಅತ್ಯುನ್ನತ ಗುರಿಯನ್ನು ತಲುಪುವ ಪ್ರಯತ್ನ ಇದಾಗಿದೆ, ಇದನ್ನು ನಾವು ʼತಮ್ಮನ್ನು ತಾವು ಅರಿತುಕೊಳ್ಳುವುದುʼ ಎಂದು ಕರೆಯುತ್ತೇವೆ -. ನಿಮ್ಮ ಕ್ಯಾಂಪಸ್‌ನಲ್ಲಿ ಬುಧವಾರ ನೀವು ‘ಉಪಾಸನ’ ಕ್ಕೆ ಸೇರಿದಾಗ, ನೀವೇ ಮೌಲ್ಯಮಾಪನ ಮಾಡಿ. ಗುರುದೇವ ಪ್ರಾರಂಭಿಸಿದ ಕಾರ್ಯಕ್ರಮಗಳಿಗೆ ನೀವು ಸೇರಿದಾಗ, ನಿಮ್ಮನ್ನು ಮೌಲ್ಯಮಾಪನ ಮಾಡಿಕೊಳ್ಳಲು ಅವಕಾಶವಿದೆ.

ಗುರುದೇವ ಹೇಳಿದರು:‘

‘आलो अमार

आलो ओगो

आलो भुबन भारा’

ಆದ್ದರಿಂದ ಅದು ನಮ್ಮ ಪ್ರಜ್ಞೆಯನ್ನು ಜಾಗೃತಗೊಳಿಸುವ ಆ ಬೆಳಕಿನ ಕರೆ. ಗುರುದೇವ ಠ್ಯಾಗೋರ್ ಅವರು ವೈವಿಧ್ಯಮಯ ವ್ಯತ್ಯಾಸಗಳು ಮತ್ತು ಸಿದ್ಧಾಂತಗಳ ನಡುವೆ ನಮ್ಮನ್ನು ನಾವು ಕಂಡುಕೊಳ್ಳಬೇಕು ಎಂದು ನಂಬಿದ್ದರು. ಅವರು ಬಂಗಾಳಕ್ಕೆ ಹೇಳುತ್ತಿದ್ದರು:

बांगलार माटी,

बांगलार जोल,

बांगलार बायु, बांगलार फोल,

पुण्यो हौक,

पुण्यो हौक,

पुण्यो हौक,

हे भोगोबन..

ಆದರೆ, ಅದೇ ಸಮಯದಲ್ಲಿ, ಅವರು ಭಾರತದ ವೈವಿಧ್ಯದ ಬಗ್ಗೆ ಅಷ್ಟೇ ಹೆಮ್ಮೆ ಪಡುತ್ತಿದ್ದರು. ಅವರು ಹೇಳುತ್ತಿದ್ದರು:

हे मोर चित्तो पुन्यो तीर्थे जागो रे धीरे,

ई भारोतेर महामनोबेर सागोरो-तीरे

हेथाय दाराए दु बाहु बाराए नमो

नरोदे-बोतारे,

ಗುರುದೇವ ಅವರ ವಿಶಾಲ ದೃಷ್ಟಿಯಿಂದಲೇ ಅವರು ಶಾಂತಿನಿಕೇತನದ ವಿಶಾಲ ಆಗಸದಡಿಯಲ್ಲಿ ಮಾನವಕುಲವನ್ನು ಗಮನಿಸಿದರು.

एशो कर्मी, एशो ज्ञानी,

ए शो जनकल्यानी, एशो तपशराजो हे!

एशो हे धीशक्ति शंपद मुक्ताबोंधो शोमाज हे !

’ಕಾರ್ಮಿಕ ಸಹಚರರೇ, ಓ ಜ್ಞಾನದ ಸಹಚರರೇ, ಓ ಸಮಾಜ ಸೇವಕರೇ, ಓ ಸಂತರೇ ಸಮಾಜದ ಎಲ್ಲಾ ಪ್ರಜ್ಞಾಪೂರ್ವಕ ಸಹಚರರೇ, ಸಮಾಜದ ವಿಮೋಚನೆಗಾಗಿ ನಾವು ಒಟ್ಟಾಗಿ ಕೆಲಸ ಮಾಡೋಣ. ನಿಮ್ಮ ಕ್ಯಾಂಪಸ್‌ನಲ್ಲಿ ಜ್ಞಾನವನ್ನು ಪಡೆಯಲು ಒಂದು ಕ್ಷಣ ಕಳೆಯುವವರಿಗೆ ಗುರುದೇವನ ಈ ದೃಷ್ಟಿ ಸಿಗುವುದು ಅವರ ಪುಣ್ಯ.

ಸ್ನೇಹಿತರೇ,

ವಿಶ್ವ ಭಾರತಿ ಸ್ವತಃ ಜ್ಞಾನದ ವಿಸ್ತಾರವಾದ ಸಮುದ್ರವಾಗಿದ್ದು, ಅನುಭವ ಆಧಾರಿತ ಶಿಕ್ಷಣಕ್ಕಾಗಿ ಇದರ ಅಡಿಪಾಯವನ್ನು ಹಾಕಲಾಯಿತು. ಗುರುದೇವ ಈ ಮಹಾನ್ ವಿಶ್ವವಿದ್ಯಾಲಯವನ್ನು ಜ್ಞಾನ ಮತ್ತು ಸೃಜನಶೀಲತೆಗೆ ಯಾವುದೇ ಗಡಿರೇಖೆಗಳಿಲ್ಲ ಎಂಬ ಕಲ್ಪನೆಯ ಮೇಲೆ ಸ್ಥಾಪಿಸಿದರು. ಜ್ಞಾನ, ಆಲೋಚನೆಗಳು ಮತ್ತು ಕೌಶಲ್ಯಗಳು ಸ್ಥಿರವಾಗಿಲ್ಲ, ಕಲ್ಲಿನಂತೆ ಅಲ್ಲ, ಸ್ಥಾಯಿ ಅಲ್ಲ, ಆದರೆ ಇವು ಶಾಶ್ವತವೆಂದು ನೀವು ಯಾವಾಗಲೂ ನೆನಪಿಟ್ಟುಕೊಳ್ಳಬೇಕು. ಇದು ನಿರಂತರ ಪ್ರಕ್ರಿಯೆ ಮತ್ತು ಕಾರ್ಯದ ತಿದ್ದುಪಡಿಗೆ ಯಾವಾಗಲೂ ಅವಕಾಶವಿದೆ, ಆದರೆ ಜ್ಞಾನ ಮತ್ತು ಶಕ್ತಿ ಎರಡೂ ಜವಾಬ್ದಾರಿಯೊಂದಿಗೆ ಬರುತ್ತವೆ.

ಅಧಿಕಾರದಲ್ಲಿದ್ದಾಗ ಸಂಯಮ ಮತ್ತು ಸೂಕ್ಷ್ಮತೆ ಹೊಂದಿರುವಂತೆ, ಅದೇ ರೀತಿ ಪ್ರತಿಯೊಬ್ಬ ವಿದ್ವಾಂಸರೂ ಸಹ, ಪ್ರತಿಯೊಬ್ಬ ತಜ್ಞರೂ ಸಹ ಆ ಶಕ್ತಿಯನ್ನು ಹೊಂದಿರದವರ ಬಗ್ಗೆ ಜವಾಬ್ದಾರರಾಗಿರಬೇಕು. ನಿಮ್ಮ ಜ್ಞಾನವು ನಿಮ್ಮದಲ್ಲ ಆದರೆ ಅದು ಸಮಾಜ, ದೇಶ ಮತ್ತು ಭವಿಷ್ಯದ ಪೀಳಿಗೆಗಳ ಪರಂಪರೆಯಾಗಿದೆ. ನಿಮ್ಮ ಜ್ಞಾನ ಮತ್ತು ಕೌಶಲವು ಸಮಾಜವನ್ನು ಮತ್ತು ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಬಹುದು ಅಥವಾ ಸಮಾಜವನ್ನು ಅಪಪ್ರಚಾರ ಮತ್ತು ವಿನಾಶದ ಕತ್ತಲೆಯಲ್ಲಿ ತಳ್ಳಬಹುದು. ಇತಿಹಾಸ ಮತ್ತು ವರ್ತಮಾನದಲ್ಲಿ ಇಂತಹ ಅನೇಕ ಉದಾಹರಣೆಗಳಿವೆ.

ನೀವು ನೋಡಿ, ಪ್ರಪಂಚದಾದ್ಯಂತ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಹರಡುತ್ತಿರುವ ಅನೇಕರಲ್ಲಿ ಹೆಚ್ಚು ವಿದ್ಯಾವಂತ, ಹೆಚ್ಚು ಕಲಿತ, ಹೆಚ್ಚು ನುರಿತ ಜನರಿದ್ದಾರೆ ಮತ್ತೊಂದೆಡೆ, ಕೊರೊನಾದಂತಹ ಜಾಗತಿಕ ಸಾಂಕ್ರಾಮಿಕ ರೋಗದಿಂದ ಜಗತ್ತನ್ನು ಉಳಿಸಲು ಸದಾ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳಲ್ಲಿ ಶ್ರಮಿಸುತ್ತಿರುವ ಜನರಿದ್ದಾರೆ.

ಇದು ಕೇವಲ ಸಿದ್ಧಾಂತದ ಪ್ರಶ್ನೆಯಲ್ಲ, ಮೂಲ ವಿಷಯವೆಂದರೆ ಮನಸ್ಥಿತಿ. ನೀವು ಏನು ಮಾಡುತ್ತೀರಿ ಎಂಬುದು ನಿಮ್ಮ ಮನಸ್ಥಿತಿ ಧನಾತ್ಮಕ ಅಥವಾ ಋಣಾತ್ಮಕವೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಎರಡಕ್ಕೂ ಅವಕಾಶವಿದೆ ಮತ್ತು ಇಬ್ಬರಿಗೂ ಮಾರ್ಗಗಳು ತೆರೆದಿರುತ್ತವೆ. ನಾವು ಸಮಸ್ಯೆಯ ಭಾಗವಾಗಬೇಕೆ ಅಥವಾ ಪರಿಹಾರವಾಗಬೇಕೇ ಎಂದು ನಿರ್ಧರಿಸುವುದು ನಮ್ಮ ಕೈಯಲ್ಲಿದೆ. ನಾವು ಒಂದೇ ಶಕ್ತಿ, ಸಾಮರ್ಥ್ಯ, ಬುದ್ಧಿವಂತಿಕೆ ಮತ್ತು ವೈಭವವನ್ನು ಉತ್ತಮ ಬಳಕೆಗೆ ಬಳಸಿದರೆ ಫಲಿತಾಂಶವು ಒಂದೇ ಆಗಿರುತ್ತದೆ, ಆದರೆ ನಾವು ಅವುಗಳನ್ನು ದುರುಪಯೋಗಪಡಿಸಿಕೊಂಡರೆ ಫಲಿತಾಂಶವು ವಿಭಿನ್ನವಾಗಿರುತ್ತದೆ. ನಾವು ನಮ್ಮ ಸ್ವಂತ ಆಸಕ್ತಿಯನ್ನು ಮಾತ್ರ ನೋಡಿದರೆ, ನಾವು ಯಾವಾಗಲೂ ತೊಂದರೆಗಳು, ಸಮಸ್ಯೆಗಳು ಮತ್ತು ಅಸಮಾಧಾನದಿಂದ ಸುತ್ತುವರಿದಿರುತ್ತೇವೆ.

ಆದರೆ ನೀವು ನಿಮ್ಮ ಮತ್ತು ನಿಮ್ಮ ಸ್ವಾರ್ಥವನ್ನು ಮೀರಿ ಮತ್ತು ʼರಾಷ್ಟ್ರ ಮೊದಲುʼ ಎಂದುಕೊಂಡು ಮುಂದುವರಿಯುತ್ತಿದ್ದರೆ, ಪ್ರತಿಯೊಂದು ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವಂತೆಯೂ ನಿಮಗೆ ಅನಿಸುತ್ತದೆ. ದುಷ್ಟ ಶಕ್ತಿಗಳಲ್ಲಿಯೂ ಸಹ, ನೀವು ಒಳ್ಳೆಯದನ್ನು ಕಂಡುಕೊಳ್ಳುವಿರಿ, ಪರಿಸ್ಥಿತಿಯನ್ನು ಬದಲಾಯಿಸುವಿರಿ ಮತ್ತು ನೀವು ಪರಿಸ್ಥಿತಿಯನ್ನು ಬದಲಾಯಿಸುವಿರಿ ಮತ್ತು ನಿಮ್ಮಲ್ಲಿಯೇ ಪರಿಹಾರವಾಗಿ ಹೊರಹೊಮ್ಮುತ್ತೀರಿ.

ನಿಮ್ಮ ಉದ್ದೇಶಗಳು ಸ್ಪಷ್ಟವಾಗಿದ್ದರೆ ಮತ್ತು ನಿಮ್ಮ ನಿಷ್ಠೆಯು ತಾಯಿ ಭಾರತಿಗೆ, ಪ್ರತಿ ನಿರ್ಧಾರ, ಪ್ರತಿ ನಡವಳಿಕೆ, ನಿಮ್ಮ ಪ್ರತಿಯೊಂದು ಕೆಲಸವೂ ಒಂದು ಅಥವಾ ಇನ್ನೊಂದು ಸಮಸ್ಯೆಯನ್ನು ಪರಿಹರಿಸುವತ್ತ ಸಾಗುತ್ತದೆ. ಯಶಸ್ಸು ಮತ್ತು ವೈಫಲ್ಯವು ನಮ್ಮ ವರ್ತಮಾನ ಮತ್ತು ಭವಿಷ್ಯವನ್ನು ನಿರ್ಧರಿಸುವುದಿಲ್ಲ. ನಿರ್ಧಾರದ ನಂತರ ನೀವು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯದಿರಬಹುದು, ಆದರೆ ನಿರ್ಧಾರ ತೆಗೆದುಕೊಳ್ಳಲು ನೀವು ಭಯಪಡಬಾರದು. ಯುವಕರಾಗಿ, ಮನುಷ್ಯರಾಗಿ, ನಾವು ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆದರುತ್ತಿರುವಾಗಲೆಲ್ಲಾ ಅದು ನಮಗೆ ದೊಡ್ಡ ಬಿಕ್ಕಟ್ಟಾಗಿರುತ್ತದೆ. ನೀವು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ನಿರುತ್ಸಾಹ ತೋರಿದರೆ, ನಿಮ್ಮ ಯೌವನ ಕಳೆದು ಹೋಗಬಹುದು ಹಾಗೂ ನೀವು ಇನ್ನೂ ಚಿಕ್ಕವರಾಗಿಯೇ ಉಳಿದಿರುವುದಿಲ್ಲ.

ಭಾರತದ ಯುವಜನರಿಗೆ ಹೊಸತನ, ರಿಸ್ಕ್ ತೆಗೆದುಕೊಳ್ಳುವ ಮತ್ತು ಮುಂದುವರಿಯುವ ಉತ್ಸಾಹ ಇರುವವರೆಗೆ, ಕನಿಷ್ಠ, ನಾನು ದೇಶದ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. 130 ಕೋಟಿ ಜನಸಂಖ್ಯೆಯ ಯುವ ದೇಶದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಯುವ ಶಕ್ತಿ ಇದ್ದಾಗ ನನ್ನ ವಿಶ್ವಾಸ ಬಲಗೊಳ್ಳುತ್ತದೆ. ನಿಮಗೆ ಬೇಕಾದ ಬೆಂಬಲ ಮತ್ತು ಪರಿಸರ ಏನೇ ಇರಲಿ, ನಾನು, ನನ್ನ ಸರ್ಕಾರ ಮತ್ತು 130 ಕೋಟಿ ನಿರ್ಣಯಗಳೊಂದಿಗೆ ಇರುವ ದೇಶ ಮತ್ತು ಅದರ ಕನಸುಗಳನ್ನು ನನಸಾಗಿಸಲು ಮಾಡು ಪ್ರಯತ್ನಗಳಿಗೆ ದೇಶವು ನಿಮ್ಮೊಂದಿಗೆ ನಿಂತಿದೆ.

ಸ್ನೇಹಿತರೇ,

ವಿಶ್ವಭಾರತಿಯ 100 ವರ್ಷಗಳ ಐತಿಹಾಸಿಕ ಸಂದರ್ಭದಲ್ಲಿ ನಾನು ನಿಮ್ಮೊಂದಿಗೆ ಮಾತನಾಡಿದಾಗ, ಭಾರತದ ಸ್ವಾಭಿಮಾನ ಮತ್ತು ಸ್ವಾವಲಂಬನೆಗಾಗಿ ಎಲ್ಲ ಯುವಕರ ಕೊಡುಗೆಯನ್ನು ನಾನು ಪ್ರಸ್ತಾಪಿಸಿದೆ. ನೀವು ಇಲ್ಲಿಂದ ಪದವಿ ಪಡೆದಾಗ ನಿಮ್ಮ ಜೀವನದ ಮುಂದಿನ ಹಂತದಲ್ಲಿ ನಿಮಗೆಲ್ಲರಿಗೂ ಸಾಕಷ್ಟು ಅನುಭವಗಳು ಸಿಗುತ್ತವೆ.

ಸ್ನೇಹಿತರೇ,

ಇಂದು, ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ದಿನಾಚರಣೆಯ ಬಗ್ಗೆ ನಮಗೆ ಹೆಮ್ಮೆಯಿರುವಂತೆ, ನನಗೆ ಇಂದು ಧರಂಪಾಲ್ ಜಿ ಯವರು ನೆನಪಿಗೆ ಬರುತ್ತಾರೆ. ಇಂದು ಮಹಾನ್ ಗಾಂಧಿವಾದಿ ಧರಂಪಾಲ್ ಜಿ ಅವರ ಜನ್ಮದಿನವೂ ಆಗಿದೆ. ಅವರ ಪುಸ್ತಕಗಳಲ್ಲಿ “ದಿ ಬ್ಯೂಟಿಫುಲ್ ಟ್ರೀ - ಹದಿನೆಂಟನೇ ಶತಮಾನದಲ್ಲಿ ಸ್ಥಳೀಯ ಭಾರತೀಯ ಶಿಕ್ಷಣ” ಒಂದು.

ಈ ಪವಿತ್ರ ಭೂಮಿಯಿಂದ ಇಂದು ನಿಮ್ಮೊಂದಿಗೆ ಮಾತನಾಡುತ್ತಿದ್ದಾಗ, ನಾನು ಅವರ ಬಗ್ಗೆ ಉಲ್ಲೇಖಿಸಲೇಬೇಕು. ಮತ್ತು ನಾನು ಬಂಗಾಳದ ಶಕ್ತಿಯುತ ಭೂಮಿಯಿಂದ ಮಾತನಾಡುವಾಗ, ಧರಂಪಾಲ್ ಜಿ ವಿಷಯವನ್ನು ನಿಮ್ಮ ಮುಂದೆ ಇಡುವುದು ಸಹಜ. ಥಾಮಸ್ ಮುನ್ರೊ ಅವರು ನಡೆಸಿದ ರಾಷ್ಟ್ರೀಯ ಶಿಕ್ಷಣ ಸಮೀಕ್ಷೆಯ ವಿವರಗಳನ್ನು ಧರ್ಮಂಪಾಲ್ ಜಿ ತಮ್ಮ ಪುಸ್ತಕದಲ್ಲಿ ನೀಡಿದ್ದಾರೆ.

1820 ರಲ್ಲಿ ನಡೆದ ಶಿಕ್ಷಣ ಸಮೀಕ್ಷೆಯು ನಮ್ಮೆಲ್ಲರನ್ನೂ ಅಚ್ಚರಿಗೊಳಿಸುವ ಮತ್ತು ಹೆಮ್ಮೆಯಿಂದ ತುಂಬುವ ಅನೇಕ ವಿಷಯಗಳನ್ನು ಹೊಂದಿದೆ. ಆ ಸಮೀಕ್ಷೆಯಲ್ಲಿ ಭಾರತದ ಸಾಕ್ಷರತೆಯ ಪ್ರಮಾಣ ತುಂಬಾ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ. ಪ್ರತಿ ಹಳ್ಳಿಯಲ್ಲೂ ಒಂದಕ್ಕಿಂತ ಹೆಚ್ಚು ಗುರುಕುಲಗಳಿವೆ ಎಂದು ಸಮೀಕ್ಷೆಯಲ್ಲಿ ಬರೆಯಲಾಗಿದೆ. ಮತ್ತು ಹಳ್ಳಿಯ ದೇವಾಲಯಗಳು ಕೇವಲ ಪೂಜಾ ಸ್ಥಳಗಳಲ್ಲ, ಶಿಕ್ಷಣವನ್ನು ಉತ್ತೇಜಿಸುವ ಮತ್ತು ಉತ್ತೇಜಿಸುವ ಮೂಲಕ ಪವಿತ್ರ ಕಾರ್ಯದೊಂದಿಗೆ ಸಂಬಂಧ ಹೊಂದಿದ್ದವು. ಗುರುಕುಲ ಸಂಪ್ರದಾಯಗಳನ್ನು ಮುಂದೆ ಕೊಂಡೊಯ್ಯುವುದಕ್ಕೂ ಅವರು ಒತ್ತು ನೀಡಿದರು. ಪ್ರತಿಯೊಂದು ಪ್ರದೇಶ ಮತ್ತು ಪ್ರತಿಯೊಂದು ಸಾಮ್ರಾಜ್ಯದಲ್ಲೂ ವಿಶ್ವವಿದ್ಯಾಲಯಗಳು ತಮ್ಮ ವಿಶಾಲ ಜಾಲಕ್ಕಾಗಿ ಹೆಮ್ಮೆಯಿಂದ ನೋಡಲ್ಪಟ್ಟವು. ಉನ್ನತ ಶಿಕ್ಷಣದ ಸಂಸ್ಥೆಗಳೂ ಹೆಚ್ಚಿನ ಸಂಖ್ಯೆಯಲ್ಲಿತ್ತು.

ಬ್ರಿಟಿಷ್ ಶಿಕ್ಷಣ ವ್ಯವಸ್ಥೆಯನ್ನು ಭಾರತದ ಮೇಲೆ ಹೇರುವ ಮೊದಲು, ಥಾಮಸ್ ಮುನ್ರೊ ಭಾರತೀಯ ಶಿಕ್ಷಣ ವ್ಯವಸ್ಥೆ ಮತ್ತು ಅದರ ಶಕ್ತಿಯನ್ನು ಅನುಭವಿಸಿದ್ದರು. ನಮ್ಮ ಶಿಕ್ಷಣ ವ್ಯವಸ್ಥೆ ಎಷ್ಟು ರೋಮಾಂಚಕವಾಗಿದೆ ಎಂದು ಅವರು ನೋಡಿದರು. ಅದು 200 ವರ್ಷಗಳ ಹಿಂದೆ. 1830 ರಲ್ಲಿ ಬಂಗಾಳ ಮತ್ತು ಬಿಹಾರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಗ್ರಾಮೀಣ ಶಾಲೆಗಳಿವೆ ಎಂದು ಕಂಡುಕೊಂಡ ವಿಲಿಯಂ ಆಡಮ್ ಬಗ್ಗೆ ಅದೇ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಸ್ನೇಹಿತರೇ,

ನಾನು ಈ ವಿಷಯಗಳನ್ನು ವಿವರವಾಗಿ ಹೇಳುತ್ತಿದ್ದೇನೆ ಏಕೆಂದರೆ ನಮ್ಮ ಶಿಕ್ಷಣ ವ್ಯವಸ್ಥೆ ಏನು, ಅದು ಎಷ್ಟು ವೈಭವಯುತವಾಗಿತ್ತು, ಅದು ಪ್ರತಿಯೊಬ್ಬ ಮನುಷ್ಯನನ್ನು ಹೇಗೆ ತಲುಪಿತು ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಮತ್ತು, ನಂತರ, ಬ್ರಿಟಿಷ್ ಅವಧಿಯಲ್ಲಿ ಮತ್ತು ನಂತರದ ಅವಧಿಯಲ್ಲಿ ನಾವು ಎಲ್ಲಿಗೆ ತಲುಪಿದ್ದೇವೆ?

ವಿಶ್ವ ಭಾರತಿಯಲ್ಲಿ ಗುರುದೇವ ಅಭಿವೃದ್ಧಿಪಡಿಸಿದ ವ್ಯವಸ್ಥೆಗಳು ಮತ್ತು ವಿಧಾನಗಳು ಭಾರತದ ಶಿಕ್ಷಣ ವ್ಯವಸ್ಥೆಯನ್ನು ಅಧೀನತೆಯ ಸಂಕೋಲೆಗಳಿಂದ ಮುಕ್ತಗೊಳಿಸುವ ಮತ್ತು ಭಾರತವನ್ನು ಆಧುನೀಕರಿಸುವ ಸಾಧನವಾಗಿತ್ತು. ಈಗ, ಇಂದು ಭಾರತದಲ್ಲಿ ಸಿದ್ಧಪಡಿಸಲಾಗಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಹಳೆಯ ಸಂಕೋಲೆಗಳನ್ನು ಮುರಿಯುವಾಗ ವಿದ್ಯಾರ್ಥಿಗಳಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುತ್ತದೆ. ವಿಭಿನ್ನ ವಿಷಯಗಳನ್ನು ಓದುವ ಸ್ವಾತಂತ್ರ್ಯವನ್ನು ನಿಮಗೆ ನೀಡುತ್ತದೆ. ಈ ಶಿಕ್ಷಣ ನೀತಿಯು ನಿಮ್ಮ ಭಾಷೆಯಲ್ಲಿ ಓದುವ ಆಯ್ಕೆಯನ್ನು ನೀಡುತ್ತದೆ. ಈ ಶಿಕ್ಷಣ ನೀತಿಯು ಉದ್ಯಮಶೀಲತೆ ಮತ್ತು ಸ್ವಯಂ ಉದ್ಯೋಗವನ್ನು ಉತ್ತೇಜಿಸುತ್ತದೆ.

ಈ ಶಿಕ್ಷಣ ನೀತಿಯು ಸಂಶೋಧನೆ ಮತ್ತು ಅನುಶೋಧನೆಯನ್ನು ಉತ್ತೇಜಿಸುತ್ತದೆ. ಈ ಶಿಕ್ಷಣ ನೀತಿಯು ಸ್ವಾವಲಂಬಿ ಭಾರತವನ್ನು ನಿರ್ಮಿಸುವಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ದೇಶದಲ್ಲಿ ಬಲವಾದ ಸಂಶೋಧನೆ ಮತ್ತು ಅನುಶೋಧನೆಯ ಪರಿಸರ ವ್ಯವಸ್ಥೆಯನ್ನು ರಚಿಸಲು ಸರ್ಕಾರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ, ದೇಶ ಮತ್ತು ಪ್ರಪಂಚದ ಲಕ್ಷಾಂತರ ಜರ್ನಲ್‌ಗಳಿಗೆ ತನ್ನ ವಿದ್ವಾಂಸರಿಗೆ ಉಚಿತ ಪ್ರವೇಶವನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಈ ವರ್ಷ, ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಮೂಲಕ ಮುಂದಿನ ಐದು ವರ್ಷಗಳಲ್ಲಿ ಸಂಶೋಧನೆಗಾಗಿ ರೂ.50,000 ಕೋಟಿ ಖರ್ಚು ಮಾಡಲು ಬಜೆಟ್ ಪ್ರಸ್ತಾಪಿಸಿದೆ.

ಸ್ನೇಹಿತರೇ,

ದೇಶದ ಹೆಣ್ಣುಮಕ್ಕಳ ಆತ್ಮವಿಶ್ವಾಸವಿಲ್ಲದೆ ಭಾರತದ ಸ್ವಾವಲಂಬನೆ ಸಾಧ್ಯವಿಲ್ಲ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಮೊದಲ ಬಾರಿಗೆ ಲಿಂಗ ಸೇರ್ಪಡೆ ನಿಧಿಯನ್ನು ಸಹ ಒದಗಿಸುತ್ತದೆ. ಈ ನೀತಿಯಿಂದ ಆರನೇ ತರಗತಿಯಿಂದಲೇ ಮರಗೆಲಸದಿಂದ ಹಿಡಿದು ಕೋಡಿಂಗ್‌ವರೆಗೆ ಹಲವಾರು ಕೌಶಲಗಳನ್ನು ಕಲಿಸಲು ಯೋಜಿಸಲಾಗಿದೆ, ಈ ಕೌಶಲಗಳನ್ನು ಹುಡುಗಿಯರಿಂದ ದೂರವಿಡಲಾಗಿದೆ. ಶಿಕ್ಷಣ ನೀತಿಯನ್ನು ರೂಪಿಸುವಾಗ, ಹೆಣ್ಣುಮಕ್ಕಳಲ್ಲಿ ಹೆಚ್ಚಿನ ಡ್ರಾಪ್‌ ರೇಟಿನ ಕಾರಣಗಳನ್ನು ಗಂಭೀರವಾಗಿ ಅಧ್ಯಯನ ಮಾಡಲಾಗಿದೆ. ಆದ್ದರಿಂದ, ಅಧ್ಯಯನದಲ್ಲಿ ನಿರಂತರತೆ, ಪದವಿ ಕೋರ್ಸ್‌ನಲ್ಲಿ ಪ್ರವೇಶ ಮತ್ತು ನಿರ್ಗಮನ ಆಯ್ಕೆ ಮತ್ತು ಪ್ರತಿ ವರ್ಷದ ಕ್ರೆಡಿಟ್ಟಿನ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಸ್ನೇಹಿತರೇ,

ಈ ಹಿಂದೆ ಭಾರತದ ಶ್ರೀಮಂತ ಜ್ಞಾನ ಮತ್ತು ವಿಜ್ಞಾನವನ್ನು ಮುನ್ನಡೆಸುವಲ್ಲಿ ಬಂಗಾಳವು ದೇಶವನ್ನು ಮುನ್ನಡೆಸಿದೆ ಮತ್ತು ಇದು ವೈಭವದ ವಿಷಯವಾಗಿದೆ. ಬಂಗಾಳವು ʼಏಕ ಭಾರತ ಶ್ರೇಷ್ಠ ಭಾರತʼಕ್ಕೆ ಸ್ಫೂರ್ತಿಯ ತಾಣವಾಗಿದೆ ಮತ್ತು ಕಾರ್ಯದ ಸ್ಥಳವಾಗಿದೆ. ಶತಮಾನೋತ್ಸವದ ಸಂದರ್ಭದಲ್ಲಿ ನಾನು ಈ ಬಗ್ಗೆ ವಿವರವಾಗಿ ಮಾತನಾಡಿದ್ದೆ. ಇಂದು, ಭಾರತವು 21 ನೇ ಶತಮಾನದ Knowledge Economy, ಜ್ಞಾನ ಆರ್ಥಿಕತೆಯನ್ನು ರಚಿಸುವತ್ತ ಸಾಗುತ್ತಿರುವಾಗ, ನಿಮ್ಮಂತಹ ಯುವಕರ ಮೇಲೆ, ಬಂಗಾಳದ ಜ್ಞಾನ ಸಂಪತ್ತಿನ ಮೇಲೆ, ಬಂಗಾಳದ ಶಕ್ತಿಯುತ ನಾಗರಿಕರ ಮೇಲೆ ನೋಟ ನೆಟ್ಟಿದೆ. ಪ್ರಪಂಚದ ಮೂಲೆ ಮತ್ತು ಮೂಲೆಗಳಿಗೆ ಭಾರತದ ಜ್ಞಾನ ಮತ್ತು ಗುರುತನ್ನು ಹರಡುವಲ್ಲಿ ವಿಶ್ವ ಭಾರತಿಯ ಬಹಳ ದೊಡ್ಡ ಪಾತ್ರವಿದೆ.

ಈ ವರ್ಷ, ನಾವು ನಮ್ಮ ಸ್ವಾತಂತ್ರ್ಯದ 75 ನೇ ವರ್ಷವನ್ನು ಪ್ರವೇಶಿಸುತ್ತಿದ್ದೇವೆ. ವಿಶ್ವ ಭಾರತಿಯ ಪ್ರತಿಯೊಬ್ಬ ವಿದ್ಯಾರ್ಥಿಯು ದೇಶಕ್ಕೆ ನೀಡುವ ಬಹುದೊಡ್ಡ ಕೊಡುಗೆ ಎಂದರೆ ಭಾರತದ ಚಿತ್ರಣವನ್ನು ಮತ್ತಷ್ಟು ಪರಿಷ್ಕರಿಸುವುದು ಮತ್ತು ಹೆಚ್ಚು ಹೆಚ್ಚು ಜನರನ್ನು ಸಂವೇದನಾಶೀಲಗೊಳಿಸುವುದು. ನಮ್ಮ ರಕ್ತದ ಪ್ರತಿಯೊಂದು ಹನಿಯಲ್ಲೂ ಇರುವ ಮಾನವೀಯತೆ, ಉತ್ಸಾಹ, ಅನ್ಯೋನ್ಯ ಮತ್ತು ವಿಶ್ವದ ಕಲ್ಯಾಣವನ್ನು ವಿಶ್ವದ ಇತರ ದೇಶಗಳಿಗೆ ಮತ್ತು ಇಡೀ ಮಾನವಕುಲಕ್ಕೆ, ತಿಳಿಸುವುದರಲ್ಲಿ ವಿಶ್ವ ಭಾರತಿಯು ದೇಶದ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸಬೇಕು.

ವಿಶ್ವ ಭಾರತಿಯ ವಿದ್ಯಾರ್ಥಿಗಳು ಒಟ್ಟಾಗಿ ಮುಂದಿನ 25 ವರ್ಷಗಳವರೆಗೆ ವಿಷನ್‌ ಡಾಕ್ಯುಮೆಂಟ್‌ - ದೂರದೃಷ್ಟಿ ದಾಖಲೆಯನ್ನು ಸಿದ್ಧಪಡಿಸಬೇಕು ಎನ್ನುವುದು ನನ್ನ ಕೋರಿಕೆ. ಸ್ವಾತಂತ್ರ್ಯದ 100 ವರ್ಷಗಳು ಆದಾಗ, ಭಾರತವು ತನ್ನ ಸ್ವಾತಂತ್ರ್ಯದ 100 ವರ್ಷಗಳನ್ನು 2047 ರಲ್ಲಿ ಆಚರಿಸಿದಾಗ, ವಿಶ್ವಭಾರತಿಯ 25 ದೊಡ್ಡ ಗುರಿಗಳು ಯಾವುವು ಎನ್ನುವುದನ್ನು ಈ ದೂರದೃಷ್ಟಿ ದಾಖಲೆಯಿಂದ ರೂಪಿಸಬಹುದು. ನಿಮ್ಮ ಶಿಕ್ಷಕರೊಂದಿಗೆ ನೀವು ಚರ್ಚಿಸಬೇಕು ಆದರೆ ನೀವು ಒಂದು ಗುರಿಯನ್ನು ಹೊಂದಿರಬೇಕು.

ನಿಮ್ಮ ಪ್ರದೇಶದ ಅನೇಕ ಗ್ರಾಮಗಳನ್ನು ನೀವು ದತ್ತು ಪಡೆದಿದ್ದೀರಿ. ಪ್ರತಿ ಹಳ್ಳಿಯನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಮೂಲಕ ಆರಂಭವನ್ನು ಮಾಡಬಹುದೇ? ಗೌರವಾನ್ವಿತ ಬಾಪು ರಾಮ ರಾಜ್ಯ ಮತ್ತು ಗ್ರಾಮ ಸ್ವರಾಜ್ ಬಗ್ಗೆ ಮಾತನಾಡಿದರು. ನನ್ನ ಯುವ ಸ್ನೇಹಿತರೇ! ಹಳ್ಳಿಗಳ ಜನರು, ಕುಶಲಕರ್ಮಿಗಳು ಮತ್ತು ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಿ, ತಮ್ಮ ಉತ್ಪನ್ನಗಳನ್ನು ವಿಶ್ವದ ದೊಡ್ಡ ಮಾರುಕಟ್ಟೆಗಳಿಗೆ ಕೊಂಡೊಯ್ಯುವ ಸರಪಣಿಯನ್ನಾಗಿ ಮಾಡಿ.

ವಿಶ್ವಭಾರತಿ ಬೋಲ್ಪುರ್ ಜಿಲ್ಲೆಯ ಮುಖ್ಯ ಆಧಾರವಾಗಿದೆ. ವಿಶ್ವ ಭಾರತಿ ತನ್ನ ಎಲ್ಲಾ ಆರ್ಥಿಕ, ದೈಹಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪ್ರತಿಷ್ಠಿತವಾಗಿದೆ. ಇದು ರೋಮಾಂಚಕ ಅಸ್ತಿತ್ವವಾಗಿದೆ. ಇಲ್ಲಿಯ ಜನರಿಗೆ ಮತ್ತು ಸಮಾಜಕ್ಕೆ ಅಧಿಕಾರ ನೀಡುವ ಮೂಲಕ ನಿಮ್ಮ ದೊಡ್ಡ ಜವಾಬ್ದಾರಿಯನ್ನು ಸಹ ನೀವು ಪೂರೈಸಬೇಕು.

ನೀವು ಎಲ್ಲಾ ಪ್ರಯತ್ನಗಳಲ್ಲಿ ಯಶಸ್ವಿಯಾಗಿರಿ ಮತ್ತು ನಿಮ್ಮ ನಿರ್ಣಯಗಳು ಕಾರ್ಯಗತಗೊಳ್ಳಲಿ. ನೀವು ವಿಶ್ವ ಭಾರತಿಗೆ ಕಾಲಿಟ್ಟ ಉದ್ದೇಶಗಳು ಮತ್ತು ನೀವು ಜಗತ್ತಿನಲ್ಲಿ ಹೆಜ್ಜೆ ಹಾಕುತ್ತಿರುವ ಸಂಸ್ಕೃತಿ ಮತ್ತು ಜ್ಞಾನದ ಸಮೃದ್ಧ ಸಂಪತ್ತಿನೊಂದಿಗೆ, ಇಡೀ ಮಾನವಕುಲವು ನಿಮ್ಮಿಂದ ಬಹಳಷ್ಟು ಬಯಸುತ್ತದೆ ಮತ್ತು ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದೆ. ಈ ಮಣ್ಣು ನಿಮ್ಮನ್ನು ಸಲಹಿದೆ ಮತ್ತು ನಿಮ್ಮ ಕಾಳಜಿಯನ್ನು ತೆಗೆದುಕೊಂಡಿದೆ. ಇದು ನಿಮ್ಮನ್ನು ವಿಶ್ವದ ಮತ್ತು ಮಾನವಕುಲದ ನಿರೀಕ್ಷೆಗಳನ್ನು ಈಡೇರಿಸುವಂತೆ ಮಾಡಿದೆ. ನೀವು ಆತ್ಮವಿಶ್ವಾಸದಿಂದ ತುಂಬಿದ್ದೀರಿ, ನೀವು ನಿರ್ಣಯಗಳಿಗೆ ಬದ್ಧರಾಗಿದ್ದೀರಿ ಮತ್ತು ನಿಮ್ಮ ಯೌವನವು ಸಂಸ್ಕೃತಿಯಿಂದ ಅಲಂಕರಿಸಲ್ಪಟ್ಟಿದೆ. ಇದು ಮುಂದಿನ ಪೀಳಿಗೆಗೆ ಮತ್ತು ದೇಶಕ್ಕೆ ಉಪಯುಕ್ತವಾಗಲಿದೆ. 21 ನೇ ಶತಮಾನದಲ್ಲಿ ಭಾರತದ ಸಿಗಬೇಕಾದ ನಿಲುವನ್ನು ಸಾಧಿಸುವಲ್ಲಿ ನೀವು ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತೀರಿ ಎಂದು ನನಗೆ ವಿಶ್ವಾಸವಿದೆ. ಈ ಅದ್ಭುತ ಕ್ಷಣದಲ್ಲಿ, ನಿಮ್ಮ ಸಾಂಗತ್ಯದಿಂದಾಗಿ ನನ್ನನ್ನು ನಾನು ಅದೃಷ್ಟವಂತನೆಂದು ಪರಿಗಣಿಸುತ್ತೇನೆ. ಈ ಪವಿತ್ರ ಮಣ್ಣಿನ ಸಂಸ್ಕೃತಿಯೊಂದಿಗೆ ಗುರುದೇವ ಠ್ಯಾಗೋರ್ ಅವರಿಂದ ಶಿಕ್ಷಣ ಮತ್ತು ಸಂಸ್ಕೃತಿಯನ್ನು ಪಡೆದ ನಾವು ಒಟ್ಟಾಗಿ ಮುಂದೆ ಸಾಗೋಣ. ನಿಮಗೆ ನನ್ನ ಶುಭಾಶಯಗಳು.

ಅನೇಕ ಶುಭಾಶಯಗಳು! ಪೋಷಕರು ಮತ್ತು ಶಿಕ್ಷಕರಿಗೆ ನನ್ನ ಶುಭಾಶಯಗಳು!

ನಿಮಗೆ ಅನಂತ ಧನ್ಯವಾದಗಳು.

ಘೋಷಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿತ್ತು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Tariff cut to open door wider for exports, lift rupee, fund inflows: Nirmala Sitharaman

Media Coverage

Tariff cut to open door wider for exports, lift rupee, fund inflows: Nirmala Sitharaman
NM on the go

Nm on the go

Always be the first to hear from the PM. Get the App Now!
...
Official Visit of Hon’ble Prime Minister Shri Narendra Modi to Kuala Lumpur, Malaysia (February 07 - 08, 2026)
February 04, 2026

Prime Minister of India, Shri Narendra Modi will pay an Official Visit to Malaysia from 07-08 February 2026, at the invitation of the Prime Minister of Malaysia, H.E. Dato’ Seri Anwar Ibrahim.

This would be the third visit of Prime Minister to Malaysia, and the first after the elevation of the India-Malaysia bilateral relationship to a ‘Comprehensive Strategic Partnership’, in August 2024.

During the visit, Prime Minister will hold bilateral discussions with Prime Minister Anwar Ibrahim. Prime Minister will also interact with members of the Indian community, as well as industry and business representatives. The 10th India-Malaysia CEO Forum is also scheduled to be held coinciding with the visit of Prime Minister.

India and Malaysia share long-standing bonds of friendship, based on historical, civilisational and cultural connections. The relationship is further strengthened by the presence of a 2.9 million strong Indian diaspora in Malaysia, the third largest in the world.

The India-Malaysia relationship is multi-faceted and growing. The forthcoming visit of Prime Minister serves as an opportunity for both leaders to review the entire gamut of bilateral cooperation, ranging from trade and investment, defence, security and maritime cooperation, to digital and financial technology, energy, healthcare, education, culture, tourism, people-to-people ties; as well as to set the path for future engagement for mutual benefit.