ನಾನು ಮಾರಿಷಸ್‌ ಗೆ ಬಂದಾಗಲೆಲ್ಲಾ, ನಾನು ನನ್ನ ಸ್ವಂತ ಜನರ ನಡುವೆ ಇದ್ದೇನೆ ಎಂದು ಭಾಸವಾಗುತ್ತದೆ: ಪ್ರಧಾನಮಂತ್ರಿ
ಮಾರಿಷಸ್‌ ಜನರು ಮತ್ತು ಸರ್ಕಾರವು ನನಗೆ ತಮ್ಮ ಅತ್ಯುನ್ನತ ನಾಗರಿಕ ಗೌರವವನ್ನು ನೀಡಲು ನಿರ್ಧರಿಸಿದೆ ಮತ್ತು ನಾನು ಈ ನಿರ್ಧಾರವನ್ನು ಅತ್ಯಂತ ಗೌರವದಿಂದ ಸ್ವೀಕರಿಸುತ್ತೇನೆ: ಪ್ರಧಾನಮಂತ್ರಿ
ಇದು ನನಗೆ ಮಾತ್ರ ಗೌರವವಲ್ಲ, ಭಾರತ ಮತ್ತು ಮಾರಿಷಸ್ ನಡುವಿನ ಐತಿಹಾಸಿಕ ಬಾಂಧವ್ಯಕ್ಕೆ ಸಂದ ಗೌರವ: ಪ್ರಧಾನಮಂತ್ರಿ
ಮಾರಿಷಸ್ 'ಮಿನಿ ಇಂಡಿಯಾ' ಇದ್ದಂತೆ: ಪ್ರಧಾನಮಂತ್ರಿ
ನಮ್ಮ ಸರ್ಕಾರ ನಳಂದಾ ವಿಶ್ವವಿದ್ಯಾಲಯ ಮತ್ತು ಅದರ ಚೈತನ್ಯವನ್ನು ಪುನರುಜ್ಜೀವನಗೊಳಿಸಿದೆ: ಪ್ರಧಾನಮಂತ್ರಿ
ಬಿಹಾರದ ಮಖಾನಾ ಶೀಘ್ರದಲ್ಲೇ ವಿಶ್ವದಾದ್ಯಂತ ಉಪಹಾರ ಮೆನುಗಳ ಭಾಗವಾಗಲಿದೆ: ಪ್ರಧಾನಮಂತ್ರಿ
ಮಾರಿಷಸ್‌ ನಲ್ಲಿರುವ ಏಳನೇ ತಲೆಮಾರಿನ ಭಾರತೀಯ ವಲಸಿಗರಿಗೆ ಒಸಿಐ ಕಾರ್ಡ್ ನೀಡಲು ನಿರ್ಧರಿಸಲಾಗಿದೆ: ಪ್ರಧಾನಮಂತ್ರಿ
ಮಾರಿಷಸ್ ಕೇವಲ ಪಾಲುದಾರ ರಾಷ್ಟ್ರವಲ್ಲ; ಮಾರಿಷಸ್ ನಮಗೆ ಕುಟುಂಬವಿದ್ದಂತೆ: ಪ್ರಧಾನಮಂತ್ರಿ
ಮಾರಿಷಸ್ ಭಾರತದ ‌ʼಸಾಗರ್ʼ ದೃಷ್ಟಿಕೋನದ ಕೇಂದ್ರವಾಗಿದೆ: ಪ್ರಧಾನಮಂತ್ರಿ
ಮಾರಿಷಸ್ ಅಭಿವೃದ್ಧಿ ಹೊಂದಿದಾಗ, ಭಾರತವು ಮೊದಲು ಸಂಭ್ರಮಿಸುತ್ತದೆ: ಪ್ರಧಾನಮಂತ್ರಿ

ನಮಸ್ತೇ !

ಮೋರಿಸ್ ಎಂದರೇನು?

ನೀವೆಲ್ಲರೂ ಚೆನ್ನಾಗಿದ್ದೀರಾ?

ಇಂದು ನಾವು ಮಾರಿಷಸ್ ಭೂಮಿಯಲ್ಲಿದ್ದೇವೆ.

ನಿಮ್ಮೆಲ್ಲರ ನಡುವೆ ಇರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ!

ನಿಮ್ಮೆಲ್ಲರಿಗೂ ನಮಸ್ಕಾರ!

ಮಿತ್ರರೇ,

10 ವರ್ಷಗಳ ಹಿಂದೆ ಇದೇ ದಿನದಂದು ನಾನು ಮಾರಿಷಸ್‌ಗೆ ಬಂದಾಗ, ನಾನು ಆಗಮನಕ್ಕೆ ಕೇವಲ ಒಂದು ವಾರ ಮೊದಲು ನಾವು ಹೋಳಿ ಆಚರಿಸಿದೆವು. ನಾನು ಭಾರತದಿಂದ ಫಾಗುವಾದ ಉತ್ಸಾಹವನ್ನು ನನ್ನೊಂದಿಗೆ ತಂದಿದ್ದೇನೆ. ಈ ಬಾರಿ ನಾನು ಮಾರಿಷಸ್‌ನಿಂದ ಭಾರತಕ್ಕೆ ಹೋಳಿಯ ಬಣ್ಣಗಳನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ. ಒಂದು ದಿನದ ನಂತರ ನಾವು ಅಲ್ಲಿ ಹೋಳಿಯನ್ನು ಆಚರಿಸುತ್ತೇವೆ. 14 ರಂದು ಎಲ್ಲೆಡೆ ಬಣ್ಣ ಇರುತ್ತದೆ.
ರಾಮನ ಕೈಯಲ್ಲಿ ಧೋಲಕ್ ಚೆನ್ನಾಗಿ ಕಾಣುತ್ತಿದೆ

ಲಕ್ಷ್ಮಣನ ಕೈಯಲ್ಲಿ ಸಿಂಬಲ್ ಇದೆ.

ಭರತನ ಕೈಯಲ್ಲಿ ಚಿನ್ನದ ಹೂಜಿ ಇದೆ...

ಶತ್ರುಘ್ನನು ಅಭಿರನಿಗೆ ಹಸ್ತ ನೀಡುತ್ತಾನೆ...

ಜೋಗೀರ......

राम के हाथे ढोलक सोहै
लछिमन हाथ मंजीरा।
भरत के हाथ कनक पिचकारी...
शत्रुघन हाथ अबीरा...
जोगिरा........

ಮತ್ತು ನಾವು ಹೋಳಿಯ ಬಗ್ಗೆ ಮಾತನಾಡುವಾಗ ಗುಜಿಯ ಸಿಹಿ ರುಚಿಯನ್ನು ಹೇಗೆ ಮರೆಯಲು ಸಾಧ್ಯ? ಮಾರಿಷಸ್ ಭಾರತದ ಪಶ್ಚಿಮ ಪ್ರದೇಶಗಳಿಗೆ ಸಿಹಿತಿಂಡಿಗಳಿಗೆ ಸಿಹಿ ಸೇರಿಸಲು ಸಕ್ಕರೆಯನ್ನು ಪೂರೈಸುತ್ತಿತ್ತು. ಬಹುಶಃ ಇದೇ ಕಾರಣಕ್ಕೆ ಗುಜರಾತಿನಲ್ಲಿ ಸಕ್ಕರೆಯನ್ನು 'ಮೊರಾಸ್' ಎಂದೂ ಕರೆಯುತ್ತಾರೆ. ಕಾಲಾನಂತರದಲ್ಲಿ ಭಾರತ ಮತ್ತು ಮಾರಿಷಸ್ ನಡುವಿನ ಸಂಬಂಧಗಳಲ್ಲಿನ ಸಿಹಿಯು ಸ್ಥಿರವಾಗಿ ಬೆಳೆಯುತ್ತಿದೆ. ಈ ಸಿಹಿಯೊಂದಿಗೆ ಮಾರಿಷಸ್‌ನ ಎಲ್ಲಾ ನಾಗರಿಕರಿಗೆ ನಾನು ರಾಷ್ಟ್ರೀಯ ದಿನದ ಶುಭಾಶಯಗಳನ್ನು ಕೋರಲು ಬಯಸುತ್ತೇನೆ.

 

ಮಿತ್ರರೇ,

ನಾನು ಮಾರಿಷಸ್‌ಗೆ ಬಂದಾಗಲೆಲ್ಲಾ, ನಾನು ನನ್ನ ಸ್ವಂತ ಜನರ ನಡುವೆ ಇದ್ದೇನೆಂದು ನನಗೆ ಅನಿಸುತ್ತದೆ. ಇಲ್ಲಿನ ಗಾಳಿಯಲ್ಲಿ, ಮಣ್ಣಿನಲ್ಲಿ ಮತ್ತು ನೀರಿನಲ್ಲಿ, ಹಾಡುವ ಹಾಡುಗಳಲ್ಲಿ, ಢೋಲಕ್‌ನ ಲಯದಲ್ಲಿ, ದಾಲ್ ಪುರಿಯ ರುಚಿಯಲ್ಲಿ  ನಾನು ಸೇರಿದ್ದೇನೆಂಬ ಭಾವನೆ ಇರುತ್ತದೆ. ಕುಚ್ಚಾ ಮತ್ತು ಗೇಟಾಕ್ಸ್ ಪಿಮೆಂಟ್ ಭಾರತದ ಪರಿಚಿತ ಸುಗಂಧವನ್ನು ಹೊತ್ತೊಯ್ಯುತ್ತವೆ. ಮತ್ತು ಈ ಸಂಪರ್ಕವು ಸ್ವಾಭಾವಿಕವಾಗಿದೆ, ಏಕೆಂದರೆ ಇಲ್ಲಿನ ಮಣ್ಣು ನಮ್ಮ ಪೂರ್ವಜರಾದ ಅನೇಕ ಭಾರತೀಯರ ರಕ್ತ ಮತ್ತು ಬೆವರಿನೊಂದಿಗೆ ಬೆರೆತುಹೋಗಿದೆ. ನಾವೆಲ್ಲರೂ ಒಂದೇ ಕುಟುಂಬದ ಭಾಗವಾಗಿದ್ದೇವೆ ಮತ್ತು ಈ ಮನೋಭಾವದಿಂದಲೇ ಪ್ರಧಾನಿ ನವೀನ್ ರಾಮ್‌ಗೂಲಂ ಜಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಇಂದು ನಮ್ಮೊಂದಿಗಿದ್ದಾರೆ. ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು. ಪ್ರಧಾನಿ ನವೀನ್ ಜಿ ಹಂಚಿಕೊಂಡ ಮಾತುಗಳು ಹೃದಯದಿಂದ ಬಂದಿರಬಹುದು. ಅವರ ಆತ್ಮೀಯ ಮತ್ತು ಹೃತ್ಪೂರ್ವಕ ಮಾತುಗಳಿಗೆ ನಾನು ಅವರಿಗೆ ಪ್ರಾಮಾಣಿಕವಾಗಿ ಧನ್ಯವಾದ ಹೇಳುತ್ತೇನೆ.

ಮಿತ್ರರೇ,

ಮಾರಿಷಸ್ ಪ್ರಧಾನಿ ಅವರು ಈಗ ಘೋಷಿಸಿದಂತೆ ಮಾರಿಷಸ್‌ನ ಜನರು, ಇಲ್ಲಿನ ಸರ್ಕಾರ ನನಗೆ, ತಮ್ಮ ಅತ್ಯುನ್ನತ ನಾಗರಿಕ ಗೌರವವನ್ನು ನೀಡಲು ನಿರ್ಧರಿಸಿದೆ. ನಾನು ನಿಮ್ಮ ನಿರ್ಧಾರವನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ. ಇದು ಭಾರತ ಮತ್ತು ಮಾರಿಷಸ್ ನಡುವಿನ ಐತಿಹಾಸಿಕ ಸಂಬಂಧಗಳನ್ನು ಗೌರವಿಸುತ್ತದೆ. ಪೀಳಿಗೆಯಿಂದ ಪೀಳಿಗೆಗೆ ಈ ಭೂಮಿಗೆ ಸಮರ್ಪಣಾಭಾವದಿಂದ ಸೇವೆ ಸಲ್ಲಿಸಿ, ಇಂದು ಮಾರಿಷಸ್ ಅನ್ನು ಇಷ್ಟು ದೊಡ್ಡ ಎತ್ತರಕ್ಕೆ ತಂದ ಭಾರತೀಯರಿಗೂ ಇದು ಗೌರವವಾಗಿದೆ. ಈ ಗೌರವಕ್ಕಾಗಿ ಮಾರಿಷಸ್‌ನ ಪ್ರತಿಯೊಬ್ಬ ನಾಗರಿಕ ಮತ್ತು ಇಲ್ಲಿನ ಸರ್ಕಾರಕ್ಕೆ ನಾನು ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

ಮಿತ್ರರೇ,

ಕಳೆದ ವರ್ಷ ಭಾರತದ ರಾಷ್ಟ್ರಪತಿಗಳು ರಾಷ್ಟ್ರೀಯ ದಿನದಂದು ಮುಖ್ಯ ಅತಿಥಿಯಾಗಿದ್ದರು. ಇದು ಮಾರಿಷಸ್ ಮತ್ತು ಭಾರತದ ನಡುವಿನ ಸಂಬಂಧಗಳ ಬಲವನ್ನು ತೋರಿಸುತ್ತದೆ. ಮತ್ತು ಮಾರ್ಚ್ 12 ಅನ್ನು ರಾಷ್ಟ್ರೀಯ ದಿನವಾಗಿ ಆಯ್ಕೆ ಮಾಡುವುದು ನಮ್ಮ ಎರಡೂ ದೇಶಗಳ ಹಂಚಿಕೆಯ ಇತಿಹಾಸದ ಪ್ರತಿಬಿಂಬವಾಗಿದೆ. ಮಹಾತ್ಮ ಗಾಂಧಿಯವರು ಗುಲಾಮಗಿರಿಯ ವಿರುದ್ಧ ದಂಡಿ ಸತ್ಯಾಗ್ರಹವನ್ನು ಆರಂಭಿಸಿದ ದಿನ ಇದು. ಈ ದಿನ ಎರಡೂ ರಾಷ್ಟ್ರಗಳ ಸ್ವಾತಂತ್ರ್ಯ ಹೋರಾಟದ ಸ್ಮರಣಾರ್ಥವಾಗಿದೆ. ಮಾರಿಷಸ್‌ಗೆ ಬಂದು ಜನರ ಹಕ್ಕುಗಳಿಗಾಗಿ ಹೋರಾಟವನ್ನು ಆರಂಭಿಸಿದ ಬ್ಯಾರಿಸ್ಟರ್ ಮಣಿಲಾಲ್ ಡಾಕ್ಟರ್‌ರಂತಹ ಮಹಾನ್ ವ್ಯಕ್ತಿತ್ವವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ನಮ್ಮ ಚಾಚಾ ರಾಮಗೂಲಂ ಜಿ, ನೇತಾಜಿ ಸುಭಾಷ್ ಮತ್ತು ಇತರರೊಂದಿಗೆ ಗುಲಾಮಗಿರಿಯ ವಿರುದ್ಧ ಅಸಾಧಾರಣ ಹೋರಾಟ ನಡೆಸಿದರು. ಬಿಹಾರದ ಪಾಟ್ನಾದಲ್ಲಿರುವ ಐತಿಹಾಸಿಕ ಗಾಂಧಿ ಮೈದಾನದಲ್ಲಿರುವ ಸೀವೂಸಾಗುರ್ ಜಿ ಅವರ ಪ್ರತಿಮೆ ಈ ಶ್ರೀಮಂತ ಸಂಪ್ರದಾಯದ ಸ್ಮರಾರ್ಥವಾಗಿ ನಿಂತಿದೆ. ನವೀನ್ ಜಿ ಜೊತೆಗೆ ಸೀವೂಸಾಗುರ್ ಜಿ ಅವರಿಗೆ ನನ್ನ ಗೌರವ ಸಲ್ಲಿಸುವ ಅದೃಷ್ಟ ನನಗೆ ಲಭಿಸಿತ್ತು.

 

ಮಿತ್ರರೇ,

ನಾನು ನಿಮ್ಮ ನಡುವೆ ಬಂದಾಗ, ನಿಮ್ಮನ್ನು ಭೇಟಿಯಾದಾಗ, ನಿಮ್ಮೊಂದಿಗೆ ಮಾತನಾಡುವಾಗ, ನಾನು ಇತಿಹಾಸದಲ್ಲಿ ಇನ್ನೂರು ವರ್ಷಗಳ ಹಿಂದಕ್ಕೆ, ನಾವು ಓದಿದ ಸಮಯಕ್ಕೆ - ವಸಾಹತುಶಾಹಿಯ ಅವಧಿಯಲ್ಲಿ ಅಸಂಖ್ಯಾತ ಭಾರತೀಯರನ್ನು ವಂಚನೆಯ ಮೂಲಕ ಇಲ್ಲಿಗೆ ಕರೆತರಲಾಯಿತು. ಅವರು ಅಪಾರ ನೋವು, ಸಂಕಟ ಮತ್ತು ದ್ರೋಹವನ್ನು ಸಹಿಸಿಕೊಂಡರು. ಆ ಕಷ್ಟದ ಸಮಯದಲ್ಲಿ ಅವರ ಶಕ್ತಿಯ ಮೂಲವೆಂದರೆ ಭಗವಾನ್ ರಾಮ, ರಾಮಚಾರಿತ್ರ್ಯ ಮಾನಸ, ಭಗವಾನ್ ರಾಮನ ಹೋರಾಟಗಳು, ಅವರ ವಿಜಯಗಳು, ಅವರ ಸ್ಫೂರ್ತಿ ಮತ್ತು ಅವರ ತಪಸ್ಸು. ಅವರು ತಮ್ಮನ್ನು ಭಗವಾನ್ ರಾಮನಲ್ಲಿ ನೋಡಿಕೊಂಡರು ಮತ್ತು ಅವರಿಂದ ಶಕ್ತಿ ಮತ್ತು ವಿಶ್ವಾಸವನ್ನು ಪಡೆದುಕೊಂಡರು.
राम बनिइहैं तो बन जइहै,
बिगड़ी बनत बनत बन जाहि।
चौदह बरिस रहे बनवासी,
लौटे पुनि अयोध्या माँहि॥

ರಾಮನು ಆಗಲು ಬಯಸಿದರೆ ಅದು ಆಗುತ್ತದೆ,

ಹಾಳಾದ ವಸ್ತುಗಳು ಉತ್ತಮಗೊಂಡಂತೆ ಉತ್ತಮಗೊಳ್ಳುತ್ತವೆ.

ಅರಣ್ಯವಾಸಿ ಹದಿನಾಲ್ಕು ವರ್ಷಗಳ ಕಾಲ ಇದ್ದನು,

ಮತ್ತೆ ಅಯೋಧ್ಯೆಗೆ ಮರಳಿದರು.

ऐसे दिन हमरे फिर जइहैं,
बंधुवन के दिन जइहें बीत।
पुनः मिलन हमरौ होई जईहै,
जइहै रात भयंकर बीत॥

ಅಂತಹ ದಿನಗಳು ಮತ್ತೆ ಬರುತ್ತವೆ,

ಸ್ನೇಹಿತರ ದಿನಗಳು ಕಳೆದು ಹೋಗುತ್ತವೆ.

ನಾವು ಮತ್ತೆ ಒಂದಾಗುತ್ತೇವೆ,

ರಾತ್ರಿ ಭಯಾನಕವಾಗಿ ಕಳೆಯುತ್ತಿದೆ.

ಮಿತ್ರರೇ,

1998ರಲ್ಲಿ “ಅಂತಾರಾಷ್ಟ್ರೀಯ ರಾಮಾಯಣ ಸಮ್ಮೇಳನ' ಕ್ಕಾಗಿ ನಾನು ಇಲ್ಲಿಗೆ ಭೇಟಿ ನೀಡಿದ್ದನ್ನು ಸ್ಮರಿಸಿಕೊಳ್ಳುತ್ತೇನೆ. ಆ ಸಂದರ್ಭದಲ್ಲಿ ನಾನು ಯಾವುದೇ ಸರ್ಕಾರಿ ಹುದ್ದೆಯನ್ನು ಹೊಂದಿರಲಿಲ್ಲ. ನಾನು ಸಾಮಾನ್ಯ ಕಾರ್ಯಕರ್ತನಾಗಿ ಬಂದಿದ್ದೇ. ಗಮನಿಸಬೇಕಾದ ಸಂಗತಿ ಎಂದರೆ ಆಗಲೂ ನವೀನ್ ಜಿ ಪ್ರಧಾನಿಯಾಗಿದ್ದರು. ನಂತರ ನಾನು ಪ್ರಧಾನಿಯಾದಾಗ, ನವೀನ್ ಜಿ ದೆಹಲಿಯಲ್ಲಿ ನನ್ನ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ನನ್ನನ್ನು ಗೌರವಿಸಿದರು.

 

ಮಿತ್ರರೇ,

ಹಲವು ವರ್ಷಗಳ ಹಿಂದೆ ನಾನು ಇಲ್ಲಿ ಅನುಭವಿಸಿದ ಭಗವಾನ್ ರಾಮ ಮತ್ತು ರಾಮಾಯಣದ ಬಗ್ಗೆ ಆಳವಾದ ನಂಬಿಕೆ ಮತ್ತು ಭಾವನೆ ಇಂದಿಗೂ ಅಷ್ಟೇ ಪ್ರಬಲವಾಗಿದೆ. ಕಳೆದ ವರ್ಷ ಜನವರಿಯಲ್ಲಿ ಅಯೋಧ್ಯೆಯಲ್ಲಿ ನಡೆದ ಪ್ರಾಣ ಪ್ರತಿಷ್ಠಾ ಸಮಾರಂಭದ ಸಮಯದಲ್ಲಿ ಇದೇ ರೀತಿಯ ಭಕ್ತಿಯ ಅಲೆ ಕಂಡುಬಂದಿತು - ಇದು 500 ವರ್ಷಗಳ ಸುದೀರ್ಘ ಕಾಯುವಿಕೆಯ ಅಂತ್ಯವನ್ನು ಸೂಚಿಸುತ್ತದೆ. ಭಾರತದಾದ್ಯಂತ ವ್ಯಾಪಿಸಿರುವ ಉತ್ಸಾಹ ಮತ್ತು ಸಂಭ್ರಮವು ಮಾರಿಷಸ್‌ನಲ್ಲಿಯೂ ಸಹ ಪ್ರತಿಫಲಿಸುತ್ತದೆ. ನಿಮ್ಮ ಹೃದಯಪೂರ್ವಕ ಸಂಬಂಧವನ್ನು ಅರ್ಥಮಾಡಿಕೊಂಡ ಮಾರಿಷಸ್ ಅರ್ಧ ದಿನದ ರಜೆಯನ್ನು ಸಹ ಘೋಷಿಸಿತು. ಭಾರತ ಮತ್ತು ಮಾರಿಷಸ್ ನಡುವಿನ ಈ ಹಂಚಿಕೆಯ ನಂಬಿಕೆಯ ಬಂಧವು ನಮ್ಮ ಶಾಶ್ವತ ಸ್ನೇಹಕ್ಕೆ ಬಲವಾದ ಬುನಾದಿಯನ್ನು ಹಾಕಿದೆ.

ಮಿತ್ರರೇ,

ಮಾರಿಷಸ್‌ನ ಹಲವು  ಕುಟುಂಬಗಳು ಇತ್ತೀಚೆಗೆ ಮಹಾಕುಂಭದಿಂದ ಹಿಂತಿರುಗಿವೆ ಎಂಬುದು ನನಗೆ ತಿಳಿದಿದೆ. ಮಾನವ ಇತಿಹಾಸದಲ್ಲಿಯೇ ಅತಿ ದೊಡ್ಡ ಸಮಾವೇಶವನ್ನು ನೋಡಿ ಜಗತ್ತು ಆಶ್ಚರ್ಯಚಕಿತವಾಗಿದೆ - 65 ರಿಂದ 66 ಕೋಟಿ ಜನರು ಹಾಜರಿದ್ದರು  ಮತ್ತು ಮಾರಿಷಸ್‌ನ ಜನರು ಸಹ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಮಾರಿಷಸ್‌ನ ನನ್ನ ಅನೇಕ ಸಹೋದರ ಸಹೋದರಿಯರು, ಅವರ ಹೃದಯಪೂರ್ವಕ ಬಯಕೆಯ ಹೊರತಾಗಿಯೂ ಈ ಏಕತೆಯ ಮಹಾ ಕುಂಭಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ನನಗೆ ತಿಳಿದಿದೆ. ನಿಮ್ಮ ಭಾವನೆಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಅದಕ್ಕಾಗಿಯೇ ನಾನು ಮಹಾ ಕುಂಭದ ಸಮಯದಲ್ಲಿ ತೆಗೆದ ಪವಿತ್ರ ಸಂಗಮದಿಂದ ಪವಿತ್ರ ಗಂಗೆಯನ್ನು ನನ್ನೊಂದಿಗೆ ತಂದಿದ್ದೇನೆ. ನಾಳೆ, ಈ ಪವಿತ್ರ ನೀರನ್ನು ಇಲ್ಲಿ ಗಂಗಾ ತಲಾವ್‌ನಲ್ಲಿ ಮುಳುಗಿಸಲಾಗುವುದು. 50 ವರ್ಷಗಳ ಹಿಂದೆ ಗೋಮುಖದಲ್ಲಿ ಗಂಗಾ ನದಿಯ ನೀರನ್ನು ಇಲ್ಲಿಗೆ ತಂದು ಗಂಗಾ ತಲಾವ್‌ನಲ್ಲಿ ಮುಳುಗಿಸಲಾಯಿತು. ನಾಳೆ ನಾವು ಮತ್ತೊಮ್ಮೆ ಇದೇ ರೀತಿಯ ಪವಿತ್ರ ಕ್ಷಣಕ್ಕೆ ಸಾಕ್ಷಿಯಾಗುತ್ತೇವೆ. ಗಂಗಾ ಮಾತೆಯ ಆಶೀರ್ವಾದ ಮತ್ತು ಮಹಾಕುಂಭದ ಈ ಪ್ರಸಾದದಿಂದ ಮಾರಿಷಸ್ ಸಮೃದ್ಧಿಯ ಹೊಸ ಎತ್ತರವನ್ನು ತಲುಪಲಿ ಎಂಬುದು ನನ್ನ ಪ್ರಾರ್ಥನೆಯಾಗಿದೆ.

ಮಿತ್ರರೇ,

ಮಾರಿಷಸ್ 1968 ರಲ್ಲಿ ಸ್ವಾತಂತ್ರ್ಯ ಪಡೆದಿರಬಹುದು, ಆದರೆ ಈ ದೇಶ ಎಲ್ಲರನ್ನೂ ಜತೆಯಲ್ಲಿ ತೆಗೆದುಕೊಂಡು ಪ್ರಗತಿ ಸಾಧಿಸಿದ ರೀತಿ ಜಗತ್ತಿಗೆ ಒಂದು ಗಮನಾರ್ಹ ಉದಾಹರಣೆಯಾಗಿದೆ. ಜಗತ್ತಿನ ವಿವಿಧ ಮೂಲೆಗಳಿಂದ ಬಂದ ಜನರು ಮಾರಿಷಸ್ ಅನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡಿದ್ದಾರೆ, ಸಂಸ್ಕೃತಿಗಳ ರೋಮಾಂಚಕ ಪ್ರಪಂಚವನ್ನು ಸೃಷ್ಟಿಸಿದ್ದಾರೆ - ಅದು ವೈವಿಧ್ಯತೆಯ ಸುಂದರ ಉದ್ಯಾನವಾಗಿದೆ. ನಮ್ಮ ಪೂರ್ವಜರನ್ನು ಬಿಹಾರ, ಉತ್ತರ ಪ್ರದೇಶ ಮತ್ತು ಭಾರತದ ಇತರ ಭಾಗಗಳಿಂದ ಇಲ್ಲಿಗೆ ಕರೆತರಲಾಯಿತು. ನೀವು ಇಲ್ಲಿನ ಭಾಷೆ, ಉಪಭಾಷೆಗಳು ಮತ್ತು ಆಹಾರ ಪದ್ಧತಿಗಳನ್ನು ಗಮನಿಸಿದರೆ, ಮಾರಿಷಸ್ ಒಂದು ಮಿನಿ-ಭಾರತವನ್ನು ಪ್ರತಿಬಿಂಬಿಸುತ್ತದೆ ಎಂದು ನಿಮಗನಿಸುತ್ತದೆ. ಭಾರತೀಯರ ಪೀಳಿಗೆಗಳು ಬೆಳ್ಳಿ ಪರದೆಯ ಮೇಲೆ ಮಾರಿಷಸ್ ಅನ್ನು ಮೆಚ್ಚಿಕೊಂಡಿವೆ. ನೀವು ಜನಪ್ರಿಯ ಸೂಪರ್ ಹಿಟ್ ಹಿಂದಿ ಹಾಡುಗಳನ್ನು ನೋಡಿದಾಗ, ನೀವು ಇಂಡಿಯಾ ಹೌಸ್, ಐಲ್ ಆಕ್ಸ್ ಸೆರ್ಫ್ಸ್, ಗ್ರಿಸ್-ಗ್ರಿಸ್ ಬೀಚ್‌ನ ಸುಂದರ ನೋಟಗಳು, ಕಾಡನ್ ವಾಟರ್‌ಫ್ರಂಟ್ ಅನ್ನು ನೋಡುತ್ತೀರಿ ಮತ್ತು ರೋಚೆಸ್ಟರ್ ಜಲಪಾತದ ಶಬ್ದಗಳನ್ನು ಕೇಳುತ್ತೀರಿ. ಬಹುಶಃ, ಭಾರತೀಯ ಸಿನೆಮಾದಲ್ಲಿ ತನ್ನ ಸ್ಥಾನವನ್ನು ಕಂಡುಕೊಂಡಿಲ್ಲದ ಮಾರಿಷಸ್‌ನ ಒಂದು ಮೂಲೆಯೂ ಇಲ್ಲ. ವಾಸ್ತವವಾಗಿ ಸಂಗೀತವು ಭಾರತೀಯವಾಗಿದ್ದರೆ ಮತ್ತು ಸ್ಥಳವು ಮಾರಿಷಸ್ ಆಗಿದ್ದರೆ, ಚಲನಚಿತ್ರವು ಹಿಟ್ ಆಗುವ ಖಾತರಿ ಮಾತ್ರ ದೊಡ್ಡದಾಗುತ್ತದೆ.. !

 

ಮಿತ್ರರೇ,

ಇಡೀ ಭೋಜ್‌ಪುರ ಪ್ರದೇಶ ಮತ್ತು ಬಿಹಾರದೊಂದಿಗಿನ ನಿಮ್ಮ ಆಳವಾದ ಭಾವನಾತ್ಮಕ ಸಂಬಂಧವನ್ನು ನಾನು ಅರ್ಥಮಾಡಿಕೊಂಡಿದ್ದೇನೆ.

ಪೂರ್ವಾಂಚಲ್‌ನ ಸಂಸದನಾಗಿ, ಬಿಹಾರಕ್ಕೆ ಎಷ್ಟು ಸಾಮರ್ಥ್ಯವಿದೆ ಎಂದು ನನಗೆ ತಿಳಿದಿದೆ. ಬಿಹಾರವು ವಿಶ್ವದ ಸಮೃದ್ಧಿಯ ಕೇಂದ್ರವಾಗಿದ್ದ ಕಾಲವೊಂದಿತ್ತು. ಈಗ, ನಾವು ಒಟ್ಟಾಗಿ ಬಿಹಾರದ ವೈಭವವನ್ನು ಮರಳಿ ತರಲು ಕೆಲಸ ಮಾಡುತ್ತಿದ್ದೇವೆ.

पूर्वांचल के सांसद होवे के नाते, हम जननी कि बिहार के सामर्थ्य केतना ज्यादा बा... एक समय रहे जब बिहार, दुनिया क समृद्धि के केंद्र रहल.. अब हम मिलके, बिहार के गौरव फिर से वापस लाए के काम करत हई जा।

ಮಿತ್ರರೇ,

ಪ್ರಪಂಚದ ಅನೇಕ ಭಾಗಗಳು ಶಿಕ್ಷಣದ ವ್ಯಾಪ್ತಿಯಿಂದ ದೂರವಿದ್ದ ಸಮಯದಲ್ಲಿ ಭಾರತದ ಬಿಹಾರವು ನಳಂದದಂತಹ ಜಾಗತಿಕ ಕಲಿಕಾ ಕೇಂದ್ರಕ್ಕೆ ನೆಲೆಯಾಗಿತ್ತು. ನಮ್ಮ ಸರ್ಕಾರವು ನಳಂದ ವಿಶ್ವವಿದ್ಯಾಲಯವನ್ನು ಪುನರುಜ್ಜೀವನಗೊಳಿಸಿದೆ ಮತ್ತು ನಳಂದದ ವೈಭವವನ್ನು ಮರುಕಳಿಸುವಂತೆ ಮಾಡಿದೆ. ಇಂದು ಭಗವಾನ್ ಬುದ್ಧನ ಬೋಧನೆಗಳು ಶಾಂತಿಯ ಅನ್ವೇಷಣೆಯಲ್ಲಿ ಜಗತ್ತಿಗೆ ಸ್ಫೂರ್ತಿ ನೀಡುತ್ತಲೇ ಇವೆ. ನಾವು ಈ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವುದಲ್ಲದೆ ಜಾಗತಿಕವಾಗಿಯೂ ಅದನ್ನು ಪ್ರಚಾರ ಮಾಡುತ್ತಿದ್ದೇವೆ. ಇಂದು, ಬಿಹಾರದ ಮಖಾನವು ಭಾರತದಾದ್ಯಂತ ವ್ಯಾಪಕ ಮನ್ನಣೆಯನ್ನು ಪಡೆಯುತ್ತಿದೆ. ಪ್ರಪಂಚದಾದ್ಯಂತದ ತಿಂಡಿ ಪಟ್ಟಿ (ಮೆನು) ಗಳಲ್ಲಿ ಬಿಹಾರದ ಮಖಾನ ಕಾಣಿಸಿಕೊಳ್ಳಲು ಹೆಚ್ಚು ಸಮಯವಿಲ್ಲ.

ಇಲ್ಲಿನ ಜನರು ಮಖಾನವನ್ನು ಎಷ್ಟು ಇಷ್ಟಪಡುತ್ತಾರೆಂದು ನಮಗೆ ತಿಳಿದಿದೆ...

ನನಗೂ ಮಖಾನಾ ತುಂಬಾ ಇಷ್ಟ...

ಮಿತ್ರರೇ,

ಭಾರತವು ಇಂದು ಭವಿಷ್ಯದ ಪೀಳಿಗೆಗೆ ಮಾರಿಷಸ್‌ನೊಂದಿಗೆ ತನ್ನ ಆಳವಾಗಿ ಬೇರೂರಿರುವ ಸಂಬಂಧಗಳನ್ನು ಪೋಷಿಸುತ್ತಿದೆ ಮತ್ತು ಸಂರಕ್ಷಿಸುತ್ತಿದೆ. ಮಾರಿಷಸ್‌ನಲ್ಲಿರುವ ಭಾರತೀಯ ವಲಸಿಗರ ಏಳನೇ ತಲೆಮಾರಿಗೆ ಒಸಿಐ  ಕಾರ್ಡ್‌ಗಳನ್ನು ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ನನಗೆ ಸಂತೋಷವಾಗಿದೆ. ಮಾರಿಷಸ್ ಅಧ್ಯಕ್ಷರು ಮತ್ತು ಅವರ ಪತ್ನಿ ಬೃಂದಾ ಜಿ ಅವರಿಗೆ ಒಸಿಐ ಕಾರ್ಡ್‌ಗಳನ್ನು ನೀಡುವ ಸೌಭಾಗ್ಯ ನನಗೆ ಸಿಕ್ಕಿತು. ಪ್ರಧಾನಿ ಮತ್ತು ಅವರ ಪತ್ನಿ ವೀಣಾ ಜಿ ಅವರಿಗೆ ಒಸಿಐ ಕಾರ್ಡ್‌ಗಳನ್ನು ನೀಡುವ ಗೌರವವೂ ನನಗಿತ್ತು. ಈ ವರ್ಷದ ಪ್ರವಾಸಿ ಭಾರತೀಯ ದಿನದ ಸಮಯದಲ್ಲಿ ವಿಶ್ವದಾದ್ಯಂತ ನೆಲೆಸಿರುವ ಗಿರ್ಮಿತಿಯ ಸಮುದಾಯಕ್ಕಾಗಿ ಕೆಲವು ಉಪಕ್ರಮಗಳನ್ನು ತೆಗೆದುಕೊಳ್ಳುವ ಪ್ರಸ್ತಾಪವನ್ನು ನಾನು ಮಾಡಿದ್ದೆನು. ಗಿರ್ಮಿತಿಯ ಸಮುದಾಯದ ಸಮಗ್ರ ದತ್ತಾಂಶ ಸಂಗ್ರಹಿಸಲು (ಡೇಟಾಬೇಸ್ ರಚಿಸಲು) ಭಾರತ ಸರ್ಕಾರ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದು ನಿಮಗೂ ಸಂತೋಷವಾಗುತ್ತದೆ. ಗಿರ್ಮಿತಿಯ ಸಮುದಾಯದ ಸದಸ್ಯರು ವಲಸೆ ಬಂದ ಹಳ್ಳಿಗಳು ಮತ್ತು ನಗರಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವ ಪ್ರಯತ್ನಗಳು ನಡೆಯುತ್ತಿವೆ. ಅವರು ನೆಲೆಸಿರುವ ಸ್ಥಳಗಳನ್ನು ಗುರುತಿಸಲು ಸಹ ನಾವು ಕೆಲಸ ಮಾಡುತ್ತಿದ್ದೇವೆ. ಗಿರ್ಮಿತಿಯ ಸಮುದಾಯದ ಸಂಪೂರ್ಣ ಇತಿಹಾಸ - ಹಿಂದಿನಿಂದ ಈವರೆಗಿನ ಅವರ ಪಯಣ, ಒಂದೇ ಸ್ಥಳದಲ್ಲಿ ದಾಖಲಿಸಲಾಗುತ್ತಿದೆ. ನಮ್ಮ ಪ್ರಯತ್ನವೆಂದರೆ, ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ, ಗಿರ್ಮಿಟಿಯಾ ಪರಂಪರೆಯ ಪರಂಪರೆಯ ಕುರಿತು ಅಧ್ಯಯನ ನಡೆಸುವುದು ಮತ್ತು ಕಾಲಕಾಲಕ್ಕೆ ವಿಶ್ವ ಗಿರ್ಮಿಟಿಯಾ ಸಮ್ಮೇಳನಗಳನ್ನು ಆಯೋಜಿಸುವುದು. 'ಒಪ್ಪಂದ ಕಾರ್ಮಿಕ ಮಾರ್ಗಗಳನ್ನು' ಗುರುತಿಸಲು ಭಾರತವು ಮಾರಿಷಸ್ ಮತ್ತು ಗಿರ್ಮಿಟಿಯಾ ಸಮುದಾಯಕ್ಕೆ ಸಂಪರ್ಕ ಹೊಂದಿದ ಇತರ ದೇಶಗಳೊಂದಿಗೆ ಸಹಕರಿಸಲು ಯೋಜಿಸಿದೆ. ಮಾರಿಷಸ್‌ನ ಐತಿಹಾಸಿಕ ಆಪ್ರವಾಸಿ ಘಾಟ್ ಸೇರಿದಂತೆ ಈ ಮಾರ್ಗಗಳಲ್ಲಿ ಪ್ರಮುಖ ಪರಂಪರೆಯ ತಾಣಗಳನ್ನು ಸಂರಕ್ಷಿಸುವ ಗುರಿಯನ್ನು ನಾವು ಹೊಂದಿದ್ದೇವೆ.

 

ಮಿತ್ರರೇ,

ಮಾರಿಷಸ್ ನಮಗೆ ಕೇವಲ ಪಾಲುದಾರ ರಾಷ್ಟ್ರವಲ್ಲ, ಮಾರಿಷಸ್ ಒಂದು ಕುಟುಂಬ. ಈ ಬಾಂಧವ್ಯವು ಆಳವಾದ ಮತ್ತು ಬಲವಾದದ್ದು, ಇತಿಹಾಸ, ಪರಂಪರೆ ಮತ್ತು ಮಾನವ ಚೈತನ್ಯದಲ್ಲಿ ಬೇರೂರಿದೆ. ಮಾರಿಷಸ್ ಭಾರತವನ್ನು ವಿಶಾಲವಾದ ಜಾಗತಿಕ ದಕ್ಷಿಣಕ್ಕೆ ಸಂಪರ್ಕಿಸುವ ಸೇತುವೆಯೂ ಆಗಿದೆ. ಒಂದು ದಶಕದ ಹಿಂದೆ 2015 ರಲ್ಲಿ ಪ್ರಧಾನ ಮಂತ್ರಿಯಾಗಿ ಮಾರಿಷಸ್‌ಗೆ ನನ್ನ ಮೊದಲ ಭೇಟಿಯಲ್ಲಿ ನಾನು ಭಾರತದ ಸಾಗರ್ ದೂರದೃಷ್ಟಿಯನ್ನು ಘೋಷಿಸಿದೆ. ಸಾಗರ್ ಎಂದರೆ 'ಪ್ರದೇಶದ ಎಲ್ಲರಿಗೂ ಸುರಕ್ಷತೆ ಮತ್ತು ಬೆಳವಣಿಗೆ' ಎಂದರ್ಥ. ಇಂದು ಮಾರಿಷಸ್ ಇನ್ನೂ ಈ ದೂರದೃಷ್ಟಿಯ ಹೃದಯಭಾಗದಲ್ಲಿದೆ. ಅದು ಹೂಡಿಕೆಯಾಗಲಿ ಅಥವಾ ಮೂಲಸೌಕರ್ಯವಾಗಲಿ, ವಾಣಿಜ್ಯವಾಗಲಿ ಅಥವಾ ಬಿಕ್ಕಟ್ಟಿನ ಪ್ರತಿಕ್ರಿಯೆಯಾಗಲಿ, ಭಾರತ ಸದಾ ಮಾರಿಷಸ್‌ನೊಂದಿಗೆ ನಿಲ್ಲುತ್ತದೆ. 2021ರಲ್ಲಿ ನಾವು ಸಮಗ್ರ ಆರ್ಥಿಕ ಸಹಕಾರ ಮತ್ತು ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿದ ಆಫ್ರಿಕನ್ ಒಕ್ಕೂಟದಿಂದ ಮಾರಿಷಸ್ ಮೊದಲ ದೇಶವಾಗಿದೆ. ಇದು ಹೊಸ ಅವಕಾಶಗಳನ್ನು ತೆರೆದಿದೆ, ಮಾರಿಷಸ್‌ಗೆ ಭಾರತೀಯ ಮಾರುಕಟ್ಟೆಗಳಿಗೆ ಆದ್ಯತೆಯ ಪ್ರವೇಶವನ್ನು ನೀಡಿದೆ. ಭಾರತೀಯ ಕಂಪನಿಗಳು ಮಾರಿಷಸ್‌ನಲ್ಲಿ ಲಕ್ಷಾಂತರ ಡಾಲರ್‌ಗಳನ್ನು ಹೂಡಿಕೆ ಮಾಡಿವೆ. ಮಾರಿಷಸ್‌ನ ಜನರಿಗೆ ನಿರ್ಣಾಯಕ ಮೂಲಸೌಕರ್ಯ ಯೋಜನೆಗಳನ್ನು ನಿರ್ಮಿಸುವಲ್ಲಿ ನಾವು ಪಾಲುದಾರಿಕೆ ಹೊಂದಿದ್ದೇವೆ. ಇದು ಬೆಳವಣಿಗೆಯನ್ನು ಹೆಚ್ಚಿಸುತ್ತಿದೆ, ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಮತ್ತು ಕೈಗಾರಿಕೆಗಳನ್ನು ಪರಿವರ್ತಿಸುತ್ತಿದೆ. ಮಾರಿಷಸ್‌ನಲ್ಲಿ ಸಾಮರ್ಥ್ಯ ವೃದ್ಧಿಯಲ್ಲಿ ಭಾರತ ಹೆಮ್ಮೆಯ ಪಾಲುದಾರನಾಗಿದೆ.

ಮಿತ್ರರೇ,

ವಿಶಾಲ ಸಾಗರ ಪ್ರದೇಶಗಳನ್ನು ಹೊಂದಿರುವ ಮಾರಿಷಸ್, ಅಕ್ರಮ ಮೀನುಗಾರಿಕೆ, ಕಡಲ್ಗಳ್ಳತನ ಮತ್ತು ಅಪರಾಧಗಳಿಂದ ತನ್ನ ಸಂಪನ್ಮೂಲಗಳನ್ನು ರಕ್ಷಿಸಿಕೊಳ್ಳಬೇಕು. ವಿಶ್ವಾಸಾರ್ಹ ಮತ್ತು ನಂಬಿಕೆಯ ಮಿತ್ರನಾಗಿ,  ಭಾರತವು ನಿಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸಲು ಮತ್ತು ಹಿಂದೂ ಮಹಾಸಾಗರ ಪ್ರದೇಶವನ್ನು ಸುರಕ್ಷಿತಗೊಳಿಸಲು ಮಾರಿಷಸ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಬಿಕ್ಕಟ್ಟಿನ ಸಮಯದಲ್ಲಿ, ಭಾರತ ಸದಾ ಮಾರಿಷಸ್‌ನೊಂದಿಗೆ ನಿಂತಿದೆ. ಕೋವಿಡ್‌-19 ಅಪ್ಪಳಿಸಿದಾಗ 1 ಲಕ್ಷ ಲಸಿಕೆಗಳು ಮತ್ತು ಅಗತ್ಯ ಔಷಧಿಗಳನ್ನು ತಲುಪಿಸಿದ ಮೊದಲ ದೇಶ ಭಾರತ. ಮಾರಿಷಸ್ ಬಿಕ್ಕಟ್ಟನ್ನು ಎದುರಿಸಿದಾಗ ಭಾರತವು ಮೊದಲು ಪ್ರತಿಕ್ರಿಯಿಸುತ್ತದೆ. ಮಾರಿಷಸ್ ಅಭಿವೃದ್ಧಿ ಹೊಂದಿದಾಗ ಭಾರತವು ಮೊದಲು ಸಂಭ್ರಮಿಸುತ್ತದೆ.  ನಾನು ಮೊದಲೇ ಹೇಳಿದಂತೆ ನಮಗೆ ಮಾರಿಷಸ್ ನಮ್ಮ ಕುಟುಂಬವಿದ್ದಂತೆ.


ಮಿತ್ರರೇ,

ಭಾರತ ಮತ್ತು ಮಾರಿಷಸ್ ಇತಿಹಾಸದಿಂದ ಮಾತ್ರವಲ್ಲದೆ ಹಂಚಿಕೆಯ ಭವಿಷ್ಯದ ಅವಕಾಶಗಳಿಂದಲೂ ಸಂಪರ್ಕ ಹೊಂದಿವೆ. ಭಾರತವು ತ್ವರಿತ ಪ್ರಗತಿ ಸಾಧಿಸುತ್ತಿರುವಲ್ಲೆಲ್ಲಾ, ಅದು ಮಾರಿಷಸ್‌ನ ಬೆಳವಣಿಗೆಯನ್ನು ಸಕ್ರಿಯವಾಗಿ ಬೆಂಬಲಿಸುತ್ತಿದೆ. ಮೆಟ್ರೊ ವ್ಯವಸ್ಥೆ ಮತ್ತು ವಿದ್ಯುತ್ ಚಾಲಿತ ಬಸ್‌ಗಳಿಂದ ಸೌರಶಕ್ತಿ ಯೋಜನೆಗಳು, ಯುಪಿಐ ಮತ್ತು ರುಪೇ ಕಾರ್ಡ್‌ಗಳಂತಹ ಆಧುನಿಕ ಸೇವೆಗಳು ಮತ್ತು ಹೊಸ ಸಂಸತ್ತಿನ ಕಟ್ಟಡದ ನಿರ್ಮಾಣದವರೆಗೆ - ಭಾರತವು ಸ್ನೇಹದ ಮನೋಭಾವದಿಂದ ಮಾರಿಷಸ್‌ಗೆ ತನ್ನ ಬೆಂಬಲವನ್ನು ವಿಸ್ತರಿಸುತ್ತಿದೆ. ಇಂದು ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ನಿಂತಿದೆ ಮತ್ತು ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ. ನಮ್ಮ ಬೆಳವಣಿಗೆಯಿಂದ ಮಾರಿಷಸ್‌ಗೆ ಸಾಕಷ್ಟು ಪ್ರಯೋಜನವಾಗಲಿ ಎಂದು ಭಾರತ ಸದಾ ಆಶಿಸುತ್ತದೆ. ಅದಕ್ಕಾಗಿಯೇ ಭಾರತವು ಜಿ-20 ಅಧ್ಯಕ್ಷತೆ ವಹಿಸಿಕೊಂಡಾಗ ನಾವು ಮಾರಿಷಸ್ ಅನ್ನು ವಿಶೇಷ ಆಹ್ವಾನಿತರನ್ನಾಗಿ ಆಹ್ವಾನಿಸಿದ್ದೇವೆ. ಭಾರತದಲ್ಲಿ ನಡೆದ ಶೃಂಗಸಭೆಯ ಸಂದರ್ಭದಲ್ಲಿ ಆಫ್ರಿಕನ್ ಒಕ್ಕೂಟವನ್ನು ಮೊದಲ ಬಾರಿಗೆ ಜಿ-20 ಯ ಖಾಯಂ ಸದಸ್ಯರನ್ನಾಗಿ ಮಾಡಲಾಯಿತು. ಈ ದೀರ್ಘಕಾಲದ ಬೇಡಿಕೆಯನ್ನು ಅಂತಿಮವಾಗಿ ಭಾರತದ ಅಧ್ಯಕ್ಷತೆಯಲ್ಲಿ ಸಾಕಾರಗೊಂಡಿತು.
ಮಿತ್ರರೇ,

ಒಂದು ಜನಪ್ರಿಯ ಹಾಡು ಹೀಗಿದೆ.

ನೆಲದ ಮೇಲೆ ಕಟ್ಟಲಾದ ತಂತಿ

ಆಕಾಶ ಗೇ ನನ್ನ...

ಸುತ್ತಾಡಿಕೊಂಡು ಕಟ್ಟಿಹಾಕಿದರು

ದೇವ್ ಆಸ್ಥಾನ್ ಗೇ ​​ಮೈ...

ನಾನು ನಿನ್ನನ್ನು ಪ್ರೀತಿಸುತ್ತೇನೆ

ಓ ಭೂಮಿ ಮಾತೆ...

तार बांधी धरती ऊपर
आसमान गे माई...
घुमी फिरी बांधिला
देव अस्थान गे माई...
गोर तोहर लागीला
धरती हो माई...

ನಾವು ಭೂಮಿಯನ್ನು ನಮ್ಮ ತಾಯಿ ಎಂದು ಪರಿಗಣಿಸುತ್ತೇವೆ. 10 ವರ್ಷಗಳ ಹಿಂದೆ ನಾನು ಮಾರಿಷಸ್‌ಗೆ ಭೇಟಿ ನೀಡಿದಾಗ, ಹವಾಮಾನ ಬದಲಾವಣೆಯ ಬಗ್ಗೆ ಮಾರಿಷಸ್ ಏನು ಹೇಳುತ್ತದೆ ಎಂಬುದನ್ನು ನಾವು ಕೇಳಬೇಕು ಎಂದು ನಾನು ಇಡೀ ಜಗತ್ತಿಗೆ ಘೋಷಿಸಿದ್ದೆ. ಇಂದು ಮಾರಿಷಸ್ ಮತ್ತು ಭಾರತ ಒಟ್ಟಾಗಿ ಈ ವಿಷಯದ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸುತ್ತಿರುವುದು ನನಗೆ ಸಂತೋಷ ತಂದಿದೆ. ಮಾರಿಷಸ್ ಮತ್ತು ಭಾರತ ಅಂತಾರಾಷ್ಟ್ರೀಯ ಸೌರ ಒಕ್ಕೂಟ ಮತ್ತು ಜಾಗತಿಕ ಜೈವಿಕ ಇಂಧನ ಒಕ್ಕೂಟದಂತಹ ಉಪಕ್ರಮಗಳಲ್ಲಿ ಪ್ರಮುಖ ಸದಸ್ಯರಾಗಿದ್ದಾರೆ. ಇಂದು ಮಾರಿಷಸ್ ಕೂಡ ತಾಯಿ ಹೆಸರಿನಲ್ಲಿ ಒಂದು ಗಿಡ ನೆಡಿ (ಏಕ್ ಪೆಡ್ ಮಾ ಕೆ ನಾಮ್ ) ಅಭಿಯಾನದೊಂದಿಗೆ ಸಂಬಂಧ ಹೊಂದಿದೆ. ಇಂದು ನಾನು, ಪ್ರಧಾನಿ ನವೀನ್ ರಾಮ್‌ಗೂಲಂ ಜಿ ಅವರೊಂದಿಗೆ ಏಕ್ ಪೆಡ್ ಮಾ ಕೆ ನಾಮ್ ಅಭಿಯಾನದ ಅಡಿಯಲ್ಲಿ ಒಂದು ಸಸಿಯನ್ನು ನೆಟ್ಟಿದ್ದೇನೆ. ಈ ಅಭಿಯಾನವು ನಮಗೆ ಜನ್ಮ ನೀಡಿದ ತಾಯಿಯೊಂದಿಗೆ ಮಾತ್ರವಲ್ಲದೆ ಭೂಮಿ ತಾಯಿಯೊಂದಿಗೆ ಸಹ ಬಾಂಧವ್ಯವನ್ನು ನಿರ್ಮಿಸುತ್ತದೆ. ಮಾರಿಷಸ್‌ನ ಎಲ್ಲಾ ನಾಗರಿಕರು ಈ ಅಭಿಯಾನದ ಭಾಗವಾಗಬೇಕೆಂದು ನಾನು ಕರೆ ನೀಡುತ್ತೇನೆ.

ಮಿತ್ರರೇ,

21ನೇ ಶತಮಾನದಲ್ಲಿ ಮಾರಿಷಸ್‌ಗೆ ಹಲವು ಸಾಧ್ಯತೆಗಳು ಹೊರಹೊಮ್ಮುತ್ತಿವೆ. ಭಾರತವು ಮಾರಿಷಸ್‌ನ ಪ್ರತಿ ಹೆಜ್ಜೆಯೊಂದಿಗೆ ಇದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಮತ್ತೊಮ್ಮೆ, ಪ್ರಧಾನಮಂತ್ರಿ, ಅವರ ಸರ್ಕಾರ ಮತ್ತು ಮಾರಿಷಸ್ ಜನರಿಗೆ ನಾನು ಧನ್ಯವಾದ ಹೇಳುತ್ತೇನೆ.

ಮತ್ತೊಮ್ಮೆ, ರಾಷ್ಟ್ರೀಯ ದಿನದ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಶುಭಾಶಯಗಳು.
ತುಂಬಾ ತುಂಬಾ ಧನ್ಯವಾದಗಳು.

ನಮಸ್ಕಾರ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's auto retail sales rise 18 per cent in January; dealers optimistic about Feb-Mar growth

Media Coverage

India's auto retail sales rise 18 per cent in January; dealers optimistic about Feb-Mar growth
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam highlighting complete devotion in the service of nation and humanity
February 11, 2026

The Prime Minister, Shri Narendra Modi, shared a Sanskrit Subhashitam highlighting complete devotion in the service of nation and humanity.

"यस्येमे हिमवन्तो महित्वा यस्य समुद्रं रसया सहाहुः।

यस्येमाः प्रदिशो यस्य बाहू कस्मै देवाय हविषा विधेम॥"

The Subhashitam conveys, "To the nation, whose greatness is sung by the Himalayas, whose glory flows with the rivers to the ocean, and to whom the directions bow like mighty arms, we offer our entire being in dedication."

Shri Modi stated that the pioneer of Antyodaya, Pandit Deendayal Upadhyaya, also dedicated his life with this very spirit to empower every individual in the country.

The Prime Minister wrote on X;

“सर्वस्व समर्पण उस चेतना की अभिव्यक्ति है, जिसमें राष्ट्र और मानवता सर्वोपरि होती है। अंत्योदय के प्रणेता पंडित दीनदयाल उपाध्याय जी ने भी इसी भावना से देश के जन-जन को सशक्त बनाने के लिए अपना जीवन समर्पित कर दिया।

यस्येमे हिमवन्तो महित्वा यस्य समुद्रं रसया सहाहुः।

यस्येमाः प्रदिशो यस्य बाहू कस्मै देवाय हविषा विधेम॥"