"ಸೋಮನಾಥ ದೇವಾಲಯವನ್ನು ನಾಶಪಡಿಸಿದ ಹಾಗೂ ಸರ್ದಾರ್ ಪಟೇಲರ ಪ್ರಯತ್ನದಿಂದ ದೇವಾಲಯವನ್ನು ನವೀಕರಿಸಿದ ಎರಡೂ ಸನ್ನಿವೇಶಗಳು ದೊಡ್ಡ ಸಂದೇಶವನ್ನು ಹೊಂದಿವೆ".
"ಇಂದು, ಪ್ರವಾಸಿ ಕೇಂದ್ರಗಳ ಅಭಿವೃದ್ಧಿಯು ಕೇವಲ ಸರಕಾರದ ಯೋಜನೆಗಳ ಒಂದು ಭಾಗವಲ್ಲ, ಅದು ಸಾರ್ವಜನಿಕ ಪಾಲ್ಗೊಳ್ಳುವಿಕೆಯ ಅಭಿಯಾನವಾಗಿದೆ. ದೇಶದ ಪಾರಂಪರಿಕ ತಾಣಗಳು ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆಯ ಅಭಿವೃದ್ಧಿಯು ಇದಕ್ಕೆ ಉತ್ತಮ ಉದಾಹರಣೆಗಳಾಗಿವೆ" ಎಂದು ಪ್ರಧಾನಿ ಹೇಳಿದರು.
ದೇಶವು ಪ್ರವಾಸೋದ್ಯಮವನ್ನು ಸಮಗ್ರ ದೃಷ್ಟಿಕೋನದಿಂದ ನೋಡುತ್ತಿದೆ. ಸ್ವಚ್ಛತೆ, ಅನುಕೂಲತೆ, ಸಮಯ ಮತ್ತು ಚಿಂತನೆಯಂತಹ ಅಂಶಗಳು ಪ್ರವಾಸೋದ್ಯಮ ಯೋಜನೆಯ ಭಾಗವಾಗುತ್ತಿವೆ
"ನಮ್ಮ ಚಿಂತನೆ ನವೀನ ಮತ್ತು ಆಧುನಿಕವಾಗಿರಬೇಕು. ಆದರೆ ಇದೇ ವೇಳೆ, ನಮ್ಮ ಪ್ರಾಚೀನ ಪರಂಪರೆಯ ಬಗ್ಗೆ ನಾವು ಎಷ್ಟು ಹೆಮ್ಮೆ ಪಡುತ್ತೇವೆ ಎಂಬುದು ಸಹ ತುಂಬಾ ಮುಖ್ಯವಾಗಿದೆ"

ಜೈ ಸೋಮನಾಥ!

ಕಾರ್ಯಕ್ರಮದಲ್ಲಿ ಹಾಜರಿರುವ ಗುಜರಾತ್ ಮುಖ್ಯಮಂತ್ರಿ ಶ್ರೀ ಭುಪೇಂದ್ರ ಭಾಯಿ ಪಟೇಲ್, ರಾಜ್ಯ ಬಿ.ಜೆ.ಪಿ. ಅಧ್ಯಕ್ಷರೂ ಮತ್ತು ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿಯೂ ಆಗಿರುವ ಶ್ರೀ ಸಿ.ಆರ್. ಪಾಟೀಲ್ ಜೀ, ಗುಜರಾತ್ ಸರಕಾರದ ಸಚಿವರಾದ ಪೂರ್ಣೇಶ್ ಮೋದಿ, ಅರವಿಂದ ರೈಯಾನಿ ಮತ್ತು ದೇವಭಾಯಿ ಮಾಲಮ್, ಜುನಾಘಡ್ ಸಂಸತ್ ಸದಸ್ಯರಾದ ರಾಜೀಶ್ ಚೌಡಾಸಮಾ, ಸೋಮನಾಥ ದೇವಾಲಯ ಟ್ರಸ್ಟಿನ ಸದಸ್ಯರೇ, ಇತರ ಗಣ್ಯರೇ ಮತ್ತು ಮಹಿಳೆಯರೇ ಹಾಗೂ ಮಹನೀಯರೇ!.

ಭಗವಾನ್ ಸೋಮನಾಥರ ಬಗ್ಗೆ ನಮ್ಮ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ-

भक्ति प्रदानाय कृपा अवतीर्णम्, तम् सोमनाथम् शरणम् प्रपद्ये॥

ಅಂದರೆ ಭಗವಾನ್ ಸೋಮನಾಥ ದೇವರ ಆಶೀರ್ವಾದಗಳು ವ್ಯಕ್ತಿಗತವಾಗಿರುತ್ತವೆ ಮತ್ತು ಅವು ಆಶೀರ್ವಾದಗಳ ಖಜಾನೆಯನ್ನೇ ತೆರೆಯುತ್ತವೆ .ಕೆಲ ಕಾಲದಿಂದ ಸೋಮನಾಥ ದಾದಾ ಅವರ ವಿಶೇಷ ಆಶೀರ್ವಾದದಿಂದ ಸರಣಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಮನಾಥ ಟ್ರಸ್ಟಿಗೆ ಸೇರಿದ ಬಳಿಕ ನಾನು ಹಲವಾರು ಕಾರ್ಯಚಟುವಟಿಕೆಗಳನ್ನು ಇಲ್ಲಿ ನೋಡುವಂತಾಗಿರುವುದು ಬಹಳ ಅಪೂರ್ವ ಅವಕಾಶ ಎಂದು ನಾನು ಭಾವಿಸುತ್ತೇನೆ. ಪ್ರದರ್ಶನ ಗ್ಯಾಲರಿ ಮತ್ತು ವಾಯುವಿಹಾರ ಸಹಿತ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೆಲವು ತಿಂಗಳ ಹಿಂದೆ ಉದ್ಘಾಟಿಸಲಾಗಿದೆ. ಪಾರ್ವತಿ ದೇವಾಲಯದ ಶಿಲಾನ್ಯಾಸ ಕೂಡಾ ನಾಡಲಾಗಿದೆ. ಮತ್ತು ಇಂದು ಸೋಮನಾಥ ಸರ್ಕ್ಯೂಟ್ ಹೌಸ್ ಕೂಡಾ ಉದ್ಘಾಟನೆ ಮಾಡಲಾಗುತ್ತಿದೆ. ನಾನು ಗುಜರಾತ್ ಸರಕಾರಕ್ಕೆ, ಸೋಮನಾಥ ದೇವಾಲಯ ಟ್ರಸ್ಟಿಗೆ ಮತ್ತು ನಿಮ್ಮೆಲ್ಲರಿಗೂ ಈ ಪ್ರಮುಖವಾದಂತಹ ಸಂದರ್ಭದಲ್ಲಿ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ಇಲ್ಲಿ ಸರ್ಕ್ಯೂಟ್ ಹೌಸಿನ ಅಗತ್ಯವಿತ್ತು. ಸರ್ಕ್ಯೂಟ್ ಹೌಸಿನ ಕೊರತೆಯಿಂದಾಗಿ ಹೊರ ಪ್ರದೇಶಗಳಿಂದ ಬರುವವರಿಗೆ ವಾಸ್ತವ್ಯದ ವ್ಯವಸ್ಥೆ ಮಾಡುವುದಕ್ಕೆ ಸಂಬಂಧಿಸಿ ದೇವಾಲಯದ ಟ್ರಸ್ಟಿನವರ ಮೇಲೆ ಬಹಳ ಒತ್ತಡ ಬೀಳುತ್ತಿತ್ತು. ಈ ಸ್ವತಂತ್ರ ವ್ಯವಸ್ಥೆಯಾದ ಸರ್ಕ್ಯೂಟ್ ಹೌಸ್ ಉದ್ಘಾಟನೆಯಿಂದ ದೇವಾಲಯದ ಮೇಲಿನ ಒತ್ತಡ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮತ್ತು ಇದು ಕೂಡಾ ದೇವಾಲಯದಿಂದ ಬಹಳ ದೂರವೇನಿಲ್ಲ. ಈಗ ಅವರು (ಟ್ರಸ್ಟಿಗಳು) ದೇವಾಲಯದ ಸಂಗತಿಗಳ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಬಹುದು. ಈ ಕಟ್ಟಡವನ್ನು ಇದರಲ್ಲಿ ತಂಗುವವರಿಗೆ ಸಮುದ್ರದ ದೃಶ್ಯಗಳು ಕಾಣುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ನನಗೆ ತಿಳಿಸಲಾಗಿದೆ. ಅಂದರೆ ಜನರು ತಮ್ಮ ಕೊಠಡಿಗಳಲ್ಲಿ ಶಾಂತವಾಗಿ ಕುಳಿತಿರುವಾಗ ಅವರು ಸಮುದ್ರದ ಅಲೆಗಳನ್ನು ಮತ್ತು ಸೋಮನಾಥ ದೇವಾಲಯದ ಶಿಖರವನ್ನು ನೋಡಬಹುದು. ಸಮುದ್ರದ ಅಲೆಗಳು ಮತ್ತು ಸೋಮನಾಥದ ಶಿಖರದ ನಡುವೆ ಕಾಲನ ಹೊಡೆತವನ್ನು ಎದುರಿಸಿ ನಿಂತ ಭಾರತದ ಹೆಮ್ಮೆಯ ಅಂತಃಪ್ರಜ್ಞೆಯನ್ನೂ ಕಾಣಬಹುದು. ಈ ವಲಯಕ್ಕೆ ಪ್ರವಾಸ ಬರುವವರಿಗೆ ಈ ಹೆಚ್ಚಿನ ಸವಲತ್ತುಗಳ ಲಭ್ಯತೆಯಿಂದಾಗಿ ಅದು ದಿಯು, ಗಿರ್, ದ್ವಾರಕಾ, ವೇದ ದ್ವಾರಕಾ, ಸೋಮನಾಥಗಳಿರಲಿ, ಇವೆಲ್ಲವೂ ಇಡೀ ಪ್ರವಾಸೋದ್ಯಮ ವಲಯದ ಕೇಂದ್ರ ಬಿಂದುವಾಗಬಲ್ಲವು. ಇದು ಬಹಳ ಮುಖ್ಯ ಶಕ್ತಿ ಕೇಂದ್ರವಾಗಲಿದೆ.

ಸ್ನೇಹಿತರೇ,

ನಮ್ಮ ನಾಗರಿಕತೆಯ ಪ್ರಯಾಣವನ್ನು ನೋಡಿದರೆ ಅಲ್ಲಿ ಸವಾಲುಗಳ ಸಂತೆಯೇ ಇದೆ, ಅದರಿಂದ ನೂರಾರು ವರ್ಷಗಳ ಗುಲಾಮಗಿರಿಯಲ್ಲಿ ಭಾರತ ಏನನ್ನೆಲ್ಲ ಅನುಭವಿಸಿತು ಎಂಬ ಬಗ್ಗೆ ನಮಗೊಂದು ನೋಟ ಸಿಗುತ್ತದೆ. ಸೋಮನಾಥ ದೇವಾಲಯ ಹಾಳುಗೆಡವಲಾದ ಸಂದರ್ಭಗಳು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ನಡೆಸಿದ ಪ್ರಯತ್ನಗಳ ಫಲವಾಗಿ ದೇವಾಲಯ ಪುನರುತ್ಠಾನಗೊಂಡ ಸಂದರ್ಭ ನಮಗೆ ಬಹಳ ದೊಡ್ಡ ಸಂದೇಶವನ್ನು ನೀಡುವಂತಿದೆ. ಸೋಮನಾಥದಂತಹ ನಂಬಿಕೆಯ ಮತ್ತು ಸಂಸ್ಕೃತಿಯ ಸ್ಥಳಗಳು ಸ್ವಾತಂತ್ರ್ಯದ ಈ ಅಮೃತ ಮಹೋತ್ಸವ ಕಾಲಘಟ್ಟದಲ್ಲಿ ನಮ್ಮ ದೇಶದ ಹಿಂದಿನ ಚರಿತ್ರೆಯ ಬಗ್ಗೆ ಏನನ್ನು ಕಲಿಯಬೇಕೋ ಅದರ ಅಧ್ಯಯನ ಮಾಡಲು ನಮಗೆ ಬಹಳ ಮುಖ್ಯವಾದ ಕೇಂದ್ರಗಳು.

ಸ್ನೇಹಿತರೇ,

ದೇಶದ ವಿವಿಧ ಭಾಗಗಳಿಂದ, ಜಗತ್ತಿನ ವಿವಿಧೆಡೆಗಳಿಂದ, ವಿವಿಧ ರಾಜ್ಯಗಳಿಂದ ಪ್ರತೀ ವರ್ಷ ಸುಮಾರು ಒಂದು ಕೋಟಿ ಭಕ್ತರು ಸೋಮನಾಥ ದೇವಾಲಯಕ್ಕೆ ಬರುತ್ತಾರೆ. ಹಿಂತಿರುಗುವಾಗ ಈ ಭಕ್ತರು ತಮ್ಮೊಂದಿಗೆ ಹಲವು ಹೊಸ ಅನುಭವಗಳನ್ನು, ಚಿಂತನೆಗಳನ್ನು, ಮತ್ತು ನಂಬಿಕೆಗಳನ್ನು ಕೊಂಡೊಯ್ಯುತ್ತಾರೆ. ಆದುದರಿಂದ ಪ್ರವಾಸದಷ್ಟೇ ಮುಖ್ಯ ಅದರ ಅನುಭವ. ವಿಶೇಷವಾಗಿ ಯಾತ್ರೆಗಳಲ್ಲಿ ನಮ್ಮ ಮನಸ್ಸು ದೇವರಲ್ಲಿರಬೇಕು ಎಂದು ನಾವು ಆಶಿಸುತ್ತೇವೆ. ಮತ್ತು ನಾವು ಪ್ರಯಾಣದ ಸಮಸ್ಯೆಗಳ ಬಗ್ಗೆ ಚಿಂತಿಸುವುದಿಲ್ಲ. ಸರಕಾರ ಮತ್ತು ಸಂಸ್ಥೆಗಳು ಹೇಗೆ ಹಲವು ಯಾತ್ರಾ ಸ್ಥಳಗಳನ್ನು ಸುಂದರಗೊಳಿಸಿವೆ ಎಂಬುದಕ್ಕೆ ಸೋಮನಾಥ ದೇವಾಲಯ ಕೂಡಾ ಒಂದು ಜೀವಂತ ಉದಾಹರಣೆ. ಈಗ ಭಕ್ತಾದಿಗಳಿಗೆ ಉತ್ತಮ ವ್ಯವಸ್ಥೆಗಳಿವೆ ಮತ್ತು ರಸ್ತೆಗಳು ಹಾಗು ಸಾರಿಗೆ ಸೌಕರ್ಯಗಳಲ್ಲಿ ಸುಧಾರಣೆಯಾಗಿದೆ. ಉತ್ತಮ ವಾಯುವಿಹಾರ ವ್ಯವಸ್ಥೆ, ಪಾರ್ಕಿಂಗ್ ಸೌಲಭ್ಯಗಳು, ಪ್ರವಾಸೀ ಅನುಕೂಲತೆಗಳ ಕೇಂದ್ರ ಮತ್ತು ತ್ಯಾಜ್ಯ ನಿರ್ವಹಣೆಗೆ ಆಧುನಿಕ ವ್ಯವಸ್ಥೆಗಳನ್ನು ಸ್ವಚ್ಛತೆಗಾಗಿ ಅಭಿವೃದ್ಧಿ ಮಾಡಲಾಗಿದೆ. ಭವ್ಯವಾದ ಯಾತ್ರಾ ಪ್ಲಾಜಾ ಮತ್ತು ಸಂಕೀರ್ಣದ ಪ್ರಸ್ತಾವನೆ ಅದರ ಅಂತಿಮ ಹಂತದಲ್ಲಿದೆ. ಈಗಷ್ಟೇ, ನಮ್ಮ ಪೂರ್ಣೇಶ್ ಭಾಯಿ ಅದನ್ನು ವಿವರಿಸುತ್ತಿದ್ದರು. ಮಾ ಅಂಬಾಜಿ ದೇವಾಲಯದಲ್ಲಿ ಇಂತಹದೇ ಪ್ರವಾಸೀ ಸೌಲಭ್ಯಗಳ ಅಭಿವೃದ್ಧಿಗೆ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ದ್ವಾರಕಾಧೀಶನ ದೇವಾಲಯ, ರುಕ್ಮಿಣಿ ದೇವಾಲಯ ಮತ್ತು ಗೋಮತಿ ಘಾಟ್ ಗಳಲ್ಲಿ ಇಂತಹ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಾವು ಈಗಾಗಲೇ ಪೂರ್ಣಗೊಳಿಸಿದ್ದೇವೆ. ಇವುಗಳು ಪ್ರವಾಸಿಗರಿಗೆ ಅನುಕೂಲತೆಗಳನ್ನು ಒದಗಿಸುತ್ತಿವೆ ಮತ್ತು ಗುಜರಾತಿನ ಸಾಂಸ್ಕೃತಿಕ ಗುರುತಿಸುವಿಕೆಯನ್ನು ಬಲಪಡಿಸುತ್ತಿವೆ.

ಈ ಎಲ್ಲಾ ಸಾಧನೆಗಳ ನಡುವೆ, ನಾನು ಈ ಸಂದರ್ಭದಲ್ಲಿ ಗುಜರಾತಿನ ಎಲ್ಲಾ ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳನ್ನು ಅಭಿನಂದಿಸುತ್ತೇನೆ ಮತ್ತು ಅವುಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ವೈಯಕ್ತಿಕ ನೆಲೆಯಲ್ಲಿ ನೀವು ಅಭಿವೃದ್ಧಿಯೊಂದಿಗೆ ಮತ್ತು ಸೇವಾ ಕಾರ್ಯಗಳೊಂದಿಗೆ ಮುಂದುವರಿಯುತ್ತಿರುವ ರೀತಿ ನನ್ನ ಪ್ರಕಾರ “ಸಬ್ ಕಾ ಪ್ರಯಾಸ್” ಗೆ ಒಂದು ಅತ್ಯುತ್ತಮ ಉದಾಹರಣೆ. ಕೊರೊನಾದಿಂದಾಗಿ ಉದ್ಭವಿಸಿರುವ ಸಂಕಷ್ಟದ ಹಿನ್ನೆಲೆಯಲ್ಲಿ ಸೋಮನಾಥ ದೇವಾಲಯ ಟ್ರಸ್ಟ್ ಭಕ್ತಾದಿಗಳ ಬಗ್ಗೆ ವಹಿಸಿದ ಕಾಳಜಿ ಮತ್ತು ಸಮಾಜದ ಬಗ್ಗೆ ತೋರ್ಪಡಿಸಿದ ಜವಾಬ್ದಾರಿ ಪ್ರತಿಯೊಂದು ಜೀವಿಯಲ್ಲಿಯೂ ಶಿವ ನೆಲೆಸಿದ್ದಾನೆ ಎಂಬ ನಮ್ಮ ನಂಬಿಕೆಯ ಪ್ರತಿಫಲನ.

ಸ್ನೇಹಿತರೇ,

ಹಲವು ದೇಶಗಳ ಆರ್ಥಿಕತೆಗೆ ಪ್ರವಾಸೋದ್ಯಮದ ಕೊಡುಗೆಯ ಬಗ್ಗೆ ನಾವು ಕೇಳುತ್ತೇವೆ ಮತ್ತು ಅದನ್ನು ಪ್ರಧಾನವಾಗಿ ಪ್ರದರ್ಶಿಸಲಾಗುತ್ತದೆ. ಜಗತ್ತಿನ ಪ್ರತೀ ದೇಶದಲ್ಲಿರುವಷ್ಟು ಸಾಮರ್ಥ್ಯ ನಮ್ಮ ಪ್ರತೀ ರಾಜ್ಯದಲ್ಲಿ, ಮತ್ತು ವಲಯದಲ್ಲಿ ಇದೆ. ಅಲ್ಲಿ ಅಂತಹ ಅಸಂಖ್ಯಾತ ಸಾಧ್ಯತೆಗಳಿವೆ. ನೀವು ಯಾವುದೇ ರಾಜ್ಯದ ಹೆಸರು ತೆಗೆದುಕೊಳ್ಳಿ, ಮನಸ್ಸಿಗೆ ಮೊದಲು ಯಾವುದು ಬರುತ್ತದೆ?. ನೀವು ಗುಜರಾತ್ ತೆಗೆದುಕೊಂಡರೆ ಆಗ ಸೋಮನಾಥ, ದ್ವಾರಕಾ, ಏಕತಾ ಪ್ರತಿಮೆ, ಧೋಲಾವಿರಾ, ರಣ್ ಆಫ್ ಕಚ್ ಮತ್ತು ಇಂತಹ ಹಲವು ಅದ್ಭುತ ಸ್ಥಳಗಳು ನಿಮ್ಮ ಮನಸ್ಸಿನಲ್ಲಿ ಮೂಡುತ್ತವೆ. ನೀವು ಉತ್ತರ ಪ್ರದೇಶದ ಹೆಸರು ತೆಗೆದುಕೊಂಡರೆ ಆಗ ಅಯೋಧ್ಯಾ, ಮಥುರಾ, ಕಾಶಿ, ಪ್ರಯಾಗ, ಕುಶಿನಗರ, ವಿಂಧ್ಯಾಚಲಗಳು ನಮ್ಮ ಮನಸ್ಸಿನಲ್ಲಿ ಮೂಡುತ್ತವೆ. ಜನಸಾಮಾನ್ಯರಿಗೆ ಈ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಬೇಕು ಎಂಬ ಅಭಿಲಾಷೆ ಇರುತ್ತದೆ. ಉತ್ತರಾಖಂಡವು ತನ್ನೊಳಗೆ ದೇವಭೂಮಿಯನ್ನು ಹೊಂದಿದೆ. ಬದರೀನಾಥ ಜೀ, ಕೇದಾರನಾಥ ಜೀ ಇಲ್ಲಿದ್ದಾರೆ. ಹಿಮಾಚಲ ಪ್ರದೇಶದ ಬಗ್ಗೆ ಮಾತನಾಡುವುದಾದರೆ ಮಾ ಜ್ವಾಲಾದೇವಿ, ಮಾ ನೈನಾದೇವಿ ಅಲ್ಲಿದ್ದಾರೆ. ಇಡೀ ಈಶಾನ್ಯ ದೈವಿಕ ಮತ್ತು ಪ್ರಾಕೃತಿಕ ಆಕರ್ಷಣೆಯನ್ನು ಹೊಂದಿದೆ. ಅದೇ ರೀತಿ ತಮಿಳುನಾಡು ಹೆಸರು ರಾಮೇಶ್ವರಂಗೆ ಭೇಟಿ ನೀಡುವುದನ್ನು ನೆನಪಿಸುತ್ತದೆ. ಒಡಿಶಾ ನೆನಪಾದರೆ ಪುರಿ, ಆಂಧ್ರ ಪ್ರದೇಶವಾದರೆ ತಿರುಪತಿ ಬಾಲಾಜಿ, ಮಹಾರಾಷ್ಟ್ರ ಸಿದ್ಧಿವಿನಾಯಕ ಜೀ ಮತ್ತು ಕೇರಳವು ಶಬರಿಮಲೆಯನ್ನು ನೆನಪಿಗೆ ತರುತ್ತದೆ. ನೀವು ಯಾವುದೇ ರಾಜ್ಯವನ್ನು ಹೆಸರಿಸಿ ಯಾತ್ರೆಗೆ ಮತ್ತು ಪ್ರವಾಸೋದ್ಯಮಕ್ಕೆ ಹಲವು ಕೇಂದ್ರಗಳು ನಮ್ಮ ಮನಸ್ಸಿಗೆ ಬರುತ್ತವೆ. ಈ ಪ್ರದೇಶಗಳು ನಮ್ಮ ರಾಷ್ಟ್ರೀಯ ಏಕತೆಯ ಸ್ಪೂರ್ತಿ ಮತ್ತು “ಏಕ ಭಾರತ್, ಶ್ರೇಷ್ಠ ಭಾರತ್” ನ್ನು ಪ್ರತಿನಿಧಿಸುತ್ತವೆ. ಈ ಸ್ಥಳಗಳಿಗೆ ಭೇಟಿ ನೀಡುವುದರಿಂದ ರಾಷ್ಟ್ರೀಯ ಸಮಗ್ರತೆ ವೃದ್ಧಿಸುತ್ತದೆ. ಇಂದು ರಾಷ್ಟ್ರವು ಈ ಸ್ಥಳಗಳನ್ನು ಸಮೃದ್ಧಿಯ ಮೂಲಗಳನ್ನಾಗಿ ಗುರುತಿಸುತ್ತಿದೆ. ಈ ಸ್ಥಳಗಳ ಅಭಿವೃದ್ಧಿಯೊಂದಿಗೆ ವಿಸ್ತಾರ ವ್ಯಾಪ್ತಿಯ ಅಭಿವೃದ್ಧಿಗೆ ನಾವು ವೇಗ ಕೊಡಬಹುದು.

ಸ್ನೇಹಿತರೇ,

ಪ್ರವಾಸೋದ್ಯಮದ ಸಾಮರ್ಥ್ಯವನ್ನು ಅನಾವರಣ ಮಾಡಲು ದೇಶವು ಕಳೆದ ಏಳು ವರ್ಷಗಳಿಂದ ನಿರಂತರ ಶ್ರಮವಹಿಸುತ್ತಿದೆ. ಪ್ರವಾಸೀ ಕೇಂದ್ರಗಳ ಅಭಿವೃದ್ಧಿ ಮಾತ್ರವೇ ಸರಕಾರಿ ಯೋಜನೆಯ ಭಾಗವಾಗಿಲ್ಲ, ಸಾರ್ವಜನಿಕ ಸಹಭಾಗಿತ್ವದ ಆಂದೋಲನವೂ ಇದರೊಂದಿಗಿದೆ. ದೇಶದ ಪಾರಂಪರಿಕ ತಾಣಗಳು ಮತ್ತು ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯ ಅಭಿವೃದ್ಧಿ ಇದಕ್ಕೆ ದೊಡ್ಡ ಉದಾಹರಣೆಗಳು. ಈ ಮೊದಲು ನಿರ್ಲಕ್ಷ್ಯಕ್ಕೆ ಈಡಾಗಿದ್ದ ಪಾರಂಪರಿಕ ಸ್ಥಳಗಳು ಈಗ ಪ್ರತಿಯೊಬ್ಬರ ಪ್ರಯತ್ನದ ಫಲವಾಗಿ ಅಭಿವೃದ್ಧಿಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಸಹಕಾರ ನೀಡಲು ಖಾಸಗಿ ವಲಯ ಕೂಡಾ ಮುಂದೆ ಬಂದಿದೆ. ರೋಮಾಂಚಕಾರಿ ಭಾರತ ಮತ್ತು ದೇಖೋ ಅಪ್ನಾ ದೇಶ್ ನಂತಹ ಆಂದೋಲನಗಳು ದೇಶದ ಹೆಮ್ಮೆಯನ್ನು ಜಗತ್ತಿನೆದುರು ಇಡುತ್ತಿವೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತಿವೆ.

ಸ್ವದೇಶ ದರ್ಶನ ಯೋಜನೆ ಅನ್ವಯ 15 ವಿಷಯಾಧಾರಿತ ಪ್ರವಾಸೀ ಸರ್ಕ್ಯೂಟ್ ಗಳನ್ನು ದೇಶದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಈ ಸರ್ಕ್ಯೂಟ್ ಗಳು ದೇಶದ ವಿವಿಧ ಭಾಗಗಳನ್ನು ಜೋಡಿಸುತ್ತವೆಯಲ್ಲದೆ ಹೊಸ ಗುರುತಿಸುವಿಕೆಯನ್ನು ನೀಡುವ ಮೂಲಕ ಪ್ರವಾಸೋದ್ಯಮಕ್ಕೆ ಅನುಕೂಲತೆಗಳನ್ನು ಒದಗಿಸುತ್ತವೆ. ರಾಮಾಯಣ ಸರ್ಕ್ಯೂಟ್ ಮೂಲಕ ನೀವು ಶ್ರೀ ರಾಮ ಭಗವಾನರಿಗೆ ಸಂಬಂಧಪಟ್ಟ ಎಲ್ಲಾ ಸ್ಥಳಗಳಿಗೂ ಭೇಟಿ ನೀಡಬಹುದು. ಈ ನಿಟ್ಟಿನಲ್ಲಿ ರೈಲ್ವೇಯು ವಿಶೇಷ ರೈಲನ್ನು ಆರಂಭ ಮಾಡಿದೆ. ಮತ್ತು ಅದು ಬಹಳ ಜನಪ್ರಿಯವಾಗುತ್ತಿದೆ ಎಂದು ನನಗೆ ತಿಳಿಸಲಾಗಿದೆ.

ನಾಳೆಯಿಂದ ದಿವ್ಯ ಕಾಶಿ ಯಾತ್ರೆಗಾಗಿ ದಿಲ್ಲಿಯಿಂದ ವಿಶೇಷ ರೈಲು ಆರಂಭವಾಗಲಿದೆ. ಬುದ್ಧ ಸರ್ಕ್ಯುಟ್ ಭಗವಾನ್ ಬುದ್ಧರಿಗೆ ಸಂಬಂಧಪಟ್ಟಂತಹ ಎಲ್ಲಾ ಸ್ಥಳಗಳಿಗೂ ಭೇಟಿ ನೀಡಲು ಭಾರತದ ಮತ್ತು ವಿದೇಶಗಳ ಯಾತ್ರಿಕರಿಗೆ ಅನುಕೂಲಗಳನ್ನು ಒದಗಿಸಲಿದೆ. ವಿದೇಶಿ ಪ್ರವಾಸಿಗರಿಗೆ ವೀಸಾ ನಿಯಮಗಳನ್ನು ಸಡಿಲಿಸಲಾಗಿದ್ದು, ಇದರಿಂದ ದೇಶಕ್ಕೆ ಪ್ರಯೋಜನವಾಗಲಿದೆ. ಈಗ ಅಲ್ಲಿ ಕೋವಿಡ್ ನಿಂದಾಗಿ ಕೆಲವು ಸಮಸ್ಯೆಗಳಿವೆ. ಆದರೆ ಸೋಂಕಿನ ಭೀತಿ ಕಡಿಮೆಯಾದ ಬಳಿಕ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಬಗ್ಗೆ ನನಗೆ ನಂಬಿಕೆ ಇದೆ. ಸರಕಾರ ಆರಂಭಿಸಿದ ಲಸಿಕಾಕರಣ ಆಂದೋಲನದಲ್ಲಿ ನಮ್ಮ ಪ್ರವಾಸೋದ್ಯಮ ರಾಜ್ಯಗಳಲ್ಲಿ ಪ್ರತಿಯೊಬ್ಬರೂ ಆದ್ಯತೆಯಾಧಾರದ ಮೇಲೆ ಲಸಿಕೆ ಪಡೆಯುವುದನ್ನು ಖಾತ್ರಿಪಡಿಸಲು ವಿಶೇಷ ಗಮನ ನೀಡಲಾಗಿದೆ. ಗೋವಾ ಮತ್ತು ಉತ್ತರಾಖಂಡದಂತಹ ರಾಜ್ಯಗಳು ಈ ನಿಟ್ಟಿನಲ್ಲಿ ಬಹಳ ತ್ವರಿತಗತಿಯಲ್ಲಿ ಪ್ರಗತಿ ಸಾಧಿಸಿವೆ.

ಸ್ನೇಹಿತರೇ,

ಇಂದು ದೇಶವು ಪ್ರವಾಸೋದ್ಯಮವನ್ನು ಸಮಗ್ರ ರೀತಿಯಲ್ಲಿ ನೋಡುತ್ತಿದೆ. ಇಂದಿನ ಪರಿಸ್ಥಿತಿಯಲ್ಲಿ, ಪ್ರವಾಸೋದ್ಯಮವನ್ನು ಉತ್ತೇಜಿಸಲು ನಾಲ್ಕು ಸಂಗತಿಗಳು ಬಹಳ ಅವಶ್ಯ. ಮೊದಲನೆಯದ್ದು, ಸ್ವಚ್ಛತೆ—ಈ ಮೊದಲು ನಮ್ಮ ಪ್ರವಾಸಿ ಮತ್ತು ಯಾತ್ರಾ ಸ್ಥಳಗಳು ಸ್ವಚ್ಛವಾಗಿ ಇರುತ್ತಿರಲಿಲ್ಲ. ಇಂದು ಸ್ವಚ್ಛ ಭಾರತ್ ಅಭಿಯಾನ ಈ ಮುಖವನ್ನು ಬದಲು ಮಾಡಿದೆ. ಸ್ವಚ್ಛತೆಯಲ್ಲಿ ಹೆಚ್ಚಳದಿಂದಾಗಿ ಪ್ರವಾಸೋದ್ಯಮ ಹೆಚ್ಚುತ್ತಿದೆ. ಪ್ರವಾಸೋದ್ಯಮವನ್ನು ಉತೇಜಿಸುವಲ್ಲಿ ಇರುವ ಇನ್ನೊಂದು ವಿಷಯ ಎಂದರೆ ಅನುಕೂಲತೆ. ಆದರೆ ಸೌಲಭ್ಯಗಳ ವ್ಯಾಪ್ತಿ ಬರೇ ಪ್ರವಾಸೀ ತಾಣಗಳಿಗೆ ಮಿತಿಗೊಳ್ಳಬಾರದು. ಅಲ್ಲಿ ಸಾರಿಗೆ, ಅಂತರ್ಜಾಲ, ಸರಿಯಾದ ಮಾಹಿತಿ, ವೈದ್ಯಕೀಯ ವ್ಯವಸ್ಥೆಗಳು ಸಹಿತ ಎಲ್ಲ ರೀತಿಯ ಸೌಲಭ್ಯಗಳು ಇರಬೇಕು. ಮತ್ತು ಈ ನಿಟ್ಟಿನಲ್ಲಿ ದೇಶಾದ್ಯಂತ ನಿರಂತರ ಕೆಲಸ ನಡೆಯುತ್ತಿದೆ.

ಸ್ನೇಹಿತರೇ,

ಪ್ರವಾಸೋದ್ಯಮ ಹೆಚ್ಚಳದಲ್ಲಿ ಸಮಯ ಮೂರನೇ ಪ್ರಮುಖ ಸಂಗತಿಯಾಗಿರುತ್ತದೆ. ಇದು ಇಪ್ಪತ್ತು-ಇಪ್ಪತ್ತರ (ಟ್ವೆಂಟಿ-ಟ್ವೆಂಟಿ) ಕಾಲ. ಜನರು ಕನಿಷ್ಠ ಸಮಯದಲ್ಲಿ ಗರಿಷ್ಠ ಸ್ಥಳಗಳಿಗೆ ಭೇಟಿ ನೀಡಲು ಇಚ್ಛಿಸುತ್ತಾರೆ. ದೇಶದಲ್ಲಿರುವ ಹೆದ್ದಾರಿಗಳು, ಎಕ್ಸ್ ಪ್ರೆಸ್ ವೇ ಗಳು, ಆಧುನಿಕ ರೈಲುಗಳು, ಮತ್ತು ಹೊಸ ವಿಮಾನ ನಿಲ್ದಾಣಗಳು ಈ ನಿಟ್ಟಿನಲ್ಲಿ ಬಹಳ ಸಹಾಯ ಮಾಡುತ್ತಿವೆ. ಉಡಾನ್ ಯೋಜನೆಯಿಂದ ವಿಮಾನ ಪ್ರಯಾಣದ ದರಗಳು ಗಮನೀಯವಾಗಿ ಇಳಿಕೆಯಾಗುತ್ತಿವೆ. ಅಂದರೆ ಪ್ರಯಾಣದ ಅವಧಿಯಲ್ಲಿ ಕಡಿತದಿಂದ ಖರ್ಚು ಕೂಡಾ ಕಡಿಮೆಯಾಗುತ್ತಿದೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಹೊಂದುತ್ತಿದೆ. ನಾವು ಗುಜರಾತಿನತ್ತ ನೋಡಿದರೆ, ಅಂಬಾಜಿಗೆ ಭೇಟಿ ನೀಡಲು ಬನಸ್ಕಾಂತಾದಲ್ಲಿ ರೋಪ್ ವೇ ಇದೆ. ಕಾಳಿಕಾ ಮಾತಾ ಅವರ ದರ್ಶನ ಮಾಡಲು ಪಾವಗಧದಲ್ಲಿ ಈ ವ್ಯವಸ್ಥೆ ಇದೆ. ಈಗ ಗಿರ್ನಾರ್ ಮತ್ತು ಸಾತ್ಪುರದಲ್ಲಿ “ರೋಪ್ ವೇ”ಗಳಿವೆ. ಒಟ್ಟಿನಲ್ಲಿ ನಾಲ್ಕು ರೋಪ್ ವೇಗಳು ಕಾರ್ಯಾಚರಿಸುತ್ತಿವೆ. ಈ ರೋಪ್ ವೇಗಳ ಸೌಲಭ್ಯ ಒದಗಣೆಯ ನಂತರ ಪ್ರವಾಸಿಗರಿಗೆ ಅನುಕೂಲತೆಗಳು ಹೆಚ್ಚಾಗಿವೆ ಮತ್ತು ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ. ಈಗ ಕೊರೊನಾ ಪ್ರಭಾವದಿಂದಾಗಿ ಅನೇಕ ಸಂಗತಿಗಳು, ಕಾರ್ಯಕ್ರಮಗಳು ಸ್ಥಗಿತಗೊಂಡಿವೆ. ಆದರೆ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸದ ಮೇಲೆ ತೆರಳುವಾಗ ಈ ಚಾರಿತ್ರಿಕ ಸ್ಥಳಗಳು ಅವರಿಗೆ ಬಹಳಷ್ಟನ್ನು ಕಲಿಸುತ್ತವೆ. ದೇಶಾದ್ಯಂತ ಇಂತಹ ಸ್ಥಳಗಳಲ್ಲಿ ಸವಲತ್ತುಗಳು ಹೆಚ್ಚುತ್ತಾ ಮತ್ತು ಸುಧಾರಿಸುತ್ತ ಹೋದಂತೆ, ವಿದ್ಯಾರ್ಥಿಗಳು ಕೂಡಾ ದೇಶದ ಪರಂಪರೆಯ ಜೊತೆ ಅವರ ಸಂಬಂಧವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಮತ್ತು ಕಲಿಯಲು ಸಾಧ್ಯವಾಗುವುದರಿಂದ ಅದು ಇನ್ನಷ್ಟು ಗಟ್ಟಿಗೊಳ್ಳುತ್ತಾ ಸಾಗುತ್ತದೆ.

ಸ್ನೇಹಿತರೇ,

ಪ್ರವಾಸೋದ್ಯಮವನ್ನು ಹೆಚ್ಚಿಸಲು ಅವಶ್ಯವಾದ ನಾಲ್ಕನೇ ಮತ್ತು ಬಹಳ ಪ್ರಮುಖವಾದ ವಿಷಯವೆಂದರೆ ನಮ್ಮ ಚಿಂತನೆ, ಯೋಚನೆ. ನಮ್ಮ ಚಿಂತನೆ ನವೀನ ಮತ್ತು ಆಧುನಿಕವಾಗಿರಬೇಕಾದ್ದು ಅವಶ್ಯ. ಆದರೆ ಇದೇ ಸಮಯದಲ್ಲಿ ನಾವು ನಮ್ಮ ಪ್ರಾಚೀನ ಪರಂಪರೆಯ ಬಗ್ಗೆ ಹೆಮ್ಮೆಯಿಂದಿರಬೇಕು. ಇದು ಬಹಳಷ್ಟು ಪರಿಣಾಮ ಬೀರುತ್ತದೆ. ನಮ್ಮಲ್ಲಿ ಈ ಹೆಮ್ಮೆ ಇದೆ ಮತ್ತು ಆದುದರಿಂದ ನಾವು ಕದ್ದು ಹೋದ ವಿಗ್ರಹಗಳನ್ನು, ನಮ್ಮ ಹಳೆಯ ಪರಂಪರೆಗೆ ಸಂಬಂಧಿಸಿದ ವಸ್ತುಗಳನ್ನು ಜಗತ್ತಿನಾದ್ಯಂತದಿಂದ ಹಿಂದೆ ತರುತ್ತಿದ್ದೇವೆ. ನಮ್ಮ ಪ್ರಾಚೀನ ಕಾಲದ ಜನರು, ಹಿರಿಯರು ನಮಗಾಗಿ ಬಹಳಷ್ಟನ್ನು ಬಿಟ್ಟು ಹೋಗಿದ್ದಾರೆ. ಆದರೆ ನಮ್ಮ ಧಾರ್ಮಿಕ-ಸಾಂಸ್ಕೃತಿಕ ಗುರುತಿಸುವಿಕೆಯ ಬಗ್ಗೆ ಮಾತನಾಡಲು ಹಿಂಜರಿಯುವಂತಹ ಕಾಲವೊಂದಿತ್ತು. ಸ್ವಾತಂತ್ರ್ಯದ ನಂತರ ದಿಲ್ಲಿಯಲ್ಲಿಯ ಕೆಲವು ಕುಟುಂಬಗಳಿಗೆ ಮಾತ್ರ ಬದಲಾವಣೆ ಸಂಭವಿಸಿತ್ತು. ಆದರೆ ಇಂದು ದೇಶವು ಈ ಸಣ್ಣ ಮನಸ್ಸಿನ ಧೋರಣೆಯನ್ನು ಬಿಟ್ಟು ಹೆಮ್ಮೆಯ ಹೊಸ ಸ್ಥಳಗಳನ್ನು ನಿರ್ಮಾಣ ಮಾಡುತ್ತಿದೆ ಮತ್ತು ಅವುಗಳಿಗೆ ಭವ್ಯತೆಯನ್ನು ನೀಡುತ್ತಿದೆ. ದಿಲ್ಲಿಯಲ್ಲಿ ಬಾಬಾ ಸಾಹೇಬ್ ಸ್ಮಾರಕವನ್ನು ನಿರ್ಮಾಣ ಮಾಡಿದ್ದು ನಮ್ಮ ಸರಕಾರ. ಎ.ಪಿ.ಜೆ. ಅಬ್ದುಲ್ ಕಲಾಂ ಸ್ಮಾರಕವನ್ನು ರಾಮೇಶ್ವರಂನಲ್ಲಿ ನಿರ್ಮಾಣ ಮಾಡಿದ್ದು ನಮ್ಮದೇ ಸರಕಾರ. ಅದೇ ರೀತಿ ನೇತಾಜಿ ಸುಭಾಷ್ ಚಂದ್ರ ಬೋಸ್, ಮತ್ತು ಶ್ಯಾಮ್ ಜೀ ಕೃಷ್ಣ ವರ್ಮಾ ಅವರಂತಹ ಶ್ರೇಷ್ಟ ವ್ಯಕ್ತಿತ್ವದ ಜೊತೆ ಸಂಬಂಧ ಹೊಂದಿರುವ ಸ್ಥಳಗಳ ಸೌಂದರ್ಯವನ್ನು ಹೆಚ್ಚಿಸಲಾಗಿದೆ. ನಮ್ಮ ಬುಡಕಟ್ಟು ಸಮಾಜದ ವೈಭವ ಪೂರಿತ ಚರಿತ್ರೆಯನ್ನು ಮುಂಚೂಣಿಗೆ ತರಲು ಆದಿವಾಸಿ (ಬುಡಕಟ್ಟು) ವಸ್ತು ಸಂಗ್ರಹಾಲಯಗಳನ್ನು ದೇಶಾದ್ಯಂತ ನಿರ್ಮಾಣ ಮಾಡಲಾಗಿದೆ. ಕೇವಾಡಿಯಾದಲ್ಲಿ ನಿರ್ಮಾಣ ಮಾಡಲಾದ ಏಕತಾ ಪ್ರತಿಮೆ ಇಡೀ ದೇಶದ ಹೆಮ್ಮೆ. ಕೊರೊನಾ ಅವಧಿ ಆರಂಭಕ್ಕೆ ಮೊದಲು 45 ಲಕ್ಷಕ್ಕೂ ಅಧಿಕ ಜನರು ಏಕತಾ ಪ್ರತಿಮೆಗೆ ಭೇಟಿ ನೀಡಿದ್ದರು. ಕೊರೊನಾ ಅವಧಿ ಇದ್ದಾಗಲೂ 75 ಲಕ್ಷ ಜನರು ಇದುವರೆಗೆ ಏಕತಾ ಪ್ರತಿಮೆಗೆ ಭೇಟಿ ನೀಡಿದ್ದಾರೆ. ಇದು ಹೊಸದಾಗಿ ನಿರ್ಮಾಣ ಮಾಡಲಾದ ಸ್ಥಳಗಳ ಆಕರ್ಷಣೆ ಮತ್ತು ಸಾಮರ್ಥ್ಯ. ಈ ಪ್ರಯತ್ನಗಳು ಪ್ರವಾಸೋದ್ಯಮದ ಜೊತೆಗೆ ಕಾಲ ಕಾಲಕ್ಕೆ ನಮ್ಮ ಗುರುತಿಸುವಿಕೆಗೆ ಹೊಸ ಎತ್ತರವನ್ನು ಒದಗಿಸಬಲ್ಲವು.

ಮತ್ತು ಸ್ನೇಹಿತರೇ,

ನಾನು “ವೋಕಲ್ ಫಾರ್ ಲೋಕಲ್" ಕುರಿತು ಮಾತನಾಡುವಾಗ, ಕೆಲವು ಜನರು ಮೋದಿ ಅವರ “ವೋಕಲ್ ಫಾರ್ ಲೋಕಲ್ “ ಎಂದರೆ ದೀಪಾವಳಿ ಸಂದರ್ಭದಲ್ಲಿ ದೀಪಗಳನ್ನು ಎಲ್ಲಿ ಖರೀದಿ ಮಾಡಬೇಕು ಎಂಬುದಾಗಿದೆ ಎಂದು ಯೋಚಿಸುವುದನ್ನು ನಾನು ನೋಡಿದ್ದೇನೆ. ಇದರ ಅರ್ಥವನ್ನು ಅಷ್ಟಕ್ಕೆ ಸೀಮಿತ ಮಾಡಬೇಡಿ, ದಯವಿಟ್ಟು. ನಾನು “ವೋಕಲ್ ಫಾರ್ ಲೋಕಲ್” ಎಂಬ ಸಲಹೆ ನೀಡಿದಾಗ ಅಲ್ಲಿ ಪ್ರವಾಸೋದ್ಯಮ ಕೂಡಾ ನನ್ನ ದೃಷ್ಟಿಯಲ್ಲಿದೆ. ಕುಟುಂಬದಲ್ಲಿ ಮಕ್ಕಳಿಗೆ ಹೋರದೇಶಗಳಿಗೆ ಹೋಗಬೇಕು ಎಂಬ ಆಸೆ ಇದ್ದರೆ, ದುಬೈ ಅಥವಾ ಸಿಂಗಾಪುರಕ್ಕೆ ಹೋಗಬೇಕೆಂದಿದ್ದರೆ, ಆಗ ಕುಟುಂಬವು ವಿದೇಶಕ್ಕೆ ಹೋಗುವ ಯೋಜನೆಯನ್ನು ಮಾಡುವುದಕ್ಕೆ ಮೊದಲು ದೇಶದೊಳಗಿನ 15-10 ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲು ನಿರ್ಧರಿಸಬೇಕು. ವಿಶ್ವದ ಇತರ ಪ್ರದೇಶಗಳಿಗೆ ಹೋಗುವುದಕ್ಕೆ ಮೊದಲು ಭಾರತದ ಅನುಭವವನ್ನು ಪಡೆಯಿರಿ.

ಸ್ನೇಹಿತರೇ,

ನಾವು ಜೀವನದ ಪ್ರತಿಯೊಂದು ಹಂತದಲ್ಲಿಯೂ “ವೋಕಲ್ ಫಾರ್ ಲೋಕಲ್” ನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ. ದೇಶವನ್ನು ಸಮೃದ್ಧಗೊಳಿಸಬೇಕಿದ್ದರೆ ಮತ್ತು ಯುವ ಜನತೆಗೆ ಅವಕಾಶಗಳನ್ನು ಸೃಷ್ಟಿ ಮಾಡಬೇಕಿದ್ದರೆ ನಾವು ಈ ದಾರಿಯನ್ನು ಅನುಸರಿಸಬೇಕು. ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ತನ್ನ ಸಂಪ್ರದಾಯಗಳಲ್ಲಿ ಮೂಲ ನೆಲೆಯನ್ನು ಹೊಂದಿರುವ ಆಧುನಿಕ ಭಾರತವನ್ನು ನಿರ್ಮಾಣ ಮಾಡಲು ನಾವು ಕಟಿಬದ್ಧರಾಗಬೇಕಿದೆ. ನಮ್ಮ ಯಾತ್ರಾ ಸ್ಥಳಗಳು ಮತ್ತು ಪ್ರವಾಸೀ ಸ್ಥಳಗಳು ಈ ನವಭಾರತವನ್ನು ವರ್ಣಮಯಗೊಳಿಸುತ್ತವೆ. ಇವು ನಮ್ಮ ಪರಂಪರೆ ಮತ್ತು ಅಭಿವೃದ್ಧಿಯ ಸಂಕೇತಗಳಾಗುತ್ತವೆ. ದೇಶದ ಅಭಿವೃದ್ಧಿಯ ಈ ನಿರಂತರ ಪ್ರಯಾಣ ಸೋಮನಾಥ ದಾದಾರ ಆಶೀರ್ವಾದದೊಂದಿಗೆ ಮುಂದುವರೆಯಲಿದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ.

ಮತ್ತೊಮ್ಮೆ, ಹೊಸ ಸರ್ಕ್ಯೂಟ್ ಹೌಸ್ ಗಾಗಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ.

ನಿಮಗೆ ಬಹಳ ಧನ್ಯವಾದಗಳು

ಜೈ ಸೋಮನಾಥ!

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
IIT Delhi tops India in QS Rankings 2027; 52 Indian institutions feature

Media Coverage

IIT Delhi tops India in QS Rankings 2027; 52 Indian institutions feature
NM on the go

Nm on the go

Always be the first to hear from the PM. Get the App Now!
...
Text of Prime Minister addresses the Indian Community in Paris
June 18, 2026

नमस्ते!

बों जू!

ऐसा लग रहा है, आप सब छुट्टी के मूड में हैं।

साथियों,

ये पेरिस शहर, Lights का शहर है, रंगों का शहर है, यहां Art है, Ideas हैं, और innovation की प्रेरणा भी है। इस शहर को भारत के अलग-अलग राज्यों से आए आप सभी लोग और भी खूबसूरत बना देते हैं। नए नए रंगों से भर देते हैं।

कोई तमिल है, कोई पंजाबी है, कोई गुजराती है, तो कोई मराठी है, और कोई बंगाली है। भारत के हर कोने का प्रतिनिधित्व यहां दिखाई देता है।

साथियों,

मैं जब 14 जून को नीस पहुंचा था तो सबसे पहले भारत इनोवेट्स कार्यक्रम में शामिल हुआ था। आज जब मैं फ्रांस से वापसी की तैयारी में हूं तो लग रहा है जैसे भारत कनेक्ट्स कार्यक्रम में आ गया हूं।

फ्रांस में रहने वाले आप लोगों ने 21वीं सदी के भारत-फ्रांस रिश्तों को जिस तरह कनेक्ट किया है, वो हमारी Strategic Partnership की बहुत बड़ी ताकत बन रही है। मैं आप सभी के लिए भारत से 140 करोड़ देशवासियों की शुभकामनाएं लेकर आया हूं। इस आत्मीय स्वागत के लिए, मैं आप सभी का हृदय से आभार व्यक्त करता हूं।

साथियों,

आज मैं ऐसे समय में फ्रांस आया हूं जब कुछ ही दिन पहले हमारी सरकार के 12 वर्ष पूरे हुए हैं। चुने हुए प्रधानमंत्री के रूप निरंतर 12 साल तक देश की सेवा करना मेरे जीवन का बहुत बड़ा सौभाग्य रहा है। यह भारत के लोकतंत्र की शक्ति है जिसने एक चायवाले को यहां तक पहुंचा दिया।

साथियों,

बीते 12 वर्ष, 140 करोड़ भारतीयों के अद्भुत सामर्थ्य के रहे हैं। 12 साल के इस कालखंड में भारत का GDP दोगुना हुआ है। Airports की संख्या दोगुनी हुई है। Universities की संख्या भी दोगुनी हो गई है। Highway Construction की स्पीड तीन गुना बढ़ गई। और Metro Network, चार गुणा बड़ा हो गया है।

मैं आपको कुछ और फैक्ट्स दूंगा, उससे आप अंदाजा लगा पाएंगे कि भारत किस स्पीड और कितने बड़े स्केल पर काम कर रहा है। पिछले 12 वर्षों में भारत का Defence Export 35 गुणा यानि Thirty Five Times बढ़ गया है।

औऱ एक फैक्ट सुनिए भारत में मोबाइल मैन्यूफैक्टरिंग यूनिट्स में, 100 गुणा की बढ़ोतरी हुई है। 100 times. भारत अब दुनिया का दूसरा सबसे बड़ा mobile phone manufacturer है। इसी गति, इसी प्रगति का नतीजा है कि आज भारत दुनिया की Fastest Growing Major Economy है।

साथियों,

आज भारत की कहानी सिर्फ Economic Progress की कहानी नहीं है। सिर्फ यहाँ अटक नहीं जाती है। ये Social Transformation की भी कहानी है।

पिछले 12 साल में देश में 25 करोड़ लोग गरीबी से बाहर निकले हैं। यानि एक ऐसी प्रगति जिसका लाभ समाज के अंतिम व्यक्ति तक पहुंच रहा है। फ्रांस में जितने घर हैं, उससे भी अधिक पक्के घर बीते 12 वर्ष में हमने जरूरतमंदों के लिए बनाए हैं।

अब हर परिवार के पास, गरीब से गरीब क्यों न हो, Bank Account है। Financial Inclusion एक सरकारी कार्यक्रम नहीं, बल्कि सामाजिक परिवर्तन का अभियान बना है।

साथियों,

इन 12 वर्षों की उपलब्धियों में, एक उपलब्धि ऐसी भी है जिसे किसी आंकड़े से, या अंकों से, नहीं मापा जा सकता। वह है 140 करोड़ भारतीयों का आत्मविश्वास।

आज का भारत और आज के भारत का युवा बहुत बड़े सपने देख रहा है। भारत का किसान नई संभावनाओं के साथ आगे बढ़ रहा है। भारत की महिलाएं नए नेतृत्व का परिचय दे रही हैं। इसलिए ये सिर्फ Achievements के 12 साल नहीं हैं, ये भारत की एस्पिरेशन्स को नई बुलंदी देने का कालखंड रहा है।

साथियों,

एक समय था जब दूर-दराज के गांवों तक आधुनिक सुविधाएं पहुंचाना वाकई बहुत मुश्किल भरा था। आज उन्हीं गांवों में बिजली भी है, इंटरनेट भी है, और डिजिटल सेवाओं की पूरी दुनिया भी है। आज एक क्लिक पर, कभी भी, कहीं भी बैंकिंग सेवाएं उपलब्ध हैं।

आज मोबाइल फोन, भारत के नागरिकों को अनेक सुविधाओं से कनेक्ट कर रहा है। हमारे किसान, हमारे मछुआरे, हमारे dairy farmers, हमारी महिलाएं, हमारे स्टूडेंट्स, सभी टेक्नोलॉजी के माध्यम से सशक्त हो रहे हैं, और अपने लिए नए अवसर बना रहे हैं।

साथियों,

आपने 125 करोड़ से अधिक Aadhaar IDs के बारे में सुना है। लेकिन आज भारत सिर्फ पहचान को डिजिटल नहीं बना रहा। आज करीब 90 करोड़ भारतीयों की Unique Digital Health IDs बनाई जा चुकी हैं। जिससे मेडिकल रिकॉर्ड सुरक्षित और accessible बन गए हैं। इससे हेल्थकेयर डिलीवरी और अधिक आसान और efficient हो रही है।

साथियों,

इन उपलब्धियों की सबसे बड़ी विशेषता यह है कि इनमें से अधिकांश चीजें कुछ वर्ष पहले तक कल्पना जैसी लगती थीं। कौन सोच सकता था कि गांव-गांव तक हाई-स्पीड इंटरनेट पहुंचेगा ? कौन सोच सकता था कि दूर-सुदूर के गांवों में भी QR code जीवन का हिस्सा बन जायेगा ? गांव में कोई बहन, ड्रोन से खेती करने में मदद करेगी, ये भी असंभव लगता था।

लेकिन आज यह सब, भारत के करोड़ों लोगों के जीवन का सामान्य हिस्सा बनता जा रहा है। और आपको गर्व होगा साथियों, यही नए भारत की पहचान है।

जो कभी सपना था, वह आज सच्चाई है। जो कभी नामुमकिन लगता था, वो आज मुमकिन हुआ है, औऱ ये करने के पीछे सबसे बड़ी ताकत क्या है? किसकी वजह से ये सब संभव हुआ है? यह मोदी के कारण नहीं, वो ताकत है- भारत का लोकतंत्र, भारत की डेमोक्रेसी। इस डेमोक्रेसी में सबका साथ है, सबका विकास है।

साथियों,

आज से 50 या 100 साल बाद जब भारत के इस कालखंड की समीक्षा होगी, तो ये बात उभरकर सामने आएगी कि इस कालखंड को भारत की Aspirations ने ड्राइव किया। यह भारत के एस्पिरेशन्स का नया युग है।

जहां बिजली पहुंची है, वहां लोग सिर्फ बिजली नहीं चाहते, वे Smart Living चाहते हैं। जहां ट्रेन पहुंची है, वहां लोग High-Speed Connectivity चाहते हैं। जहां हाईवे बने हैं, वहां लोग World-Class Expressways चाहते हैं। जहां इंटरनेट पहुंचा है, वहां लोग AI और Digital Innovation में नेतृत्व चाहते हैं।

यानि आज भारत के लोग अपने जीवन को भी Next Level पर ले जाना चाहते हैं, और भारत को भी Next Level पर ले जाना उनका मकसद है, उनका संकल्प है, उनके सपने है।

और साथियों,

यही Aspirations आज भारत की विकास यात्रा की सबसे बड़ी शक्ति हैं। मैं आपको भारत की Space Journey का उदाहरण दूंगा।

भारत ने चंद्रयान को चंद्रमा के South Pole पर उतारा। दुनिया ने इसे एक बहुत बड़ी उपलब्धि माना। लेकिन भारत इसे अपनी मंजिल मानकर रुका नहीं। आज देश गगनयान की तैयारी कर रहा है। भारत अंतरिक्ष में अपना Space Station बनाने की दिशा में आगे बढ़ रहा है।

हमारे Space Startups Global Space Economy में अपनी जगह बनाने के लिए पुरजोश काम कर रहे हैं, आगे बढ़ रहे हैं।

साथियों,

Green Energy के क्षेत्र में भी भारत की यही एस्पिरेशंस दिखाई देती है। Solar Power में भारत की उपलब्धियों की दुनिया भर में लगातार चर्चा हो रही हैं। लेकिन भारत अगली छलांग की तैयारी कर रहा है।

Green Hydrogen में बड़े निवेश हो रहे हैं। Advanced Nuclear Energy पर तेजी से काम हो रहा है। आपने भारत के Fast Breeder nuclear Reactor से जुड़ी प्रोग्रेस के बारे में भी सुना ज़रूर होगा। ये भारत के न्यूक्लियर एनर्जी लैंडस्केप में क्रांतिकारी परिवर्तन करने का बहुत बड़ा अचीवमेंट हमारे सीसेन्टिस्टों ने किया है।

साथियों,

आज का भारत भविष्य का पूरा Ecosystem बना रहा है। भारत एक साथ हर उस क्षेत्र में निवेश कर रहा है, जो आने वाले दशकों की दिशा तय करेगा।

अभी आपने कुछ दिन पहले ही देखा है नीस में भारत इनोवेट्स का एक आयोजन किया। ये इवेंट भारत के डीप टेक सामर्थ्य को दुनिया तक पहुंचाने का एक और माध्यम था। इसमें भारत के 120 Deep-Tech Startups उपस्थित थे। Bharat Innovates में करीब एक हजार चार सौ B2B Meetings हुईं है। कई Startups के लिए Investment Commitments आगे बढ़ीं, Commercial Orders के लिए रास्ते खुले। French और European Universities तथा Incubators के साथ Engagements बढ़ रही हैं।

Student Exchanges, Joint Research, और Innovation Support के नए रास्ते बने। इसलिए Bharat Innovates सिर्फ एक Summit नहीं रहा। यह Innovation Diplomacy का एक नया मॉडल बना है।

और आज ही पेरिस में VivaTech इवेंट के जरिए, इस यात्रा को हमने और आगे बढ़ाया। नीस में हमने Ideas को Capital से जोड़ा और पेरिस में Indian Innovation को Global Scale से जोड़ा। आज दुनिया देख रही है भारत केवल भविष्य के लिए तैयार नहीं हो रहा है। भारत भविष्य को आकार दे रहा है।

साथियों,

एक समय था, जब देशों के बीच रिश्ते केवल व्यापार से तय होते थे। आज व्यापार के साथ-साथ Trust यानि भरोसा भी उतना ही महत्वपूर्ण हो गया है।

हर देश Reliable Supply Chains चाहता है। हर देश Stable Partnerships चाहता है। हर देश ऐसे साथियों की तलाश में है, जिन पर लंबे समय तक भरोसा किया जा सके। और ऐसे समय में, भारत विश्व में एक Trusted Partner के रूप में उभर रहा है।

एवियां में G7 बैठक के दौरान मैंने trust based partnerships बनाने पर ज़ोर दिया। ग्लोबल साउथ के देशों के साथ equal पार्टनर्स के रूप में आगे बढ़ने का आह्वान किया। भारत का G7 समिट में संदेश था Global Governance तभी प्रभावी होगी जब वह Inclusive होगी। Global Growth तभी Sustainable होगी जब वह शेयर्ड होगी। और Global Technology तभी मानवता के लिए उपयोगी होगी जब वह Trusted होगी।

साथियों,

भारत और दुनिया के बीच व्यापारिक रिश्तों में नई ऊर्जा नज़र आ रही है। फ्रांस के साथ भारत का ट्रेड लगतार बढ़ रहा है। पिछले कुछ वर्षों में भारत ने दुनिया के अनेक देशों के साथ Free Trade Agreements किए हैं। यूरोपियन यूनियन हो, यूनाइटेड किंगडम हो दुनिया के हर देश, हर रीजन के साथ भारत समझौते कर रहा है।

अगले महीने से भारत और UK के बीच ट्रेड एग्रीमेंट भी लागू हो जाएगा। यह एग्रीमेंट भारत के farmers, workers और innovators को अनेक नए अवसर प्रदान करेगा।

साथियों,

आज दुनिया Uncertainty और Disruption के दौर से गुजर रही है। ऐसे समय में भारत और फ्रांस की साझेदारी विश्वास, स्थिरता और सहयोग का एक मजबूत स्तंभ बन रहा है।

इस वर्ष हमने भारत और फ्रांस के संबंधों को Special Global Strategic Partnership का दर्जा दिया था। नीस में मेरे मित्र President Macron और मैंने हमारे संबंधों को force for global good बनाने पर चर्चा की। Defence से लेकर space और नुक्लियर तक AI और क्रिटीकल मिनरल्स से लेकर high speed railway तक, हर क्षेत्र में हम मिलकर आगे बढ़ेंगे।

साथियों,

Solar energy हो, या AI के क्षेत्र में सहयोग हो, भारत और फ्रांस मिलकर ऐसे समाधान विकसित कर रहे हैं जो पूरी मानवता के हित में हैं। पिछले वर्ष पेरिस में और इस वर्ष दिल्ली में हमने AI Summit को Co-chair किया।

अब हम साथ मिलकर अगले वर्ष “तृष्णा” satellite को लॉन्च करने जा रहें हैं। यह “तृष्णा” satellite जो विश्व में फूड और वाटर सिक्युरिटी सुनिश्चित करने में योगदान देगा।

और साथियों,

यह सभी गवर्नमेंट टू गवर्नमेंट पहलो में आप सभी का योगदान बहुत महत्वपूर्ण है। ये आप हैं जो भारत और यूरोप के बीच सबसे मजबूत सेतु हैं। आप दोनों समाजों को समझते हैं। दोनों बाजारों को समझते हैं। आने वाले समय में Talent, Trade, Technology, Tourism और Investment के नए अवसरों को आगे बढ़ाने में आपकी भूमिका लगातार बढ़ने वाली हैं।

साथियों,

भारत और फ्रांस के रिश्तों को साझा इतिहास, साझा मूल्यों और साझा विश्वास ने आगे बढ़ाया है। विश्व युद्धों के दौरान फ्रांस की धरती पर बलिदान देने वाले भारतीय सैनिकों की स्मृतियां आज भी हमें जोड़ती हैं।

मुझे पहले नव शापेल में श्रद्धांजलि देने का अवसर मिला, पिछले वर्ष प्रेसिडेंट मैक्रों के साथ मार्सेय के वॉर मेमोरियल जाने का अवसर भी मिला। ये हमारी साझा विरासत है।

फ्रांस, भारतीयों के योगदान को संजोता भी है और सराहता भी है। भारतीय मूल की नूर इनायत खान हों, जिन्होंने फ्रांस की Resistance के लिए अपना जीवन बलिदान किया, या महाराजा रणजीत सिंह के साथ काम करने वाले जनरल जां फ्रांस्वा अलार हों ये सभी भारत और फ्रांस की साझा विरासत के प्रतीक हैं।

भारत के राज्य पुडुचेरी में भी फ्रेंच विरासत की झलक दिखाई देती है। वहां का Architecture, वहां की कला-संस्कृति और खान-पान सभी में हमारे संबंधों की महेक है।

साथियों,

इस समय फ्रांस समेत पूरी दुनिया में International Yoga Day की तैयारी भी चल रही है। इस अवसर पर मैं, फ्रांस में योग को आगे बढ़ाने वाले श्रीमान महेश घाट्राड्याल जी को भी आदरपूर्वक श्रद्धांजलि देता हूं। मैं पद्म पुरस्कार से सम्मानित, शार्लोत शोपां जी को भी प्रणाम करता हूं। जिन्होंने सौ वर्ष की आयु में भी, योग के माध्यम से फ़्रांस को भारत की विरासत से जोड़ा है। उनका जीवन यह सिद्ध करता है: Yoga does not add years to life, it adds life to years.

साथियों,

मैं फ्रेद नेग्री जी को भी आदरपूर्वक श्रद्धापूर्वक याद करता हूं। भारतीय विरासत को संरक्षित करने में उनका योगदान अतुल्य रहा है।

साथियों,

भारत और फ्रांस को कनेक्ट करने वाली एक और चीज है, और वो है फुटबॉल। इस वक्त यहां फुटबॉल फीवर पूरे जोर पर है। फ्रांस में इसकी दीवानगी, चप्पे-चप्पे पर दिखती है। लेकिन भारत में भी फुटबॉल का क्रेज़ सिर चढ़कर बोलता है।

खासतौर पर फ्रांस की टीम के फैन्स भारत में बहुत अधिक हैं। फ़्रांस ने इस वर्ल्ड कप की शुरुआत एक जोरदार जीत से शुरू की है। मैं फ्रांस की टीम को बहुत-बहुत शुभकामनाएं देता हूं।

साथियों,

जाने से पहले, आप सभी के लिए कुछ और अच्छी खबरें भी लेकर के आया हूँ। वो आपके लिए हैं। पिछले वर्ष, मार्सेय में कॉन्सुलेट खोला गया, इससे काफी अधिक सुविधा मिल रही है। कुछ हफ्ते पहले, Indian Nationals के लिए French Airports पर Visa-free Transit की व्यवस्था शुरू हो गई है।

Students और Professionals की Mobility बढ़ाना हो, या Educational Qualifications की Mutual Recognition की बात हो, या फिर French Universities के भारत में Campus खोलना हो, इन सभी पर हम मिलकर आगे बढ़ रहें हैं।

अब फ्रांस में UPI के उपयोग का दायरा भी और बढ़ने जा रहा है। यानि भारत-फ्रांस कनेक्ट भी Instant और आपसी Payment भी Instant!

साथियों,

इन सभी पहलों से, हम भारत और फ़्रांस को और करीब ला रहें हैं। और मैं फिर कहूंगा इस साझेदारी की नींव, इस रिश्ते की असली ताकत आप सभी हैं। आप सब मेरे देशवासी हैं।

आज जब भारत तेज़ी से विकसित भारत के लक्ष्य की ओर बढ़ रहा है, तो मैं आप सभी से भारत के साथ और गहराई से जुडने का आग्रह करूंगा। इससे भारत की विकास यात्रा को नई शक्ति मिलेगी, और आपको अपनी पुरखों की धरती की सेवा करने का अवसर भी मिलेगा।

इन्हीं शब्दों के साथ आप सभी के प्रेम आपके उत्साह और इस आत्मीय स्वागत के लिए मैं एक बार फिर आप सभी का आभार व्यक्त करता हूं।

भारत माता की जय!

बहुत बहुत धन्यवाद।