ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಾರ್ಸಾದ ಕೊಲ್ಹಾಪುರ ಸ್ಮಾರಕದಲ್ಲಿಂದು ಪುಷ್ಪಗುಚ್ಛವಿರಿಸಿ ಗೌರವ ನಮನ ಸಲ್ಲಿಸಿದರು.

ಪೋಲೆಂಡ್ ಜನರಿಗೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ರಾಜಪ್ರಭುತ್ವದ ರಾಜ್ಯವಾಗಿದ್ದ ಕೊಲ್ಹಾಪುರದ ಉದಾರತೆಗೆ ಈ ಸ್ಮಾರಕವನ್ನು ಅರ್ಪಿಸಲಾಗಿದೆ‌. ಯುದ್ಧದ ಸಂದರ್ಭದಲ್ಲಿ ಕೊಲ್ಹಾಪುರದ ವಲಿವಡೆಯಲ್ಲಿ ಶಿಬಿರವನ್ನು ತೆರೆದು ಪೋಲೆಂಡ್ ಜನರಿಗೆ ಆಶ್ರಯ ನೀಡಲಾಯಿತು. ಈ ಶಿಬಿರದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು 5,000 ಪೋಲೆಂಡ್ ವಲಸಿಗರಿಗೆ ಆಶ್ರಯ ನೀಡಲಾಗಿತ್ತು. ಕೊಲ್ಹಾಪುರದ ಶಿಬಿರದಲ್ಲಿ ಆಶ್ರಯ ಪಡೆದಿದ್ದ ಪೋಲೆಂಡ್ ಜನರು ಮತ್ತು ಅವರ ಮುಂದಿನ ಪೀಳಿಗೆಯವರನ್ನು ಪ್ರಧಾನಮಂತ್ರಿ ಸ್ಮಾರಕದಲ್ಲಿ ಭೇಟಿಯಾದರು. 

ಈ ಸ್ಮಾರಕಕ್ಕೆ ಪ್ರಧಾನಮಂತ್ರಿಗಳ ಭೇಟಿಯು ಭಾರತ ಮತ್ತು ಪೋಲೆಂಡ್ ನಡುವಣ ಇರುವ ವಿಶೇಷ ಐತಿಹಾಸಿಕ ಬಾಂಧವ್ಯದ ಬಗ್ಗೆ ಬೆಳಕು ಚೆಲ್ಲುತ್ತದೆ ಮತ್ತು ಈ ಬಾಂಧವ್ಯವನ್ನು  ಪೋಷಿಸಬೇಕಿದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Semiconductors to clean energy: Inside PM Modi’s high-profile meeting with 16 Dutch CEOs in The Hague

Media Coverage

Semiconductors to clean energy: Inside PM Modi’s high-profile meeting with 16 Dutch CEOs in The Hague
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಮೇ 2026
May 17, 2026

Stronger Bonds, Stronger Bharat: PM Modi’s Netherlands Trip Delivers Partnerships, Pride & a Future-Ready India