ಪೂಜ್ಯ ಸಂತ ಮತ್ತು ಸಮಾಜ ಸುಧಾರಕರ ಗೌರವಾರ್ಥ ಆದಂಪುರ ವಿಮಾನ ನಿಲ್ದಾಣವನ್ನು ಶ್ರೀ ಗುರು ರವಿದಾಸ್ ಮಹಾರಾಜ್ ಜಿ ವಿಮಾನ ನಿಲ್ದಾಣ, ಆದಂಪುರ ಎಂದು ಮರುನಾಮಕರಣ ಮಾಡಲಾಗುವುದು
ಲುಧಿಯಾನದ ಹಲ್ವಾರಾ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಫೆಬ್ರವರಿ 1ರಂದು ಪಂಜಾಬ್ ಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3:45ರ ಸುಮಾರಿಗೆ ಪ್ರಧಾನಮಂತ್ರಿ ಅವರು ಆದಂಪುರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಅವರು ವಿಮಾನ ನಿಲ್ದಾಣದ ಹೊಸ ಹೆಸರನ್ನು 'ಶ್ರೀ ಗುರು ರವಿದಾಸ್ ಮಹಾರಾಜ್ ಜಿ ವಿಮಾನ ನಿಲ್ದಾಣ, ಆದಂಪುರ' ಎಂದು ಅನಾವರಣಗೊಳಿಸಲಿದ್ದಾರೆ. ಪಂಜಾಬ್ ನ ಲುಧಿಯಾನದ ಹಲ್ವಾರಾ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವನ್ನೂ ಅವರು ಉದ್ಘಾಟಿಸಲಿದ್ದಾರೆ.

ಸಂತ ಗುರು ರವಿದಾಸ್ ಅವರ 649ನೇ ಜನ್ಮ ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ, ಆದಂಪುರ ವಿಮಾನ ನಿಲ್ದಾಣದ ಮರುನಾಮಕರಣವು ಪೂಜ್ಯ ಸಂತ ಮತ್ತು ಸಮಾಜ ಸುಧಾರಕರನ್ನು ಗೌರವಿಸುತ್ತದೆ, ಅವರ ಸಮಾನತೆ, ಸಹಾನುಭೂತಿ ಮತ್ತು ಮಾನವ ಘನತೆಯ ಬೋಧನೆಗಳು ಭಾರತದ ಸಾಮಾಜಿಕ ನೀತಿಗಳಿಗೆ ಸ್ಫೂರ್ತಿ ನೀಡುತ್ತಲೇ ಇವೆ.

ಪಂಜಾಬ್ ನಲ್ಲಿ ವಾಯುಯಾನ ಮೂಲಸೌಕರ್ಯವನ್ನು ಮತ್ತಷ್ಟು ಮುಂದುವರಿದುಕೊಂಡು, ಹಲ್ವಾರಾ ವಿಮಾನ ನಿಲ್ದಾಣದಲ್ಲಿ ಪ್ರಧಾನಮಂತ್ರಿ ಅವರು ಉದ್ಘಾಟಿಸುತ್ತಿರುವ ಟರ್ಮಿನಲ್ ಕಟ್ಟಡವು ಲುಧಿಯಾನ ಮತ್ತು ಅದರ ಸುತ್ತಮುತ್ತಲಿನ ಕೈಗಾರಿಕಾ ಮತ್ತು ಕೃಷಿ ಒಳನಾಡಿಗೆ ಸೇವೆ ಒದಗಿಸುವ ಮೂಲಕ ರಾಜ್ಯಕ್ಕೆ ಹೊಸ ಹೆಬ್ಬಾಗಿಲನ್ನು ಸ್ಥಾಪಿಸಲಿದೆ. ಲುಧಿಯಾನ ಜಿಲ್ಲೆಯಲ್ಲಿರುವ ಹಲ್ವಾರಾ ಆಯಕಟ್ಟಿನ ಪ್ರಮುಖ ಭಾರತೀಯ ವಾಯುಪಡೆಯ ನೆಲೆಯಾಗಿದೆ.

ಲೂಧಿಯಾನದ ಹಿಂದಿನ ವಿಮಾನ ನಿಲ್ದಾಣವು ತುಲನಾತ್ಮಕವಾಗಿ ಸಣ್ಣ ರನ್ ವೇಯನ್ನು ಹೊಂದಿತ್ತು, ಇದು ಸಣ್ಣ ಗಾತ್ರದ ವಿಮಾನಗಳಿಗೆ ಸೂಕ್ತವಾಗಿದೆ. ಸಂಪರ್ಕವನ್ನು ಸುಧಾರಿಸಲು ಮತ್ತು ದೊಡ್ಡ ವಿಮಾನಗಳಿಗೆ ಸ್ಥಳಾವಕಾಶ ಕಲ್ಪಿಸಲು, ಹಲ್ವಾರಾದಲ್ಲಿ ಹೊಸ ಸಿವಿಲ್ ಎನ್ ಕ್ಲೇವ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಎ320 ಮಾದರಿಯ ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ಉದ್ದದ ರನ್ವೇಯನ್ನು ಹೊಂದಿದೆ.

ಸುಸ್ಥಿರ ಮತ್ತು ಪರಿಸರ ಜವಾಬ್ದಾರಿಯುತ ಅಭಿವೃದ್ಧಿಯ ಪ್ರಧಾನಮಂತ್ರಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ, ಟರ್ಮಿನಲ್ ಎಲ್ಇಡಿ ದೀಪಗಳು, ನಿರೋಧಕ ಛಾವಣಿ, ಮಳೆನೀರು ಕೊಯ್ಲು ವ್ಯವಸ್ಥೆಗಳು, ಒಳಚರಂಡಿ ಮತ್ತು ನೀರು ಸಂಸ್ಕರಣಾ ಘಟಕಗಳು ಮತ್ತು ಭೂದೃಶ್ಯಕ್ಕಾಗಿ ಮರುಬಳಕೆಯ ನೀರಿನ ಬಳಕೆ ಸೇರಿದಂತೆ ಹಲವಾರು ಹಸಿರು ಮತ್ತು ಇಂಧನ-ದಕ್ಷ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ವಾಸ್ತುಶಿಲ್ಪದ ವಿನ್ಯಾಸವು ಪಂಜಾಬ್ ನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ, ಪ್ರಯಾಣಿಕರಿಗೆ ವಿಶಿಷ್ಟ ಮತ್ತು ಪ್ರಾದೇಶಿಕವಾಗಿ ಪ್ರೇರಿತ ಪ್ರಯಾಣದ ಅನುಭವವನ್ನು ನೀಡುತ್ತದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
From school to PG, girls now outnumber boys

Media Coverage

From school to PG, girls now outnumber boys
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 1 ಮೇ 2026
May 01, 2026

From Stolen Treasures to Smart Trains: PM Modi’s Blueprint for a Proud, Connected, Self-Reliant India