32,000 ಕೋಟಿ ರೂ.ಗಳ ಬಹುವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಿಸುವುದು ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ
ದೇಶಾದ್ಯಂತ ಶಿಕ್ಷಣ ಕ್ಷೇತ್ರಕ್ಕೆ ಪ್ರಮುಖ ಉತ್ತೇಜನ ನೀಡುವ ಸಲುವಾಗಿ, ಐಐಟಿ ಜಮ್ಮು, ಐಐಎಂ ಜಮ್ಮು, ಐಐಟಿ ಭಿಲಾಯ್, ಐಐಟಿ ತಿರುಪತಿ, ಐಐಐಟಿಡಿಎಂ ಕರ್ನೂಲ್, ಐಐಎಂ ಬೋಧಗಯಾ, ಐಐಎಂ ವಿಶಾಖಪಟ್ಟಣಂ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್) ಕಾನ್ಪುರದಂತಹ ಹಲವಾರು ಪ್ರಮುಖ ಶಿಕ್ಷಣ ಸಂಸ್ಥೆಗಳನ್ನು ಉದ್ಘಾಟನೆ ಮತ್ತು ಲೋಕಾರ್ಪಣೆ ಮಾಡಲಿರುವ ಪ್ರಧಾನಮಂತ್ರಿ
2019ರ ಫೆಬ್ರವರಿಯಲ್ಲಿ ಪ್ರಧಾನಮಂತ್ರಿಯವರು ಎಐಐಎಂಎಸ್ ಜಮ್ಮುಗೆ ಅಡಿಗಲ್ಲು ಹಾಕಿದ್ದರು; ಎಐಐಎಂಎಸ್ ಜಮ್ಮು ಉದ್ಘಾಟನೆ ಮಾಡಲಿರುವ ಪ್ರಧಾನಮಂತ್ರಿ;
ಜಮ್ಮು ವಿಮಾನನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡ ಮತ್ತು ಜಮ್ಮುವಿನಲ್ಲಿ ಕಾಮನ್ ಯೂಸರ್ ಫೆಸಿಲಿಟಿ ಪೆಟ್ರೋಲಿಯಂ ಡಿಪೋ ಗಳಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ
ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಮಹತ್ವದ ರಸ್ತೆ ಮತ್ತು ರೈಲು ಸಂಪರ್ಕ ಯೋಜನೆಗಳ ಅಡಿಪಾಯ ಹಾಕಲಿರುವ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಮಂತ್ರಿ
ಜಮ್ಮು ಮತ್ತು ಕಾಶ್ಮೀರದಾದ್ಯಂತ ನಾಗರಿಕ ಮತ್ತು ನಗರ ಮೂಲಸೌಕರ್ಯಗಳನ್ನು ಬಲಪಡಿಸುವ ಹಲವಾರು ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ಪ್ರಧಾನಮಂತ್ರಿಯವರು ನೆರವೇರಿಸಲಿದ್ದಾರೆ.
ಫೆಬ್ರವರಿ 20, 2024 ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಮ್ಮುವಿಗೆ ಭೇಟಿ ನೀಡಲಿದ್ದಾರೆ.

ಫೆಬ್ರವರಿ 20, 2024 ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಮ್ಮುವಿಗೆ ಭೇಟಿ ನೀಡಲಿದ್ದಾರೆ.

ಬೆಳಗ್ಗೆ 11:30ರ ಸುಮಾರಿಗೆ ಜಮ್ಮುವಿನ ಮೌಲಾನಾ ಆಜಾದ್ ಸ್ಟೇಡಿಯಂನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು 32,000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮಾಡಲಿದ್ದಾರೆ, ಹಾಗೂ ದೇಶಕ್ಕೆ ಸಮರ್ಪಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ಆರೋಗ್ಯ, ಶಿಕ್ಷಣ, ರೈಲು, ರಸ್ತೆ, ವಿಮಾನಯಾನ, ಪೆಟ್ರೋಲಿಯಂ, ನಾಗರಿಕ ಮೂಲಸೌಕರ್ಯ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳು ಇವುಗಳಲ್ಲಿ ಒಳಗೊಂಡಿವೆ. ಕಾರ್ಯಕ್ರಮದಲ್ಲಿ ಜಮ್ಮು ಮತ್ತು ಕಾಶ್ಮೀರದ ಸುಮಾರು 1500 ಹೊಸ ಸರ್ಕಾರಿ ನೇಮಕಾತಿಗಳಿಗೆ ಪ್ರಧಾನಮಂತ್ರಿಯವರು ನೇಮಕಾತಿ ಆದೇಶಗಳನ್ನು ವಿತರಿಸಲಿದ್ದಾರೆ. 'ವಿಕಸಿತ ಭಾರತ ವಿಕಸಿತ ಜಮ್ಮು' ಕಾರ್ಯಕ್ರಮದ ಭಾಗವಾಗಿ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಲಿದ್ದಾರೆ.

ಶಿಕ್ಷಣ ಕ್ಷೇತ್ರಕ್ಕೆ ಪ್ರಮುಖ ಉತ್ತೇಜನ

ದೇಶಾದ್ಯಂತ ಶಿಕ್ಷಣ ಮತ್ತು ಕೌಶಲ್ಯ ಮೂಲಸೌಕರ್ಯವನ್ನು ಉನ್ನತೀಕರಿಸುವ ಮತ್ತು ಅಭಿವೃದ್ಧಿಪಡಿಸುವ ಮಹತ್ವದ ಹೆಜ್ಜೆಯಲ್ಲಿ, ಪ್ರಧಾನಮಂತ್ರಿಯವರು ಸುಮಾರು 13,375 ಕೋಟಿ ರೂಪಾಯಿಗಳ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ಯೋಜನೆಗಳ ಉದ್ಘಾಟನೆ ಮಾಡಲಿದ್ದಾರೆ ಮತ್ತು ದೇಶಕ್ಕೆ ಸಮರ್ಪಿಸಲಿದ್ದಾರೆ ಹಾಗೂ ಅಡಿಪಾಯ ಹಾಕಲಿದ್ದಾರೆ. ರಾಷ್ಟ್ರಕ್ಕೆ ಸಮರ್ಪಿತವಾಗಿರುವ ಯೋಜನೆಗಳಾದ - ಐಐಟಿ ಭಿಲಾಯಿ, ಐಐಟಿ ತಿರುಪತಿ, ಐಐಟಿ ಜಮ್ಮು, ಐಐಐಟಿಡಿಎಂ ಕರ್ನೂಲ್‌ನ ಶಾಶ್ವತ ಕ್ಯಾಂಪಸ್ ಗಳು; ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್) - ಸುಧಾರಿತ ತಂತ್ರಜ್ಞಾನಗಳ ಪ್ರವರ್ತಕ ಕೌಶಲ್ಯ ತರಬೇತಿ ಸಂಸ್ಥೆ - ಕಾನ್ಪುರ; ಮತ್ತು ದೇವಪ್ರಯಾಗ (ಉತ್ತರಾಖಂಡ) ಮತ್ತು ಅಗರ್ತಲಾ (ತ್ರಿಪುರ) - ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಎರಡು ಕ್ಯಾಂಪಸ್‌ಗಳು  ಇತ್ಯಾದಿ ಇವುಗಳಲ್ಲಿ ಸೇರಿದೆ.

ಐಐಎಂ ಜಮ್ಮು, ಐಐಎಂ ಬೋಧಗಯಾ ಮತ್ತು ಐಐಎಂ ವಿಶಾಖಪಟ್ಟಣಂ ಎಂಬ ಮೂರು ಹೊಸ ಐಐಎಂಗಳನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ. ದೇಶಾದ್ಯಂತ ಕೇಂದ್ರೀಯ ವಿದ್ಯಾಲಯ (ಕೆವಿಗಳು) ಮತ್ತು 13 ಹೊಸ ನವೋದಯ ವಿದ್ಯಾಲಯಗಳ 20 ಹೊಸ ಕಟ್ಟಡಗಳನ್ನು ಅವರು ಉದ್ಘಾಟಿಸಲಿದ್ದಾರೆ. ಪ್ರಧಾನಮಂತ್ರಿಯವರು ದೇಶದಾದ್ಯಂತ ಐದು ಕೇಂದ್ರೀಯ ವಿದ್ಯಾಲಯ ಕ್ಯಾಂಪಸ್‌ಗಳು, ಒಂದು ನವೋದಯ ವಿದ್ಯಾಲಯ ಕ್ಯಾಂಪಸ್ ಮತ್ತು ಐದು ವಿವಿಧೋದ್ದೇಶ ಹಾಲ್‌ಗಳನ್ನು ನವೋದಯ ವಿದ್ಯಾಲಯಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಈ ಹೊಸದಾಗಿ ನಿರ್ಮಿಸಲಾದ ಕೆವಿಗಳು ಮತ್ತು ಎನ್‌ವಿಗಳ ಕಟ್ಟಡಗಳು ದೇಶಾದ್ಯಂತ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಎಐಐಎಂಎಸ್ ಜಮ್ಮು

ಜಮ್ಮು ಮತ್ತು ಕಾಶ್ಮೀರದ ಜನರಿಗೆ ಸಮಗ್ರ, ಗುಣಮಟ್ಟದ ಮತ್ತು ಸಮಗ್ರ ತೃತೀಯ ಆರೈಕೆ ಆರೋಗ್ಯ ಸೇವೆಗಳನ್ನು ಒದಗಿಸುವ ಒಂದು ಹಂತದಲ್ಲಿ, ಪ್ರಧಾನಮಂತ್ರಿ ಅವರು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್), ವಿಜಯಪುರ (ಸಾಂಬಾ), ಜಮ್ಮುವನ್ನು ಉದ್ಘಾಟಿಸಲಿದ್ದಾರೆ. ಫೆಬ್ರುವರಿ 2019 ರಲ್ಲಿ ಪ್ರಧಾನಮಂತ್ರಿಯವರಿಂದ ಶಂಕುಸ್ಥಾಪನೆ ಮಾಡಿದ ಈ ಸಂಸ್ಥೆಯು ಕೇಂದ್ರ ವಲಯದ ಯೋಜನೆಯಾದ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿಯಲ್ಲಿ ಸ್ಥಾಪನೆಯಾಗುತ್ತಿದೆ.

ರೂಪಾಯಿ 1660 ಕೋಟಿಗೂ ಅಧಿಕ ವೆಚ್ಚದಲ್ಲಿ 227 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಆಸ್ಪತ್ರೆಯು 720 ಹಾಸಿಗೆಗಳು, 125 ಸೀಟುಗಳ ವೈದ್ಯಕೀಯ ಕಾಲೇಜು, 60 ಸೀಟುಗಳ ನರ್ಸಿಂಗ್ ಕಾಲೇಜು, 30 ಹಾಸಿಗೆಗಳ ಆಯುಷ್ ಬ್ಲಾಕ್, ಬೋಧಕರಿಗೆ ವಸತಿ ಮತ್ತು ವಸತಿ ಸೌಕರ್ಯಗಳಂತಹ ಸೌಲಭ್ಯಗಳನ್ನು ಹೊಂದಿದೆ. ಆಸ್ಪತ್ರೆಯು ಅತ್ಯಾಧುನಿಕ 18 ವಿಶೇಷತೆಗಳನ್ನು ಹೊಂದಿದೆ. ಸಿಬ್ಬಂದಿ, ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವಸತಿ, ರಾತ್ರಿ ಆಶ್ರಯ, ಅತಿಥಿ ಗೃಹ, ಆಡಿಟೋರಿಯಂ, ಶಾಪಿಂಗ್ ಕಾಂಪ್ಲೆಕ್ಸ್ ಇತ್ಯಾದಿ…. ಉತ್ತಮ ಗುಣಮಟ್ಟದ ರೋಗಿಗಳ ಆರೈಕೆ ಸೇವೆಗಳನ್ನು ಮತ್ತು ಹೃದ್ರೋಗ, ಗ್ಯಾಸ್ಟ್ರೋ ಸೇರಿದಂತೆ 17 ಸೂಪರ್ ಸ್ಪೆಷಾಲಿಟಿಗಳನ್ನು ಇದು ಒದಗಿಸುತ್ತದೆ. ಎಂಟರಾಲಜಿ, ನೆಫ್ರಾಲಜಿ, ಯುರಾಲಜಿ, ನ್ಯೂರಾಲಜಿ, ನ್ಯೂರೋಸರ್ಜರಿ, ಮೆಡಿಕಲ್ ಆಂಕೊಲಾಜಿ, ಸರ್ಜಿಕಲ್ ಆಂಕೊಲಾಜಿ, ಎಂಡೋಕ್ರೈನಾಲಜಿ, ಬರ್ನ್ಸ್ & ಪ್ಲ್ಯಾಸ್ಟಿಕ್ ಸರ್ಜರಿ, ಇನ್ಸ್ಟಿಟ್ಯೂಟ್ ತೀವ್ರ ನಿಗಾ ಘಟಕ, ತುರ್ತು ಮತ್ತು ಆಘಾತ ಘಟಕ, 20 ಮಾಡ್ಯುಲರ್ ಆಪರೇಷನ್ ಥಿಯೇಟರ್‌ಗಳು, ಡಯಾಗ್ನೋಸ್ಟಿಕ್ ಲ್ಯಾಬೋರೇಟರೀಸ್, ಬ್ಲಡ್ ಬ್ಯಾಂಕ್, ಫಾರ್ಮಸಿ ಇತ್ಯಾದಿ ಸೌಲಭ್ಯಗಳನ್ನು ಹೊಂದಿರುತ್ತದೆ. ಆಸ್ಪತ್ರೆಯು ಪ್ರದೇಶದ ದೂರದ ಪ್ರದೇಶಗಳಿಗೆ ತಲುಪಲು ಡಿಜಿಟಲ್ ಆರೋಗ್ಯ ಮೂಲಸೌಕರ್ಯವನ್ನು ಸಹ ಬಳಸುತ್ತದೆ.

ಹೊಸ ಟರ್ಮಿನಲ್ ಕಟ್ಟಡ, ಜಮ್ಮು ವಿಮಾನ ನಿಲ್ದಾಣ

ಜಮ್ಮು ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡಕ್ಕೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 40,000 ಚದರ ಮೀಟರ್ ಪ್ರದೇಶದಲ್ಲಿ ಹರಡಿರುವ ಹೊಸ ಟರ್ಮಿನಲ್ ಕಟ್ಟಡವು ಪೀಕ್ ಅವರ್ ಗಳಲ್ಲಿ ಸುಮಾರು 2000 ಪ್ರಯಾಣಿಕರಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸಲಿದೆ. ಹೊಸ ಟರ್ಮಿನಲ್ ಕಟ್ಟಡವು ಪರಿಸರ ಸ್ನೇಹಿ ಮತ್ತು ಪ್ರದೇಶದ ಸ್ಥಳೀಯ ಸಂಸ್ಕೃತಿಯನ್ನು ಪ್ರದರ್ಶಿಸುವ ರೀತಿಯಲ್ಲಿ ನಿರ್ಮಿಸಲಾಗುವುದು. ಇದು ವಾಯು ಯಾನ ಸಂಪರ್ಕವನ್ನು ಬಲಪಡಿಸುತ್ತದೆ, ಪ್ರವಾಸೋದ್ಯಮ ಮತ್ತು ವ್ಯಾಪಾರವನ್ನು ಉತ್ತೇಜಿಸುತ್ತದೆ ಮತ್ತು ಪ್ರದೇಶದ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುತ್ತದೆ.
 
ರೈಲು ಯೋಜನೆಗಳು

ಬನಿಹಾಲ್-ಖಾರಿ-ಸುಂಬರ್-ಸಂಗಲ್ದನ್ (48 ಕಿಮೀ) ಮತ್ತು ಹೊಸದಾಗಿ ವಿದ್ಯುದ್ದೀಕರಿಸಿದ ಬಾರಾಮುಲ್ಲಾ-ಶ್ರಿಂಗಾರ್-ಬನಿಹಾಲ್-ಸಂಗಲ್ದನ್ ವಿಭಾಗ (185.66 ಕಿಮೀ) ನಡುವಿನ ಹೊಸ ರೈಲು ಮಾರ್ಗ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಧಾನಮಂತ್ರಿಯವರು ವಿವಿಧ ರೈಲು ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಪ್ರಧಾನಮಂತ್ರಿಯವರು ಕಣಿವೆಯಲ್ಲಿ ಮೊದಲ ಎಲೆಕ್ಟ್ರಿಕ್ ರೈಲಿಗೆ ಹಸಿರುಧ್ವಜ ತೋರಲಿದ್ದಾರೆ ಮತ್ತು ಸಂಗಲ್ದಾನ್ ನಿಲ್ದಾಣ ಮತ್ತು ಬಾರಾಮುಲ್ಲಾ ನಿಲ್ದಾಣದ ನಡುವೆ ರೈಲು ಸೇವೆಯನ್ನು ಸಹ ಪ್ರಾರಂಭಿಸಲಿದ್ದಾರೆ.

ಬನಿಹಾಲ್-ಖಾರಿ-ಸುಂಬರ್-ಸಂಗಲ್ದಾನ್ ವಿಭಾಗದ ಕಾರ್ಯಾರಂಭವು ಮಹತ್ವದ್ದಾಗಿದೆ ಏಕೆಂದರೆ ಇದು ಪ್ರಯಾಣಿಕರಿಗೆ ಉತ್ತಮ ಸವಾರಿ ಅನುಭವವನ್ನು ಒದಗಿಸುವ ಮಾರ್ಗದುದ್ದಕ್ಕೂ ಬ್ಯಾಲಸ್ಟ್ ಲೆಸ್ ಟ್ರ್ಯಾಕ್ (ಬಿ.ಎಲ್.ಟಿ) ಬಳಕೆಯನ್ನು ಒಳಗೊಂಡಿದೆ. ಅಲ್ಲದೆ, ಭಾರತದ ಅತಿ ಉದ್ದದ ಸಾರಿಗೆ ಸುರಂಗ ಟಿ-50 (12.77 ಕಿಮೀ) ಖಾರಿ-ಸುಂಬರ್ ನಡುವಿನ ಈ ಭಾಗದಲ್ಲಿದೆ. ರೈಲು ಯೋಜನೆಗಳು ಸಂಪರ್ಕವನ್ನು ಸುಧಾರಿಸುತ್ತದೆ, ಪರಿಸರ ಸುಸ್ಥಿರತೆಯನ್ನು ಖಚಿತಪಡಿಸುತ್ತದೆ ಮತ್ತು ಪ್ರದೇಶದ ಒಟ್ಟಾರೆ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ.

ರಸ್ತೆ ಯೋಜನೆಗಳು

ಈ ಸಂದರ್ಭದಲ್ಲಿ, ಜಮ್ಮುವನ್ನು ಕತ್ರಾಕ್ಕೆ ಸಂಪರ್ಕಿಸುವ ದೆಹಲಿ-ಅಮೃತಸರ-ಕತ್ರಾ ಎಕ್ಸ್ ಪ್ರೆಸ್ ವೇಯ ಎರಡು ಪ್ಯಾಕೇಜ್‌ಗಳು (44.22 ಕಿಮೀ) ಸೇರಿದಂತೆ - ಶ್ರೀನಗರ ರಿಂಗ್ ರಸ್ತೆಯ ಚತುಷ್ಪಥಕ್ಕೆ ಎರಡನೇ ಹಂತ; ರಾಷ್ಟ್ರೀಯ ಹೆದ್ದಾರಿ -01 ರ 161 ಕಿಮೀ ಉದ್ದದ ಶ್ರೀನಗರ-ಬಾರಾಮುಲ್ಲಾ-ಉರಿ ವಿಸ್ತರಣೆಗೆ ಐದು ಪ್ಯಾಕೇಜ್‌ಗಳು; ಮತ್ತು ರಾಷ್ಟ್ರೀಯ ಹೆದ್ದಾರಿ -444 ನಲ್ಲಿ ಕುಲ್ಗಾಮ್ ಬೈಪಾಸ್ ಮತ್ತು ಪುಲ್ವಾಮಾ ಬೈಪಾಸ್ ನಿರ್ಮಾಣ - ಪ್ರಮುಖ ರಸ್ತೆ ಯೋಜನೆಗಳಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ಮಾಡಲಿದ್ದಾರೆ.

ದೆಹಲಿ-ಅಮೃತಸರ-ಕತ್ರಾ ಎಕ್ಸ್ ಪ್ರೆಸ್ ವೇನ ಎರಡು ಪ್ಯಾಕೇಜ್‌ಗಳು ಒಮ್ಮೆ ಪೂರ್ಣಗೊಂಡರೆ, ಯಾತ್ರಾರ್ಥಿಗಳಿಗೆ ಮಾತಾ ವೈಷ್ಣೋದೇವಿಯ ಪವಿತ್ರ ದೇಗುಲಕ್ಕೆ ಭೇಟಿಯನ್ನು ಸುಗಮಗೊಳಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ; ಶ್ರೀನಗರ ರಿಂಗ್ ರಸ್ತೆಯ ನಾಲ್ಕು-ಪಥದ ಎರಡನೇ ಹಂತವು ಅಸ್ತಿತ್ವದಲ್ಲಿರುವ ಸುಂಬಲ್-ವಾಯುಲ್ ರಾಷ್ಟ್ರೀಯ ಹೆದ್ದಾರಿ -1 ಅನ್ನು ನವೀಕರಿಸುವುದನ್ನು ಒಳಗೊಂಡಿರುತ್ತದೆ. 24.7 ಕಿಮೀ ಉದ್ದದ ಈ ಬ್ರೌನ್‌ಫೀಲ್ಡ್ ಯೋಜನೆಯು ಶ್ರೀನಗರ ನಗರ ಮತ್ತು ಸುತ್ತಮುತ್ತಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಇದು ಮನಸ್ಬಾಲ್ ಸರೋವರ ಮತ್ತು ಖೀರ್ ಭವಾನಿ ದೇವಸ್ಥಾನದಂತಹ ಜನಪ್ರಿಯ ಪ್ರವಾಸಿ ತಾಣಗಳಿಗೆ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಲೇಹ್, ಲಡಾಖ್‌ಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ; ರಾಷ್ಟ್ರೀಯ ಹೆದ್ದಾರಿ -01 ರ 161 ಕಿಮೀ ಉದ್ದದ ಶ್ರೀನಗರ-ಬಾರಾಮುಲ್ಲಾ-ಉರಿ ವಿಸ್ತರಣೆಯ ಯೋಜನೆಯು ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಹೊಂದಿದೆ. ಇದು ಬಾರಾಮುಲ್ಲಾ ಮತ್ತು ಉರಿಯ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ; ಖಾಜಿಗುಂಡ್ - ಕುಲ್ಗಾಮ್ - ಶೋಪಿಯಾನ್ - ಪುಲ್ವಾಮಾ - ಬದ್ಗಾಮ್ - ಶ್ರೀನಗರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ -444 ನಲ್ಲಿ ಕುಲ್ಗಾಮ್ ಬೈಪಾಸ್ ಮತ್ತು ಪುಲ್ವಾಮಾ ಬೈಪಾಸ್ ಈ ಪ್ರದೇಶದಲ್ಲಿ ರಸ್ತೆ ಮೂಲಸೌಕರ್ಯವನ್ನು ಹೆಚ್ಚಿಸುತ್ತದೆ.

ಸಿಯುಎಫ್ ಪೆಟ್ರೋಲಿಯಂ ಡಿಪೋ

ಜಮ್ಮುವಿನಲ್ಲಿ ಸಿಯುಎಫ್ (ಸಾಮಾನ್ಯ ಬಳಕೆದಾರ ಸೌಲಭ್ಯ) ಪೆಟ್ರೋಲಿಯಂ ಡಿಪೋವನ್ನು ಅಭಿವೃದ್ಧಿಪಡಿಸುವ ಯೋಜನೆಗೆ ಪ್ರಧಾನಮಂತ್ರಿ ಅವರು ಅಡಿಪಾಯ ಹಾಕಲಿದ್ದಾರೆ. ಅತ್ಯಾಧುನಿಕ ಸಂಪೂರ್ಣ ಸ್ವಯಂಚಾಲಿತ ಡಿಪೋ ಸುಮಾರು ರೂಪಾಯಿ 677 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಹೊಂದಲಿದ್ದು, ಮೋಟಾರ್ ಸ್ಪಿರಿಟ್ (ಎಂಎಸ್), ಹೈಸ್ಪೀಡ್ ಡೀಸೆಲ್ (ಹೆಚ್.ಎಸ್.ಡಿ), ಸುಪೀರಿಯರ್ ಸೀಮೆಎಣ್ಣೆ (ಎಸ್.ಕೆ.ಒ), ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್), ಎಥೆನಾಲ್, ಬಯೋ ಡೀಸೆಲ್ ಮತ್ತು ಚಳಿಗಾಲದ ದರ್ಜೆಯ ಹೆಚ್.ಎಸ್.ಡಿ. ಗಳನ್ನು ಸಂಗ್ರಹಿಸಲು - ಸುಮಾರು 100000 ಕಿಲೊ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿರುತ್ತದೆ. 

ಇತರ ಯೋಜನೆಗಳು

ಜಮ್ಮು ಮತ್ತು ಕಾಶ್ಮೀರದಾದ್ಯಂತ ನಾಗರಿಕ ಮೂಲಸೌಕರ್ಯಗಳನ್ನು ಬಲಪಡಿಸಲು ಮತ್ತು ಸಾರ್ವಜನಿಕ ಸೌಲಭ್ಯಗಳನ್ನು ಒದಗಿಸುವುದಕ್ಕಾಗಿ 3150 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿಯವರು ನೆರವೇರಿಸಲಿದ್ದಾರೆ. ಪ್ರಧಾನಮಂತ್ರಿಯವರು ಉದ್ಘಾಟಿಸಲಿರುವ ಯೋಜನೆಗಳು -  ರಸ್ತೆ ಯೋಜನೆಗಳು ಮತ್ತು ಸೇತುವೆಗಳು; ಗ್ರಿಡ್ ಕೇಂದ್ರಗಳು, ಸ್ವೀಕರಿಸುವ ಕೇಂದ್ರಗಳು ಪ್ರಸರಣ ಮಾರ್ಗ ಯೋಜನೆಗಳು; ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕಗಳು ಮತ್ತು ಒಳಚರಂಡಿ ಸಂಸ್ಕರಣಾ ಘಟಕಗಳು; ಹಲವಾರು ಪದವಿ ಕಾಲೇಜು ಕಟ್ಟಡಗಳು; ಶ್ರೀನಗರ ನಗರದಲ್ಲಿ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್; ಆಧುನಿಕ ನರ್ವಾಲ್ ಹಣ್ಣಿನ ಮಂಡಿ; ಕಥುವಾದಲ್ಲಿ ಔಷಧ ಪರೀಕ್ಷಾ ಪ್ರಯೋಗಾಲಯ; ಮತ್ತು ಸಾರಿಗೆ ಸೌಕರ್ಯಗಳು - ಗಂದರ್‌ಬಾಲ್ ಮತ್ತು ಕುಪ್ವಾರದಲ್ಲಿ 224 ಫ್ಲಾಟ್‌ಗಳು – ಇತ್ಯಾದಿ ಸೇರಿವೆ. 

ಜಮ್ಮು ಮತ್ತು ಕಾಶ್ಮೀರದಾದ್ಯಂತ ಅಡಿಗಲ್ಲು ಹಾಕಲಾಗುವ ಯೋಜನೆಗಳು - ಐದು ಹೊಸ ಕೈಗಾರಿಕಾ ಎಸ್ಟೇಟ್‌ಗಳ ಅಭಿವೃದ್ಧಿಯನ್ನು ಒಳಗೊಂಡಿವೆ; ಉಳಿದವುಗಳೆಂದರೆ - ಜಮ್ಮು ಸ್ಮಾರ್ಟ್ ಸಿಟಿಯ ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಗಾಗಿ ಡೇಟಾ ಸೆಂಟರ್/ ಡಿಸಾಸ್ಟರ್ ರಿಕವರಿ ಸೆಂಟರ್; ಪರಿಂಪೋರಾ ಶ್ರೀನಗರದಲ್ಲಿ ಸಾರಿಗೆ ನಗರದ ಉನ್ನತೀಕರಣ; 62 ರಸ್ತೆ ಯೋಜನೆಗಳು ಮತ್ತು 42 ಸೇತುವೆಗಳ ಉನ್ನತೀಕರಣ ಮತ್ತು ಸಾರಿಗೆ ಸೌಕರ್ಯಗಳ ಅಭಿವೃದ್ಧಿಗಾಗಿ ಯೋಜನೆ - ಅನಂತನಾಗ್, ಕುಲ್ಗಾಮ್, ಕುಪ್ವಾರಾ, ಶೋಪಿಯಾನ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಒಂಬತ್ತು ಸ್ಥಳಗಳಲ್ಲಿ 2816 ಫ್ಲಾಟ್‌ಗಳು – ಇತ್ಯಾದಿ ಸೇರಿವೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Parliament passes Jan Vishwas Bill 2026, decriminalising 717 offences, fines up to Rs 1 crore

Media Coverage

Parliament passes Jan Vishwas Bill 2026, decriminalising 717 offences, fines up to Rs 1 crore
NM on the go

Nm on the go

Always be the first to hear from the PM. Get the App Now!
...
Prime Minister highlights values of harmony and compassion on Good Friday
April 03, 2026

The Prime Minister, Shri Narendra Modi, said that Good Friday reminds us of the sacrifice of Jesus Christ.

Shri Modi expressed hope that the day deepens the values of harmony, compassion and forgiveness.

He said that brotherhood and hope should guide everyone.

In a X post, Shri Modi said;

“Good Friday reminds us of Jesus Christ’s sacrifice. May this day further deepen the values of harmony, compassion and forgiveness. May brotherhood and hope guide us all.”