ಸ್ವಾವಲಂಬಿ ಮತ್ತು ನಾವೀನ್ಯತೆ ಆಧಾರಿತ ಭಾರತದ ಪ್ರಧಾನಮಂತ್ರಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ, ಸಮಾವೇಶದ ಸಮಯದಲ್ಲಿ ನಾವೀನ್ಯತೆಗೆ ಸಂಬಂಧಿ ಪ್ರಮುಖ ಯೋಜನೆಗಳನ್ನು ಪ್ರಾರಂಭಿಸಲಾಗುವುದು
ಸಮಾವೇಶವು ಭಾರತದ ನಾವೀನ್ಯತೆ ಪರಿಸರ ವ್ಯವಸ್ಥೆಯಲ್ಲಿದೊಡ್ಡ ಪ್ರಮಾಣದ ಖಾಸಗಿ ಹೂಡಿಕೆಯನ್ನು ವೇಗವರ್ಧಿಸುವ ಗುರಿಯನ್ನು ಹೊಂದಿದೆ
ಸಮಾವೇಶದಲ್ಲಿ ಡೀಪ್‌ ಟೆಕ್‌ ಸ್ಟಾರ್ಟ್‌ಅಪ್‌ ಶೋಕೇಸ್‌ ಭಾರತದಾದ್ಯಂತದ ಅತ್ಯಾಧುನಿಕ ಆವಿಷ್ಕಾರಗಳನ್ನು ಒಳಗೊಂಡಿರುತ್ತದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಏಪ್ರಿಲ್‌ 29ರಂದು ಬೆಳಗ್ಗೆ 11ಗಂಟೆಗೆ ನವದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿರುವ ವೈಯುಜಿಎಂ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿಅವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ವೈಯುಜಿಎಂ (ಸಂಸ್ಕೃತದಲ್ಲಿ ಸಂಗಮ ಎಂದರ್ಥ) ಸರ್ಕಾರ, ಶೈಕ್ಷಣಿಕ, ಉದ್ಯಮ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯ ನಾಯಕರನ್ನು ಒಟ್ಟುಗೂಡಿಸುವ ಮೊದಲ ರೀತಿಯ ಕಾರ್ಯತಂತ್ರದ ಸಮಾವೇಶವಾಗಿದೆ. ವಾಧ್ವಾನಿ ಫೌಂಡೇಶನ್‌ ಮತ್ತು ಸರ್ಕಾರಿ ಸಂಸ್ಥೆಗಳ ಜಂಟಿ ಹೂಡಿಕೆಯೊಂದಿಗೆ ಸುಮಾರು 1,400 ಕೋಟಿ ರೂ.ಗಳ ಸಹಯೋಗದ ಯೋಜನೆಯಿಂದ ನಡೆಸಲ್ಪಡುವ ಭಾರತದ ನಾವೀನ್ಯತೆ ಪ್ರಯಾಣಕ್ಕೆ ಇದು ಕೊಡುಗೆ ನೀಡುತ್ತದೆ.

ಸ್ವಾವಲಂಬಿ ಮತ್ತು ನಾವೀನ್ಯತೆ ಆಧಾರಿತ ಭಾರತದ ಪ್ರಧಾನಮಂತ್ರಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ, ಸಮಾವೇಶದ ಸಮಯದಲ್ಲಿ ವಿವಿಧ ಪ್ರಮುಖ ಯೋಜನೆಗಳನ್ನು ಪ್ರಾರಂಭಿಸಲಾಗುವುದು. ಅವುಗಳಲ್ಲಿಐಐಟಿ ಕಾನ್ಪುರ (ಎಐ ಮತ್ತು ಇಂಟೆಲಿಜೆಂಟ್‌ ಸಿಸ್ಟಮ್ಸ್‌) ಮತ್ತು ಐಐಟಿ ಬಾಂಬೆ (ಬಯೋಸೈನ್ಸ್‌, ಬಯೋಟೆಕ್ನಾಲಜಿ, ಹೆಲ್ತ್‌  ಮೆಡಿಸಿನ್‌) ನ ಸೂಪರ್‌ಹಬ್‌ಗಳು ಸೇರಿವೆ; ವಾಧ್ವಾನಿ ಇನ್ನೋವೇಶನ್‌ ನೆಟ್ವರ್ಕ್‌ (ವಿನ್‌) ಸಂಶೋಧನಾ ವಾಣಿಜ್ಯೀಕರಣವನ್ನು ಹೆಚ್ಚಿಸಲು ಉನ್ನತ ಸಂಶೋಧನಾ ಸಂಸ್ಥೆಗಳಲ್ಲಿ ಕೇಂದ್ರಗಳು; ಮತ್ತು ಕೊನೆಯ ಹಂತದ ಅನುವಾದ ಯೋಜನೆಗಳಿಗೆ ಜಂಟಿಯಾಗಿ ಧನಸಹಾಯ ನೀಡಲು ಮತ್ತು ಸಂಶೋಧನೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಅನುಸಂಧಾನ್‌ ನ್ಯಾಷನಲ್‌ ರಿಸರ್ಚ್‌ ಫೌಂಡೇಶನ್‌ (ಎಎನ್‌ಆರ್‌ಎಫ್‌) ನೊಂದಿಗೆ ಸಹಭಾಗಿತ್ವ ಹೊಂದಿದೆ.

ಸಮಾವೇಶವು ಸರ್ಕಾರಿ ಅಧಿಕಾರಿಗಳು, ಉನ್ನತ ಉದ್ಯಮ ಮತ್ತು ಶೈಕ್ಷ ಣಿಕ ನಾಯಕರನ್ನು ಒಳಗೊಂಡ ಉನ್ನತ ಮಟ್ಟದ ದುಂಡುಮೇಜಿನ ಸಭೆಗಳು ಮತ್ತು ಪ್ಯಾನಲ್‌ ಚರ್ಚೆಗಳನ್ನು ಒಳಗೊಂಡಿರುತ್ತದೆ; ಪರಿಣಾಮದ ಬಗ್ಗೆ ಸಂಶೋಧನೆಯ ತ್ವರಿತ ಅನುವಾದವನ್ನು ಸಕ್ರಿಯಗೊಳಿಸುವ ಕ್ರಿಯಾ-ಆಧಾರಿತ ಸಂವಾದ; ಭಾರತದಾದ್ಯಂತದ ಅತ್ಯಾಧುನಿಕ ಆವಿಷ್ಕಾರಗಳನ್ನು ಒಳಗೊಂಡ ಡೀಪ್‌ ಟೆಕ್‌ ಸ್ಟಾರ್ಟ್ಅಪ್‌ ಶೋಕೇಸ್‌; ಮತ್ತು ಸಹಯೋಗ ಮತ್ತು ಪಾಲುದಾರಿಕೆಯನ್ನು ಹುಟ್ಟುಹಾಕಲು ಕ್ಷೇತ್ರಗಳಾದ್ಯಂತ ವಿಶೇಷ ನೆಟ್‌ವರ್ಕಿಂಗ್‌ ಅವಕಾಶಗಳು ಸೇರಿವೆ.

ಈ ಸಮಾವೇಶವು ಭಾರತದ ನಾವೀನ್ಯತೆ ಪರಿಸರ ವ್ಯವಸ್ಥೆಯಲ್ಲಿ ದೊಡ್ಡ ಪ್ರಮಾಣದ ಖಾಸಗಿ ಹೂಡಿಕೆಯನ್ನು ವೇಗವರ್ಧಿಸುವ ಗುರಿಯನ್ನು ಹೊಂದಿದೆ; ಫ್ರಾಂಟಿಯರ್‌ ಟೆಕ್‌ನಲ್ಲಿ ಸಂಶೋಧನೆಯಿಂದ ವಾಣಿಜ್ಯೀಕರಣ ಪೈಪ್‌ ಲೈನ್‌ಗಳನ್ನು ವೇಗಗೊಳಿಸುವುದು; ಶೈಕ್ಷಣಿಕ-ಉದ್ಯಮ-ಸರ್ಕಾರಿ ಸಹಭಾಗಿತ್ವವನ್ನು ಬಲಪಡಿಸುವುದು; ಎಎನ್‌ಆರ್‌ಎಫ್‌ ಮತ್ತು ಎಐಸಿಟಿಇ ಇನ್ನೋವೇಶನ್‌ನಂತಹ ರಾಷ್ಟ್ರೀಯ ಉಪಕ್ರಮಗಳನ್ನು ಮುನ್ನಡೆಸುವುದು; ಸಂಸ್ಥೆಗಳಾದ್ಯಂತ ನಾವೀನ್ಯತೆ ಪ್ರವೇಶವನ್ನು ಪ್ರಜಾಸತ್ತಾತ್ಮಕಗೊಳಿಸುವುದು; ಮತ್ತು ವಿಕಸಿತ ಭಾರತ 2047 ಕಡೆಗೆ ರಾಷ್ಟ್ರೀಯ ನಾವೀನ್ಯತೆ ಹೊಂದಾಣಿಕೆಯನ್ನು ಬೆಳೆಸುತ್ತದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
NMC adds over 13,000 MBBS seats, total intake tops 1.4 lakh

Media Coverage

NMC adds over 13,000 MBBS seats, total intake tops 1.4 lakh
NM on the go

Nm on the go

Always be the first to hear from the PM. Get the App Now!
...
Prime Minister extends greetings on Rosh Hashanah to PM Netanyahu, people of Israel and Jewish communities worldwide
September 12, 2026

The Prime Minister, Shri Narendra Modi has extended greetings on the occasion of Rosh Hashanah to Prime Minister of Israel, Benjamin Netanyahu, the people of Israel and Jewish communities across the globe.

The Prime Minister wished that the new year be filled with peace, hope, good health and continued progress for all.

In a post on X, Shri Modi wrote;

“‎Shana Tova!

‎Wishing a very happy Rosh Hashanah to Prime Minister Netanyahu, the people of Israel and Jewish communities across the globe.

‎May the new year be filled with peace, hope, good health and continued progress for all.

‎שנה טובה!

 

‎ מאחל שנה טובה ושמחה לראש הממשלה נתניהו, לעם ישראל ולקהילות היהודיות ברחבי העולם.

 

‎ מי ייתן והשנה החדשה תביא עמה שלום, תקווה, בריאות טובה וקדמה לכולם.


‎ ⁦‪@netanyahu‬⁩”