India is hosting the three-day annual GPAI summit from 12th to 14th December 2023 at Bharat Mandapam in New Delhi
GPAI is a multi-stakeholder initiative with 29 member-countries, which supports cutting-edge research and applied activities on AI-related priorities

ಭಾರತವು ಮೂರು ದಿನಗಳ ವಾರ್ಷಿಕ ಜಿಪಿಎಐ ಶೃಂಗಸಭೆಯನ್ನು 2023 ರ ಡಿಸೆಂಬರ12 ರಿಂದ 14 ರವರೆಗೆ ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಲಾಗಿದೆ.

GPAI 29 ಸದಸ್ಯ-ದೇಶಗಳೊಂದಿಗೆ ಬಹು-ಸ್ಟೇಕ್‌ಹೋಲ್ಡರ್ ಉಪಕ್ರಮವಾಗಿದೆ, ಇದು ಆರ್ಟಿಫಿಶಿಯಲ್‌ ಇಂಟೆಲಿಜನ್ಸ್‌ (AI) ಸಂಬಂಧಿತ ಆದ್ಯತೆಗಳ ಮೇಲೆ ಅತ್ಯಾಧುನಿಕ ಸಂಶೋಧನೆ ಮತ್ತು ಅನ್ವಯಿಕ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 12 ಡಿಸೆಂಬರ 2023 ರಂದು ಸುಮಾರು 5 ಗಂಟೆಗೆ ನವದೆಹಲಿಯ ಭಾರತ ಮಂಟಪದಲ್ಲಿ ಕೃತಕ ಬುದ್ಧಿಮತ್ತೆ (GPAI) ಶೃಂಗಸಭೆಯ ಜಾಗತಿಕ ಶೃಂಗಸಭೆಯನ್ನು ಉದ್ಘಾಟಿಸಲಿದ್ದಾರೆ.

GPAI 29 ಸದಸ್ಯ-ದೇಶಗಳೊಂದಿಗೆ ಬಹು-ಸ್ಟೇಕ್‌ಹೋಲ್ಡರ್ ಉಪಕ್ರಮವಾಗಿದೆ, ಇದು AI-ಸಂಬಂಧಿತ ಆದ್ಯತೆಗಳ ಮೇಲೆ ಅತ್ಯಾಧುನಿಕ ಸಂಶೋಧನೆ ಮತ್ತು ಅನ್ವಯಿಕ ಚಟುವಟಿಕೆಗಳನ್ನು ಬೆಂಬಲಿಸುವ ಮೂಲಕ ಆರ್ಟಿಫಿಶಿಯಲ್‌ ಇಂಟೆಲಿಜನ್ಸ್‌ ಮೇಲಿನ ಸಿದ್ಧಾಂತ ಮತ್ತು ಅಭ್ಯಾಸದ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಭಾರತ 2024 ರಲ್ಲಿ GPAI ನ ಅಧ್ಯಕ್ಷೀಯ ಸ್ಥಾನ ಹೊಂದಿದೆ. 2020 ರಲ್ಲಿ GPAI ಯ ಸ್ಥಾಪಕ ಸದಸ್ಯವಾಗಿತ್ತು. GPAI ಯ ಪ್ರಸ್ತುತ ಒಳಬರುವ ಬೆಂಬಲ ಅಧ್ಯಕ್ಷ ಸ್ಥಾನ ಮತ್ತು 2024 ರಲ್ಲಿ GPAI ಗಾಗಿ ಪ್ರಮುಖ ಅಧ್ಯಕ್ಷ ಸ್ಥಾನ ಹೊಂದಿ ವಾರ್ಷಿಕ GPAI ಶೃಂಗಸಭೆಯನ್ನು ಡಿಸೆಂಬರ 12 ರಿಂದ 14 ರವರೆಗೆ ಆಯೋಜಿಸುತ್ತಿದೆ.

ಶೃಂಗಸಭೆಯ ಸಮಯದಲ್ಲಿ ಆರ್ಟಿಫಿಶಿಯಲ್‌ ಇಂಟೆಲಿಜನ್ಸ್‌ ಮತ್ತು ಜಾಗತಿಕ ಆರೋಗ್ಯ, ಶಿಕ್ಷಣ ಮತ್ತು ಕೌಶಲ್ಯ, ಆರ್ಟಿಫಿಶಿಯಲ್‌ ಇಂಟೆಲಿಜನ್ಸ್‌ ಮತ್ತು ಡೇಟಾ ಆಡಳಿತ, ಮತ್ತು ML ಕಾರ್ಯಾಗಾರದಂತಹ ವೈವಿಧ್ಯಮಯ ವಿಷಯಗಳ ಕುರಿತು ಬಹು ಅವಧಿಗಳನ್ನು ಆಯೋಜಿಸಲಾಗುತ್ತದೆ. ಶೃಂಗಸಭೆಯಲ್ಲಿನ ಇತರ ಆಕರ್ಷಣೆಗಳೆಂದರೆ ರಿಸರ್ಚ್ ಸಿಂಪೋಸಿಯಂ, ಆರ್ಟಿಫಿಶಿಯಲ್‌ ಇಂಟೆಲಿಜನ್ಸ್‌ ಗೇಮ್‌ ಚೇಂಜರ್ಸ್ ಅವಾರ್ಡ್ ಮತ್ತು ಇಂಡಿಯಾ ಆರ್ಟಿಫಿಶಿಯಲ್‌ ಇಂಟೆಲಿಜನ್ಸ್‌ ಎಕ್ಸ್ಪೋ ಇರಲಿದೆ.

ಶೃಂಗಸಭೆಯು 50+ GPAI ತಜ್ಞರು ಮತ್ತು ದೇಶಗಳಾದ್ಯಂತ 150+ ಸ್ಪೀಕರ್‌ಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ. ಇದಲ್ಲದೆ, ಪ್ರಪಂಚದಾದ್ಯಂತದ ಟಾಪ್ ಆರ್ಟಿಫಿಶಿಯಲ್‌ ಇಂಟೆಲಿಜನ್ಸ್‌  ಗೇಮ್‌ಚೇಂಜರ್‌ಗಳು ಇಂಟೆಲ್‌, ರಿಲಯನ್ಸ್‌ ಜಿಯೋ, ಗೂಗಲ್‌, ಮೆಟಾ, ಎ.ಡಬ್ಲು.ಎಸ್‌, ಯೋಟಾ, ನೆಟ್‌ ವೆಬ್‌, ಪೇ.ಟಿ.ಎಂ, ಮೈಕ್ರೋಸಾಫ್ಟ್‌, ಮಾಸ್ಟರ್‌ ಕಾರ್ಡ್‌, ಎನ್‌ ಐಸಿ, ಎಸ್‌ ಟಿಪಿಐ, ಇಮ್ಮರ್ಸ್‌, ಜಿಯೋ ಹ್ಯಾಪ್ಟಿಕ್‌, ಭಾಷಿಣಿ ಇತ್ಯಾದಿ ಸೇರಿದಂತೆ ವಿವಿಧ ಸಂಸ್ಥೆಗಳು ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಿವೆ. 

ಯುವ ಆರ್ಟಿಫಿಶಿಯಲ್‌ ಇಂಟೆಲಿಜನ್ಸ್‌ ಉಪಕ್ರಮ ಮತ್ತು ಸ್ಟಾರ್ಟ್-ಅಪ್‌ಗಳ ಅಡಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ತಮ್ಮ ಆರ್ಟಿಫಿಶಿಯಲ್‌ ಇಂಟೆಲಿಜನ್ಸ್‌ ಮಾದರಿಗಳನ್ನು ಇಲ್ಲಿ ಪ್ರದರ್ಶಿಸಲಿದ್ದಾರೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India records highest-ever startup surge with 55,200 recognised in FY26

Media Coverage

India records highest-ever startup surge with 55,200 recognised in FY26
NM on the go

Nm on the go

Always be the first to hear from the PM. Get the App Now!
...
Prime Minister expresses grief over mishap in Coimbatore
April 17, 2026

The Prime Minister, Shri Narendra Modi, has expressed deep anguish over the mishap in Coimbatore, Tamil Nadu.

Shri Modi said that he is distressed to hear about the incident and extended his heartfelt condolences to those who have lost their loved ones. He also prayed for the speedy recovery of those injured in the mishap.

The Prime Minister’s Office posted on X;

“Distressed to hear about the mishap in Coimbatore, Tamil Nadu. I extend my heartfelt condolences to those who have lost their loved ones in the mishap. Prayers for the speedy recovery of those injured: PM @narendramodi”