ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪರೀಕ್ಷಾ ಪೇ ಚರ್ಚಾ (ಪಿಪಿಸಿ) 2026ರ 9ನೇ ಆವೃತ್ತಿಯಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದದ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಪಿಪಿಸಿ 2026ರ ಎರಡನೇ ಸಂಚಿಕೆಯಲ್ಲಿ ಕೊಯಮತ್ತೂರು, ಛತ್ತೀಸ್‌ಗಢ, ಗುಜರಾತ್‌ ಮತ್ತು ಅಸ್ಸಾಂನ ಪರೀಕ್ಷಾ ಯೋಧರೊಂದಿಗೆ ಪ್ರಧಾನಮಂತ್ರಿ ಅವರು ಅನೌಪಚಾರಿಕ ಸಂವಾದ ನಡೆಸಿದರು. ‘ಪರೀಕ್ಷಾ ಪೇ ಚರ್ಚಾ’ದ ವಿಶೇಷ ಆವೃತ್ತಿಗೆ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಶ್ರೀ ನರೇಂದ್ರ ಮೋದಿ ಅವರು, ಈ ಬಾರಿ ಕಾರ್ಯಕ್ರಮವನ್ನು ದೇಶದ ವಿವಿಧ ಭಾಗಗಳಲ್ಲಿನಡೆಸಲಾಗಿದೆ ಎಂದು ಹೇಳಿದರು.


ಶ್ರೀ ನರೇಂದ್ರ ಮೋದಿ ಅವರು ತಮ್ಮ ಎಕ್ಸ್‌ ಖಾತೆಯಲ್ಲಿಈ ರೀತಿ ಸಂದೇಶ ತಿಳಿಸಿದ್ದಾರೆ:

 

‘‘ತಮಿಳುನಾಡಿನ ಕೊಯಮತ್ತೂರಿನಲ್ಲಿ #ParikshaPeCharcha26 ಸಮಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದು ಒಂದು ಅದ್ಭುತ ಅನುಭವವಾಗಿತ್ತು. ಸ್ಟಾರ್ಟ್‌ಅಪ್‌ಗಳು ಮತ್ತು ಕೃತಕ ಬುದ್ಧಿಮತ್ತೆಯಿಂದ ಸ್ವಯಂ ಶಿಸ್ತು ಮತ್ತು ವಿಕಸಿತ ಭಾರತವನ್ನು ನಿರ್ಮಿಸುವ ಕನಸುಗಳವರೆಗೆ, ಇಂದಿನ ಯುವ ಮನಸ್ಸುಗಳ ಕುತೂಹಲ ಮತ್ತು ಸ್ಪಷ್ಟತೆ ಅತ್ಯುತ್ತಮವಾಗಿದೆ.’

 

 

''#ParikshaPeCharcha26 ಸಮಯದಲ್ಲಿ, ಛತ್ತೀಸ್‌ಗಢದ ವಿದ್ಯಾರ್ಥಿಗಳೊಂದಿಗಿನ ಸಂಭಾಷಣೆಗಳು ಕುತೂಹಲಕಾರಿ, ಚಿಂತನಶೀಲ ಮತ್ತು ಜಾಗೃತ ಪೀಳಿಗೆಯನ್ನು ಬಹಿರಂಗಪಡಿಸಿವೆ. ಅಧ್ಯಯನ ಮತ್ತು ಕ್ರೀಡೆಗಳನ್ನು ಸಮತೋಲನಗೊಳಿಸುವುದರಿಂದ ಹಿಡಿದು ಪರಿಸರದ ಬಗ್ಗೆ ಕಾಳಜಿ ವಹಿಸುವುದು ಮತ್ತು ನಾಯಕತ್ವದ ಗುಣಗಳನ್ನು ಅಭಿವೃದ್ಧಿಪಡಿಸುವವರೆಗೆ, ಅವರ ಪ್ರಶ್ನೆಗಳು ಚಿಂತನೆಯ ಸ್ಪಷ್ಟತೆಯನ್ನು ಪ್ರತಿಬಿಂಬಿಸುತ್ತವೆ,’’

 

 

‘‘ಗುಜರಾತ್‌ನಲ್ಲಿ #ParikshaPeCharcha26 ಕೇವಲ ಪರೀಕ್ಷೆಯ ತಯಾರಿಯನ್ನು ಮೀರಿದೆ. ಅವರ ಪ್ರಶ್ನೆಗಳು ಕಲಿಯುವ ಮತ್ತು ಆತ್ಮವಿಶ್ವಾಸದಿಂದ ಬೆಳೆಯುವ ಆಳವಾದ ಬಯಕೆಯನ್ನು ಪ್ರತಿಬಿಂಬಿಸುತ್ತವೆ. ವಿದ್ಯಾರ್ಥಿಗಳು ನಿರ್ಣಾಯಕ ಸಂದರ್ಭಗಳಲ್ಲಿಒತ್ತಡವನ್ನು ನಿರ್ವಹಿಸುವುದು, ಶಿಕ್ಷಕರ ಪ್ರಮುಖ ಪಾತ್ರ ಮತ್ತು ಹೆಚ್ಚಿನವುಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು. ಅವರು ಅದ್ಭುತವಾದ ವಾರ್ಲಿ, ಪಿಥೋರಾ ಮತ್ತು ಲಿಪ್ಪನ್‌ ಕಲೆಯನ್ನು ಸಹ ಪ್ರದರ್ಶಿಸಿದರು,’’

 

 

‘‘ಒತ್ತಡ ಮತ್ತು ಹೋಲಿಕೆಗಳನ್ನು ನಿರ್ವಹಿಸುವುದರಿಂದ ಹಿಡಿದು ಆತ್ಮವಿಶ್ವಾಸ ಮತ್ತು ಆರೋಗ್ಯಕರ ದಿನಚರಿಯನ್ನು ನಿರ್ಮಿಸುವವರೆಗೆ, ಅಸ್ಸಾಂನ ವಿದ್ಯಾರ್ಥಿಗಳೊಂದಿಗೆ #ParikshaPeCharcha26 ಎಲ್ಲವನ್ನೂ ಒಳಗೊಂಡಿದೆ. ಪರೀಕ್ಷೆಗಳಲ್ಲಿಉತ್ತಮವಾಗಿ ಕಾರ್ಯನಿರ್ವಹಿಸುವ, ಬೆಳೆಯುವ ಅವರ ಆಕಾಂಕ್ಷೆಗಳನ್ನು ಇದು ಪ್ರತಿಬಿಂಬಿಸುತ್ತದೆ, ಅದೇ ಸಮಯದಲ್ಲಿ ತಮ್ಮ ಬೇರುಗಳು ಮತ್ತು ಸಂಸ್ಕೃತಿಯೊಂದಿಗೆ ಸಂಪರ್ಕದಲ್ಲಿರಬೇಕು,’’ ಎಂದು ತಿಳಿಸಿದ್ದಾರೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
One App For 2,400-Plus Government Services: How UMANG Is Changing Access In India

Media Coverage

One App For 2,400-Plus Government Services: How UMANG Is Changing Access In India
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 27 ಮಾರ್ಚ್ 2026
March 27, 2026

Relief, Revival & Rise: How PM Modi is Building a Modern, Rooted & Self-Reliant India