ಪ್ರಧಾನಮಂತ್ರಿಯವರು ಇಂದು ಬ್ಯಾಂಕಾಕ್ ನ ದುಸಿತ್ ಅರಮನೆಯಲ್ಲಿ ಥೈಲ್ಯಾಂಡ್ ಸಾಮ್ರಾಜ್ಯದ ಘನತೆವೆತ್ತ ದೊರೆ ಮಹಾ ವಜಿರಲಾಂಗ್ ಕಾರ್ನ್ ಫ್ರಾ ವಜಿರಕ್ಲಾವೊಯುಹುವಾ ಮತ್ತು ಘನತೆವೆತ್ತ ರಾಣಿ ಸುಥಿಡಾ ಬಜ್ರಸುಧಾಬಿಮಲಾಲಕ್ಷಣ ಅವರೊಂದಿಗೆ ಔಪಚಾರಿಕ ಸಭೆಯಲ್ಲಿ ಪಾಲ್ಗೊಂಡರು.
ಭಾರತ ಮತ್ತು ಥೈಲ್ಯಾಂಡ್ ನಡುವಿನ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಅವರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಈ ನಿಟ್ಟಿನಲ್ಲಿ, ಕಳೆದ ವರ್ಷ ಭಾರತದಿಂದ ಥೈಲ್ಯಾಂಡ್ ಗೆ ರವಾನಿಸಲ್ಪಟ್ಟ ಭಗವಾನ್ ಬುದ್ಧನ ಅವಶೇಷಗಳು ಮತ್ತು ಉಭಯ ದೇಶಗಳ ನಡುವಿನ ಜನರ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವಲ್ಲಿ ಈ ಉಪಕ್ರಮವು ಬೀರಿದ ಸಕಾರಾತ್ಮಕ ಪರಿಣಾಮದ ಬಗ್ಗೆ ಅವರು ಮಾತನಾಡಿದರು. ಉಭಯ ದೇಶಗಳ ನಡುವಿನ ಬಹುಮುಖ ಸಂಬಂಧಗಳನ್ನು ಮತ್ತಷ್ಟು ಸಬಲಪಡಿಸುವ ಮಾರ್ಗಗಳ ಬಗ್ಗೆಯೂ ಅವರು ಚರ್ಚೆಯನ್ನು ನಡೆಸಿದರು.
Called on Maha Vajiralongkorn, the King of Thailand. We talked about the robust friendship between India and Thailand and how to make it even stronger. pic.twitter.com/FJE958U1mn
— Narendra Modi (@narendramodi) April 4, 2025


