ಆಯುಷ್ಮಾನ್ ಭಾರತ ಯೋಜನೆಯು 7 ವರ್ಷಗಳನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಆಯುಷ್ಮಾನ್ ಭಾರತ್ ಲಕ್ಷಾಂತರ ನಾಗರಿಕರಿಗೆ ಕೈಗೆಟುಕುವ ಆರ್ಥಿಕ ರಕ್ಷಣೆ ಮತ್ತು ಘನತೆಯನ್ನು ನೀಡುವ ಮೂಲಕ ಗುಣಮಟ್ಟದ ಆರೋಗ್ಯ ರಕ್ಷಣೆಯ ಉಪಯೋಗವನ್ನು ಮರು ವ್ಯಾಖ್ಯಾನಿಸಿದೆ ಎಂದು ಹೇಳಿದ್ದಾರೆ.
X ನಲ್ಲಿ ಪೋಸ್ಟ್ ಮಾಡಿದ MyGovIndia ನ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಧಾನಿಯವರು,
"ಇಂದು ನಾವು #7YearsOfAyushmanBharat ಆಚರಿಸುತ್ತಿದ್ದೇವೆ! ಇದು ಭವಿಷ್ಯದ ನಿರೀಕ್ಷಿತ ಅಗತ್ಯಗಳನ್ನು ಮತ್ತು ಜನರಿಗೆ ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ಆರೋಗ್ಯ ಸೇವೆಯನ್ನು ನೀಡುವತ್ತ ಗಮನಹರಿಸಿದ ಒಂದು ಉಪಕ್ರಮವಾಗಿದೆ. ಇದಕ್ಕೆ ಧನ್ಯವಾದಗಳು, ಭಾರತವು ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಒಂದು ಕ್ರಾಂತಿಯನ್ನು ಕಾಣುತ್ತಿದೆ. ಇದು ಆರ್ಥಿಕ ರಕ್ಷಣೆ ಮತ್ತು ಘನತೆಯನ್ನು ನೀಡುತ್ತದೆ. ಪ್ರಮಾಣ, ಸಹಾನುಭೂತಿ ಮತ್ತು ತಂತ್ರಜ್ಞಾನವು ಮಾನವ ಸಬಲೀಕರಣವನ್ನು ಹೇಗೆ ಮತ್ತಷ್ಟು ಹೆಚ್ಚಿಸಬಹುದು ಎಂಬುದನ್ನು ಭಾರತ ಈ ಉಪಕ್ರಮದ ಮೂಲಕ ತೋರಿಸಿದೆ" ಎಂದು ಟ್ವೀಟ್ ಮಾಡಿದ್ದಾರೆ.
Today we mark #7YearsOfAyushmanBharat! This was an initiative that anticipated the needs of the future and focussed on ensuring top quality as well as affordable healthcare for people. Thanks to it, India is witnessing a revolution in public healthcare. It has ensured financial… https://t.co/ys5oc9QnXf
— Narendra Modi (@narendramodi) September 23, 2025


