ನವಕರ್ ಮಹಾಮಂತ್ರವು ಕೇವಲ ಮಂತ್ರವಲ್ಲ, ಅದು ನಮ್ಮ ನಂಬಿಕೆಯ ಮೂಲ: ಪ್ರಧಾನಮಂತ್ರಿ
ನವಕರ್ ಮಹಾಮಂತ್ರವು ನಮ್ರತೆ, ಶಾಂತಿ ಮತ್ತು ಸಾರ್ವತ್ರಿಕ ಸಾಮರಸ್ಯವನ್ನು ಸಾಕಾರಗೊಳಿಸುತ್ತದೆ: ಪ್ರಧಾನಮಂತ್ರಿ
ಪಂಚ ಪರಮೇಷ್ಠಿಯ ಆರಾಧನೆಯೊಂದಿಗೆ ನವಕರ್ ಮಹಾಮಂತ್ರವು ಸರಿಯಾದ ಜ್ಞಾನ, ಗ್ರಹಿಕೆ ಮತ್ತು ನಡವಳಿಕೆ ಮತ್ತು ಮೋಕ್ಷಕ್ಕೆ ಕಾರಣವಾಗುವ ಮಾರ್ಗದ ಸಂಕೇತವಾಗಿದೆ: ಪ್ರಧಾನಮಂತ್ರಿ
ಜೈನ ಸಾಹಿತ್ಯವು ಭಾರತದ ಬೌದ್ಧಿಕ ವೈಭವದ ಬೆನ್ನೆಲುಬು: ಪ್ರಧಾನಮಂತ್ರಿ
ಹವಾಮಾನ ಬದಲಾವಣೆ ಇಂದಿನ ಅತಿದೊಡ್ಡ ಬಿಕ್ಕಟ್ಟು ಮತ್ತು ಅದಕ್ಕೆ ಪರಿಹಾರವು ಸುಸ್ಥಿರ ಜೀವನಶೈಲಿಯಾಗಿದೆ, ಇದನ್ನು ಜೈನ ಸಮುದಾಯವು ಶತಮಾನಗಳಿಂದ ಆಚರಿಸುತ್ತಿದೆ ಮತ್ತು ಭಾರತದ ಮಿಷನ್ ಲೈಫ್‌ಗೆ ಸಂಪೂರ್ಣ ಹೊಂದಿಕೆಯಾಗುತ್ತದೆ: ಪ್ರಧಾನಮಂತ್ರಿ
ನವಕರ್ ಮಹಾಮಂತ್ರ ದಿನಗಳಲ್ಲಿ 9 ಸಂಕಲ್ಪಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ಇಂದು ನವಕರ್ ಮಹಾಮಂತ್ರ ದಿನವನ್ನು ಉದ್ಘಾಟಿಸಿದರು ಮತ್ತು ಅದರಲ್ಲಿ ಭಾಗವಹಿಸಿದರು. ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನವಕರ್ ಮಂತ್ರದ ಆಳವಾದ ಆಧ್ಯಾತ್ಮಿಕ ಅನುಭವವನ್ನು ಪ್ರಮುಖವಾಗಿ ಪ್ರಸ್ತಾಪಿಸಿ, ಮನಸ್ಸಿಗೆ ಶಾಂತಿ ಮತ್ತು ಸ್ಥಿರತೆಯನ್ನು ತರುವ ಸಾಮರ್ಥ್ಯವನ್ನು ಒತ್ತಿ ಹೇಳಿದರು. ಪದಗಳು ಮತ್ತು ಆಲೋಚನೆಗಳನ್ನು ಮೀರಿದ, ಮನಸ್ಸು ಮತ್ತು ಪ್ರಜ್ಞೆಯೊಳಗೆ ಆಳವಾಗಿ ಪ್ರತಿಧ್ವನಿಸುವ ಅಸಾಧಾರಣ ಶಾಂತಿಯ ಭಾವನೆಯ ಬಗ್ಗೆ ಅವರು ಮಾತನಾಡಿದರು. ನವಕರ್ ಮಂತ್ರದ ಮಹತ್ವವನ್ನು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು, ಅದರ ಪವಿತ್ರ ಶ್ಲೋಕಗಳನ್ನು ಪಠಿಸಿದರು ಮತ್ತು ಮಂತ್ರವನ್ನು ಶಕ್ತಿಯ ನಿರಂತರ ಹರಿವು, ಸ್ಥಿರತೆ, ಸಮಚಿತ್ತತೆ ಮತ್ತು ಪ್ರಜ್ಞೆ ಮತ್ತು ಆಂತರಿಕ ಬೆಳಕಿನ ಸಾಮರಸ್ಯದ ಲಯವನ್ನು ಸಾಕಾರಗೊಳಿಸುತ್ತದೆ ಎಂದು ವಿವರಿಸಿದರು. ತಮ್ಮ ವೈಯಕ್ತಿಕ ಅನುಭವದ ಬೆಳಕು ಚೆಲ್ಲುತ್ತಾ, ನವಕರ್ ಮಂತ್ರದ ಆಧ್ಯಾತ್ಮಿಕ ಶಕ್ತಿಯನ್ನು ತಮ್ಮೊಳಗೆ ಹೇಗೆ ಅನುಭವಿಸುತ್ತಿದ್ದಾರೆ ಎಂಬುದನ್ನು ಅವರು ಹಂಚಿಕೊಂಡರು. ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಇದೇ ರೀತಿಯ ಸಾಮೂಹಿಕ ಮಂತ್ರ ಪಠಣ ಕಾರ್ಯಕ್ರಮವನ್ನು ವೀಕ್ಷಿಸಿದ ಅವರು, ಅದು ತನ್ನ ಮೇಲೆ ಗಾಢ ಪ್ರಭಾವ ಬೀರಿತು ಎಂದರು. ದೇಶ ಮತ್ತು ವಿದೇಶಗಳಾದ್ಯಂತ ಲಕ್ಷಾಂತರ ಸದ್ಗುಣಶೀಲ ಆತ್ಮಗಳು ಏಕೀಕೃತ ಪ್ರಜ್ಞೆಯಲ್ಲಿ ಒಟ್ಟಿಗೆ ಸೇರುವ ಅಪ್ರತಿಮ ಅನುಭವವನ್ನು ಪ್ರಧಾನಿ ಪ್ರಮುಖವಾಗಿ ಉಲ್ಲೇಖಿಸಿದರು. ಸಾಮೂಹಿಕ ಶಕ್ತಿ ಮತ್ತು ಮೇಳೈಸಿದ ಪದಗಳ ಬಗ್ಗೆ ಅವರು ಉಲ್ಲೇಖಿಸಿ, ಇದು ನಿಜವಾಗಿಯೂ ಅಸಾಧಾರಣ ಮತ್ತು ಅಭೂತಪೂರ್ವ ಎಂದು ವಿವರಿಸಿದರು.

ಜೈನ ಧರ್ಮದ ಪ್ರಭಾವವು ಪ್ರತಿ ಬೀದಿಯಲ್ಲೂ ಸ್ಪಷ್ಟವಾಗಿ ಕಂಡುಬರುವ ಗುಜರಾತ್‌ನಲ್ಲಿ ತಮ್ಮ ಬೇರುಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ, ಚಿಕ್ಕ ವಯಸ್ಸಿನಿಂದಲೇ ಜೈನ ಆಚಾರ್ಯರ ಸಹವಾಸದಲ್ಲಿ ಇರುವ ಸೌಭಾಗ್ಯ ತನಗೆ ದೊರಕಿತ್ತು ಎಂಬುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. "ನವಕರ ಮಂತ್ರವು ಕೇವಲ ಮಂತ್ರವಲ್ಲ, ನಂಬಿಕೆಯ ಮೂಲ ಮತ್ತು ಜೀವನದ ಸಾರ" ಎಂದು ಅವರು ಒತ್ತಿ ಹೇಳಿದರು. ಆಧ್ಯಾತ್ಮಿಕತೆಯನ್ನು ಮೀರಿ, ವ್ಯಕ್ತಿಗಳು ಮತ್ತು ಸಮಾಜಕ್ಕೆ ಮಾರ್ಗದರ್ಶನ ನೀಡುವ ನವಕರ ಮಂತ್ರದ ಪ್ರತಿಯೊಂದು ಶ್ಲೋಕ ಮತ್ತು ಪ್ರತಿಯೊಂದು ಅಕ್ಷರವೂ ಸಹ ಅಳವಾದ ಅರ್ಥವನ್ನು ಹೊಂದಿದೆ ಎಂದು ಅವರು ಪ್ರಮುಖವಾಗಿ ಉಲ್ಲೇಖಿಸಿದರು. ಮಂತ್ರವನ್ನು ಪಠಿಸುವಾಗ, ಒಬ್ಬರು ಪಂಚ ಪರಮೇಷ್ಠಿಗೆ ನಮಸ್ಕರಿಸಿ ಅದನ್ನು ವಿವರಿಸುತ್ತಾರೆ ಎಂದು ಅವರು ಹೇಳಿದರು. "ಕೇವಲ್ ಜ್ಞಾನ"ವನ್ನು ಪಡೆದ ಮತ್ತು "ಭವ್ಯ ಜೀವಗಳನ್ನು" ಮಾರ್ಗದರ್ಶಿಸುವ ಅರಿಹಂತರು 12 ದೈವಿಕ ಗುಣಗಳನ್ನು ಹೊಂದಿದ್ದಾರೆ, ಆದರೆ ಎಂಟು ಕರ್ಮಗಳನ್ನು ನಿರ್ಮೂಲನೆ ಮಾಡಿದ ಸಿದ್ಧರು ಮೋಕ್ಷವನ್ನು ಪಡೆದ ಮತ್ತು ಎಂಟು ಶುದ್ಧ ಗುಣಗಳನ್ನು ಹೊಂದಿದ್ದಾರೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಆಚಾರ್ಯರು ಮಹಾವ್ರತವನ್ನು ಅನುಸರಿಸುತ್ತಾರೆ ಮತ್ತು ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಾರೆ, 36 ಸದ್ಗುಣಗಳನ್ನು ಸಾಕಾರಗೊಳಿಸುತ್ತಾರೆ, ಆದರೆ ಉಪಾಧ್ಯಾಯರು 25 ಗುಣಗಳಿಂದ ಸಮೃದ್ಧವಾಗಿರುವ ಮೋಕ್ಷ ಮಾರ್ಗದ ಜ್ಞಾನವನ್ನು ನೀಡುತ್ತಾರೆ ಎಂದು ಅವರು ಹೇಳಿದರು. ಸಾಧುಗಳು ತಪಸ್ಸು ಮಾಡುವ ಮೂಲಕ ತಮ್ಮನ್ನು ತಾವು ಸುಧಾರಿಸಿಕೊಂಡು 27 ಶ್ರೇಷ್ಠ ಗುಣಗಳನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು. ಈ ಪೂಜ್ಯ ಜೀವಿಗಳಲ್ಲಿ ಪ್ರತಿಯೊಬ್ಬರೊಂದಿಗೆ ಸಂಬಂಧಿಸಿದ ಆಧ್ಯಾತ್ಮಿಕ ಆಳ ಮತ್ತು ಸದ್ಗುಣಗಳನ್ನು ಅವರು ಪ್ರಸ್ತಾಪಿಸಿದರು.

 

“ನವಕರ ಮಂತ್ರವನ್ನು ಪಠಿಸುವಾಗ ಪ್ರತಿಯೊಬ್ಬರು 108 ದೈವಿಕ ಗುಣಗಳಿಗೆ ನಮಸ್ಕರಿಸುತ್ತಾರೆ ಮತ್ತು ಮಾನವೀಯತೆಯ ಕಲ್ಯಾಣವನ್ನು ನೆನಪಿಸಿಕೊಳ್ಳುತ್ತಾರೆ" ಎಂದ ಶ್ರೀ ನರೇಂದ್ರ ಮೋದಿ ಅವರು,  ಜ್ಞಾನ ಮತ್ತು ಕ್ರಿಯೆಯು ಜೀವನದ ನಿಜವಾದ ನಿರ್ದೇಶನಗಳಾಗಿವೆ, ಗುರುಗಳು ಮಾರ್ಗದರ್ಶಕ ಬೆಳಕಾಗಿ ಮತ್ತು ಒಳಗಿನಿಂದ ಹೊರಹೊಮ್ಮುವ ಮಾರ್ಗವಾಗಿದೆ ಎಂಬುದನ್ನು ಮಂತ್ರವು ನಮಗೆ ನೆನಪಿಸುತ್ತದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದರು. ಆತ್ಮ ನಂಬಿಕೆ ಮತ್ತು ಸ್ವಂತ ಪ್ರಯಾಣದ ಆರಂಭವನ್ನು ಪ್ರೇರೇಪಿಸುವ ನವಕರ ಮಂತ್ರದ ಬೋಧನೆಗಳನ್ನು ಅವರು ಒತ್ತಿ ಹೇಳಿದರು. ನಿಜವಾದ ಶತ್ರು ಒಳಗಿದೆ - ನಕಾರಾತ್ಮಕ ಆಲೋಚನೆಗಳು, ಅಪನಂಬಿಕೆ, ಹಗೆತನ ಮತ್ತು ಸ್ವಾರ್ಥ - ಮತ್ತು ಅವುಗಳನ್ನು ಜಯಿಸುವುದೇ ನಿಜವಾದ ಗೆಲುವು ಎಂದು ಅವರು ಹೇಳಿದರು. ಜೈನ ಧರ್ಮವು ಬಾಹ್ಯ ಪ್ರಪಂಚಕ್ಕಿಂತ ಹೆಚ್ಚಾಗಿ ತಮ್ಮನ್ನು ತಾವು ಜಯಿಸಲು ವ್ಯಕ್ತಿಗಳನ್ನು ಪ್ರೇರೇಪಿಸುತ್ತದೆ ಎಂದು ಅವರು ಒತ್ತಿ ಹೇಳಿದರು. “ಸ್ವಯಂ ವಿಜಯವು ಒಬ್ಬರನ್ನು ಅರಿಹಂತರಾಗುವತ್ತ ಕರೆದೊಯ್ಯುತ್ತದೆ" ಎಂಧು ಅವರು ಹೇಳಿದರು. ನವಕರ ಮಂತ್ರವು ಬೇಡಿಕೆಯಲ್ಲ ಆದರೆ ಒಂದು ಮಾರ್ಗವಾಗಿದೆ - ವ್ಯಕ್ತಿಗಳನ್ನು ಒಳಗಿನಿಂದ ಶುದ್ಧೀಕರಿಸುವ ಮತ್ತು ಸಾಮರಸ್ಯ ಮತ್ತು ಸದ್ಭಾವನೆಯಡೆಗೆ ಮಾರ್ಗದರ್ಶನ ಮಾಡುವ ಮಾರ್ಗವಾಗಿದೆ ಎಂದು ಅವರು ಹೇಳಿದರು.

ನವಕರ ಮಂತ್ರವು ನಿಜವಾಗಿಯೂ ಮಾನವ ಧ್ಯಾನ, ಅಭ್ಯಾಸ ಮತ್ತು ಸ್ವಯಂ ಶುದ್ಧೀಕರಣದ ಮಂತ್ರವಾಗಿದೆ" ಎಂದು ಪ್ರಧಾನಿ ಉದ್ಗರಿಸಿದರು, ಅದರ ಜಾಗತಿಕ ದೂರದೃಷ್ಟಿ ಮತ್ತು ಅದರ ಕಾಲಾತೀತ ಸ್ವರೂಪವನ್ನು ಎತ್ತಿ ತೋರಿಸಿದರು. ಇದು ಇತರ ಭಾರತೀಯ ಮೌಖಿಕ ಮತ್ತು ಧರ್ಮಗ್ರಂಥ ಸಂಪ್ರದಾಯಗಳಂತೆ, ಮೊದಲು ಮೌಖಿಕವಾಗಿ, ಆನಂತರ ಶಾಸನಗಳ ಮೂಲಕ ಮತ್ತು ಅಂತಿಮವಾಗಿ ಪ್ರಾಕೃತ ಹಸ್ತಪ್ರತಿಗಳ ಮೂಲಕ ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸಲ್ಪಟ್ಟಿದೆ - ಇಂದಿಗೂ ಮಾನವಕುಲಕ್ಕೆ ಮಾರ್ಗದರ್ಶನ ನೀಡುತ್ತಿದೆ. "ನವಕರ ಮಂತ್ರವು ಪಂಚ ಪರಮೇಷ್ಠಿಯನ್ನು ಪೂಜಿಸುವುದರ ಜೊತೆಗೆ, ಸರಿಯಾದ ಜ್ಞಾನ, ಸರಿಯಾದ ಗ್ರಹಿಕೆ ಮತ್ತು ಸರಿಯಾದ ನಡವಳಿಕೆಯನ್ನು ಸಾಕಾರಗೊಳಿಸುತ್ತದೆ, ವಿಮೋಚನೆಗೆ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ" ಎಂದು ಅವರು ಒತ್ತಿ ಹೇಳಿದರು. ಪರಿಪೂರ್ಣತೆಗೆ ಕಾರಣವಾಗುವ ಜೀವನದ ಒಂಬತ್ತು ಅಂಶಗಳ ಮಹತ್ವವನ್ನು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ, ಭಾರತೀಯ ಸಂಸ್ಕೃತಿಯಲ್ಲಿ ಒಂಬತ್ತನೇ ಸಂಖ್ಯೆಯ ವಿಶೇಷ ಮಹತ್ವವನ್ನು ಉಲ್ಲೇಖಿಸಿದರು. ಜೈನ ಧರ್ಮದಲ್ಲಿ ಒಂಬತ್ತನೇ ಸಂಖ್ಯೆಯ ಪ್ರಾಮುಖ್ಯತೆಯನ್ನು ವಿವರಿಸಿದರು, ನವಕರ ಮಂತ್ರ, ಒಂಬತ್ತು ಅಂಶಗಳು ಮತ್ತು ಒಂಬತ್ತು ಸದ್ಗುಣಗಳನ್ನು ಉಲ್ಲೇಖಿಸಿದರು, ಜೊತೆಗೆ ಒಂಬತ್ತು ನಿಧಿಗಳು, ಒಂಬತ್ತು ದ್ವಾರಗಳು, ಒಂಬತ್ತು ಗ್ರಹಗಳು, ದುರ್ಗೆಯ ಒಂಬತ್ತು ರೂಪಗಳು ಮತ್ತು ನವಧ ಭಕ್ತಿಯಂತಹ ಇತರ ಸಂಪ್ರದಾಯಗಳಲ್ಲಿ ಅದರ ಇರುವಿಕೆಯನ್ನು ವಿವರಿಸಿದರು. ಒಂಬತ್ತು ಬಾರಿ ಅಥವಾ 27, 54, ಅಥವಾ 108 ನಂತಹ ಒಂಬತ್ತು ಗುಣಕಗಳಲ್ಲಿ ಪಠಣಗಳ ಪುನರಾವರ್ತನೆಯು ಒಂಬತ್ತು ಸಂಖ್ಯೆಯಿಂದ ಪ್ರತಿನಿಧಿಸುವ ಪರಿಪೂರ್ಣತೆಯ ಸಂಕೇತವಾಗಿದೆ ಎಂದು ಅವರು ಒತ್ತಿ ಹೇಳಿದರು. ಒಂಬತ್ತು ಸಂಖ್ಯೆ ಕೇವಲ ಗಣಿತವಲ್ಲ, ಆದರೆ ತತ್ವಶಾಸ್ತ್ರವಾಗಿದೆ, ಏಕೆಂದರೆ ಅದು ಪರಿಪೂರ್ಣತೆಯನ್ನು ಪ್ರತಿನಿಧಿಸುತ್ತದೆ ಎಂದು ಪ್ರಧಾನಿ ವಿವರಿಸಿದರು. ಪರಿಪೂರ್ಣತೆಯನ್ನು ಸಾಧಿಸಿದ ನಂತರ, ಮನಸ್ಸು ಮತ್ತು ಬುದ್ಧಿಶಕ್ತಿ ಸ್ಥಿರಗೊಳ್ಳುತ್ತದೆ ಮತ್ತು ಮೇಲೇರುತ್ತದೆ, ಹೊಸ ವಿಷಯಗಳ ಬಯಕೆಯಿಂದ ಮುಕ್ತವಾಗುತ್ತದೆ ಎಂದು ಅವರು ಹೇಳಿದರು. ಪ್ರಗತಿಯ ನಂತರವೂ, ಒಬ್ಬರು ಅವುಗಳ ಸಾರದಲ್ಲಿ ಬೇರೂರಿರುತ್ತಾರೆ ಮತ್ತು ಅದು ನವಕರ ಮಂತ್ರದ ಸಾರವಾಗಿದೆ ಎಂದು ಅವರು ಹೇಳಿದರು.

 

ನವಕರ್ ಮಂತ್ರದ ತತ್ವಶಾಸ್ತ್ರವು ಅಭಿವೃದ್ಧಿ ಹೊಂದಿದ ಭಾರತದ ದೂರದೃಷ್ಟಿಗೆ ಹೊಂದಿಕೆಯಾಗುತ್ತದೆ ಎಂದು ಒತ್ತಿ ಹೇಳಿದ ಪ್ರಧಾನಿ, ಕೆಂಪು ಕೋಟೆಯಲ್ಲಿ ನೀಡಿದ್ದ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿ, ಅಭಿವೃದ್ಧಿ ಹೊಂದಿದ ಭಾರತವು ಪ್ರಗತಿ ಮತ್ತು ಪರಂಪರೆ ಎರಡನ್ನೂ ಸೂಚಿಸುತ್ತದೆ - ನಿಲ್ಲದ ಅಥವಾ ಹಿಂಜರಿಯದ ರಾಷ್ಟ್ರ, ಹೊಸ ಎತ್ತರವನ್ನು ತಲುಪುತ್ತದೆ, ಆದರೆ ಅದರ ಶಕ್ತಿ ಸಂಪ್ರದಾಯಗಳಲ್ಲಿ ಬೇರೂರಿದೆ ಎಂದು ಒತ್ತಿ ಹೇಳಿದರು. ಅಭಿವೃದ್ಧಿ ಹೊಂದಿದ ಭಾರತವು ತನ್ನ ಸಂಸ್ಕೃತಿಯ ಬಗ್ಗೆ ಹೆಮ್ಮೆಪಡುತ್ತದೆ ಎಂದು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ತೀರ್ಥಂಕರರ ಬೋಧನೆಗಳ ಸಂರಕ್ಷಣೆಯನ್ನು ಅವರು ಒತ್ತಿ ಹೇಳಿದರು. ಭಗವಾನ್ ಮಹಾವೀರರ 2550ನೇ ನಿರ್ವಾಣ ಮಹೋತ್ಸವದ ರಾಷ್ಟ್ರವ್ಯಾಪಿ ಆಚರಣೆಯನ್ನು ನೆನಪಿಸಿಕೊಂಡ ಶ್ರೀ ನರೇಂದ್ರ ಮೋದಿ, ತೀರ್ಥಂಕರರಿಗೆ ಸೇರಿದ ಪ್ರಾಚೀನ ವಿಗ್ರಹಗಳು ವಿದೇಶದಿಂದ ಮರಳಿರುವುದನ್ನು ಉಲ್ಲೇಖಿಸಿದರು. ಇತ್ತೀಚಿನ ವರ್ಷಗಳಲ್ಲಿ 20ಕ್ಕೂ ಅಧಿಕ ತೀರ್ಥಂಕರ ವಿಗ್ರಹಗಳನ್ನು ಭಾರತಕ್ಕೆ ಮರಳಿ ತರಲಾಗಿದೆ ಎಂದು ಅವರು ಹೆಮ್ಮೆಯಿಂದ ಹಂಚಿಕೊಂಡರು. ಭಾರತದ ಗುರುತನ್ನು ರೂಪಿಸುವಲ್ಲಿ ಜೈನ ಧರ್ಮದ ಅಪ್ರತಿಮ ಪಾತ್ರವನ್ನು ಅವರು ಪ್ರಮುಖವಾಗಿ ಉಲ್ಲೇಖಿಸಿದರು ಮತ್ತು ಈ ಪರಂಪರೆಯನ್ನು ಸಂರಕ್ಷಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. ನವದೆಹಲಿಯ ಹೊಸ ಸಂಸತ್ ಕಟ್ಟಡವನ್ನು ಉಲ್ಲೇಖಿಸಿ, ಅದನ್ನು ಪ್ರಜಾಪ್ರಭುತ್ವದ ದೇವಾಲಯ ಎಂದು ವಿವರಿಸುತ್ತಾ, ಅದರ ಮೇಲೆ ಜೈನ ಧರ್ಮದ ಪ್ರಭಾವ ಗೋಚರಿಸುತ್ತಿದೆ ಅವರು ಪ್ರಮುಖವಾಗಿ ಉಲ್ಲೇಖಿಸಿದರು. ಶಾರ್ದುಲ್ ಗೇಟ್ ಪ್ರವೇಶದ್ವಾರದಲ್ಲಿರುವ ವಾಸ್ತುಶಿಲ್ಪ ಗ್ಯಾಲರಿಯಲ್ಲಿರುವ ಸಮ್ಮೇದ್ ಶಿಖರ್ ಅವರ ಚಿತ್ರಣವಿದೆ,  ಆಸ್ಟ್ರೇಲಿಯಾದಿಂದ ಹಿಂತಿರುಗಿಸಲಾದ ತೀರ್ಥಂಕರ ವಿಗ್ರಹ ಲೋಕಸಭೆಯ ಪ್ರವೇಶದ್ವಾರದಲ್ಲಿದೆ, ಸಂವಿಧಾನ ಗ್ಯಾಲರಿಯ ಛಾವಣಿಯ ಮೇಲೆ ಭಗವಾನ್ ಮಹಾವೀರರ ಭವ್ಯವಾದ ಚಿತ್ರಕಲೆ ಮತ್ತು ದಕ್ಷಿಣ ಕಟ್ಟಡದ ಗೋಡೆಯ ಮೇಲೆ ಎಲ್ಲಾ 24 ತೀರ್ಥಂಕರರ ಚಿತ್ರಗಳಿರುವುದನ್ನು ಅವರು ಉಲ್ಲೇಖಿಸಿದರು. ಈ ತತ್ವಶಾಸ್ತ್ರಗಳು ಭಾರತದ ಪ್ರಜಾಪ್ರಭುತ್ವಕ್ಕೆ ಮಾರ್ಗದರ್ಶನ ನೀಡುತ್ತವೆ ಮತ್ತು ಸರಿಯಾದ ಹಾದಿಯನ್ನು ಹಾಕಿಕೊಡುತ್ತವೆ ಎಂದು ಪ್ರಧಾನಿ ಹೇಳಿದರು. “ವತ್ತು ಸಹವೋ ಧಮ್ಮೋ," "ಚರಿತಂ ಖಲು ಧಮ್ಮೋ," ಮತ್ತು "ಜೀವನ ರಕ್ಕನಂ ಧಮ್ಮೋ" ನಂತಹ ಪ್ರಾಚೀನ ಆಗಮ ಗ್ರಂಥಗಳಲ್ಲಿ ಒಳಗೊಂಡಿರುವ ಜೈನ ಧರ್ಮದ ಆಳವಾದ ವ್ಯಾಖ್ಯಾನಗಳನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಈ ಮೌಲ್ಯಗಳಿಂದ ಪ್ರೇರಿತವಾದ "ಸಬ್ ಕಾ ಸಾಥ್, ಸಬ್ ಕಾ ವಿಕಾಸ್" ಎಂಬ ಮಂತ್ರದೊಂದಿಗೆ ಸರ್ಕಾರ ಮುಂದುವರಿಯುತ್ತಿದೆ ಎಂದು ಅವರು ಪುನರುಚ್ಚರಿಸಿದರು.

ಶ್ರೀ ನರೇಂದ್ರ ಮೋದಿ "ಜೈನ ಸಾಹಿತ್ಯವು ಭಾರತದ ಬೌದ್ಧಿಕ ಪರಂಪರೆಯ ಬೆನ್ನೆಲುಬಾಗಿದೆ ಮತ್ತು ಈ ಜ್ಞಾನವನ್ನು ಸಂರಕ್ಷಿಸುವುದು ಕರ್ತವ್ಯವಾಗಿದೆ’’ ಎಂದು ಹೇಳಿದರು, ಪ್ರಾಕೃತ ಮತ್ತು ಪಾಲಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡುವ ಸರ್ಕಾರದ ನಿರ್ಧಾರವನ್ನು ಪ್ರಧಾನವಾಗಿ ಉಲ್ಲೇಖಿಸಿ, ಇದು ಜೈನ ಸಾಹಿತ್ಯದ ಕುರಿತು ಹೆಚ್ಚಿನ ಸಂಶೋಧನೆಗೆ ಅನುವು ಮಾಡಿಕೊಡುತ್ತದೆ. ಭಾಷೆಯನ್ನು ಸಂರಕ್ಷಿಸುವುದರಿಂದ ಜ್ಞಾನದ ಉಳಿವು ಖಾತ್ರಿಯಾಗುತ್ತದೆ ಮತ್ತು ಭಾಷೆಯನ್ನು ವಿಸ್ತರಿಸುವುದರಿಂದ ವಿವೇಕದ ಬೆಳವಣಿಗೆಯಾಗುತ್ತದೆ ಎಂದು ಅವರು ಒತ್ತಿ ಹೇಳಿದರು. ಭಾರತದಲ್ಲಿ ಶತಮಾನಗಳಷ್ಟು ಹಳೆಯದಾದ ಜೈನ ಹಸ್ತಪ್ರತಿಗಳ ಅಸ್ತಿತ್ವವನ್ನು ಪ್ರಧಾನಿ ಉಲ್ಲೇಖಿಸಿದರು, ಪ್ರತಿ ಪುಟವೂ ಇತಿಹಾಸದ ಕನ್ನಡಿ ಮತ್ತು ಜ್ಞಾನದ ಸಾಗರ ಎಂದು ವಿವರಿಸಿದರು, ಆಳವಾದ ಜೈನ ಬೋಧನೆಗಳನ್ನು ಉಲ್ಲೇಖಿಸಿದರು. ಅನೇಕ ಮಹತ್ವದ ಗ್ರಂಥಗಳು ಕ್ರಮೇಣ ಕಣ್ಮರೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಮಂತ್ರಿ ಅವರು, ಈ ವರ್ಷದ ಬಜೆಟ್‌ನಲ್ಲಿ ಘೋಷಿಸಿರುವ "ಜ್ಞಾನ ಭಾರತಂ ಮಿಷನ್" ಅನ್ನು ಆರಂಭವನ್ನು ಉಲ್ಲೇಖಿಸಿದರು. ದೇಶಾದ್ಯಂತ ಲಕ್ಷಾಂತರ ಹಸ್ತಪ್ರತಿಗಳನ್ನು ಸಮೀಕ್ಷೆ ಮಾಡುವ ಮತ್ತು ಪ್ರಾಚೀನತೆಯನ್ನು ಆಧುನಿಕತೆಯೊಂದಿಗೆ ಬೆಸೆಯುವ ಮೂಲಕ ಪ್ರಾಚೀನತೆಯನ್ನು ಡಿಜಿಟಲೀಕರಣಗೊಳಿಸುವ ಯೋಜನೆಗಳನ್ನು ಅವರು ಹಂಚಿಕೊಂಡರು. ಈ ಉಪಕ್ರಮವನ್ನು ಅವರು 'ಅಮೃತ ಸಂಕಲ್ಪ' ಎಂದು ಬಣ್ಣಿಸಿದರು. "ನವ ಭಾರತವು ಕೃತಕ ಬುದ್ಧಿಮತ್ತೆಯ ಮೂಲಕ ಸಾಧ್ಯತೆಗಳನ್ನು ಅನ್ವೇಷಿಸುತ್ತದೆ ಮತ್ತು ಜಗತ್ತನ್ನು ಆಧ್ಯಾತ್ಮಿಕತೆಯಿಂದ ಮಾರ್ಗದರ್ಶನ ಮಾಡುತ್ತದೆ" ಎಂದು ಅವರು ಒತ್ತಿ ಹೇಳಿದರು.

ಜೈನ ಧರ್ಮವು ವೈಜ್ಞಾನಿಕ ಮತ್ತು ಸೂಕ್ಷ್ಮ ಎರಡೂ ಆಗಿದ್ದು, ಯುದ್ಧ, ಭಯೋತ್ಪಾದನೆ ಮತ್ತು ಪರಿಸರ ಸಮಸ್ಯೆಗಳಂತಹ ಜಾಗತಿಕ ಸವಾಲುಗಳಿಗೆ ತನ್ನ ಮೂಲ ತತ್ವಗಳ ಮೂಲಕ ಪರಿಹಾರಗಳನ್ನು ಒದಗಿಸುತ್ತದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಿ, "ಪರಸ್ಪರೋಪಗ್ರಹೋ ಜೀವನಂ" ಎಂದು ಹೇಳುವ ಜೈನ ಸಂಪ್ರದಾಯದ ಲಾಂಛನವು ಎಲ್ಲಾ ಜೀವಿಗಳ ಪರಸ್ಪರ ಅವಲಂಬನೆಯನ್ನು ಒತ್ತಿಹೇಳುತ್ತದೆ ಎಂದು ಹೇಳಿದರು. ಅತ್ಯಂತ ಸೂಕ್ಷ್ಮ ಹಂತಗಳಲ್ಲಿಯೂ ಸಹ ಪರಿಸರ ಸಂರಕ್ಷಣೆ, ಪರಸ್ಪರ ಸಾಮರಸ್ಯ ಮತ್ತು ಶಾಂತಿಯ ಆಳವಾದ ಸಂದೇಶವಾಗಿ ಜೈನ ಧರ್ಮದ ಅಹಿಂಸೆಯ ಬದ್ಧತೆಯನ್ನು ಅವರು ಬಲವಾಗಿ ಪ್ರತಿಪಾದಿಸಿದರು. ಜೈನ ಧರ್ಮದ ಐದು ಪ್ರಮುಖ ತತ್ವಗಳನ್ನು ಅವರು ಗುರುತಿಸಿ, ಅವು ಇಂದಿನ ಯುಗದಲ್ಲಿ ಅನೇಕಾಂತವಾದದ ತತ್ವಶಾಸ್ತ್ರದ ಪ್ರಸ್ತುತತೆಯನ್ನು ಒತ್ತಿ ಹೇಳಿದರು. ಅನೇಕಾಂತವಾದದಲ್ಲಿನ ನಂಬಿಕೆಯು ಯುದ್ಧ ಮತ್ತು ಸಂಘರ್ಷದ ಸಂದರ್ಭಗಳನ್ನು ತಡೆಯುತ್ತದೆ, ಇತರರ ಭಾವನೆಗಳು ಮತ್ತು ದೂರದೃಷ್ಟಿಗಳ ತಿಳಿವಳಿಕೆಯನ್ನು ಬೆಳೆಸುತ್ತದೆ ಎಂದು ಅವರು ಹೇಳಿದರು. ಜಗತ್ತು ಅನೇಕಾಂತವಾದದ ತತ್ವಶಾಸ್ತ್ರವನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಅವರು ಬಲವಾಗಿ ಪ್ರತಿಪಾದಿಸಿದರು.

 

ಭಾರತದ ಮೇಲಿನ ಜಗತ್ತಿನ ವಿಶ್ವಾಸ ಆಳವಾಗುತ್ತಿದೆ, ಭಾರತದ ಪ್ರಯತ್ನಗಳು ಮತ್ತು ಫಲಿತಾಂಶಗಳು ಸ್ಫೂರ್ತಿಯ ಮೂಲವಾಗುತ್ತಿವೆ ಎಂದು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ, ಜಾಗತಿಕ ಸಂಸ್ಥೆಗಳು ಈಗ ಭಾರತದ ಪ್ರಗತಿಯಿಂದಾಗಿ ಅದರ ಕಡೆಗೆ ನೋಡುತ್ತಿವೆ, ಅದು ಇತರರಿಗೆ ಮಾರ್ಗಗಳನ್ನು ತೆರೆಯುತ್ತದೆ ಎಂದು ಎತ್ತಿ ಹೇಳಿದರು. ಅವರು  "ಪರಸ್ಪರೋಪಗ್ರಹೋ ಜೀವನಂ" ಎಂಬ ಜೈನ ತತ್ವಶಾಸ್ತ್ರಕ್ಕೆ ಜೋಡಿಸಿ, ಪರಸ್ಪರ ಸಹಕಾರದ ಮೇಲೆ ಜೀವನವು ಅಭಿವೃದ್ಧಿ ಹೊಂದುತ್ತದೆ ಎಂದು ಒತ್ತಿ ಹೇಳಿದರು. ಈ ದೂರದೃಷ್ಟಿಯು ಭಾರತದಿಂದ ಜಾಗತಿಕ ನಿರೀಕ್ಷೆಗಳನ್ನು ಹೆಚ್ಚಿಸಿದೆ ಮತ್ತು ರಾಷ್ಟ್ರವು ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿದೆ ಎಂದು ಅವರು ಉಲ್ಲೇಖಿಸಿದರು. ಹವಾಮಾನ ಬದಲಾವಣೆಯ ಇಂದಿನ ಪ್ರಮುಖ ಸಮಸ್ಯೆಯಾಗಿದೆ ಎಂದ ಅವರು ಸುಸ್ಥಿರ ಜೀವನಶೈಲಿಯೇ ಅದಕ್ಕೆ ಪರಿಹಾರದವೆಂದರು ಮತ್ತು ಭಾರತವು ಮಿಷನ್ ಲೈಫ್ ಅನ್ನು ಆರಂಭಿಸಿರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಜೈನ ಸಮುದಾಯವು ಶತಮಾನಗಳಿಂದ ಸರಳತೆ, ಸಂಯಮ ಮತ್ತು ಸುಸ್ಥಿರತೆಯ ತತ್ವಗಳ ಆಧಾರದಲ್ಲಿ ಜೀವಿಸುತ್ತಿದೆ ಎಂದು ಅವರು ಹೇಳಿದರು. ಅಪರಿಗ್ರಹದ ಜೈನ ತತ್ವವನ್ನು ಉಲ್ಲೇಖಿಸುತ್ತಾ, ಈ ಮೌಲ್ಯಗಳನ್ನು ವ್ಯಾಪಕವಾಗಿ ಹರಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಪ್ರತಿಯೊಬ್ಬರೂ ತಮ್ಮ ಸ್ಥಳವನ್ನು ಲೆಕ್ಕಿಸದೆ ಮಿಷನ್ ಲೈಫ್‌ನ ಧ್ವಜಧಾರಿಗಳಾಗಬೇಕೆಂದು ಅವರು ಕರೆ ನೀಡಿದರು.

ಇಂದಿನ ಮಾಹಿತಿ ತಂತ್ರಜ್ಞಾನ ಜಗತ್ತಿನಲ್ಲಿ ಜ್ಞಾನವು ಹೇರಳವಾಗಿದೆ, ಆದರೆ ವಿವೇಕವಿಲ್ಲ, ಅದಕ್ಕೆ ಆಳದ ಕೊರತೆಯಿದೆ ಎಂದು ಪ್ರಧಾನಿ ಹೇಳಿದರು. ಜೈನ ಧರ್ಮವು ಸರಿಯಾದ ಮಾರ್ಗವನ್ನು ಕಂಡುಕೊಳ್ಳಲು ಜ್ಞಾನ ಮತ್ತು ಬುದ್ಧಿವಂತಿಕೆಯ ಸಮತೋಲನವನ್ನು ಕಲಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ತಂತ್ರಜ್ಞಾನವು ಮಾನವ ಸ್ಪರ್ಶದಿಂದ ಪೂರಕವಾಗಿರಬೇಕು ಮತ್ತು ಕೌಶಲ್ಯಗಳು ಆತ್ಮದೊಂದಿಗೆ ಇರಬೇಕು ಎಂದು ಅವರು, ಯುವಕರಿಗೆ ಈ ಸಮತೋಲನದ ಮಹತ್ವವನ್ನು ವಿವರಿಸಿದರು.. ನವಕರ ಮಹಾಮಂತ್ರವು ಹೊಸ ಪೀಳಿಗೆಗೆ ಬುದ್ಧಿವಂತಿಕೆ ಮತ್ತು ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದಕ್ಕೆ ಮಾರ್ಗದರ್ಶನ ನೀಡುತ್ತದೆ ಎಂದು ಹೇಳಿದರು.

 

ನವಕರ ಮಂತ್ರದ ಸಾಮೂಹಿಕ ಪಠಣದ ನಂತರ ಎಲ್ಲರೂ ಒಂಬತ್ತು ಸಂಕಲ್ಪಗಳನ್ನು ಕೈಗೊಳ್ಳಬೇಕೆಂದು ಶ್ರೀ ಮೋದಿ ಕರೆ ನೀಡಿದರು. ಮೊದಲ ನಿರ್ಣಯ 'ಜಲ ಸಂರಕ್ಷಣೆ', 100 ವರ್ಷಗಳ ಹಿಂದೆ ಅಂಗಡಿಗಳಲ್ಲಿ ನೀರನ್ನು ಮಾರಾಟ ಮಾಡಲಾಗುತ್ತದೆ ಎಂದು ಭವಿಷ್ಯ ನುಡಿದಿದ್ದ ಬುದ್ಧಿ ಸಾಗರ್ ಮಹಾರಾಜ್ ಜಿ ಅವರ ಮಾತುಗಳನ್ನು ಅವರು ನೆನಪಿಸಿಕೊಂಡರು. ಪ್ರತಿ ಹನಿ ನೀರನ್ನು ಮೌಲ್ಯೀಕರಿಸುವ ಮತ್ತು ಉಳಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಎರಡನೇ ನಿರ್ಣಯ 'ತಾಯಿಯ ಹೆಸರಿನಲ್ಲಿ ಗಿಡವನ್ನು ನೆಡುವುದು'. ಇತ್ತೀಚಿನ ತಿಂಗಳುಗಳಲ್ಲಿ 100 ಕೋಟಿಗೂ ಅಧಿಕ ಮರಗಳನ್ನು ನೆಟ್ಟಿರುವುದನ್ನು ಅವರು ಪ್ರಮುಖವಾಗಿ ಉಲ್ಲೇಖಿಸಿ, ಪ್ರತಿಯೊಬ್ಬರೂ ತಮ್ಮ ತಾಯಿಯ ಹೆಸರಿನಲ್ಲಿ ಗಿಡವನ್ನು ನೆಟ್ಟು ಅದನ್ನು ಅವರ ಆಶೀರ್ವಾದದಂತೆ ಪೋಷಿಸಬೇಕೆಂದು ಕರೆ ನೀಡಿದರು. ಗುಜರಾತ್‌ನಲ್ಲಿ 24 ತೀರ್ಥಂಕರರಿಗೆ ಸಂಬಂಧಿಸಿದ 24 ಮರಗಳನ್ನು ನೆಡುವ ತಮ್ಮ ಪ್ರಯತ್ನಗಳನ್ನು ಅವರು ಸ್ಮರಿಸಿದರು, ಆದರೆ ಕೆಲವೇ ಮರಗಳು ಲಭ್ಯವಿಲ್ಲದ ಕಾರಣ ಅವುಗಳನ್ನು ಪೂರ್ಣಗೊಳಿಸಲಾಗಲಿಲ್ಲ. ಪ್ರತಿ ಬೀದಿ, ನೆರೆಹೊರೆ ಮತ್ತು ನಗರದಲ್ಲಿ ಸ್ವಚ್ಛತೆಯ ಮಹತ್ವವನ್ನು ಒತ್ತಿ ಹೇಳುತ್ತಾ, ಈ ಅಭಿಯಾನಕ್ಕೆ ಎಲ್ಲರೂ ಕೊಡುಗೆ ನೀಡಬೇಕೆಂದು ಒತ್ತಾಯಿಸಿದ ಶ್ರೀ ನರೇಂದ್ರ ಮೋದಿ ಅವರು 'ಸ್ವಚ್ಛತಾ ಮಿಷನ್' ಅನ್ನು ಮೂರನೇ ನಿರ್ಣಯವೆಂದು ಉಲ್ಲೇಖಿಸಿದರು. 'ಸ್ಥಳೀಯ ಉತ್ಪನ್ನಗಳಿಗೆ ಧ್ವನಿಯಾವುದುದು'(ವೋಕಲ್ ಫಾರ್ ಲೋಕಲ್‌) ನಾಲ್ಕನೇ ನಿರ್ಣಯವಾಗಿದ್ದು, ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಉತ್ತೇಜಿಸಲು, ಅವುಗಳನ್ನು ಜಾಗತಿಕಗೊಳಿಸಲು ಮತ್ತು ಭಾರತೀಯ ಮಣ್ಣಿನ ಸಾರವನ್ನು ಮತ್ತು ಭಾರತೀಯ ಕಾರ್ಮಿಕರ ಬೆವರನ್ನು ಹೊಂದಿರುವ ವಸ್ತುಗಳನ್ನು ಬೆಂಬಲಿಸಲು ಅವರು ಪ್ರೋತ್ಸಾಹಿಸಿದರು. ಐದನೇ ನಿರ್ಣಯವು 'ಭಾರತವನ್ನು ಅನ್ವೇಷಿಸುವುದು' ಮತ್ತು ವಿದೇಶಗಳಿಗೆ ಪ್ರಯಾಣಿಸುವ ಮೊದಲು ಭಾರತದ ವೈವಿಧ್ಯಮಯ ರಾಜ್ಯಗಳು, ಸಂಸ್ಕೃತಿಗಳು ಮತ್ತು ಪ್ರದೇಶಗಳಿಗೆ ಭೇಟಿ ನೀಡುವಂತೆ ಅವರು ಜನತೆಗೆ ಕರೆ ನೀಡಿದರು. ದೇಶದ ಪ್ರತಿಯೊಂದು ಮೂಲೆಯ ಅನನ್ಯತೆ ಮತ್ತು ಮೌಲ್ಯವನ್ನು ಒತ್ತಿ ಹೇಳಿದರು. 'ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವುದು' ಆರನೇ ನಿರ್ಣಯವಾಗಿದ್ದು, ಪ್ರಧಾನಿ ಅವರು ಒಂದು ಜೀವಿ ಇನ್ನೊಂದಕ್ಕೆ ಹಾನಿ ಮಾಡಬಾರದು ಎಂಬ ಜೈನರ ಮೂಲ ತತ್ವವನ್ನು ಉಲ್ಲೇಖಿಸಿದರು ಮತ್ತು ಭೂ ತಾಯಿಯನ್ನು ರಾಸಾಯನಿಕಗಳಿಂದ ಮುಕ್ತಗೊಳಿಸಲು, ರೈತರನ್ನು ಬೆಂಬಲಿಸಲು ಮತ್ತು ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ಕರೆ ನೀಡಿದರು. ಅವರು 'ಆರೋಗ್ಯಕರ ಜೀವನಶೈಲಿ'ಯನ್ನು ಏಳನೇ ನಿರ್ಣಯವಾಗಿ ಪ್ರಸ್ತಾಪಿಸಿದರು ಮತ್ತು ಸಿರಿಧಾನ್ಯ (ಶ್ರೀ ಅನ್ನಾ) ಸೇರಿದಂತೆ ಭಾರತೀಯ ಆಹಾರ ಪದ್ಧತಿಗಳಿಗೆ ಮರಳಲು, ಎಣ್ಣೆ ಬಳಕೆಯನ್ನು ಶೇ. 10 ರಷ್ಟು ತಗ್ಗಿಸಲು ಮತ್ತು ಮಿತ ಮತ್ತು ಸಂಯಮದ ಆಹಾರದ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಪ್ರತಿಪಾದಿಸಿದರು. ಯೋಗ ಮತ್ತು ಕ್ರೀಡೆಗಳನ್ನು ಅಳವಡಿಸಿಕೊಳ್ಳುವುದನ್ನು ಎಂಟನೇ ನಿರ್ಣಯವೆಂದು ಅವರು ಪ್ರಸ್ತಾಪಿಸಿದರು ಮತ್ತು ದೈಹಿಕ ಆರೋಗ್ಯ ಮತ್ತು ಮಾನಸಿಕ ಶಾಂತಿಯನ್ನು ಖಾತ್ರಿಪಡಿಸಿಕೊಳ್ಳಲು ಮನೆಯಲ್ಲಿ, ಕೆಲಸದಲ್ಲಿ, ಶಾಲೆಯಲ್ಲಿ ಅಥವಾ ಉದ್ಯಾನವನಗಳಲ್ಲಿ ಯೋಗ ಮತ್ತು ಕ್ರೀಡೆಗಳನ್ನು ದೈನಂದಿನ ಜೀವನದ ಭಾಗವನ್ನಾಗಿ ಮಾಡಲು ಒತ್ತಿ ಹೇಳಿದರು. ಕೈ ಹಿಡಿಯುವ ಮೂಲಕ ಅಥವಾ ತಟ್ಟೆ ತುಂಬುವ ಮೂಲಕ ದೀನದಲಿತರಿಗೆ ಸಹಾಯ ಮಾಡುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ ಅವರು, 'ಬಡವರಿಗೆ ಸಹಾಯ ಮಾಡುವುದ’ನ್ನು ಒಂಬತ್ತನೇ ಮತ್ತು ಅಂತಿಮ ನಿರ್ಣಯವಾಗಿ ಪ್ರಸ್ತಾಪಿಸಿದರು. ಈ ನಿರ್ಣಯಗಳು ಜೈನ ಧರ್ಮದ ತತ್ವಗಳು ಮತ್ತು ಸುಸ್ಥಿರ ಮತ್ತು ಸಾಮರಸ್ಯದ ಭವಿಷ್ಯದ ದೂರದೃಷ್ಟಿಗೆ ಹೊಂದಿಕೆಯಾಗುತ್ತವೆ ಎಂದು ಅವರು ಒತ್ತಿ ಹೇಳಿದರು. "ಈ ಒಂಬತ್ತು ನಿರ್ಣಯಗಳು ವ್ಯಕ್ತಿಗಳಲ್ಲಿ ಹೊಸ ಶಕ್ತಿಯನ್ನು ತುಂಬುತ್ತವೆ ಮತ್ತು ಯುವ ಪೀಳಿಗೆಗೆ ಹೊಸ ಮಾರ್ಗದರ್ಶನವನ್ನು ನೀಡುತ್ತವೆ. ಅವುಗಳ ಪಾಲನೆಯು ಸಮಾಜದಲ್ಲಿ ಶಾಂತಿ, ಸಾಮರಸ್ಯ ಮತ್ತು ಸಹಾನುಭೂತಿಯನ್ನು ಬೆಳೆಸುತ್ತದೆ" ಎಂದು ಅವರು ಹೇಳಿದರು.

ರತ್ನತ್ರಯ, ದಶಲಕ್ಷಣ, ಸೋಲಾ ಕರಣ್ ಮತ್ತು ಪರ್ಯುಷಣದಂತಹ ಹಬ್ಬಗಳು ಸೇರಿದಂತೆ ಜೈನ ಧರ್ಮದ ತತ್ವಗಳು ಸ್ವ-ಕಲ್ಯಾಣಕ್ಕೆ ದಾರಿ ಮಾಡಿಕೊಡುತ್ತವೆ ಎಂದು ಹೇಳಿದ ಶ್ರೀ ನರೇಂದ್ರ ಮೋದಿ ಅವರು, ವಿಶ್ವ ನವಕರ ಮಂತ್ರ ದಿನವು ಜಾಗತಿಕವಾಗಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ನಿರಂತರವಾಗಿ ಹೆಚ್ಚಿಸುತ್ತದೆಂಬ ವಿಶ್ವಾಸ ವ್ಯಕ್ತಪಡಿಸಿದರು. ಈ ಕಾರ್ಯಕ್ರಮಕ್ಕಾಗಿ ನಾಲ್ಕು ಪಂಗಡಗಳು ಒಟ್ಟಾಗಿ ಸೇರಿ ಪ್ರದರ್ಶಿಸಿದ ಒಗಟ್ಟಿನ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು, ಇದನ್ನು ಏಕತೆಯ ಸಂಕೇತವೆಂದು ಬಣ್ಣಿಸಿದರು, ರಾಷ್ಟ್ರದಾದ್ಯಂತ ಏಕತೆಯ ಸಂದೇಶವನ್ನು ಹರಡುವ ಮಹತ್ವವನ್ನು ಒತ್ತಿ ಹೇಳಿದರು. "ಭಾರತ್ ಮಾತಾ ಕಿ ಜೈ" ಎಂದು ಜಪಿಸುವ ಪಠಿಸುವ ಎಲ್ಲರನ್ನೂ ಸಂಪರ್ಕಿಸಬೇಕು ಮತ್ತು ಬೆಳೆಸಬೇಕು, ಏಕೆಂದರೆ ಈ ಶಕ್ತಿಯು ಅಭಿವೃದ್ಧಿ ಹೊಂದಿದ ಭಾರತದ ಬುನಾದಿಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅವರು ಹೇಳಿದರು.

 

ದೇಶಾದ್ಯಂತ ವಿವಿಧ ಸ್ಥಳಗಳಲ್ಲಿನ ಗುರು ಭಗವಂತರ ಆಶೀರ್ವಾದಗಳನ್ನು ಸ್ವೀಕರಿಸಿದ್ದಕ್ಕಾಗಿ ಪ್ರಧಾನಿ ಕೃತಜ್ಞತೆಗಳನ್ನು ಸಲ್ಲಿಸಿದರು. ಈ ಜಾಗತಿಕ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಅವರು ಇಡೀ ಜೈನ ಸಮುದಾಯಕ್ಕೆ ಗೌರವ ಸಲ್ಲಿಸಿದರು. ಆಚಾರ್ಯ ಭಗವಂತರು, ಮುನಿ ಮಹಾರಾಜರು, ಶ್ರಾವಕ-ಶ್ರಾವಿಕರು ಮತ್ತು ಭಾರತ ಮತ್ತು ವಿದೇಶಗಳಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಅವರು ತಮ್ಮ ನಮನಗಳನ್ನು ಸಲ್ಲಿಸಿದರು. ಈ ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಜಿತೋ ಅವರ ಪ್ರಯತ್ನಗಳಿಗಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು ಗುಜರಾತ್ ಗೃಹ ಸಚಿವ ಶ್ರೀ ಹರ್ಷ ಸಂಘವಿ, ಜಿತೋ ಅಪೆಕ್ಸ್ ಅಧ್ಯಕ್ಷ ಶ್ರೀ ಪೃಥ್ವಿರಾಜ್ ಕೊಠಾರಿ, ಅಧ್ಯಕ್ಷ ಶ್ರೀ ವಿಜಯ್ ಭಂಡಾರಿ, ಇತರ ಜಿತೋ ಅಧಿಕಾರಿಗಳು ಮತ್ತು ವಿಶ್ವದಾದ್ಯಂತದ ಗಣ್ಯರು ಉಪಸ್ಥಿತಿಯನ್ನು ಶ್ಲಾಘಿಸಿದರು ಹಾಗೂ ಈ ಸ್ಮರಣೀಯ ಕಾರ್ಯಕ್ರಮದ ಯಶಸ್ಸಿಗೆ ಶುಭವನ್ನು ಹಾರೈಸಿದರು.

ಹಿನ್ನೆಲೆ

ಜೈನ ಧರ್ಮದ ಅತ್ಯಂತ ಪೂಜ್ಯ ಮತ್ತು ಸಾರ್ವತ್ರಿಕ ಮಂತ್ರವಾದ ನವಕರ ಮಹಾಮಂತ್ರ ದಿನ, ನವಕರ ಮಹಾಮಂತ್ರದ ಸಾಮೂಹಿಕ ಪಠಣದ ಮೂಲಕ ಜನರನ್ನು ಒಂದುಗೂಡಿಸಲು ಪ್ರಯತ್ನಿಸುವ ಆಧ್ಯಾತ್ಮಿಕ ಸಾಮರಸ್ಯ ಮತ್ತು ನೈತಿಕ ಪ್ರಜ್ಞೆಯ ಸ್ಮರಣೀಯ ಆಚರಣೆಯಾಗಿದೆ. ಅಹಿಂಸೆ,ನಮ್ರತೆ ಮತ್ತು ಆಧ್ಯಾತ್ಮಿಕ ಉನ್ನತಿಯ ತತ್ವಗಳಲ್ಲಿ ಬೇರೂರಿರುವ ಈ ಮಂತ್ರವು ಪ್ರಬುದ್ಧ ಜೀವಿಗಳ ಸದ್ಗುಣಗಳಿಗೆ ಗೌರವ ಸಲ್ಲಿಸುತ್ತದೆ ಮತ್ತು ಆಂತರಿಕ ಪರಿವರ್ತನೆಗೆ ಪ್ರೇರಣೆ ನೀಡುತ್ತದೆ. ಈ ದಿನ ಎಲ್ಲಾ ವ್ಯಕ್ತಿಗಳು ಸ್ವಯಂ ಶುದ್ಧೀಕರಣ, ಸಹಿಷ್ಣುತೆ ಮತ್ತು ಸಾಮೂಹಿಕ ಯೋಗಕ್ಷೇಮದ ಮೌಲ್ಯಗಳನ್ನು ಪ್ರತಿಬಿಂಬಿಸಲು ಪ್ರೋತ್ಸಾಹಿಸುತ್ತದೆ.

 

108ಕ್ಕೂ ಅಧಿಕ ದೇಶಗಳ ಜನರು ಶಾಂತಿ ಮತ್ತು ಒಗ್ಗಟ್ಟಿಗಾಗಿ ಜಾಗತಿಕ ಪಠಣದಲ್ಲಿ ಸೇರಿದ್ದಾರೆ. ಪವಿತ್ರ ಜೈನ ಮಂತ್ರದ ಮೂಲಕ ಶಾಂತಿ, ಆಧ್ಯಾತ್ಮಿಕ ಜಾಗೃತಿ ಮತ್ತು ಸಾರ್ವತ್ರಿಕ ಸಾಮರಸ್ಯವನ್ನು ಬೆಳೆಸಲು ಅವರು ಭಾಗವಹಿಸಿದ್ದಾರೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Regional languages take precedence in Lok Sabha addresses

Media Coverage

Regional languages take precedence in Lok Sabha addresses
NM on the go

Nm on the go

Always be the first to hear from the PM. Get the App Now!
...
Prime Minister condoles the loss of lives in the mishap in Chitradurga district of Karnataka
December 25, 2025
Announces ex-gratia from PMNRF

The Prime Minister, Shri Narendra Modi has condoled the loss of lives due to a mishap in Chitradurga district of Karnataka. Shri Modi also wished speedy recovery for those injured in the mishap.

The Prime Minister announced an ex-gratia from PMNRF of Rs. 2 lakh to the next of kin of each deceased and Rs. 50,000 for those injured.

The Prime Minister posted on X:

“Deeply saddened by the loss of lives due to a mishap in the Chitradurga district of Karnataka. Condolences to those who have lost their loved ones. May those injured recover at the earliest.

An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000: PM @narendramodi"