ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ಕಾರದ ಮುಖ್ಯಸ್ಥರಾಗಿ 25ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ದೇಶದ ಜನರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. 2001ರ ಇದೇ ದಿನ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರದ ತಮ್ಮ ಪಯಣವನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿ , ಜನರ ಜೀವನವನ್ನು ಸುಧಾರಿಸಲು ಮತ್ತು ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಲು ನಿರಂತರ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ತುಂಬಾ ಸಂಕೀರ್ಣ ಸಂದರ್ಭದಲ್ಲಿ ತಾನು ಗುಜರಾತ್ ಮುಖ್ಯಮಂತ್ರಿಯಾಗುವ ಜವಾಬ್ದಾರಿಯನ್ನುವಹಿಸಿಕೊಂಡೆ ಎಂದು ಪ್ರಧಾನಮಂತ್ರಿ ಹೇಳಿದರು. ಆ ವರ್ಷ ರಾಜ್ಯವು ಭಾರಿ ಭೂಕಂಪಕ್ಕೆ ತುತ್ತಾಗಿತ್ತು ಮತ್ತು ಹಿಂದಿನ ವರ್ಷಗಳಲ್ಲಿ ಸೂಪರ್ ಚಂಡಮಾರತ, ಸತತ ಬರಗಾಲ ಮತ್ತು ರಾಜಕೀಯ ಅಸ್ಥಿರತೆಯನ್ನು ಸಹ ಎದುರಿಸಿತ್ತು. ಈ ಸವಾಲುಗಳು ಜನರಿಗೆ ಸೇವೆ ಸಲ್ಲಿಸುವ ಮತ್ತು ನವೀಕೃತ ಶಕ್ತಿ ಮತ್ತು ಹೊಸ ಭರವಸೆಯೊಂದಿಗೆ ಗುಜರಾತ್ ಅನ್ನು ಪುನರ್ ನಿರ್ಮಾಣ ಮಾಡುವ ಸಂಕಲ್ಪವನ್ನು ಮತ್ತಷ್ಟು ಬಲವರ್ಧನೆಗೊಳಿಸಿದವು ಎಂದು ಅವರು ಹೇಳಿದರು.
ತಾವು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ತಮ್ಮ ತಾಯಿ ಹೇಳಿದ ಮಾತುಗಳನ್ನು ಶ್ರೀ ನರೇಂದ್ರ ಮೋದಿ ನೆನಪಿಸಿಕೊಂಡಿದ್ದಾರೆ. ಅವರು ಸದಾ ಬಡವರಿಗಾಗಿ ಕೆಲಸ ಮಾಡಬೇಕು ಮತ್ತು ಎಂದಿಗೂ ಲಂಚ ತೆಗೆದುಕೊಳ್ಳಬಾರದು ಎಂದು ಹೇಳಿದ್ದರು. ಆಗ ತಾವು ಏನೇ ಕೆಲಸ ಮಾಡಿದರೂ ಅದು ಉತ್ತಮ ಉದ್ದೇಶದಿಂದ ಮತ್ತು ಸಮಾಜದ ಕಟ್ಟಕಡೆಯಲ್ಲಿರುವ ವ್ಯಕ್ತಿಗೆ ಸೇವೆ ಸಲ್ಲಿಸುವ ದೂರದೃಷ್ಟಿಯಿಂದ ಪ್ರೇರಿತವಾಗಿರುತ್ತದೆಂದು ಜನರಿಗೆ ಭರವಸೆ ನೀಡಿದ್ದೆ ಎಂದು ಅವರು ಹೇಳಿದರು.
ಗುಜರಾತ್ನಲ್ಲಿನ ತಮ್ಮ ಅಧಿಕಾರಾವಧಿಯನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿ , ಆ ಸಮಯದಲ್ಲಿ ರಾಜ್ಯವು ಮತ್ತೆ ಎಂದಿಗೂ ಮೇಲೇರಲು ಸಾಧ್ಯವಿಲ್ಲವೆಂದು ಜನರು ನಂಬಿದ್ದರೆದು ಹೇಳಿದರು. ರೈತರು ವಿದ್ಯುತ್ ಮತ್ತು ನೀರಿನ ಕೊರತೆ ಎದುರಿಸುತ್ತಿದ್ದವೆಂದು, ಕೃಷಿ ಕುಂಠಿತವಾಗಿದೆ ಮತ್ತು ಕೈಗಾರಿಕಾ ಬೆಳವಣಿಗೆ ಸ್ಥಿರವಾಗಿ ನಿಂತುಬಿಟ್ಟಿತ್ತು ಎಂಬ ದೂರಿತ್ತು. ಸಾಮೂಹಿಕ ಪ್ರಯತ್ನದ ಮೂಲಕ ಗುಜರಾತ್ ಉತ್ತಮ ಆಡಳಿತದ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿತು ಎಂದು ಅವರು ಹೇಳಿದರು. ಒಂದು ಕಾಲದಲ್ಲಿ ಬರಗಾಲಕ್ಕೆ ತುತ್ತಾಗಿದ್ದ ರಾಜ್ಯವು ಕೃಷಿಯಲ್ಲಿ ಅಗ್ರಗಣ್ಯ ಸಾಧನೆ ಮಾಡಿತು, ವ್ಯಾಪಾರವು ಉತ್ಪಾದನೆ ಮತ್ತು ಕೈಗಾರಿಕಾ ಸಾಮರ್ಥ್ಯಕ್ಕೆ ವಿಸ್ತರಿಸಿತು ಮತ್ತು ಸಾಮಾಜಿಕ ಮತ್ತು ಭೌತಿಕ ಮೂಲಸೌಕರ್ಯವು ಉತ್ತೇಜನವನ್ನು ಪಡೆಯಿತು ಎಂದು ಅವರು ಹೇಳಿದರು.
2013ರಲ್ಲಿ ದೇಶವು ನಂಬಿಕೆ ಮತ್ತು ಆಡಳಿತದ ಬಿಕ್ಕಟ್ಟನ್ನು ಎದುರಿಸುತ್ತಿದ್ದ ಸಮಯದಲ್ಲಿ 2014ರ ಲೋಕಸಭಾ ಚುನಾವಣೆಗೆ ಪ್ರಧಾನಮಂತ್ರಿ ಅಭ್ಯರ್ಥಿಯಾಗುವ ಜವಾಬ್ದಾರಿ ತನಗೆ ಹೊರಿಸಲಾಯಿತು ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದ ಜನರು ತಮ್ಮ ಮೈತ್ರಿಕೂಟಕ್ಕೆ ಅಭೂತಪೂರ್ವ ಬಹುಮತದೊಂದಿಗೆ ತಮ್ಮ ಪಕ್ಷಕ್ಕೆ ಸಂಪೂರ್ಣ ಬಹುಮತವನ್ನು ನೀಡಿದರು, ಇದು ಹೊಸ ವಿಶ್ವಾಸ ಮತ್ತು ಉದ್ದೇಶದ ಯುಗಕ್ಕೆ ನಾಂದಿ ಹಾಡಿತು ಎಂದು ಅವರು ಹೇಳಿದರು.

ಕಳೆದ 11 ವರ್ಷಗಳಲ್ಲಿ ಭಾರತವು ಅನೇಕ ಪರಿವರ್ತನೆಗಳನ್ನು ಮಾಡಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. 25 ಕೋಟಿಗೂ ಅಧಿಕ ಜನರನ್ನು ಬಡತನ ರೇಖೆಯಿಂದ ಹೊರತರಲಾಗಿದೆ ಮತ್ತು ದೇಶವು ಪ್ರಮುಖ ಜಾಗತಿಕ ಆರ್ಥಿಕತೆಗಳಲ್ಲಿ ಅತ್ಯಂತ ಪ್ರಕಾಶಮಾನವಾಗಿ ಹೊಳೆಯುವ ತಾಣವಾಗಿ ರೂಪುಗೊಂಡಿದೆ. ದೇಶಾದ್ಯಂತ ಜನರು, ವಿಶೇಷವಾಗಿ ನಾರಿ ಶಕ್ತಿ, ಯುವ ಶಕ್ತಿ ಮತ್ತು ಶ್ರಮಶೀಲ ಅನ್ನದಾತರನ್ನು ಹೊಸ ಪಥದತ್ತ ಸಾಗುವ ಪ್ರಯತ್ನಗಳು ಮತ್ತು ಸುಧಾರಣೆಗಳ ಮೂಲಕ ಸಬಲೀಕರಣಗೊಳಿಸಲಾಗಿದೆ ಎಂದು ಅವರು ಹೇಳಿದರು.
ಇಂದಿನ ಜನಪ್ರಿಯ ಭಾವನೆಯೆಂದರೆ, ಭಾರತವನ್ನು ಎಲ್ಲಾ ವಲಯಗಳಲ್ಲಿ ಆತ್ಮನಿರ್ಭರಗೊಳಿಸುವುದು ಅದು 'ಗರ್ವ್ ಸೆ ಕಹೋ, ಯೇ ಸ್ವದೇಶಿ ಹೈ' ಎಂಬ ಕರೆಯಲ್ಲಿ ಪ್ರತಿಫಲನಗೊಳ್ಳುತ್ತಿದೆ.
ಭಾರತದ ಜನರ ನಿರಂತರ ನಂಬಿಕೆ ಮತ್ತು ವಾತ್ಸಲ್ಯಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಪುನರುಚ್ಚರಿಸಿದ ಪ್ರಧಾನಮಂತ್ರಿ, ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದು ಅತ್ಯುನ್ನತ ಗೌರವ ಎಂದು ಹೇಳಿದರು. ಸಂವಿಧಾನದ ಮೌಲ್ಯಗಳ ಮಾರ್ಗದರ್ಶನದಿಂದ ತಾವು ವಿಕಸಿತ ಭಾರತದ ಸಾಮೂಹಿಕ ಕನಸನ್ನು ನನಸಾಗಿಸಲು ಇನ್ನಷ್ಟು ಶ್ರಮಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.
ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನ ಸರಣಿಯಲ್ಲಿ ಹೀಗೆ ಹೇಳಿದ್ದಾರೆ.
“2001ರ ಇದೇ ದಿನದಂದು ನಾನು ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದೆ. ನನ್ನೆಲ್ಲಾ ಆತ್ಮೀಯ ಭಾರತೀಯರ ನಿರಂತರ ಆಶೀರ್ವಾದದಿಂದ ನಾನು ಸರ್ಕಾರದ ಮುಖ್ಯಸ್ಥನಾಗಿ 25 ನೇ ವರ್ಷವನ್ನು ಪ್ರವೇಶಿಸುತ್ತಿದ್ದೇನೆ. ಭಾರತದ ಜನರಿಗೆ ನನ್ನ ಕೃತಜ್ಞತೆಗಳು. ಈ ಎಲ್ಲಾ ವರ್ಷಗಳಲ್ಲಿ ನಮ್ಮ ಜನರ ಜೀವನ ಮಟ್ಟವನ್ನು ಸುಧಾರಿಸಲು ಮತ್ತು ನಮ್ಮೆಲ್ಲರನ್ನೂ ಪೋಷಿಸುತ್ತಿರುವ ಈ ಶ್ರೇಷ್ಠ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಲು ನಾನು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದೇನೆ’’
“ಬಹಳ ಕಠಿಣ ಪರೀಕ್ಷೆಯ ಸಂದರ್ಭದಲ್ಲಿ ನನ್ನ ಪಕ್ಷವು ನನಗೆ ಗುಜರಾತ್ ಮುಖ್ಯಮಂತ್ರಿಯಾಗುವ ಜವಾಬ್ದಾರಿಯನ್ನು ವಹಿಸಿತ್ತು. ಅದೇ ವರ್ಷದಲ್ಲಿ ರಾಜ್ಯವು ಭಾರಿ ಭೂಕಂಪದಿಂದ ತುತ್ತಾಗಿತ್ತು. ಅದರ ಹಿಂದಿನ ವರ್ಷಗಳು ಸೂಪರ್ ಚಂಡಮಾರುತ, ಸತತ ಬರಗಾಲ ಮತ್ತು ರಾಜಕೀಯ ಅಸ್ಥಿರತೆಗೆ ಸಾಕ್ಷಿಯಾಗಿದ್ದವು. ಆ ಸವಾಲುಗಳು ಜನರಿಗೆ ಸೇವೆ ಸಲ್ಲಿಸುವ ಮತ್ತು ಹೊಸ ಚೈತನ್ಯ ಮತ್ತು ಭರವಸೆಯೊಂದಿಗೆ ಗುಜರಾತ್ ಅನ್ನು ಪುನರ್ ನಿರ್ಮಾಣ ಸಂಕಲ್ಪವನ್ನು ನನ್ನಲ್ಲಿ ಬಲಪಡಿಸಿತು’’

“ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ, ನನ್ನ ತಾಯಿ ನನಗೆ ಹೇಳಿದ್ದು ನೆನಪಿದೆ -ನಿನ್ನ ಕೆಲಸದ ಬಗ್ಗೆ ನನಗೆ ಹೆಚ್ಚು ತಿಳುವಳಿಕೆ ಇಲ್ಲ, ಆದರೆ ನಾನು ಎರಡು ವಿಷಯಗಳನ್ನು ಮಾತ್ರ ತಿಳಿಸ ಬಯಸುತ್ತೇನೆ. ಮೊದಲನೆಯದಾಗಿ, ನೀನು ಸದಾ ಬಡವರಿಗಾಗಿ ಕೆಲಸ ಮಾಡುತ್ತಿರು ಮತ್ತು ಎರಡನೆಯದಾಗಿ, ನೀನು ಎಂದಿಗೂ ಲಂಚ ತೆಗೆದುಕೊಳ್ಳಬೇಡ ಎಂದು. ಹಾಗಾಗಿ ನಾನು ಏನೇ ಮಾಡಿದರೂ ಅದು ಉತ್ತಮ ಉದ್ದೇಶದಿಂದ ಮತ್ತು ಸಮಾಜದಲ್ಲಿ ಕಟ್ಟಕಡೆಯಲ್ಲಿರುವ ವ್ಯಕ್ತಿಗೆ ಸೇವೆ ಸಲ್ಲಿಸುವ ದೂರದೃಷ್ಟಿಯೊಂದಿಗೆ ಪ್ರೇರಿತವಾಗಿರುತ್ತದೆಂದು ನಾನು ಜನರಿಗೆ ಭರವಸೆ ನೀಡಿದ್ದೇನೆ’’
“ಈ 25 ವರ್ಷಗಳು ಹಲವು ಅನುಭವಗಳಿಂದ ಕೂಡಿವೆ. ಒಟ್ಟಾರೆ ನಾವು ಗಮನಾರ್ಹ ಪ್ರಗತಿ ಸಾಧಿಸಿದ್ದೇವೆ. ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ, ನನಗೆ ಚೆನ್ನಾಗಿ ನೆನೆಪಿದೆ ಗುಜರಾತ್ ಮತ್ತೆ ಎಂದಿಗೂ ಮೇಲೇರಲು ಸಾಧ್ಯವಿಲ್ಲ ಎಂದು ನಂಬಲಾಗಿತ್ತು. ರೈತರು ಸೇರಿದಂತೆ ಸಾಮಾನ್ಯ ನಾಗರಿಕರು ವಿದ್ಯುತ್ ಮತ್ತು ನೀರಿನ ಕೊರತೆಯ ಬಗ್ಗೆ ದೂರುತ್ತಿದ್ದರು. ಕೃಷಿ ಡೋಲಾಯಮಾನವಾಗಿತ್ತು ಮತ್ತು ಕೈಗಾರಿಕಾ ಬೆಳವಣಿಗೆ ನಿಂತು ಹೋಗಿತ್ತು. ಅಲ್ಲಿಂದ, ನಾವೆಲ್ಲರೂ ಗುಜರಾತ್ ಅನ್ನು ಉತ್ತಮ ಆಡಳಿತದ ಶಕ್ತಿ ಕೇಂದ್ರವನ್ನಾಗಿ ಮಾಡಲು ಸಾಮೂಹಿಕವಾಗಿ ಕೆಲಸ ಮಾಡಿದೆವು’’
“ಬರಪೀಡಿತ ರಾಜ್ಯವಾಗಿದ್ದ ಗುಜರಾತ್, ಕೃಷಿಯಲ್ಲಿ ಅಗ್ರ ಸಾಧನೆ ಮಾಡುವ ರಾಜ್ಯವಾಯಿತು. ವ್ಯಾಪಾರ ಸಂಸ್ಕೃತಿಯು ಸದೃಢವಾದ ಕೈಗಾರಿಕಾ ಮತ್ತು ಉತ್ಪಾದನಾ ಸಾಮರ್ಥ್ಯಗಳಾಗಿ ವಿಸ್ತರಿಸಿತು. ನಿಯಮಿತ ಕರ್ಫ್ಯೂಗಳು ಹಿಂದಿನ ವಿಷಯವಾಗಿದ್ದವು. ಸಾಮಾಜಿಕ ಮತ್ತು ಭೌತಿಕ ಮೂಲಸೌಕರ್ಯ ವೃದ್ಧಿ ಕಾರ್ಯಗಳು ಉತ್ತೇಜನವನ್ನು ಪಡೆದವು. ಇಷ್ಟು ಫಲಿತಾಂಶಗಳನ್ನು ಸಾಧಿಸಲು ಜನರೊಂದಿಗೆ ಕೆಲಸ ಮಾಡಲು ಸಾಧ್ಯವಾಗಿದ್ದು ತುಂಬಾ ತೃಪ್ತಿಕರವಾಗಿದೆ’’
“2014ರ ಲೋಕಸಭಾ ಚುನಾವಣೆಗೆ 2013ರಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿಯಾಗುವ ಜವಾಬ್ದಾರಿ ನನಗೆ ವಹಿಸಲಾಯಿತು. ಆ ದಿನಗಳಲ್ಲಿ, ದೇಶವು ನಂಬಿಕೆ ಮತ್ತು ಆಡಳಿತದ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಅಂದಿನ ಯುಪಿಎ ಸರ್ಕಾರವು ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ನೀತಿ ಪಾರ್ಶ್ವವಾಯುವಿನ ಕೆಟ್ಟರೂಪಕಕ್ಕೆ ಸಮಾನಾರ್ಥಕವಾಗಿತ್ತು. ಜಾಗತಿಕ ವ್ಯವಸ್ಥೆಯಲ್ಲಿ ಭಾರತವನ್ನು ದುರ್ಬಲ ಕೊಂಡಿಯಾಗಿ ನೋಡಲಾಗುತ್ತಿತ್ತು. ಆದರೆ, ಭಾರತದ ಜನರ ಬುದ್ಧಿವಂತಿಕೆಯು ನಮ್ಮ ಮೈತ್ರಿಕೂಟಕ್ಕೆ ಭಾರಿ ಬಹುಮತವನ್ನು ನೀಡಿತು ಮತ್ತು ನಮ್ಮ ಪಕ್ಷವು 3 ದಶಕಗಳ ನಂತರ ಮೊದಲ ಬಾರಿಗೆ ಸಂಪೂರ್ಣ ಬಹುಮತ ಪಡೆಯುವುದನ್ನು ಖಾತ್ರಿಪಡಿಸಿಕೊಂಡಿತು’’.
“ಕಳೆದ 11 ವರ್ಷಗಳಲ್ಲಿ, ನಾವು ಭಾರತದ ಜನರು ಒಗ್ಗೂಡಿ ಕಾರ್ಯನಿರ್ವಹಿಸಿದ್ದೇವೆ ಮತ್ತು ಹಲವು ಮಹತ್ವದ ಪರಿವರ್ತನೆಗಳನ್ನು ಸಾಧಿಸಿದ್ದೇವೆ. ನಮ್ಮ ಪಥ ಪರಿವರ್ತಕ ಪ್ರಯತ್ನಗಳು ದೇಶಾದ್ಯಂತ ಜನರನ್ನು, ವಿಶೇಷವಾಗಿ ನಮ್ಮ ನಾರಿ ಶಕ್ತಿ, ಯುವ ಶಕ್ತಿ ಮತ್ತು ಶ್ರಮಶೀಲ ಅನ್ನದಾತರನ್ನು ಸಬಲೀಕರಣಗೊಳಿಸಿವೆ. 25 ಕೋಟಿಗೂ ಅಧಿಕ ಜನರನ್ನು ಬಡತನದರೇಖೆಯಿಂದ ಮುಕ್ತಗೊಳಿಸಲಾಗಿದೆ. ಪ್ರಮುಖ ಜಾಗತಿಕ ಆರ್ಥಿಕತೆಗಳಲ್ಲಿ ಭಾರತವು ಒಂದು ಪ್ರಕಾಶಮಾನವಾದ ತಾಣವಾಗಿ ಹೊಳೆಯುತ್ತಿದೆ. ನಾವು ವಿಶ್ವದ ಅತಿದೊಡ್ಡ ಆರೋಗ್ಯ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಒಂದಕ್ಕೆ ತವರೂರಾಗಿದ್ದೇವೆ. ನಮ್ಮ ರೈತರು ನಮ್ಮ ರಾಷ್ಟ್ರವು ಸ್ವಾವಲಂಬಿಯಾಗಿದೆ ಎಂದು ನಾವೇ ನಾವೀನತಯತೆಯಲ್ಲಿ ತೊಡಗಿದ್ದೇವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದಾರೆ. ನಾವು ವ್ಯಾಪಕವಾದ ಸುಧಾರಣೆಗಳನ್ನು ಕೈಗೊಂಡಿದ್ದೇವೆ ಮತ್ತು ಭಾರತವನ್ನು ಎಲ್ಲಾ ವಲಯಗಳಲ್ಲಿ ಆತ್ಮನಿರ್ಭರ ಮಾಡಬೇಕೆಂಬುದು ಜನಪ್ರಿಯ ಭಾವನೆ ಇದ್ದು, “ಗರ್ವ್ ಸೆ ಕಹೋ, ಯೇ ಸ್ವದೇಶಿ ಹೈ' ಎಂಬ ಸ್ಪಷ್ಟ ಕರೆ ಸ್ಪಷ್ಟವಾಗಿ ಪ್ರತಿಫಲಿಸುತ್ತಿದೆ’’
“ನಾನು ಭಾರತದ ಜನರ ನಿರಂತರ ನಂಬಿಕೆ ಮತ್ತು ವಾತ್ಸಲ್ಯಕ್ಕಾಗಿ ಮತ್ತೊಮ್ಮೆ ಧನ್ಯವಾದ ಹೇಳುತ್ತೇನೆ. ನಮ್ಮ ಪ್ರೀತಿಯ ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದು ಅತ್ಯುನ್ನತ ಗೌರವ, ಈ ಕರ್ತವ್ಯ ನನ್ನಲ್ಲಿ ಕೃತಜ್ಞತೆ ಮತ್ತು ಉದ್ದೇಶವನ್ನು ತುಂಬುತ್ತದೆ. ನಮ್ಮ ಸಂವಿಧಾನಿಕ ಮೌಲ್ಯಗಳು ನನಗೆ ನಿರಂತರ ಮಾರ್ಗದರ್ಶನ ನೀಡುತ್ತಿರುವುದರಿಂದ ವಿಕಸಿತ ಭಾರತದ ನಮ್ಮ ಸಾಮೂಹಿಕ ಕನಸನ್ನು ನನಸಾಗಿಸಲು ನಾನು ಮುಂದಿನ ದಿನಗಳಲ್ಲಿ ಇನ್ನಷ್ಟು ಶ್ರಮಿಸುತ್ತೇನೆ’’.
On this day in 2001, I took oath as Gujarat’s Chief Minister for the first time. Thanks to the continuous blessings of my fellow Indians, I am entering my 25th year of serving as the head of a Government. My gratitude to the people of India. Through all these years, it has been… pic.twitter.com/21qoOAEC3E
— Narendra Modi (@narendramodi) October 7, 2025
It was in very testing circumstances that my Party entrusted me with the responsibility of being Gujarat CM. The state was suffering due to a massive earthquake in the same year. The preceding years had witnessed a super cyclone, successive droughts and political instability.… pic.twitter.com/PqWkjOh6DU
— Narendra Modi (@narendramodi) October 7, 2025
When I took oath as Chief Minister, I remember my Mother telling me - I do not have much understanding of your work but I only seek two things. First, you will always work for the poor and second, you will never take a bribe. I also told people that whatever I do will be with the…
— Narendra Modi (@narendramodi) October 7, 2025
These 25 years have been filled with many experiences. Together, we have made remarkable strides. I still recall that when I took over as CM, it was believed that Gujarat could never rise again. Common citizens, including farmers, complained about lack of power and water.… pic.twitter.com/TKhzbiulVq
— Narendra Modi (@narendramodi) October 7, 2025
Gujarat, a drought-prone state became a top performing state in agriculture. The culture of trading expanded into robust industrial and manufacturing capacities. Regular curfews became a thing of the past. Social and physical infrastructure received a boost. It was very… pic.twitter.com/5aRFug349w
— Narendra Modi (@narendramodi) October 7, 2025
In 2013, I was given the responsibility of being the Prime Ministerial candidate for the 2014 Lok Sabha elections. Those days, the nation was witnessing a crisis of trust and governance. The then UPA Government was synonymous with the worst form of corruption, cronyism and policy… pic.twitter.com/zoamKs4ECP
— Narendra Modi (@narendramodi) October 7, 2025
Over the last 11 years, We The People of India have worked together and achieved many transformations. Our path breaking efforts have empowered people from all across India, especially our Nari Shakti, Yuva Shakti and hardworking Annadatas. Over 25 crore people have been removed…
— Narendra Modi (@narendramodi) October 7, 2025
I once again thank the people of India for their continuous trust and affection. To serve our beloved nation is the highest honour, a duty that fills me with gratitude and purpose. With the values of our Constitution as my constant guide, I will work even harder in the times to… pic.twitter.com/w6wEbmnDnl
— Narendra Modi (@narendramodi) October 7, 2025
2001 में आज ही के दिन मैंने पहली बार गुजरात के मुख्यमंत्री के रूप में शपथ ली थी। आज मैंने सरकार के मुखिया के रूप में ईश्वर रूपी जनता-जनार्दन की सेवा करने के अपने 25वें वर्ष में प्रवेश किया है। लोकतांत्रिक व्यवस्था में ये सिद्धि, मुझे भारत की जनता का बहुत बड़ा आशीर्वाद है।
— Narendra Modi (@narendramodi) October 7, 2025
इन… pic.twitter.com/ycSvdSKIox
जब मेरी पार्टी ने मुझे गुजरात के मुख्यमंत्री के रूप में शपथ लेने का आदेश दिया था, उस समय गुजरात अनेक चुनौतियां का सामना कर रहा था। राज्य के लोगों के लिए वो परीक्षा की घड़ी थी। उसी वर्ष राज्य में एक विनाशकारी भूकंप आया था। चक्रवात, सूखे के कारण लाखों लोगों का जीवन अस्त-व्यस्त था।… pic.twitter.com/U9rlHPhtRQ
— Narendra Modi (@narendramodi) October 7, 2025
जब मैं मुख्यमंत्री बना- तो मेरी मां हीराबेन ने मुझसे कहा था कि मैं तुम्हारे काम को तो ज्यादा नहीं जानती, लेकिन मेरी दो बातें हमेशा याद रखना। पहला- गरीबों के लिए काम करना और दूसरा कभी रिश्वत मत लेना। मुझे अपनी मां से मिली ये सीख अमूल्य थी। मैंने संकल्प किया कि हम जनता-जनार्दन की…
— Narendra Modi (@narendramodi) October 7, 2025
25 वर्षों की इस यात्रा में, मुझे ढेर सारे अनुभव मिले। हम सब ने मिलकर बहुत सी उपलब्धियां भी हासिल कीं। मुझे आज भी याद है कि जब मैं मुख्यमंत्री बना था, तो उस समय के गुजरात के लिए कुछ लोग क्या कहते थे। कहा जाता था- गुजरात दोबारा फिर कभी खड़ा नहीं हो पाएगा। हमारे नागरिक, हमारे… pic.twitter.com/OnhpY37emF
— Narendra Modi (@narendramodi) October 7, 2025
कभी सूखे से जूझने वाला गुजरात, आज कृषि क्षेत्र का ग्रोथ इंजन बन रहा है। बीते 2 दशक में, गुजरात की मैन्यूफैक्चरिंग और इंडस्ट्रियल कैपिसिटी में बहुत बड़ी क्रांति आई है। कर्फ्यू, हिंसा, तनाव जैसी बातें अतीत बन गई हैं। सोशल और फिजिकल इंफ्रास्ट्रक्चर में बहुत बड़ा सुधार हुआ है। आज… pic.twitter.com/FmU6ThM2y5
— Narendra Modi (@narendramodi) October 7, 2025
2013 में, भारतीय जनता पार्टी ने मुझे प्रधानमंत्री पद का दावेदार बनाकर 2014 के लोकसभा चुनाव की जिम्मेदारी सौंपी थी। संयोग से, वो दौर भी हमारे राष्ट्र के सामने अभूतपूर्व संकटों का समय था। देश में कांग्रेस सरकार और शासन के प्रति असीम अविश्वास था। यूपीए की तत्कालीन सरकार, भ्रष्टाचार… pic.twitter.com/ASly2d0qFb
— Narendra Modi (@narendramodi) October 7, 2025
बीते 11 वर्षों में हम भारत के लोगों ने परिश्रम की पराकाष्ठा करते हुए, निर्णायक कदम उठाते हुए, देश में अनेक ऐतिहासिक परिवर्तन किए। समाज का हर वर्ग सशक्त हुआ। हमारे युवाओं, हमारी नारीशक्ति और अन्नदाताओं के लिए विशेष प्रयास किए गए। भारत आज विश्व की सबसे बड़ी हेल्थकेयर और सोशल…
— Narendra Modi (@narendramodi) October 7, 2025
मैं आज देश के लोगों का उनके विश्वास, उनके स्नेह और उनके आशीर्वाद के लिए फिर एक बार आभार व्यक्त करता हूं। मां भारती की सेवा का ये अवसर, इस जीवन का सबसे बड़ा सम्मान है। मैं आप सभी को ये विश्वास दिलाता हूं, कि संविधान के हर एक शब्द, हर एक भाव को अपना आदर्श मानते हुए....हम आगे भी इसी… pic.twitter.com/E41Pyoa2fo
— Narendra Modi (@narendramodi) October 7, 2025











