ಇಂದು ವಿಶ್ವದ ಕಣ್ಣು ಭಾರತದತ್ತ ನೆಟ್ಟಿವೆ: ಪ್ರಧಾನಮಂತ್ರಿ
ಭಾರತದ ಯುವಜನರು ಹೆಚ್ಚು ಪರಿಣಿತರಾಗುತ್ತಿದ್ದಾರೆ ಮತ್ತು ನಾವೀನ್ಯತೆಗೆ ಚಾಲನೆ ನೀಡುತ್ತಿದ್ದಾರೆ: ಪ್ರಧಾನಮಂತ್ರಿ
"ಭಾರತ ಮೊದಲು" ಎಂಬುದು ಭಾರತದ ವಿದೇಶಾಂಗ ನೀತಿಯ ಮಂತ್ರವಾಗಿದೆ: ಪ್ರಧಾನಮಂತ್ರಿ
ಇಂದು, ಭಾರತವು ವಿಶ್ವ ಕ್ರಮಾಂಕದಲ್ಲಿ ಭಾಗವಹಿಸುವುದು ಮಾತ್ರವಲ್ಲದೆ ಭವಿಷ್ಯವನ್ನು ರೂಪಿಸಲು ಮತ್ತು ಭದ್ರಪಡಿಸಲು ಕೊಡುಗೆ ನೀಡುತ್ತಿದೆ: ಪ್ರಧಾನಮಂತ್ರಿ
ಭಾರತವು ಏಕಸ್ವಾಮ್ಯಕ್ಕಿಂತ ಮಾನವೀಯತೆಗೆ ಆದ್ಯತೆ ನೀಡಿದೆ: ಪ್ರಧಾನಮಂತ್ರಿ
ಇಂದು ಭಾರತ ಕೇವಲ ಕನಸುಗಳ ರಾಷ್ಟ್ರವಾಗಿರದೆ ಅವುಗಳನ್ನು ಈಡೇರಿಸುವ ರಾಷ್ಟ್ರವೂ ಆಗಿದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ ಮಂಟಪದಲ್ಲಿ ನಡೆದ ಟಿವಿ9 ಶೃಂಗಸಭೆ 2025 ರಲ್ಲಿ ಭಾಗವಹಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಡೀ ಟಿವಿ9 ತಂಡಕ್ಕೆ ಮತ್ತು ಅದರ ವೀಕ್ಷಕರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು. ಟಿವಿ9 ವಿಶಾಲವಾದ ಪ್ರಾದೇಶಿಕ ಪ್ರೇಕ್ಷಕರನ್ನು ಹೊಂದಿದ್ದು, ಈಗ ಜಾಗತಿಕ ಪ್ರೇಕ್ಷಕರೂ ಸೃಷ್ಟಿಯಾಗುತ್ತಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಟೆಲಿಕಾನ್ಫರೆನ್ಸ್‌ ಮೂಲಕ ಭಾಗವಹಿಸಿದ ಭಾರತೀಯ ವಲಸೆಗಾರರನ್ನು ಅವರು ಸ್ವಾಗತಿಸಿದರು ಮತ್ತು ಶುಭಾಶಯ ತಿಳಿಸಿದರು.

 

"ಇಂದು, ವಿಶ್ವದ ಕಣ್ಣುಗಳು ಭಾರತದ ಮೇಲೆ ನೆಟ್ಟಿವೆ" ಎಂದು ಪ್ರಧಾನಿ ಹೇಳಿದರು, ಪ್ರಪಂಚದಾದ್ಯಂತದ ಜನರು ಭಾರತದ ಬಗ್ಗೆ ಕುತೂಹಲ ಹೊಂದಿದ್ದಾರೆ. ಸ್ವಾತಂತ್ರ್ಯ ಬಂದು 70 ವರ್ಷಗಳ ನಂತರ ವಿಶ್ವದ 11ನೇ ಅತಿದೊಡ್ಡ ಆರ್ಥಿಕತೆಯಾಗಿದ್ದ ಭಾರತ 7-8 ವರ್ಷಗಳ ಅವಧಿಯಲ್ಲಿ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಅವರು ಹೇಳಿದರು. ಐಎಂಎಫ್ ವರದಿಯನ್ನು ಉಲ್ಲೇಖಿಸಿ, ಕಳೆದ 10 ವರ್ಷಗಳಲ್ಲಿ ಜಿಡಿಪಿಯನ್ನು ದ್ವಿಗುಣಗೊಳಿಸಿದ ವಿಶ್ವದ ಏಕೈಕ ಪ್ರಮುಖ ಆರ್ಥಿಕತೆ ಭಾರತವಾಗಿದೆ ಎಂದು ಶ್ರೀ ಮೋದಿ ಹೇಳಿದರು. ಕಳೆದ ದಶಕದಲ್ಲಿ ಭಾರತವು ತನ್ನ ಆರ್ಥಿಕತೆಗೆ 2 ಟ್ರಿಲಿಯನ್ ಡಾಲರ್‌ ಅನ್ನು ಸೇರಿಸಿದೆ ಎಂದು ಒತ್ತಿ ಹೇಳಿದ ಅವರು, ಜಿಡಿಪಿಯ ದ್ವಿಗುಣಗೊಳಿಸುವಿಕೆಯು ಕೇವಲ ಸಂಖ್ಯೆಗಳ ಬಗ್ಗೆ ಅಲ್ಲ, ಬದಲಿಗೆ 25 ಕೋಟಿ ಜನರನ್ನು ಬಡತನದಿಂದ ಹೊರತರುವ ಮತ್ತು 'ನವ-ಮಧ್ಯಮ ವರ್ಗ'ವನ್ನು ಸೃಷ್ಟಿಸುವಂತಹ ಪ್ರಮುಖ ಪರಿಣಾಮಗಳನ್ನು ಬೀರಿದೆ ಎಂದು ಹೇಳಿದರು. ನವ-ಮಧ್ಯಮ ವರ್ಗವು ಆರ್ಥಿಕತೆಗೆ ಕೊಡುಗೆ ನೀಡುವುದರೊಂದಿಗೆ ಕನಸುಗಳು ಮತ್ತು ಆಕಾಂಕ್ಷೆಗಳೊಂದಿಗೆ ಹೊಸ ಜೀವನವನ್ನು ಪ್ರಾರಂಭಿಸುತ್ತಿದೆ ಮತ್ತು ಅದನ್ನು ರೋಮಾಂಚಕಗೊಳಿಸುತ್ತಿದೆ ಎಂದು ಅವರು ಹೇಳಿದರು. "ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿದೆ" ಎಂದು ಪ್ರಧಾನಿ ಹೇಳಿದರು, ಯುವಕರು ಹೆಚ್ಚು ಕೌಶಲ್ಯ ಹೊಂದುತ್ತಿದ್ದಾರೆ, ಇದು ನಾವೀನ್ಯತೆಯನ್ನು ವೇಗಗೊಳಿಸುತ್ತಿದೆ ಎಂದು ಅವರು ಹೇಳಿದರು. "ಭಾರತ ಮೊದಲು” ಭಾರತದ ವಿದೇಶಾಂಗ ನೀತಿಯ ಮಂತ್ರವಾಗಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಭಾರತವು ಒಮ್ಮೆ ಎಲ್ಲಾ ದೇಶಗಳಿಂದ ಸಮಾನ ಅಂತರವನ್ನು ಕಾಯ್ದುಕೊಳ್ಳುವ ನೀತಿಯನ್ನು ಅನುಸರಿಸುತ್ತಿತ್ತು, ಪ್ರಸ್ತುತ ವಿಧಾನವು ಎಲ್ಲರಿಗೂ ಸಮಾನವಾಗಿ ಹತ್ತಿರವಾಗುವ –ಈಕ್ವಿ-ಕ್ಲೋಸ್‌ನೆಸ್-‌ ನೀತಿಯನ್ನು ಒತ್ತಿಹೇಳುತ್ತದೆ. ಜಾಗತಿಕ ಸಮುದಾಯವು ಈಗ ಭಾರತದ ಅಭಿಪ್ರಾಯಗಳು, ಆವಿಷ್ಕಾರಗಳು ಮತ್ತು ಪ್ರಯತ್ನಗಳನ್ನು ಹಿಂದೆಂದಿಗಿಂತಲೂ ಗೌರವಿಸುತ್ತದೆ ಎಂದು ಪ್ರಧಾನಿ ಹೇಳಿದರು. ಜಗತ್ತು ಇಂದು ಭಾರತವನ್ನು ತೀವ್ರವಾಗಿ ಗಮನಿಸುತ್ತಿದೆ ಮತ್ತು "ಭಾರತವು ಇಂದು ಏನು ಯೋಚಿಸುತ್ತದೆ" ಎಂದು ಅರ್ಥಮಾಡಿಕೊಳ್ಳಲು ಉತ್ಸುಕವಾಗಿರುತ್ತದೆ ಎಂದು ಅವರು ಒತ್ತಿ ಹೇಳಿದರು.

ಭಾರತವು ವಿಶ್ವ ಕ್ರಮಾಂಕದಲ್ಲಿ ಭಾಗವಹಿಸುವುದು ಮಾತ್ರವಲ್ಲದೆ ಭವಿಷ್ಯವನ್ನು ರೂಪಿಸಲು ಮತ್ತು ಭದ್ರಪಡಿಸುವಲ್ಲಿ ಸಕ್ರಿಯವಾಗಿ ಕೊಡುಗೆ ನೀಡುತ್ತಿದೆ ಎಂದು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು. ಜಾಗತಿಕ ಭದ್ರತೆಯಲ್ಲಿ, ವಿಶೇಷವಾಗಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ  ಭಾರತದ ಪ್ರಮುಖ ಪಾತ್ರದ ಬಗ್ಗೆ ಅವರು ಹೇಳಿದರು. ಸಂದೇಹವಾದಿಗಳನ್ನು ಧಿಕ್ಕರಿಸಿ, ಭಾರತವು ತನ್ನದೇ ಆದ ಲಸಿಕೆಗಳನ್ನು ಅಭಿವೃದ್ಧಿಪಡಿಸಿತು, ಕ್ಷಿಪ್ರ ಲಸಿಕೆಯನ್ನು ಖಾತ್ರಿಪಡಿಸಿತು ಮತ್ತು 150 ಕ್ಕೂ ಹೆಚ್ಚು ದೇಶಗಳಿಗೆ ಔಷಧಿಗಳನ್ನು ಸರಬರಾಜು ಮಾಡಿತು ಎಂದು ಅವರು ಹೇಳಿದರು. ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ, ಭಾರತದ ಸೇವೆ ಮತ್ತು ಸಹಾನುಭೂತಿಯ ಮೌಲ್ಯಗಳು ಪ್ರಪಂಚದಾದ್ಯಂತ ಪ್ರತಿಧ್ವನಿಸುತ್ತವೆ, ಅದರ ಸಂಸ್ಕೃತಿ ಮತ್ತು ಸಂಪ್ರದಾಯಗಳ ಸಾರವನ್ನು ಪ್ರದರ್ಶಿಸುತ್ತವೆ ಎಂದು ಅವರು ಒತ್ತಿ ಹೇಳಿದರು.

 

ಎರಡನೆಯ ಮಹಾಯುದ್ಧದ ನಂತರದ ಜಾಗತಿಕ ಸನ್ನಿವೇಶದ ಬಗ್ಗೆ ವಿವರಿಸಿದ ಅವರು, ಬಹುತೇಕ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲವೇ ದೇಶಗಳು ಹೇಗೆ ಪ್ರಾಬಲ್ಯ ಹೊಂದಿವೆ ಎಂಬುದನ್ನು ಗಮನಿಸಿದರು. ಭಾರತದ ವಿಧಾನವು ಯಾವಾಗಲೂ ಏಕಸ್ವಾಮ್ಯಕ್ಕಿಂತ ಮಾನವೀಯತೆಗೆ ಆದ್ಯತೆ ನೀಡುತ್ತದೆ, ಎಲ್ಲರನ್ನೂ ಒಳಗೊಂಡ ಮತ್ತು ಭಾಗವಹಿಸುವಿಕೆಯ ಜಾಗತಿಕ ಕ್ರಮಕ್ಕಾಗಿ ಶ್ರಮಿಸುತ್ತಿದೆ ಎಂದು ಹೇಳಿದರು. ಈ ದೃಷ್ಟಿಕೋನಕ್ಕೆ ಅನುಗುಣವಾಗಿ ಭಾರತವು 21 ನೇ ಶತಮಾನದ ಜಾಗತಿಕ ಸಂಸ್ಥೆಗಳ ಸ್ಥಾಪನೆಗೆ ದಾರಿ ಮಾಡಿಕೊಟ್ಟಿದೆ, ಆ ಮೂಲಕ ಸಾಮೂಹಿಕ ಕೊಡುಗೆ ಮತ್ತು ಸಹಕಾರವನ್ನು ಖಾತ್ರಿಪಡಿಸಿದೆ ಎಂದು ಅವರು ಹೇಳಿದರು. ಪ್ರಪಂಚದಾದ್ಯಂತ ಮೂಲಸೌಕರ್ಯಗಳಿಗೆ ಅಪಾರ ಹಾನಿಯನ್ನುಂಟುಮಾಡುವ ನೈಸರ್ಗಿಕ ವಿಕೋಪಗಳ ಸವಾಲನ್ನು ಎದುರಿಸಲು ಭಾರತವು ವಿಪತ್ತು ನಿರೋಧಕ ಮೂಲಸೌಕರ್ಯ ಒಕ್ಕೂಟವನ್ನು (ಸಿ ಡಿ ಆರ್ ಐ) ಸ್ಥಾಪಿಸಲು ಉಪಕ್ರಮವನ್ನು ತೆಗೆದುಕೊಂಡಿತು ಎಂದು ಶ್ರೀ ಮೋದಿ ಹೇಳಿದರು. ಸಿ ಡಿ ಆರ್ ಐ ವಿಪತ್ತು ಸನ್ನದ್ಧತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವ ಜಾಗತಿಕ ಬದ್ಧತೆಯನ್ನು ಪ್ರತಿನಿಧಿಸುತ್ತದೆ ಎಂದು ಅವರು ಹೇಳಿದರು. ನೈಸರ್ಗಿಕ ವಿಕೋಪಗಳನ್ನು ತಡೆದುಕೊಳ್ಳಬಲ್ಲ ಮತ್ತು ಪ್ರಪಂಚದಾದ್ಯಂತ ಭದ್ರತೆಯನ್ನು ಕಾಪಾಡಬಲ್ಲ ಸೇತುವೆಗಳು, ರಸ್ತೆಗಳು, ಕಟ್ಟಡಗಳು ಮತ್ತು ಪವರ್ ಗ್ರಿಡ್‌ ಗಳು ಸೇರಿದಂತೆ ವಿಪತ್ತು-ನಿರೋಧಕ ಮೂಲಸೌಕರ್ಯಗಳ ನಿರ್ಮಾಣವನ್ನು ಉತ್ತೇಜಿಸಲು ಭಾರತದ ಪ್ರಯತ್ನಗಳನ್ನು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು.

ಭವಿಷ್ಯದ ಸವಾಲುಗಳನ್ನು ನಿಭಾಯಿಸಲು ಜಾಗತಿಕ ಸಹಯೋಗದ ಮಹತ್ವವನ್ನು ಒತ್ತಿಹೇಳಿದ ಶ್ರೀ ಮೋದಿ, ಸಣ್ಣ ರಾಷ್ಟ್ರಗಳಿಗೂ ಸಹ ಸುಸ್ಥಿರ ಇಂಧನ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಭಾರತದ ಅಂತರರಾಷ್ಟ್ರೀಯ ಸೌರ ಒಕ್ಕೂಟದ (ಐ ಎಸ್ ಎ) ಉಪಕ್ರಮವನ್ನು ಪರಿಹಾರವಾಗಿ ಎತ್ತಿ ತೋರಿಸಿದರು. ಈ ಪ್ರಯತ್ನವು ಹವಾಮಾನದ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುವುದು ಮಾತ್ರವಲ್ಲ ಜಾಗತಿಕ ದಕ್ಷಿಣ ದೇಶಗಳ ಇಂಧನ ಅಗತ್ಯಗಳನ್ನು ಸಹ ಭದ್ರಪಡಿಸುತ್ತದೆ ಎಂದು ಅವರು ಹೇಳಿದರು. ಈ ಉಪಕ್ರಮಕ್ಕೆ 100 ಕ್ಕೂ ಹೆಚ್ಚು ದೇಶಗಳು ಸೇರಿವೆ ಎಂದು ಅವರು ಹೆಮ್ಮೆಯಿಂದ ಹೇಳಿದರು. ವ್ಯಾಪಾರ ಅಸಮತೋಲನ ಮತ್ತು ಲಾಜಿಸ್ಟಿಕ್ಸ್ ವಿಷಯಗಳ ಜಾಗತಿಕ ಸವಾಲುಗಳ ಬಗ್ಗೆ ಮಾತನಾಡಿದ ಶ್ರೀ ಮೋದಿ, ಭಾರತ -ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಸಿ) ಸೇರಿದಂತೆ ಹೊಸ ಉಪಕ್ರಮಗಳನ್ನು ಪ್ರಾರಂಭಿಸಲು ವಿಶ್ವದೊಂದಿಗಿನ ಭಾರತದ ಸಹಯೋಗದ ಪ್ರಯತ್ನಗಳನ್ನು ಎತ್ತಿ ತೋರಿಸಿದರು. ಈ ಯೋಜನೆಯು ಏಷ್ಯಾ, ಯುರೋಪ್ ಮತ್ತು ಮಧ್ಯಪ್ರಾಚ್ಯವನ್ನು ವಾಣಿಜ್ಯ ಮತ್ತು ಸಂಪರ್ಕದ ಮೂಲಕ ಸಂಪರ್ಕಿಸುತ್ತದೆ, ಆರ್ಥಿಕ ಅವಕಾಶಗಳನ್ನು ಉತ್ತೇಜಿಸುತ್ತದೆ ಮತ್ತು ಪರ್ಯಾಯ ವ್ಯಾಪಾರ ಮಾರ್ಗಗಳನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. ಈ ಉಪಕ್ರಮವು ಜಾಗತಿಕ ಪೂರೈಕೆ ಸರಪಳಿಯನ್ನು ಬಲಪಡಿಸುತ್ತದೆ ಎಂದು ಅವರು ಒತ್ತಿಹೇಳಿದರು.

ಜಾಗತಿಕ ವ್ಯವಸ್ಥೆಗಳನ್ನು ಹೆಚ್ಚು ಭಾಗವಹಿಸುವ ಮತ್ತು ಪ್ರಜಾಪ್ರಭುತ್ವವನ್ನಾಗಿ ಮಾಡುವ ಭಾರತದ ಪ್ರಯತ್ನಗಳನ್ನು ಒತ್ತಿಹೇಳುತ್ತಾ, ಭಾರತ ಮಂಟಪದಲ್ಲಿ ನಡೆದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಆಫ್ರಿಕಾ ಒಕ್ಕೂಟವನ್ನು ಜಿ-20 ರ ಖಾಯಂ ಸದಸ್ಯನನ್ನಾಗಿ ಮಾಡಲು ತೆಗೆದುಕೊಂಡ ಐತಿಹಾಸಿಕ ಹೆಜ್ಜೆಯ ಬಗ್ಗೆ ಪ್ರಧಾನಿ ಗಮನ ಸೆಳೆದರು. ಈ ದೀರ್ಘಕಾಲದ ಬೇಡಿಕೆಯನ್ನು ಭಾರತದ ಅಧ್ಯಕ್ಷತೆಯಲ್ಲಿ ಈಡೇರಿಸಲಾಯಿತು ಎಂದು ಅವರು ಒತ್ತಿ ಹೇಳಿದರು. ಜಾಗತಿಕ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಗಳಲ್ಲಿ ಜಾಗತಿಕ ದಕ್ಷಿಣ ದೇಶಗಳ ಧ್ವನಿಯಾಗಿ ಭಾರತದ ಪಾತ್ರವನ್ನು ಶ್ರೀ ಮೋದಿ ಒತ್ತಿಹೇಳಿದರು, ಅಂತರರಾಷ್ಟ್ರೀಯ ಯೋಗ ದಿನ, ಸಾಂಪ್ರದಾಯಿಕ ಔಷಧಗಳ ಡಬ್ಲ್ಯು ಎಚ್‌ ಜಾಗತಿಕ ಕೇಂದ್ರ ಮತ್ತು ಕೃತಕ ಬುದ್ಧಿಮತ್ತೆಗಾಗಿ ಜಾಗತಿಕ ಚೌಕಟ್ಟಿನ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತದ ಮಹತ್ವದ ಕೊಡುಗೆಗಳನ್ನು ಎತ್ತಿ ತೋರಿಸಿದರು. ಈ ಪ್ರಯತ್ನಗಳು ಹೊಸ ವಿಶ್ವ ಕ್ರಮಾಂಕದಲ್ಲಿ ಭಾರತದ ಬಲವಾದ ಉಪಸ್ಥಿತಿಯನ್ನು ಸ್ಥಾಪಿಸಿವೆ ಎಂದು ಅವರು ಹೇಳಿದರು. "ಇದು ಕೇವಲ ಪ್ರಾರಂಭವಾಗಿದೆ, ಏಕೆಂದರೆ ಜಾಗತಿಕ ವೇದಿಕೆಗಳಲ್ಲಿನ ಭಾರತದ ಸಾಮರ್ಥ್ಯಗಳು ಹೊಸ ಎತ್ತರವನ್ನು ತಲುಪುತ್ತಲೇ ಇರುತ್ತವೆ" ಎಂದು ಅವರು ಹೇಳಿದರು.

 

 

21 ನೇ ಶತಮಾನದಲ್ಲಿ 25 ವರ್ಷಗಳು ಕಳೆದಿವೆ, ಅದರಲ್ಲಿ 11 ವರ್ಷಗಳು ತಮ್ಮ ಸರ್ಕಾರದ ಅಡಿಯಲ್ಲಿ ರಾಷ್ಟ್ರದ ಸೇವೆಗೆ ಮೀಸಲಾಗಿವೆ ಎಂದು ಹೇಳಿದ ಶ್ರೀ ಮೋದಿ, "ಭಾರತ ಇಂದು ಏನು ಯೋಚಿಸುತ್ತಿದೆ" ಎಂಬುದನ್ನು ಅರ್ಥಮಾಡಿಕೊಳ್ಳಲು ಹಿಂದಿನ ಪ್ರಶ್ನೆಗಳು ಮತ್ತು ಉತ್ತರಗಳನ್ನು ತಿಳಿದುಕೊಳ್ಳಬೇಕಾದ ಮಹತ್ವವನ್ನು ಒತ್ತಿ ಹೇಳಿದರು. ಅವಲಂಬನೆಯಿಂದ ಸ್ವಾವಲಂಬನೆ, ಆಕಾಂಕ್ಷೆಗಳಿಂದ ಸಾಧನೆಗಳು ಮತ್ತು ಹತಾಶೆಯಿಂದ ಅಭಿವೃದ್ಧಿಯತ್ತ ಆಗಿರುವ ಬದಲಾವಣೆಯನ್ನು ಅವರು ಎತ್ತಿ ತೋರಿಸಿದರು. ಒಂದು ದಶಕದ ಹಿಂದೆ ಹಳ್ಳಿಗಳಲ್ಲಿ ಶೌಚಾಲಯ ಸಮಸ್ಯೆಯಿಂದಾಗಿ ಮಹಿಳೆಯರು ಸೀಮಿತ ಆಯ್ಕೆಗಳನ್ನು ಹೊಂದಿದ್ದರು, ಆದರೆ ಇಂದು ಸ್ವಚ್ಛ ಭಾರತ್ ಮಿಷನ್ ಪರಿಹಾರವನ್ನು ಒದಗಿಸಿದೆ ಎಂದು ಅವರು ಹೇಳಿದರು. 2013 ರಲ್ಲಿ, ಆರೋಗ್ಯ ರಕ್ಷಣೆಯಲ್ಲಿ ದುಬಾರಿ ಚಿಕಿತ್ಸೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು, ಆದರೆ ಇಂದು, ಆಯುಷ್ಮಾನ್ ಭಾರತ್ ಪರಿಹಾರವನ್ನು ನೀಡಿದೆ. ಅಂತೆಯೇ, ಹೊಗೆಯಿಂದ ತುಂಬಿದ್ದ ಬಡವರ ಅಡಿಗೆಮನೆಗಳು ಈಗ ಉಜ್ವಲಾ ಯೋಜನೆಯಿಂದ ಪ್ರಯೋಜನ ಪಡೆಯುತ್ತಿವೆ ಎಂದು ಅವರು ಎತ್ತಿ ತೋರಿಸಿದರು. 2013 ರಲ್ಲಿ ಮಹಿಳೆಯರು ಬ್ಯಾಂಕ್ ಖಾತೆಗಳ ಬಗ್ಗೆ ಕೇಳಿದಾಗ ಮೌನವಾಗಿರುತ್ತಿದ್ದರು, ಆದರೆ ಇಂದು, ಜನಧನ್ ಯೋಜನೆಯಿಂದಾಗಿ 30 ಕೋಟಿಗೂ ಹೆಚ್ಚು ಮಹಿಳೆಯರು ತಮ್ಮ ಖಾತೆಗಳನ್ನು ಹೊಂದಿದ್ದಾರೆ ಎಂದು ಪ್ರಧಾನಿ ಗಮನಸೆಳೆದರು. ಒಂದು ಕಾಲದಲ್ಲಿ ಬಾವಿಗಳು ಮತ್ತು ಕೆರೆಗಳ ಮೇಲೆ ಅವಲಂಬಿತವಾಗಿದ್ದ ಕುಡಿಯುವ ನೀರಿಗಾಗಿನ ಹೋರಾಟವನ್ನು ಹರ್ ಘರ್ ನಲ್ ಸೆ ಜಲ್ ಯೋಜನೆ ಮೂಲಕ ಪರಿಹರಿಸಲಾಗಿದೆ ಎಂದು ಅವರು ಹೇಳಿದರು. ಬದಲಾಗಿರುವುದು ಕೇವಲ ಒಂದು ದಶಕವಲ್ಲ, ಜನರ ಜೀವನವೂ ಸಹ ಬದಲಾಗಿದೆ ಎಂದು ಅವರು ಒತ್ತಿ ಹೇಳಿದರು. ಭಾರತದ ಅಭಿವೃದ್ಧಿ ಮಾದರಿಯನ್ನು ಜಗತ್ತು ಗುರುತಿಸುತ್ತಿದೆ ಮತ್ತು ಸ್ವೀಕರಿಸುತ್ತಿದೆ ಎಂದು ಅವರು ಹೇಳಿದರು. "ಭಾರತ ಈಗ ಕೇವಲ 'ಕನಸುಗಳ ರಾಷ್ಟ್ರ'ವಲ್ಲ, ಬದಲಾಗಿ 'ಅವುಗಳನ್ನು ಈಡೇರಿಸುವ ರಾಷ್ಟ್ರವಾಗಿದೆ" ಎಂದು ಅವರು ಹೇಳಿದರು.

ಒಂದು ರಾಷ್ಟ್ರವು ತನ್ನ ನಾಗರಿಕರ ಅನುಕೂಲತೆ ಮತ್ತು ಸಮಯಕ್ಕೆ ಪ್ರಾಮುಖ್ಯತೆ ನೀಡಿದಾಗ ಅದು ರಾಷ್ಟ್ರದ ದಿಕ್ಕನ್ನೇ ಬದಲಾಯಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು. ಇದನ್ನೇ ಇಂದು ಭಾರತ ಕಾಣುತ್ತಿದೆ ಎಂದು ಅವರು ಒತ್ತಿ ಹೇಳಿದರು. ಪಾಸ್ ಪೋರ್ಟ್ ಅರ್ಜಿ ಪ್ರಕ್ರಿಯೆಯಲ್ಲಿನ ಪ್ರಮುಖ ಬದಲಾವಣೆಗಳ ಉದಾಹರಣೆಗಳನ್ನು ಅವರು ನೀಡಿದರು. ಈ ಹಿಂದೆ ಪಾಸ್‌ ಪೋರ್ಟ್ ಪಡೆಯುವುದು ತೊಡಕಿನ ಕೆಲಸವಾಗಿತ್ತು, ದೀರ್ಘ ಕಾಯುವಿಕೆ, ಸಂಕೀರ್ಣ ದಾಖಲೆಗಳು ಮತ್ತು ಸೀಮಿತ ಸಂಖ್ಯೆಯಲ್ಲಿದ್ದ ಪಾಸ್‌ ಪೋರ್ಟ್ ಕೇಂದ್ರಗಳು ಹೆಚ್ಚಾಗಿ ರಾಜ್ಯ ರಾಜಧಾನಿಗಳಲ್ಲಿದ್ದವು ಎಂದು ಅವರು ಹೇಳಿದರು. ಸಣ್ಣ ಪಟ್ಟಣಗಳ ಜನರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ರಾತ್ರಿಯ ತಂಗುವಿಕೆಗೆ ವ್ಯವಸ್ಥೆ ಮಾಡಬೇಕಾಗಿತ್ತು ಎಂದು ಅವರು ಒತ್ತಿ ಹೇಳಿದರು. ಈ ಸವಾಲುಗಳು ಈಗ ಸಂಪೂರ್ಣವಾಗಿ ಬದಲಾಗಿವೆ ಎಂದು ಪ್ರಧಾನಿ ಒತ್ತಿ ಹೇಳಿದರು. ದೇಶದಲ್ಲಿ ಪಾಸ್‌ ಪೋರ್ಟ್ ಸೇವಾ ಕೇಂದ್ರಗಳ ಸಂಖ್ಯೆ ಕೇವಲ 77 ರಿಂದ 550 ಕ್ಕಿಂತ ಹೆಚ್ಚಾಗಿವೆ, ಹೆಚ್ಚುವರಿಯಾಗಿ, ಪಾಸ್‌ ಪೋರ್ಟ್ ಪಡೆಯಲು 50 ದಿನಗಳವರೆಗೆ ಕಾಯುವ ಸಮಯ ಈಗ ಕೇವಲ 5-6 ದಿನಗಳಿಗೆ ಇಳಿದಿದೆ ಎಂದು ಅವರು ಹೇಳಿದರು.

ಭಾರತದ ಬ್ಯಾಂಕಿಂಗ್ ಮೂಲಸೌಕರ್ಯದಲ್ಲಿ ಕಂಡುಬಂದ ಪರಿವರ್ತನೆಯ ಕುರಿತು ಮಾತನಾಡಿದ ಶ್ರೀ ಮೋದಿ, 50-60 ವರ್ಷಗಳ ಹಿಂದೆ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು, ಸುಲಭವಾಗಿ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಭರವಸೆ ನೀಡಲಾಯಿತು, ಆದರೆ ಲಕ್ಷಾಂತರ ಹಳ್ಳಿಗಳಿಗೆ ಇನ್ನೂ ಅಂತಹ ಸೌಲಭ್ಯಗಳ ಕೊರತೆಯಿತ್ತು ಎಂದು ಒತ್ತಿ ಹೇಳಿದರು. ಈ ಪರಿಸ್ಥಿತಿ ಈಗ ಬದಲಾಗಿದೆ ಎಂದು ಅವರು ಒತ್ತಿ ಹೇಳಿದರು. ಆನ್‌ಲೈನ್ ಬ್ಯಾಂಕಿಂಗ್ ಪ್ರತಿ ಮನೆಯನ್ನು ತಲುಪಿದೆ ಮತ್ತು ಇಂದು, ದೇಶದ ಪ್ರತಿ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬ್ಯಾಂಕಿಂಗ್ ಸಂಪರ್ಕವಿದೆ ಎಂದು ಪ್ರಧಾನಿ ಹೇಳಿದರು. ಸರ್ಕಾರವು ಬ್ಯಾಂಕಿಂಗ್ ಮೂಲಸೌಕರ್ಯವನ್ನು ವಿಸ್ತರಿಸುವುದಲ್ಲದೆ, ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸಿದೆ ಎಂದು ಅವರು ಹೇಳಿದರು. ಬ್ಯಾಂಕುಗಳ ಅನುತ್ಪಾದಕ ಆಸ್ತಿಗಳು (ಎನ್‌ ಪಿ ಎ) ಗಮನಾರ್ಹವಾಗಿ ಕಡಿಮೆಯಾಗಿವೆ ಮತ್ತು ಅವುಗಳ ಲಾಭವು ದಾಖಲೆಯ ಗರಿಷ್ಠ ₹1.4 ಲಕ್ಷ ಕೋಟಿ ತಲುಪಿದೆ ಎಂದು ಅವರು ಹೇಳಿದರು. ಸಾರ್ವಜನಿಕ ಹಣವನ್ನು ಲೂಟಿ ಮಾಡಿದವರನ್ನು ಈಗ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು, ಜಾರಿ ನಿರ್ದೇಶನಾಲಯ (ಇಡಿ) ₹22,000 ಕೋಟಿಗೂ ಹೆಚ್ಚು ಹಣವನ್ನು ವಸೂಲಿ ಮಾಡಿದೆ, ಅದನ್ನು ಕಾನೂನುಬದ್ಧವಾಗಿ ಸಂತ್ರಸ್ತರಿಗೆ ಹಿಂತಿರುಗಿಸಲಾಗುತ್ತಿದೆ ಎಂದು ಅವರು ಹೇಳಿದರು.

 

ದಕ್ಷತೆಯು ಪರಿಣಾಮಕಾರಿ ಆಡಳಿತಕ್ಕೆ ಕಾರಣವಾಗುತ್ತದೆ ಎಂದು ಒತ್ತಿ ಹೇಳಿದ ಪ್ರಧಾನಿ, ಕಡಿಮೆ ಸಮಯದಲ್ಲಿ ಹೆಚ್ಚಿನದನ್ನು ಸಾಧಿಸುವುದು, ಕಡಿಮೆ ಸಂಪನ್ಮೂಲಗಳನ್ನು ಬಳಸುವುದು ಮತ್ತು ಅನಗತ್ಯ ಖರ್ಚುಗಳನ್ನು ತಪ್ಪಿಸುವ ಮಹತ್ವವನ್ನು ಒತ್ತಿ ಹೇಳಿದರು. "ರೆಡ್ ಟೇಪ್ ಗಿಂತ ರೆಡ್ ಕಾರ್ಪೆಟ್" ಗೆ ಆದ್ಯತೆ ನೀಡುವುದು ರಾಷ್ಟ್ರದ ಸಂಪನ್ಮೂಲಗಳಿಗೆ ನೀಡುವ ಗೌರವವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. ಕಳೆದ 11 ವರ್ಷಗಳಿಂದ ಇದು ತಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಹೇಳಿದರು.

ಸಚಿವಾಲಯಗಳಲ್ಲಿ ಹೆಚ್ಚಿನ ವ್ಯಕ್ತಿಗಳಿಗೆ ಅವಕಾಶ ನೀಡುವ ಹಿಂದಿನ ಪದ್ಧತಿಯನ್ನು ಉಲ್ಲೇಖಿಸಿದ ಶ್ರೀ ಮೋದಿ, ಇದು ಆಗಾಗ್ಗೆ ಅಸಮರ್ಥತೆಗೆ ಕಾರಣವಾಗುತ್ತಿತ್ತು, ತಮ್ಮ ಸರ್ಕಾರವು ತನ್ನ ಮೊದಲ ಅವಧಿಯಲ್ಲಿ ರಾಜಕೀಯ ಒತ್ತಾಯಗಳಿಗಿಂತ ದೇಶದ ಸಂಪನ್ಮೂಲಗಳು ಮತ್ತು ಅಗತ್ಯಗಳಿಗೆ ಆದ್ಯತೆ ನೀಡಲು ಹಲವಾರು ಸಚಿವಾಲಯಗಳನ್ನು ವಿಲೀನಗೊಳಿಸಿತು ಎಂದು ಎತ್ತಿ ತೋರಿಸಿದರು. ನಗರಾಭಿವೃದ್ಧಿ ಸಚಿವಾಲಯ ಮತ್ತು ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯವನ್ನು ವಿಲೀನಗೊಳಿಸಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವನ್ನು ರೂಪಿಸಲಾಯಿತು ಎಂದು ಅವರು ಉದಾಹರಣೆ ನೀಡಿದರು. ಅದೇ ರೀತಿ, ಸಾಗರೋತ್ತರ ವ್ಯವಹಾರಗಳ ಸಚಿವಾಲಯವನ್ನು ವಿದೇಶಾಂಗ ಸಚಿವಾಲಯದೊಂದಿಗೆ ಸಂಯೋಜಿಸಲಾಯಿತು. ಜಲಸಂಪನ್ಮೂಲ ಮತ್ತು ನದಿ ಅಭಿವೃದ್ಧಿ ಸಚಿವಾಲಯವನ್ನು ಕುಡಿಯುವ ನೀರಿನ ಸಚಿವಾಲಯದೊಂದಿಗೆ ವಿಲೀನಗೊಳಿಸಿ ಜಲಶಕ್ತಿ ಸಚಿವಾಲಯವನ್ನು ರಚಿಸಲಾಗಿದೆ ಎಂದು ಅವರು ಹೇಳಿದರು. ಈ ನಿರ್ಧಾರಗಳು ದೇಶದ ಆದ್ಯತೆಗಳು ಮತ್ತು ಸಂಪನ್ಮೂಲಗಳ ಸಮರ್ಥ ಬಳಕೆಯಿಂದ ಚಾಲಿತವಾಗಿವೆ ಎಂದು ಅವರು ಒತ್ತಿ ಹೇಳಿದರು.

ನಿಯಮಗಳು ಮತ್ತು ನಿಯಮಾವಳಿಗಳನ್ನು ಸರಳೀಕರಿಸಲು ಮತ್ತು ಕಡಿಮೆ ಮಾಡಲು ಸರ್ಕಾರ ಕೈಗೊಂಡ ಪ್ರಯತ್ನಗಳನ್ನು ಒತ್ತಿ ಹೇಳಿದ ಪ್ರಧಾನಿ, ಕಾಲಕ್ರಮೇಣ ತಮ್ಮ ಪ್ರಸ್ತುತತೆಯನ್ನು ಕಳೆದುಕೊಂಡಿದ್ದ ಸುಮಾರು 1,500 ಹಳೆಯ ಕಾನೂನುಗಳನ್ನು ತಮ್ಮ ಸರ್ಕಾರ ರದ್ದುಗೊಳಿಸಿದೆ ಎಂದು ಹೇಳಿದರು. ಹೆಚ್ಚುವರಿಯಾಗಿ, ಸುಮಾರು 40,000 ಅನುಸರಣೆಗಳನ್ನು ತೆಗೆದುಹಾಕಲಾಗಿದೆ. ಜಿ ಎಸ್‌ ಟಿ ಪರಿಚಯಿಸುವ ಮೂಲಕ ಕೈಗೊಂಡ ಸುಧಾರಣೆಯ ಮತ್ತೊಂದು ಉದಾಹರಣೆಯನ್ನು ಪ್ರಧಾನಿ ನೀಡಿದರು. 30 ಕ್ಕೂ ಹೆಚ್ಚು ತೆರಿಗೆಗಳನ್ನು ಒಂದೇ ತೆರಿಗೆಯಾಗಿ ಏಕೀಕರಿಸಲಾಗಿದೆ, ಇದು ಪ್ರಕ್ರಿಯೆಗಳು ಮತ್ತು ದಾಖಲಾತಿಗಳ ವಿಷಯದಲ್ಲಿ ಗಣನೀಯ ಉಳಿತಾಯವನ್ನು ತಂದಿದೆ ಎಂದು ಅವರು ಹೇಳಿದರು.

ಹಿಂದೆ ಸರ್ಕಾರಿ ಖರೀದಿಯಲ್ಲಿ ಕಂಡುಬಂದಿದ್ದ ಅದಕ್ಷತೆ ಮತ್ತು ಭ್ರಷ್ಟಾಚಾರವನ್ನು ಒತ್ತಿ ಹೇಳಿದ ಪ್ರಧಾನಿ, ಈ ಸಮಸ್ಯೆಗಳನ್ನು ಪರಿಹರಿಸಲು ತಮ್ಮ ಸರ್ಕಾರ ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (ಜಿಇಎಂ) ವೇದಿಕೆಯನ್ನು ಪರಿಚಯಿಸಿದೆ ಎಂದು ಹೇಳಿದರು. ಸರ್ಕಾರಿ ಇಲಾಖೆಗಳು ಈಗ ಈ ವೇದಿಕೆಯಲ್ಲಿ ತಮ್ಮ ಅವಶ್ಯಕತೆಗಳನ್ನು ಪಟ್ಟಿ ಮಾಡುತ್ತವೆ, ಮಾರಾಟಗಾರರು ಬಿಡ್‌ ಗಳನ್ನು ಮಾಡುತ್ತಾರೆ ಮತ್ತು ಆದೇಶಗಳನ್ನು ಪಾರದರ್ಶಕವಾಗಿ ಅಂತಿಮಗೊಳಿಸಲಾಗುತ್ತದೆ ಎಂದು ಅವರು ವಿವರಿಸಿದರು. ಈ ಉಪಕ್ರಮವು ಭ್ರಷ್ಟಾಚಾರವನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ ಮತ್ತು ಸರ್ಕಾರಕ್ಕೆ ₹1 ಲಕ್ಷ ಕೋಟಿಗೂ ಹೆಚ್ಚು ಉಳಿತಾಯ ಮಾಡಿದೆ ಎಂದು ಅವರು ಹೇಳಿದರು. ಭಾರತದ ನೇರ ಲಾಭ ವರ್ಗಾವಣೆ (ಡಿಬಿಟಿ) ವ್ಯವಸ್ಥೆಯ ಜಾಗತಿಕ ಮನ್ನಣೆಯನ್ನು ಪ್ರಧಾನಿ ಒತ್ತಿ ಹೇಳಿದರು. ಡಿಬಿಟಿ ₹3 ಲಕ್ಷ ಕೋಟಿಗೂ ಹೆಚ್ಚು ತೆರಿಗೆದಾರರ ಹಣವು ಅನರ್ಹರಿಗೆ ಹೋಗುವುದನ್ನು ತಡೆಗಟ್ಟಿದೆ ಎಂದು ಅವರು ಹೇಳಿದರು. ಸರ್ಕಾರಿ ಯೋಜನೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದ ಅಸ್ತಿತ್ವದಲ್ಲಿಲ್ಲದ ವ್ಯಕ್ತಿಗಳು ಸೇರಿದಂತೆ 10 ಕೋಟಿಗೂ ಹೆಚ್ಚು ನಕಲಿ ಫಲಾನುಭವಿಗಳನ್ನು ಅಧಿಕೃತ ದಾಖಲೆಗಳಿಂದ ತೆಗೆದುಹಾಕಲಾಗಿದೆ ಎಂದು ಅವರು ಹೇಳಿದರು.

ಪ್ರತಿಯೊಬ್ಬ ತೆರಿಗೆದಾರರ ಕೊಡುಗೆಯ ಪ್ರಾಮಾಣಿಕ ಬಳಕೆ ಮತ್ತು ತೆರಿಗೆದಾರರ ಮೇಲಿನ ಗೌರವದ ಬಗ್ಗೆ ಸರ್ಕಾರ ಹೊಂದಿರುವ ಬದ್ಧತೆಯನ್ನು ಒತ್ತಿ ಹೇಳಿದ ಶ್ರೀ ಮೋದಿ, ತೆರಿಗೆ ವ್ಯವಸ್ಥೆಯನ್ನು ಹೆಚ್ಚು ತೆರಿಗೆದಾರ ಸ್ನೇಹಿಯಾಗಿ ಮಾಡಲಾಗಿದೆ ಎಂದು ತಿಳಿಸಿದರು. ಹಿಂದಿನ ಕಾಲಕ್ಕೆ ಹೋಲಿಸಿದರೆ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವ ಪ್ರಕ್ರಿಯೆಯು ಈಗ ಹೆಚ್ಚು ಸರಳ ಮತ್ತು ವೇಗವಾಗಿದೆ ಎಂದು ಅವರು ಹೇಳಿದರು. ಹಿಂದೆ, ಚಾರ್ಟರ್ಡ್ ಅಕೌಂಟೆಂಟ್ ಸಹಾಯವಿಲ್ಲದೆ ಐಟಿಆರ್ ಸಲ್ಲಿಸುವುದು ಸವಾಲಿನ ಕೆಲಸವಾಗಿತ್ತು ಎಂದು ಅವರು ಹೇಳಿದರು. ಇಂದು, ವ್ಯಕ್ತಿಗಳು ತಮ್ಮ ಐಟಿಆರ್ ಅನ್ನು ಕಡಿಮೆ ಸಮಯದಲ್ಲಿ ಆನ್‌ಲೈನ್‌ ನಲ್ಲಿ ಸಲ್ಲಿಸಬಹುದು ಮತ್ತು ಸಲ್ಲಿಸಿದ ಕೆಲವೇ ದಿನಗಳಲ್ಲಿ ಮರುಪಾವತಿಯನ್ನು ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ತೆರಿಗೆದಾರರು ಎದುರಿಸುತ್ತಿರುವ ತೊಂದರೆಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಿರುವ ಮುಖಾಮುಖಿ ರಹಿತ ಮೌಲ್ಯಮಾಪನ ಯೋಜನೆ ಪರಿಚಯಿಸಿದ್ದನ್ನು ಪ್ರಧಾನಿ ಎತ್ತಿ ತೋರಿಸಿದರು. ಇಂತಹ ದಕ್ಷ ಆಡಳಿತ ಸುಧಾರಣೆಗಳು ಜಗತ್ತಿಗೆ ಹೊಸ ಆಡಳಿತ ಮಾದರಿಯನ್ನು ಒದಗಿಸಿವೆ ಎಂದು ಅವರು ಹೇಳಿದರು.

 

ಕಳೆದ 10-11 ವರ್ಷಗಳಲ್ಲಿ ಭಾರತದ ಪ್ರತಿಯೊಂದು ವಲಯ ಮತ್ತು ಕ್ಷೇತ್ರದಲ್ಲಿ ಆಗಿರುವ ಪರಿವರ್ತನೆಯನ್ನು ಎತ್ತಿ ತೋರಿಸಿದ ಪ್ರಧಾನಿ, ಮನಸ್ಥಿತಿಯಲ್ಲಿ ಆಗಿರುವ ಗಮನಾರ್ಹ ಬದಲಾವಣೆಯನ್ನು ಒತ್ತಿ ಹೇಳಿದರು. ಸ್ವಾತಂತ್ರ್ಯದ ನಂತರ ದಶಕಗಳಷ್ಟು ಕಾಲ ಭಾರತದಲ್ಲಿ ವಿದೇಶಿ ಸರಕುಗಳನ್ನು ಶ್ರೇಷ್ಠವೆಂದು ಪರಿಗಣಿಸುವ ಮನಸ್ಥಿತಿಯನ್ನು ಉತ್ತೇಜಿಸಲಾಯಿತು ಎಂದು ಅವರು ಹೇಳಿದರು. ಅಂಗಡಿಯವರು ಉತ್ಪನ್ನಗಳನ್ನು ಮಾರಾಟ ಮಾಡುವಾಗ "ಇದನ್ನು ಆಮದು ಮಾಡಿಕೊಂಡಿರುವುದು!" ಎಂದು ಹೇಳುತ್ತಿದ್ದರು, ಈ ಪರಿಸ್ಥಿತಿ ಈಗ ಬದಲಾಗಿದೆ ಮತ್ತು ಇಂದು ಜನರು "ಇದು ಭಾರತದಲ್ಲಿ ತಯಾರಿಸಲ್ಪಟ್ಟಿದೆಯೇ?" ಎಂದು ಕೇಳುತ್ತಿದ್ದಾರೆ ಎಂದು ಅವರು ಒತ್ತಿ ಹೇಳಿದರು.

ಭಾರತದ ಉತ್ಪಾದನಾ ಶ್ರೇಷ್ಠತೆಯ ಗಮನಾರ್ಹ ಪ್ರಗತಿಯನ್ನು ಒತ್ತಿಹೇಳಿದ ಅವರು, ದೇಶದ ಮೊದಲ ಸ್ವದೇಶಿ ಎಂ ಆರ್‌ ಐ ಯಂತ್ರವನ್ನು ಅಭಿವೃದ್ಧಿಪಡಿಸಿದ ಇತ್ತೀಚಿನ ಸಾಧನೆಯನ್ನು ವಿವರಿಸಿದರು. ಈ ಮೈಲಿಗಲ್ಲು ಭಾರತದಲ್ಲಿ ವೈದ್ಯಕೀಯ ರೋಗನಿರ್ಣಯದ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಶ್ರೀ ಮೋದಿ ಹೇಳಿದರು. 'ಆತ್ಮನಿರ್ಭರ ಭಾರತ' ಮತ್ತು 'ಮೇಕ್ ಇನ್ ಇಂಡಿಯಾ' ಉಪಕ್ರಮಗಳ ಪರಿವರ್ತನಾತ್ಮಕ ಪರಿಣಾಮವನ್ನು ಅವರು ಒತ್ತಿ ಹೇಳಿದರು, ಇವು ಉತ್ಪಾದನಾ ವಲಯಕ್ಕೆ ಹೊಸ ಶಕ್ತಿಯನ್ನು ತುಂಬಿವೆ. ಒಂದು ಕಾಲದಲ್ಲಿ ಜಗತ್ತು ಭಾರತವನ್ನು ಜಾಗತಿಕ ಮಾರುಕಟ್ಟೆಯಾಗಿ ನೋಡುತ್ತಿತ್ತು, ಈಗ ಅದು ದೇಶವನ್ನು ಪ್ರಮುಖ ಉತ್ಪಾದನಾ ಕೇಂದ್ರವಾಗಿ ಗುರುತಿಸುತ್ತಿದೆ ಎಂದು ಅವರು ಹೇಳಿದರು. ಭಾರತದ ಮೊಬೈಲ್ ಫೋನ್ ಉದ್ಯಮದ ಯಶಸ್ಸಿನ ಬಗ್ಗೆ ಪ್ರಧಾನಿ ಗಮನಸೆಳೆದರು, 2014-15ರಲ್ಲಿ ಒಂದು ಶತಕೋಟಿ ಡಾಲರ್‌ ಗಿಂತ ಕಡಿಮೆಯಿದ್ದ ರಫ್ತುಗಳು ಒಂದು ದಶಕದೊಳಗೆ ಇಪ್ಪತ್ತು ಶತಕೋಟಿ ಡಾಲರ್‌ಗಳಿಗೂ ಹೆಚ್ಚಾಗಿದೆ ಎಂದು ಹೇಳಿದರು. ಜಾಗತಿಕ ಟೆಲಿಕಾಂ ಮತ್ತು ನೆಟ್‌ವರ್ಕಿಂಗ್ ಉದ್ಯಮದಲ್ಲಿ ಭಾರತವು ಶಕ್ತಿ ಕೇಂದ್ರವಾಗಿ ಹೊರಹೊಮ್ಮುತ್ತಿರುವುದನ್ನು ಅವರು ಎತ್ತಿ ತೋರಿಸಿದರು. ಆಟೋಮೋಟಿವ್ ವಲಯದ ಬಗ್ಗೆ ಮಾತನಾಡಿದ ಅವರು, ಬಿಡಿಭಾಗಗಳ ರಫ್ತು ಮಾಡುವಲ್ಲಿ ಭಾರತದ ಖ್ಯಾತಿ ಹೆಚ್ಚುತ್ತಿದೆ ಎಂದು ಹೇಳಿದರು. ಭಾರತವು ಹಿಂದೆ ಮೋಟಾರ್‌ ಸೈಕಲ್ ಬಿಡಿಭಾಗಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿತ್ತು, ಆದರೆ ಇಂದು ಭಾರತದಲ್ಲಿ ತಯಾರಾದ ಬಿಡಿಭಾಗಗಳು ಯುಎಇ ಮತ್ತು ಜರ್ಮನಿಯಂತಹ ದೇಶಗಳನ್ನು ತಲುಪುತ್ತಿವೆ ಎಂದು ಅವರು ಹೇಳಿದರು. ಸೌರಶಕ್ತಿ ಕ್ಷೇತ್ರದ ಸಾಧನೆಗಳನ್ನು ಶ್ರೀ ಮೋದಿ ಅವರು ಎತ್ತಿ ತೋರಿಸಿದರು, ಸೌರ ಕೋಶಗಳು ಮತ್ತು ಮಾಡ್ಯೂಲ್‌ ಗಳ ಆಮದು ಕಡಿಮೆಯಾಗಿದೆ ಮತ್ತು ರಫ್ತು 23 ಪಟ್ಟು ಹೆಚ್ಚಾಗಿದೆ ಎಂದು ಹೇಳಿದರು. ಕಳೆದ ದಶಕದಲ್ಲಿ ರಕ್ಷಣಾ ರಫ್ತು 21 ಪಟ್ಟು ಏರಿಕೆಯಾಗಿದ್ದು, ಈ ಬೆಳವಣಿಗೆ ಭಾರತದ ಉತ್ಪಾದನಾ ಆರ್ಥಿಕತೆಯ ಶಕ್ತಿ ಮತ್ತು ವಿವಿಧ ವಲಯಗಳಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ಟಿವಿ9 ಶೃಂಗಸಭೆಯ ಮಹತ್ವದ ಬಗ್ಗೆ ಮಾತನಾಡಿದ ಪ್ರಧಾನಿ, ವಿವಿಧ ವಿಷಯಗಳನ್ನು ಕುರಿತು ನಡೆಯಲಿರುವ ವಿವರವಾದ ಚರ್ಚೆಗಳ ಬಗ್ಗೆ ಒತ್ತಿ ಹೇಳಿದರು. ಶೃಂಗಸಭೆಯಲ್ಲಿ ಹಂಚಿಕೊಳ್ಳಲಾಗುವ ವಿಚಾರಗಳು ಮತ್ತು ದೃಷ್ಟಿಕೋನಗಳು ದೇಶದ ಭವಿಷ್ಯವನ್ನು ವ್ಯಾಖ್ಯಾನಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ನವೀಕೃತ ಶಕ್ತಿಯೊಂದಿಗೆ ಭಾರತ ಸ್ವಾತಂತ್ರ್ಯದತ್ತ ಹೊಸ ಪಯಣ ಆರಂಭಿಸಿದ ಕಳೆದ ಶತಮಾನದ ಮಹತ್ವದ ಕ್ಷಣವನ್ನು ಅವರು ನೆನಪಿಸಿಕೊಂಡರು. 1947 ರಲ್ಲಿ ಭಾರತ ಸ್ವಾತಂತ್ರ್ಯ ಗಳಿಸಿದ ಸಾಧನೆಯನ್ನು ಅವರು ಸ್ಮರಿಸಿದರು ಮತ್ತು ಈ ದಶಕದಲ್ಲಿ ದೇಶವು ಅಭಿವೃದ್ಧಿ ಹೊಂದಿದ ಭಾರತದ ಗುರಿಯತ್ತ ಸಾಗುತ್ತಿದೆ ಎಂದು ಹೇಳಿದರು. 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು ಮತ್ತು ಈ ದೃಷ್ಟಿಕೋನವನ್ನು ಸಾಧಿಸಲು ಸಾಮೂಹಿಕ ಪ್ರಯತ್ನಗಳು ಅತ್ಯಗತ್ಯ ಎಂಬ ಕೆಂಪು ಕೋಟೆಯ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದರು. ಈ ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ಪ್ರಧಾನಮಂತ್ರಿಯವರು ಟಿವಿ9 ಅನ್ನು ಶ್ಲಾಘಿಸಿದರು, ಅವರ ಸಕಾರಾತ್ಮಕ ಉಪಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಶೃಂಗಸಭೆಯ ಯಶಸ್ಸಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು. ಆಯ್ದ ಯುವಕರಿಗೆ ತರಬೇತಿ ನೀಡಿ, ಮಿಷನ್ ಮಾದರಿಯಲ್ಲಿ ವಿವಿಧ ಸಂವಾದಗಳಲ್ಲಿ 50 ಸಾವಿರಕ್ಕೂ ಹೆಚ್ಚು ಯುವಕರನ್ನು ತೊಡಗಿಸಿಕೊಂಡಿದ್ದಕ್ಕಾಗಿ ಅವರು ಟಿವಿ9 ನೆಟ್‌ವರ್ಕ್ ಅನ್ನು ಶ್ಲಾಘಿಸಿದರು. 2047 ರಲ್ಲಿ ಯುವಜನರು ವಿಕಸಿತ ಭಾರತದ ಅತಿದೊಡ್ಡ ಫಲಾನುಭವಿಗಳಾಗುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುವ ಮೂಲಕ ಅವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM Modi pitches India as stable investment destination amid global turbulence

Media Coverage

PM Modi pitches India as stable investment destination amid global turbulence
NM on the go

Nm on the go

Always be the first to hear from the PM. Get the App Now!
...
List of Outcomes: Visit of the Chancellor of the Federal Republic of Germany to India (January 12-13, 2026)
January 12, 2026

I. Agreements / MoUs

S.NoDocumentsAreas

1.

Joint Declaration of Intent on Strengthening the Bilateral Defence Industrial Cooperation

Defence and Security

2.

Joint Declaration of Intent on Strengthening the Bilateral Economic Cooperation by Establishing a Chief Executive Officers’ Forum, integrated into, and as Part of, a Joint India-Germany Economic and Investment Committee

Trade and Economy

3.

Joint Declaration of Intent on India Germany Semiconductor Ecosystem Partnership

Critical and Emerging Technologies

4.

Joint Declaration of Intent on Cooperation in the Field of Critical Minerals

Critical and Emerging Technologies

5.

Joint Declaration of Intent on Cooperation in the Field of Telecommunications

Critical and Emerging Technologies

6.

MoU between National Institute of Electronics & Information Technology and Infineon Technologies AG

Critical and Emerging Technologies

7.

Memorandum of Understanding between All India Institute of Ayurveda and Charite University, Germany

Traditional Medicines

8.

Memorandum of Understanding between Petroleum and Natural Gas Regulatory Board (PNGRB) and the German Technical and Scientific Association for Gas and Water Industries (DVGW)

Renewable Energy

9.

Offtake Agreement for Green Ammonia between Indian Company, AM Green and German Company, Uniper Global Commodities on Green Ammonia

Green Hydrogen

10.

Joint Declaration of Intent for Joint Cooperation in Research and Development on Bioeconomy

Science and Research

11.

Joint Declaration of Intent on the extension of tenure of the Indo-German Science and Technology Centre (IGSTC)

Science and Research

12.

Indo-German Roadmap on Higher Education

Education

13.

Joint Declaration of Intent on the Framework Conditions of Global Skill Partnerships for Fair, Ethical and Sustainable Recruitment of Healthcare Professionals

Skilling and Mobility

14.

Joint Declaration of Intent for Establishment of a National Centre of Excellence for Skilling in Renewable Energy at National Skill Training Institute, Hyderabad

Skilling and Mobility

15.

Memorandum of Understanding between National Maritime Heritage Complex, Lothal, Ministry of Ports, Shipping and Waterways Government of the Republic of India and German Maritime Museum-Leibniz Institute for Maritime History, Bremerhaven, Germany, for the Development of National Maritime Heritage Complex (NMHC), Lothal, Gujarat

Cultural and People to People ties

16.

Joint Declaration of Intent on Cooperation in Sport

Cultural and People to People ties

17.

Joint Declaration of Intent on Cooperation in the Field of Postal Services

Cultural and People to People ties

18.

Letter of Intent between the Department of Posts, Ministry of Communications, and Deutsche Post AG

Cultural and People to People ties

19.

Memorandum of Understanding on Youth Hockey Development between Hockey India and German Hockey Federation (Deutscher Hockey-Bund e.V.)

Cultural and People to People ties

II. Announcements

S.NoAnnouncementsAreas

20.

Announcement of Visa Free transit for Indian passport holders for transiting through Germany

People to people ties

21.

Establishment of Track 1.5 Foreign Policy and Security Dialogue

Foreign Policy and Security

22.

Establishment of Bilateral dialogue mechanism on Indo-Pacific.

Indo-Pacific

23.

Adoption of Work Plan of India-Germany Digital Dialogue (2025-2027)

Technology and Innovation

24.

New funding commitments of EUR 1.24 billion under the flagship bilateral Green and Sustainable Development Partnership (GSDP), supporting priority projects in renewable energies, green hydrogen, PM e-Bus Sewa, and climate-resilient urban infrastructure

Green and Sustainable Development

25.

Launch of Battery Storage working group under the India-Germany Platform for Investments in Renewable Energy Worldwide

Green and Sustainable Development

26.

Scaling up of Projects in Ghana (Digital Technology Centre for design and processing of Bamboo), Cameroon (Climate Adaptive RAC Technology Lab for Nationwide Potato Seed Innovation) and Malawi (Technical Innovation and Entrepreneurship Hub in Agro Value Chain for women and youth) under India-Germany Triangular Development Cooperation

Green and Sustainable Development

27.

Opening of Honorary Consul of Germany in Ahmedabad

Cultural and People to People ties