"ಸುಧಾರಣೆ, ಕಾರ್ಯಕ್ಷಮತೆ(ಸಾಧನೆ) ಮತ್ತು ಪರಿವರ್ತನೆಯೇ ನಮ್ಮ ಆಡಳಿತ ಮಂತ್ರವಾಗಿದೆ"
"ಕಳೆದ ದಶಕದಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ, ಅವರು ನವ-ಮಧ್ಯಮ ವರ್ಗವನ್ನು ಸೃಷ್ಟಿಸಿದ್ದಾರೆ"
ಭಾರತವನ್ನು ಜಾಗತಿಕ ಉತ್ಪಾದನಾ ತಾಣವಾಗಿ ರೂಪಿಸುವುದು ಪ್ರತಿಯೊಬ್ಬ ಭಾರತೀಯನ ಆಶಯವಾಗಿದೆ
"ಮೂಲಸೌಕರ್ಯವು ನಮ್ಮ ನಾಗರಿಕರಿಗೆ ಅನುಕೂಲತೆ ಮತ್ತು ಜೀವನ ಸೌಕರ್ಯ ಸುಧಾರಿಸುವ ಸಾಧನವಾಗಿದೆ"
"21ನೇ ಶತಮಾನದ ಈ 3ನೇ ದಶಕವು ಭಾರತವನ್ನು ಮೇಲೆತ್ತುವ ದಶಕದಂತಿದೆ"
" ಭೂತಕಾಲ ಆಧರಿಸಿ ನಾವು ನಮ್ಮ ನೀತಿಗಳನ್ನು ರೂಪಿಸಿಲ್ಲ, ಆದರೆ ಭವಿಷ್ಯದ ಮೇಲೆ ಕಣ್ಣಿಟ್ಟು ರೂಪಿಸುತ್ತಿದ್ದೇವೆ"
“ಇಂದಿನ ಭಾರತ ಅವಕಾಶಗಳ ನಾಡು, ಇಂದಿನ ಭಾರತ ಸಂಪತ್ತಿನ ಸೃಷ್ಟಿಕರ್ತರನ್ನು ಗೌರವಿಸುತ್ತದೆ”
"ಸಮೃದ್ಧ ಭಾರತವು ಜಾಗತಿಕ ಸಮೃದ್ಧಿಗೆ ದಾರಿ ಮಾಡಿಕೊಡುತ್ತದೆ"

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ಎಕನಾಮಿಕ್ ಟೈಮ್ಸ್ ವಿಶ್ವ ನಾಯಕರ ವೇದಿಕೆ(ವರ್ಲ್ಡ್ ಲೀಡರ್ಸ್ ಫೋರಂ) ಉದ್ದೇಶಿಸಿ ಭಾಷಣ ಮಾಡಿದರು.

ದೇಶದ ಉಜ್ವಲ ಭವಿಷ್ಯಕ್ಕಾಗಿ ಎಕನಾಮಿಕ್ ಟೈಮ್ಸ್ ವರ್ಲ್ಡ್ ಲೀಡರ್ಸ್ ಫೋರಮ್‌ನಲ್ಲಿ ಅದ್ಭುತ ಚರ್ಚೆಗಳು ನಡೆದಿವೆ, ಇಡೀ ಜಗತ್ತು ಭಾರತದ ಮೇಲೆ ವಿಶ್ವಾಸವಿಟ್ಟಿರುವ ಕಾಲಘಟ್ಟದಲ್ಲಿ ಈ ಅರ್ಥಪೂರ್ಣ ಚರ್ಚೆಗಳು ನಡೆಯುತ್ತಿವೆ ಎಂದು ಪ್ರಧಾನಿ ಹೇಳಿದರು.

ಭಾರತವಿಂದು ಹೊಸ ಯಶೋಗಾಥೆ ಬರೆಯುತ್ತಿದೆ, ಆರ್ಥಿಕತೆಯ ಕಾರ್ಯಕ್ಷಮತೆಯ ಮೂಲಕ ಆಗಿರುವ ಸುಧಾರಣೆಗಳ ಪರಿಣಾಮವನ್ನು ನೀವೆಲ್ಲರೂ ವೀಕ್ಷಿಸಬಹುದು. ಭಾರತವು ಕೆಲವೊಮ್ಮೆ ನಿರೀಕ್ಷೆಗಿಂತ ಉತ್ತಮ ಪ್ರದರ್ಶನ ನೀಡಿದೆ. ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಶೇಕಡ 90ರಷ್ಟು ಬೆಳವಣಿಗೆ ಸಾಧಿಸಿದ್ದರೆ, ಜಾಗತಿಕ ಆರ್ಥಿಕತೆಯು ಶೇಕಡ 35ರಷ್ಟು ಬೆಳವಣಿಗೆಯಾಗಿದೆ. ನಾವು ಭರವಸೆ ನೀಡಿದಂತೆ, ಆರ್ಥಿಕತೆಯು ನಿರಂತರ ಬೆಳವಣಿಗೆ ಸಾಧಿಸಲಿದೆ ಮತ್ತು ಭವಿಷ್ಯದಲ್ಲೂ ಇದು ಮುಂದುವರಿಯುತ್ತದೆ ಎಂದರು.

 

ಕಳೆದ ವರ್ಷಗಳಲ್ಲಿ ಜನರ ಒಳಿತಿಗಾಗಿ ಸರ್ಕಾರ ಸರ್ವತೋಮುಖ ಬದಲಾವಣೆಗಳನ್ನು ತಂದಿದೆ, ಈ ಎಲ್ಲಾ ಪ್ರಯತ್ನಗಳು ಕೋಟ್ಯಂತರ ನಾಗರಿಕರ ಬದುಕನ್ನು ಮುಟ್ಟಿದೆ. "ಜನರಿಗೆ ಉತ್ತಮ ಆಡಳಿತ ನೀಡುವುದು ಸರ್ಕಾರದ ಸಂಕಲ್ಪವಾಗಿದೆ", "ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆ ನಮ್ಮ ಆಡಳಿತ ಮಂತ್ರವಾಗಿದೆ". ಕಳೆದ 10 ವರ್ಷಗಳಲ್ಲಿ ಸರ್ಕಾರದ ಸೇವಾ ಮನೋಭಾವ ಮತ್ತು ದೇಶದ ಸಾಧನೆಗಳನ್ನು ಭಾರತದ ಜನರು ಕಂಡಿದ್ದಾರೆ. ಆದ್ದರಿಂದ, ಭಾರತದ ಜನರು ಹೊಸ ನಂಬಿಕೆಗಳಿಂದ ತುಂಬಿದ್ದಾರೆ. ತಮ್ಮ ಮೇಲಿನ ನಂಬಿಕೆ, ರಾಷ್ಟ್ರದ ಪ್ರಗತಿ, ನೀತಿಗಳು, ನಿರ್ಧಾರಗಳು ಮತ್ತು ಸರ್ಕಾರದ ಉದ್ದೇಶಗಳು ಈ ಎಲ್ಲಾ ನಂಬಿಕೆಗಳಿಗೆ ಕಾರಣವಾಗಿವೆ. ವಿಶ್ವದ  ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಚುನಾವಣೆಗಳ ಮೇಲೆ ಬೆಳಕು ಚೆಲ್ಲಿದ ಪ್ರಧಾನಿ, ಜನರು ಹೆಚ್ಚಿನ ಸಂದರ್ಭಗಳಲ್ಲಿ ಬದಲಾವಣೆಗಾಗಿ ಮತ ಚಲಾಯಿಸಿದರೂ, ಹಲವಾರು ದೇಶಗಳಲ್ಲಿ ಸರ್ಕಾರಗಳು ತೊಂದರೆಗಳನ್ನು ಎದುರಿಸಬೇಕಾಯಿತು. ಇದಕ್ಕೆ ಪ್ರತಿಯಾಗಿ, 60 ವರ್ಷಗಳಲ್ಲೇ ಮೊದಲ ಬಾರಿಗೆ ಭಾರತೀಯ ಮತದಾರರು ನಮ್ಮ ಸರ್ಕಾರಕ್ಕೆ 3 ಬಾರಿ ಗೆಲುವು ತಂದುಕೊಟ್ಟು ಹ್ಯಾಟ್ರಿಕ್ ಸಾಧನೆ ಮಾಡಿದರು. ಭಾರತದ ಮಹತ್ವಾಕಾಂಕ್ಷೆಯ ಯುವಕರು ಮತ್ತು ಮಹಿಳೆಯರು ನಿರಂತರತೆ, ರಾಜಕೀಯ ಸ್ಥಿರತೆ ಮತ್ತು ಆರ್ಥಿಕ ಬೆಳವಣಿಗೆಗೆ ಮತ ಹಾಕಿದ್ದಾರೆ, ಅವರ ಬೆಂಬಲಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

"ಭಾರತದ ಪ್ರಗತಿಯು ಜಾಗತಿಕ ಮುಖ್ಯಾಂಶಗಳ ಭಾಗವಾಗುತ್ತಿದೆ". ಅಂಕಿಅಂಶಗಳು ತಮ್ಮದೇ ಆದ ಪ್ರಾಮುಖ್ಯತೆ ಹೊಂದಿದ್ದರೂ, ಎಷ್ಟು ಜನರ ಜೀವನವನ್ನು ಪರಿವರ್ತಿಸಿದೆ ಎಂಬುದನ್ನು ನೋಡುವುದಷ್ಟೇ ಪ್ರಸ್ತುತವಾಗಿದೆ. ಭಾರತದ ಭವಿಷ್ಯದ ರಹಸ್ಯವು ಎರಡನೇ ವಿಚಾರದಲ್ಲಿ ಅಡಗಿದೆ. "ಕಳೆದ ದಶಕದಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ, ಅವರೆಲ್ಲರೂ ನವ-ಮಧ್ಯಮ ವರ್ಗ ಸೃಷ್ಟಿಸಿದ್ದಾರೆ". ಇದರ ವೇಗ ಮತ್ತು ಪ್ರಮಾಣವು ಐತಿಹಾಸಿಕವಾಗಿದೆ. ಈ ಹಿಂದೆ ವಿಶ್ವದ ಯಾವುದೇ ಪ್ರಜಾಪ್ರಭುತ್ವ ಸಮಾಜದಲ್ಲಿ ಇದು ಸಂಭವಿಸಿಲ್ಲ. ಬಡವರ ಬಗೆಗಿನ ಸರಕಾರದ ಧೋರಣೆ ಬದಲಾವಣೆಯಿಂದಾಗಿ ಈ ಪರಿವರ್ತನೆ ಸಾಧ್ಯವಾಗಿದೆ. ಆಕಾಂಕ್ಷೆಗಳು ಮತ್ತು ಹೋರಾಟದ ಮನೋಭಾವ ಹೊಂದಿದ್ದರೂ, ಬಡವರು ಮೂಲಸೌಕರ್ಯಗಳ ಕೊರತೆಯಂತಹ ಅನೇಕ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ. ಬಡವರ ಅಡೆತಡೆಗಳನ್ನು ನಿವಾರಿಸಿ ಅವರನ್ನು ಬೆಂಬಲಿಸುವ ಮೂಲಕ ಅವರ ಸಬಲೀಕರಣದ ಮಾರ್ಗವನ್ನು ಸರ್ಕಾರ ಆಯ್ಕೆ ಮಾಡಿಕೊಂಡಿದೆ. ಈ ಮಾರ್ಗವು ಡಿಜಿಟಲ್ ವಹಿವಾಟು ಮತ್ತು ಖಾತರಿ-ಮುಕ್ತ ಸಾಲದಂತಹ ಪ್ರಯೋಜನಗಳೊಂದಿಗೆ ಬಡವರ ಜೀವನ ಪರಿವರ್ತಿಸಲು ಕಾರಣವಾಯಿತು. ಇಂದು ಅನೇಕ ಬಡವರು ಉದ್ಯಮಿಗಳಾಗುತ್ತಿದ್ದಾರೆ, ಸಂಪರ್ಕ ಮತ್ತು ಸಾಧನಗಳ ಸಹಾಯದಿಂದ ಅವರು ಈಗ 'ಉತ್ತಮ ತಿಳುವಳಿಕೆಯುಳ್ಳ ನಾಗರಿಕರು' ಆಗುತ್ತಿದ್ದಾರೆ. ಬಡತನದಿಂದ ಹೊರಬರುತ್ತಿರುವ ಜನರು ಪ್ರಗತಿಯ ಬಲವಾದ ಬಯಕೆ ಹೊಂದಿದ್ದಾರೆ, ಅವರ ಆಕಾಂಕ್ಷೆಗಳು ಹೊಸ ಮೂಲಸೌಕರ್ಯಗಳ ಅಭಿವೃದ್ಧಿಗೆ ಕಾರಣವಾಗಿವೆ. ಅವರ ಸೃಜನಶೀಲತೆಯು ನಾವೀನ್ಯತೆಯ ಹೊಸ ಮಾರ್ಗಗಳನ್ನು ಕೆತ್ತುತ್ತಿರುವಾಗ, ಅವರ ಕೌಶಲ್ಯಗಳು ಉದ್ಯಮದ ದಿಕ್ಕನ್ನು ರೂಪಿಸುತ್ತಿವೆ. ಅವರ ಅಗತ್ಯಗಳು ಮಾರುಕಟ್ಟೆಯ ದಿಕ್ಕನ್ನು ರೂಪಿಸುತ್ತಿವೆ, ಅವರ ಆದಾಯದ ಬೆಳವಣಿಗೆಯು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸುತ್ತಿದೆ. "ಭಾರತದ ನವ-ಮಧ್ಯಮ ವರ್ಗವು ದೇಶದ ಪ್ರಗತಿಗೆ ದೊಡ್ಡ ಶಕ್ತಿ ಎಂಬುದು ಸಾಬೀತಾಗಿದೆ" ಎಂದು ಶ್ರೀ ಮೋದಿ ಶ್ಲಾಘಿಸಿದರು.

 

ಸರ್ಕಾರದ 3ನೇ ಅವಧಿಯಲ್ಲಿ 3 ಪಟ್ಟು ವೇಗದಲ್ಲಿ ಕೆಲಸ ಮಾಡುವ ಬಗ್ಗೆ ಮಾತನಾಡಿದ ಪ್ರಧಾನಿ, ಚುನಾವಣಾ ಫಲಿತಾಂಶದ ದಿನವನ್ನು ನೆನಪಿಸಿಕೊಂಡರು. ಉದ್ದೇಶಗಳು ಇಂದು ಇನ್ನಷ್ಟು ಬಲವಾಗಿವೆ. ನಾಗರಿಕರಂತೆಯೇ ಸರ್ಕಾರವೂ ಹೊಸ ನಂಬಿಕೆಗಳು ಮತ್ತು ಭರವಸೆಗಳಿಂದ ತುಂಬಿದೆ. ಸರ್ಕಾರದ 3ನೇ ಅವಧಿಯು ಇನ್ನೂ 100 ದಿನಗಳನ್ನು ಪೂರೈಸಿಲ್ಲ ಎಂದು ಗಮನಿಸಿದ ಪ್ರಧಾನಿ, ಭೌತಿಕ ಮೂಲಸೌಕರ್ಯಗಳನ್ನು ಆಧುನೀಕರಿಸುವುದು, ಸಾಮಾಜಿಕ ಮೂಲಸೌಕರ್ಯಗಳನ್ನು ವಿಸ್ತರಿಸುವುದು ಮತ್ತು ಸುಧಾರಣೆಗಳೊಂದಿಗೆ ಮುಂದುವರಿಯುವುದಕ್ಕೆ ಒತ್ತು ನೀಡಲಾಗುತ್ತಿದೆ. ಕಳೆದ 3 ತಿಂಗಳಲ್ಲಿ ಸರ್ಕಾರ ಬಡವರು, ಯುವಕರು, ಮಹಿಳೆಯರು ಮತ್ತು ರೈತರಿಗಾಗಿ ಅನೇಕ ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿದೆ. ಇತ್ತೀಚಿನ ಸಾಧನೆಗಳನ್ನು ಪಟ್ಟಿ ಮಾಡಿದ ಪ್ರಧಾನಿ, ಬಡವರಿಗೆ 3 ಕೋಟಿ ಪಕ್ಕಾ ಮನೆ, ಏಕೀಕೃತ ಪಿಂಚಣಿ ಯೋಜನೆ, ಕೃಷಿ ಮೂಲಸೌಕರ್ಯ ವಿಸ್ತರಣೆಗೆ 1 ಲಕ್ಷ ಕೋಟಿ ರೂ. ನಿಧಿ, ರೈತರಿಗೆ ಉತ್ತಮ ಗುಣಮಟ್ಟದ ಬಹು ಬೀಜಗಳ ಬಿಡುಗಡೆ, 2 ಲಕ್ಷ ಕೋಟಿ ರೂ. ಮೌಲ್ಯದ ಪ್ರಧಾನಮಂತ್ರಿ ಪ್ಯಾಕೇಜ್, 4 ಕೋಟಿಗೂ ಹೆಚ್ಚು ಯುವಕರು ಮತ್ತು ಗ್ರಾಮೀಣ ಹಿನ್ನೆಲೆಯಿಂದ ಬಂದ 11 ಲಕ್ಷ ಹೊಸ ಲಕ್ಷಾಧಿಪತಿ(ಲಖ್ಪತಿ) ದೀದಿಗಳು ನೇರವಾಗಿ ಪ್ರಯೋಜನ ಪಡೆಯುತ್ತಿದ್ದಾರೆ. ಲಖ್ಪತಿ ದೀದಿ ಕಾರ್ಯಕ್ರಮವನ್ನು ಉಲ್ಲೇಖಿಸಿದ ಶ್ರೀ ಮೋದಿ, ಮಹಿಳೆಯರ ಆರ್ಥಿಕ ಸಬಲೀಕರಣದಲ್ಲಿ ಇದು ದೊಡ್ಡ ಪಾತ್ರ ವಹಿಸಿದೆ ಎಂದು ಹೇಳಿದರು.

75,000 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ವಧ್ವಾನ್ ಬಂದರಿಗೆ ಶಂಕುಸ್ಥಾಪನೆ ಮಾಡಲು ನಿನ್ನೆ ಮಹಾರಾಷ್ಟ್ರದ ಪಾಲ್ಘರ್‌ಗೆ ಭೇಟಿ ನೀಡಿದ್ದನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದರು. 3 ದಿನಗಳ ಹಿಂದೆ 30 ಸಾವಿರ ಕೋಟಿ ರೂ. ಬಂಡವಾಳದಲ್ಲಿ 12 ಹೊಸ ಕೈಗಾರಿಕಾ ನಗರಗಳನ್ನು ಅಭಿವೃದ್ಧಿಪಡಿಸುವ ನಿರ್ಧಾರ, 50 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ 9 ಹೈಸ್ಪೀಡ್ ಕಾರಿಡಾರ್ ನಿರ್ಮಾಣ ಹಾಗೂ 30 ಸಾವಿರ ಕೋಟಿ ರೂ.ಗಳಲ್ಲಿ ಪುಣೆ, ಥಾಣೆ ಮತ್ತು ಬೆಂಗಳೂರು ಮೆಟ್ರೊ ವಿಸ್ತರಣೆ ಯೋಜನೆಗಳನ್ನು ಪ್ರಸ್ತಾಪಿಸಿದರು. ಲಡಾಖ್‌ನಲ್ಲಿ ವಿಶ್ವದ ಅತಿ ಎತ್ತರದ ಸುರಂಗಗಳ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದು ಮಾಹಿತಿ ನೀಡಿದರು.

 

ಇಂದು 3 ಹೊಸ ವಂದೇ ಭಾರತ್ ರೈಲುಗಳಿಗೆ ಹಸಿರುನಾಶಾನೆ ತೋರುವ ಮೂಲಕ ಭಾರತದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲು ಗುರುತಿಸಲಾಗಿದೆ. ಸರ್ಕಾರದ ಪರಿವರ್ತಕ ವಿಧಾನಕ್ಕೆ ಒತ್ತು ನೀಡಿದ ಅವರು, "ನಮಗೆ ಮೂಲಸೌಕರ್ಯವು ಕೇವಲ ಉದ್ದ, ಅಗಲ ಮತ್ತು ಎತ್ತರವನ್ನು ಹೆಚ್ಚಿಸುವುದಲ್ಲ, ಇದು ಭಾರತದ ನಾಗರಿಕರಿಗೆ ಸುಲಭವಾಗಿ ಬದುಕುವ ಒಂದು ಸಾಧನವಾಗಿದೆ. ರೈಲು ಬೋಗಿಗಳನ್ನು ನಿರಂತವಾಗಿ ನಿರ್ಮಿಸುತ್ತಾ ಬರಲಾಗಿದೆ. ವೇಗ ಮತ್ತು ಸೌಕರ್ಯ ಎರಡನ್ನೂ ನೀಡುವ ವಂದೇ ಭಾರತ್‌ನಂತಹ ಆಧುನಿಕ ರೈಲುಗಳನ್ನು ಪರಿಚಯಿಸಲಾಗಿದೆ. "ಈ ಹೊಸ ರೈಲುಗಳ ಆರಂಭವು ದೇಶದ ಸಾರಿಗೆ ಮೂಲಸೌಕರ್ಯವನ್ನು ಕ್ರಾಂತಿಕಾರಿಗೊಳಿಸುವ ವಿಶಾಲ ದೃಷ್ಟಿಯ ಭಾಗವಾಗಿದೆ, ವೇಗವಾಗಿ ಆಧುನೀಕರಣಗೊಳ್ಳುತ್ತಿರುವ ರಾಷ್ಟ್ರದ ಅಗತ್ಯಗಳಿಗೆ ಇದು ಹೊಂದಿಕೆಯಾಗುತ್ತದೆ" ಎಂದರು.

ದೇಶದ ಸಂಪರ್ಕ ಜಾಲ ಮೇಲ್ದರ್ಜೆಗೇರಿಸುವ ಸರ್ಕಾರದ ಬದ್ಧತೆಯನ್ನು ಪ್ರಸ್ತಾಪಿಸಿದ ಮೋದಿ, "ದೇಶದಲ್ಲಿ ಮೊದಲು ಕೇವಲ ರಸ್ತೆಗಳನ್ನು ನಿರ್ಮಿಸಲಾಗುತ್ತಿತ್ತು, ಆದರೆ ನಾವು ಭಾರತದಾದ್ಯಂತ ಆಧುನಿಕ ಎಕ್ಸ್‌ಪ್ರೆಸ್‌ವೇಗಳ ಜಾಲ ವಿಸ್ತರಿಸುತ್ತಿದ್ದೇವೆ".  ವಿಶೇಷವಾಗಿ ಸಣ್ಣ ನಗರಗಳಲ್ಲಿ ವೈಮಾನಿಕ ಸಂಪರ್ಕ ಹೆಚ್ಚಿಸುವ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ವಿಮಾನ ನಿಲ್ದಾಣಗಳು ಮೊದಲು ಅಸ್ತಿತ್ವದಲ್ಲಿದ್ದವು, ಆದರೆ ಸರ್ಕಾರವು ಶ್ರೇಣಿ -2 ಮತ್ತು ಶ್ರೇಣಿ -3 ನಗರಗಳಿಗೆ ವೈಮಾನಿಕ ಸಂಪರ್ಕ ಒದಗಿಸುತ್ತಿದೆ, ಆಧುನಿಕ ಸಾರಿಗೆಯ ಪ್ರಯೋಜನಗಳನ್ನು ಭಾರತದ ಎಲ್ಲಾ ಮೂಲೆಗಳಿಗೆ ತರುತ್ತಿದೆ ಎಂದು ವಿವರಿಸಿದರು.

 

ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಪ್ರಸ್ತಾಪಿಸಿದ ಅವರು, ಇದು ಸರ್ಕಾರಿ ಇಲಾಖೆಗಳಲ್ಲಿನ ಅಡ್ಡಿ ಆತಂಕಗಳನ್ನು ನಿವಾರಿಸುವ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಏಕೀಕೃತ, ಸಂಘಟಿತ ಕಾರ್ಯವಿಧಾನ ರೂಪಿಸುವ ಗುರಿ ಹೊಂದಿದೆ. "ಈ ಪ್ರಯತ್ನಗಳು ಗಮನಾರ್ಹವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ. ಜತೆಗೆ, ನಮ್ಮ ಆರ್ಥಿಕತೆ ಮತ್ತು ಉದ್ಯಮದ ಮೇಲೆ ಆಳವಾದ ಸಕಾರಾತ್ಮಕ ಪ್ರಭಾವ ಬೀರುತ್ತಿವೆ". ಸರ್ಕಾರದ ಉಪಕ್ರಮಗಳಿಂದ ವಿಶಾಲ ಆರ್ಥಿಕ ಪ್ರಯೋಜನಗಳು ಸಿಗುತ್ತಿವೆ ಎಂದರು.

21ನೇ ಶತಮಾನದ 3ನೇ ದಶಕವು ಭಾರತಕ್ಕೆ ಉತ್ಥಾನದ ದಶಕದಂತೆ ಎದುರು ಕಾಣುತ್ತಿದೆ. ಈ ಆವೇಗವನ್ನು ಮುಂದುವರಿಸಿಕೊಂಡು ಹೋಗಲು ಸಾಮೂಹಿಕ ಅಥವಾ ಸಂಘಟಿತ ಜವಾಬ್ದಾರಿ ಹೊರಬೇಕು. ಅಭಿವೃದ್ಧಿಯ ಪ್ರಯೋಜನಗಳು ರಾಷ್ಟ್ರಾದ್ಯಂತ ಎಲ್ಲಾ ನಾಗರಿಕರಿಗೂ ತಲುಪುವುದನ್ನು ಖಾತ್ರಿಪಡಿಸುತ್ತಿದ್ದೇವೆ. ಭಾರತದ ಆರ್ಥಿಕತೆ ಮತ್ತು ಖಾಸಗಿ ವಲಯದ ಪಾಲುದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಪ್ರಗತಿಯು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸುವ ಆಧಾರಸ್ತಂಭಗಳನ್ನು ಹೊಂದಿದೆ. "ಈ ಆಧಾರಸ್ತಂಭಗಳು ಭಾರತದ ಸಮೃದ್ಧಿಯ ಭದ್ರ ಬುನಾದಿ ಆಗಿರುವುದು ಮಾತ್ರವಲ್ಲ, ಜಾಗತಿಕ ಸಮೃದ್ಧಿಗೂ ಬಲಿಷ್ಠ ಆಧಾರಸ್ತಂಭಗಳಾಗಿವೆ." ಭಾರತವು ವಿವಿಧ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳ ಹೆಚ್ಚಳ ಕಾಣುತ್ತಿರುವಂತೆ, ದೇಶದ ದೀರ್ಘಾವಧಿಯ ದೃಷ್ಟಿಗೆ ಕೊಡುಗೆ ನೀಡುವ ಎಲ್ಲಾ ಉಪಕ್ರಮಗಳಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು. ದೇಶದ ಆರ್ಥಿಕತೆಯು ದೈತ್ಯಾಕಾರದ ಜಿಗಿತ ಕಾಣುವ ಅಗತ್ಯವಿದೆ, ಈ ನಿಟ್ಟಿನಲ್ಲಿ ಸರ್ಕಾರವು ದೀರ್ಘಾವಧಿಯ ದೃಷ್ಟಿಕೋನದಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

 

"ಭಾರತವನ್ನು ಜಾಗತಿಕ ಉತ್ಪಾದನಾ ತಾಣವನ್ನಾಗಿ ಮಾಡುವುದು ಪ್ರತಿಯೊಬ್ಬ ಭಾರತೀಯನ ಆಕಾಂಕ್ಷೆಯಾಗಿದೆ". ಇದು ಭಾರತದಿಂದ ವಿಶ್ವ ಹೊಂದಿರುವ ನಿರೀಕ್ಷೆಯೂ ಆಗಿದೆ. ಇಂದು ಈ ನಿಟ್ಟಿನಲ್ಲಿ ದೇಶದಲ್ಲಿ ಕ್ರಾಂತಿ ಆಗುತ್ತಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಇಂದು ಎಂಎಸ್‌ಎಂಇಗಳು ದೇಶದಲ್ಲಿ ಹೆಚ್ಚು ಅಗತ್ಯವಿರುವ ಬೆಂಬಲ ಪಡೆಯುತ್ತಿವೆ. ಸರ್ಕಾರ ಕೈಗೊಂಡ ಉಪಕ್ರಮಗಳನ್ನು ಪಟ್ಟಿ ಮಾಡಿದ ಶ್ರೀ ಮೋದಿ, ನಿರ್ಣಾಯಕ ಖನಿಜಗಳ ಉತ್ಪಾದನೆ ಉತ್ತೇಜಿಸುವ ಸಂದರ್ಭದಲ್ಲಿ ಸಕಲ ಸೌಲಭ್ಯವುಳ್ಳ ಕೈಗಾರಿಕಾ ಪಾರ್ಕ್‌ಗಳು ಮತ್ತು ಆರ್ಥಿಕ ಕಾರಿಡಾರ್‌ಗಳನ್ನು ನಿರ್ಮಿಸಲಾಗುತ್ತಿದೆ. ಭಾರತದಲ್ಲಿ ಉತ್ಪಾದನೆ ಸಂಪರ್ಕಿತ ಉತ್ತೇಜನಾ ಯೋಜನೆಗಳು(ಪಿಎಲ್ಐ) ಸಾಧಿಸಿದ ಯಶಸ್ಸು ಅಭೂತಪೂರ್ವವಾಗಿದೆ ಎಂದರು.

ಗುಲಾಮಗಿರಿಯ ಹಿಂದಿನ ಅವಧಿಯನ್ನು ವಿವರಿಸಿದ ಪ್ರಧಾನಿ, ಭಾರತದ ಸಮೃದ್ಧಿಯ ಪ್ರಮುಖ ಆಧಾರವೆಂದರೆ ನಮ್ಮ ಜ್ಞಾನ ವ್ಯವಸ್ಥೆ, ಇದು ಅಭಿವೃದ್ಧಿ ಹೊಂದಿದ ಭಾರತದ ಪ್ರಮುಖ ಆಧಾರಸ್ತಂಭವಾಗಿದೆ. ಭಾರತವನ್ನು ಕೌಶಲ್ಯ, ಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆಯ ಕೇಂದ್ರವನ್ನಾಗಿ ಮಾಡಲು ಸರ್ಕಾರವು ಉದ್ಯಮ ಮತ್ತು ಶೈಕ್ಷಣಿಕ ಪಾಲುದಾರರನ್ನು ಬಳಸಿಕೊಳ್ಳುತ್ತಿದೆ. ಈ ವರ್ಷದ ಬಜೆಟ್‌ನಲ್ಲಿ ಇದಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, 1 ಲಕ್ಷ ಕೋಟಿ ರೂಪಾಯಿ ಮೊತ್ತದ ಸಂಶೋಧನಾ ನಿಧಿಯಲ್ಲಿ ಇದನ್ನು ಪ್ರತಿಬಿಂಬಿಸಲಾಗಿದೆ. ಮಧ್ಯಮ ವರ್ಗದ ಕುಟುಂಬಗಳ ಮಕ್ಕಳು ವಿದೇಶದಲ್ಲಿ ವ್ಯಾಸಂಗಕ್ಕಾಗಿ ಅಪಾರ ಪ್ರಮಾಣದ ಹಣ ವ್ಯಯಿಸುತ್ತಿದ್ದಾರೆ. ಅತಿಯಾದ ವೆಚ್ಚದಿಂದ ಜನರಿಗೆ ಸಹಾಯ ಮಾಡಲು ಭಾರತದಲ್ಲಿ ಉನ್ನತ ವಿದೇಶಿ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳನ್ನು ತೆರೆಯುವ ಕ್ರಮಗಳಿಗೆ ಸರ್ಕಾರ ಒತ್ತು ನೀಡಿದೆ. ಸ್ವಾತಂತ್ರ್ಯದ ನಂತರದ ಮೊದಲ 7 ದಶಕಗಳಲ್ಲಿ ಇದ್ದ 80 ಸಾವಿರಕ್ಕೆ ಹೋಲಿಸಿದರೆ, ಕಳೆದ ದಶಕದಲ್ಲಿ ಸುಮಾರು 1 ಲಕ್ಷ ಹೊಸ ಎಂಬಿಬಿಎಸ್-ಎಂಡಿ ಸೀಟುಗಳನ್ನು ಹೆಚ್ಚಿಸಲಾಗಿದೆ. ಮುಂದಿನ 5 ವರ್ಷಗಳಲ್ಲಿ 75 ಸಾವಿರ ಹೊಸ ವೈದ್ಯಕೀಯ ಸೀಟುಗಳನ್ನು ಸೃಷ್ಟಿಸುವ ಈ ವರ್ಷದ ಸ್ವಾತಂತ್ರ್ಯ ದಿನ ಭಾಷಣದ ಘೋಷಣೆಯನ್ನು ಅವರು ನೆನಪಿಸಿಕೊಂಡರು. ಇದು ಮುಂದಿನ ದಿನಗಳಲ್ಲಿ ಭಾರತವನ್ನು ವಿಶ್ವದಲ್ಲೇ ಆರೋಗ್ಯ ಮತ್ತು ಸ್ವಾಸ್ಥ್ಯದ ನಿರ್ಣಾಯಕ ಕೇಂದ್ರವನ್ನಾಗಿ ಮಾಡುತ್ತದೆ ಎಂದರು.

ಭಾರತವು ‘ಜಾಗತಿಕ ಆಹಾರ ಬುಟ್ಟಿ(ತಾಣ)’ಯಾಗಲು ರಾಷ್ಟ್ರ ಹೊಂದಿರುವ  ಬದ್ಧತೆಯನ್ನು ವಿವರಿಸಿದ ಪ್ರಧಾನಿ, ವಿಶ್ವದ ಪ್ರತಿ ಮನೆಯ ಡೈನಿಂಗ್ ಟೇಬಲ್‌ ಮೇಲೆ ಕನಿಷ್ಠ ಒಂದು ಆಹಾರ ಉತ್ಪನ್ನ ಭಾರತದ್ದಾಗಿರಬೇಕು ಎಂಬ ಸರ್ಕಾರದ ಸಂಕಲ್ಪವನ್ನು ಒತ್ತಿ ಹೇಳಿದರು. ಈ ದೃಷ್ಟಿಕೋನ ಸಾಕಾರಗೊಳಿಸಲು, ಸರ್ಕಾರವು ಭಾರತದ ಡೇರಿ ಮತ್ತು ಸಮುದ್ರಾಹಾರ ಉತ್ಪನ್ನಗಳ ಗುಣಮಟ್ಟ ಹೆಚ್ಚಿಸುವುದರೊಂದಿಗೆ ಸಾವಯವ ಮತ್ತು ನೈಸರ್ಗಿಕ ಕೃಷಿ ಪದ್ಧತಿಗಳನ್ನು ಏಕಕಾಲದಲ್ಲಿ ಉತ್ತೇಜಿಸುತ್ತಿದೆ. ಭಾರತದ ಇತ್ತೀಚಿನ ಸಾಧನೆಗಳನ್ನು ಪ್ರಸ್ತಾಪಿಸಿದ ಅವರು, ಭಾರತವು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದ ಜಾಗತಿಕ ಆಚರಣೆ ನಡೆಸಿದೆ. "ಜಗತ್ತಿನ ಅತಿ ಹೆಚ್ಚು ಸಿರಿಧಾನ್ಯಗಳ ಉತ್ಪಾದಕರು ಯಾರು? ಅದು ಭಾರತ". ಪ್ರಕೃತಿ ಮತ್ತು ಪ್ರಗತಿ ಎರಡಕ್ಕೂ ಇದು ಉತ್ಕೃಷ್ಟ ಆಹಾರವಾಗಿದೆ. ಜಾಗತಿಕ ಆಹಾರ ಬ್ರಾಂಡ್‌ಗಳಲ್ಲಿ ಭಾರತದ ಬೆಳೆಯುತ್ತಿರುವ ಉಪಸ್ಥಿತಿಯ ಬಗ್ಗೆ ಪ್ರಧಾನ ಮಂತ್ರಿ ಅವರು ತಮ್ಮ ತೃಪ್ತಿ ವ್ಯಕ್ತಪಡಿಸಿದರು, ಇದು ಆಹಾರ ಉದ್ಯಮದಲ್ಲಿ ದೇಶದ ಏರುತ್ತಿರುವ ಸ್ಥಾನಮಾನವನ್ನು ಸೂಚಿಸುತ್ತದೆ ಎಂದರು.

 

ವಿಕಸಿತ ಭಾರತದ ಮತ್ತೊಂದು ನಿರ್ಣಾಯಕ ಆಧಾರಸ್ತಂಭದತ್ತ ಗಮನ ಕೇಂದ್ರೀಕರಿಸಿದ ಪ್ರಧಾನ ಮಂತ್ರಿ, ಹಸಿರು ಇಂಧನ ಗ್ರೀನ್ ಹೈಡ್ರೋಜನ್ ಉಪಕ್ರಮವು ಜಿ-20 ಶೃಂಗಸಭೆಯಲ್ಲಿ ಎಲ್ಲಾ ದೇಶಗಳಿಂದ ಬೆಂಬಲ ಪಡೆದಿದೆ, 2030ರ ವೇಳೆಗೆ 5 ದಶಲಕ್ಷ ಟನ್ ಹಸಿರು ಜಲಜನಕ ಉತ್ಪಾದಿಸುವ ಸಾಮರ್ಥ್ಯ ಅಭಿವೃದ್ಧಿಪಡಿಸುವ ಭಾರತದ ಮಹತ್ವಾಕಾಂಕ್ಷೆಯ ಗುರಿಯನ್ನು ಘೋಷಿಸಿದರು, ಜತೆಗೆ ಅದೇ ಅವಧಿಯ ಹೊತ್ತಿಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆ ಗುರಿ ಹೊಂದಲಾಗಿದೆ ಎಂದರು.

ಈಗಾಗಲೇ ರಾಷ್ಟ್ರದ ಪ್ರಗತಿ ವೇಗಗೊಳಿಸಿರುವ ತಂತ್ರಜ್ಞಾನದ ಜತೆಗೆ, ಭಾರತದ ಬೆಳವಣಿಗೆಗೆ ಪ್ರಬಲ ಆಧಾರಸ್ತಂಭವಾಗಿ ಪ್ರವಾಸೋದ್ಯಮ ಉತ್ತೇಜನಕ್ಕೆ ಒತ್ತು ನೀಡಲಾಗಿದೆ. "ಭಾರತವು ಜಾಗತಿಕ ಪ್ರವಾಸಿಗರಿಗೆ ಅಗ್ರ ತಾಣವಾಗಲು ಶ್ರಮಿಸುತ್ತಿದೆ", ಭಾರತದ ಐತಿಹಾಸಿಕ ಮತ್ತು ಸಾಂಸ್ಕೃತಿಕ ತಾಣಗಳನ್ನು ಹೆಚ್ಚಿಸಲು ಮತ್ತು ಸಣ್ಣ ಕಡಲತೀರಗಳನ್ನು ಅಭಿವೃದ್ಧಿಪಡಿಸಲು ನಡೆಯುತ್ತಿರುವ ಪ್ರಯತ್ನಗಳಿಗೆ ಒತ್ತು ನೀಡಿದರು. 'ದೇಖೋ ಅಪ್ನಾ ದೇಶ್, ಪೀಪಲ್ಸ್ ಚಾಯ್ಸ್' ಅಭಿಯಾನಕ್ಕೆ ಆದ್ಯತೆ ನೀಡಲಾಗಿದೆ. ಅಲ್ಲಿ ನಾಗರಿಕರು ಭಾರತದ ಪ್ರಮುಖ ಪ್ರವಾಸಿ ತಾಣಗಳನ್ನು ಗುರುತಿಸಲು ಮತ ಚಲಾಯಿಸುತ್ತಿದ್ದಾರೆ, ನಂತರ ಅದನ್ನು ಕಾರ್ಯಾಚರಣೆ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. "ಈ ಉಪಕ್ರಮವು ಗಮನಾರ್ಹ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ" ಎಂದರು.

ಎಲ್ಲರನ್ನೂ ಒಳಗೊಂಡ ಜಾಗತಿಕ ಅಭಿವೃದ್ಧಿಯ ಪ್ರಾಮುಖ್ಯತೆಗೆ ಒತ್ತು ನೀಡಿದ ಪ್ರಧಾನಿ, ವಿಶೇಷವಾಗಿ ಜಾಗತಿಕ ದಕ್ಷಿಣಕ್ಕೆ ಭಾರತದ ಜಿ-20 ಅಧ್ಯತೆಯಲ್ಲಿ ಒತ್ತು ನೀಡಲಾಗಿದೆ. "ಭಾರತವು ಜಾಗತಿಕ ದಕ್ಷಿಣದ ಧ್ವನಿಯನ್ನು ಹೆಚ್ಚಿಸಿದೆ. ನಮ್ಮ ಆಫ್ರಿಕಾ ಸ್ನೇಹಿತರನ್ನು ಸಬಲೀಕರಣಗೊಳಿಸಲು ಸಹಾಯ ಮಾಡಲಾಗಿದೆ". ಜಾಗತಿಕ ಭ್ರಾತೃತ್ವದ ಉತ್ಸಾಹದಲ್ಲಿ ಭಾರತವು ಈ ರಾಷ್ಟ್ರಗಳಿಗೆ ಧ್ವನಿಯಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ಜಾಗತಿಕ ದಕ್ಷಿಣವು ಹೆಚ್ಚಿನ ಸಾಮರ್ಥ್ಯ ಹೊಂದಿದೆ. "ನಾವು ಎಲ್ಲರನ್ನು ಒಳಗೊಂಡ ಅಭಿವೃದ್ಧಿ ಖಾತ್ರಿಪಡಿಸುವ ವಿಶ್ವ ಕ್ರಮವನ್ನು ಬಯಸುತ್ತೇವೆ, ವಿಶೇಷವಾಗಿ ಜಾಗತಿಕ ದಕ್ಷಿಣ" ಎಂದು ಅವರು ಪ್ರತಿಪಾದಿಸಿದರು.

ಪ್ರಪಂಚದ ಕ್ರಿಯಾತ್ಮಕ ಸ್ವರೂಪ ಗುರುತಿಸಿದ ಶ್ರೀ ಮೋದಿ, ಭಾರತ ಸರ್ಕಾರದ ನೀತಿಗಳು ಮತ್ತು ಕಾರ್ಯತಂತ್ರಗಳ ಹೊಂದಾಣಿಕೆ ಅತ್ಯಗತ್ಯ. “ನಮ್ಮ ಗಮನ ಭವಿಷ್ಯದ ಮೇಲೆ. ನಾಳಿನ ಸವಾಲುಗಳು ಮತ್ತು ಅವಕಾಶಗಳಿಗಾಗಿ ನಾವು ಇಂದು ದೇಶವನ್ನು ಸಿದ್ಧಪಡಿಸುತ್ತಿದ್ದೇವೆ. ಗ್ರೀನ್ ಹೈಡ್ರೋಜನ್ ಮಿಷನ್, ಕ್ವಾಂಟಮ್ ಮಿಷನ್, ಸೆಮಿಕಂಡಕ್ಟರ್ ಮಿಷನ್ ಮತ್ತು ಡೀಪ್ ಓಷನ್ ಮಿಷನ್‌ನಂತಹ ಉಪಕ್ರಮಗಳನ್ನು ಪ್ರಧಾನಿ ಉಲ್ಲೇಖಿಸಿದರು. ಬಾಹ್ಯಾಕಾಶ ತಂತ್ರಜ್ಞಾನ ಉತ್ತೇಜಿಸಲು ಸರ್ಕಾರವು ಇತ್ತೀಚೆಗೆ 1,000 ಕೋಟಿ ರೂಪಾಯಿ ಮೀಸಲಿಟ್ಟಿದೆ. "ಇಂದಿನ ಭಾರತವು ಅವಕಾಶಗಳ ಭೂಮಿಯಾಗಿದೆ, ಭಾರತದ ಭವಿಷ್ಯ ಇನ್ನಷ್ಟು ಉಜ್ವಲವಾಗಲಿದೆ ಎಂಬುದನ್ನು ನಾವು ನಂಬುತ್ತೇವೆ" ಎಂದರು.

 

2047ರ ವೇಳೆಗೆ ವಿಕಸಿತ ಭಾರತವಾಗುವ ಸಂಕಲ್ಪ ಪುನರುಚ್ಚರಿಸಿದ ಪ್ರಧಾನಿ,  ಈ ಪ್ರಯಾಣದಲ್ಲಿ ಸಕ್ರಿಯವಾಗಿ ಭಾಗವಹಿಸಲು ಎಲ್ಲಾ ನಾಗರಿಕರು ಮತ್ತು ಪಾಲುದಾರರನ್ನು ಪ್ರೋತ್ಸಾಹಿಸಿದರು. ಭಾರತದಲ್ಲಿ ಹೆಚ್ಚಿನ ಕಂಪನಿಗಳು ಜಾಗತಿಕ ಬ್ರ್ಯಾಂಡ್ ಆಗುವುದನ್ನು ನೋಡುವ ಉತ್ಸುಕತೆ ನನ್ನದಾಗಿದೆ. "ಭಾರತವು ವಿಶ್ವಾದ್ಯಂತ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಸಬೇಕೆಂದು ನಾವು ಬಯಸುತ್ತೇವೆ". “ನಾವು ಸುಗಮಗೊಳಿಸುವ, ಸುಧಾರಣೆ ಮತ್ತು ಸ್ಥಿರವಾದ ನೀತಿ ಆಡಳಿತ ಮತ್ತು ಬೆಳವಣಿಗೆಗೆ ಬೆಂಬಲ ಒದಗಿಸುವ ಭರವಸೆ ನೀಡುತ್ತೇವೆ. ನೀವು ಆವಿಷ್ಕಾರ, ಪ್ರದರ್ಶನ, ಸಕಾರಾತ್ಮಕ ಬೆಳವಣಿಗೆಗಳನ್ನು ಸೃಷ್ಟಿಸಲು ಮತ್ತು ಉತ್ತಮ ಗುಣಮಟ್ಟದ ಮೇಲೆ ಗಮನ ಕೇಂದ್ರೀಕರಿಸುವ ಭರವಸೆ ನೀಡಬೇಕು. ಪ್ರತಿಯೊಬ್ಬರೂ ದೊಡ್ಡದಾಗಿ ಯೋಚಿಸಲು ಮತ್ತು ಭಾರತದ ಯಶೋಗಾಥೆಗಳನ್ನು ಬರೆಯಲು ಸಹಕರಿಸಬೇಕು. “ಇಂದಿನ ಭಾರತವು ಸಂಪತ್ತಿನ ಸೃಷ್ಟಿಕರ್ತರನ್ನು ಗೌರವಿಸುತ್ತದೆ. ಸಮೃದ್ಧ ಭಾರತವು ಜಾಗತಿಕ ಸಮೃದ್ಧಿಗೆ ದಾರಿ ಮಾಡಿಕೊಡಬಹುದು. ನಾವೀನ್ಯತೆ, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಮತ್ತು ಅಂತಾರಾಷ್ಟ್ರೀಯ ಸಹಕಾರದ ಮಂತ್ರಗಳನ್ನು ನೆನಪಿಟ್ಟುಕೊಳ್ಳಬೇಕು ಎಂದು ದೇಶ ಮತ್ತು ವಿದೇಶಗಳಲ್ಲಿ ವಾಸಿಸುವ ಪ್ರತಿಯೊಬ್ಬ ಭಾರತೀಯನಿಗೆ ಮನವಿ ಮಾಡಿದರು, "ಪ್ರಗತಿಯ ಈ ಹಾದಿಯಲ್ಲಿ ಒಟ್ಟಾಗಿ ನಡೆಯೋಣ, ಏಕೆಂದರೆ ಭಾರತದ ಸಮೃದ್ಧಿಯಲ್ಲಿ ವಿಶ್ವದ ಸಮೃದ್ಧಿ ಅಡಗಿದೆ." ಈ ಗುರಿ ಸಾಧಿಸಬಹುದು ಎಂಬ ವಿಶ್ವಾಸ  ವ್ಯಕ್ತಪಡಿಸಿ, ಪ್ರಧಾನಿ ಮೋದಿ ಅವರು ತಮ್ಮ ಸಮಾರೋಪ ಭಾಷಣ ಮುಕ್ತಾಯಗೊಳಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM Modi Praises Farmers For Taking India's Rich Mango Heritage To Global Markets

Media Coverage

PM Modi Praises Farmers For Taking India's Rich Mango Heritage To Global Markets
NM on the go

Nm on the go

Always be the first to hear from the PM. Get the App Now!
...
India-Myanmar Joint Statement during the Official Visit of the President of Myanmar to India
June 01, 2026

At the invitation of H.E. Shri Narendra Modi, Prime Minister of India, H.E. U Min Aung Hlaing, President of the Republic of the Union of Myanmar paid his first Official Visit to India from 30 May to 3 June 2026.

The President was accompanied by the Union Ministers for President’s Office, Foreign Affairs, Finance & Revenue, Agriculture, Livestock & Irrigation, and Industry & MSME Business Development, and Governor of the Central Bank of Myanmar. A business delegation from diverse sectors including agriculture, pharmaceuticals, energy, banking, construction, IT, communications, trading and logistics, as well as members of the Myanmar-India Friendship Association, were part of the Myanmar delegation.

The Prime Minister of India and the President of Myanmar held talks on 1 June 2026, during which they reviewed bilateral, regional and global issues of mutual interest and charted the way forward for the relationship. The Prime Minister hosted a luncheon in honour of the visiting dignitary. Hon’ble President of India Smt. Droupadi Murmu received the President of Myanmar on the same day. Earlier, External Affairs Minister Dr. S. Jaishankar and National Security Adviser Shri Ajit Doval separately called on the President of Myanmar.

At the commencement of the visit, the President visited Bodh Gaya on 30 May 2026, where he offered prayers at Mahabodhi Temple, Mahabodhi Meditation Centre and Sujata Temple. These visits to deeply revered sites underscored the enduring spiritual and Buddhist ties, as well as the people-to-people links, between the two countries.

The President delivered a keynote speech at the India-Myanmar Business Conclave, jointly organised by the UMFCCI and CII, in New Delhi on 31 May 2026, where business heads from both sides discussed avenues for further strengthening and expanding bilateral trade and commercial opportunities. The President also toured the NTPC Energy Technology Research Alliance (NETRA) complex in Greater Noida to observe advanced R&D work, including in clean energy innovation, energy efficiency, renewable energy integration and grid resilience.

In his interaction with the President, the Prime Minister stated that Myanmar lies at the confluence of India’s Neighbourhood First, Act East and MAHASAGAR (Mutual and Holistic Advancement for Security and Growth Across Regions) policies. The discussions underscored the importance of strengthening bilateral cooperation, including trade and economic ties, defence and security, border management, development assistance and cultural exchanges. Both sides noted ongoing discussions on various bilateral Agreements and Memoranda of Understanding and looked forward to their early conclusion.

The Prime Minister underlined that enhanced connectivity would foster mutually beneficial economic linkages and shared prosperity in the region. In this regard, both sides shared the importance of working closely towards the completion of Kaladan Multi-Modal Transit Transport project and the India-Myanmar-Thailand trilateral highway.

The Prime Minister conveyed that the Mekong Ganga ICCR scholarships for Myanmar students would be enhanced from 36 to 100 from 2026 onwards.

Both sides agreed to facilitate and enhance bilateral trade including through the Rupee-Kyat settlement mechanism, and appreciated the steady growth in the volume of transactions recorded since its operationalisation in May 2024. Both sides also expressed support for closer trade and investment cooperation in the areas of mutual interest such as agro-processing, petroleum, energy, mining sectors, in accordance with their respective national laws and regulations.

The Prime Minister reaffirmed India’s support for the sovereignty and territorial integrity of the Republic of the Union of Myanmar. Both sides underscored the importance of preventing the misuse of sovereign territory for activities inimical to their security interests. The President reiterated Myanmar’s assurance that its territory would not be permitted to be used against India’s security interests. The Prime Minister affirmed that India, as a steadfast and trusted partner of Myanmar, remained committed to deepening security cooperation between the two countries.

The Prime Minister conveyed support for Myanmar-led efforts towards achieving peace, stability, national reconciliation and socio-economic development. He also offered continued assistance and cooperation, based on mutual respect and friendly relations between the two countries. The President appreciated India’s constructive support and cooperation.

The Prime Minister expressed confidence that the meetings of the President with the Governor of Maharashtra and the Chief Minister, as well as his business engagements during his upcoming visit to Mumbai on 02 - 03 June 2026 would further strengthen existing bilateral cooperation and economic ties.

The official visit of President U Min Aung Hlaing reaffirmed the long-standing friendship and close partnership between Myanmar and India and the shared commitment of both countries to further strengthen cooperation for the mutual benefit of the two countries. Both sides agreed to continue close engagement at all levels.

President U Min Aung Hlaing expressed his sincere appreciation to Prime Minister Shri Narendra Modi for the warm hospitality extended to him and to the members of his delegation during their stay in India. The President also extended an invitation to the Prime Minister of India to visit Myanmar at mutually convenient dates.