ಭಾರತದ ಸಾಧನೆಗಳು ಮತ್ತು ಯಶಸ್ಸುಗಳು ಜಗತ್ತಿನಾದ್ಯಂತ ಹೊಸ ಭರವಸೆಯ ಅಲೆಯನ್ನು ಹುಟ್ಟುಹಾಕಿವೆ: ಪ್ರಧಾನಮಂತ್ರಿ
ಭಾರತ ಇಂದು ಜಾಗತಿಕ ಬೆಳವಣಿಗೆಯನ್ನು ಮುನ್ನಡೆಸುತ್ತಿದೆ : ಪ್ರಧಾನಮಂತ್ರಿ
ಇಂದಿನ ಭಾರತವು ದೊಡ್ಡದಾಗಿ ಯೋಚಿಸುತ್ತದೆ, ಮಹತ್ವಾಕಾಂಕ್ಷೆಯ ಗುರಿಗಳನ್ನು ನಿಗದಿಪಡಿಸುತ್ತದೆ ಮತ್ತು ಗಮನಾರ್ಹ ಫಲಿತಾಂಶಗಳನ್ನು ನೀಡುತ್ತದೆ: ಪ್ರಧಾನಮಂತ್ರಿ
ಭಾರತದ ಗ್ರಾಮೀಣ ಕುಟುಂಬಗಳಿಗೆ ಆಸ್ತಿ ಹಕ್ಕುಗಳನ್ನು ನೀಡಲು ನಾವು SVAMITVA ಯೋಜನೆಯನ್ನು ಪ್ರಾರಂಭಿಸಿದ್ದೇವೆ: ಪ್ರಧಾನಮಂತ್ರಿ
ಯುವಕರು ಇಂದಿನ ಭಾರತದ ಎಕ್ಸ್-ಫ್ಯಾಕ್ಟರ್ ಆಗಿದ್ದು, ಅಲ್ಲಿ ಎಕ್ಸ್ ಎಂದರೆ ಪ್ರಯೋಗ, ಉತ್ಕೃಷ್ಟತೆ ಮತ್ತು ವಿಸ್ತರಣೆ ಎಂದರ್ಥ
ಕಳೆದ ದಶಕದಲ್ಲಿ, ನಾವು ಪರಿಣಾಮರಹಿತ ಆಡಳಿತವನ್ನು ಪರಿಣಾಮಕಾರಿ ಆಡಳಿತವಾಗಿ ಪರಿವರ್ತಿಸಿದ್ದೇವೆ: ಪ್ರಧಾನಮಂತ್ರಿ
ಈ ಹಿಂದೆ, ಮನೆಗಳ ನಿರ್ಮಾಣವು ಸರ್ಕಾರದಿಂದ ನಡೆಸಲ್ಪಡುತ್ತಿತ್ತು, ಆದರೆ ನಾವು ಅದನ್ನು ಮಾಲೀಕ-ಚಾಲಿತ ವಿಧಾನವಾಗಿ ಪರಿವರ್ತಿಸಿದ್ದೇವೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ್ ಮಂಡಪಂನಲ್ಲಿ ನಡೆದ ರಿಪಬ್ಲಿಕ್ ಪ್ಲೀನರಿ ಶೃಂಗಸಭೆ 2025ರಲ್ಲಿ ಭಾಗವಹಿಸಿದ್ದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ತಳಮಟ್ಟದಲ್ಲಿ ಯುವಕರನ್ನು ತೊಡಗಿಸಿಕೊಳ್ಳುವ ಮತ್ತು ಮಹತ್ವದ ಹ್ಯಾಕಥಾನ್ ಸ್ಪರ್ಧೆಯನ್ನು ಆಯೋಜಿಸುವ ನವೀನ ವಿಧಾನಕ್ಕಾಗಿ ರಿಪಬ್ಲಿಕ್ ಟಿವಿಯನ್ನು ಅಭಿನಂದಿಸಿದರು. ರಾಷ್ಟ್ರದ ಯುವಕರು ರಾಷ್ಟ್ರೀಯ ಸಂವಾದದಲ್ಲಿ ತೊಡಗಿಸಿಕೊಂಡಾಗ, ಅದು ಆಲೋಚನೆಗಳಿಗೆ ಹೊಸತನವನ್ನು ತರುತ್ತದೆ ಮತ್ತು ಅವರ ಶಕ್ತಿಯಿಂದ ಇಡೀ ಪರಿಸರವನ್ನು ತುಂಬುತ್ತದೆ ಎಂದು ಅವರು ಹೇಳಿದರು. ಈ ಶಕ್ತಿಯನ್ನು ಶೃಂಗಸಭೆಯಲ್ಲಿ ಅನುಭವಿಸಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ಯುವಕರ ಪಾಲ್ಗೊಳ್ಳುವಿಕೆಯು ಎಲ್ಲಾ ಅಡೆತಡೆಗಳನ್ನು ಮುರಿಯಲು ಮತ್ತು ಗಡಿಗಳನ್ನು ಮೀರಿ ಹೋಗಲು ಸಹಾಯ ಮಾಡುತ್ತದೆ, ಪ್ರತಿ ಗುರಿಯನ್ನು ಸಾಧಿಸಬಹುದು ಮತ್ತು ಪ್ರತಿ ಗಮ್ಯಸ್ಥಾನವನ್ನು ತಲುಪಬಹುದು ಎಂದು ಅವರು ಹೇಳಿದರು. ಈ ಶೃಂಗಸಭೆಗಾಗಿ ಹೊಸ ಪರಿಕಲ್ಪನೆಯ ಮೇಲೆ ಕೆಲಸ ಮಾಡಿದ್ದಕ್ಕಾಗಿ ರಿಪಬ್ಲಿಕ್ ಟಿವಿಯನ್ನು ಅವರು ಶ್ಲಾಘಿಸಿದರು ಮತ್ತು ಅದರ ಯಶಸ್ಸಿಗೆ ಶುಭ ಹಾರೈಸಿದರು. ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ ಒಂದು ಲಕ್ಷ ಯುವಕರನ್ನು ಭಾರತದ ರಾಜಕೀಯಕ್ಕೆ ಕರೆತರುವ ತಮ್ಮ ಕಲ್ಪನೆಯನ್ನು ಶ್ರೀ ಮೋದಿ ಪುನರುಚ್ಚರಿಸಿದರು.

"ಜಗತ್ತು ಈಗ ಈ ಶತಮಾನವನ್ನು ಭಾರತದ ಶತಮಾನವೆಂದು ಗುರುತಿಸುತ್ತಿದೆ ಮತ್ತು ಭಾರತದ ಸಾಧನೆಗಳು ಹಾಗೂ ಯಶಸ್ಸುಗಳು ಜಾಗತಿಕವಾಗಿ ಹೊಸ ಭರವಸೆಯನ್ನು ಹುಟ್ಟುಹಾಕಿವೆ," ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಒಮ್ಮೆ ತಾನು ಮುಳುಗಿ ಇತರರನ್ನು ಮುಳುಗಿಸುವ ರಾಷ್ಟ್ರವೆಂದು ಭಾವಿಸಲಾಗಿದ್ದ ಭಾರತವು ಈಗ ಜಾಗತಿಕ ಬೆಳವಣಿಗೆಯನ್ನು ಮುನ್ನಡೆಸುತ್ತಿದೆ. ಇಂದು ನಡೆಯುತ್ತಿರುವ ಕಾರ್ಯಗಳು ಮತ್ತು ಸಾಧನೆಗಳಿಂದ ಭಾರತದ ಭವಿಷ್ಯದ ದಿಕ್ಕು ಸ್ಪಷ್ಟವಾಗಿದೆ ಎಂದು ಅವರು ಸೇರಿಸಿದರು. ಸ್ವಾತಂತ್ರ್ಯದ 65 ವರ್ಷಗಳ ನಂತರವೂ ಭಾರತವು ವಿಶ್ವದ ಹನ್ನೊಂದನೇ ಅತಿದೊಡ್ಡ ಆರ್ಥಿಕತೆಯಾಗಿತ್ತು ಎಂದು ಅವರು ಉಲ್ಲೇಖಿಸಿದರು. ಆದಾಗ್ಯೂ, ಕಳೆದ ದಶಕದಲ್ಲಿ, ಭಾರತವು ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಮಾರ್ಪಟ್ಟಿದೆ ಮತ್ತು ಈಗ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ವೇಗವಾಗಿ ಸಾಗುತ್ತಿದೆ ಎಂದು ಹೇಳಿದರು.

 

18 ವರ್ಷಗಳ ಹಿಂದೆ, 2007 ರಲ್ಲಿ ಭಾರತದ ವಾರ್ಷಿಕ ಜಿಡಿಪಿ 1 ಟ್ರಿಲಿಯನ್ ಅಮೆರಿಕನ್ ಡಾಲರ್ಗೆ ತಲುಪಿದ ಪರಿಸ್ಥಿತಿಯನ್ನು ನೆನಪಿಸಿಕೊಂಡ ಪ್ರಧಾನ ಮಂತ್ರಿಯವರು, ಆಗ ಭಾರತದಲ್ಲಿ ಇಡೀ ವರ್ಷದ ಆರ್ಥಿಕ ಚಟುವಟಿಕೆ 1 ಟ್ರಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು ಎಂದು ಒತ್ತಿ ಹೇಳಿದರು. ಇಂದು, ಅದೇ ಪ್ರಮಾಣದ ಆರ್ಥಿಕ ಚಟುವಟಿಕೆ ಕೇವಲ ಒಂದು ತ್ರೈಮಾಸಿಕದಲ್ಲಿ ನಡೆಯುತ್ತಿದೆ, ಇದು ಭಾರತವು ಎಷ್ಟು ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಸೇರಿಸಿದರು. ಕಳೆದ ದಶಕದಲ್ಲಿ ಸಾಧಿಸಿದ ಗಮನಾರ್ಹ ಬದಲಾವಣೆಗಳು ಮತ್ತು ಫಲಿತಾಂಶಗಳನ್ನು ತೋರಿಸಲು ಅವರು ಉದಾಹರಣೆಗಳನ್ನು ನೀಡಿದರು. ಕಳೆದ 10 ವರ್ಷಗಳಲ್ಲಿ, ಭಾರತವು 25 ಕೋಟಿ ಜನರನ್ನು ಬಡತನದಿಂದ ಯಶಸ್ವಿಯಾಗಿ ಹೊರತಂದಿದೆ, ಇದು ಅನೇಕ ದೇಶಗಳ ಜನಸಂಖ್ಯೆಗಿಂತಲೂ ಹೆಚ್ಚು ಎಂದು ಅವರು ಎತ್ತಿ ತೋರಿಸಿದರು. ಸರ್ಕಾರವು ಕಳುಹಿಸಿದ ಒಂದು ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಬಡವರಿಗೆ ತಲುಪುತ್ತಿದ್ದ ಸಮಯವನ್ನು ಶ್ರೀ ಮೋದಿ ನೆನಪಿಸಿದರು, 85 ಪೈಸೆ ಭ್ರಷ್ಟಾಚಾರಕ್ಕೆ ಹೋಗುತ್ತಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ಕಳೆದ ದಶಕದಲ್ಲಿ, ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ 42 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಬಡವರ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗಿದೆ, ಇದರಿಂದ ಸಂಪೂರ್ಣ ಮೊತ್ತವು ಫಲಾನುಭವಿಗಳಿಗೆ ತಲುಪುತ್ತದೆ ಎಂದು ಅವರು ಹೇಳಿದರು.

10 ವರ್ಷಗಳ ಹಿಂದೆ, ಭಾರತವು ಸೌರ ಶಕ್ತಿಯಲ್ಲಿ ಹಿಂದುಳಿದಿತ್ತು ಎಂದು ಒತ್ತಿ ಹೇಳಿದ ಪ್ರಧಾನಿ, "ಇಂದು, ಭಾರತವು ಸೌರ ಶಕ್ತಿಯ ಸಾಮರ್ಥ್ಯದಲ್ಲಿ ಅಗ್ರ 5 ದೇಶಗಳಲ್ಲಿ ಒಂದಾಗಿದೆ, ಅದನ್ನು 30 ಪಟ್ಟು ಹೆಚ್ಚಿಸಿದೆ, ಆದರೆ ಸೌರ ಮಾಡ್ಯೂಲ್ ಉತ್ಪಾದನೆಯೂ 30 ಪಟ್ಟು ಹೆಚ್ಚಾಗಿದೆ" ಎಂದು ಹೇಳಿದರು. 10 ವರ್ಷಗಳ ಹಿಂದೆ, ಹೋಳಿ ವಾಟರ್ ಗನ್ ಗಳಂತಹ ಮಕ್ಕಳ ಆಟಿಕೆಗಳನ್ನು ಸಹ ಆಮದು ಮಾಡಿಕೊಳ್ಳಲಾಗುತ್ತಿತ್ತು, ಆದರೆ ಇಂದು, ಭಾರತದ ಆಟಿಕೆ ರಫ್ತು ಮೂರು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. 10 ವರ್ಷಗಳ ಹಿಂದೆ, ಭಾರತವು ತನ್ನ ಸೈನ್ಯಕ್ಕಾಗಿ ಬಂದೂಕುಗಳನ್ನು ಆಮದು ಮಾಡಿಕೊಂಡಿತ್ತು, ಆದರೆ ಕಳೆದ ದಶಕದಲ್ಲಿ, ಭಾರತದ ರಕ್ಷಣಾ ರಫ್ತು 20 ಪಟ್ಟು ಹೆಚ್ಚಾಗಿದೆ ಎಂದು ಅವರು ಗಮನಸೆಳೆದರು.

 

ಕಳೆದ 10 ವರ್ಷಗಳಲ್ಲಿ, ಭಾರತವು ವಿಶ್ವದ ಎರಡನೇ ಅತಿದೊಡ್ಡ ಉಕ್ಕು ಉತ್ಪಾದಕ, ಎರಡನೇ ಅತಿದೊಡ್ಡ ಮೊಬೈಲ್ ಫೋನ್ ಉತ್ಪಾದಕ ಮತ್ತು ಮೂರನೇ ಅತಿದೊಡ್ಡ ಸಾರ್ಟ್‌ ಅಪ್ ಪರಿಸರ ವ್ಯವಸ್ಥೆಯಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಇದೇ ಅವಧಿಯಲ್ಲಿ, ಮೂಲಸೌಕರ್ಯದ ಮೇಲಿನ ಭಾರತದ ಬಂಡವಾಳ ವೆಚ್ಚವು ಐದು ಪಟ್ಟು ಹೆಚ್ಚಾಗಿದೆ ಮತ್ತು ದೇಶದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ ದ್ವಿಗುಣಗೊಂಡಿದೆ ಮತ್ತು ಕಾರ್ಯನಿರ್ವಹಿಸುತ್ತಿರುವ ಏಮ್ಸ್ (AIIMS) ಗಳವಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. ಕಳೆದ ದಶಕದಲ್ಲಿ, ವೈದ್ಯಕೀಯ ಕಾಲೇಜುಗಳು ಮತ್ತು ವೈದ್ಯಕೀಯ ಸೀಟುಗಳ ಸಂಖ್ಯೆ ಸುಮಾರು ದ್ವಿಗುಣಗೊಂಡಿದೆ ಎಂದು ಅವರು ಒತ್ತಿ ಹೇಳಿದರು.

"ಇಂದಿನ ಭಾರತವು ದೊಡ್ಡದಾಗಿ ಯೋಚಿಸುತ್ತದೆ, ಮಹತ್ವಾಕಾಂಕ್ಷೆಯ ಗುರಿಗಳನ್ನು ನಿಗದಿಪಡಿಸುತ್ತದೆ ಮತ್ತು ಗಮನಾರ್ಹ ಫಲಿತಾಂಶಗಳನ್ನು ಸಾಧಿಸುತ್ತದೆ," ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು, ರಾಷ್ಟ್ರದ ಮನಸ್ಥಿತಿ ಬದಲಾಗಿದೆ ಮತ್ತು ಭಾರತವು ದೊಡ್ಡ ಆಕಾಂಕ್ಷೆಗಳೊಂದಿಗೆ ಮುನ್ನಡೆಯುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಹಿಂದೆ, ಸ್ಥಿತಿಗತಿಯನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇತ್ತು, ಆದರೆ ಈಗ, ಯಾರು ಫಲಿತಾಂಶಗಳನ್ನು ನೀಡಬಲ್ಲರು ಎಂದು ಜನರಿಗೆ ತಿಳಿದಿದೆ ಎಂದು ಅವರು ಎತ್ತಿ ತೋರಿಸಿದರು. ಬರ ಪರಿಹಾರ ಕಾರ್ಯಗಳನ್ನು ಕೋರುವ ಬದಲು ವಂದೇ ಭಾರತ್ ಸಂಪರ್ಕ ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಬೇಡುವ ಮೂಲಕ ಜನರ ಆಕಾಂಕ್ಷೆಗಳು ಹೇಗೆ ವಿಕಸನಗೊಂಡಿವೆ ಎಂಬುದಕ್ಕೆ ಅವರು ಉದಾಹರಣೆಗಳನ್ನು ನೀಡಿದರು. ಹಿಂದಿನ ಸರ್ಕಾರಗಳು ಜನರ ಆಕಾಂಕ್ಷೆಗಳನ್ನು ತುಳಿದು, ಅವರ ನಿರೀಕ್ಷೆಗಳನ್ನು ಕಡಿಮೆ ಮಾಡುವಂತೆ ಮಾಡಿದ್ದವು ಎಂದು ಅವರು ಗಮನಿಸಿದರು. ಆದಾಗ್ಯೂ, ಇಂದು, ಪರಿಸ್ಥಿತಿ ಮತ್ತು ಮನಸ್ಥಿತಿ ವೇಗವಾಗಿ ಬದಲಾಗಿದೆ, ಮತ್ತು ಜನರು ಈಗ ವಿಕಸಿತ ಭಾರತದ ಗುರಿಯಿಂದ ಪ್ರೇರಿತರಾಗಿದ್ದಾರೆ.

 

"ಯಾವುದೇ ಸಮಾಜ ಅಥವಾ ರಾಷ್ಟ್ರದ ಶಕ್ತಿ ಅದರ ನಾಗರಿಕರಿಗೆ ಇರುವ ಅಡೆತಡೆಗಳು ಮತ್ತು ತೊಂದರೆಗಳನ್ನು ನಿವಾರಿಸಿದಾಗ ಹೆಚ್ಚಾಗುತ್ತದೆ. ಇದರಿಂದ ನಾಗರಿಕರ ಸಾಮರ್ಥ್ಯ ವೃದ್ಧಿಯಾಗಿ, ಆಕಾಶವೇ ಚಿಕ್ಕದಾಗಿ ಕಾಣುವಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ" ಎಂದು ಶ್ರೀ ಮೋದಿ ಒತ್ತಿ ಹೇಳಿದರು. "ಸರ್ಕಾರವು ಹಿಂದಿನ ಆಡಳಿತಗಳು ಸೃಷ್ಟಿಸಿದ್ದ ಅಡಚಣೆಗಳನ್ನು ನಿರಂತರವಾಗಿ ತೆಗೆದುಹಾಕುತ್ತಿದೆ" ಎಂದು ಅವರು ತಿಳಿಸಿ, ಬಾಹ್ಯಾಕಾಶ ವಲಯದ ಉದಾಹರಣೆ ನೀಡಿದರು. "ಮೊದಲು ಎಲ್ಲವೂ ಇಸ್ರೋದ ನಿಯಂತ್ರಣದಲ್ಲಿತ್ತು. ಇಸ್ರೋ ಶ್ಲಾಘನೀಯ ಕಾರ್ಯ ನಿರ್ವಹಿಸಿದರೂ, ದೇಶದಲ್ಲಿ ಬಾಹ್ಯಾಕಾಶ ವಿಜ್ಞಾನ ಮತ್ತು ಉದ್ಯಮಶೀಲತೆಯ ಸಾಮರ್ಥ್ಯವನ್ನು ಪೂರ್ಣವಾಗಿ ಬಳಸಿಕೊಳ್ಳಲಾಗಲಿಲ್ಲ. ಈಗ ಯುವ ನಾವೀನ್ಯಕಾರರಿಗೆ ಬಾಹ್ಯಾಕಾಶ ವಲಯವನ್ನು ತೆರೆಯಲಾಗಿದೆ. ಇದರಿಂದ ದೇಶದಲ್ಲಿ 250ಕ್ಕೂ ಹೆಚ್ಚು ಬಾಹ್ಯಾಕಾಶ ಸ್ಟಾರ್ಟ್ಅಪ್ಗಳು ಹುಟ್ಟಿಕೊಂಡಿವೆ. ಈ ಸ್ಟಾರ್ಟ್ಅಪ್ಗಳು ವಿಕ್ರಮ್-ಎಸ್ ಮತ್ತು ಅಗ್ನಿಬಾಣ್ ನಂತಹ ರಾಕೆಟ್ ಗಳನ್ನು ಅಭಿವೃದ್ಧಿಪಡಿಸುತ್ತಿವೆ" ಎಂದು ಅವರು ಹೇಳಿದರು. "ಮೊದಲು ಭಾರತದಲ್ಲಿ ನಕ್ಷೆಗಳನ್ನು ರಚಿಸಲು ಸರ್ಕಾರದ ಅನುಮತಿ ಬೇಕಿದ್ದ ಮ್ಯಾಪಿಂಗ್ ವಲಯದ ಬಗ್ಗೆಯೂ ಪ್ರಧಾನ ಮಂತ್ರಿಯವರು ಉಲ್ಲೇಖಿಸಿದರು. ಈ ನಿರ್ಬಂಧವನ್ನು ತೆಗೆದುಹಾಕಲಾಗಿದ್ದು, ಇಂದು ಜಿಯೋಸ್ಪೇಷಿಯಲ್ ಮ್ಯಾಪಿಂಗ್ ಡೇಟಾ ಹೊಸ ಸ್ಟಾರ್ಟ್ಅಪ್ಗಳಿಗೆ ದಾರಿ ಮಾಡಿಕೊಡುತ್ತಿದೆ. ಹಿಂದೆ ವಿವಿಧ ನಿರ್ಬಂಧಗಳೊಂದಿಗೆ ಸರ್ಕಾರದ ನಿಯಂತ್ರಣದಲ್ಲಿದ್ದ ಪರಮಾಣು ಶಕ್ತಿ ವಲಯವನ್ನು ಈ ವರ್ಷದ ಬಜೆಟ್ ನಲ್ಲಿ ಖಾಸಗಿ ವಲಯಕ್ಕೆ ತೆರೆಯಲಾಗಿದೆ. ಇದು 2047ರ ವೇಳೆಗೆ 100 ಗಿಗಾವಾಟ್ ಪರಮಾಣು ಶಕ್ತಿ ಸಾಮರ್ಥ್ಯವನ್ನು ಸೇರಿಸಲು ಅನುವು ಮಾಡಿಕೊಡುತ್ತದೆ" ಎಂದು ಪ್ರಧಾನ ಮಂತ್ರಿಯವರು ತಿಳಿಸಿದರು.

 

ಪ್ರಧಾನಮಂತ್ರಿಯವರು ಭಾರತದ ಹಳ್ಳಿಗಳಲ್ಲಿ 100 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಬಳಕೆಯಾಗದ ಆರ್ಥಿಕ ಸಾಮರ್ಥ್ಯವಿದೆ ಎಂದು ಒತ್ತಿ ಹೇಳಿದರು. ಈ ಸಾಮರ್ಥ್ಯವು ಹಳ್ಳಿಗಳ ಮನೆಗಳ ರೂಪದಲ್ಲಿದೆ, ಆದರೆ ಅವುಗಳಿಗೆ ಕಾನೂನು ದಾಖಲೆಗಳು ಮತ್ತು ಸರಿಯಾದ ನಕ್ಷೆಗಳಿಲ್ಲದ ಕಾರಣ ಗ್ರಾಮಸ್ಥರು ಬ್ಯಾಂಕ್ ಸಾಲಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ಅನೇಕ ದೊಡ್ಡ ದೇಶಗಳು ತಮ್ಮ ನಾಗರಿಕರಿಗೆ ಆಸ್ತಿ ಹಕ್ಕುಗಳನ್ನು ಹೊಂದಿಲ್ಲ ಎಂದು ಅವರು ಗಮನಿಸಿದರು. ತಮ್ಮ ನಾಗರಿಕರಿಗೆ ಆಸ್ತಿ ಹಕ್ಕುಗಳನ್ನು ನೀಡುವ ದೇಶಗಳು ಜಿಡಿಪಿಯಲ್ಲಿ ಗಮನಾರ್ಹ ಹೆಚ್ಚಳವನ್ನು ಕಾಣುತ್ತವೆ ಎಂದು ಅಂತರರಾಷ್ಟ್ರೀಯ ಸಂಸ್ಥೆಗಳು ಹೇಳುತ್ತವೆ ಎಂದು ಅವರು ಸೇರಿಸಿದರು. "ಭಾರತದ ಗ್ರಾಮಗಳ ಮನೆಗಳಿಗೆ ಆಸ್ತಿ ಹಕ್ಕುಗಳನ್ನು ನೀಡಲು ಸ್ವಾಮಿತ್ವ ಯೋಜನೆಯನ್ನು ಪ್ರಾರಂಭಿಸಲಾಗಿದೆ ಮತ್ತು ಗ್ರಾಮಗಳಲ್ಲಿನ ಪ್ರತಿಯೊಂದು ಮನೆಯನ್ನು ಸಮೀಕ್ಷೆ ಮಾಡಲು ಮತ್ತು ನಕ್ಷೆ ಮಾಡಲು ಡ್ರೋನ್ ಗಳನ್ನು ಬಳಸಲಾಗುತ್ತಿದೆ" ಎಂದು ಪ್ರಧಾನಮಂತ್ರಿಯವರು ಹೇಳಿದರು. ದೇಶಾದ್ಯಂತ ಆಸ್ತಿ ಕಾರ್ಡ್ಗಳನ್ನು ವಿತರಿಸಲಾಗುತ್ತಿದೆ, ಈಗಾಗಲೇ 2 ಕೋಟಿಗೂ ಹೆಚ್ಚು ಆಸ್ತಿ ಕಾರ್ಡ್ಗಳನ್ನು ನೀಡಲಾಗಿದೆ ಎಂದು ಅವರು ಒತ್ತಿ ಹೇಳಿದರು. ಹಿಂದೆ ಆಸ್ತಿ ಕಾರ್ಡ್ ಗಳ ಕೊರತೆಯಿಂದಾಗಿ ಗ್ರಾಮಗಳಲ್ಲಿ ಹಲವಾರು ವಿವಾದಗಳು ಮತ್ತು ನ್ಯಾಯಾಲಯದ ಪ್ರಕರಣಗಳು ಉಂಟಾಗುತ್ತಿದ್ದವು, ಈಗ ಅವು ಪರಿಹಾರವಾಗಿವೆ ಎಂದು ಅವರು ಸೂಚಿಸಿದರು. ಗ್ರಾಮಸ್ಥರು ಈಗ ಈ ಆಸ್ತಿ ಕಾರ್ಡ್ ಗಳನ್ನು ಬಳಸಿ ಬ್ಯಾಂಕ್ ಸಾಲಗಳನ್ನು ಪಡೆಯಲು ಸಾಧ್ಯವಾಗುತ್ತದೆ, ಇದರಿಂದ ಅವರು ವ್ಯಾಪಾರಗಳನ್ನು ಪ್ರಾರಂಭಿಸಲು ಮತ್ತು ಸ್ವಯಂ ಉದ್ಯೋಗವನ್ನು ಮುಂದುವರಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

"ನಾನು ನೀಡಿದ ಉದಾಹರಣೆಗಳ ಅತಿದೊಡ್ಡ ಫಲಾನುಭವಿಗಳು ದೇಶದ ಯುವಕರು" ಎಂದು ಶ್ರೀ ಮೋದಿ ಸೇರಿಸಿದರು. "ವಿಕಸಿತ ಭಾರತದಲ್ಲಿ ಯುವಕರು ಅತಿದೊಡ್ಡ ಪಾಲುದಾರರು ಮತ್ತು ಇಂದಿನ ಭಾರತದ 'ಎಕ್ಸ್-ಫ್ಯಾಕ್ಟರ್', ಅಲ್ಲಿ 'ಎಕ್ಸ್' ಎಂದರೆ ಪ್ರಯೋಗ, ಶ್ರೇಷ್ಠತೆ ಮತ್ತು ವಿಸ್ತರಣೆ" ಎಂದು ಅವರು ಹೇಳಿದರು. ಹಳೆಯ ವಿಧಾನಗಳನ್ನು ಮೀರಿ ಹೊಸ ಮಾರ್ಗಗಳನ್ನು ಸೃಷ್ಟಿಸಿ, ಜಾಗತಿಕ ಮಾನದಂಡಗಳನ್ನು ಸ್ಥಾಪಿಸಿ, 140 ಕೋಟಿ ಭಾರತೀಯರಿಗಾಗಿ ನಾವೀನ್ಯತೆಗಳನ್ನು ವಿಸ್ತರಿಸಿದ್ದಾರೆ ಎಂದು ಅವರು ವಿವರಿಸಿದರು. ಯುವಕರು ದೇಶದ ಪ್ರಮುಖ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಬಲ್ಲರು, ಆದರೆ ಈ ಸಾಮರ್ಥ್ಯವನ್ನು ಈ ಹಿಂದೆ ಬಳಸಿಕೊಳ್ಳಲಾಗಲಿಲ್ಲ ಎಂದು ಅವರು ಗಮನಿಸಿದರು. ಸರ್ಕಾರವು ಈಗ ಪ್ರತಿ ವರ್ಷ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಅನ್ನು ಆಯೋಜಿಸುತ್ತದೆ, ಇಲ್ಲಿಯವರೆಗೆ 10 ಲಕ್ಷ ಯುವಕರು ಭಾಗವಹಿಸಿದ್ದಾರೆ ಎಂದು ಪ್ರಧಾನ ಮಂತ್ರಿಯವರು ಉಲ್ಲೇಖಿಸಿದರು. ಆಡಳಿತಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು ಈ ಯುವ ಭಾಗವಹಿಸುವವರಿಗೆ ಪ್ರಸ್ತುತಪಡಿಸಿವೆ, ಅವರು ಸುಮಾರು 2,500 ಪರಿಹಾರಗಳನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಅವರು ಹೇಳಿದರು. ರಿಪಬ್ಲಿಕ್ ಟಿವಿಯು ಹ್ಯಾಕಥಾನ್ ಸಂಸ್ಕೃತಿಯನ್ನು ಮತ್ತಷ್ಟು ಉತ್ತೇಜಿಸುತ್ತಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು.

 

"ಕಳೆದ ದಶಕದಲ್ಲಿ, ದೇಶವು ಹೊಸ ಯುಗದ ಆಡಳಿತವನ್ನು ಕಂಡಿದೆ, ಪರಿಣಾಮರಹಿತ ಆಡಳಿತವನ್ನು ಪರಿಣಾಮಕಾರಿ ಆಡಳಿತವಾಗಿ ಪರಿವರ್ತಿಸಿದೆ" ಎಂದು ಪ್ರಧಾನಿ ಹೇಳಿದರು. "ಜನರು ಆಗಾಗ್ಗೆ ಈ ಯೋಜನೆಗಳು ಮೊದಲೇ ಇದ್ದರೂ, ಸರ್ಕಾರಿ ಯೋಜನೆಗಳಿಂದ ಮೊದಲ ಬಾರಿಗೆ ಪ್ರಯೋಜನ ಪಡೆಯುತ್ತಿದ್ದೇವೆ ಎಂದು ಹೇಳುತ್ತಾರೆ. ಈಗ ವ್ಯತ್ಯಾಸವೆಂದರೆ ಕೊನೆಯ ವ್ಯಕ್ತಿಗೂ ಸೌಲಭ್ಯ ತಲುಪುವಂತೆ ಖಚಿತಪಡಿಸಿಕೊಳ್ಳಲಾಗಿದೆ" ಎಂದು ಅವರು ಹೇಳಿದರು. "ಹಿಂದೆ, ಬಡವರಿಗೆ ಮನೆಗಳನ್ನು ಕಾಗದದ ಮೇಲೆ ಮಾತ್ರ ಮಂಜೂರು ಮಾಡಲಾಗುತ್ತಿತ್ತು, ಆದರೆ ಈಗ, ಮನೆಗಳನ್ನು ನೆಲದ ಮೇಲೆ ನಿರ್ಮಿಸಲಾಗುತ್ತಿದೆ" ಎಂದು ಒತ್ತಿ ಹೇಳಿದ ಶ್ರೀ ಮೋದಿ, "ಮನೆ ನಿರ್ಮಾಣದ ಸಂಪೂರ್ಣ ಪ್ರಕ್ರಿಯೆಯು ಸರ್ಕಾರದಿಂದ ನಿಯಂತ್ರಿಸಲ್ಪಡುತ್ತಿತ್ತು, ವಿನ್ಯಾಸ ಮತ್ತು ಸಾಮಗ್ರಿಗಳನ್ನು ನಿರ್ಧರಿಸುತ್ತಿತ್ತು. ಆದರೆ ಈಗ ಸರ್ಕಾರವು ಫಲಾನುಭವಿಗಳಿಗೆ ಅಧಿಕಾರ ನೀಡಿದೆ. ಹಣವನ್ನು ಅವರ ಖಾತೆಗೆ ವರ್ಗಾಯಿಸಿ, ಮನೆಯ ವಿನ್ಯಾಸವನ್ನು ಅವರೇ ನಿರ್ಧರಿಸಲು ಅವಕಾಶ ನೀಡಲಾಗುತ್ತಿದೆ" ಎಂದು ಉಲ್ಲೇಖಿಸಿದ್ದಾರೆ."ಮನೆ ವಿನ್ಯಾಸಗಳಿಗಾಗಿ ದೇಶಾದ್ಯಂತ ಸ್ಪರ್ಧೆಗಳನ್ನು ನಡೆಸಲಾಯಿತು, ಸಾರ್ವಜನಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸಲಾಯಿತು. ಇದು ಮನೆ ನಿರ್ಮಾಣದ ಗುಣಮಟ್ಟ ಮತ್ತು ವೇಗವನ್ನು ಸುಧಾರಿಸಿದೆ" ಎಂದು ಪ್ರಧಾನಿ ಹೇಳಿದರು. "ಈ ಹಿಂದೆ ಅಪೂರ್ಣ ಮನೆಗಳನ್ನು ಹಸ್ತಾಂತರಿಸಲಾಗುತ್ತಿತ್ತು, ಆದರೆ ಈಗ, ಸರ್ಕಾರವು ಬಡವರಿಗೆ ನೀರಿನ ಸಂಪರ್ಕಗಳು, ಉಜ್ವಲ ಯೋಜನೆಯಡಿ ಅನಿಲ ಸಂಪರ್ಕಗಳು ಮತ್ತು ಸೌಭಾಗ್ಯ ಯೋಜನೆಯಡಿ ವಿದ್ಯುತ್ ಸಂಪರ್ಕಗಳೊಂದಿಗೆ ಸಕಲ ಸೌಕರ್ಯಗಳಿರುವ ಕನಸಿನ ಮನೆಗಳನ್ನು ಒದಗಿಸುತ್ತಿದೆ. ನಾವು ಕೇವಲ ನಾಲ್ಕು ಗೋಡೆಗಳನ್ನು ನಿರ್ಮಿಸಿಲ್ಲ, ಈ ಮನೆಗಳಿಗೆ ಜೀವ ತುಂಬಿದ್ದೇವೆ" ಎಂದು ಅವರು ಸೇರಿಸಿದರು.

ದೇಶದ ಅಭಿವೃದ್ಧಿಗೆ ರಾಷ್ಟ್ರೀಯ ಭದ್ರತೆಯ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಿ, ಭದ್ರತೆಯನ್ನು ಹೆಚ್ಚಿಸಲು ಕಳೆದ ದಶಕದಲ್ಲಿ ಮಾಡಿದ ಗಮನಾರ್ಹ ಕೆಲಸವನ್ನು ಎತ್ತಿ ತೋರಿಸಿದರು. ಈ ಹಿಂದೆ, ಸರಣಿ ಬಾಂಬ್ ಸ್ಫೋಟಗಳ ಬ್ರೇಕಿಂಗ್ ನ್ಯೂಸ್ ಮತ್ತು ಸ್ಲೀಪರ್ ಸೆಲ್ ನೆಟ್ ವರ್ಕ್ಗಳ ಕುರಿತ ವಿಶೇಷ ಕಾರ್ಯಕ್ರಮಗಳು ಟಿವಿಯಲ್ಲಿ ಸಾಮಾನ್ಯವಾಗಿದ್ದವು, ಆದರೆ ಇಂದು, ಅಂತಹ ಘಟನೆಗಳು ಟಿವಿ ಪರದೆ ಮತ್ತು ಭಾರತೀಯ ನೆಲ ಎರಡರಿಂದಲೂ ದೂರವಾಗಿವೆ ಎಂದು ಅವರು ನೆನಪಿಸಿಕೊಂಡರು. ನಕ್ಸಲ್ವಾದವು ಈಗ ತನ್ನ ಕೊನೆಯ ಉಸಿರಿನಲ್ಲಿದೆ, ಪೀಡಿತ ಜಿಲ್ಲೆಗಳ ಸಂಖ್ಯೆ ನೂರಕ್ಕೂ ಹೆಚ್ಚು ಇದ್ದದ್ದು ಈಗ ಎರಡು ಡಜನ್ಗಿಂತ ಕಡಿಮೆಯಾಗಿದೆ ಎಂದು ಅವರು ಹೇಳಿದರು. "ರಾಷ್ಟ್ರ ಮೊದಲು" ಎಂಬ ಧ್ಯೇಯವಾಕ್ಯದೊಂದಿಗೆ ಕೆಲಸ ಮಾಡುವ ಮೂಲಕ ಮತ್ತು ಈ ಪ್ರದೇಶಗಳಲ್ಲಿ ಆಡಳಿತವನ್ನು ತಳಮಟ್ಟಕ್ಕೆ ತರುವ ಮೂಲಕ ಇದನ್ನು ಸಾಧಿಸಲಾಗಿದೆ ಎಂದು ಅವರು ಸೇರಿಸಿದರು. ಈ ಜಿಲ್ಲೆಗಳಲ್ಲಿ ಸಾವಿರಾರು ಕಿಲೋಮೀಟರ್ ರಸ್ತೆಗಳು, ಶಾಲೆಗಳು, ಆಸ್ಪತ್ರೆಗಳು ಮತ್ತು 4G ಮೊಬೈಲ್ ನೆಟ್ ವರ್ಕ್ಗಳ ವ್ಯಾಪ್ತಿಯನ್ನು ನಿರ್ಮಿಸಲಾಗಿದೆ ಮತ್ತು ಫಲಿತಾಂಶಗಳು ಎಲ್ಲರಿಗೂ ಕಾಣುತ್ತಿವೆ ಎಂದು ಶ್ರೀ ಮೋದಿ ಎತ್ತಿ ತೋರಿಸಿದರು.

 

ಸರ್ಕಾರದ ನಿರ್ಣಾಯಕ ಕ್ರಮಗಳು ನಕ್ಸಲಿಸಂ ಅನ್ನು ಕಾಡುಗಳಿಂದ ತೆರವುಗೊಳಿಸಿವೆ, ಆದರೆ ಈಗ ಅದು ನಗರ ಕೇಂದ್ರಗಳಿಗೆ ಹರಡುತ್ತಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಒಂದು ಕಾಲದಲ್ಲಿ ತಮ್ಮನ್ನು ವಿರೋಧಿಸುತ್ತಿದ್ದ ಮತ್ತು ಭಾರತದ ಪರಂಪರೆಯಲ್ಲಿ ಬೇರೂರಿರುವ ಗಾಂಧಿವಾದಿ ಸಿದ್ಧಾಂತದಿಂದ ಪ್ರೇರಿತರಾಗಿದ್ದ ರಾಜಕೀಯ ಪಕ್ಷಗಳಿಗೆ ನಗರ ನಕ್ಸಲರು ವೇಗವಾಗಿ ನುಸುಳಿದ್ದಾರೆ ಎಂದು ಅವರು ಟೀಕಿಸಿದರು. ನಗರ ನಕ್ಸಲರ ಧ್ವನಿ ಮತ್ತು ಭಾಷೆ ಈಗ ಈ ರಾಜಕೀಯ ಪಕ್ಷಗಳೊಳಗೆ ಕೇಳಿಬರುತ್ತಿದೆ, ಇದು ಅವರ ಆಳವಾಗಿ ಬೇರೂರಿರುವ ಉಪಸ್ಥಿತಿಯನ್ನು ಸೂಚಿಸುತ್ತದೆ ಎಂದು ಹೇಳಿದ ಅವರು, ನಗರ ನಕ್ಸಲರು ಭಾರತದ ಅಭಿವೃದ್ಧಿ ಮತ್ತು ಪರಂಪರೆಯ ಪ್ರಬಲ ವಿರೋಧಿಗಳು ಎಂದು ಎಚ್ಚರಿಸಿದರು. ನಗರ ನಕ್ಸಲರನ್ನು ಬಹಿರಂಗಪಡಿಸುವಲ್ಲಿ ಶ್ರೀ ಅರ್ನಬ್ ಗೋಸ್ವಾಮಿ ಅವರ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ಅಭಿವೃದ್ಧಿ ಹೊಂದಿದ ಭಾರತಕ್ಕೆ ಅಭಿವೃದ್ಧಿ ಮತ್ತು ಪರಂಪರೆಯನ್ನು ಬಲಪಡಿಸುವುದು ಎರಡೂ ಅತ್ಯಗತ್ಯ ಎಂದು ಒತ್ತಿ ಹೇಳಿದರು.

"ಪ್ರತಿಯೊಂದು ಸವಾಲನ್ನು ಎದುರಿಸುವ ಮೂಲಕ ಇಂದಿನ ಭಾರತವು ಹೊಸ ಎತ್ತರವನ್ನು ತಲುಪುತ್ತಿದೆ" ಎಂದು ಶ್ರೀ ಮೋದಿ ಹೇಳಿದರು, ರಿಪಬ್ಲಿಕ್ ಟಿವಿ ನೆಟ್ವರ್ಕ್ "ರಾಷ್ಟ್ರ ಮೊದಲು" ಮನೋಭಾವದೊಂದಿಗೆ ಪತ್ರಿಕೋದ್ಯಮವನ್ನು ಉನ್ನತೀಕರಿಸುವುದನ್ನು ಮುಂದುವರಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ರಿಪಬ್ಲಿಕ್ ಟಿವಿಯ ಪತ್ರಿಕೋದ್ಯಮವು ಅಭಿವೃದ್ಧಿ ಹೊಂದಿದ ಭಾರತದ ಆಕಾಂಕ್ಷೆಗಳನ್ನು ಉತ್ತೇಜಿಸುವುದನ್ನು ಮುಂದುವರಿಸುತ್ತದೆ ಎಂದು ಹೇಳುವ ಮೂಲಕ ಅವರು ಮುಕ್ತಾಯಗೊಳಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM Modi becomes first world leader to cross 100 million Instagram followers

Media Coverage

PM Modi becomes first world leader to cross 100 million Instagram followers
NM on the go

Nm on the go

Always be the first to hear from the PM. Get the App Now!
...
Prime Minister Pays Tribute to Veer Savarkar Ji on his Punya Tithi
February 26, 2026

Prime Minister Narendra Modi today paid humble tributes to the great revolutionary Veer Savarkar Ji on his Punya tithi.

In a message honoring the freedom fighter, the Prime Minister stated that he dedicated his life to free the country from the chains of slavery. He further remarked that Veer Savarkar Ji’s personality and work will continue to inspire every generation for national service.

The Prime Minister wrote on X;

महान क्रांतिकारी वीर सावरकर जी को उनकी पुण्यतिथि पर सादर नमन। देश को गुलामी की जंजीरों से मुक्त कराने के लिए उन्होंने अपना जीवन समर्पित कर दिया। उनका व्यक्तित्व और कृतित्व हर पीढ़ी को राष्ट्रसेवा के लिए प्रेरित करता रहेगा।